Tag: ಜೀವಬೆದರಿಕೆ

  • ಕಾಂಗ್ರೆಸ್ಸಿಗೆ ಮತ ನೀಡದೇ ಇದ್ರೆ ಕೊಲ್ತೀನಿ: ಗ್ರಾಮಸ್ಥರಿಗೆ ಬಿಜೆಪಿ ಮುಖಂಡನಿಂದ ಬೆದರಿಕೆ

    ಕಾಂಗ್ರೆಸ್ಸಿಗೆ ಮತ ನೀಡದೇ ಇದ್ರೆ ಕೊಲ್ತೀನಿ: ಗ್ರಾಮಸ್ಥರಿಗೆ ಬಿಜೆಪಿ ಮುಖಂಡನಿಂದ ಬೆದರಿಕೆ

    ಭೋಪಾಲ್: ಬಿಜೆಪಿ ಮುಖಂಡನೊಬ್ಬ ಕಾಂಗ್ರೆಸ್ಸಿಗೆ ಮತ ಹಾಕದೇ ಇದ್ದರೆ ಕೊಲೆ ಮಾಡುವುದಾಗಿ ಮತದಾರರಿಗೆ ಬೆದರಿಕೆ ಹಾಕಿರುವ ಆಡಿಯೋ ಈಗ ವೈರಲ್ ಆಗಿದೆ.

    ಮಧ್ಯಪ್ರದೇಶದ ಜುರಹ ಗ್ರಾಮದ ಸರಪಂಚ್ ಆಗಿರುವ ಬಿಜೆಪಿ ನಾಯಕ ಪ್ರದೀಪ್ ಸಿಂಗ್ ಅಲಿಯಾಸ್ ಎಂಬಾತ ಮತದಾರರಿಗೆ ಕೊಲೆ ಬೆದರಿಕೆ ಹಾಕಿದ್ದು, ಈಗ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

    ಮಧ್ಯಪ್ರದೇಶದ ಚತಾರ್ಪುರ್ ಜಿಲ್ಲೆಯ ರಾಜ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆಯಿದೆ. ಈ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜುರಹ ಗ್ರಾಮದ ಪ್ರದೀಪ್ ಸಿಂಗ್ ಅಲಿಯಾಸ್ ಧಂದೂ ಬೆದರಿಕೆಯೊಡಿದ್ದಾನೆಂದು ಗ್ರಾಮಸ್ಥರು ಈಗ ಆರೋಪಿಸಿದ್ದಾರೆ.

    ಕಾಂಗ್ರೆಸ್ಸಿಗೆ ಮತ ಹಾಕದೇ ಇದ್ದರೆ ಡಿಸೆಂಬರ್ 12ರ ಒಳಗಡೆ ಗ್ರಾಮವನ್ನು ತೊರೆಯಬೇಕು. ಗ್ರಾಮವನ್ನು ತೊರೆಯದೇ ಇದ್ದರೆ ಹತ್ಯೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಜುರಹ ಗ್ರಾಮದ ನಿವಾಸಿ ಭಗೀರಥ ಕುಶ್ವಾಹ್ ಎಂಬುವರು ಚರ್ತಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಿಗೆ ಪ್ರದೀಪ್ ಸಿಂಗ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲು

    ಬೀದರ್: ಹುಮನಾಬಾದ್‍ನ ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ.

    ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಆರೋಪದಡಿ ಎಫ್‍ಐಆರ್ ದಾಖಲಾಗಿದ್ದು, ಬಿಜೆಪಿ ಕಾರ್ಯಕರ್ತ ಶ್ರೀನಿವಾಸರೆಡ್ಡಿ, ಪಾಟೀಲ್ ವಿರುದ್ಧ ದೂರು ನೀಡಿದ್ದಾರೆ.

    ಇದೇ ತಿಂಗಳು 12 ರಂದು ಮತದಾನ ವೇಳೆ ಮತಗಟ್ಟೆ-94 ರಲ್ಲಿ ಶ್ರೀನಿವಾಸರೆಡ್ಡಿ ಬಿಜೆಪಿ ಏಜೆಂಟಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಪಾಟೀಲ್, ಶ್ರೀನಿವಾಸ ರೆಡ್ಡಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹನುಮಂತವಾಡಿಯಲ್ಲಿ ನಡೆದಿದ್ದು, ಸದ್ಯ ಪ್ರಕರಣ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಆತ್ಮಹತ್ಯೆಗೆ ಕಾರಣ ಬರೆದ ಡೈರಿ ಹೊಟ್ಟೆಗೆ ಸಿಕ್ಕಿಸಿಕೊಂಡು ಯುವಕ ನೇಣಿಗೆ ಶರಣು

    ಮಂಡ್ಯ: ಪ್ರಿಯತಮೆಯನ್ನು ಆಕೆಯ ಪೋಷಕರು ತನ್ನಿಂದ ದೂರ ಮಾಡಿದ್ದಾರೆಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದ ಕೆಆರ್ ಪೇಟೆ ತಾಲೂಕಿನ ನಾಯಿಸಿಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ನಿಂಗೇಗೌಡರ ಮಗ ಮಹೇಶ್(37) ಆತ್ಮಹತ್ಯೆಗೆ ಶರಣಾದ ಯುವಕ. ಮಹೇಶ್ ಕಳೆದ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ಪೋಷಕರಿಗೆ ತಿಳಿದ ಬಳಿಕ ಅವರು ತಮ್ಮ ಮಗಳ ಜೊತೆ ಮಾತುಕತೆ ನಡೆಸದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಯುವತಿಯನ್ನು ಆಕೆಯ ಪೋಷಕರು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಇಬ್ಬರು ಪರಸ್ಪರ ಸಿಗದಂತೆ ದೂರ ಮಾಡಿದ್ದರು. ಇದರಿಂದ ಮನನೊಂದ ಮಹೇಶ್ ತಮ್ಮ ಜಮೀನಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ವಿಚಾರವನ್ನು ಯುವಕ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದು, ಆ ಡೈರಿಯನ್ನು ತನ್ನ ಹೊಟ್ಟೆಗೆ ಸಿಕ್ಕಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರೇಯಸಿಯ ಪೋಷಕರ ಜೀವ ಬೆದರಿಕೆಯ ಭಯದಿಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಆತನ ಪೋಷಕರು ಆರೋಪಿಸುತ್ತಿದ್ದಾರೆ.

    ಕೆಆರ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಂಚವೇರಿದ ಕಲ್ಮಠ ಸ್ವಾಮೀಜಿಯಿಂದ ಜೀವಬೆದರಿಕೆ – ಪ್ರತಿಭಟನೆ ಮಾಡದಂತೆ ಕೋಟಿ-ಕೋಟಿ ಆಮಿಷ

    ಮಂಚವೇರಿದ ಕಲ್ಮಠ ಸ್ವಾಮೀಜಿಯಿಂದ ಜೀವಬೆದರಿಕೆ – ಪ್ರತಿಭಟನೆ ಮಾಡದಂತೆ ಕೋಟಿ-ಕೋಟಿ ಆಮಿಷ

    ಕೊಪ್ಪಳ: ಕಲ್ಮಠ ಸ್ವಾಮಿ ಕಾಮ ಪುರಾಣ ಬಯಲಿಗೆಳೆದ ಕಾರು ಚಾಲಕನಿಗೆ ಜೀವಬೆದರಿಕೆ ಹಾಕಿರೋ ಪ್ರಕರಣ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

    ಸ್ವಾಮೀಜಿ ಆಪ್ತರಾದ ಶರಣಪ್ಪ ಹುನಗುಂದ, ಶರಣಪ್ಪ ಹೊಸೂರು, ನಾಗರಾಜ್, ಶಿವಾನಂದ ಹಾಗೂ ಗುರುಪಾದಯ್ಯ ಕಾರು ಚಾಲಕ ಮಲ್ಲಯ್ಯಸ್ವಾಮಿ ಮನೆಗೆ ನುಗ್ಗಿ ಕಲ್ಮಠ ಸ್ವಾಮೀಜಿ ವಿರುದ್ಧ ಕೊಟ್ಟಿರೋ ದೂರು ಹಿಂತೆಗೆದುಕೊಳ್ಳುವಂತೆ ಜೀವಬೆದರಿಕೆ ಹಾಕಿದ್ದು ಅಲ್ಲದೇ ಅವಾಚ್ಯ ಪದದಿಂದ ಬೈದು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಲೈಂಗಿಕ ಹಗರಣ ಹೊರಬಿದ್ದ ನಂತರ ಎಸ್ಕೇಪ್ ಆಗಿದ್ದ ಕಲ್ಮಠ ಸ್ವಾಮೀಜಿ ಮಠಕ್ಕೆ ವಾಪಸ್

    ಈ ಕುರಿತು ಮಲ್ಲಯ್ಯಸ್ವಾಮಿ ಗಂಗಾವತಿ ನಗರಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 143,147,323, 504, 506, ಹಾಗೂ 149 ರಡಿ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಇನ್ನೊಂದೆಡೆ ಸ್ವಾಮೀಜಿ ವಿರುದ್ಧ ಪ್ರತಿಭಟನೆ ಮಾಡ್ತಿರೋ ಹೋರಾಟಗಾರರಿಗೆ ಹಣದ ಆಮೀಷವೊಡ್ಡುತ್ತಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ವೀರಶೈವ ಲಿಂಗಾಯತ ಸಮಾಜದ ಮುಖಂಡ ಮಹಾಬಳೇಶ ಹಾಸಿನಾಳರಿಗೆ ಹಣದ ಆಮೀಷವೊಡ್ಡಿದ್ದಾರೆ ಅಂತ ಬಹಿರಂಗಪಡಿಸಿದ್ದಾರೆ. ಜನವರಿ 22ರಂದು ಕೊಟ್ಟೂರಸ್ವಾಮಿ ಪೀಠದಿಂದ ಕೆಳಗಿಳಿಯಬೇಕೆಂದು ಮಠಕ್ಕೆ ಮುತ್ತಿಗೆ ಹಾಕಲಾಗೋದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಕಲ್ಮಠದ ಕೊಟ್ಟೂರು ಸ್ವಾಮಿಯ ಕಾಮಪುರಾಣ ಬಯಲು- ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಯಾರನ್ನೂ ಬಿಟ್ಟಿಲ್ಲ ಈ ಸ್ವಾಮಿ

    https://www.youtube.com/watch?v=uUJHzuz-RDE

    https://www.youtube.com/watch?v=-l8QW35t_fA

  • ಪ್ರೀತಿಸಿ ಮದ್ವೆಯಾದ ಜೋಡಿಗೆ ಜೀವ ಬೆದರಿಕೆ- ಜೀವ ಕೈಯಲ್ಲಿ ಹಿಡಿದು ಅಲೆಯುತ್ತಿರೋ ದಂಪತಿ

    ಪ್ರೀತಿಸಿ ಮದ್ವೆಯಾದ ಜೋಡಿಗೆ ಜೀವ ಬೆದರಿಕೆ- ಜೀವ ಕೈಯಲ್ಲಿ ಹಿಡಿದು ಅಲೆಯುತ್ತಿರೋ ದಂಪತಿ

    ಬಾಗಲಕೋಟೆ: ಆ ದಂಪತಿಗೆ ಒಂದು ಕಡೆ ನಿಲ್ಲೋಕಾಗುತ್ತಿಲ್ಲ. ಒಂದು ಊರಲ್ಲಿ ನೆಲೆಸೋಕೆ ಆಗುತ್ತಿಲ್ಲ. ಅಲೆಮಾರಿಗಳಂತೆ ಊರೂರು ಸುತ್ತೋದೇ ಅವರ ಕಾಯಕವಾಗಿದೆ. ಎಲ್ಲಿ ನಮ್ಮ ಮೇಲೆ ಹಲ್ಲೆಯಾಗುತ್ತೋ, ಯಾರು ನಮ್ಮನ್ನು ಕೊಲೆ ಮಾಡಿಬಿಡುತ್ತಾರೋ ಎಂಬ ಬೆದರಿಕೆ ಮನದಲ್ಲಿ ಅಚ್ಚೊತ್ತಿದೆ.

    ಇದರಿಂದ ಆ ನೂತನ ದಂಪತಿ ಜೀವ ಕೈಯಲ್ಲಿ ಹಿಡಿದು ಸಾಗುತ್ತಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಹಕ್ಕಿಗಳಿಗೆ ಮೇಲ್ಜಾತಿ ಕೀಳು ಜಾತಿ ಎಂಬ ತಾರತಮ್ಯ ಕಂಟಕ ತಂದೊಡ್ಡಿದ್ದು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

    ಈ ಜೋಡಿಯ ಪ್ರೇಮಕ್ಕೆ ಜಾತಿ ಅಡ್ಡಬಂದಿದ್ದು ಪ್ರೀತಿಸಿ ಮದುವೆಯಾದರೂ ನೆಮ್ಮದಿಯಿಲ್ಲದೆ ಊರು ಬಿಟ್ಟು ಅಲೆದಾಡುವಂತಾಗಿದೆ. ಇವರ ಹೆಸರು ಹನುಮಂತ ವಡ್ಡರ್ ಮತ್ತು ಮಾದೇವಿ ಕೋಟಿ. ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಹನುಮಂತ ವಡ್ಡರ್ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಎಣ್ಣೆವಡಗೇರ ಗ್ರಾಮದವರಾಗಿದ್ದು, ಮಾದೇವಿ ಬಾಗಲಕೋಟೆ ತಾಲೂಕಿನ ಬೆನ್ನೂರು ಗ್ರಾಮದ ನಿವಾಸಿ. ಕಾಲೇಜಿಗೆ ಹೋಗುವಾಗ ಹನುಮಂತ ವಡ್ಡರ್ ಪರಿಚಯವಾಗಿ ಸ್ನೇಹ ಬೆಳೆದು ನಂತರ ಪ್ರೀತಿ ಶುರುವಾಗಿದೆ.

    ಈಗ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಮದುವೆ ಕೂಡ ಆಗಿದ್ದಾರೆ. ಹುಡುಗಿ ಮೇಲ್ಜಾತಿಗೆ ಸೇರಿದ ಕಾರಣ ಈ ಪ್ರೇಮ ವಿವಾಹವನ್ನು ಮಾದೇವಿ ಮನೆಯವರು ಒಪ್ಪುತ್ತಿಲ್ಲ. ಇಷ್ಟೇ ಅಲ್ಲದೆ ಇಬ್ಬರಿಗೂ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಈ ಪ್ರೇಮಿಗಳು ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ನೀಡಿ ಎಂದು ಬಾಗಲಕೋಟೆ ಎಸ್‍ಪಿ ಮೊರೆ ಹೋಗಿದ್ದಾರೆ.

    ಪ್ರೀತಿ ಶುರುವಾಗಿ ಒಂದು ವರ್ಷದ ಬಳಿಕ ಇಬ್ಬರೂ ಮದುವೆ ಆದರೂ ಇವರನ್ನು ಮಾದೇವಿ ಪೋಷಕರು ನೆಮ್ಮದಿಯಿಂದ ಬಾಳ್ವೆ ಮಾಡಲು ಬಿಡುತ್ತಿಲ್ಲ. ಜೊತೆಗೆ ಯುವಕನ ವಿರುದ್ಧ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಯುವತಿ ಮಾದೇವಿ ಮಾತ್ರ ಪತಿ ಬೆನ್ನಿಗೆ ನಿಂತಿದ್ದು, ನನ್ನನ್ನು ಕಿಡ್ನಾಪ್ ಮಾಡಿಲ್ಲ. ನಾನು ಇವರನ್ನು ಮನಸಾರೆ ಪ್ರೀತಿಸುತ್ತಿದ್ದು ನಾನಾಗೇ ಬಂದು ಇವರನ್ನು ಮದುವೆಯಾಗಿದ್ದೇನೆ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.

  • ಶಾಲೆಯಿಂದ ಬಿಡುಗಡೆ ಮಾಡುವಂತೆ ಹೇಳಿದ್ದಕ್ಕೆ ಶಿಕ್ಷಕಿ ಪತಿಯಿಂದ ಬಿಇಓಗೆ ಜೀವ ಬೆದರಿಕೆ

    ಶಾಲೆಯಿಂದ ಬಿಡುಗಡೆ ಮಾಡುವಂತೆ ಹೇಳಿದ್ದಕ್ಕೆ ಶಿಕ್ಷಕಿ ಪತಿಯಿಂದ ಬಿಇಓಗೆ ಜೀವ ಬೆದರಿಕೆ

    ಗದಗ: ಶಿಕ್ಷಕಿಯನ್ನು ವರ್ಗಾವಣೆ ಮಾಡಿದ್ದಕ್ಕೆ ಬಿಇಓಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಗದಗ ಜಿಲ್ಲೆ ರೋಣದಲ್ಲಿ ನಡೆದಿದೆ.

    ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಎನ್ ನಂಜುಂಡಯ್ಯ ಅವರಿಗೆ ಶಿಕ್ಷಕಿ ಎಸ್.ಎಮ್. ನಡುವಿನಮನಿ ಅನ್ನುವರ ಪತಿ ಉಮೇಶ್ ಎಂಬವರು ಜೀವ ಬೆದರಿಕೆ ಹಾಕಿದ್ದಾರೆ. ರೋಣ ತಾಲೂಕಿನ ಚಿಕ್ಕಮಣ್ಣೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಎಸ್.ಎಮ್ ನಡುವಿನಮನಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಶಾಲೆಗೆ ಕಳೆದ ಸೆಪ್ಟೆಂಬರ್ 17, 2016 ರಂದು ವರ್ಗಾವಣೆ ಮಾಡಲಾಗಿತ್ತು.

    ವರ್ಗಾವಣೆಯಾಗಿ ವರ್ಷ ಕಳೆದರೂ ಶಿಕ್ಷಕಿ ಹೊಳೆಇಟಗಿ ಶಾಲೆಗೆ ಹಾಜರಾಗಿರಲಿಲ್ಲ. ನಂತರ ಅವರನ್ನ ಚಿಕ್ಕಮಣ್ಣೂರು ಶಾಲೆಯಿಂದ ಬಿಡುಗಡೆ ಮಾಡುವಂತೆ ಮುಖ್ಯೋಪಾಧ್ಯಾಯರಿಗೆ ಬಿಇಓ ಸೂಚಿಸಿದರು. ಇದಕ್ಕೆ ಶಿಕ್ಷಕಿ ಪತಿ ಉಮೇಶ್ ಸಿಟ್ಟಾಗಿ ಬಿಇಓ ಎನ್ ನಂಜುಂಡಯ್ಯ ಮನೆಗೆ ನುಗ್ಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕು ತೋರಿಸಿ ಜೀವ ಬೆದರಿಕೆ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ.

    ಶಿಕ್ಷಕಿ ಪತಿ ಉಮೇಶ್ ವಿರುದ್ಧ ರೋಣ ಪೊಲೀಸ್ ಠಾಣೆಗೆ ಬಿಇಓ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ಚಾಕು ತೋರಿಸಿ ಜೀವ ಬೆದರಿಕೆ ಬಗ್ಗೆ ಗದಗ ಜಿಲ್ಲೆ ರೋಣ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

  • ಗೌರಿ ಲಂಕೇಶ್ ಆಪ್ತ ಭಾಸ್ಕರ್ ಪ್ರಸಾದ್‍ಗೆ ಜೀವ ಬೆದರಿಕೆ

    ಗೌರಿ ಲಂಕೇಶ್ ಆಪ್ತ ಭಾಸ್ಕರ್ ಪ್ರಸಾದ್‍ಗೆ ಜೀವ ಬೆದರಿಕೆ

    ಬೆಂಗಳೂರು: ಗೌರಿ ಲಂಕೇಶ್ ಆಪ್ತ ಭಾಸ್ಕರ್ ಪ್ರಸಾದ್‍ಗೆ ಜೀವ ಬೆದರಿಕೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಡಿಜಿ ಕಚೇರಿಯಲ್ಲಿ ದೂರು ನೀಡಿದ್ದಾರೆ.

    ಬುಧವಾರ ರಾತ್ರಿ 1:30ಕ್ಕೆ ಮಂಗಳೂರು ಮೂಲದ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಮೂರೆ ಮೂರು ದಿನಗಳಲ್ಲಿ ಹತ್ಯೆ ಮಾಡುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಸಿದ್ದಾನೆ ಎಂದು ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ. ಕರೆ ಬಂದ ನಂಬರ್ ಗೆ ಕರೆ ಮಾಡಿದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ.

    ಸಾಹಿತಿ ಗೌರಿ ಲಂಕೇಶ್ ಹತ್ಯೆಯಾದ ನಂತರ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಹಿರಿಯ ಪತ್ರಕರ್ತ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ ಗನ್‍ಮ್ಯಾನ್ ನೀಡಿದ್ದಾರೆ.

    https://youtu.be/E-2vEpV_WFE

    https://youtu.be/L-9u5qyk-TQ

    https://youtu.be/lldSl2t55M0

  • ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ: ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ

    ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ: ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ

    ಕೊಪ್ಪಳ: ಪ್ರಧಾನಿ ಮೋದಿಗೆ ಜೀವ ಬೆದರಿಕೆ ಇದ್ರೆ ಸಾಯಲಿ ಬಿಡಿ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯಿಂದ ಹೇಳಿಕೆ ನೀಡಿದ್ದಾರೆ.

    ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾರುಗಳ ಮೇಲೆ ಕೆಂಪು ದೀಪ ತೆಗೆದು ಹಾಕುವಂತೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಇಂದು ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಈ ಹೇಳಿಕೆ ನೀಡಿದ್ದಾರೆ.

    ಈ ಹೊಸ ನಿಯಮದಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಏನು ಬದಲಾವಣೆಯಾಗಿದೆ ಎಂದು ಕೇಳಿದ ಪ್ರಶ್ನೆಗೆ ಉಡಾಫೆಯಾಗಿ ಉತ್ತರ ನೀಡಿದ ಅವರು, ಯಾವ ಬದಲಾವಣೆಯೂ ಇಲ್ಲ. ಬೇಕಾದ್ರೆ ಭದ್ರತೆಯನ್ನೂ ತೆಗೆದುಹಾಕಲಿ. ಮೋದಿ ಅವರಿಗೆ ಹೇಳಿಬಿಡ್ತೀನಿ. ಮೋದಿ ಅವರು ನಿಜಾಗಲೂ ಮಾಡಬೇಕಾಗಿದ್ದು ಭದ್ರತೆ ತೆಗೆಯಬೇಕು. ತಮ್ಮದು ಮೊದಲು ಮೋದಿ ತೆಗೆದುಹಾಕಲಿ. ನಾನು ರೆಡಿ ಅಂದ್ರು.

    ಮೋದಿಯವರಿಗೆ ಸಾಕಷ್ಟು ಜೀವ ಬೆದರಿಕೆ ಇರುತ್ತದೆ. ಅವರ ಭದ್ರತೆ ತೆಗೆಯಲು ಹೇಗೆ ಸಾಧ್ಯ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವ ಬೆದರಿಕೆ ಇದ್ದರೆ ಸಾಯಲಿ ಬಿಡಿ. ಅಧಿಕಾರ ಬೇಕಾದ್ರೆ ಸಾಯಬೇಕಪ್ಪ. ಯಾರೇನು ಮಾಡ್ಬೇಕು ಅದಕ್ಕೆ? ಅಧಿಕಾರ ಬೇಡ ಅಂದ್ರೆ ಮನೆಯಲ್ಲಿ ಕೂರಲಿ ಅಂದ್ರು.

    ಮೋದಿಯನ್ನು ಮಾತ್ರ ಹೇಗೆ ಸಾಯಿಸ್ತಾರೆ? ನನಗೆ ಹೊಡೆದರೆ ನಾನು ಸಾಯ್ತೀನಿ. ಏನು ಮಾಡೋಕಾಗುತ್ತೆ. ಇವೆಲ್ಲಾ ಶೋ ಆಫ್ ರೀ ಇವು… ಎಂದು ಪ್ರಧಾನಿ ಬಗ್ಗೆ ಉಡಾಫೆಯಾಗಿ ಮಾತನಾಡಿದ್ರು.

    ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದು ನೇಮಕ ಮಾಡುವುದು ಹೈ ಕಮಾಂಡಗೆ ಬಿಟ್ಟ ವಿಚಾರ, ಬೇರೆ ಯಾರಿಗಾದ್ರೂ ಕೊಟ್ಟರೂ ನನಗೆ ಅಭ್ಯಂತರವಿಲ್ಲ. ನನಗೆ ಕೊಟ್ಟರೂ ನಿಭಾಯಿಸಲು ಸಿದ್ಧ ಎಂದು ಹೇಳಿದ್ರು.

    https://www.youtube.com/watch?v=ncnWx77c_bQ