Tag: ಜೀನ್ಸ್ ಪ್ಯಾಂಟ್

  • ಮದುವೆ ನಂತ್ರ ಜೀನ್ಸ್ ಧರಿಸಲು ಬಿಟ್ಟಿಲ್ಲ ಅಂತ ಗಂಡನನ್ನೇ ಸಾಯಿಸಿದ್ಲು

    ಮದುವೆ ನಂತ್ರ ಜೀನ್ಸ್ ಧರಿಸಲು ಬಿಟ್ಟಿಲ್ಲ ಅಂತ ಗಂಡನನ್ನೇ ಸಾಯಿಸಿದ್ಲು

    ರಾಂಚಿ: ಮದುವೆಯಾದ ಬಳಿಕ ಜೀನ್ಸ್ ಧರಿಸಲು ಬಿಡದೇ ಇರುವ ಕಾರಣಕ್ಕೆ ತಾಳಿ ಕಟ್ಟಿದ ಪತಿಯನ್ನೇ ಚಾಕುವಿಂದ ಇರಿದು ಪತ್ನಿ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ಜಮ್ತಾರಾದಲ್ಲಿ ನಡೆದಿದೆ.

    CRIME 2

    ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಪುಷ್ಪಾ ಹೆಂಬ್ರೋಮ್ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದ ಪುಷ್ಪಾಳನ್ನು ಜೀನ್ಸ್ ಧರಿಸಿದ್ದ ಬಗ್ಗೆ ಪತಿ ಪ್ರಶ್ನಿದ್ದಾರೆ ಹಾಗೂ ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ.

    ನಂತರ ಜಗಳ ವಿಕೋಪಕ್ಕೆ ತಿರುಗಿ ಪುಷ್ಪಾ ತನ್ನ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕುಟುಂಬಸ್ಥರು ಧನ್‍ಬಾದ್‍ನಲ್ಲಿರು ಶಾಹಿದ್ ನಿರ್ಮಲ್ ಮಹತೋ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಪ್ರಾಂಶುಪಾಲರು, ಶಿಕ್ಷಕರು ಸೇರಿ ಐವರು ಅರೆಸ್ಟ್

    ಈ ಬಗ್ಗೆ ಮಾಧ್ಯಮದವರೊಂದೊಗೆ ಮಾತನಾಡಿದ ಮೃತರ ತಂದೆ ಕರ್ಣೇಶ್ವರ ತುಡು ಅವರು, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ವಿಚಾರವಾಗಿ ಮಗ ಮತ್ತು ಸೊಸೆ ನಡುವೆ ಜಗಳ ನಡೆದಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು

    Live Tv
    [brid partner=56869869 player=32851 video=960834 autoplay=true]

  • ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

    ಮೈಸೂರಲ್ಲಿ ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್

    ಮೈಸೂರು: ಜಿಲ್ಲೆಯ ಶಿಕ್ಷಕರಿಗೆ ಹೊಸ ವಸ್ತ್ರಸಂಹಿತೆ ಜಾರಿ ಮಾಡಲಾಗಿದ್ದು, ಶಿಕ್ಷಕರಿಗೆ ಜೀನ್ಸ್ ಪ್ಯಾಂಟ್ ಬ್ಯಾನ್ ಮಾಡಲಾಗಿದೆ.

    jeans

    ಶಿಕ್ಷಕರು ಕರ್ತವ್ಯದಲ್ಲಿರುವ ವೇಳೆ ಜೀನ್ಸ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸುವಂತಿಲ್ಲ ಎಂದು ಮೈಸೂರು ಡಿಡಿಪಿಐ ಶ್ರೀನಿವಾಸಮೂರ್ತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಉಪನಿರ್ದೇಶಕರ ಕಚೇರಿ ಮತ್ತು ಕಾಲೇಜುಗಳಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗೆ ಆದೇಶ ಅನ್ವಯ ಆಗಲಿದೆ. ಮೈಸೂರು ಜಿಲ್ಲಾಧಿಕಾರಿಗಳ ಮೌಖಿಕ ಸೂಚನೆ ಮೇರೆಗೆ ಡಿಡಿಪಿಐ ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಜಿಮ್ ಮಾಡೋವ್ರಿಗೆ ಅಪ್ಪು ಸಾವು ಬಿಗ್ ಶಾಕ್ – ಜಿಮ್‍ಗೆ ಹೋಗದಂತೆ ಮಕ್ಕಳಿಗೆ ಪೋಷಕರ ಆಕ್ಷೇಪ

    ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ವಸ್ತ್ರ ಸಂಹಿತೆ ಹೇರುವುದು, ಡ್ರೆಸ್ ಕೋಡ್ ಆದೇಶ ವಿವಾದಕ್ಕೆ ಗುರಿಯಾಗುವುದನ್ನು ಕೇಳಿದ್ದೆವು. ಈಗ ಕಾಲೇಜು ಶಿಕ್ಷಕರಿಗೂ ಕಾಲೇಜಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಡ್ರೆಸ್ ಕೋಡ್ ಬಂದಿದೆ. ಇದನ್ನೂ ಓದಿ:  ಕೇರಳದಲ್ಲಿ120 ವರ್ಷಗಳಲ್ಲಿಯೇ ಅತ್ಯಧಿಕ ಮಳೆ

  • ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದ ಯುವತಿಯನ್ನು ಅಂಗಡಿಯಿಂದ ಹೊರ ಹಾಕಿದ ಮಾಲೀಕ

    ದಿಸ್ಪುರ: ಬುರ್ಕಾ ಬದಲು ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಮುಸ್ಲಿಂ ಯುವತಿಯನ್ನು ಅಂಗಡಿಯ ಮಾಲೀಕ ಹೊರ ಹಾಕಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಮುಸ್ಲಿಂ ಸಮುದಾಯದ ಯುವತಿ ಜೀನ್ಸ್ ಪ್ಯಾಂಟ್ ಧರಿಸಿದ್ದಾಳೆ ಎನ್ನುವ ಕಾರಣಕ್ಕೆ ಆಕೆಯನ್ನು ಅಂಗಡಿಯಿಂದ ಮಾಲೀಕ ಹೊರಹಾಕಿದ್ದಾನೆ. ಬುರ್ಕಾ ಏಕೆ ಧರಿಸಿಲ್ಲ, ಜೀನ್ಸ್ ಪ್ಯಾಂಟ್ ಯಾಕೆ ಹಾಕಿಕೊಂಡಿದ್ದೀಯ ಎಂದು ಆಕೆಗೆ ಅಂಗಡಿಯ ಮಾಲೀಕ ಪ್ರಶ್ನೆ ಮಾಡಿದ್ದಾನೆ. ಇದನ್ನೂ ಓದಿ: ಪುನೀತ್ ಓದಿಸುತ್ತಿದ್ದ 1,800 ಮಕ್ಕಳ ಜವಾಬ್ದಾರಿ ಹೊತ್ತ ನಟ ವಿಶಾಲ್

    ಅಸ್ಸಾಂನ ಬಿಸ್ವನಾಥ್ ಚರಿಯಾಲಿಯಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿಗೆ 22 ವರ್ಷದ ಯುವತಿ ಇಯರ್‌ಫೋನ್ ಖರೀದಿಸಲು ಎಲೆಕ್ಟ್ರಾನಿಕ್ಸ್ ಅಂಗಡಿಗೆ ಹೋಗಿದ್ದಾರೆ. ಆದರೆ ಆಕೆಗೆ ಇಯರ್‌ಫೋನ್ ಮಾರಾಟ ಮಾಡಲು ಅಗಂಗಡಿ ಮಾಲೀಕ ಮಾಲೀಕ ನೂರುಲ್ ಅಮೀನ್ ನಿರಾಕರಿಸಿದ್ದಾನೆ. ಆಕೆ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕಾಗಿ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಬುರ್ಕಾ ಧರಿಸುವಂತೆ ಅಂಗಡಿಯ ಮಾಲೀಕರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಘಟನೆಯ ನಂತರ, ಯುವತಿಯ ತಂದೆ ತನ್ನ ಮಗಳೊಂದಿಗೆ ತೋರಿದ ವರ್ತನೆಯನ್ನ ಪ್ರಶ್ನಿಸಿಲು ಎಲೆಕ್ಟ್ರಾನಿಕ್ಸ್ ಸ್ಟೋರ್‌ಗೆ ಭೇಟಿ ನೀಡಿದ್ದರು. ಆದರೆ ಅವರೊಂದಿಗೂ ಅಂಗಡಿಯ ಮಾಲೀಕ ನೂರುಲ್‍ನ ಪುತ್ರ ರಫಿಕುಲ್ ಇಸ್ಲಾಂ ಅಮಾನುಷವಾಗಿ ನಡೆಸಿಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

    ಈ ಸಂಬಂಧ, ಯುವತಿಯ ತಂದೆ ಹಾಗೂ ಸಂತ್ರಸ್ತೆ ಯುವತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಿಸ್ವನಾಥ್ ಪೊಲೀಸರು ಆರೋಪಿ ನೂರುಲ್ ಅಮೀನ್ ಮತ್ತು ಅವರ ಮಗ ರಫಿಕುಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಲಕ್ನೋ: ಆಧುನಿಕ ಜಗತ್ತಿನಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಡುವುದು ಸಾಮಾನ್ಯವಾಗಿದೆ. ಆದರೆ ಕೆಲವೆಡೆಗಳಲ್ಲಿ ಇನ್ನೂ ಜನರು ಇದನ್ನು ವಿರೋಧಿಸುತ್ತಾರೆ. ಇದೀಗ ಜೀನ್ಸ್, ಟಿ- ಶರ್ಟ್ ಧರಿಸಿದಳೆಂದು ಹುಡುಗಿಯೊಬ್ಬಳನ್ನು ಕೊಲೆಗೈದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು.

    ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಹಾಕಿದ್ದಾಳೆ. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗದ್ದಲವೇ ನಡೆದಿದೆ.

    ಜಗಳವಾಗಿ ಕೆಲ ಹೊತ್ತಿನ ಬಳಿಕ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವವಾಗಿ ಪತ್ತೆಯಾಗಿದ್ದಾಳೆ. ಹುಡುಗಿ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯಾರೋ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

    ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

    ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಬಟ್ಟೆ ಧರಿಸುತ್ತಾರೆ ಎಂಬುದು ಗೊತ್ತಿರುವ ವಿಚಾರ. ಹೆಚ್ಚು ಬೆಲೆಯ ಬಟ್ಟೆ ಧರಿಸುವುದಿಲ್ಲ ಎಂದು ಕೆಲವು ಬಾರಿ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳದ್ದಾಗಿದೆ ಎಂಬುದು ಇದೀಗ ರಿವೀಲ್ ಆಗಿದೆ.

    ಡಿ ಬಾಸ್ 50 ಸಾವಿರದಿಂದ 1 ಲಕ್ಷದ ವರೆಗಿನ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಆದರೆ ತಮಗಾಗಿಯಲ್ಲ, ಬದಲಿಗೆ ಸಿನಿಮಾಗಾಗಿ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾದಲ್ಲಿ ಇಷ್ಟು ಬೆಲೆಯ ಪ್ಯಾಂಟ್‍ನ್ನು ಡಿ ಬಾಸ್ ಧರಿಸಿದ್ದರು. ಅಲ್ಲದೆ ಇನ್ನೂ ಹೆಚ್ಚಿನ ಹಣವನ್ನು ಡಿ ಬಾಸ್ ನಿರ್ಮಾಪಕರಿಗೆ ಉಳಿತಾಯ ಮಾಡಿದ್ದರಂತೆ.

    ಇತ್ತೀಚಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದರ್ಶನ್ ಕುರಿತ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್‍ನ ಜೀನ್ಸ್ ಪ್ಯಾಂಟ್ ಹಾಕ್ತೀನಿ. ರಾಬರ್ಟ್ ಸಿನಿಮಾಕ್ಕೆ ಇದೇ ರೀತಿಯ 15-20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ಕಂಡ ದರ್ಶನ್, 4-5 ಜೀನ್ಸ್ ತಗೊಂಡು ಬನ್ನಿ ಸಾಕು. ಇನ್ನೂ ಹಾಕಿಕೊಳ್ಳದೇ ಇರುವ ಕೆಲ ಜೀನ್ಸ್ ನನ್ನ ಬಳಿ ಇವೆ. ಅವನ್ನೇ ಹಾಕಿಕೊಳ್ಳುತ್ತೇನೆ, ಇದರಿಂದ ಪ್ರೊಡಕ್ಷನ್ ಹಣ ಉಳಿತಾಯವಾಗುತ್ತದೆ. ಸುಮ್ಮನೆ ಯಾಕೆ ದುಡ್ಡು ಹಾಳು ಮಾಡುವುದು ಎಂದು ಡಿ ಬಾಸ್ ಹಣ ಉಳಿತಾಯ ಮಾಡಿದ ಪ್ರಸಂಗವನ್ನು ವಿವರಿಸಿದ್ದಾರೆ.

    ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ ಡಿ ಬಾಸ್ ಅಂದು 150 ರೂ. ಸಂಬಳ ಪಡೆಯುತ್ತಿದ್ದರು. ಇಂದು ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯೆಸ್ಟ್ ನಟ. ಇದೀಗ ಲಕ್ಷಗಟ್ಟಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ವಾರಾಣಸಿಗೆ ಶೂಟಿಂಗ್‍ಗೆ ತೆರಳಿದ್ದ ವೇಳೆ ಅಲ್ಲಿ ದರ್ಶನ್ ಸಿನಿಮಾ ನೋಡಿದ್ದರು, ಅಲ್ಲಿನ ಅಭಿಮಾನಿಗಳು ಸಹ ದಾಸನನ್ನು ನೋಡಲು ಮುಗಿಬಿದ್ದಿದ್ದರಂತೆ. ಅಷ್ಟು ಫ್ಯಾನ್ಸ್ ಹೊಂದಿದ್ದಾರೆ. ಆದರೂ ದರ್ಶನ್ ಹೆಚ್ಚು ಬೆಲೆಯ ಬಟ್ಟೆ ಖರೀದಿಸುವುದಿಲ್ಲ.

    ಅಷ್ಟೇ ಅಲ್ಲ ಫಾರ್ಮ್ ಹೌಸ್, ಪ್ರಾಣಿ ಪ್ರೀತಿ, ಬಡವರಿಗೆ ಸಹಾಯ ಮಾಡುವುದು ಹಾಗೂ ಸಿನಿಮಾ ರಂಗದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದು ದರ್ಶನ್ ಅವರ ಗುಣ. ಅಲ್ಲದೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಭಿಮಾನಿಗಳು ಸಹ ಅಂದು ಹೂವು, ಹಾರ, ಕೇಕ್ ತರದೆ ಆಹಾರ ಧಾನ್ಯಗಳನ್ನು ತರುವಂತೆ ಸೂಚಿಸಿದ್ದರು. ಬಂದ ಧಾನ್ಯಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದಾನ ನೀಡುತ್ತಾರೆ ಎಂಬುದು ತಿಳಿದೇ ಇದೆ.

    ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ್‍ಗೆ 1 ಲಕ್ಷ ರೂಪಾಯಿ ನೀಡಿದ್ದು. ಡಿ ಬಾಸ್‍ಗೆ ಊಟದಲ್ಲಿ ಮಾತ್ರ ಆಸಕ್ತಿ, ರುಚಿಯಾದ ನಾನ್‍ವೆಜ್ ಅಡುಗೆ ಎಲ್ಲಿಂದ ತಂದರೂ ಓಕೆ. ಅಲ್ಲದೆ ತನ್ನ ಜೊತೆ ದುಡಿಯುವವರಿಗೆ ಸರಿಯಾದ ಸಂಬಳ ಕಾಲಕಾಲಕ್ಕೆ ಸಿಗದಿದ್ದರೆ ದರ್ಶನ್ ಸಹಿಸುವುದಿಲ್ಲ. ಶೂಟಿಂಗ್ ಸೆಟ್‍ನಲ್ಲಿ ಪ್ರತಿನಿತ್ಯ ಭರ್ಜರಿ ಊಟ ಇರಲೇಬೇಕು ಎಂಬುದು ದಚ್ಚು ಕಂಡೀಶನ್.

  • ಶಾಲೆಗೆ ಜೀನ್ಸ್ ಪ್ಯಾಂಟ್ ಧರಿಸಿ ಬಂದ ವಿದ್ಯಾರ್ಥಿಗೆ ನಡೆದಾಡಲೂ ಆಗದಂತೆ ಕತ್ತರಿಯಿಂದ ಗಾಯಗೊಳಿಸಿದ್ರು!

    ಶಾಲೆಗೆ ಜೀನ್ಸ್ ಪ್ಯಾಂಟ್ ಧರಿಸಿ ಬಂದ ವಿದ್ಯಾರ್ಥಿಗೆ ನಡೆದಾಡಲೂ ಆಗದಂತೆ ಕತ್ತರಿಯಿಂದ ಗಾಯಗೊಳಿಸಿದ್ರು!

    ಲಕ್ನೋ: 11ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಯೂನಿಫಾರ್ಮ್ ಬದಲಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಕತ್ತರಿ ಹಾಕಿದೆ. ಶಾಲಾ ಸಿಬ್ಬಂದಿ ಪ್ಯಾಂಟ್ ಕತ್ತರಿಸುವ ವೇಳೆ ವಿದ್ಯಾರ್ಥಿ ಕಾಲಿಗೆ ಗಾಯವಾಗಿದ್ದು, ನಡೆದಾಡಲು ಆಗುತ್ತಿಲ್ಲ.

    ಉತ್ತರ ಪ್ರದೇಶ ರಾಜ್ಯದ ಕಾನ್ಪುರನ ಸಿಕಂದರ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ಸಮವಸ್ತ್ರ ಧರಿಸದೇ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದರಿಂದ ಕೋಪಗೊಂಡ ಶಾಲಾ ಆಡಳಿತ ಮಂಡಳಿ ಕತ್ತರಿಯಿಂದ ಪ್ಯಾಂಟ್ ನ್ನು ತೊಡೆಯ ಭಾಗದವರೆಗೂ ಕತ್ತರಿಸಿದ್ದಾರೆ. ಈ ವೇಳೆ ಪ್ಯಾಂಟ್ ಕತ್ತರಿಸುವಾಗ ವಿದ್ಯಾರ್ಥಿಯ ತೊಡೆಯ ಭಾಗಕ್ಕೆ ಕತ್ತರಿ ತಗುಲಿ ಗಾಯವಾಗಿದೆ.

    ಶಾಲೆಯ ಸಿಬ್ಬಂದಿ ನನ್ನ ಮಗನ ಮಾತನ್ನು ಕೇಳದೇ ಪ್ಯಾಂಟ್ ಕಟ್ ಮಾಡಿದ್ದಾರೆ. ಈ ವೇಳೆ ಕತ್ತರಿ ನನ್ನ ಮಗನ ತೊಡೆಯ ಭಾಗಕ್ಕೆ ತಗುಲಿದೆ. ಸಮವಸ್ತ್ರ ಧರಿಸದ ಕಾರಣ ನನ್ನ ಮಗನನ್ನು ಮನೆಗೆ ಕಳುಹಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ಈ ವರ್ತನೆ ತಪ್ಪು ಎಂದು ವಿದ್ಯಾರ್ಥಿ ತಂದೆ ವಿನೋದ್ ಪಾಲ್ ಹೇಳಿದ್ದಾರೆ.

    ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.