Tag: ಜಿ.ಟಿ ದೇವೇ ಗೌಡ

  • ರಾಜಕಾರಣ ಸಾಕು, ಸಾಕಷ್ಟು ನೊಂದಿದ್ದೇನೆ – ಜಿ.ಟಿ ದೇವೇಗೌಡ

    ರಾಜಕಾರಣ ಸಾಕು, ಸಾಕಷ್ಟು ನೊಂದಿದ್ದೇನೆ – ಜಿ.ಟಿ ದೇವೇಗೌಡ

    ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರವಷ್ಟೇ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ ಇಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಕೂಡ ರಾಜಕಾರಣದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಸಾಕು, ನಾನು ಸಾಕಷ್ಟು ನೊಂದಿದ್ದೇನೆ. ಇಡೀ ರಾಜ್ಯ, ದೇಶದ ಜನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ನೋಡಿದರು. 50 ವರ್ಷದಿಂದ ರಾಜಕೀಯ ಮಾಡಿದ್ದೇನೆ. ಹಿರಿಯರ ಜೊತೆ ರಾಜಕೀಯ ಮಾಡಿದ್ದೇನೆ. ನನಗೆ ಸಾಕು ಎನಿಸಿದೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಧ್ಯವಿಲ್ಲ ಎಂದರು.

    ನಾನು ಮಂತ್ರಿ ಆಗಿ ಆಯ್ತು. ಸರ್ಕಾರದಲ್ಲಿ ಏನಾಯ್ತು. ನಮ್ಮ ಜಿಲ್ಲೆಯಲ್ಲಿ ಏನು ಆಡಳಿತವಾಯ್ತು, ನನಗೆ ಏನಾಯ್ತು ಅದೆಲ್ಲಾ ಈಗ ಹೇಳುವುದು ಉಚಿತವಲ್ಲ. ನನ್ನ ನೋವು ದೇವರಿಗೆ ಮಾತ್ರ ಗೊತ್ತು. ನಾನು ಪ್ರಾಮಾಣಿಕವಾಗಿ ದೇವೇಗೌಡರು ಕುಮಾರಸ್ವಾಮಿಯನ್ನು ದೇವರು ಅಂದುಕೊಂಡು ಕೆಲಸ ಮಾಡಿದ್ದೇನೆ. ಚುನಾವಣೆ ನನಗೆ ಸಾಕಾಗಿದೆ. ಅದನ್ನು ಕುಮಾರಸ್ವಾಮಿ ದೇವೇಗೌಡರಿಗೂ ಹೇಳಿದ್ದೇನೆ. ಕಾರ್ಯಕರ್ತರು ಯಾವತ್ತೂ ನನಗೆ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದರು.

    ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ನನಗೆ ಅಭೂತಪೂರ್ವ ಗೆಲುವು ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಅರ್ಪಿಸಲು ಆಗಿಲ್ಲ. ನಾನು ಯಾರ ಹಂಗಿನಲ್ಲೂ ಬದುಕಿಲ್ಲ. ಯಾರೂ ನನಗೆ ರಾಜಕೀಯ ಗುರುಗಳಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಯಾರಿಂದಲೂ ಒಂದು ಪೈಸೆ ಸಹಾಯವಾಗಿಲ್ಲ. ಕುಮಾರಪರ್ವ, ಚುನಾವಣೆಗಳಿಗೆ ಜೆಡಿಎಸ್‍ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನಾನು ಸ್ವಂತ ಹಣದಿಂದ ಎಲ್ಲವನ್ನು ಮಾಡಿದ್ದೇನೆ ಎಂದರು.

    ಈ ಹಿಂದೆ ಮುಂದಿನ ಚುನಾವಣೆಯಲ್ಲಿ ಹರೀಶ್ ಗೌಡನೇ ಅಭ್ಯರ್ಥಿ ಅಂದಿದ್ದರು. ಎಂಎಲ್‍ಸಿ ಮಾಡುತ್ತೇವೆ ಅಂದಿದ್ದರು ಯಾವುದು ಆಗಲಿಲ್ಲ. ನನಗೆ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ನನಗಿಷ್ಟವಾದ ಖಾತೆ ಸಿಗಲಿಲ್ಲ. ಹೇಳುತ್ತಾ ಹೋದರೆ ಸಾಕಷ್ಟಿದೆ ಎಂದು ಜಿಟಿಡಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

  • ಸಿದ್ದರಾಮಯ್ಯ ಇನ್ನೂ ಯಂಗ್ ಆಗಿದ್ದಾರೆ ಅಂದ್ರು ಜಿ.ಟಿ.ದೇವೇಗೌಡ

    ಸಿದ್ದರಾಮಯ್ಯ ಇನ್ನೂ ಯಂಗ್ ಆಗಿದ್ದಾರೆ ಅಂದ್ರು ಜಿ.ಟಿ.ದೇವೇಗೌಡ

    ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಸಚಿವ ಜಿ.ಟಿ.ದೇವೇಗೌಡ ಮುನಿಸು ಮರೆತಂತೆ ಕಾಣಿಸುತ್ತಿದೆ. ಶನಿವಾರ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ವಯಸ್ಸಾಗಿದೆಯಾ..? ಅವರು ಮುದುಕನಾ..? ಅವರು ಇನ್ನೂ ಯಂಗ್ ಆಗಿಯೇ ಇದ್ದಾರೆ ಎಂದರು.

    ಸಿದ್ದರಾಮಯ್ಯ ಮತ್ತೆ ಸಿಎಂ ಆಗಬಾರದು ಅಂತಾ ಇದೆಯಾ..? ದೇವೇಗೌಡರು ಇವತ್ತಿಗೂ ಈ ವಯಸ್ಸಿನಲ್ಲಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅಂತಾರೆ. ಚುನಾವಣೆಗೂ ಮುಂಚೆ ನಡೆದಿದ್ದು ಬೇರೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಸಿದ್ದರಾಮಯ್ಯರನ್ನ ಮತ್ತೆ ಸೋಲಿಸುವ ಸನ್ನಿವೇಶ ಸೃಷ್ಟಿಯಾಗಲ್ಲ. ಏಕೆಂದರೆ ನಾವು ಈಗ ಒಂದಾಗಿಬಿಟ್ಟಿದ್ದೇವೆ ಅಲ್ವಾ ಎಂದು ನಕ್ಕರು.

    ಕೇಂದ್ರ ಸರ್ಕಾರದ ಆದೇಶದ ಮೇಲೆ ಆಯೋಗ ಚುನಾವಣೆ ಘೋಷಣೆ ಮಾಡಿದೆಯಾ? ಮೇ ತಿಂಗಳಲ್ಲಿ ಸಂಸದರು ರಾಜೀನಾಮೆ ಕೊಟ್ಟಿದ್ದಾರೆ. ನವೆಂಬರ್ ನಲ್ಲಿ ಚುನಾವಣೆ ನಡೆಸ್ತಿದ್ದಾರೆ ಅಂದ್ರೆ ಈ ಚುನಾವಣೆ ಘೋಷಣೆ ಮಾಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ.

    ಪ್ರಜಾಪ್ರಭುತ್ಚದ ಕಗ್ಗೊಲೆಯನ್ನು ಚುನಾವಣಾ ಆಯೋಗ ಮಾಡಿದೆ. ಈಗ ಲೋಕಸಭೆ ಉಪಚುನಾವಣೆಯಲ್ಲಿ ಗೆದ್ದವರಿಗೆ ಐದು ವರ್ಷ ಅಧಿಕಾರ ನೀಡುವ ನಿರ್ಣಯ ಚುನಾವಣಾ ಆಯೋಗ ಮಾಡಲಿ. ಹಾಗಾದರೆ ಆಯೋಗಕ್ಕೆ ನೀತಿ, ಸತ್ಯ ಇದೆ ಎನ್ನಬಹುದು. ಮೋದಿ ಯಾವ ಉದ್ದೇಶದಿಂದ ಮಾಡಿಸಿದ್ದಾರೋ ಗೊತ್ತಿಲ್ಲ. ಈ ಪ್ರಯೋಗ ನಮಗೆ ಹೊಂದಾಣಿಕೆ ಮಾಡಿಕೊಳ್ಳಲು ನೀವೇ ಅನುವು ಮಾಡಿಕೊಟ್ಟಿದ್ದೀರಿ. ಕಾಂಗ್ರೆಸ್-ಜೆಡಿಎಸ್ ಎರಡೂ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಲು ಈ ಚುನಾವಣೆ ಪೂರಕ ವೇದಿಕೆಯಾಗಿದೆ. ಕುಮಾರಣ್ಣನ ಸರ್ಕಾರ 5 ವರ್ಷ ಗಟ್ಟಿಯಾಗಿ ಇರಲು ಉಪಚುನಾವಣೆ ಸಹಕಾರಿಯಾಗುತ್ತೆ ಅಂದ್ರು.

    ನಮ್ಮ ಸರ್ಕಾರ ಈಗತಾನೇ ಅಂಬೆಗಾಲು ಇಡುತ್ತಿದೆ. ಒಂದು ಕಡೆ ಯುದ್ದ ಮಾಡಿ ವಿರುದ್ಧವಾಗಿದ್ದವರು ಒಂದಾಗುವುದಕ್ಕೆ ಸ್ವಲ್ಪ ಕಾಲ ಬೇಕಲ್ಲವಾ? ನಮ್ಮ ಸರ್ಕಾರ ಬಂದು ಐದು ತಿಂಗಳಾಗಿದೆ. ಹೀಗಾಗಿ ಎಲ್ರೂ ಜೊತೆಗೂಡುವುದಕ್ಕೆ ಸ್ವಲ್ಪ ಟೈಮ್ ಬೇಕು. ಈಗ ಎಲ್ಲರನ್ನೂ ಜೊತೆಗೂಡಿಸುವ ಶಕ್ತಿ ಕುಮಾರಸ್ವಾಮಿಗೆ ಇದೆ ಅಂತ ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

    ಉನ್ನತ ಶಿಕ್ಷಣ ಖಾತೆ ಬೇಡ್ವೇ ಬೇಡ ಅಂತಿದ್ದ ಜಿಟಿಡಿ ದಿಢೀರ್ ಒಪ್ಪಿಕೊಂಡಿದ್ಯಾಕೆ?

    ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಬೇಡ ಬೇಡ ಅಂತಿದ್ದ ಜಿಟಿ ದೇವೇಗೌಡ ದಿಢೀರ್ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಯೊಂದು ಇದೀಗ ಮೂಡಿಬಂದಿದೆ.

    ಉನ್ನತ ಶಿಕ್ಷಣ ಸಚಿವರ ಸಲಹೆಗಾರರಾಗಿದ್ದ ಪ್ರೊ. ರಂಗಪ್ಪ ಅವರೇ ಜಿಟಿ ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಸ್ಥಾನ ನಿರಾಕರಿಸಲು ಕಾರಣ ಎನ್ನಲಾಗಿದೆ. ಆದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊನೆ ಕ್ಷಣದಲ್ಲಿ ಸಲಹೆಗಾರರನ್ನಾಗಿ ನೇಮಿಸಲ್ಲ ಅಂತ ಭರವಸೆ ಕೊಟ್ಟ ಬಳಿಕ ತನಗೆ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

    ಇತ್ತ ಜಿಡಿಟಿ ಕಟ್ಟಿ ಹಾಕುವುದು ಕಷ್ಟ ಅಂತ ಭಾವಿಸಿದ ಗೌಡರ ಕುಟುಂಬ ಅಬಕಾರಿ, ಸಹಕಾರಿ ಖಾತೆ ಕೊಡಲು ಒಪ್ಪಲಿಲ್ಲ. ಹೀಗಾಗಿ ಖಾತೆ ಬದಲಾವಣೆ ಸಾಧ್ಯವೇ ಇಲ್ಲ ಅಂತ ಗೌಡರು ಸಂದೇಶ ರವಾನಿಸಿದ್ದು, ಬೇಕಿದ್ದರೆ ಒಪ್ಪಿಕೊಳ್ಳಿ, ಇಲ್ಲ ಬಿಡಿ ಅಂತ ಸ್ಪಷ್ಟವಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿಧಿ ಇಲ್ಲದೆ ಕೊನೆ ಕ್ಷಣದಲ್ಲಿ ಜಿ.ಟಿ. ದೇವೇಗೌಡ ಖಾತೆ ಒಪ್ಪಿಕೊಂಡಿದ್ದಾರೆ ಅಂತ ಇನ್ನೊಂದು ಮೂಲದಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಜಿಟಿಡಿ ಖಾತೆ ಒಪ್ಪಿಕೊಳ್ಳಲು ಕುಮಾರಸ್ವಾಮಿ ಕೂಡ ಪ್ರಮುಖ ಕಾರಣ ಎಂಬುದಾಗಿ ತಿಳಿದುಬಂದಿದ್ದು, ಮುಖ್ಯಮಂತ್ರಿಗಳು ಮುಂದೆ ಖಾತೆ ಬದಲಾಯಿಸುವುದಾಗಿ ಭರವಸೆ ನೀಡಿದ್ದಾರೆ. ಈಗ ಖಾತೆ ಬದಲಿಸಿದ್ದರೆ ಬೇರೆಯವರೂ ಒತ್ತಡ ಹೇರುತ್ತಾರೆ. ಉನ್ನತ ಶಿಕ್ಷಣ ಜೊತೆ ಮೈಸೂರು ಉಸ್ತುವಾರಿ ನೀಡುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಜಿಟಿಡಿ ಖಾತೆ ಒಪ್ಪಿಕೊಂಡಿರುವುದಾಗಿಯೂ ತಿಳಿದುಬಂದಿದೆ. ಇದನ್ನೂ ಓದಿ:  ಖಾತೆ ಹಂಚಿಕೆಯಾದ ಬೆನ್ನಲ್ಲೇ ಬದಲಾವಣೆ- ಜಿಟಿಡಿಗೆ ಅಬಕಾರಿ ಕೊಡಲು ಸಿಎಂ ಒಪ್ಪಿಗೆ

    ಒಟ್ಟಿನಲ್ಲಿ ಸಚಿವ ಸ್ಥಾನ ಸಿಕ್ಕಿದ ಬೆನ್ನಿಂದಲೇ ಜಿಟಿಡಿ ಅವರು ನನಗೆ ಈ ಖಾತೆ ಬೇಡ ಅಂತ ಹೇಳುತ್ತಲೇ ಬಂದಿದ್ದರು. ಅಲ್ಲದೇ ಸಚಿವರ ಬೆಂಬಲಿಗರು ಕೂಡ ತೀವ್ರ ವಿರೋಧ ವ್ತಕ್ತಪಡಿಸಿದ್ದರು. ಆದ್ರೆ ಇತ್ತೀಚೆಗೆ ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಸಚಿವರು ದಿಢೀರ್ ಅಂತ ಕೊಟ್ಟ ಖಾತೆಯನ್ನು ನಿಭಾಯಿಸುವುದಾಗಿ ಒಪ್ಪಿಕೊಂಡಿದ್ದರು.