Tag: ಜಿಲ್ಲಾ ಉಸ್ತುವಾರಿ

  • ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ರೆ ಮಾಡೋಣ: ವಿ ಸೋಮಣ್ಣ

    ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕೊಟ್ಟರೆ ಮಾಡೋಣ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

    ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ನಿಂತ ನೀರಲ್ಲ, ಹರಿಯುವ ನೀರು ಎಲ್ಲ ಮೂಲೆಗೂ ತಲುಪಬೇಕಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಬೆಂಗಳೂರು ಉಸ್ತುವಾರಿಗೆ ಅಶೋಕ್ ಹಾಗೂ ಸೋಮಣ್ಣ ನಡುವೆ ಫೈಟ್ ನಡೆದಿರುವಾಗಲೇ ಸೋಮಣ್ಣ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದನ್ನೂ ಓದಿ: ತಾಲಿಬಾನ್ ಭಾರತದತ್ತ ಬಂದರೆ ಏರ್ ಸ್ಟ್ರೈಕ್: ಯೋಗಿ ಆದಿತ್ಯನಾಥ್

    ನಾನು ಸೀನಿಯರ್ ಇದ್ದೇನೆ ಆರೇಳು ಬಾರಿ ಶಾಸಕನಾಗಿದ್ದೇನೆ, ಮಂತ್ರಿಯಾಗಿದ್ದೇನೆ, ಆರೇಳು ಸಿಎಂಗಳ ಜೊತೆ ಕೆಲಸ ಮಾಡಿದ್ದೇನೆ, ಯಾರನ್ನು ಹೋಗಿ ಕೇಳುವುದಿಲ್ಲ, ಮನವಿ ಮಾಡುವುದಿಲ್ಲ ಮುಖ್ಯ ಮಂತ್ರಿಗಳು ಚಾಮರಾಜನಗರ ಜವಾಬ್ದಾರಿ ಕೊಟ್ಟರೆ ಮಾಡೋಣ ವಿವಾದ ಮಾಡಿಕೊಳ್ಳಲು ಇಷ್ಟವಿಲ್ಲ ಎಂದಿದ್ದಾರೆ.

    basavaraj bommai

    ಚಾಮರಾಜನಗರ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಅರ್ಹ ವಸತಿ ರಹಿತ ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗಿದ್ದು, 3 ತಿಂಗಳ ಒಳಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಅಸ್ಪೃಶ್ಯತೆ, ಕೋಮುವಾದ ವಿರೋಧಿಸಿ 101 ಜನ ಬೌದ್ಧ ಧರ್ಮಕ್ಕೆ ಮತಾಂತರ

    ಇದೇ ವೇಳೆ ಉಪ ಚುನಾವಣೆ ನಡೆದಿರುವ ಸಿಂದಗಿ, ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಅತ್ಯಧಿಕ ಬಹುಮತಗಳಿಂದ ಬಿಜೆಪಿ ಗೆಲುವು ಸಾಧಿಸುತ್ತದೆ. ಸಿಂದಗಿಯಲ್ಲಿ ನಾನು, ಕಾರಜೋಳ, ಸಿಸಿ ಪಾಟೀಲ್ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ಎಲ್ಲರು ಸೇರಿ ವ್ಯವಸ್ಥಿತವಾಗಿ ಕೆಲಸ ಮಾಡಿದ್ದೇವೆ, ಪ್ರಧಾನಿ ಮೋದಿ ಅವರ ಜನಪರ ಕಾರ್ಯಕ್ರಮಗಳು, ರಾಜ್ಯ ಸರ್ಕಾರದ ಉತ್ತಮ ಕೆಲಸ, ಕೋವಿಡ್ ನಿರ್ವಹಣೆ ಹೀಗೆ ಎಲ್ಲವನ್ನು ಜನರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ನುಡಿದಿದ್ದಾರೆ.

  • ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟ

    ಬೆಳಗಾವಿ: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

    ಜಲಸಂಪನ್ಮೂಲ ಖಾತೆಯನ್ನು ಹಠಕ್ಕೆ ಬಿದ್ದು ಪಡೆದುಕೊಂಡಿದ್ದ ಸಚಿವ ರಮೇಶ ಜಾರಕಿಹೊಳಿಗೆ ನಿರೀಕ್ಷೆಯಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹೊಣೆ ನೀಡಲಾಗಿದೆ. ಜಾರಕಿಹೊಳಿಯವರಿಗೆ ಡಿಸಿಎಂ ಸ್ಥಾನ ನೀಡುವುದಾಗಿ ಹೇಳಿ ಕೊನೇಯ ಘಳಿಗೆಯಲ್ಲಿ ಕೈ ತಪ್ಪಿದ ಪರಿಣಾಮ ಹುಬ್ಬಳ್ಳಿ-ಧಾರವಾಡ ಜತೆಗೆ ಬೆಳಗಾವಿ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ವಹಿಸಿದ್ದರು. ಆದರೆ ಜಗದೀಶ್ ಶೆಟ್ಟರ್ ಹಳೆ ಜಿ.ಪಂ. ಕಚೇರಿಯಲ್ಲಿ ತಮ್ಮ ಕಚೇರಿ ತೆರೆದಿದ್ದರೂ ಒಂದೂ ಬಾರಿ ಭೇಟಿಯಾಗಲಿಲ್ಲ. ಈ ಮೂಲಕ ಬೆಳಗಾವಿ ಜನರ ಅಸಮಾಧಾನಕ್ಕೆ ಕಾರಣವಾಗಿದ್ದರು.

    ಕೊನೆಗೂ ಸಿಎಂ ಯಡಿಯೂರಪ್ಪ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಉಸ್ತುವಾರಿ ನೀಡಿದ್ದು, ಜಿಲ್ಲೆಯ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ರಾಜ್ಯಸಭಾ ಟಿಕೆಟ್‍ಗಾಗಿ ಪೈಪೋಟಿ ನಡೆತ್ತಿರುವ ಹಿನ್ನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ ಎನ್ನಲಾಗಿದೆ. ಹಾಸನದ ಉಸ್ತುವಾರಿಯನ್ನು ಸಚಿವ ಗೋಪಾಲಯ್ಯಗೆ ವಹಿಸಿದ್ದಾರೆ.

  • ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ರಮೇಶ್ ಜಾರಕಿಹೊಳಿ ಕೊಕ್

    ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ರಮೇಶ್ ಜಾರಕಿಹೊಳಿ ಕೊಕ್

    – ಬಿಎಸ್‍ವೈಗೆ ಬೆಂಗ್ಳೂರು ನಗರ ಜವಾಬ್ದಾರಿ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದ ರಾಜ್ಯದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರವು ಸೋಂಕು ಹರಡುವುದನ್ನು ತಡೆಯುವಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿಯೇ ಹೊಸದಾಗಿ ಜಿಲ್ಲೆಯ ಉಸ್ತುವಾರಿ ಸಚಿವರ ನೇಮಕ ಮಾಡಿದ್ದಾರೆ. ಆದರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಮೂವರು ಸಚಿವರಿಗೆ ಕೋಕ್ ನೀಡಲಾಗಿದೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನಗರ ಜಿಲ್ಲಾ ಉಸ್ತವಾರಿಯನ್ನು ವಹಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಶ್ರೀಮಂತ ಪಾಟೀಲ್ ಅವರಿಗೆ ಯಾವುದೇ ಜಿಲ್ಲಾ ಉಸ್ತುವಾರಿ ನೀಡಿಲ್ಲ. ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಜಿಲ್ಲೆಯ ಜೊತೆಗೆ ಹೆಚ್ಚುವರಿಯಾಗಿ ಧಾರವಾಡ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.

    ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಪ್ರಭು ಚವ್ಹಾಣ ಅವರಿಗೆ ಹೆಚ್ಚುವರಿ ಜಿಲ್ಲೆಗಳನ್ನು ನೀಡಿಲಾಗಿದೆ. ಆದರೆ ರಮೇಶ್ ಜಾರಕಿಹೊಳಿ ಅಥವಾ ಶ್ರೀಮಂತ ಪಾಟೀಲ್ ಅವರನ್ನು ಕೈಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

    ಯಾರಿಗೆ ಯಾವ ಜಿಲ್ಲೆ?
    ಬಿ.ಎಸ್.ಯಡಿಯೂರಪ್ಪ- ಬೆಂಗಳೂರು ನಗರ ಜಿಲ್ಲೆ
    ಸಿ.ಎಸ್.ಅಶ್ವಥ್ ನಾರಾಯಣ- ರಾಮನಗರ
    ಬಿ.ಸಿ. ಪಾಟೀಲ – ಕೊಪ್ಪಳ
    ಲಕ್ಷ್ಣಣ ಸವದಿ- ರಾಯಚೂರು
    ಗೋವಿಂದ ಕಾರಜೋಳ- ಬಾಗಲಕೋಟೆ
    ಕೆ.ಎಸ್.ಈಶ್ವರಪ್ಪ- ಶಿವಮೊಗ್ಗ
    ಆರ್.ಅಶೋಕ್- ಬೆಂಗಳೂರು ಗ್ರಾಮಾಂತರ
    ಜಗದೀಶ್ ಶೆಟ್ಟರ್- ಬೆಳಗಾವಿ, ಧಾರವಾಡ (ಹೆಚ್ಚುವರಿ)

    ಬಿ.ಶ್ರೀರಾಮುಲು- ಚಿತ್ರದುರ್ಗ
    ಕೆ.ಸುಧಾಕರ್- ಚಿಕ್ಕಬಳ್ಳಾಪುರ
    ಎಸ್.ಸುರೇಶ್ ಕುಮಾರ್- ಚಾಮರಾಜನಗರ
    ವಿ.ಸೋಮಣ್ಣ- ಕೊಡಗು
    ಸಿ.ಟಿ.ರವಿ- ಚಿಕ್ಕಮಗಳೂರು
    ಬಸವರಾಜ ಬೊಮ್ಮಾಯಿ- ಹಾವೇರಿ, ಉಡುಪಿ (ಹೆಚ್ಚುವರಿ)
    ಕೋಟಾ ಶ್ರೀನಿವಾಸ ಪೂಜಾರಿ- ದಕ್ಷಿಣ ಕನ್ನಡ
    ಜೆ.ಸಿ. ಮಾಧುಸ್ವಾಮಿ- ತುಮಕೂರು, ಹಾಸನ (ಹೆಚ್ಚುವರಿ)
    ಸಿ.ಸಿ. ಪಾಟೀಲ- ಗದಗ
    ಎಚ್.ನಾಗೇಶ್- ಕೋಲಾರ

    ಪ್ರಭು ಚವ್ಹಾಣ- ಬೀದರ್, ಯಾದಗಿರಿ (ಹೆಚ್ಚುವರಿ)
    ಶಶಿಕಲಾ ಜೊಲ್ಲೆ- ವಿಜಯಪುರ
    ಶಿವರಾಮ್ ಹೆಬ್ಬಾರ್- ಉತ್ತರ ಕನ್ನಡ
    ಎಸ್.ಟಿ.ಸೋಮಶೇಖರ್- ಮೈಸೂರು
    ಕೆ.ಸಿ.ನಾರಾಯಣಗೌಡ- ಮಂಡ್ಯ
    ಆನಂದಸಿಂಗ್- ಬಳ್ಳಾರಿ
    ಬೈರತಿ ಬಸವರಾಜ- ದಾವಣಗೆರೆ

  • ಗೋವಿಂದ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಕಲಬುರಗಿ ಜನತೆ

    ಗೋವಿಂದ ಕಾರಜೋಳಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ ಕಲಬುರಗಿ ಜನತೆ

    ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್‍ನಿಂದ ರಾಜ್ಯವೇ ಬೆಚ್ಚಿ ಬೀಳುತ್ತಿದೆ. ಅದರಲ್ಲೂ ಕಲಬುರಗಿ ಜಿಲ್ಲೆ ಡೇಂಜರ್ ಝೂನ್‍ನಲ್ಲಿದೆ. ಕಲಬುರಗಿ ಜನರ ಆತಂಕ ದೂರ ಮಾಡಬೇಕಿದ್ದ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಲಬುರಗಿಗೆ ಕಾಲೇ ಇಟ್ಟಿಲ್ಲ. ಗೋವಿಂದ ಕಾರಜೋಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಜನ ಗರಂ ಆಗಿದ್ದು, ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

    ಕೊರೊನಾ ಭೀತಿ ಪ್ರಪಂಚದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಮೊದಲ ಬಲಿ ರಾಜ್ಯದಲ್ಲೇ ಆಗಿದೆ. ಮೃತಪಟ್ಟ ಕೊರೊನಾ ಪೀಡಿತ ವ್ಯಕ್ತಿ ಕಲಬುರಗಿಯವರಾಗಿದ್ದು, ಇಡೀ ಜಿಲ್ಲೆ ಡೇಂಜರ್ ಝೂನ್‍ನಲ್ಲಿದೆ. ಕಲಬುರಗಿ ಜನ ಆತಂಕದಲ್ಲಿದ್ದಾರೆ. ಹೀಗಿರುವಾಗ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಕಾಲಿಟ್ಟಿಲ್ಲ, ಕಾಣೆಯಾಗಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣಗಳಲ್ಲಿ ಗರಂ ಆಗಿದ್ದಾರೆ.

    ಕಲಬುರಗಿ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳಗೆ ‘ಭಾವಪೂರ್ಣ ಶ್ರದ್ಧಾಂಜಲಿ’, ‘ಗೋವಿಂದ ಕಾರಜೋಳ ಗೋವಿಂದ ನಾಮ ಹಾಡುತ್ತಿದ್ದಾರೆ’, ‘ಗೋವಿಂದ ಕಾರಜೋಳ ಎಲ್ಲಿ ಅಡಗಿ ಕುಳಿತಿದ್ದಾರೆ ನೋಡ್ರಿ ಸ್ವಾಮಿ’, ‘ಇಂತಹವರು ನಾಯಕರು ನಮಗೆ ಬೇಕಾ’ ಎಂದು ಜನರು ಬರದು ಪೋಸ್ಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಹೀಗಿದ್ದರು ಸಹ ಗೋವಿಂದ ಕಾರಜೋಳ ಜಿಲ್ಲೆ ಕಾಲಿಟ್ಟಿಲ್ಲ.

    ಆರೋಗ್ಯ ಸಚಿವರಾದ ಶ್ರೀರಾಮುಲು ಕಲಬುರಗಿಗೆ ಭೇಟಿ ನೀಡಿ ಖುದ್ದು ಸಮಸ್ಯೆಯನ್ನು ವೀಕ್ಷಣೆ ಮಾಡಿದ್ದಾರೆ. ಆದರೆ ಗೋವಿಂದ ಕಾರಜೋಳ ಭೇಟಿ ನೀಡದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದಾರೆ. ಕಲಬುರಗಿಗೆ ಭೇಟಿ ಕೊಡುತ್ತಿರಾ ಎಂದು ಕಾರಜೋಳ ಅವರನ್ನು ಪ್ರಶ್ನಿಸಿದರೆ ಅವರು ಯಾವುದೇ ಉತ್ತರ ನೀಡುತ್ತಿಲ್ಲ.

  • ಸಿಎಂಗೆ ಮುಗಿದಿಲ್ಲ ಬೆಳಗಾವಿ ಟೆನ್ಷನ್ – ಕುಂದಾನಗರಿ ಜಿಲ್ಲಾ ಉಸ್ತುವಾರಿ ಯಾರು?

    ಸಿಎಂಗೆ ಮುಗಿದಿಲ್ಲ ಬೆಳಗಾವಿ ಟೆನ್ಷನ್ – ಕುಂದಾನಗರಿ ಜಿಲ್ಲಾ ಉಸ್ತುವಾರಿ ಯಾರು?

    -ಒಂದು ಜಿಲ್ಲೆ, ಮೂರು ಪವರ್ ಸೆಂಟರ್

    ಬೆಂಗಳೂರು: ಅಬ್ಬಾ ಖಾತೆ ಕಸರತ್ತು ಮುಗಿತು. ಇನ್ನು ಮೇಲಾದರೂ ಆಡಳಿತ ನಡೆಸುವತ್ತ ಗಮನ ಕೊಡಬಹುದು ಅಂತ ಸಿಎಂ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೆ ಶುರುವಾಗಿದೆ ಬೆಳಗಾವಿ ಟೆನ್ಷನ್. ಹೌದು ಸಿಎಂಗೆ ಸದ್ಯಕ್ಕೆ ಮುಗಿಯಲ್ಲ ಬೆಳಗಾವಿ ಟೆನ್ಷನ್ ಮುಗಿಯುವ ಹಾಗೆ ಕಾಣಿಸುತ್ತಿಲ್ಲ. ಖಾತೆ ಹಂಚಿಕೆ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪ್ರಶ್ನೆ ಸಿಎಂಗೆ ಕಾಡತೊಡಗಿದೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಬೆಳಗಾವಿಗೆ ಜಿಲ್ಲಾ ಉಸ್ತುವಾರಿ ನೇಮಕ ಮಾಡೋದು ಬೇರೆ ಜಿಲ್ಲೆಗಳಷ್ಟು ಸುಲಭವವಲ್ಲ.

    ಈ ಮಧ್ಯೆ ಜಿಲ್ಲಾ ಉಸ್ತುವಾರಿಯಾಗಲು ಬೆಳಗಾವಿ ದಿಗ್ಗಜರಲ್ಲಿ ಜಟಾಪಟಿ ಶುರುವಾಗಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನದ ಮೇಲೆ ಬಿದ್ದಿದೆ ಆ ಮೂವರು ದಿಗ್ಗಜರ ಕಣ್ಣು. ಬೆಳಗಾವಿ ಉಸ್ತುವಾರಿಯಾಗಲು ಮೂವರು ಘಟಾನುಘಟಿಗಳ ಮಧ್ಯೆ ಭಾರೀ ಫೈಟ್ ನಡೆಯುತ್ತಿದೆ. ಒಂದು ಜಿಲ್ಲೆ – ಮೂರು ಪವರ್ ಸೆಂಟರ್. ಇದು ಬೆಳಗಾವಿಯ ಸದ್ಯದ ಪರಿಸ್ಥಿತಿ.

    ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಒಬ್ಬ ಪ್ರಭಾವಿ ಪವರ್ ಸೆಂಟರ್. ಹೈಕಮಾಂಡ್ ಆಶೀರ್ವಾದದಿಂದ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಬೆಳಗಾವಿಯ ಮತ್ತೊಂದು ಪವರ್ ಸೆಂಟರ್. ಹೈಕಮಾಂಡ್ ನಿಂದ ಉಮೇಶ್ ಕತ್ತಿಯವರಿಗೆ ಸದ್ಯದಲ್ಲೇ ಮಂತ್ರಿ ಮಾಡುವ ಭರವಸೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಸಚಿವರಾಗುವ ಮುನ್ನವೇ ಉಮೇಶ್ ಕತ್ತಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗಲು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇವರಿಬ್ಬರಲ್ಲದೇ ಸಚಿವರಾಗುವ ಮೂಲಕ ಇದೀಗ ಬೆಳಗಾವಿ ಬಿಜೆಪಿ ರಾಜಕಾರಣಕ್ಕೆ ರಮೇಶ್ ಜಾರಕಿಹೊಳಿ ಎಂಟ್ರಿ ಕೊಟ್ಟಿದ್ದಾರೆ.

    ಡಿಸಿಎಂ ಹುದ್ದೆ ವಂಚಿತ ರಮೇಶ್ ಜಾರಕಿಹೊಳಿಯವರಿಗೆ ಕೇಳಿದ ಜಲಸಂಪನ್ಮೂಲ ಖಾತೆ ಸಿಕ್ಕಿರಬಹುದು. ಆದರೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗಲೂ ರಮೆಶ್ ಜಾರಕಿಹೊಳಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂರು ಪವರ್ ಸೆಂಟರ್ ಗಳ ಮಧ್ಯೆ ಓಲಾಡ್ತಿದೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಹುದ್ದೆ.

    ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಮತ್ತು ರಮೇಶ್ ಜಾರಕಿಹೊಳಿ ಪೈಕಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಆಗೋರು ಯಾರು? ಈ ಪ್ರಶ್ನೆಗೆ ಉತ್ತರ ಸಿಗ್ತಿಲ್ಲ. ಆದರೆ ಒಂದಂತೂ ಸ್ಪಷ್ಟ ಒಂದೊಮ್ಮೆ ಜಿಲ್ಲಾ ಉಸ್ತುವಾರಿಯಾಗುವ ವಿಚಾರದಲ್ಲಿ ಈ ಮೂವರ ಮಧ್ಯೆ ಸಂಘರ್ಷ ತೀವ್ರಗೊಂಡರೆ ಹಾಲಿ ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಜಗದೀಶ್ ಶೆಟ್ಟರ್ ಅವರೇ ಉಸ್ತುವಾರಿ ಆಗಿ ಮುಂದುವರಿಯುವ ಸಾಧ್ಯತೆಗಳು ಹೆಚ್ಚಿವೆ.

    ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗುತ್ತೆ ಅನ್ನೋ ಪ್ರಶ್ನೆ ಬಿಜೆಪಿ ಪಾಳಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಅವರ ಲೆಕ್ಕಾಚಾರ ಏನಿದೆ ಅನ್ನೋದೂ ಅಷ್ಟೇ ಕುತೂಹಲವಾಗಿದೆ. ಸಿಎಂ ಬಿಎಸ್‍ವೈ ಅವರ ನಡೆ ಮತ್ತು ಲೆಕ್ಕಾಚಾರ ಭಾರೀ ಸಸ್ಪೆನ್ಸ್ ಹುಟ್ಟಿಸಿದೆ.

  • ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಬೆಂಗಳೂರು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಜಂಜಾಟ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ಈಗ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಟೆನ್ಷನ್. ನೂತನ ಸಚಿವರ ಚಿತ್ತವೂ ಈಗ ಜಿಲ್ಲಾ ಉಸ್ತುವಾರಿ ಹುದ್ದೆಗಳ ಮೇಲೆ ಬಿದ್ದಿದೆ. ತಮ್ಮ ಜಿಲ್ಲೆಗೇ ಉಸ್ತುವಾರಿ ಸಚಿವರಾಗಲು ಮಿತ್ರಮಂಡಳಿ ಕಸರತ್ತು ಆರಂಭಿಸಿದ್ದಾರೆ.

    ಆದರೆ ಸಿಎಂ ಪ್ಲಾನೇ ಬೇರೆ ಇದೆ. ಜಿಲ್ಲಾ ಉಸ್ತುವಾರಿಗಳ ಮೂಲಕ ಮುಂದಿನ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗರು ಹೆಚ್ಚಿರುವ ಜೆಡಿಎಸ್ ಭದ್ರಕೋಟೆ ಕ್ಷೇತ್ರಗಳ ಮೇಲೆಯೇ ಸಿಎಂಗೆ ಕಣ್ಣು ಬಿದ್ದಿದೆ. ಒಕ್ಕಲಿಗರ ಮತದಾರರು ಇರುವ ಜೆಡಿಎಸ್ ಕೋಟೆಗಳಿಗೆ ಒಕ್ಕಲಿಗ ಸಚಿವರನ್ನೇ ಹಾಕಲು ಸಿಎಂ ಮುಂದಾಲೋಚನೆ ಮಾಡಿದ್ದಾರೆ. ಮುಂದಿನ ಚುನಾವಣೆವರೆಗೆ ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿಎಂ ತಂತ್ರ ಕುತೂಹಲ ಹುಟ್ಟಿಸಿದೆ.

    ಜೆಡಿಎಸ್ ಭದ್ರ ಕೋಟೆಗಳಾದ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹಾಗಾಗಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರನ್ನೇ ಉಸ್ತುವಾರಿ ಸಚಿವ ಮಾಡಲು ಸಿಎಂ ಮುಂದಾಗಿದ್ದಾರೆ. ಸದ್ಯಕ್ಕೆ ಸಿಎಂ ಅವರ ಈ ಜಾತಿ ಲೆಕ್ಕಾಚಾರದ ಪ್ಲಾನ್ ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗೆ ಅನ್ವಯಿಸಲಿದೆ. ಬೆಳಗಾವಿ ಉಸ್ತುವಾರಿ ಆಗಲು ಸಾಕಷ್ಟು ಪೈಪೋಟಿ ಇದ್ದು, ಅದನ್ನು ಬೇರೆ ರೀತಿಯಲ್ಲಿ ಡೀಲ್ ಮಾಡಲು ಸಿಎಂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರು

    ಹಾಸನ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್ ಅಥವಾ ಎಸ್.ಟಿ.ಸೋಮಶೇಖರ್
    ರಾಮನಗರ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್
    ಮಂಡ್ಯ- ನಾರಾಯಣ ಗೌಡ
    ರಾಯಚೂರು- ಎಸ್.ಟಿ.ಸೋಮಶೇಖರ್
    ಬಳ್ಳಾರಿ- ಆನಂದ್ ಸಿಂಗ್
    ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
    ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
    ಮಡಿಕೇರಿ- ಕೆ.ಗೋಪಾಲಯ್ಯ
    ದಾವಣಗೆರೆ- ಬಿ.ಸಿ.ಪಾಟೀಲ್
    ಯಾದಗಿರಿ- ಶ್ರೀಮಂತ ಪಾಟೀಲ್
    ಕೊಪ್ಪಳ- ಬೈರತಿ ಬಸವರಾಜು

  • ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಬೆಂಗಳೂರು: ಸಂಪುಟ ವಿಸ್ತರಣೆ ಆಯ್ತು. 10 ಶಾಸಕರು ಮಿನಿಸ್ಟರ್ ಆದ್ರೂ ಅವರಿಗೆ ಈಗ ಎರಡು ಚಿಂತೆ. ಒಂದು ಖಾತೆ ಚಿಂತೆಯಾದರೆ, ಇನ್ನೊಂದು ಜಿಲ್ಲಾ ಉಸ್ತುವಾರಿ ಚಿಂತೆ. ನೂತನ ಸಚಿವರಲ್ಲಿ ಮೂರ್ನಾಲ್ಕು ಮಂದಿ ಉಸ್ತುವಾರಿಗೆ ಟವೆಲ್ ಹಾಕಿದ್ದಾರೆ. ಸಾಹುಕಾರ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ನನಗೆ ಬೇಕು ಅಂತಾ ಬೇಡಿಕೆ ಇಟ್ಟಿರೋದರ ಜೊತೆಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಈ ನಡುವೆ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಕೊಡದೇ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಟ್ಟುಕೊಂಡಿದ್ದಾರೆ. ಅಶೋಕ್, ಅಶ್ವಥ್ ನಾರಾಯಣ್ ಅವರ ಗುದ್ದಾಟ ಜೋರಾಗಬಹುದೆಂದು ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿಯೇ ಇದೆ. ಅಷ್ಟೇ ಅಲ್ಲ ಬೆಂಗಳೂರು ಅಭಿವೃದ್ಧಿ ಖಾತೆಯೂ ಸಿಎಂ ಯಡಿಯೂರಪ್ಪ ಬಳಿ ಇದೆ. ಹಾಗಾಗಿ ನೂತನ ಸಚಿವರಿಗೆ ಬೆಂಗಳೂರು ಉಸ್ತುವಾರಿ ಸಿಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿವೆ.

    ಈ ನಡುವೆ ಹಾಸನ ಉಸ್ತುವಾರಿ ಎಸ್.ಟಿ.ಸೋಮಶೇಖರ್‍ಗೋ? ಡಿಸಿಎಂ ಅಶ್ವಥ್ ನಾರಾಯಣ್‍ಗೋ? ಅನ್ನೋ ಚರ್ಚೆ ಶುರುವಾಗಿದ್ದು, ಒಕ್ಕಲಿಗ ಸಚಿವರನ್ನೇ ಹಾಸನ ಜಿಲ್ಲೆ ಉಸ್ತುವಾರಿಯನ್ನಾಗಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ರಾಮನಗರ, ಹಾಸನ ಎರಡು ಪಕ್ಷ ಸಂಘಟನೆಯಿಂದ ಬಿಜೆಪಿಗೆ ಮಹತ್ವದ್ದು, ಎರಡು ಕಡೆ ಒಕ್ಕಲಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಲು ಪಕ್ಷ ತಂತ್ರ ಹೂಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಳ್ಳಾರಿಗೆ ಆನಂದ್ ಸಿಂಗ್‍ಗೆ ಉಸ್ತುವಾರಿ ಕೊಟ್ಟರೆ ರೆಡ್ಡಿ, ಶ್ರೀರಾಮುಲು ಟೀಂ ಕೆಂಡಾಮಂಡಲವಾಗುತ್ತಾರಾ ಅನ್ನೋ ಚರ್ಚೆಯೂ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುತೂಹಲ ಮೂಡಿಸಿದೆ.

    ಜಿಲ್ಲಾಉಸ್ತುವಾರಿಗಳ ಸಂಭವನೀಯ ಲಿಸ್ಟ್..!
    > ರಮೇಶ್ ಜಾರಕಿಹೊಳಿ – ಬೆಳಗಾವಿ
    > ಬಿ.ಸಿ.ಪಾಟೀಲ್ – ದಾವಣಗೆರೆ
    > ಎಸ್.ಟಿ.ಸೋಮಶೇಖರ್ – ಹಾಸನ
    > ಸುಧಾಕರ್ – ಚಿಕ್ಕಬಳ್ಳಾಪುರ
    > ನಾರಾಯಣಗೌಡ – ಮಂಡ್ಯ
    > ಆನಂದ್ ಸಿಂಗ್ – ಬಳ್ಳಾರಿ
    > ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
    > ಬೈರತಿ ಬಸವರಾಜು – ಬೆಂಗಳೂರು ಗ್ರಾಮಾಂತರ
    > ಗೋಪಾಲಯ್ಯ – ಕೊಡಗು
    > ಶ್ರೀಮಂತಗೌಡ ಪಾಟೀಲ್ – ಯಾದಗಿರಿ

  • ಸಚಿವ ಸ್ಥಾನ ಸಿಗುವುದು ಪಕ್ಕಾ, ಆದ್ರೆ ಲೆಕ್ಕನೇ ಬೇರೆ – ಯಾರಿಗೆ ಯಾವ ಖಾತೆ ಮೇಲೆ ಕಣ್ಣು

    ಸಚಿವ ಸ್ಥಾನ ಸಿಗುವುದು ಪಕ್ಕಾ, ಆದ್ರೆ ಲೆಕ್ಕನೇ ಬೇರೆ – ಯಾರಿಗೆ ಯಾವ ಖಾತೆ ಮೇಲೆ ಕಣ್ಣು

    – ಗೆದ್ದ ಅನರ್ಹರ ಬೇಡಿಕೆ ಒಪ್ಪಿಕೊಳ್ತಾರಾ ಬಿಎಸ್‍ವೈ?
    – ವೈರಿ ಡಿಕೆಶಿ ಬಳಿಯಿದ್ದ ಖಾತೆ ಮೇಲೆ ಜಾರಕಿಹೊಳಿಗೆ ಕಣ್ಣು

    ಬೆಂಗಳೂರು: ಉಪ ಚುನಾವಣೆಯನ್ನು ಗೆದ್ದು ಸರ್ಕಾರವನ್ನು ಸುಭದ್ರಗೊಳಿಸಿದ ಯಡಿಯೂರಪ್ಪ ಮುಂದೆ ಈಗ ಹೊಸ ಸವಾಲು ಸೃಷ್ಟಿಯಾಗಿದೆ.

    ಹೌದು. ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಎಲ್ಲೇ ಹೋದರೂ ಅನರ್ಹರನ್ನು ಅರ್ಹರನ್ನಾಗಿ ಮಾಡಿದರೆ ಅವರಿಗೆ ಮಂತ್ರಿಪಟ್ಟ ಸಿಗುತ್ತದೆ ಎಂದು ಭಾಷಣ ಮಾಡಿದ್ದು ಅದರಂತೆ ಜನ ಈಗ ಅರ್ಹರನ್ನಾಗಿ ಮಾಡಿದ್ದಾರೆ.

    ಅರ್ಹರಾದ 11 ಮಂದಿ ಈಗ ಸಿಎಂ ಬಳಿ ತಮ್ಮ ಬೇಡಿಕೆಯನ್ನು ಇಟ್ಟಿದ್ದು, ಈ ಬೇಡಿಕೆಯನ್ನು ಯಡಿಯೂರಪ್ಪ ಈಡೇರಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಮೂರು ನಾಲ್ಕು ದಿನದ ಒಳಗೆ ಸಿಎಂ ದೆಹಲಿಗೆ ತೆರಳಲಿದ್ದು ಹೈಕಮಾಂಡ್ ಜೊತೆ ಚರ್ಚಿಸಿ ಖಾತೆ ಹಂಚಿಕೆ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

    ಈಗಾಗಲೇ ಹಲವು ಪ್ರಮುಖ ಖಾತೆಗಳನ್ನು ಯಡಿಯೂರಪ್ಪ ತಮ್ಮ ಬಳಿಯೇ ಇಟ್ಟುಕೊಂಡಿದ್ದು ಕೆಲ ಖಾತೆಗಳನ್ನು ಮಾತ್ರ ಹಂಚಿಕೆ ಮಾಡಿದ್ದಾರೆ. ಮೊದಲೇ ತಮ್ಮ ಬಳಿ ಇಟ್ಟುಕೊಂಡ ಕಾರಣ ಖಾತೆ ಹಂಚಿಕೆ ಕಷ್ಟವಾಗಲಾರದು. ಆದರೆ ಜಿಲ್ಲಾ ಉಸ್ತುವಾರಿ ಖಾತೆಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಹೀಗಾಗಿ ಹೊಸ ಸಚಿವರಿಗೆ ಯಾವ ಜಿಲ್ಲೆಗಳನ್ನು ನೀಡಬಹುದು ಎನ್ನುವ ಪ್ರಶ್ನೆ ಎದ್ದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸುಧಾಕರ್, ಮಂಡ್ಯ ಜಿಲ್ಲೆ ನಾರಾಯಣ ಗೌಡರಿಗೆ ಸಿಗಬಹುದು. ಆದರೆ ಉಳಿದ ಶಾಸಕರಿಗೆ ಯಾವ ಜಿಲ್ಲೆ ಸಿಗಬಹುದು ಎನ್ನುವ ಕುತೂಹಲ ಹೆಚ್ಚಿದೆ. ಇದನ್ನೂ ಓದಿ: ಉಪ ಚುನಾವಣೆ ಸೋಲು – ಜಾತಿ ಸಮೀಕರಣ ಸೂತ್ರದ ಮೊರೆಹೋದ ಕಾಂಗ್ರೆಸ್

    ಗೆದ್ದ ಶಾಸಕರು ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆ ನೀಡಬೇಕೆಂದು ಪ್ರಸ್ತಾಪ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಬೆಳಗಾವಿ ರಾಜಕಾರಣದಲ್ಲಿ ಎಂಟ್ರಿಯಾಗಿದ್ದಕ್ಕೆ ಡಿಕೆ ಶಿವಕುಮಾರ್ ವಿರುದ್ಧ ಬಹಿರಂಗ ಹೇಳಿಕೆ ನೀಡಿ ತೊಡೆ ತಟ್ಟಿದ್ದ ರಮೇಶ್ ಜಾರಕಿಹೊಳಿ ದೋಸ್ತಿ ಸರ್ಕಾರದಲ್ಲಿ ಡಿಕೆಶಿ ಬಳಿಯಿದ್ದ ಜಲಸಂಪನ್ಮೂಲ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಕಮಲ ಅರಳಿಸಿದ್ದ ಡಾ ಸುಧಾಕರ್ ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ಜಿಲ್ಲೆಗೆ ಮೆಡಿಕಲ್ ಕಾಲೇಜು ತರುತ್ತೇನೆ ಎಂದು ಜನರಿಗೆ ಆಶ್ವಾಸನೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸಲು ವೈದ್ಯಕೀಯ ಶಿಕ್ಷಣ ಖಾತೆಯನ್ನು ಕೇಳಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ.

    ಯಾವ ಖಾತೆ ಮೇಲೆ ಯಾರಿಗೆ ಕಣ್ಣು?
    ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ
    ಎಸ್.ಟಿ.ಸೋಮಶೇಖರ್ – ಸಹಕಾರ
    ಮಹೇಶ್ ಕುಮಟಹಳ್ಳಿ – ಸಣ್ಣ ಕೈಗಾರಿಕೆ
    ಬೈರತಿ ಬಸವರಾಜು – ನಗರಾಭಿವೃದ್ಧಿ

    ಶಿವರಾಮ್ ಹೆಬ್ಬಾರ್ – ಪೌರಾಡಳಿತ
    ಶ್ರೀಮಂತಪಾಟೀಲ್ – ಸಕ್ಕರೆ
    ಬಿ.ಸಿ.ಪಾಟೀಲ್ – ಕೃಷಿ
    ಗೋಪಾಲಯ್ಯ- ಕಾರ್ಮಿಕ

    ಸುಧಾಕರ್ – ವೈದ್ಯಕೀಯ ಶಿಕ್ಷಣ
    ನಾರಾಯಣಗೌಡ – ತೋಟಗಾರಿಕೆ
    ಆನಂದ್ ಸಿಂಗ್ – ಅರಣ್ಯ ಇಲಾಖೆ

  • ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ, ಹೊಸ ರಾಜ್ಯಪಾಲರು ಬಂದ್ಮೇಲೆ ನೇಮಕಾತಿ: ಶ್ರೀರಾಮುಲು

    ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ, ಹೊಸ ರಾಜ್ಯಪಾಲರು ಬಂದ್ಮೇಲೆ ನೇಮಕಾತಿ: ಶ್ರೀರಾಮುಲು

    – ರಾಮ ಇದ್ದ ಕಡೆ ಲಕ್ಷ್ಮಣ ಬರುತ್ತಿದ್ದಾರೆ

    ಬಳ್ಳಾರಿ: ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಪಟ್ಟಿಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ಕೊಡಲಾಗಿದೆ. ಆದರೆ ಹೊಸ ರಾಜ್ಯಪಾಲರ ಆಗಮನವಾಗದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ನೇಮಕಾತಿಯಾಗಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ಬಳ್ಳಾರಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ನಾನು ಬಳ್ಳಾರಿ ಉಸ್ತುವಾರಿ ಕೇಳಿರುವೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುವೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ತಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

    ನಾನು ಬಳ್ಳಾರಿಯಿಂದ ಯಾವತ್ತೂ ದೂರವಾಗಿಲ್ಲ. ನಾನು ಯಾದಗಿರಿಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಧ್ವಜಾರೋಹಣ ಮಾಡುತ್ತಿರುವೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡುತ್ತಿದ್ದಾರೆ. ರಾಮ ಇದ್ದ ಕಡೆ ಲಕ್ಷ್ಮಣ ಬರುತ್ತಿದ್ದಾರೆ. ಇದಕ್ಕೆ ಬೇರೆಯ ಅರ್ಥ ಕಲ್ಪಿಸಬೇಕಾಗಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಅಲ್ಲದೇ ಪ್ರವಾಹ ಪರಿಸ್ಥಿತಿ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿಲ್ಲ. ಅಭಿವೃದ್ಧಿ ವಿಷಯದಲ್ಲಿ ಕುಂಠಿತ ಆಗಿಲ್ಲವೆಂದು ಶ್ರೀರಾಮುಲು ಹೇಳಿದರು.

  • ಖಾತೆ ಹಂಚಿಕೆ ಆಯ್ತು, ಜಿಲ್ಲಾ ಉಸ್ತುವಾರಿಯಾಗಲು ಭಾರೀ ಪೈಪೋಟಿ!

    ಖಾತೆ ಹಂಚಿಕೆ ಆಯ್ತು, ಜಿಲ್ಲಾ ಉಸ್ತುವಾರಿಯಾಗಲು ಭಾರೀ ಪೈಪೋಟಿ!

    ಬೆಂಗಳೂರು: ಸಚಿವರಿಗೆ ಖಾತೆ ಹಂಚಿಕೆಯನ್ನು ಮಾಡಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿಯಾಗಲು ಬಿಜೆಪಿ ಪಾಳಯದಲ್ಲಿ ಭಾರೀ ಪೈಪೋಟಿ ನಡೆದಿದೆ. ನಿರೀಕ್ಷಿಸಿದ ಖಾತೆಗಳನ್ನು ನೀಡಲಿಲ್ಲ, ಕೊನೆ ಪಕ್ಷ ನಮ್ಮ ಜಿಲ್ಲೆಗಳ ಉಸ್ತುವಾರಿಯನ್ನಾದರೂ ನೀಡಿ ಎಂದು ಸಚಿವರು ಸಿಎಂ ಮುಂದೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸಚಿವರು ತಮ್ಮ ಜಿಲ್ಲೆಯ ಉಸ್ತುವಾರಿ ಕೇಳಿದ್ರೆ, ಬಿಜೆಪಿ ಮಾತ್ರ ತನ್ನದೇ ಆದ ಲೆಕ್ಕಾಚಾರಗಳೊಂದಿಗೆ ಸಂಭವನೀಯ ಪಟ್ಟಿಯೊಂದನ್ನು ಸಿದ್ಧಪಡಿಸಿಕೊಂಡಿದೆ. ಯಾರು ಯಾವ ಜಿಲ್ಲೆಯ ಉಸ್ತುವಾರಿ ಕೇಳಿದ್ದಾರೆ ಮತ್ತು ಯಾವ ಜಿಲ್ಲೆಗೆ ಯಾರಿಗೆ ನೀಡಿದ್ರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದರ ಕುರಿತಾಗಿ ಸಿಎಂ ಆಪ್ತರೊಂದಿಗೆ ಚರ್ಚಿಸುತ್ತಿದ್ದಾರೆ.

    ಜಿಲ್ಲಾವಾರು ಸಮುದಾಯಗಳ ಬಲಾಬಲವೇ ಉಸ್ತುವಾರಿಗಳ ನೇಮಕಕ್ಕೆ ಮಾನದಂಡ ಎಂದು ನಿಗದಿಪಡಿಸಲಾಗಿದೆ. ಯಾವ ಜಿಲ್ಲೆಗಳಲ್ಲಿ ಯಾವ ಸಮುದಾಯ ಹೆಚ್ಚಿದೆಯೋ ಅಲ್ಲಿಗೆ ಅದೇ ಸಮುದಾಯದ ಸಚಿವ ಉಸ್ತುವಾರಿಯಾಗಿ ನೇಮಕವಾಗಬೇಕು. ಜೆಡಿಎಸ್ ಪ್ರಾಬಲ್ಯ ಇರೋ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರ ನೇಮಕ, ಲಿಂಗಾಯತ ಸಮುದಾಯ ಪ್ರಾಬಲ್ಯದ ಕಡೆ ಲಿಂಗಾಯತ ಸಚಿವರೇ ಉಸ್ತುವಾರಿ ನೇಮಕ ಪಕ್ಕಾ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

    ಸಂಭವನೀಯ ಜಿಲ್ಲಾ ಉಸ್ತುವಾರಿಗಳ ಪಟ್ಟಿ:

    1. ಆರ್ ಅಶೋಕ್ – ಮಂಡ್ಯ, ರಾಮನಗರ
    2. ವಿ.ಸೋಮಣ್ಣ – ಮೈಸೂರು, ಚಾಮರಾಜನಗರ
    3. ಡಾ.ಅಶ್ವಥ್ ನಾರಾಯಣ – ಬೆಂಗಳೂರು, ಚಿಕ್ಕಬಳ್ಳಾಪುರ
    4. ಸುರೇಶ್ ಕುಮಾರ್ – ಕೊಡಗು
    5. ಸಿ.ಟಿ.ರವಿ – ಚಿಕ್ಕಮಗಳೂರು, ಹಾಸನ
    6. ಲಕ್ಷ್ಮಣ ಸವದಿ – ಬೆಳಗಾವಿ
    7. ಗೋವಿಂದ ಕಾರಜೊಳ – ಬಾಗಲಕೋಟೆ, ವಿಜಯಪುರ

    8. ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಧಾರವಾಡ, ಉತ್ತರಕನ್ನಡ
    9. ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣ ಕನ್ನಡ, ಉಡುಪಿ
    10. ಶ್ರೀರಾಮುಲು – ಬಳ್ಳಾರಿ, ಚಿತ್ರದುರ್ಗ
    11. ಬಸವರಾಜ ಬೊಮ್ಮಾಯಿ – ಹಾವೇರಿ, ದಾವಣಗೆರೆ
    12. ಕೆ. ಎಸ್. ಈಶ್ವರಪ್ಪ – ಕೊಪ್ಪಳ, ಶಿವಮೊಗ್ಗ
    13. ಪ್ರಭು ಚೌಹಾಣ್ – ಬೀದರ್
    14. ಎಚ್. ನಾಗೇಶ್ – ಕೋಲಾರ
    15. ಜೆ .ಸಿ ಮಾಧುಸ್ವಾಮಿ – ತುಮಕೂರು, ಕಲಬುರ್ಗಿ
    16. ಸಿ. ಸಿ. ಪಾಟೀಲ್ – ಗದಗ, ರಾಯಚೂರು
    17. ಶಶಿಕಲಾ ಜೊಲ್ಲೆ – ಯಾದಗಿರಿ