Tag: ಜಿಮ್

  • ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಜಿಮ್‍ನಲ್ಲಿ ಕಠಿಣ ವರ್ಕೌಟ್- 22 ಕೆಜಿ ತೂಕ ಇಳಿಸಿದ 73ರ ಅಜ್ಜಿ

    ಒಟ್ಟಾವಾ: ಜಿಮ್‍ನಲ್ಲಿ ಕಠಿಣ ವರ್ಕೌಟ್ ಮಾಡುವ ಮೂಲಕ 73 ವರ್ಷದ ಅಜ್ಜಿಯೊಬ್ಬರು 22 ಕೆಜಿ ತೂಕ ಇಳಿಸಿದ್ದಾರೆ.

    ಕೆನಡಾ ರಾಜಧಾನಿ ಒಟ್ಟಾವಾದ 73 ವರ್ಷದ ಜಾನ್ ಮೆಕೆಡೊನಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಇನ್‍ಸ್ಟಾಗ್ರಾಮ್ ಖಾತೆ ಟ್ರೈನ್ ವಿಥ್‍ಜಾನ್ ಅನ್ನು 5 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.

    https://www.instagram.com/p/B6RWQdwjTJS/?utm_source=ig_embed

    ಜಾನ್ ಮೆಕೆಡೊನಾಲ್ಡ್ ಅವರು ಮೂರು ವರ್ಷಗಳ ಹಿಂದೆ ವಯೋಸಹಜ ಕಾಯಿಲೆ ಸೇರಿದಂತೆ ಅಧಿಕ ತೂಕ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಹೀಗಾಗಿ 5.3 ಅಡಿ ಎತ್ತರ, 90 ಕೆಜಿ ತೂಕದ ಜಾನ್ ಜಿಮ್‍ಗೆ ಹೋಗಲು ಪ್ರಾರಂಭಿಸಿದರು. ಕಠಿಣ ವರ್ಕೌಟ್ ಮಾಡುವ ಮೂಲಕ 22 ಕೆಜಿಗಿಂತ ಹೆಚ್ಚು ತೂಕವನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಜಾನ್ ಅವರ ದೇಹದ ಸ್ನಾಯುಗಳು ಬಲವಾಗಿವೆ.

    ಜಾನ್ ಅವರು ದೈಹಿಕವಾಗಿ ಭಾರೀ ಬದಲಾಗಿದ್ದಾರೆ. ಅವರು ಆಹಾರ ಪದ್ಧತಿ ಬದಲಾವಣೆ ತಂದು, ಪ್ರೋಟೀನ್ ಪ್ರಮಾಣವನ್ನು ಹೆಚ್ಚಿಸಿದರು. ಈ ಮೂಲಕ ಅವರು ವೇಟ್ ಲಿಫ್ಟಿಂಗ್ ಹಾಗೂ ಬಾಡಿಬಿಲ್ಡರ್ ಆಗಿದ್ದಾರೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.

    https://www.instagram.com/p/B9ecp-0Dh7g/

  • ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್ ಮಾಡ್ತಿದ್ದ ಬಾಂಬರ್ ಆದಿತ್ಯ

    ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್ ಮಾಡ್ತಿದ್ದ ಬಾಂಬರ್ ಆದಿತ್ಯ

    – ಜಿಮ್ ಪರಿಕರಗಳು, ಬಾರ್‌ನ ಡಿವಿಆರ್ ಪೊಲೀಸ್ ವಶಕ್ಕೆ

    ಉಡುಪಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್, ಸೈಕೋ ಕ್ರಿಮಿನಲ್ ಆದಿತ್ಯ ಓರ್ವ ಜಿಮ್ಮರ್ ಆಗಿದ್ದನು. ಏರ್‌ಪೋರ್ಟ್‌ನಲ್ಲಿ ಬಾಂಬ್ ಇಡುವ ಹಿಂದಿನ ಎರಡು ದಿನ ಉಡುಪಿಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದ ಈತ ಅಲ್ಲಿ ದುಬಾರಿ ಜಿಮ್ ಪರಿಕರಗಳನ್ನುಗಳನ್ನು ಬಿಟ್ಟು ಹೋಗಿದ್ದನು. ಅದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪುಶ್ ಅಪ್ ಮಷೀನ್ ಮತ್ತು ಡಂಬಲ್ಸ್ ಅನ್ನು ಕಾರ್ಕಳ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ಅಶೋಕ್ ಶೆಟ್ಟಿ ಕಾರ್ಕಳ ಪೊಲೀಸರಿಗೆ ಡಂಬಲ್ಸ್ ಹಸ್ತಾಂತರ ಮಾಡಿದ್ದಾರೆ. ಈ ನಡುವೆ ಆದಿತ್ಯ ರಾವ್‍ನ ಎರಡು ದಿನದ ಚಲನವಲನಗಳಿರುವ ದೃಶ್ಯಾವಳಿಗಳು ಹೋಟೆಲ್‍ನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದಿತ್ಯ ರಾವ್ ಪ್ರಕರಣದ ತನಿಖೆಯಲ್ಲಿ ಈ ವಿಡಿಯೋ ಮಹತ್ವವಾಗಿದ್ದು, ಸಿಸಿಟಿವಿಯ ಡಿವಿಆರ್‌ನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ವಶಪಡಿಸಿಕೊಂಡಿದ್ದಾರೆ.

    ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್:
    ಆದಿತ್ಯ ಬಂಧನಕ್ಕೊಳಗಾದರೂ ಆತನ ಅವತಾರಗಳು, ಕಥೆಗಳು ಒಂದೊಂದೇ ಹೊರ ಬರುತ್ತಿವೆ. ಅವನೊಬ್ಬ ಕಿಕ್ ಬಾಕ್ಸರ್, ಕರಾಟೆ ಪಟು ಆಗಿದ್ದು, ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದನು. ಬಾಂಬ್ ಇಡುವ ಕ್ರಿಮಿನಲ್ ಆದರೂ ತನ್ನ ಆರೋಗ್ಯ ಚೆನ್ನಾಗಿಯೇ ಕಾಪಾಡಿಕೊಂಡಿದ್ದನು.

    ಬ್ಯಾಗಿನೊಳಗೆ ಸದಾಕಾಲ ತನ್ನ ಜೊತೆಗೆ ಡಂಬಲ್ಸ್ ಕೊಂಡೊಯ್ಯುತ್ತಿದ್ದ ಆದಿತ್ಯ, ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಹಿಂದಿನ ದಿನವೂ ದೈಹಿಕ ವ್ಯಾಯಾಮ ಮಾಡಿರುವುದು ಬೆಳಕಿಗೆ ಬಂದಿದೆ. ಬಾಂಬ್ ಹೊತ್ತ ಬ್ಯಾಗ್‍ನ ಜೊತೆಗೆ ಆದಿತ್ಯ ಡಂಬಲ್ಸ್ ಕೂಡಾ ಹೊತ್ತು ತಂದಿದ್ದನು. ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲಿನಲ್ಲಿ ಎರಡು ದಿನದ ಹಿಂದೆ ಅಂದರೆ ಜನವರಿ 18 ಈತ ಕೆಲಸಕ್ಕೆ ಸೇರಿದ್ದನು. ಕೆಲಸ ಮುಗಿದ ಬಳಿಕ ರಾತ್ರಿ ಅಲ್ಲೇ ತಂಗುತ್ತಿದ್ದ ಆದಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಡಂಬಲ್ಸ್ ನಲ್ಲಿ ದೈಹಿಕ ಕಸರತ್ತು ನಡೆಸ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

    ಬಾಂಬ್ ಇಡಲು ಸೋಮವಾರ ಹೋಟೆಲ್ ಬಿಟ್ಟು ತೆರಳುವಾಗ ನೀಲಿ ಬಣ್ಣದ ಡಂಬಲ್ಸ್ ಗಳನ್ನು ಹೋಟೆಲ್‍ನಲ್ಲೇ ಬಿಟ್ಟು ಹೋಗಿದ್ದು, ಆ ಡಂಬಲ್ಸ್ ಮತ್ತು ಪುಶಪ್ ಸಾಧನ ಹೋಟೆಲ್ ಸಿಬ್ಬಂದಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಅದನ್ನು ಜೋಪಾನ ಮಾಡಿ ಇಡಲಾಗಿತ್ತು. ಈಗ ಆ ಎರಡೂ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಹಳೆ ಕಲ್ಲು ಹೊಸ ಬಿಲ್ಲು – ಬಿಬಿಎಂಪಿ ಹಗರಣ ಬಯಲು

    ಹಳೆ ಕಲ್ಲು ಹೊಸ ಬಿಲ್ಲು – ಬಿಬಿಎಂಪಿ ಹಗರಣ ಬಯಲು

    ಬೆಂಗಳೂರು: ಹಳೆ ಕಲ್ಲು ಹೊಸ ಬಿಲ್ಲು ಬಿಬಿಎಂಪಿಗೆ ಹೊಸದೇನಲ್ಲ. ಇದೀಗ ಬಿಬಿಎಂಪಿ ಹಗರಣ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅದು ಮಾಜಿ ಉಪಮೇಯರ್ ವಾರ್ಡ್ ಸಂಬಂಧಿತವಾಗಿದ್ದು ಅನ್ನೋದು ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

    ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನ ನಾಗಪುರ ವಾರ್ಡ್ ನಲ್ಲಿ ಇರುವ ಉಷಾ ಪಾರ್ಕ್ ನಲ್ಲಿ ಜಿಮ್ ಉಪಕರಣಗಳ ಬದಲಾವಣೆಗೆ ಈಗ ಟೆಂಡರ್ ಕರೆಯಲಾಗಿದೆ. ವರ್ಷದ ಹಿಂದೆ ಹಾಕಿದ್ದ ಜಿಮ್ ಉಪಕರಣಗಳ ಬದಲಾವಣೆಗೆ ಟೆಂಡರ್ ಕರೆಯಲಾಗಿದೆ. ಆದರೆ ವರ್ಷದ ಹಿಂದೆ ಹಾಕಿರೋ ಉಪಕರಣಕ್ಕೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‍ಐಡಿಎಲ್) ದಿಂದ ಹಣ ಬಿಡುಗಡೆಯಾಗಿದೆ.

    ಪಾರ್ಕ್ ನಲ್ಲಿ ಜಿಮ್ ಉಪಕರಣ ಹಾಕಲು ಸ್ಥಳಾವಕಾಶವಿಲ್ಲ. ಈಗಾಗಲೇ ಹತ್ತಕ್ಕೂ ಹೆಚ್ಚು ಜಿಮ್ ಉಪಕರಣಗಳು ಉತ್ತಮ ಸ್ಥಿತಿಯಲ್ಲಿದೆ. ಹೀಗಿರುವಾಗ ಜಿಮ್ ಸಲಕರಣೆ ಬದಲಾವಣೆಗೆ 25 ಲಕ್ಷ ಟೆಂಡರ್ ಕರೆಯಲಾಗಿದ್ದು, ಜೊತೆಗೆ ಉಷಾ ಪಾರ್ಕ್ ಇತರ ಅಭಿವೃದ್ಧಿಗಾಗಿ 20 ಲಕ್ಷ ಟೆಂಡರ್ ಮೊತ್ತ ಸಹ ಸೇರ್ಪಡೆ ಮಾಡಲಾಗಿದೆ. ಈ ಉಷಾ ಪಾರ್ಕ್ ಗಾಗಿ 45 ಲಕ್ಷ ಸುರಿಯಲು ಸಿದ್ಧವಾಗಿದೆ ಎನ್ನಲಾಗಿದೆ.

    ಹೊಸ ಟೆಂಡರ್ ಅಗತ್ಯ ಈ ಪಾರ್ಕ್ ನಲ್ಲಿ ಕಾಣಿಸುತ್ತಿದೆಯಾ ಎಂದು ಈ ಹಗರಣ ಸಂಬಂಧ ದೂರು ನೀಡಲು ಮತ್ತೊಬ್ಬ ಮಾಜಿ ಉಪಮೇಯರ್ ಸಿದ್ಧವಾಗಿದ್ದಾರೆ. ಜೊತೆಗೆ 1 ಸಾವಿರ ಕೋಟಿ ಮಹಾಲಕ್ಷ್ಮೀ ಲೇಔಟ್ ಗೆ ಅನುದಾನ ಬಂದಿದೆ. ಈ ಎಲ್ಲ ಅನುದಾನದ ಬಗ್ಗೆ ತನಿಖೆಗೆ ಆಗ್ರಹಿಸಲು ಮಾಜಿ ಉಪಮೇಯರ್ ಹರೀಶ್ ಸಜ್ಜಾಗಿದ್ದಾರೆ.

  • 4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ ಸಾನಿಯಾ- ಕದನಕ್ಕೆ ಭಾರೀ ಸಿದ್ಧತೆ

    4 ತಿಂಗಳಲ್ಲಿ 26 ಕೆಜಿ ತೂಕ ಇಳಿಸಿದ ಸಾನಿಯಾ- ಕದನಕ್ಕೆ ಭಾರೀ ಸಿದ್ಧತೆ

    ನವದೆಹಲಿ: ಭಾರತದ ಮಹಿಳಾ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅಂತರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ಜಿಮ್‍ನಲ್ಲಿ ದೇಹ ದಂಡಿಸುತ್ತಿದ್ದಾರೆ. ಟೆನ್ನಿಸ್ ಕದನಕ್ಕೆ ನುಗ್ಗಲು ಸಿದ್ಧತೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    32 ವರ್ಷದ ಅನುಭವಿ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ತಮ್ಮ ಚೊಚ್ಚಲ ತಾಯ್ತನದ ಬಳಿಕ ಟೆನ್ನಿಸ್ ವೃತ್ತಿ ಬದುಕಿನಿಂದ ದೂರವೇ ಉಳಿದಿದ್ದರು. ಪ್ಯಾರಿಸ್ ಪ್ರವಾಸ ಮುಗಿಸಿ ಕೆಲ ದಿನಗಳ ಹಿಂದಷ್ಟೇ ತಾಯ್ನಾಡಿಗೆ ಹಿಂದಿರುಗಿರುವ ಸಾನಿಯಾ, ಸಂದರ್ಶನವೊಂದರಲ್ಲಿ ಮುಂದಿನ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ ಎಂದು ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಅರ್ಹತೆ ಪಡೆಯಲು ಟೆನ್ನಿಸ್ ತಾರೆ ಭರ್ಜರಿ ತಯಾರಿಯಲ್ಲಿ ನಡೆಸಿದ್ದಾರೆ.

    https://www.instagram.com/p/B208sxWFkbW/

    ಸಾನಿಯಾ ಮಿರ್ಜಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ವರ್ಕೌಟ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕೆಂಪು ಟಿಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿ ವರ್ಕೌಟ್ ಮಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ಸಾನಿಯಾ ತಮ್ಮ ದೇಹತ ತೂಕ ಇಳಿಸಿಕೊಂಡ ಬಗ್ಗೆ ಹೇಳಿಕೊಂಡಿದ್ದಾರೆ.

    ಮಗುವಿಗೆ ಜನ್ಮ ನೀಡುವ ಮುನ್ನ ನನ್ನ ದೇಹದ ತೂಕ ಏರಿಕೆ ಬಗ್ಗೆ ಪ್ರಶ್ನಿಸಿದ್ದರು. ಈಗ ತೂಕ ಇಳಿಕೆ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ. ನಾನು ನನ್ನ ಮಗುವಿಗೆ ಜನ್ಮ ನೀಡಿದ ಬಳಿಕ 23 ಕೆಜಿ ತೂಕ ಇಳಿಯಬೇಕೆಂದು ಗುರಿ ಹೊಂದಿದ್ದೆ. ಅದರಂತೆ ನಾನು 26 ಕೆಜಿ ಇಳಿಸಿದೆ. ಇದೆಲ್ಲವೂ ಶ್ರಮ, ಕ್ರಮಶಿಕ್ಷಣ, ಏಕಾಗ್ರತೆ, ಬದ್ಧತೆಯಿಂದಲೇ ಸಾಧ್ಯವಾಯಿತು. ಮಗುವಿಗೆ ಜನ್ಮ ನೀಡಿದ ಬಳಿಕ ಇಷ್ಟೊಂದು ತೂಕ ಇಳಿಸುವುದು ಸಾಮಾನ್ಯವಲ್ಲ. ದಪ್ಪಗಿರುವ ಮಹಿಳೆಯರು ಕಠಿಣ ಶ್ರಮ, ನಿರ್ದಿಷ್ಟ ಮನಸ್ಸಿನಿಂದ ವ್ಯಾಯಾಮ ಕೈಗೊಂಡರೆ ಅವರು ಸಹ ತೂಕ ಇಳಿಸುತ್ತಾರೆ. ಪ್ರತಿದಿನ ಒಂದರಿಂದ ಎರಡು ಗಂಟೆಯವರೆಗೆ ಜಿಮ್‍ನಲ್ಲಿ ಶ್ರಮವಹಿಸಿ ಬಳಿಕ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತೆ ಎಂದು ಸಾನಿಯಾ, ಮಹಿಳೆಯರಿಗೆ ಕಿವಿ ಮಾತು ಹೇಳಿದ್ದಾರೆ.

    https://www.instagram.com/p/B2yXA-Alrmo/

    ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟರ್ ಶೋಯಬ್ ಮಲಿಕ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಬಳಿಕ 2017ರಲ್ಲಿ ಸಾನಿಯಾ ಭಾರತದ ಪರ ಚೀನಾ ಓಪನ್‍ನಲ್ಲಿ ಕೊನೆಯಬಾರಿ ಆಡಿದ್ದರು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ಇಜಾನ್ ಮಿರ್ಜಾ ಮಲಿಕ್ ಎಂದು ಹೆಸರಿಟ್ಟಿದ್ದಾರೆ.

  • ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಪುರುಷತ್ವಕ್ಕೆ ಕುತ್ತಾಗುವ ಸ್ಟಿರಾಯ್ಡ್ ಮಾರಾಟ – ಬೆಂಗ್ಳೂರಿನ ಜಿಮ್ ಟ್ರೈನರ್ ಬಂಧನ

    ಬೆಂಗಳೂರು: ಹಲವರು ಫಿಟ್‍ನೆಸ್ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಹಾಗೂ ದಪ್ಪ ಆಗಬೇಕು ಎಂಬ ಉದ್ದೇಶದಿಂದ ಜಿಮ್‍ಗೆ ಹೋಗುತ್ತಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಿಮ್‍ಗಳು ಹಾನಿಕಾರಕ ಔಷಧಿಗಳನ್ನು ನೀಡಿ ಜಿಮ್‍ಗೆ ತೆರಳುವವರ ಜೀವನವನ್ನೇ ಹಾಳು ಮಾಡುತ್ತಿವೆ. ಇಂತಹ ಹಾನಿಕಾರಕ ಔಷಧಿ ನೀಡುತ್ತಿದ್ದ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿ ತರಬೇತುದಾರನನ್ನು ಬಂಧಿಸಿದ್ದಾರೆ.

    ನಗರದ ಚಾಮರಾಜಪೇಟೆಯ ನಾಲ್ಕನೇ ಮುಖ್ಯ ರಸ್ತೆಯಲ್ಲಿರುವ ಅಲ್ಟಿಮೇಟ್ ಫಿಟ್ನೆಸ್ ಹೆಸರಿನ ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಜಿಮ್ ತರಬೇತುದಾರ ಶಿವಕುಮಾರ್ ನನ್ನು ಬಂಧಿಸಿದ್ದಾರೆ. ಈತ ಜಿಮ್‍ಗೆ ಬರುವವರಿಗೆಲ್ಲ ಹಾನಿಕಾರಕ ಔಷಧಿ ಸ್ಟಿರಾಯ್ಡ್ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆಗಸ್ಟ್ 21ರಂದು ಜಿಮ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಜಿಮ್‍ನಲ್ಲಿ ಹಲವು ಸ್ಟಿರಾಯ್ಡ್ ಔಷಧಿಯ ಬಾಕ್ಸ್ ಗಳು ಪತ್ತೆಯಾಗಿದ್ದವು.

    ದಾಳಿ ವೇಳೆ ದೇಹವನ್ನು ಹುರಿಗೊಳಿಸುವ ಮಾತ್ರೆಗಳು ಮತ್ತು ಇಂಜೆಕ್ಷನ್‍ಗಳು ಜೊತೆಗೆ ಕೆಲವು ಪ್ರೊಟೀನ್ ಬಾಟಲ್‍ಗಳು ಸಹ ಪತ್ತೆಯಾಗಿವೆ. ಆನ್‍ಲೈನ್ ಮೂಲಕ ಸ್ಟಿರಾಯ್ಡ್ ತರಿಸಿಕೊಳ್ತಿದ್ದ ಆರೋಪಿ ಗ್ರಾಹಕರ ಇಚ್ಛೆಗೆ ಅನುಗುಣವಾಗಿ ಸ್ಟಿರಾಯ್ಡ್ ನೀಡುತ್ತಿದ್ದ. ಈ ಭಯಾನಕ ಔಷಧಿಯಿಂದ ಪುರುಷತ್ವಕ್ಕೆ ಕುತ್ತು ಉಂಟಾಗಲಿದೆ. ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಜಪ್ತಿಯಾದ ಔಷಧಗಳ ತಪಾಸಣೆ ನಡೆಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  • ನಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ನಾವು ಮಾಡ್ತೇವೆ: ಪುನೀತ್ ರಾಜ್‍ಕುಮಾರ್

    ನಮ್ಮ ಕೈಯಲ್ಲಿ ಏನಾಗುತ್ತೆ ಅದನ್ನು ನಾವು ಮಾಡ್ತೇವೆ: ಪುನೀತ್ ರಾಜ್‍ಕುಮಾರ್

    – ಕೊಡಗಿನಲ್ಲಿ ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ

    ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿಯರಾದ ರಶ್ಮಿಕಾ ಮಂದಣ್ಣ ಹಾಗೂ ಹರ್ಷಿಕಾ ಪೂಣಚ್ಚ ಬೆನ್ನಲ್ಲೇ ಇದೀಗ ಕೊಡಗಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಬೆಂಬಲ ಸೂಚಿಸಿದ್ದಾರೆ.

    ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿನ ಪರಮಹಂಸ ಉದ್ಯಾನವನದಲ್ಲಿ ನಿರ್ಮಾಣವಾದ ಔಟ್ ಡೋರ್ ಜಿಮ್ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ವಿಚಾರದಲ್ಲಿ ಕನ್ನಡ ಚಿತ್ರರಂಗ ಸದಾ ಜೊತೆಯಾಗಿರುತ್ತದೆ. ನಮ್ಮ ಕೈಯಲ್ಲಿ ಏನಾಗುತ್ತದೆ, ಅದನ್ನು ನಾವು ಮಾಡುತ್ತೇವೆ. ಕನ್ನಡಿಗನಾಗಿ ಈ ದೇಶದ ಪ್ರಜೆಯಾಗಿ ಇದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ

    ಬಳಿಕ ಯಶ್ ಅವರ ಜೊತೆ ಸಿನಿಮಾ ಮಾಡುವ ಪ್ಲಾನ್ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಮಯ ಬಂದಾಗ ನಾನು ಹಾಗೂ ಯಶ್ ಸಿನಿಮಾ ಮಾಡುತ್ತೇವೆ. ಈಗ ಇಬ್ಬರು ಇಲ್ಲಿಯೇ ಶೂಟಿಂಗ್ ಮಾಡುತ್ತಿದ್ದೇವೆ. ಅಲ್ಲದೆ ಒಂದೇ ಹೋಟೆಲಿನಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಇಬ್ಬರೂ ಭೇಟಿ ಮಾಡಿ ಊಟ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಕೊಡಗು ಜಿಲ್ಲೆಗೆ ಆಸ್ಪತ್ರೆ ಅಭಿಯಾನಕ್ಕೆ ಸ್ಯಾಂಡಲ್‍ವುಡ್ ಬೆಂಬಲ

    ಇದಕ್ಕೂ ಮೊದಲು ಮಾತನಾಡಿದ ಪವರ್ ಸ್ಟಾರ್, ರಾಮಕೃಷ್ಣ ಪರಮಹಂಸ ಅವರ ಹೆಸರಿನಲ್ಲಿ ಪಾರ್ಕ್ ನಿರ್ಮಿಸಿದ್ದಾರೆ. ಮೈಸೂರಿನ ನನ್ನ ಸ್ನೇಹಿತರು ಪಾರ್ಕ್ ನಿರ್ಮಿಸಿದ್ದೇವೆ ಎಂದು ಹೇಳಿದ್ದರು. ನಾನು ಮೈಸೂರಿನಲ್ಲೇ ಶೂಟಿಂಗ್ ಮಾಡುತ್ತಿದ್ದ ಕಾರಣ ಇಲ್ಲಿ ಬಂದು ಪಾರ್ಕ್ ನೋಡಿದಂತೆ ಆಯ್ತು, ಜಿಮ್ ಉದ್ಘಾಟಿಸಿದಂತೆ ಆಯ್ತು. ಈ ಪಾರ್ಕ್ ಎಲ್ಲ ನೋಡುತ್ತಿದ್ದರೆ, ನನಗೆ ನನ್ನ ಬಾಲ್ಯ ನೆನಪಾಗುತ್ತದೆ ಎಂದು ಹೇಳಿದರು.

  • ಜಿಮ್ ಟ್ರೈನರ್‌ನಿಂದ  ಮೂವರು ಹುಡುಗಿಯರ ಬಾಳು ಹಾಳು!

    ಜಿಮ್ ಟ್ರೈನರ್‌ನಿಂದ ಮೂವರು ಹುಡುಗಿಯರ ಬಾಳು ಹಾಳು!

    – ಜಿಮ್ ತರಬೇತಿಗೆ ಬಂದವಳನ್ನ ಗರ್ಭಿಣಿ ಮಾಡಿ, ಮತ್ತೊಬ್ಬಳನ್ನ ಮದುವೆಯಾದ

    ಚಿಕ್ಕಬಳ್ಳಾಪುರ: ಜಿಮ್‍ಗೆ ಬರುತ್ತಿದ್ದ ಯುವತಿಯನ್ನು ಪ್ರೀತಿಸಿ, ಮೋಸ ಮಾಡಿ ಜೈಲು ಸೇರಿದ್ದ ಜಿಮ್ ಟ್ರೈನರ್ ಕಂ ಮಾಲೀಕನ ಕೃತ್ಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ಅವನ ಮೋಸಕ್ಕೆ ಓರ್ವ ಯುವತಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಬುಲೆಟ್ ಜಿಮ್ ಮಾಲೀಕ ಗೌತಮ್ ಜೈಲು ಸೇರಿದ ಆರೋಪಿ. ದೈಹಿಕ ಫಿಟ್‍ನೆಸ್‍ಗಾಗಿ ಜಿಮ್‍ಗೆ ಬರುತ್ತಿದ್ದ ಶ್ರೀಮಂತ ಮನೆತನದ ಚೆಂದದ ಯುವತಿಯರನ್ನು ಗೌತಮ್ ಟಾರ್ಗೆಟ್ ಮಾಡುತ್ತಿದ್ದ. ಪ್ರೀತಿ, ಪ್ರೇಮ ಅಂತ ಅವರೊಂದಿಗೆ ಜೊತೆ ಚಕ್ಕಂದವಾಡುತ್ತಿದ್ದ. ಜಿಮ್ ಟ್ರೈನರ್ ಕೃತ್ಯಕ್ಕೆ ಒಬ್ಬರಲ್ಲ, ಇಬ್ಬರಲ್ಲ ಮೂವರು ಹುಡುಗಿಯರ ಬಾಳು ಈಗ ಹಾಳಾಗಿದೆ.

    ಜಿಮ್‍ಗೆ ಬರುತ್ತಿದ್ದ ಯುವತಿಯನ್ನೇ ಪ್ರೀತಿ ಪ್ರೇಮ ಅಂತ ನಾಟಕವಾಡಿ, ಆವರ ಜೊತೆ ಕಾಮದಾಟ ನಡೆಸಿದ್ದಾನೆ. ಇದರಿಂದ ಜಿಮ್ ತರಬೇತಿಗೆ ಬರುತ್ತಿದ್ದ ಯುವತಿಯೊರ್ವಳು ಗರ್ಭಿಣಿ ಆಗಿದ್ದು, ಗೌತಮ್ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ಕಳೆದ ವಾರವಷ್ಟೇ ದೂರು ನೀಡಿದ್ದಾಳೆ.

    ಗೌತಮ್ ನನ್ನನ್ನು ಪ್ರೀತಿಸುವುದಾಗಿ ಹೇಳಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿ ಮಾಡಿದ್ದಾನೆ. ಆದರೆ ಈಗ ಜಿಮ್‍ಗೆ ಬರುತ್ತಿದ್ದ ಮತ್ತೋರ್ವ ಯುವತಿ ಜೊತೆ ಮದುವೆ ಆಗುತ್ತಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

    ಯುವತಿ ದೂರು ದಾಖಲಿಸಿಕೊಂಡ ಪೊಲೀಸರು ಗೌತಮ್‍ನನ್ನು ಬಂಧಿಸಿ ಜೈಲುಗಟ್ಟಿ ಹಾಕಿದ್ದಾರೆ. ಆದರೆ ಅದಕ್ಕೂ ಮುನ್ನವೇ ಗೌತಮ್ ಆಕೆಯನ್ನ ಕದ್ದು ಮುಚ್ಚಿ ಮದುವೆಯಾಗಿಬಿಟ್ಟಿದ್ದ ಎನ್ನುವ ವಿಷಯ ಈಗ ಬೆಳಕಿಗೆ ಬಂದಿದೆ. ಗೌತಮ್ ಜೈಲುಪಾಲದ ನಂತರ ಮತ್ತೋರ್ವ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಸಂತ್ರಸ್ತೆ ಪೊಲೀಸ್ ಠಾಣೆಗೆ ದೂರು ನೀಡುವುದಕ್ಕೂ ಮುನ್ನ ಗೌತಮ್ ಹಾಗೂ ಆತನ ಮತ್ತೋರ್ವ ಪ್ರಿಯತಮೆ ಕಾನ್ಫರೆನ್ಸ್ ಕಾಲ್ ಮಾಡಿದ್ದರು. ಈ ವೇಳೆ ಅವಾಚ್ಯ ಪದಗಳಿಂದ ಮನಬಂದಂತೆ ನಿಂದಿಸಿದ್ದಾರೆ. ಈ ಆಡಿಯೋ ಗೌತಮ್ ಜೈಲುಪಾಲಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿದೆ.

    ಇದರಿಂದಾಗಿ ತನ್ನ ಮಾರ್ಯದೆ ಹೋಯಿತು, ಮನೆಯಲ್ಲಿ ವಿಷಯ ಗೊತ್ತಾಯಿತು ಅಂತ ಯುವತಿ ಮನನೊಂಂದು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಮೂಲಕ ಜಿಮ್ ಟ್ರೈನರ್ ಕೃತ್ಯಕ್ಕೆ ಓರ್ವ ಯುವತಿ ಗರ್ಭಿಣಿಯಾಗಿದ್ದಾಳೆ. ಮತ್ತೊಬ್ಬಳು ಕದ್ದು ಮುಚ್ಚಿ ಮದುವೆಯಾಗಿ ಮೋಸ ಹೋಗಿದ್ದಾಳೆ. ಗೌತಮ್ ಜೈಲುಪಾಲಾದ ನಂತರ ಮೂರನೇಯ ಯುವತಿ ಆತ್ಮಹತ್ಯೆ ಶರಣಾಗಿದ್ದಾಳೆ.

  • ಬ್ಯಾಂಡೇಜ್ ಹಾಕ್ಕೊಂಡೆ ವಿನೋದ್ ಪ್ರಭಾಕರ್ ವರ್ಕೌಟ್

    ಬ್ಯಾಂಡೇಜ್ ಹಾಕ್ಕೊಂಡೆ ವಿನೋದ್ ಪ್ರಭಾಕರ್ ವರ್ಕೌಟ್

    ಬೆಂಗಳೂರು: ನಟ ವಿನೋದ್ ಪ್ರಭಾಕರ್ ಅವರು ಶೂಟಿಂಗ್ ವೇಳೆ ಬಿದ್ದು, ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಆದರೂ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ವರ್ಕೌಟ್ ಮಾಡುತ್ತಿದ್ದಾರೆ.

    ಹೌದು..ನಟ ವಿನೋದ್ ಪ್ರಭಾಕರ್ ಅವರು ತಮ್ಮ ಕಾಲು ನೋವನ್ನು ಲೆಕ್ಕಿಸದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ವಿನೋದ್ ಅವರು ತಮ್ಮ ಸ್ನೇಹಿತರ ಸಹಾಯದಿಂದ ಜಿಮ್‍ನಲ್ಲಿ ಡಂಬಲ್ಸ್ ಹಾಗೂ ವೇಯ್ಟ್ ಲಿಫ್ಟಿಂಗ್ ಎತ್ತು ಮೂಲಕ ಕಸರತ್ತು ಮಾಡುತ್ತಿದ್ದಾರೆ. ಇದನ್ನೂ ಓದಿ: ಪ್ರಚಾರಕ್ಕೆ ಬ್ರೇಕ್- ಗಾಯಾಳು ಸ್ನೇಹಿತನನ್ನು ಭೇಟಿ ಮಾಡಿದ್ರು ದರ್ಶನ್

    ವಿನೋದ್ ಪ್ರಭಾಕರ್ ಅವರು ‘ವರದ’ ಸಿನಿಮಾದಲ್ಲಿ ಸಾಹಸ ದೃಶ್ಯದ ಚಿತ್ರೀಕರಣ ಮಾಡುತ್ತಿದ್ದರು. ಆಗ ಕೆಳಗೆ ಬಿದ್ದು, ಎಡಗಾಲಿಗೆ ಬಲವಾದ ಪೆಟ್ಟಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ 5 ವಾರಗಳು ವಿಶ್ರಾಂತಿ ಪಡೆಯಬೇಕು ಎಂದು ಸೂಚಿಸಿದ್ದರು. ಆದರೂ ತಮ್ಮಿಂದ ಸಿನಿಮಾ ಕೆಲಸ ನಿಲ್ಲಬಾರದು ಎಂದು ಕಾಲಿಗೆ ಪೆಟ್ಟಾಗಿದ್ದರೂ ಸಹ ಚಿತ್ರದ ಟಾಕಿ ಪೋಷನ್ ನಲ್ಲಿ ಭಾಗಿಯಾಗಿ ತಮ್ಮ ಕೆಲಸ ಮಾಡಿ ಮುಗಿಸಿಕೊಟ್ಟಿದ್ದರು.

    ಇತ್ತೀಚಿಗಷ್ಟೆ ವಿನೋದ್ ಪ್ರಭಾಕರ್ ಅವರನ್ನು ನಟ ದರ್ಶನ್ ಕೂಡ ಭೇಟಿಯಾಗಿ ಆರೋಗ್ಯ ವಿಚಾರಿಸಿಕೊಂಡು ಹೋಗಿದ್ದರು. ಸದ್ಯಕ್ಕೆ ವಿನೋದ್ ಪ್ರಭಾಕರ್ ಅಭಿನಯದ ‘ರಗಡ್’ ಸಿನಿಮಾ ಬಿಡುಗಡೆಯಾಗಿದ್ದು, ‘ವರದ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  • 12ರ ವಯಸ್ಸಿನಲ್ಲಿಯೇ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಬಾಲಕ!

    12ರ ವಯಸ್ಸಿನಲ್ಲಿಯೇ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಬಾಲಕ!

    ಗದಗ: 12 ವರ್ಷದ ಪೋರನೊಬ್ಬ ಬಾಡಿ ಬಿಲ್ಡರ್ ಸ್ಪರ್ಧೆಯಲ್ಲಿ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದ್ದಾನೆ.

    ಗದಗ ನಗರದ 12 ವರ್ಷದ ಬಾಲಕನ ಹೆಸರು ವಿನಯ್ ಅಕ್ಕಿ. ಈತ 8ನೇ ತರಗತಿ ಒದುತ್ತಿದ್ದು, 6ನೇ ವರ್ಷದಿಂದಲೇ ಬಾಡಿ ಬಿಲ್ಡ್ ಮಾಡೋದಕ್ಕೆ ಪ್ರಾರಂಭಿಸಿದ್ದಾನೆ. ಮೀಸೆ ಚಿಗುರದ ಈ ವಯಸ್ಸಲ್ಲಿ ಜಿಲ್ಲಾ, ರಾಜ್ಯ ಹಾಗೂ ಅಂತರ್ ರಾಜ್ಯಮಟ್ಟದ ಬಾಡಿ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾನೆ. ಅಷ್ಟೇ ಅಲ್ಲ ಕನ್ನಡ ರಾಜ್ಯೋತ್ಸವ, ಗದಗ ಉತ್ಸವ, ಹಂಪಿ ಉತ್ಸವ, ದಸರಾ ಉತ್ಸವ ಸೇರಿದಂತೆ ಹಲವು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾನೆ.

    ಕಟ್ ಮಸ್ತಾಗಿ ಬಾಡಿ ಬಿಲ್ಡ್ ಮಾಡಿರೋ ಸ್ಪರ್ಧಿಗಳ ನಡುವೆ ಈ 12ರ ಚಿಕ್ಕಪೋರ ದಾಖಲೆ ಬರೆಯಲು ಮುಂದಾಗಿದ್ದಾನೆ. ಕಳೆದ ಒಂದು ವರ್ಷದಿಂದ ದಿನಕ್ಕೆ ನಾಲ್ಕು ಗಂಟೆಗಳ ಕಾಲ ಪ್ರ್ಯಾಕ್ಟೀಸ್ ಮಾಡ್ತಿರೋ ಇತ ಇದನ್ನೆ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ.

    ವಿನಯ್ ತಂದೆ ವಿನೋದ್ ಮಾಲೀಕತ್ವದ ಜಿಮ್ ಇರೋದ್ರಿಂದ, ಇದೀಗ ಬಾಲಕನಿಗೆ ತುಂಬಾನೆ ಅನೂಕೂಲಕರವಾಗಿದೆ. ತಂದೆ ಜಿಮ್‍ನಲ್ಲಿ ಇಲ್ಲದ ಸಂದರ್ಭದಲ್ಲಿ ಇವನೇ ಟ್ರೇನರ್ ಆಗಿ ಕೆಲಸ ಮಾಡ್ತಾನೆ. ವಿನಯ್ ಕೇವಲ ಬಾಡಿ ಬಿಲ್ಡಿಂಗ್‍ನಲ್ಲಿ ಅಷ್ಟೇ ಹೆಸರು ಮಾಡದೆ ಮಾರ್ಷಲ್ ಆಟ್ರ್ಸ್, ಕರಾಟೆಯಲ್ಲೂ ಕೂಡ ರಾಷ್ಟಮಟ್ಟದಲ್ಲಿ ಪ್ರತಿನಿಧಿಸಿದ್ದಾನೆ. ಇವೆಲ್ಲದಕ್ಕೂ ತರಬೇತಿ ನೀಡಿರೋ ಇವನ ತಂದೆ ವಿನೋದ್ ಹಾಗೂ ತಾಯಿ ಮಧುರಾ ಇಬ್ಬರು ಇವನಿಗೆ ಸ್ಪೂರ್ತಿಯಾಗಿದ್ದಾರೆ.

    ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಲು ಮುಂದಾದ ಪೋರನ ಕಾರ್ಯ ನಿಜಕ್ಕೂ ಹೆಮ್ಮೆಪಡುವಂತದ್ದು. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸುತ್ತಿರುವುದರಿಂದ ಗದಗ ಜಿಲ್ಲೆಗೆ ಕಿರೀಟ ಬಂದಂತಾಗಿದೆ. ಇನಷ್ಟು ಯಶಸ್ಸಿನ ಹಾದಿ ಸುಲಭವಾಗಲಿ ಎಂಬುದೆ ಎಲ್ಲರ ಹಾರೈಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

    ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡಲೆಂದು ಜಿಮ್‍ಗೆ ಹೋಗಿದ್ದ ವೇಳೆ ಹೊರಗೆ ನಿಂತಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡು ವಾಪಸ್ ಬಂದಿದ್ದಾರೆ.

    ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಜಿಮ್‍ನ ತರಬೇತಿ ಪಡೆಯಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್‍ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಕತ್ರಿನಾ ಕೈಫ್ ಅವರ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ.

     

    ದೀಪಿಕಾ ಹಾಗೂ ಕತ್ರಿನಾ ಇಬ್ಬರೂ ರಣ್‍ಬೀರ್ ಕಪೂರ್ ನ ಮಾಜಿ ಪ್ರೇಯಸಿಯಾಗಿದ್ದು, ಇಬ್ಬರು ಎದುರು-ಬದರು ಬರಲು ಇಷ್ಟಪಡುವುದಿಲ್ಲ. ದೀಪಿಕಾಗೆ ಕತ್ರಿನಾ ಕಾರ್ ನಂಬರ್ ತಿಳಿದಿದ್ದು, ಆ ಕಾರನ್ನು ಜಿಮ್ ಹೊರಗಡೆ ನೋಡುತ್ತಿದ್ದಂತೆ ಕತ್ರಿನಾ ಮುಂದೆ ಬರಲು ಬಯಸದೇ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಈ ಹಿಂದೆ ದೀಪಿಕಾ ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ನಿಮ್ಮ ಮದುವೆಗೆ ಯಾರಿಗೆ ಆಹ್ವಾನ ನೀಡುವುದಿಲ್ಲ ಎಂದು ದೀಪಿಕಾ ಅವರಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಗುಳಿ ಕೆನ್ನೆಯ ಸುಂದರಿ ಕತ್ರಿನಾ ಕೈಫ್ ಗೆ ಆಹ್ವಾನ ನೀಡುವುದಿಲ್ಲ ಖಡಕ್ ಆಗಿ ಉತ್ತರಿಸಿದ್ದರು.

    ದೀಪಿಕಾ ಬಾಲಿವುಡ್‍ಗೆ ಎಂಟ್ರಿಯಾದ ಬಳಿಕ ರಣ್ ಬಿರ್ ಕಪೂರ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಈ ಪ್ರೇಮ ಸಂಬಂಧ ಬ್ರೇಕಪ್ ಆಗಲು ಕ್ರತಿನಾ ಕಾರಣ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತಿತ್ತು. ಈ ಕಾರಣಕ್ಕೆ ದೀಪಿಕಾ ಕತ್ರಿನಾಗೆ ಮದುವೆ ಆಹ್ವಾನ ನೀಡುತ್ತಿಲ್ಲ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇದನ್ನೂ ಓದಿ:  ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!