Tag: ಜಾಹೀರಾತು ಫಲಕ

  • ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

    ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕ ಹರಿದು ಆಕ್ರೋಶ; 50 ಕರವೇ ಕಾರ್ಯಕರ್ತರ ಬಂಧನ

    ಬೆಳಗಾವಿ: ಆಂಗ್ಲ ಭಾಷೆಯಲ್ಲಿದ್ದ ಜಾಹೀರಾತು ಫಲಕಗಳನ್ನು ಹರಿದು ಕರ್ನಾಟಕ ರಕ್ಷಣಾ ವೇದಿಕೆ (Karnataka Rakshana Vedike) ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.

    ನಗರದ ವಿವಿಧ ಬಡಾವಣೆಗಳಲ್ಲಿ ಅಳವಡಿಸಿರುವ ಜಾಹೀರಾತು ಫಲಕಗಳಲ್ಲಿ ಕನ್ನಡ ಕಡೆಗಣಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರವೇ (ಟಿ‌.ಎ‌‌.ನಾರಾಯಣಗೌಡ ಬಣ) ಕಾರ್ಯಕರ್ತರು ನಗರದ ರಾಣಿ ಚನ್ನಮ್ಮನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಇದನ್ನೂ ಓದಿ: ಬೈಕ್ ಡಿಕ್ಕಿ- ವೃದ್ಧನ ತಲೆಯಲ್ಲಿದ್ದ ದಿನಸಿ ಚೀಲಕ್ಕೆ ಕೈತಾಗಿ ಬಿದ್ದಾಕೆಯ ಮೇಲೆ ಹರಿದ ಬಸ್!

    ಆಂಗ್ಲ ಭಾಷೆಯಲ್ಲಿದ್ದ ಹಲವು ಫಲಕಗಳನ್ನು ಹರಿದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿದರು. ಅವರನ್ನು ತಡೆಯಲು ಪೊಲೀಸರು ಯತ್ನಿಸಿದಾಗ, ಪರಸ್ಪರ ವಾಗ್ವಾದ ನಡೆಯಿತು‌.

    ವೃತ್ತದಲ್ಲೇ ಪ್ರತಿಭಟನೆ ಮುಂದುವರಿಸಿದ್ದ 50ಕ್ಕೂ ಅಧಿಕ ಕರವೇ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು. ಸದ್ಯ ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಚೀಟಿ ತೋರಿಸಿ ಮಹಿಳೆಯ ಮಾಂಗಲ್ಯ ಕದ್ದೊಯ್ದ ಕಳ್ಳ – ಸಿಸಿಟಿವಿಯಲ್ಲಿ ಕೃತ್ಯ ಸೆರೆ

  • ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    ಚೆಸ್ ಒಲಿಂಪಿಯಾಡ್‌ನಲ್ಲಿ ಮೋದಿ ಫೋಟೋ ಹಾಕದೇ ಜಾಹೀರಾತು – ಎಲ್ಲ ಬೋರ್ಡ್‍ಗಳಿಗೂ ಫೋಟೋ ಅಂಟಿಸಿದ ಬಿಜೆಪಿ

    ಚೆನ್ನೈ: ತಮಿಳುನಾಡುನಲ್ಲಿ ನಡೆಯಲಿರುವ ಚೆಸ್ ಒಲಿಂಪಿಯಾಡ್ ಜಾಹೀರಾತು ಬೋರ್ಡ್‍ಗಳಿಗೆ ಬಿಜೆಪಿ ತಂಡ ಪ್ರಧಾನಿ ನರೇಂದ್ರ ಮೋದಿ ಫೋಟೋವನ್ನು ಅಂಟಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಜುಲೈ 28 ರಿಂದ ಆರಂಭವಾಗಲಿರುವ ತಮಿಳುನಾಡು ಸರ್ಕಾರದ 44ನೇ ಚೆಸ್ ಒಲಿಂಪಿಯಾಡ್ ಜಾಹಿರಾತು ಫಲಕಕ್ಕೆ ಮೋದಿ ಅವರ ಫೋಟೋವನ್ನು ಹಾಕಿರಲಿಲ್ಲ. ಈ ಹಿನ್ನೆಲೆ ಪ್ರಚಾರ ಅಭಿಯಾನದ ಭಾಗವಾಗಿ ಬಿಜೆಪಿ ಪದಾಧಿಕಾರಿಯೊಬ್ಬರು ತನ್ನ ತಂಡದೊಂದಿಗೆ ಜಾಹೀರಾತು ಫಲಕಗಳ ಮೇಲೆ ಮೋದಿ ಅವರ ಫೋಟೋವನ್ನು ಅಂಟಿಸಿದ್ದಾರೆ. ಇದನ್ನೂ ಓದಿ: ಪಾಕ್ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ  

    ಈ ವೀಡಿಯೋವನ್ನು ತಮಿಳುನಾಡು ಬಿಜೆಪಿಯ ಕ್ರೀಡಾ ಮತ್ತು ಕೌಶಲ್ಯ ಅಭಿವೃದ್ಧಿ ಘಟಕದ ಅಧ್ಯಕ್ಷ ಅಮರ್ ಪ್ರಸಾದ್ ರೆಡ್ಡಿ ಅವರು ಟ್ವೀಟ್ ಮಾಡಿದ್ದು, ಸಿಎಂ ಸ್ಟಾಲಿನ್‍ಗೆ ನೆನಪಿರಲಿ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ರಾಷ್ಟ್ರದ ಏಕೈಕ ಪ್ರತಿನಿಧಿ ಎಂದು ಬರೆದು ಶೇರ್ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಬಿಜೆಪಿ ಪದಾಧಿಕಾರಿ ಮಾತನಾಡಿದ್ದು, ಒಲಿಂಪಿಯಾಡ್ ರಾಜ್ಯ ಮಟ್ಟದ ಈವೆಂಟ್ ಅಲ್ಲ, ಅಂತರಾಷ್ಟ್ರೀಯ ಪಂದ್ಯಾವಳಿ. ಇದು ಡಿಎಂಕೆ ಪಕ್ಷದ ಕಾರ್ಯಕ್ರಮವಲ್ಲ. ಇದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿದೆ. ಅದಕ್ಕೆ ಇದು ಪ್ರಧಾನಿ ಅವರ ಭಾವಚಿತ್ರವನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.

    ಜಾಹೀರಾತು ಫಲಕಕ್ಕೆ ಮೋದಿ ಅವರ ಭಾವಚಿತ್ರಗಳನ್ನು ಅಂಟಿಸಲು ಅಧಿಕಾರಿಗಳಿಂದ ಅನುಮತಿ ಪಡೆದಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿ ಅವರ ಭಾವಚಿತ್ರವು ಪ್ರಚಾರದ ಭಾಗವಾಗಿರಬೇಕು. ಅವರು ಇಡೀ ವಿಶ್ವಕ್ಕೆ ಗೊತ್ತು. ಅದಕ್ಕೆ ಯಾರ ಅನುಮತಿಯೂ ಬೇಕಿಲ್ಲ ಎಂದು ತಿಳಿಸಿದ್ದಾರೆ.

    ವೀಡಿಯೋ ಎಲ್ಲಕಡೆ ಶೇರ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಾಧ್ಯಕ್ಷರು, ಮೋದಿ ಅವರ ಛಾಯಾಚಿತ್ರವನ್ನು ಸೇರಿಸದೆ ಚೆಸ್ ಈವೆಂಟ್‍ನ ಪ್ರಚಾರವನ್ನು ಮುಂದುವರೆಸಿದ್ದಕ್ಕಾಗಿ ಡಿಎಂಕೆ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು. ಇದು ‘ದೊಡ್ಡ ತಪ್ಪು’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಯಡಿಯೂರಪ್ಪನವರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ: ಜಯಮೃತ್ಯುಂಜಯ ಸ್ವಾಮೀಜಿ ಅಸಮಾಧಾನ 

    ಮಾಮಲ್ಲಪುರಂನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್ ಜುಲೈ 28 ರಂದು ಆರಂಭವಾಗಿ ಆಗಸ್ಟ್ 10 ರಂದು ಮುಕ್ತಾಯಗೊಳ್ಳಲಿದೆ. ಈ ಕ್ರೀಡಾಕೂಟ ನಡೆಸಲು ರಾಜ್ಯ ಸರ್ಕಾರ 92.13 ಕೋಟಿ ರೂ. ಮಂಜೂರು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಬೆಂಗ್ಳೂರಲ್ಲಿ ಮತ್ತೆ ರಾರಾಜಿಸಲಿದೆ ಜಾಹೀರಾತು ಫಲಕಗಳು- ಸರ್ಕಾರದಿಂದ ಅಧಿಸೂಚನೆ

    ಬೆಂಗ್ಳೂರಲ್ಲಿ ಮತ್ತೆ ರಾರಾಜಿಸಲಿದೆ ಜಾಹೀರಾತು ಫಲಕಗಳು- ಸರ್ಕಾರದಿಂದ ಅಧಿಸೂಚನೆ

    ಬೆಂಗಳೂರು: ಮೂರು ವರ್ಷಗಳ ಬಳಿಕ ನಗರದಲ್ಲಿ ಮತ್ತೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ಜುಲೈ 26 ರಂದು ಎಲ್ಲಾ ಬಗೆಯ ಜಾಹೀರಾತು ಹೋಡಿರ್ಂಗ್ಸ್ ಗಳ ಅಳವಡಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಅಂಕಿತ ಹಾಕಿದೆ.

    ಬಿಬಿಎಂಪಿ ಕಾಯಿದೆ -2020 ರನ್ನೇ ಬಳಸಿಕೊಂಡು, ಬಿಬಿಎಂಪಿ ಜಾಹೀರಾತು ನಿಯಮಗಳು-2019 ಅನ್ನು ಬದಲಾಯಿಸಿ, ಜಾಹೀರಾತು ಏಜೆನ್ಸಿಗಳ ಒತ್ತಡಕ್ಕೆ ಮಣಿದು ನಗರದಲ್ಲಿ ಮತ್ತೆ ಜಾಹೀರಾತು ಹಾವಳಿಗೆ ಅವಕಾಶ ಕಲ್ಪಿಸಿದಂತಾಗಿದೆ. ಹೊಸ ನಿಯಮದಂತೆ ಜಾಹೀರಾತು ಏಜೆನ್ಸಿಗಳು ಕಡ್ಡಾಯವಾಗಿ ಪರವಾನಗಿ ಪಡೆದು, ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂ ಶುಲ್ಕ ಪಾವತಿಸಬೇಕು. ಖಾಸಗಿ ನಿವೇಶನ, ಕಟ್ಟಡ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಾಗದಲ್ಲಿ ಜಾಹೀರಾತು ಪ್ರದರ್ಶಿಸಲು ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಶೇ.150 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ ಎಂಬ ಹೊಸ ನಿಯಮವನ್ನು ಸರ್ಕಾರ ತಿಳಿಸಿದೆ.

    ಅನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿದರೆ, ನೋಟೀಸ್ ನೀಡದೆ ಪಾಲಿಕೆ ತೆರವು ಮಾಡಬಹುದಾಗಿದೆ. 100 ಚ.ಮೀ ಕಡಿಮೆ ವಿಸ್ತೀರ್ಣವಿದ್ದರೆ 5 ಸಾವಿರ, ಇದಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ 7 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ನಿಯಮ ಪಾಲನೆ ಮಾಡದ ಕಂಪನಿಗಳಿಗೆ ದಿನಕ್ಕೆ ಕೇವಲ ಒಂದು ಸಾವಿರದಂತೆ ದಂಡ ವಿಧಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: 21 ಸಚಿವರ ಪಟ್ಟಿಗೆ ಇನ್ನೂ ಹೈಕಮಾಂಡ್‍ನಿಂದ ಸಿಕ್ಕಿಲ್ಲ ಗ್ರೀನ್‍ಸಿಗ್ನಲ್

    ವಿಧಾನಸೌಧ ಸುತ್ತಮುತ್ತ ನಿರ್ಬಂಧ
    ಹೊಸ ನಿಯಮದಂತೆ, ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್-ಶಿವಾನಂದ ವೃತ್ತ, ರಾಜಭವನ ರಸ್ತೆ, ಹೈಗ್ರೌಂಡ್ಸ್ ನಿಂದ ಮಿನ್ಸ್ಕ್ ಚೌಕ, ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್ ನಿಂದ ವಿಂಡ್ಸರ್‍ಸಿಗ್ನಲ್, ಅಂಬೇಡ್ಕರ್ ವೀದಿ, ಕೆ.ಆರ್ ವೃತ್ತದಿಂದ ಇನ್ ಫೆಂಟ್ರಿ ರಸ್ತೆ ಜಂಕ್ಷನ್, ಅಂಚೆ ಕಚೇರಿ ರಸ್ತೆ, ಕೆ.ಆರ್ ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್ ಭಾಗ್, ನೃಪತುಂಗ ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಇದರೊಂದಿಗೆ ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಹಾಗೂ ಧಾರ್ಮಿಕ ಸ್ಥಳಗಳಿಂದ ಐವತ್ತು ಮೀಟರ್, ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನ ನಿಬರ್ಂಧಿಸಲಾಗಿದೆ.

    ಮೇಲ್ಸೇತುವೆ, ರೈಲ್ವೇ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಟೆಲಿಕಾಂ ಟವರ್ ನ ಅಂಚಿನಿಂದ 3.5 ಮೀಟರ್ ಪರಿಧಿ ಹಾಗೂ ಜಲಮಂಡಳಿಯ ವಾಟರ್ ಟ್ಯಾಂಕರ್ ನಿಂದ 15 ಮೀಟರ್ ವ್ಯಾಪ್ತಿಯಲ್ಲಿ ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದ್ದು. ಇದರೊಂದು ಜಾಹೀರಾತು ಫಲಕಗಳ ಅಳತೆಗಳ ಬಗ್ಗೆಯೂ ನಿಯಮ ಜಾರಿ ಮಾಡಿದೆ.

  • ಡಿಕೆಶಿ ವಿರುದ್ಧ ದೂರು ದಾಖಲಿಸಿದ್ದ ಇನ್ಸ್​ಪೆಕ್ಟರ್​ ವರ್ಗಾವಣೆ!

    ಡಿಕೆಶಿ ವಿರುದ್ಧ ದೂರು ದಾಖಲಿಸಿದ್ದ ಇನ್ಸ್​ಪೆಕ್ಟರ್​ ವರ್ಗಾವಣೆ!

    ಬೆಂಗಳೂರು: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಕ್ಕೆ ಬ್ಯಾಟರಾಯನಪುರ ಇನ್ಸ್​ಪೆಕ್ಟರ್​ ಶಿವಸ್ವಾಮಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಸೆಪ್ಟೆಂಬರ್ 20 ರಂದು ಬ್ಯಾಟರಾಯಪುರ ಮೆಟ್ರೋ ಸ್ಟೇಷನ್ ಬಳಿ ಡಿ.ಕೆ ಶಿವಕುಮಾರ್ ಅವರಿಗೆ ಸೇರಿದ ಕಂಪನಿಯೊಂದು ಅನಧಿಕೃತ ಜಾಹಿರಾತು ಫಲಕ ಅಳವಡಿಸಿತ್ತು. ಈ ಬಗ್ಗೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ಎಂಬವರು ಐದು ಬಾರಿ ನೋಟಿಸ್ ನೀಡಿದ್ದರು. ಅತ್ತ ನೋಟಿಸ್‍ಗೂ ಪ್ರತಿಕ್ರಿಯಿಸಿಲ್ಲ. ಇತ್ತ ಜಾಹಿರಾತು ಫಲಕಗಳನ್ನು ತೆಗೆಯಲಿಲ್ಲ. ಹೀಗಾಗಿ ಮುತ್ತು ರಾಜು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಠಾಣೆಯ ಇನ್ಸ್​ಪೆಕ್ಟರ್​ ಶಿವಸ್ವಾಮಿ ಯಾರ ಒತ್ತಡಕ್ಕೂ ಮಣಿಯದೆ ಸಚಿವರ ವಿರುದ್ಧವೇ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಕಡೆಯವರಿಂದ ಸಮಜಾಯಿಸಿ ಪಡೆದು ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಿದ್ದರು. ಡಿಕೆಶಿ ಬೆಂಬಲಿಗರು ಕೇವಲ ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿ ಮಾತ್ರ ಅನುಮತಿ ಪಡೆದುಕೊಂಡಿದ್ದರು. ಬ್ಯಾಟರಾಯನಪುರ ಮೆಟ್ರೋ ಸ್ಟೇಷನ್ ಬಳಿ ಹಾಕಿದ್ದ ಅನಧಿಕೃತ ಜಾಹಿರಾತುಗಳನ್ನು ಸದ್ಯ ತೆರವುಗೊಳಿಸಿದ್ದಾರೆ. ಹೀಗಾಗಿ ಡಿಕೆಶಿ ವಿರುದ್ಧ ಕೇಸ್ ಮುಕ್ತಾಯಗೊಂಡಿತ್ತು.

    ಅನಧಿಕೃತ ಜಾಹಿರಾತಿನ ವಿರುದ್ಧ ಕೇಸ್ ದಾಖಲಿಸಿ ಡಿಕೆ ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸ್ ಇನ್ಸ್​ಪೆಕ್ಟರ್​ ಶಿವಸ್ವಾಮಿ ಬ್ಯಾಟರಾಯನಪುರದಿಂದ ಏಕಾಏಕಿ ಸ್ಥಳ ತೊರಿಸದೇ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಿಲ್ಡಿಂಗ್‍ ಗೆ ಕಟ್ಟಿದ್ದ ಜಾಹೀರಾತು ಫಲಕ ಏರಿದ ಬೀದಿ ನಾಯಿ – ಕೆಳಗಿಳಿಯಲು ಪರದಾಟ!

    ಬಿಲ್ಡಿಂಗ್‍ ಗೆ ಕಟ್ಟಿದ್ದ ಜಾಹೀರಾತು ಫಲಕ ಏರಿದ ಬೀದಿ ನಾಯಿ – ಕೆಳಗಿಳಿಯಲು ಪರದಾಟ!

    ದಾವಣಗೆರೆ: ನಗರದಲ್ಲಿ ಜಾಹೀರಾತು ಫಲಕವೊಂದರ ಮೇಲೆ ಬೀದಿ ನಾಯಿಯೊಂದು ಏರಿ ಕುಳಿತ್ತಿದ್ದು, ಕೆಳಗಿಳಿಯಲಾಗದೆ ಪರದಾಟ ನಡೆಸಿರುವ ಘಟನೆ ವಿದ್ಯಾನಗರದ ಸಾಯಿ ರೆಸಿಡೆನ್ಸಿ ಸ್ಕೂಲ್ ಕಟ್ಟಡದಲ್ಲಿ ನಡೆದಿದೆ.

    ಶನಿವಾರ ರಾತ್ರಿ ವಿದ್ಯಾನಗರದ ಸಾಯಿ ರೆಸಿಡೆನ್ಸಿ ಸ್ಕೂಲ್ ಕಟ್ಟಡದ ಒಳಗೆ ಆಕಸ್ಮಿಕವಾಗಿ ಬೀದಿ ನಾಯಿಯೊಂದು ಹೋಗಿದೆ. ಆದರೆ ಇಂದು ಶಾಲೆಗೆ ರಜೆ ಇರುವ ಕಾರಣ ಶಾಲಾ ಕಟ್ಟಡದ ಬಾಗಿಲು ತೆರೆದಿರಲಿಲ್ಲ. ಆದರೆ ಕಟ್ಟಡದಿಂದ ಹೊರಬರಲು ನಾಯಿ ಪ್ರಯತ್ನಿಸಿ ಕೊನೆಗೆ ಶಾಲೆಯ ಕಟ್ಟಡಕ್ಕೆ ಕಟ್ಟಿದ್ದ ಜಾಹೀರಾತು ಫಲಕವನ್ನು ಹತ್ತಿದೆ. ಆದರೆ ಅಲ್ಲಿಂದ ಕೆಳಗಿಳಿಯಲು ಸಾಧ್ಯವಾಗದೇ ಪರದಾಡಿದೆ.

    ನಾಯಿ ತುಂಬಾ ಹೊತ್ತು ಹಿಂದೆ-ಮುಂದೆ ನೋಡಿದೆ, ಕೂತಿದೆ ಏನೇನೊ ಪ್ರಯತ್ನ ಮಾಡಿದೆ. ಆದರೆ ಸಾಧ್ಯವಾಗಿಲ್ಲ. ಕೊನೆಗೆ ಕೂಗಾಡಲು ಪ್ರಾರಂಭಿಸಿದೆ. ಕೊನೆಗೆ ನಾಯಿಯ ಗೋಳಾಟ ಕೇಳಿಸಿಕೊಂಡ ಸಾರ್ವಜನಿಕರು ಬಂದು ಜಾಹೀರಾತು ಫಲಕದಿಂದ ಕೆಳಗೆ ಇಳಿಸಿ ರಕ್ಷಣೆ ಮಾಡಿದ್ದಾರೆ.

    https://www.youtube.com/watch?v=EEYxzESXYFo