Tag: ಜಾರ್ಖಂಡ್‌ ಸಿಎಂ

  • ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

    ಹೇಮಂತ್ ಸೋರೆನ್ ಅರೆಸ್ಟ್ – ಚಂಪಾಯಿ ಸೋರೆನ್ ಮುಂದಿನ ಜಾರ್ಖಂಡ್ ಸಿಎಂ

    ರಾಂಚಿ: ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಬಂಧಿಸವುದು ಖಚಿತವಾಗುತ್ತಲೇ ಆಡಳಿತ ಪಕ್ಷದ ಶಾಸಕರು ಸಭೆ ನಡೆಸಿ, ಹೇಮಂತ್ ಸೋರೆನ್ ಆಪ್ತ, ಸಚಿವ ಚಂಪಾಯಿ ಸೋರೆನ್‍ರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.

    ರಾಜ್ಯಪಾಲರನ್ನು ಭೇಟಿ ಮಾಡಿರುವ ಆಡಳಿತ ಪಕ್ಷದ ಶಾಸಕರು, ಚಂಪಾಯಿ ಸೋರೆನ್‍ರನ್ನು (Champai Soren) ಮುಖ್ಯಮಂತ್ರಿ ಮಾಡುವಂತೆ ಮನವಿ ಮಾಡಿದ್ದಾರೆ. ಗುರುವಾರ ಚಂಪಾಯಿ ಸೋರೇನ್ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಸಂಭವ ಇದೆ.

    ಸೋರೆನ್ ಅರೆಸ್ಟ್: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೋರೆನ್ (Hemant Soren) ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಭಾರೀ ಭದ್ರತೆ ನಡುವೆ ರಾಂಚಿಯ ಸಿಎಂ ನಿವಾಸಕ್ಕೆ ಮಧ್ಯಾಹ್ನ ಬಂದ ಇ.ಡಿ ಅಧಿಕಾರಿಗಳು ಸತತ 8 ಗಂಟೆ ವಿಚಾರಣೆ ನಡೆಸಿ ಬಂಧನ ಮಾಡಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್‌ – ಜಾರ್ಖಂಡ್‌ ಸಿಎಂ ಸೊರೆನ್‌ ಅರೆಸ್ಟ್‌

    ಇತ್ತ ಸೋರೆನ್ ಬಂಧನಕ್ಕೆ ಜೆಎಂಎಂ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಿಎಂ ನಿವಾಸ, ರಾಜಭವನ, ಇಡಿ ಕಚೇರಿ ಬಳಿ ನಿಷೇಧಾಜ್ಞೆ ವಿಧಿಸಲಾಗಿದೆ. ರಾಂಚಿ ಭದ್ರತೆಗೆ 7 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇಡಿ ಅಧಿಕಾರಿಗಳ ವಿರುದ್ಧ ಹೇಮಂತ್ ಸೋರೆನ್ ಅಟ್ರಾಸಿಟಿ ಕೇಸ್ ದಾಖಲಿಸಿದ್ದಾರೆ.

  • ಜ. 31 ರೊಳಗೆ ಇಡಿ ಮುಂದೆ ಹಾಜರಾಗಿ- ಜಾರ್ಖಂಡ್ ಸಿಎಂಗೆ ಇಡಿ 10ನೇ ಸಮನ್ಸ್‌

    ಜ. 31 ರೊಳಗೆ ಇಡಿ ಮುಂದೆ ಹಾಜರಾಗಿ- ಜಾರ್ಖಂಡ್ ಸಿಎಂಗೆ ಇಡಿ 10ನೇ ಸಮನ್ಸ್‌

    ರಾಂಚಿ: ಭೂ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್‌ (Hemant Soren) ಅವರಿಗೆ ಜಾರಿ ನಿರ್ದೇಶನಾಲಯ (ED) 10ನೇ ಸಮನ್ಸ್ ಕಳುಹಿಸಿದೆ.

    ಜನವರಿ 29 ಮತ್ತು 31ರ ನಡುವೆ ಯಾವಾಗ ವಿಚಾರಣೆ ನಡೆಸಬೇಕು ಎಂದು ನಿರ್ಧರಿಸುವಂತೆ ಇಡಿ ಮುಖ್ಯಮಂತ್ರಿಗೆ ಕಳುಹಿಸಿದ ಪತ್ರದಲಿ ತಿಳಿಸಿದೆ. ಈ ಹಿಂದಿನಂತೆ ಹೇಳಿಕೆ ದಾಖಲಿಸಿಕೊಳ್ಳಲು ಬರದಿದ್ದರೆ ಇಡಿ ಅಧಿಕಾರಿಗಳೇ ನಿಮ್ಮ ಮುಂದೆ ಬರುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ.

    ಇದಕ್ಕೂ ಮುನ್ನ ಜನವರಿ 25ರಂದು ಇಡಿ ವಿಚಾರಣೆಗೆ ಕಾಲಾವಕಾಶ ನೀಡಲು ಸಿಎಂ ಪರೋಕ್ಷವಾಗಿ ನಿರಾಕರಿಸಿದ್ದರು. ಅಲ್ಲದೆ ಇಡಿಗೆ ಕಳುಹಿಸಿರುವ ಪತ್ರದಲ್ಲಿ ಕಾಲಾವಕಾಶ ನೀಡುವ ಬಗ್ಗೆ ಸಿಎಂ ಉಲ್ಲೇಖಿಸಿಲ್ಲ. ಸೂಕ್ತ ಸಮಯದಲ್ಲಿ ಉತ್ತರ ನೀಡುವುದಾಗಿ ಹೇಳಲಾಗಿತ್ತು . ಇದನ್ನೂ ಓದಿ: 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌ – ಕೇಜ್ರಿವಾಲ್‌ ಹೊಸ ಬಾಂಬ್‌

    ಜನವರಿ 27ರಿಂದ 31ರೊಳಗೆ ಇಡಿ ತನಿಖಾ ತಂಡದ ಮುಂದೆ ಹಾಜರಾಗುವಂತೆ ಇಡಿ ಜನವರಿ 22ರಂದು ಸಿಎಂಗೆ 9ನೇ ಸಮನ್ಸ್‌ ಕಳುಹಿಸಿತ್ತು. ಇದಕ್ಕೂ ಮುನ್ನ ಜನವರಿ 20ರಂದು 8ನೇ ಸಮನ್ಸ್‌ನಲ್ಲಿ ಇಡಿ ಅಧಿಕಾರಿಗಳು ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಈ ವೇಳೆ ತಂಡ ಸುಮಾರು 7 ಗಂಟೆಗಳ ಕಾಲ ಅವರನ್ನು ವಿಚಾರಣೆ ನಡೆಸಿತು. ಆದರೆ ಇಡಿ ವಿಚಾರಣೆ ಪೂರ್ಣಗೊಂಡಿಲ್ಲ. ಹೀಗಾಗಿ ಜಾರಿ ನಿರ್ದೇಶನಾಲಯ ತಂಡ ಹೇಮಂತ್‌ ಸೊರೆನ್ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.

    ಇಡಿ ಕಳುಹಿಸಿದ ಕಳೆದ 7 ಸಮನ್ಸ್‌ಗಳಿಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಗೈರುಹಾಜರಾಗಿದ್ದರು, ಈ ಸಮನ್ಸ್‌ಗಳು ಅಸಂವಿಧಾನಿಕ ಮತ್ತು ತಮ್ಮ ಸರ್ಕಾರಕ್ಕೆ ಕಿರುಕುಳ ನೀಡಲು ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದರು.