Tag: ಜಲಾಶಯ

  • ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿ ಜಲಸಮಾಧಿ!

    ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿ ಜಲಸಮಾಧಿ!

    ಚಾಮರಾಜನಗರ: ನೀರಿನಲ್ಲಿ ಮುಳುಗುತ್ತಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಯುವತಿಯೊಬ್ಬಳು ಜಲ ಸಮಾಧಿಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಯರಂಬಾಡಿ ಜಲಾಶಯದಲ್ಲಿ ನಡೆದಿದೆ.

    ನಿಖಿತಾ ಸ್ನೇಹಿತೆಯನ್ನು ರಕ್ಷಿಸಲು ಹೋಗಿ ಜಲಸಮಾಧಿಯಾದ ಯುವತಿ. ಮೂಲತಃ ಬೆಂಗಳೂರಿನವರಾಗಿದ್ದು, ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದ ವೇಳೆ ಈ ಘಟನೆ ಸಂಭವಿಸಿದೆ. ನಿಖಿತಾ ಸ್ನೇಹಿತೆ ಕಾಲು ಜಾರಿಗೆ ಜಲಾಶಯಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲಿ ಇದ್ದ ನಿಖಿತಾ ನೀರಿಗೆ ಧುಮುಕಿ ತನ್ನ ಸ್ನೇಹಿತೆಯನ್ನು ಪಾರು ಮಾಡಲು ಯತ್ನಿಸಿದ್ದಾರೆ.

    ಈ ವೇಳೆ ದುರಾದೃಷ್ಟವಶಾತ್ ಡ್ಯಾಂ ನಲ್ಲಿ ಸುಳಿ ಇದ್ದ ಕಾರಣ ನಿಖಿತಾ ನೀರಿನಲ್ಲಿ ಜಲ ಸಮಾಧಿಯಾಗಿದ್ದು, ಕೂಡಲೇ ಸ್ನೇಹಿತೆ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ನಿಖಿತಾ ಸ್ನೇಹಿತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದಿದ್ದು, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಬಗ್ಗೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭಾರೀ ಮಳೆಗೆ ಚಿಕ್ಕಬಳ್ಳಾಪುರ ಶ್ರೀನಿವಾಸ ಜಲಾಶಯ ಭರ್ತಿ

    ಭಾರೀ ಮಳೆಗೆ ಚಿಕ್ಕಬಳ್ಳಾಪುರ ಶ್ರೀನಿವಾಸ ಜಲಾಶಯ ಭರ್ತಿ

    ಚಿಕ್ಕಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಭರ್ತಿಯಾಗಿದೆ.

    ಜಕ್ಕಲಮಡುಗು ಜಲಾಶಯ ಕೋಡಿ ಹರಿದ ಬೆನ್ನಲ್ಲೇ, ಶುಕ್ರವಾರ ಶ್ರೀನಿವಾಸ ಜಲಾಶಯ ಕೋಡಿ ಹರಿಯಲು ಆರಂಭಿಸಿದ್ದು ಕೋಡಿ ಹರಿಯೋದನ್ನ ನೋಡಲು ಜನಸಾಗರವೇ ಜಲಾಶಯದತ್ತ ಭೇಟಿ ನೀಡುತ್ತಿದ್ದಾರೆ.

    ಕೋಡಿ ಹರಿಯುತ್ತಿರುವ ಜಲಾಶಯದ ಕೆಳ ಭಾಗದಲ್ಲಿ ಮೀನು ಕ್ಯಾಚ್ ಹಿಡಿದುಕೊಳ್ಳೋಕೆ ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಕೋಡಿ ಹರಿಯುವ ನೀರಿನ ಜೊತೆ ಮೀನುಗಳು ಸಹ ಹರಿದುಬರುತ್ತಿದ್ದು ಕೈಗೆ ಸಿಗದ ಮೀನುಗಳಿಗಾಗಿ ಜನ ಒಂದಲ್ಲ ಒಂದು ರೀತಿಯ ಪಡಿಪಾಟಲು ಪಡ್ತಾ ಮೀನುಗಳನ್ನ ಸೆರೆ ಹಿಡಿದುಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಮೀನು ಸಿಕ್ಕವರಿಗೆ ಅಂತೂ ಖುಷಿಯೋ ಖುಷಿಯಾಗಿದೆ.

    ಇನ್ನೂ ಚಿಂತಾಮಣಿ ತಾಲೂಕಿನಾದ್ಯಾಂತ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿ ಚೊಕ್ಕಹಳ್ಳಿ, ಕಾಗತಿ ಗ್ರಾಮಗಳಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗಿದೆ.

    ಮತ್ತೊಂದೆಡೆ ಚಿಂತಾಮಣಿಯ ಕರಿಯಪ್ಪಲ್ಲಿ ಬಳಿಯ ಅಗ್ನಿಶಾಮಕ ದಳ ಕಚೇರಿಗೂ ಮಳೆಯ ನೀರು ನುಗ್ಗಿ ನಿಂತಿದ್ದ ಅಗ್ನಿಶಾಮಕ ದಳ ಲಾರಿ ಮಣ್ಣಿನಲ್ಲಿ ಕುಸಿದು ಹೋಗಿದೆ. ಇನ್ನೂ ಮುರಗಮಲ್ಲ ಹೊರ ಪೊಲೀಸ್ ಠಾಣೆಯ ಕಟ್ಟಡ ಕುಸಿದುಬಿದ್ದಿದೆ. ಮುರಗಮಲ್ಲ-ಚಿಂತಾಮಣಿ ರಸ್ತೆಯಲ್ಲಿ ಖಾಸಗಿ ಬಸ್ಸೊಂದು ರಸ್ತೆ ಬದಿ ಮಣ್ಣಿನಲ್ಲಿ ಕುಸಿದಿದೆ.

     


  • ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಕೆಆರ್‍ಎಸ್ ಒಳ ಹರಿವು ಹೆಚ್ಚಳ: ಡ್ಯಾಂನಲ್ಲಿ ನೀರು ಎಷ್ಟಿದೆ?

    ಮಂಡ್ಯ: ಕಾವೇರಿ ಕೊಳ್ಳದ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಶ್ರೀರಂಗ ಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದಲ್ಲಿ ಒಳಹರಿವು ಹೆಚ್ಚಳವಾಗುತ್ತಿದೆ.

    ಈಗ 1262 ಕ್ಯೂಸೆಕ್ ಒಳಹರಿವು ಇದ್ದು, 1076 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 124.80 ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ 67.90 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

    ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

     

  • ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: ನಿನ್ನೆ ಎಷ್ಟು ಇತ್ತು ,ಈಗ ಎಷ್ಟಾಗಿದೆ?

    ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳ: ನಿನ್ನೆ ಎಷ್ಟು ಇತ್ತು ,ಈಗ ಎಷ್ಟಾಗಿದೆ?

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಮಂಡ್ಯ ಜಿಲ್ಲೆಯ ವಿಶ್ವವಿಖ್ಯಾತ ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ,

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಡ್ಯಾಂಗೆ ಒಳಹರಿವು ಹೆಚ್ಚಳವಾಗಿದೆ. ಬುಧವಾರ 601 ಕ್ಯೂಸೆಕ್ ಇದ್ದ ಒಳಹರಿವು, ಗುರುವಾರ 1135 ಕ್ಯೂಸೆಕ್‍ಗೆ ಹೆಚ್ಚಳವಾಗಿದೆ. ಅಣೆಕಟ್ಟೆಯ ನೀರು ಸಂಗ್ರಹ ಗರಿಷ್ಠ ಮಟ್ಟ 124.80 ಅಡಿ ಇದೆ. ಪ್ರಸ್ತುತ ಡ್ಯಾಂನಲ್ಲಿರುವ ನೀರು ಸಂಗ್ರಹ ಪ್ರಮಾಣ 67.60 ಅಡಿಗೆ ಏರಿಕೆಯಾಗಿದೆ.

    ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
    ಕ್ಯೂಸೆಕ್ ಎಂಬುದು cubic foot per second ಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

  • ಮಾಸ್ತಿಗುಡಿ ದುರಂತದ ಬಳಿಕ ಭಯದ ವಾತಾವರಣ- ತಿಪ್ಪಗೊಂಡನಹಳ್ಳಿಯಲ್ಲಿ ಜನರ ವಿಚಿತ್ರ ಆತಂಕ

    ಮಾಸ್ತಿಗುಡಿ ದುರಂತದ ಬಳಿಕ ಭಯದ ವಾತಾವರಣ- ತಿಪ್ಪಗೊಂಡನಹಳ್ಳಿಯಲ್ಲಿ ಜನರ ವಿಚಿತ್ರ ಆತಂಕ

    ಬೆಂಗಳೂರು: ಮಾಸ್ತಿಗುಡಿ ದುರಂತದ ತಿಪ್ಪಗೊಂಡನಹಳ್ಳಿ ಈಗ ಭಯದ ಸ್ಥಳವಾಗಿ ಮಾರ್ಪಡಾಗಿದೆ. ಅನಿಲ್ ಹಾಗೂ ಉದಯ್ ಸಾವಿನ ಕ್ಷಣವನ್ನು ಕಣ್ಣಾರೆ ಕಂಡ ಊರಿನವರು ತಿಪ್ಪಗೊಂಡನಹಳ್ಳಿಯತ್ತ ಸುಳಿಯೋದಕ್ಕೂ ಭಯಪಡುತ್ತಿದ್ದಾರೆ.

    ಮಾಸ್ತಿಗುಡಿ ದುರಂತದ ಕಹಿ ನೆನಪು ಇನ್ನೂ ಕಣ್ಣಮುಂದಿದೆ. ಸಾವಿನ ಕೊನೆ ಕ್ಷಣವನ್ನು ಟಿವಿಯಲ್ಲಿ ಕಣ್ತುಂಬಿಕೊಂಡ ಜನ ಕೂಡ ಕಣ್ಣೀರು ಹಾಕಿದ್ರು. ಈ ಘೋರ ಘಟನೆಗೆ ಕಾರಣವಾದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಈಗ ಅಕ್ಷರಶಃ ಸ್ಮಶಾನ ಮೌನ. ವಿಚಿತ್ರ ಅಂದ್ರೆ ಊರಿನ ಜನ ಅನಿಲ್ ಉದಯ್ ದೆವ್ವವಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ಆಗಾಗ ಸದ್ದು ಕೇಳುತ್ತದೆ ಅಂತಾ ಭಯ ಬಿದ್ದಿದ್ದಾರೆ. ತಿಪ್ಪಗೊಂಡನಹಳ್ಳಿ ಸುತ್ತಮುತ್ತದ ಊರಿನ ಜನ ಯಾರೂ ಜಲಾಶಯದತ್ತ ಸುಳಿಯುತ್ತಿಲ್ಲ. ಅಲ್ಲದೇ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಪಾರ್ಟಿಗಳು ಕೂಡ ಸಂಪೂರ್ಣ ಬಂದ್ ಆಗಿದೆ.

    ಈ ಹಿಂದೆ ಕುರಿ ಕಾಯುವವರು ಹಾಗೂ ದನ ಮೇಯಿಸೋಕೆ ಅಂತ ಜಲಾಶಯದ ಸುತ್ತಮುತ್ತ ಬರುತ್ತಿದ್ದ ಜನ ಈ ದುರ್ಘಟನೆಯ ಬಳಿಕ ಜಲಾಶಯದ ಬಳಿ ಬರೋದು ನಿಲ್ಲಿಸಿದ್ದಾರೆ ಅಂತಾರೆ ಮೀನುಗಾರರು. ತಿಪ್ಪಗೊಂಡನಹಳ್ಳಿ ಸುತ್ತಮುತ್ತಲಿನ ಊರಿನ ಜನ ಈ ದೆವ್ವದ ಕಥೆಗೆ ಭಯ ಬಿದ್ದು ಜಲಾಶಯದ ಬಳಿ ಸುಳಿಯೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ನಮಗೆ ಅಂತಹ ಅನುಭವವಾಗಿಲ್ಲ ಅನ್ನೋದು ಮೀನುಗಾರರ ಮಾತು.

  • ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಯಲಿಗೆ ಬರುತ್ತಿವೆ ತುಂಗಭದ್ರಾ ಜಲಾಶಯದಲ್ಲಿನ ಮೊಸಳೆಗಳು!

    ಬಳ್ಳಾರಿ: ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ದಿನೇ ದಿನೇ ತಳ ಮುಟ್ಟುತ್ತಿದೆ. 100 ಟಿಎಂಸಿ ಸಾಮಥ್ರ್ಯದ ಜಲಾಶಯದಲ್ಲೀಗ ಕೇವಲ 4 ಟಿಎಂಸಿ ನೀರು ಮಾತ್ರ ಬಾಕಿ ಉಳಿದಿದ್ದು, ಡ್ಯಾಂನಲ್ಲಿದ್ದ ಮೊಸಳೆಗಳು ಬಯಲಿಗೆ ಬರುತ್ತಿವೆ.

    ಟಿಬಿ ಡ್ಯಾಂನಲ್ಲಿ ಹತ್ತಕ್ಕೂ ಹೆಚ್ಚು ಮೊಸಳೆಗಳಿವೆ. ಡ್ಯಾಂನಲ್ಲಿ ನೀರಿನ ಮಟ್ಟ ಕಡಿಮೆಯಾದ ಪರಿಣಾಮ ಜಲಾಶಯದಲ್ಲಿನ ಮೊಸಳೆಗಳು ಇದೀಗ ಒಂದೊಂದಾಗಿ ನೀರಿನಿಂದ ಹೊರಬರುತ್ತಿವೆ. ಇದು ಡ್ಯಾಂ ನೋಡಲು ಆಗಮಿಸುವ ಪ್ರವಾಸಿಗರಲ್ಲಿ ಭಯ ಮೂಡಿಸಿದೆ.

    ಮೊಸಳೆಗಳು ನೀರಿನಿಂದ ಹೊರಗೆ ಬರುತ್ತಿರುವ ಪರಿಣಾಮ ಅನಾಹುತವಾಗುವ ಮುನ್ನವೇ ಟಿಬಿ ಬೋರ್ಡ್ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆಗಳನ್ನು ಬೇರೆಡೆ ಸಾಗಿಸಬೇಕಾಗಿದೆ. ಡ್ಯಾಂನಲ್ಲಿ ಡೆಡ್ ಸ್ಟೋರೇಜ್ ನೀರು ಬಾಕಿಯಿರುವ ಪರಿಣಾಮ ಮೊಸಳೆಗಳಿಗೆ ಆಹಾರ ಸಿಗದೆ ನೀರಿನಿಂದ ಹೊರಬರುತ್ತಿವೆ ಎನ್ನಲಾಗಿದೆ. ಆದ್ರೆ ಅಧಿಕಾರಿಗಳು ಅನಾಹುತವಾಗುವ ಮುನ್ನವೇ ಕ್ರಮ ಕೈಗೊಳ್ಳಬೇಕಾಗಿರುವುದು ಅವಶ್ಯವಾಗಿದೆ.