Tag: ಜರ್ಸಿ

  • ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೇನೆ : ಜೆರ್ಸಿ ಹೀರೋ ಶಾಹೀದ್

    ಶಾಲಾ ದಿನಗಳಲ್ಲಿ ಕಿರುಕುಳ ಅನುಭವಿಸಿದ್ದೇನೆ : ಜೆರ್ಸಿ ಹೀರೋ ಶಾಹೀದ್

    ನಿನ್ನೆಯಷ್ಟೇ ತಮ್ಮ ಕಿರಿವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕುರಿತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಾತನಾಡಿದ್ದರು. ತಮ್ಮ ಹನ್ನೊಂದನೇ ವಯಸ್ಸಿನಲ್ಲೇ ತಮ್ಮ ಬಟ್ಟೆ ಬಿಚ್ಚಿಸಲಾಗುತ್ತಿತ್ತು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಸುದ್ದಿಯ ಬೆನ್ನಲ್ಲೇ ಶಾಹೀದ್ ಕಪೂರ್ ಕೂಡ ತಮಗಾದ ಕಿರುಕುಳದ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

    ಶಾಹೀದ್ ಕಪೂರ್ ನಟನೆಯ ಜರ್ಸಿ ಸಿನಿಮಾ ರಿಲೀಸ್ ಆಗಿ, ತಕ್ಕ ಮಟ್ಟಿಗೆ ಬಾಕ್ಸ್ ಆಫೀಸ್‍ ನಲ್ಲಿ ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಶಾಹೀದ್ ತಮಗಾದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಹೀಗಾಗಿ ತಮ್ಮ ಶಾಲಾ ದಿನಗಳ ಬಗ್ಗೆ ನೆನಪಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

    ಪ್ರಾಥಮಿಕ ಶಾಲೆಯನ್ನು ಶಾಹೀದ್ ಓದಿದ್ದು ಮುಂಬೈನಲ್ಲಿ ಆಗ ಶಾಲೆಯಲ್ಲಿ ನಿತ್ಯ ಕಿರುಕುಳವನ್ನು ಅವರು ಅನುಭವಿಸುತ್ತಿದ್ದರಂತೆ. ಆ ದಿನಗಳು ಮತ್ತೆಂದೂ ನನ್ನ ಜೀವನದಲ್ಲಿ ಬರಲಿಲ್ಲ. ಬರಬಾರದು ಅಂದುಕೊಂಡೇ ಬದುಕಿದೆ. ಮುಂದೆ ದೆಹಲಿಯಲ್ಲಿ ಕಾಲೇಜು ಓದಿದೆ. ಅವು ನನ್ನ ಗೋಲ್ಡನ್ ದಿನಗಳು ಎಂದು ನೆನಪಿಸಿಕೊಂಡಿದ್ದಾರೆ ಶಾಹೀದ್. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

    ಶಾಹೀದ್ ಕಪೂರ್ ಯಾವತ್ತಿಗೂ ಬೋಲ್ಡ್ ಆಗಿಯೇ ಮಾತನಾಡುವಂತಹ ವ್ಯಕ್ತಿ. ಸಿನಿಮಾಗಳು ಸೋತಾಗಲೂ ಅವರು ಅದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಶಾಹೀದ್ ಆಡಿದ ಮಾತುಗಳು ಬಾಲಿವುಡ್ ನಲ್ಲಿ ಚರ್ಚೆಗೆ ಕಾರಣವಾಗಿವೆ. ಅವರಿಗೆ ಆದ ಕಿರುಕುಳದ ಬಗ್ಗೆ ಸಾಂತ್ವಾನದ ಮಾತುಗಳು ಕೇಳಿ ಬಂದಿವೆ.

  • ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಪಾಕ್ ಕ್ರಿಕೆಟರ್ ಬ್ಯಾಟನ್ನು 7 ಕೋಟಿಗೆ ಖರೀದಿಸಿದ ಪುಣೆ ಸಂಸ್ಥೆ

    ಇಸ್ಲಾಮಾಬಾದ್: ಕೋವಿಡ್-19 ವೈರಸ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಹಣ ಸಂಗ್ರಹಿಸಲು ಪಾಕಿಸ್ತಾನ ಟೆಸ್ಟ್ ನಾಯಕ ಅಜರ್ ಅಲಿ ಅವರು ಹರಾಜಿಗೆ ಇಟ್ಟಿದ್ದ ಬ್ಯಾಟ್ ಅನ್ನು ಪುಣೆ ಸಂಸ್ಥೆಯೊಂದು 8 ಕೋಟಿ ರೂ.ಗೆ ಖರೀದಿಸಿದೆ.

    ಅಜರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 302 ರನ್ ಗಳಿಸಲು ಬಳಸಿದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯನ್ನು ಆನ್‍ಲೈನ್‍ನಲ್ಲಿ ಹರಾಜಿಗೆ ಇಟ್ಟಿದ್ದರು. ಈ ಮೂಲಕ ಹಣವನ್ನು ಸಂಗ್ರಹಿಸಿ ಹೆಮ್ಮಾರಿ ಕೊರೊನಾ ವಿರುದ್ಧ ಹೋರಾಡುತ್ತಿರುವವರ ಸಹಾಯಕ್ಕೆ ಮುಂದಾಗಿದ್ದರು.

    ಪಾಕ್ ಆಟಗಾರ ಅಜರ್ ಅಲಿ ಅವರು ಬ್ಯಾಟ್ ಮತ್ತು ಜರ್ಸಿ ಎರಡಕ್ಕೂ ಪಾಕಿಸ್ತಾನ ತಂಡದ ಆಟಗಾರರ ಆಟೋಗ್ರಾಫ್ ಹಾಕಿಸಿದ್ದರು. ಬ್ಯಾಟ್ ಜರ್ಸಿಗಾಗಿ ತಲಾ 10 ಲಕ್ಷ ಪಾಕಿಸ್ತಾನ ರೂ. ಮೂಲ ಬೆಲೆಯನ್ನು ನಿಗಧಿಪಡಿಸಿದ್ದರು.

    ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ ಬ್ಯಾಟ್‍ಗೆ 7 ಕೋಟಿ ರೂ. ನೀಡುವ ಮೂಲಕ ಖರೀದಿಸಿದೆ. ಶರ್ಟ್ ಹರಾಜು ಕೂಡ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕಿದೆ. ಕ್ಯಾಲಿಫೋರ್ನಿಯಾ ಮೂಲದ ಪಾಕಿಸ್ತಾನಿ ಕಾಶ್ ವಿಲ್ಲಾನಿ ಹರಾಜು ಮುಗಿಯುವ ಮುನ್ನ ಶರ್ಟ್ ಗಾಗಿ ಅತಿ ಹೆಚ್ಚು 8.30 ಕೋಟಿ ರೂ. ಬಿಡ್‍ನೊಂದಿಗೆ ಖರೀದಿಸಿದೆ.

    ಕೊರೊನಾ ವೈರಸ್ ವಿರುದ್ಧದ ಅಜರ್ ಅಲಿ ಹೋರಾಟಕ್ಕೆ ನ್ಯೂಜೆರ್ಸಿಯಲ್ಲಿರುವ ಪಾಕಿಸ್ತಾನದ ಜಮಾಲ್ ಖಾನ್ ಕೂಡ ಸಾಥ್ ನೀಡಿದ್ದಾರೆ. ಅವರು 1,00,000 ರೂ. ದೇಣಿಗೆ ನೀಡಿದ್ದಾರೆ.

    ಈ ಹಿಂದೆ ಟ್ವೀಟ್ ಮಾಡಿದ್ದ ಅಜರ್ ಅಲಿ, ಈ ಬ್ಯಾಟ್ ಮತ್ತು ಜರ್ಸಿ ನನ್ನ ಅತ್ಯಂತ ಪ್ರಿಯ ವಸ್ತುಗಳು. ಆದರೆ ಕಷ್ಟದ ಸಮಯದಲ್ಲಿ ಇವುಗಳನ್ನು ಜನರ ಅನುಕೂಲಕ್ಕಾಗಿ ಬಳಸಲು ಖುಷಿಯಾಗುತ್ತದೆ. ಇವೆರಡನ್ನೂ ಹರಾಜಿಗಿಟ್ಟು ಬಂದ ಹಣವನ್ನು ಕೊರೊನಾ ವೈರಸ್ ಸಂತ್ರಸ್ತರಿಗೆ ನೀಡಿಲು ನಿರ್ಧಸಿದ್ದೇನೆ. ಪ್ರತಿಯೊಂದರ ಮೂಲ ಬೆಲೆ 10 ಲಕ್ಷ ಪಾಕಿಸ್ತಾನ ರೂಪಾಯಿಗಳು. ಮೇ 5ರ ವರಗೂ ಹರಾಜು ಅವಧಿ ಇದೆ ಎಂದು ತಿಳಿಸಿದ್ದರು.

    2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜರ್ ಅಲಿ 59 ರನ್ ಗಳಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ 2016ರಲ್ಲಿ ಯುಎಇಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಜೇಯ 302 ರನ್ ಗಳಿಸಿದ್ದರು. ಈ ಮೂಲಕ ಡೇ-ನೈಟ್ ಟೆಸ್ಟ್ ಕ್ರಿಕೆಟ್‍ನಲ್ಲಿ ತ್ರಿಶತಕ ಗಳಿಸಿದ ಮೊದಲ ಅಂತಾರಾಷ್ಟ್ರೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

  • ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ  ಹಿಂದಿದೆ ಕಥೆ

    ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ ಹಿಂದಿದೆ ಕಥೆ

    ಬೆಂಗಳೂರು: ನಾವು ಕ್ರಿಕೆಟ್ ಅಭಿಮಾನಿಗಳು. ಅದರಲ್ಲೂ ಟೀಂ ಇಂಡಿಯಾ ಮ್ಯಾಚ್ ಇದ್ರೆ ಸಾಕು ಎಷ್ಟೇ ಕೆಲಸ ಇದ್ದರೂ ಕೊಂಚ ಬಿಡುವು ಮಾಡಿಕೊಂಡು ಮ್ಯಾಚ್ ನೋಡುತ್ತೇವೆ. ಆದರೆ ಕೆಲವರಿಗೆ ಕೆಲವು ವಿಚಾರಗಳೇ ಗೊತ್ತಿರುವುದಿಲ್ಲ.

    ಟೀಂ ಇಂಡಿಯಾ ಆಟಗಾರರ ಜರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇರುತ್ತದೆ. ಅದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಮೇಲೆ ಮೂರು ಸ್ಟಾರ್‌ಗಳೂ ಇರುತ್ತವೆ. ಆದರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿಯ ಮೇಲೆ ಎರಡು ಸ್ಟಾರ್ ಮಾತ್ರ ಇದ್ವು. ಹಾಗಾದ್ರೆ ಈ ಸ್ಟಾರ್‌ಗಳು ಏನನ್ನ ಪ್ರತಿನಿಧಿಸುತ್ತವೆ? ಯಾರು ನೀಡುತ್ತಾರೆ ಗೊತ್ತಾ?

    ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ನಡೆಸುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೆಸ್ಟ್ ವರ್ಲ್ಡ್ ಚಾಂಪಿಯನ್‍ಶಿಪ್ ಕೂಡ ಆರಂಭಿಸಿದೆ. ಈ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದುಗೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಅದಾದ 28 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ 2007ರಲ್ಲಿ ಐಸಿಸಿ ಆರಂಭಿಸಿದ್ದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಭಾರತ ಧೋನಿ ನಾಯಕತ್ವದಲ್ಲಿ ತನ್ನ ಮುಡಿಗೆ ಏರಿಸಿಕೊಂಡಿತ್ತು.

    ಇದನ್ನೆಲ್ಲ ಯಾಕೆ ತಿಳಿಯಬೇಕು ಗೊತ್ತಾ? ಟೀಂ ಇಂಡಿಯಾ ಜರ್ಸಿ ಮೇಲೆ ಇರುವ ಸ್ಟಾರ್ ಗಳಿಗೂ ವಿಶ್ವಕಪ್ ಚಾಂಪಿಯನ್‍ಶಿಪ್‍ಗೂ ನಂಟಿದೆ. ಹೌದು, ಐಸಿಸಿ ನಡೆಸುವ ಎರಡು ಮಾದರಿಯ ವಿಶ್ವಕಪ್‍ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಚಾಂಪಿಯನ್‍ಶಿಪ್ ಆಗಿದೆ. ಹೀಗಾಗಿ ಮೂರು ಸ್ಟಾರ್‌ಗಳು ಟೀಂ ಇಂಡಿಯಾ ಜರ್ಸಿ ಮೇಲಿವೆ.

    ಹಾಗಾದ್ರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರರು ಎರಡು ಸ್ಟಾರ್‌ಗಳಿರುವ ಜರ್ಸಿಯನ್ನು ಧರಿಸಿದ್ದು ಯಾಕೆ ಗೊತ್ತಾ? ಟೀಂ ಇಂಡಿಯಾ ಇದುವೆರೆಗೂ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರರು ಎರಡು ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಇದೇ ಸಮಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆಟಗಾರರು 5 ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಎರಡು ಬಾರಿ ಚಾಂಪಿಯನ್ ಗರಿಮೆ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು 2 ಸ್ಟಾರ್ ಹಾಗೂ ತಲಾ ಒಂದು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜರ್ಸಿ ಧರಿಸಿದ್ದರು.

  • ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಲಂಡನ್: ವಿಶ್ವಕಪ್‍ನಲ್ಲಿ ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಕಿತ್ತಳೆ ಬಣ್ಣದ ಜರ್ಸಿ ತೊಟ್ಟು ಆಡಲಿದೆ.

    ಹೊಸ ಜರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಜರ್ಸಿ ತೊಟ್ಟು ಆಟಗಾರು ಪೋಸ್ ನೀಡಿರುವ ಫೋಟೋಗಳು ತುಂಬಾ ವೈರಲ್ ಆಗಿವೆ.

    ಹೊಸ ಜರ್ಸಿತೊಟ್ಟ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು “ಹೊಸ ಜರ್ಸಿಯಲ್ಲಿ ಮಿಂಚಲು ಸಿದ್ಧ” ಎಂದು ಬರೆದಿದ್ದಾರೆ. ಇನ್ನೂ ಕೆ.ಎಲ್ ರಾಹುಲ್ ಜೊತೆ ಹಿಮ್ಮುಖವಾಗಿ ಪೋಸ್ ನೀಡಿ ಫೋಟೋ ಹಾಕಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಹೊಸ ಜರ್ಸಿಯಲ್ಲಿ ಮುಂದಿನ ಪಂದ್ಯಕ್ಕೆ ರೆಡಿ ಎಂದು ಬರೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಬೌಲರ್ ಭುವನೇಶ್ವರ್ ಕುಮಾರ್, ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವರ ಫೋಟೋವನ್ನು ಬಿಸಿಸಿಐ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ. ಅದರಂತೆ ಐಸಿಸಿ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವಿಶೇಷ ಸಮಯದಲ್ಲಿ ವಿಶೇಷ ಜರ್ಸಿ, ಇಂಡಿಯಾ ಈ ಜರ್ಸಿಯನ್ನು ಧರಿಸಿ ಇಂಗ್ಲೆಂಡ್ ವಿರುದ್ಧ ಆಡಲಿದೆ ಎಂದು ಬರೆದುಕೊಂಡಿದೆ.

    https://www.instagram.com/p/BzQzO8EArLx/

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

    ವಿಪಕ್ಷಗಳಿಂದ ಟೀಕೆ:
    ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದೆ. ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯ ವಿಶೇಷತೆಗಳೇನು ಗೊತ್ತಾ?

    ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯ ವಿಶೇಷತೆಗಳೇನು ಗೊತ್ತಾ?

    ಮುಂಬೈ: 2019 ಐಸಿಸಿ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಹೊಸ ವಿನ್ಯಾಸದ ಆಟಗಾರರ ಜರ್ಸಿಯನ್ನು ರಿವೀಲ್ ಮಾಡಿದ್ದು, ತಂಡದ ಆಟಗಾರರು ಜೆರ್ಸಿಯನ್ನು ತೊಟ್ಟು ಪೋಸ್ ಕೊಟ್ಟಿದ್ದಾರೆ.

    ಜೆರ್ಸಿಯಲ್ಲಿ ಮೂರು ವಿಶೇಷ ಸ್ಟಾರ್ ಗಳನ್ನು ನೀಡಲಾಗಿದ್ದು, ಇವು ಭಾರತ ಗೆದ್ದಿರುವ ವಿಶ್ವಕಪ್‍ಗಳ ಸಂಕೇತಗಳಿದೆ. ಜೆರ್ಸಿಯ ಹಿಂದಿನ ಒಳಭಾಗದಲ್ಲಿ ಮೂರು ವಿಶ್ವಕಪ್ ಬಗ್ಗೆ ಮಾಹಿತಿ ಪ್ರಿಂಟ್ ಮಾಡಲಾಗಿದೆ. ಇದರಲ್ಲಿ ವಿಶ್ವಕಪ್ ಗೆದ್ದ ದಿನಾಂಕ ಹಾಗೂ ಸ್ಕೋರ್ ವಿವರಗಳನ್ನು ನೀಡಲಾಗಿದೆ.

    ಜೆರ್ಸಿಯ ಭುಜದ ಭಾಗ ಸ್ಕೈ ಬ್ಲೂ ಬಣ್ಣದಿಂದ ಕೂಡಿದ್ದರೆ, ಎದೆ ಭಾಗ ಡಾರ್ಕ್ ಸ್ಕೈ ಬ್ಲೂ ಬಣ್ಣ ಹೊಂದಿದೆ. ಆದರೆ ಈ ಹಿಂದೆ ಜೆರ್ಸಿ ಮೇಲಿದ್ದ ತ್ರಿವರ್ಣ ಧ್ವಜದ ಚಿಹ್ನೆಯನ್ನು ಕೈ ಬಿಡಲಾಗಿದೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಧೋನಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಜೆರ್ಸಿಯನ್ನು ಅನಾವರಣ ಮಾಡಿದ್ದಾರೆ. ವಿಶೇಷವೆಂದರೆ 1983, 2011 ಏಕದಿನ ವಿಶ್ವಕಪ್ ಹಾಗೂ 2007ರ ಟಿ20 ವಿಶ್ವಕಪ್ ವೇಳೆ ಧರಿಸಿದ್ದ ಜೆರ್ಸಿಯ ಎಲ್ಲಾ ಬಣ್ಣಗಳನ್ನು ಈ ಭಾರಿ ವಿನ್ಯಾಸ ಮಾಡಲಾಗಿದೆ. ಇದು ತಂಡಕ್ಕೆ ಪ್ರೇರಣೆ ಆಗಲಿದೆ ಎಂದು ಮಾಜಿ ನಾಯಕ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

    ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿ ಟೀಂ ಇಂಡಿಯಾ ಇದ್ದು, ಆಸೀಸ್ ವಿರುದ್ಧ ಏಕದಿನ ಸರಣಿ ತಂಡ ಕಂಬಿನೇಷನ್ ರೂಪಿಸಲು ಸಹಾಯಕವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

    ಇತ್ತೀಷೆಗಷ್ಟೇ ಮುಕ್ತಾಯವಾದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋತಿದ್ದು, ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವಕಪ್ ಟೂರ್ನಿಗೆ ವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಭಾರತ ತನ್ನ ವಿಶ್ವಕಪ್ ಜರ್ನಿಯನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಹಮದಾಬಾದ್: ಜೂನ್ ಒಂದರಿಂದ ಇಂಗ್ಲೆಂಡಿನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಮುಲ್ ಜರ್ಸಿಯನ್ನು ತೊಟ್ಟು ಕಣಕ್ಕೆ ಇಳಿಯಲಿದೆ.

    ವಾರ್ಷಿಕ 27 ಸಾವಿರ ಕೋಟಿ ರೂ. ವ್ಯವಹಾರ ನಡೆಸಿ ಏಷ್ಯಾದ ಅತಿ ದೊಡ್ಡ ಹಾಲು ಉತ್ಪಾದಕ ಬ್ರಾಂಡ್ ಕಂಪೆನಿಯಾಗಿ ಹೊರ ಹೊಮ್ಮಿರುವ ಅಮುಲ್ ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜರ್ಸಿ ಮತ್ತು ಕಿಟ್ ಬ್ಯಾಗಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

    ವಿಶ್ವ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೇ 28ರಂದು ಭಾರತದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

    ಈ ಹಿಂದೆ ಅಮೂಲ್ ವಿಶ್ವಕಪ್ ಕ್ರಿಕೆಟ್ ನಲ್ಲಿ ಹಾಲೆಂಡ್ ಕ್ರಿಕೆಟ್ ತಂಡ, ಸ್ವಿಜರ್‍ಲ್ಯಾಂಡ್ ಗ್ರಾಂಡ್ ಪ್ರಿಕ್ಸ್, ಮತ್ತು 2011ರಲ್ಲಿ ಭಾರತದಲ್ಲಿ ನಡೆದ ಆರಂಭಿಕ ಗ್ರಾಂಡ್ ಪ್ರಿಕ್ಸ್ ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.

    ಭಾರತಕ್ಕೆ ಒಪೊ ಪ್ರಾಯೋಜಕತ್ವ:
    ಚೀನಾದ ಮೊಬೈಲ್ ಒಪೊ ಕಂಪೆನಿಯ ಜರ್ಸಿಯನ್ನು ತೊಟ್ಟು ಟೀಂ ಇಂಡಿಯಾದ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಒಪೊ ಜೊತೆಗೆ ಬಿಸಿಸಿಐ 5 ವರ್ಷದ ಅವಧಿಗೆ ಒಟ್ಟು 1,079 ಕೋಟಿ ಮೊತ್ತದ ಪ್ರಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದ ಏ.1  ರಿಂದಲೇ ಅನ್ವಯವಾಗಲಿದೆ.