Tag: ಜರ್ಖಂಡ್

  • 55 ಸಾವಿರ ರೂ.ಗೆ ಖರೀದಿಸಿ, 13ರ ಬಾಲಕಿ ಮೇಲೆ ನಿರಂತರ ಅತ್ಯಾಚಾರ – ಓರ್ವ ಅರೆಸ್ಟ್

    ಜೈಪುರ: ಮಹಿಳೆಯೊಬ್ಬಳು (Women) 55 ಸಾವಿರ ರೂ.ಗೆ ಬಾಲಕಿಯನ್ನು ಖರೀದಿಸಿ ತನ್ನ ಮಗ ಹಾಗೂ ಪತಿಯಿಂದ ನಿರಂತರವಾಗಿ ಅತ್ಯಾಚಾರ ಮಾಡಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ (Jaipur) ನಡೆದಿದೆ.

    ಜಾರ್ಖಂಡ್‌ನ (Jharkhand) 13 ವರ್ಷದ ಬಾಲಕಿ ನಗರದ ಮನಕ್ ಚೌಕ್ ಪೊಲೀಸ್ ಠಾಣೆಗೆ (Manak Chowk Police Station) ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓರ್ವ ಆರೋಪಿಯನ್ನ ಬಂಧಿಸಿದ್ದಾರೆ. ಆರೋಪಿ ವಿಕಾಸ್ ರಾಣಾ (27) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Cyber Crimeː 1 ತಿಂಗಳಲ್ಲಿ 1,228 ಕೇಸ್ – ಪರಿಹರಿಸಲು ಪೊಲೀಸ್ ಸಿಬ್ಬಂದಿ ಕೊರತೆ

    ತನ್ನನ್ನು ಜೈಪುರದಿಂದ 55 ಸಾವಿರ ರೂ.ಗೆ ಖರೀದಿಸಿ ಕರೆತಂದು ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿಸಿದ್ದಾಳೆ ಎಂದು ಬಾಲಕಿ ಆರೋಪಿಸಿದ್ದಾರೆ.

    ಏನಿದು ಘಟನೆ?
    ಸುಮಾರು 2 ತಿಂಗಳಿನಿಂದ ಜಾರ್ಖಂಡ್ ನಗರದಲ್ಲಿ ತರಕಾರಿ ಮಾರಾಟ ಮಾಡಿಕೊಂಡಿದ್ದ ಮಹಿಳೆ ಬಾಲಕಿಯನ್ನ ನೋಡಿದ್ದಾಳೆ. ಈ ವೇಳೆ ಮದುವೆ ಪ್ರಸ್ತಾಪದೊಂದಿಗೆ ಬಾಲಕಿ ಕುಟುಂಬವನ್ನ ಸಂಪರ್ಕಿಸಿದ್ದಾಳೆ. ಬಾಲಕಿ ಮನೆಗೆ ಬಂದು ಜೈಪುರದ ಉತ್ತಮ ಕುಟುಂಬಕ್ಕೆ ನಿಮ್ಮ ಹುಡುಗಿಯನ್ನು ಮದುವೆ ಮಾಡಿಸಿಕೊಡುವುದಾಗಿ ಆಕೆಯ ತಾಯಿ ಹಾಗೂ ಅಜ್ಜಿಗೆ ಹೇಳಿದ್ದಾಳೆ. ಅಲ್ಲದೇ ಹುಡುಗಿಯನ್ನು ತನ್ನೊಂದಿಗೆ ಕಳುಹಿಸಿಕೊಟ್ಟರೆ 55 ಸಾವಿರ ರೂ. ನೀಡುವುದಾಗಿ ಆಸೆ ತೋರಿಸಿದ್ದಾಳೆ. ಇದರಿಂದ ಬಾಲಕಿಯ ಅಜ್ಜಿ ಮರುದಿನವೇ ರೈಲಿನಲ್ಲಿ ಜೈಪುರಕ್ಕೆ ಕರೆತಂದಿದ್ದಾರೆ.

    ನಂತರ ಬಾಲಕಿಯನ್ನು ಮಹಿಳೆಯ ಕುಟುಂಬದೊಂದಿಗೆ ಇರಲು ಬಿಡಲಾಗಿದೆ. ಈ ವೇಳೆ ಖರೀದಿಸಿದ ಮಹಿಳೆ ತನ್ನ ಮಗನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಸಹ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 58ರ ಮಹಿಳೆ ಮೇಲೆ ಅತ್ಯಾಚಾರ ಮಾಡಿ, ಹೊಡೆದು ಸಾಯಿಸಿದ 16ರ ಬಾಲಕ

    ಮನಕ್ ಚೌಕ್ ಪೊಲೀಸ್ ಠಾಣೆಯ ಬಳಿ ಬಾಲಕಿ ಅಳುತ್ತಾ ತಿರುಗಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಆಕೆಯನ್ನ ಪ್ರಶ್ನಿಸಿದ್ದಾರೆ. ನಂತರ ಬಾಲಕಿ ವಿಷಯ ಬಾಯ್ಬಿಟ್ಟಿದ್ದಾಳೆ.

    ಬಾಲಕಿ ನೀಡಿದ ದೂರಿನ ಆಧಾರದ ಮೇರೆಗೆ ಐಪಿಸಿ (IPC) ಹಾಗೂ ಪೋಕ್ಸೊ ಕಾಯ್ದೆಯ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿಕಾಸ್ ರಾಣಾ (27) ನನ್ನ ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಕಿ ಸಿಗಲೆಂದು ಹರಕೆ- ನಾಲಿಗೆಯನ್ನೇ ಕತ್ತರಿಸಿಕೊಂಡ ಮಹಿಳೆ

    ಬಾಲಕಿ ಸಿಗಲೆಂದು ಹರಕೆ- ನಾಲಿಗೆಯನ್ನೇ ಕತ್ತರಿಸಿಕೊಂಡ ಮಹಿಳೆ

    – ಯಾರದ್ದೋ ಮಾತು ಕೇಳಿ ನಾಲಿಗೆ ಕತ್ತರಿಸಿಕೊಂಡಳು

    ರಾಂಚಿ: ಕಾಣೆಯಾಗಿದ್ದ ಸೊಸೆ ಸುರಕ್ಷಿತವಾಗಿ ಮರಳಿ ಮನೆಗೆ ಬರಲೆಂದು ಮಹಿಳೆ ತನ್ನ ನಾಲಿಗೆಯನ್ನೇ ಕತ್ತರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

    ಜಾರ್ಖಂಡ್‍ನ ಸೆರೈಕೇಲಾ-ಖಸ್ರ್ವಾನ್ ನ ಎನ್‍ಐಟಿ ಕ್ಯಾಂಪಸ್ ಬಳಿ ಘಟನೆ ನಡೆದಿದ್ದು, ನಾಲಿಗೆ ಕತ್ತರಿಸಿಕೊಂಡ ಮಹಿಳೆಯನ್ನು ಲಕ್ಷ್ಮಿ ನಿರಾಲಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮಹಿಳೆ ನಾಲಿಗೆ ಕತ್ತರಿಸಿಕೊಂಡಿದ್ದಾಳೆ. ಕಳೆದು ಹೋಗಿರುವ ಸೊಸೆ ಮರಳಿ ಮನೆಗೆ ಬಂದರೆ ನಾಲಿಗೆ ಕತ್ತರಿಸಿ ಹರಕೆ ತೀರಿಸುವುದಾಗಿ ಮಹಿಳೆ ಹರಕೆ ಹೊತ್ತುಕೊಂಡಿದ್ದಾಳೆ.

    ನಾಲಿಗೆ ಕತ್ತರಿಸಿಕೊಂಡ ಬಳಿಕ ಮಹಿಳೆ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದಾಳೆ. ನಂತರ ಸ್ಥಳೀಯರು ಮನವೊಲಿಸಿ ಜೆಮ್‍ಶೆಡ್‍ಪುರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನೆ ಕುರಿತು ಪೊಲೀಸರು ಮಾಹಿತಿ ನೀಡಿ, ಮಹಿಳೆ ಮನೆಗೆಲಸ ಮಾಡುತ್ತಿದ್ದಾರೆ. ಇದೀಗ ಮಹಿಳೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದಾರೆ.

    ಆಗಸ್ಟ್ 14ರಂದು ತನ್ನ ಮಗಳೊಂದಿಗೆ ಆಟವಾಡುತ್ತ, ಮಹಿಳೆಯ ಸೊಸೆ ಜ್ಯೋತಿ ಕಾಣಿಯಾಗಿದ್ದಾಳೆ. ನಂತರ ಲಕ್ಷ್ಮಿ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾಳೆ. ಅಲ್ಲದೆ ಬಾಲಕಿ ಸುರಕ್ಷಿತವಾಗಿ ಮನೆಗೆ ಆಗಮಿಸಿದರೆ ನಾಲಿಗೆ ಕತ್ತಿರಿಸಿಕೊಂಡು ಹರಕೆ ತೀರಿಸುವುದಾಗಿ ಶಿವನ ದೇವಸ್ಥಾನದಲ್ಲಿ ಬೇಡಿಕೊಂಡಿದ್ದಾಳೆ. ಈ ವೇಳೆ ಯಾರೋ ಹೇಳಿದರೆಂದು ಮೂಢನಂಬಿಕೆಯಿಂದ ಬ್ಲೇಡ್‍ನಿಂದ ತನ್ನ ನಾಲಗೆಯನ್ನೇ ಕತ್ತರಿಸಿಕೊಂಡಿದ್ದಾಳೆ.

    ಘಟನೆ ಕುರಿತು ಮಹಿಳೆಯ ಪತಿ ನಂದು ಲಾಲ್ ನಿರಾಲಾ ಮಾಹಿತಿ ನೀಡಿದ್ದು, ಯಾರೋ ಹೇಳಿದರೆಂದು ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ನೀವು ನಾಲಿಗೆ ಕತ್ತರಿಸುವ ಹರಕೆ ಹೊತ್ತರೆ ಜ್ಯೋತಿ ಸಿಗುತ್ತಾಳೆ ಎಂದು ಹೇಳಿದ್ದಾರೆ. ಹೀಗಾಗಿ ಈ ರೀತಿ ಮಾಡಿದ್ದಾಳೆ. ಬಾಲಕಿಗಾಗಿ ಶುಕ್ರವಾರವೆಲ್ಲ ಹುಡುಕಿದೆವು, ಸಿಗಲಿಲ್ಲ. ನಂತರ ನನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಶನಿವಾರ ದೂರು ನೀಡಿದೆವು. ಭಾನುವಾರ ಲಕ್ಷ್ಮಿ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ ಎಂದು ನಂದು ತಿಳಿಸಿದ್ದಾರೆ.