Tag: ಜಯಶ್ರೀ ರಾಮಯ್ಯ

  • ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!

    ತಿಂಗಳ ಹಿಂದೆಯಷ್ಟೇ ವೃದ್ಧಾಶ್ರಮ ಸೇರಿದ್ದ ಜಯಶ್ರೀ!

    ಬೆಂಗಳೂರು: ಹಲವು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳನ್ನಾಡಿದ್ದ ಬಿಗ್ ಬಾಸ್ ಸೀಸನ್ 3ರ ಸ್ಪರ್ಧಿ ಜಯಶ್ರೀ ರಾಮಯ್ಯ ಕೊನೆಗೂ ಸಾವಿನ ಮನೆಯ ಕದ ತಟ್ಟಿದ್ದಾರೆ.

    ಹೌದು. ನಟಿ ಜಯಶ್ರೀ ಅವರು ಮಾಗಡಿ ಮುಖ್ಯರಸ್ತೆಯಲ್ಲಿರುವ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಯಶ್ರೀ ತಿಂಗಳ ಹಿಂದೆ ಅಂದ್ರೆ 2020ರ ಡಿಸೆಂಬರ್ 25ರಂದು ವೃದ್ಧಾಶ್ರಮ ಸೇರಿದ್ದು, ಮಾವ ಗಿರೀಶ್ ದಾಖಲಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಇದೀಗ ನಟಿ ವೃದ್ಧಾಶ್ರಮ ಸೇರಿದ್ದು ಯಾಕೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ನಟಿ ಸಾವಿನ ಹಿಂದೆ ಹಲವು ಅನುಮಾನಗಳು ಎದ್ದಿವೆ.

    ನಿನ್ನೆ ರಾತ್ರಿ ಊಟ ಮುಗಿಸಿ ಜಯಶ್ರೀ ಕೋಣೆ ಸೇರಿದ್ದರು. ನಂತರ ಹೊರಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ ಹಾಗೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಇದೇ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತಾ ಎಂಬ ಅನುಮಾನ ಹುಟ್ಟಿದೆ.

    ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಆತ್ಮಹತ್ಯೆಗೆ ಶರಣು

  • ‘ಈ ಖಿನ್ನತೆ, ಜಗತ್ತಿಗೆ ಗುಡ್ ಬೈ’ – ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಪೋಸ್ಟ್

    ‘ಈ ಖಿನ್ನತೆ, ಜಗತ್ತಿಗೆ ಗುಡ್ ಬೈ’ – ಬಿಗ್‍ಬಾಸ್ ಸ್ಪರ್ಧಿ ಜಯಶ್ರೀ ಪೋಸ್ಟ್

    ಬೆಂಗಳೂರು: ‘ಬಿಗ್‍ಬಾಸ್ ಸೀಸನ್ 3’ ರಲ್ಲಿ ಸ್ಪರ್ಧಿಯಾಗಿದ್ದ ಜಯಶ್ರೀ ರಾಮಯ್ಯ “ಖಿನ್ನತೆಗೆ ಮತ್ತು ಈ ಜಗತ್ತಿಗೆ ಗುಡ್ ಬೈ” ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದ್ದರು. ಇದನ್ನೂ ಓದಿ: ಬಿಗ್‍ಬಾಸ್ ಸ್ಪರ್ಧಿ, ನಟಿ ಜಯಶ್ರೀಗೆ ಮಾವನಿಂದಲೇ ಕಿರುಕುಳ

    ನಟಿ ಜಯಶ್ರೀ ರಿಯಾಲಿಟಿ ಶೋ ಬಿಗ್‍ಬಾಸ್ ಮೂಲಕವೇ ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇಂದು ಫೇಸ್‍ಬುಕ್‍ನಲ್ಲಿ “ಖಿನ್ನತೆಗೆ ಹಾಗೂ ಈ ಜಗತ್ತಿಗೆ ವಿದಾಯ ಹೇಳುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದರು. ಜಯಶ್ರೀ ಟ್ವೀಟ್ ಕಂಡು ಆತಂಕಕ್ಕೆ ಒಳಗಾದ ಸ್ನೇಹಿತರು ಕೂಡಲೇ ಜಯಶ್ರೀ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರೆ.

    ಅಲ್ಲದೇ ಮನೆಯ ಸಮೀಪ ಇರುವವರು ಕೂಡಲೇ ಹೋಗಿ ಅವರನ್ನು ಭೇಟಿ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು. ನಂತರ ಸ್ನೇಹಿತರು ಜಯಶ್ರೀಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಜಯಶ್ರೀಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸುರಕ್ಷಿತವಾಗಿದ್ದಾರೆ ಎಂದು ನಟಿ ಅಶ್ವಿತಿ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಟಿ ಜಯಶ್ರೀ ಕೂಡ, “ನಾನು ಆರಾಮಾಗಿ, ಸುರಕ್ಷಿತವಾಗಿದ್ದೀನಿ” ಎಂದು ಈಗ ಪೋಸ್ಟ್ ಮಾಡಿದ್ದಾರೆ.

    ನಟಿ ಜಯಶ್ರೀ ಕಳೆದ ಕೆಲವು ತಿಂಗಳಿನಿಂದ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದಾಗಿ ನೊಂದಿದ್ದ ಜಯಶ್ರೀ ಇತ್ತೀಚೆಗೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದರು. ಆದರೆ ಹಲವು ಕಾರಣಕ್ಕೆ ವೈಯಕ್ತಿಕವಾಗಿ ಅವರು ಕುಗ್ಗಿದ್ದರು ಎನ್ನಲಾಗಿದೆ.

    ಈ ಹಿಂದೆ ನಟಿ ಜಯಶ್ರೀ ರಾಮಯ್ಯಗೆ ಸ್ವಂತ ಸೋದರಮಾವನೇ ಕಿರುಕುಳ ನೀಡಿದ್ದು, ನಡುರಾತ್ರಿ ಎಂಬುದನ್ನೂ ಲೆಕ್ಕಿಸದೆ ಮನೆಯಿಂದ ಹೊರಹಾಕಿದ್ದರು. ಈ ಕುರಿತು ನಟಿ ಜಯಶ್ರೀ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು.

  • `ನಾ ಅಲ್ಲಿಗೆ ಬರಲ್ಲ’ ಎಂದಿದ್ದಕ್ಕೆ ಸಿನಿಮಾದಿಂದ ನಟಿಗೆ ಗೇಟ್‍ಪಾಸ್-ಕನ್ನಡ ಕಲಾವಿದೆ ಬಿಚ್ಚಿಟ್ಟ ಸ್ಫೋಟಕ ಸತ್ಯ !

    `ನಾ ಅಲ್ಲಿಗೆ ಬರಲ್ಲ’ ಎಂದಿದ್ದಕ್ಕೆ ಸಿನಿಮಾದಿಂದ ನಟಿಗೆ ಗೇಟ್‍ಪಾಸ್-ಕನ್ನಡ ಕಲಾವಿದೆ ಬಿಚ್ಚಿಟ್ಟ ಸ್ಫೋಟಕ ಸತ್ಯ !

    ಬೆಂಗಳೂರು: ಸಿನಿಮಾದಲ್ಲಿ ಅವಕಾಶ ಬೇಕು ಅಂದರೆ ಬೆಳ್ಳಿ ಮಂಚ ಏರಬೇಕು. ತನಗೆ ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರ ಜತೆಗೆ ತನ್ನನ್ನ ರಂಭೆಯಂತೆ ತೋರಿಸುವ ಕ್ಯಾಮೆರಾಮ್ಯಾನ್‍ಗೂ ಕೂಡ ಸಹಕರಿಸಬೇಕಂತೆ ಅನ್ನೋ ವಿಷ್ಯವನ್ನ ಇಷ್ಟು ದಿನ ನಾವೆಲ್ಲರೂ ಕೇಳಿದ್ದೇವೆ. ಅದಕ್ಕೆ ಸಾಕ್ಷಿಯೆಂಬಂತೆ ಚಂದನವನದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

    ಬಿಗ್‍ಬಾಸ್ ಮೂಲಕವೇ ಹೆಸರು ಪಡೆದುಕೊಂಡಿದ್ದ ನಟಿ ಜಯಶ್ರೀ ರಾಮಯ್ಯ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾ ಆಯ್ಕೆ ವಿಚಾರದಲ್ಲಿ ತುಂಬಾನೇ ಚೂಸಿಯಾಗಿರುವ ಜಯಶ್ರೀ, ‘ಉಪ್ಪು ಹುಳಿ ಖಾರ’ ಸಿನಿಮಾ ನಂತರ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗಿ ಸುದ್ದಿಯಾಗಿದ್ದರು. ಇದೀಗ ಚಿತ್ರತಂಡದಿಂದ ಗೇಟ್‍ಪಾಸ್ ಪಡೆದುಕೊಂಡಿರುವ ಜಯಶ್ರೀ, ಪಬ್ಲಿಕ್ ಟಿವಿ ಜತೆ ಮಾತನಾಡುತ್ತಾ ಭಯಾನಕ ಸುದ್ದಿಯೊಂದನ್ನ ಸ್ಫೋಟಿಸಿದ್ದಾರೆ.

    ನಿರ್ದೇಶಕ ಮಂಜು ಹೆದ್ದೂರ್ ನಮ್ಮ ಸಿನಿಮಾಗೆ ಪಕ್ಕಾ ಸೂಟ್ ಆಗ್ತೀಯಾ ನೀನು’ ಅಂತ ಎರಡು ದಿನ ಶೂಟಿಂಗ್ ಮಾಡಿದರು. ವೆರೈಟಿ ಕಾಸ್ಟ್ಯೂಮ್ಸ್ ಹಾಕಿ ಶೂಟ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ನಾಯಕಿ ಜಯಶ್ರೀ ಅವರಿಗೆ ಗೇಟ್‍ಪಾಸ್ ನೀಡಿದ್ದಾರೆ. ಡ್ಯಾನ್ಸ್ ಕೊರಿಯಾಗ್ರಫರ್ ಮೂಲಕ ಜಯಶ್ರೀಗೆ ಮಂಜು ಹೆದ್ದೂರ್ ಪರಿಚಯವಾಗುತ್ತೆ, ಮೊದಲ ಮೀಟಿಂಗ್‍ನಲ್ಲೇ `ನಟ ನಟಿಯರು ಬೇಕಾಗಿದ್ದಾರೆ’ ಸಿನಿಮಾಗೆ ಸೆಲೆಕ್ಟ್ ಆಗ್ತಾರೆ. ಸಿನಿಮಾ ವಿಷಯವಾಗಿ ಮಾತನಾಡಬೇಕು ಅಂತ ನಿರ್ದೇಶಕ ಮಂಜು ಹೆದ್ದೂರ್ ಪದೇ ಪದೇ ಅಲ್ಲಿ ಇಲ್ಲಿ ಬರುವಂತೆ ಕೇಳಿಕೊಳ್ತಾರೆ. ಮೊದಲು ಡ್ರಿಂಕ್ಸ್ ಪಾರ್ಟಿ, ಅನಂತರ ಲಾಂಗ್ ಡ್ರೈವ್ ಹೀಗೆ ಒಂದಿಲ್ಲೊಂದು ಬೇಡಿಕೆಯನ್ನ ಜಯಶ್ರೀ ಮುಂದೆ ಇಡುತ್ತಾರೆ. ಆದ್ರೆ ಜಯಶ್ರೀ ಎಂದು ನಿರ್ದೇಶಕರ ಮಾತಿಗೆ ಒಪ್ಪಿಗೆ ಸೂಚಿಸಿಲ್ಲ.

    ಯಾವಾಗ ತಾನು ಎಲ್ಲಿಗೆ ಕರೆದರೂ ಬರಲಿಲ್ಲವೋ ಆಗಲೇ ಜಯಶ್ರೀಯನ್ನ ತಮ್ಮ ಸಿನಿಮಾದಿಂದ ಹೊರಕಳಿಸೋದಕ್ಕೆ ಪ್ಲ್ಯಾನ್ ಮಾಡಿದ್ರು ನಿರ್ದೆಶಕ. ರೀಸನ್ ಇಲ್ಲದೇ ಆಕೆಗೆ ಗೇಟ್‍ಪಾಸ್ ನೀಡೋದಕ್ಕೆ ಅಸಾಧ್ಯ ಅಂತ ತಿಳಿದು ನಿರ್ಮಾಪಕರು ಬದಲಾಗಿದ್ದಾರೆ. ಸದ್ಯಕ್ಕೆ ಸಿನಿಮಾ ಸ್ಟಾಪ್ ಮಾಡ್ತೀವಿ ಮುಂದೆ ನೋಡೋಣ ಅಂತ ಕಥೆ ಹೇಳಿದ್ದಾರೆ. ನಿರ್ದೇಶಕ ಮಂಜು ಹೆದ್ದೂರ್ ಇದಾಗಿ ಮರುದಿನವೇ ಬೇರೊಬ್ಬ ನಾಯಕಿಯನ್ನ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂದು ಜಯಶ್ರೀ ಆರೋಪಿಸುತ್ತಿದ್ದಾರೆ.

    ತನಗಾದ ಅನ್ಯಾಯ ಬೇರಾವ ನಟಿಗೂ ಆಗಬಾರದು ಅಂತ ಜಯಶ್ರೀ ಫಿಲ್ಮ್ ಚೇಂಬರ್‍ಗೆ ದೂರು ಕೂಡ ಕೊಟ್ಟಿದ್ದಾರೆ. ಅಷ್ಟಕ್ಕೂ ಜಯಶ್ರೀಯವರನ್ನ ನಿರ್ದೇಶಕ ಮಂಜು ಹೆದ್ದೂರ್, ಪಾರ್ಟಿ, ಲಾಂಗ್‍ಡ್ರೈವ್ ಕರೆದಿದ್ದು ಯಾವ ಕಾರಣಕ್ಕೆ ? ಕತೆ ಬಗ್ಗೆ ಚರ್ಚೆ ಮಾಡಲಿಕ್ಕಾ ಅಥವಾ ಬೇರಾವ ಕಾರಣಕ್ಕಾ ? ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ ನಟಿ ಜಯಶ್ರೀ ಹೇಳುವ ಪ್ರಕಾರ, ಲೇಟ್‍ನೈಟ್ ಕಾಲ್ ಮಾಡಿ ಪರ್ಫಾಮೆನ್ಸ್ ವಿಡಿಯೋ ಕಳುಹಿಸುವಂತೆ ಕೇಳಿದ್ರು, ನಾನ್ ಕಳುಹಿಸಿರಲಿಲ್ಲ.. ಇದೀಗ ಅದನ್ನೇ ನೆಪವನ್ನಾಗಿಸಿಕೊಂಡು ನನ್ನನ್ನ ಚಿತ್ರತಂಡದಿಂದ ಹೊರಹಾಕಿದ್ದಾರೆ ಎಂದು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://youtu.be/QQCgzcJBTko