Tag: ಜಯಶ್ರೀ ಆರಾಧ್ಯ

  • ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ನ್ನಡ ಸಿನಿಮಾ ರಂಗದ ಹಿರಿಯ ನಟಿ ಮಾರಿಮುತ್ತು (Marimuttu) ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ (Bigg Boss Kannada) ಮುಗಿದ ಮೇಲೆ ತಮ್ಮ ಬ್ಯುಸಿನೆಸ್ ಕಡೆ ಗಮನ ಕೊಡುತ್ತಿದ್ದ ನಟಿ ಈಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಕಡಲ ಕಿನಾರೆಯಲ್ಲಿ ಮಿಂಚಿದ್ದಾರೆ.

    ‘ಪುಟ್ಟರಾಜು’ (Puttaraju) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ಆರಾಧ್ಯ ಅವರು ಒಟಿಟಿ ಬಿಗ್ ಬಾಸ್‌ಗೆ ಕಾಲಿಟ್ಟಿದ್ದರು. ನಂದು ಜೊತೆಗಿನ ಗುದ್ದಾಟದ ಮೂಲಕ ಜಯಶ್ರೀ ಹೈಲೆಟ್ ಆಗಿದ್ದರು. ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಚಿತ್ರರಂಗದಲ್ಲಿ ಜಯಶ್ರೀ ಆರಾಧ್ಯಗೆ(Jayashree Aradhya) ಸಿಗಲಿಲ್ಲ.

    ಈ ವರ್ಷದ ಆರಂಭದಲ್ಲಿ ಜಯಶ್ರೀ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಬಾಯ್‌ಫ್ರೆಂಡ್ ಸ್ಟಿವನ್ ಜೊತೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈಗ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ದೂರದ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ವಿಶೇಷ ಆಮ್ಲಜನಕ ಚಿಕಿತ್ಸೆಯ ಮೊರೆ ಹೋದ ಸಮಂತಾ

    ಥೈಲ್ಯಾಂಡ್‌ನ ಸುಂದರ ತಾಣಗಳಿಗೆ ನಟಿ ಭೇಟಿ ನೀಡ್ತಿದ್ದಾರೆ. ಜಯಶ್ರೀ ಆರಾಧ್ಯ ಟ್ರಿಪ್‌ಗೆ ವೈನಿಧಿ ಕೂಡ ಸಾಥ್ ನೀಡಿದ್ದಾರೆ. ಜೈಜಗದೀಶ್ ಪುತ್ರಿ ಕೂಡ ಇದ್ದಾರೆ. ಇಬ್ಬರ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಸಾಕಷ್ಟು ವರ್ಷದಿಂದ ಸ್ಟೀವನ್‌ ಎಂಬುವವರ ಜೊತೆ ಜಯಶ್ರೀ ಡೇಟ್‌ ಮಾಡ್ತಿದ್ದಾರೆ.  ಇಬ್ಬರ ಪ್ರೀತಿಗೆ ಗುರುಹಿರಿಯರ ಸಮ್ಮತಿಯುಯಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ

    `ಬಿಗ್ ಬಾಸ್’ ಜಯಶ್ರೀ ಆರಾಧ್ಯ ಮನೆ ಗೃಹಪ್ರವೇಶದ ಸಂಭ್ರಮ

    `ಬಿಗ್ ಬಾಸ್’ ಒಟಿಟಿ (Bigg Boss) ಮೂಲಕ ಕಮಾಲ್ ಮಾಡಿದ್ದ ನಟಿ ಜಯಶ್ರೀ ಕನಸಿನ ಮನೆಯ ಗೃಹಪ್ರವೇಶ (House Warming) ನೆರವೇರಿದೆ. ಮಾರಿಮುತ್ತು (Actress Marimuttu) ಮೊಮ್ಮಗಳು ಜಯಶ್ರೀ ಹೊಸ ಮನೆಗೆ ಕುಟುಂಬ ಸಮೇತ ಪಾದಾರ್ಪಣೆ ಮಾಡಿದ್ದಾರೆ.

    ನಟಿ, ಉದ್ಯಮಿಯಾಗಿ ಸೈ ಎನಿಸಿಕೊಂಡಿರುವ ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಾರಿ ಮುತ್ತು ಮೊಮ್ಮಗಳು ಸಾಕಷ್ಟು ಸಂಕಷ್ಟಗಳ ನಡುವೆ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ನಾಯಂಡಳ್ಳಿಯಲ್ಲಿ ಮನೆ ಖರೀದಿಸಿದ್ದು, ಇತ್ತೀಚೆಗೆ ನೂತನ ನಿವಾಸದ ಗೃಹಪ್ರವೇಶ ನಡೆದಿದೆ. ಇದನ್ನೂ ಓದಿ: ಸಿನಿಮಾ ಸೋಲಿನ ಬೆನ್ನಲ್ಲೇ ಐಟಂ ಡ್ಯಾನ್ಸ್‌ಗೆ ಓಕೆ ಎಂದ ರಶ್ಮಿಕಾ ಮಂದಣ್ಣ

    ಜಯಶ್ರೀ ಮತ್ತು ಭಾವಿಪತಿ ಸ್ಟೀವನ್ ಕನಸಿನ ಮನೆಯ ಸಂಭ್ರಮದಲ್ಲಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಲೋಕೇಶ್, ಸ್ಪೂರ್ತಿ, ಸೋನು ಗೌಡ, ಉದಯ್ ಸೂರ್ಯ, ಚೈತ್ರಾ ಕೂಡ ಈ ವೇಳೆ ಸಾಕ್ಷಿಯಾಗಿದ್ದಾರೆ.

    ಸಾಕಷ್ಟು ಏಳು ಬೀಳಿನ ನಂತರ ಹೊಸ ಹೆಜ್ಜೆ ಇಡ್ತಿರುವ ನಟಿ ಜಯಶ್ರೀಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಬಿಗ್ ಬಾಸ್ (Bigg Boss) ಮನೆಯಲ್ಲಿ ಜಯಶ್ರೀ ಹಾಗೂ ಸೋಮಣ್ಣ ನಡುವೆ ನಡೆಯುವ ಜಟಾಪಟಿ ಇದು ಹೊಸದೇನು ಅಲ್ಲ. ಆದರೆ ಇಂದು ಜಯಶ್ರೀ ಮಾತನಾಡಿದ ರೀತಿ ಯಾರಿಗೂ ಸರಿ ಎನಿಸಲೇ ಇಲ್ಲ. ಸೋಮಣ್ಣ ಈ ಸಲ ಒರಟಾಗಿ ಮಾತನಾಡಲೇ ಇಲ್ಲ. ಆದರೂ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ.

    ಮಧ್ಯಾಹ್ನದ ಸಮಯದಲ್ಲಿ ಗುರೂಜಿ ಹಾಗೂ ಸೋಮಣ್ಣ ಇಬ್ಬರು ಅಡುಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಜಯಶ್ರೀ (Jayashree) ಕೂಡ ಬಂದಿದ್ದಾರೆ. ಅದಾಗಲೇ ಸೋನು ಅಲ್ಲಿಯೇ ಕುಳಿತಿದ್ದಳು. ಆಗ ಸೋಮಣ್ಣ ಕೂಡ ಗುರೂಜಿ ಜೊತೆಗೆ ಸೇರಿಕೊಂಡು ಬಿಟ್ಟರು ಎಂದಿದ್ದಾರೆ. ಅದಕ್ಕೆ ಸೋಮಣ್ಣ ಒಂದು ಇಡೀ ದಿನ ಅಡುಗೆ ಮಾಡುವುದಕ್ಕೆ ನನಗೆ ಅವಕಾಶವೇ ಸಿಗುತ್ತಿಲ್ಲ ಎಂದು ಸೋಮಣ್ಣ (Somanna) ಹೇಳಿದಾಗ, ಜಯಶ್ರೀ ಒಂದು ದಿನ ಅಡುಗೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ:ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ನಂತರ ಸೋನು ಗುರೂಜಿ ನಿಮಗೆ ಗೊತ್ತಿರುವುದೆಲ್ಲವನ್ನು ಸೋಮಣ್ಣನಿಗೆ ಹೇಳಿಕೊಡಬೇಡಿ ಆಮೇಲೆ ಸೋಮಣ್ಣನು ಅಷ್ಟೇ ಎಂದು ಬೇರೆ ಮೀನಿಂಗ್‌ನಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಗುರೂಜಿ ಗದರಿಸಿ ಬಾ ಇಲ್ಲಿ ಅಂತ ಸೋನುಳನ್ನು ಕರೆದು ಸೋಮಣ್ಣ ಪಾಪ ಯಾರು ಸಿಕ್ಕಿಲ್ಲ ಅಂತ ಒದ್ದಾಡುತ್ತಿದ್ದಾರೆ ಎಂದಿದ್ದಾರೆ. ಮತ್ತೆ ಸೋನು ನಿಮ್ಮ ಡಬಲ್ ಮೀನಿಂಗ್‌ನ ಸೋಮಣ್ಣನಿಗೆ ಹೇಳಿಕೊಡಬೇಡಿ. ಅವರು ಹಾಳಾಗುತ್ತಾರೆ ಎಂದು ಸೋಮಣ್ಣನಿಗೆ ವಿವರಣೆ ನೀಡಿದಳು. ಹಾಗೂ ಸೋಮಣ್ಣ ನಾನು ಹಾಳಾಗುವುದಕ್ಕೆ ಕಾರಣ ಜಯಶ್ರೀ ಅಂತ ಹೇಳಿದ್ರು. ರೂಲ್ಸ್‌ನೆಲ್ಲಾ ಬ್ರೇಕ್ ಮಾಡಿ ಮಾತುನಾಡುವುದೆಲ್ಲ ನಮ್ಮ ಜಯಶ್ರೀ ಅವರು ಎಂದು ಈ ವೇಳೆ ಸೋಮಣ್ಣ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಅರ್ಧ ಗಂಟೆ ಮಲಗುವ ಅವಕಾಶವನ್ನು ಆರ್ಯವರ್ಧನ್ ಹಾಗೂ ಸೋಮಣ್ಣ ಅವರಿಗೆ ನೀಡಿತ್ತು. ಅದರಂತೆ ಗುರೂಜಿ ಊಟ ಮಾಡಿ ಮಲಗಲು ಹೋಗಿದ್ದರು. ಆದ್ರೆ ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಸೋನು ಹಾಗೂ ಜಯಶ್ರೀ ಬೆಡ್ ರೂಮಿನಲ್ಲಿಯೇ ಮಾತನಾಡುತ್ತಿದ್ದರು. ಜಯಶ್ರೀ ಮಾತನಾಡುತ್ತಾ ಸೋಮಣ್ಣ ಬಗ್ಗೆ ಕಿಡಿಕಾರಿದ್ದಾರೆ. ಕಚಕಚ ಅಂತ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸೋಮಣ್ಣ ಮಾತನಾಡುವುದು ನನಗೆ ಇಷ್ಟವೇ ಆಗುವುದಿಲ್ಲ. ನಾನು ಒಂದು ಸಲ ನೋಡುತ್ತೀನಿ ಎರಡು ಸಲ ನೋಡ್ತೀನಿ, ಮೂರನೇ ಸಲ ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಹೊಡೆದಂಗೆ ಮಾತನಾಡ್ತೀನಿ ಎಂದು ಸೋಮಣ್ಣ ವಿರುದ್ಧ ಜಯಶ್ರೀ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಳಿ ಕೇಳಿ ರಾಕೇಶ್ ಕಡೆಯಿಂದ ಕಿಸ್ ಕೊಡಿಸಿಕೊಂಡ ಸೋನು ಶ್ರೀನಿವಾಸ್ ಗೌಡ

    ಕೇಳಿ ಕೇಳಿ ರಾಕೇಶ್ ಕಡೆಯಿಂದ ಕಿಸ್ ಕೊಡಿಸಿಕೊಂಡ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತದೆ ಎನ್ನುವುದು ಸ್ವತಃ ಬಿಗ್ ಬಾಸ್ ಗೆ ಅರ್ಥವಾಗುತ್ತಿಲ್ಲ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ ವರ್ತನೆ ಮಿತಿ ಮೀರುತ್ತಿದೆಯಾ ಎನ್ನುವ ಅನುಮಾನ ನೋಡುಗರನ್ನು ಕಾಡುತ್ತಿದೆ. ಈಗಾಗಲೇ ಸಾಕಷ್ಟು ಟ್ರೋಲ್ ಆಗಿರುವ ಸೋನು, ನೆಟ್ಟಿಗರಿಗೆ ಮತ್ತೆ ಮತ್ತೆ ಆಹಾರವಾಗುವಂತಹ ಕೆಲಸಗಳನ್ನೇ ಸೋನು ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಸೋನು ಮೇಲೆ ಪ್ರೀತಿಗಿಂತ, ಆ ಹುಡುಗಿಗೆ ಏನೋ ಸಮಸ್ಯೆ ಇದೆ ಎನ್ನುವ ಅನುಕಂಪ ವ್ಯಕ್ತವಾಗುತ್ತಿದೆ.

    ಸೋನು ವರ್ತನೆಗೆ ಸ್ವತಃ ಕಿಚ್ಚ ಸುದೀಪ್ ಕಿವಿ ಹಿಂಡಿದ್ದಾರೆ. ಮನೆಯ ಅಷ್ಟೂ ಸದಸ್ಯರು ಆ ಹುಡುಗಿಗೆ ಬುದ್ದಿ ಮಾತು ಹೇಳಿದ್ದಾರೆ. ಅದರಲ್ಲೂ ಆರ್ಯವರ್ಧನ್ ಗುರೂಜಿ, ನಿನ್ನೆಯಷ್ಟೇ ಹೆಚ್ಚಿಗೆ ಮಾತನಾಡಿದರೆ ಬಾಯಲ್ಲಿ ಪೊರಕೆ ಇಡುವುದಾಗಿಯೂ ಸೋನುಗೆ ಗದರಿಸಿದ್ದರು. ಆದರೂ, ಸೋನು ಹುಚ್ಚಾಟ ನಿಲ್ಲುತ್ತಿಲ್ಲ. ತನಗೆ ಏನು ಅನಿಸುತ್ತದೆಯೋ ಅದನ್ನು ಮಾಡಿಯೇ ಮುಂದಕ್ಕೆ ಸಾಗುತ್ತಿದ್ದಾರೆ. ಹಾಗಾಗಿ ಸೋನು ಅಷ್ಟೊಂದು ಸುಲಭಕ್ಕೆ ಯಾರಿಗೂ ಅರ್ಥವಾಗುತ್ತಿಲ್ಲ. ಇದನ್ನೂ ಓದಿ:ಸಿನಿಮಾಗೆ 2 ಕೋಟಿ, ಟಿವಿಗೆ ಹೋದರೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ ಜಗ್ಗೇಶ್: ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ

    ಸೋನು ಮತ್ತು ರಾಕೇಶ್ ಅಡಿಗೆ ಇಬ್ಬರೂ ಕ್ಲೋಸ್ ಇರುವ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಒಟ್ಟೊಟ್ಟಿಗೆ ಇರುತ್ತಾರೆ. ಇಲಿ ಬೆಕ್ಕಿನಂತೆ ಆಟವಾಡುತ್ತಾರೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ತಮಾಷೆ ಮಾಡುತ್ತಾರೆ. ಅದೆಲ್ಲವೂ ಸರಿ. ಆದರೆ, ನಿನ್ನೆ ರಾಕೇಶ್ ಅಡಿಗ ಹತ್ತಿರ ವಿಚಿತ್ರ ಬೇಡಿಕೆ ಇಟ್ಟು ನೋಡುಗರನ್ನೇ ಬೆಚ್ಚಿ ಬೀಳಿಸಿದ್ದಾರೆ. ಪಕ್ಕದಲ್ಲೇ ಇದ್ದ ರಾಕೇಶ್ ಕರೆದು, ನನಗೊಂದು ಕಿಸ್ ಮಾಡು ಎಂದು ಕೇಳುತ್ತಾರೆ. ಆ ಹುಡುಗಿ ಏನೋ ಕೇಳಿತು, ಬಿಡು ಅತ್ಲಾಗೆ ಎಂದು ರಾಕೇಶ್ ಹೇಳಿದ್ದರೆ, ಒಳ್ಳೆಯ ಹುಡುಗ ಅನಿಸಿಕೊಳ್ಳುತ್ತಿದ್ದರೋ ಏನೋ? ಆದರೆ, ರಾಕೇಶ್ ಹಾಗೆ ಮಾಡಲಿಲ್ಲ.

    ನನಗೊಂದು ಕಿಸ್ ಮಾಡು ಅಂತ ಸೋನು ಬೇಡಿಕೆ ಇಟ್ಟ ತಕ್ಷಣ, ಕ್ಷಣವೂ ಯೋಚಿಸಿದ ರಾಕೇಶ್ ಕೆನ್ನೆಗೆ ಮುತ್ತಿಟ್ಟೇ ಬಿಡ್ತಾರೆ. ಅದನ್ನು ನೋಡಿದ ಜಯಶ್ರೀ ಜೀವ ಸುಮ್ಮನಿರದೇ ನನಗೂ ಒಂದು ಕಿಸ್ ಮಾಡು ಎಂದು ಕೇಳಿಕೊಳ್ಳುತ್ತಾರೆ. ಅವಳ ಕೆನ್ನೆಗೂ ಸಿಹಿಮುತ್ತೊಂದನ್ನು ನೀಡಿ ಕೃತಾರ್ಥರಾಗುತ್ತಾರೆ ರಾಕೇಶ್. ಅಯ್ಯ, ಈ ಮನೆಯಲ್ಲಿ ಏನಾಗುತ್ತದೆ? ಆ ಹುಡುಗಿಯರು ಯಾಕೆ ಹಾಗೆ ಆಡುತ್ತಿದ್ದಾರೆ ಎಂದು ಪ್ರೇಕ್ಷಕರು ಇತ್ತ ತಲೆ ತಲೆ ಚೆಚ್ಚಿಕೊಂಡು ಮತ್ತೆ ಬಿಗ್ ಬಾಸ್ ನೋಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಕೇವಲ ಬಾಯಿ ಮಾತಿನಲ್ಲೇ ಲವ್ವಿಡವ್ವಿ ವಿಷಯಗಳು ಬಂದು ಹೋಗುತ್ತಿದ್ದವು. ರಾಕೇಶ್ ಅಡಿಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತುಕೊಟ್ಟು ಸುದ್ದಿಯಾಗಿದ್ದಾರೆ. ಈ ಸಿಹಿ ಮುತ್ತು ಕೊಟ್ಟಿದ್ದು ಬೇರೆ ಕಾರಣಕ್ಕೆಯಾದರೂ, ಈ ನಡೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರೂ ತುಂಬಾ ಹತ್ತಿರವಾಗುತ್ತಿದ್ದಾರೆ. ರಾಕೇಶ್ ಸದಾ ತನ್ನ ಜೊತೆಯೇ ಇರಬೇಕು ಎನ್ನುವುದು ಸೋನು ಆಸೆ. ರಾಕೇಶ್ ಅಡಿಗ ಬೇರೆಯವರ ಜೊತೆ ಕ್ಲೋಸ್ ಆಗುವುದನ್ನು ಸೋನು ಸಹಿಸಿಕೊಳ್ಳುತ್ತಿಲ್ಲ. ಅದನ್ನು ಪರೀಕ್ಷಿಸಲೆಂದೇ ರಾಕೇಶ್ ಮತ್ತು ಜಯಶ್ರೀ ಪ್ಲ್ಯಾನ್ ಮಾಡಿ ಸೋನು ಎದುರೇ ಜಯಶ್ರೀಗೆ ರಾಕೇಶ್ ಕಿಸ್ ಮಾಡುತ್ತಾನೆ. ಅದನ್ನು ಗಮನಿಸುವ ಸೋನು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ರಾಕೇಶ್ ಮತ್ತು ಸೋನು ಗೌಡ ಇಬ್ಬರ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸದಾ ಅಂಟಿಕೊಂಡೇ ಇರುತ್ತಾರೆ. ಮೊನ್ನೆ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು. ಅಲ್ಲದೇ, ಇಡೀ ಮನೆ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡುತ್ತಿದೆ. ಒಬ್ಬರಿಗೊಬ್ಬರೂ ಬಿಟ್ಟಿರಲಾರದಷ್ಟು  ಹಚ್ಚಿಕೊಂಡಿದ್ದಾರೆ. ಇದನ್ನು ಪರೀಕ್ಷಿಸಲು ರಾಕೇಶ್ ಮುತ್ತಿನಾಟದ ಮಾರ್ಗವನ್ನು ಕಂಡುಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋದ ತಕ್ಷಣವೇ ಮದುವೆ ಆಗುವುದಾಗಿ ಘೋಷಿಸಿದ ಜಯಶ್ರೀ

    ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋದ ತಕ್ಷಣವೇ ಮದುವೆ ಆಗುವುದಾಗಿ ಘೋಷಿಸಿದ ಜಯಶ್ರೀ

    ನ್ನಡದ ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಮೊದಲನೇ ದಿನವೇ ತಮ್ಮ ಖಾಸಗಿ ಜೀವನದ ಕಥನ ಹೇಳಿಕೊಂಡರು. ಅಫೇರ್ ಇಟ್ಟುಕೊಂಡಿರುವ, ಕದ್ದುಮುಚ್ಚಿ ಮದುವೆ ಆಗಿರುವ, ಡಿವೋರ್ಸ್ ತಗೆದುಕೊಂಡಿರುವ, ಹುಡುಗನಿಂದ ತಮಗಾದ ಅನ್ಯಾಯ, ಹುಡುಗಿಯಿಂದ ತಮಗಾದ ನೋವು ಹೀಗೆ ಎಲ್ಲವನ್ನೂ ಖುಲ್ಲಂ ಖುಲ್ಲಾ ಹಂಚಿಕೊಂಡಿದ್ದರು. ಈಗ ಆ ನೋವುಗಳು ಅವರ ಬದುಕಿಗೆ ಬೆಳಕಾದಂತೆ ಕಾಣುತ್ತಿವೆ.

    ನಟಿ, ಮಾಡಲ್ ಜಯಶ್ರೀ ಆರಾಧ್ಯ, ತಾವು ಮದುವೆ ಆಗಿರುವ ಹುಡುಗನ ಜೊತೆ ಅಫೇರ್ ಇಟ್ಟುಕೊಂಡಿದ್ದ ವಿಷಯವನ್ನು ಹಂಚಿಕೊಂಡಿದ್ದರು. ಅಲ್ಲದೇ, ಇದೀಗ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದರು. ಈಗ ಮನೆಯಿಂದ ಹೊರ ಬಂದ ತಕ್ಷಣವೇ ತಾವು ಇಷ್ಟಪಟ್ಟ ಹುಡುಗನ ಜೊತೆ ರೆಜಿಸ್ಟರ್ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ. ಮನೆಯಿಂದ ಆಚೆ ಹೋದ ತಕ್ಷಣ ತಾವು ಮಾಡುವ ಮೊದಲ ಕೆಲಸವದು ಎಂದು ಸಹ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಬಿಗ್ ಬಾಸ್ ಮನೆಗೆ ಬರುವ ಮುನ್ನ ಜಯಶ್ರೀ ಪ್ರೀತಿಸುತ್ತಿದ್ದ ಹುಡುಗ, ಮದುವೆ ಆಗಲು ಕೇಳಿಕೊಂಡನಂತೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಜಯಶ್ರೀ ಬದಲಾಗುತ್ತಾರೆ ಎನ್ನುವ ಅಪನಂಬಿಕೆ ಅವನದ್ದಾಗಿತ್ತಂತೆ. ಆದರೆ, ನಾನು ಬದಲಾಗಿಲ್ಲ. ಮನೆಯಿಂದ ಹೊರ ಹೋದ ತಕ್ಷಣವೇ ಅದೇ ಹುಡುಗನ ಜೊತೆ ಹೊಸ ಬದುಕಿಗೆ ಕಾಲಿಡುವುದಾಗಿ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    ಬಿಗ್‌ ಬಾಸ್‌: ಜಯಶ್ರೀಗೆ ಮೆಂಟಲ್ ಆಗೋಗ್ತಿಯಾ ಎಂದು ಎಚ್ಚರಿಕೆ ನೀಡಿದ ನಂದು

    ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಶೋ ಅಂದ್ರೆ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ. ಇನ್ನು ಮನೆಯಲ್ಲಿನ ಸ್ಪರ್ಧಿಗಳ ಸ್ನೇಹ, ಜಗಳ ಹೀಗೆ ಸಾಕಷ್ಟು ವಿಚಾರಗಳು ಸದ್ದು ಮಾಡುತ್ತಿದೆ. ಇದೀಗ ಇತ್ತೀಚಿನ ಜಯಶ್ರೀ ಆರಾಧ್ಯ ಮತ್ತು ನಂದಿನಿ ಜಗಳ ಕೂಡ ಈಗ ಚರ್ಚೆಗೆ ಗ್ರಾಸವಾಗಿದೆ. ಇನ್ನು ʻಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾʼ ಎಂದು ಜಯಶ್ರೀಗೆ ನಂದು ಎಚ್ಚರಿಕೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಾಗಿನಿಂದಲೂ ಜಯಶ್ರೀ ಮತ್ತು ನಂದಿನಿ ನಡುವೆ ಆಗಾಗ ಮನಸ್ತಾಪ ಆಗುತ್ತಲೇ ಇದೆ. ನಂದಿನಿ, ಜಶ್ವಂತ್ ಬೋಪಣ್ಣ ಮತ್ತು ಜಯಶ್ರೀ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಅದರಲ್ಲೂ ಈ ವಾರದ ಕ್ಯಾಪ್ಟೆನ್ಸಿಯಲ್ಲಿ ತಿರುಗುವ ಕುರ್ಚಿ ಟಾಸ್ಕ್ ವೇಳೆ ನಂದಿನಿ ಕಣ್ಣಿಗೆ ಜಯಶ್ರೀ ಆರಾಧ್ಯ ಸ್ಪ್ರೇ ಮಾಡಿಬಿಟ್ಟರು. ಬೇಡ ಎಂದು, ಇತರೆ ಸ್ಪರ್ಧಿಗಳು ಹೇಳಿದ್ದರು ಕೂಡ ಪದೇ ಪದೇ ನಂದಿನಿ ಮುಖಕ್ಕೆ ಜಯಶ್ರೀ ಸ್ಪ್ರೇ ಹಾಕಿದರು. ಜಯಶ್ರೀ ಮಾನವೀಯತೆ ಇಲ್ಲ ಅಂತ ನಂದಿನಿ ಎಲ್ಲರ ಮುಂದೆಯೇ ಹೇಳಿದರು. ಇದನ್ನೂ ಓದಿ:ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಆಟದಲ್ಲಿ ಜಯಶ್ರೀ ಆಡಿರುವ ರೀತಿ ನೋಡಿ, ಕಳಪೆ ಹಣೆಪಟ್ಟಿಯನ್ನ ಸ್ಪರ್ಧಿಗಳು ನೀಡಿದ್ದರು. ಈ ಪರಿಣಾಮ, ಜಯಶ್ರೀ ಆರಾಧ್ಯ ಜೈಲಿಗೆ ತೆರಳಿದರು. ಜೈಲಿನಲ್ಲಿದ್ದ ಜಯಶ್ರೀ ಆರಾಧ್ಯ ಜೊತೆ ಮಾತನಾಡಲು ಬಂದ ನಂದಿನಿ, ಹೇಳಿದ್ದನ್ನೇ ಹೇಳಿ ಹೇಳಿ ಮೆಂಟಲ್ ಆಗೋಗ್ತಿಯಾ ಎಂದರು. ಇಬ್ಬರ ಕಿತ್ತಾಟವನ್ನ ನೋಡುತ್ತಿದ್ದ ಸೋನು, ಈ ಮನೆಯಲ್ಲಿ ಎಲ್ಲಾ ಇದೆ. ಒಬ್ಬರು ಲಾಯರ್ ಕೂಡ ಇರಬೇಕಿತ್ತು. ಆಗ ಇನ್ನೂ ಸಖತ್ತಾಗಿರೋದು ಎಂದರು.

    ಇನ್ನು ಜಯಶ್ರೀ ಮತ್ತು ನಂದಿನಿ ಮಾತನಾಡುವಾಗ ಸೋನು ಮೂಗು ತೂರಿಸಿದ್ದಾರೆ. ಬಳಿಕ ಇಬ್ಬರು ಮಾತನಾಡಬೇಕಾದರೆ ಮಧ್ಯೆ ಮಾತನಾಡಬೇಡ ಎಂದು ಜಯಶ್ರೀ, ಸೋನುಗೆ ವಾರ್ನಿಂಗ್ ಕೊಟ್ಟಿದ್ದಾರೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆಯೂ ಕೂಡ ಜಟಾಪಟಿ ಜೋರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಹೊರ ಬಗೆಯ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಮಧ್ಯೆ ಜಟಾಪಟಿ ಜೋರಾಗಿದೆ. ಬಿಗ್ ಬಾಸ್ ಮನೆ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬುದು ವೀಕ್ಷಕರ ಕೌತುಕಕ್ಕೆ ಕಾರಣವಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಉಳಿವಿಗೆ, ನಾ ನಾ ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಪ್ರತಿ ವಾರದಂತೆ ಈ ವಾರ ಮನೆಯಿಂದ ಹೊರ ನಡೆಯುವ ಸ್ಪರ್ಧಿಯ ಯಾರಿರಬಹುದು ಎಂದು ಕುತೂಹಲ ಸೃಷ್ಟಿಯಾಗಿದೆ. ಈಗಾಗಲೇ ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ ಮನೆಯಿಂದ ಹೊರನಡೆದಿದ್ದಾರೆ. ಅರ್ಜುನ್ ರಮೇಶ್ ಮತ್ತು ಲೋಕೇಶ್ ಅನಾರೋಗ್ಯದ ಹಿನ್ನಲೆ ಚಿಕಿತ್ಸೆಗಾಗಿ ಮನೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಕಳಪೆ ಬೋರ್ಡ್‌ ಪಡೆದುಕೊಂಡಿರುವ ಜಯಶ್ರೀ ಆರಾಧ್ಯ ಇದೀಗ ಮನೆಯವರಿಂದ ಟಾರ್ಗೆಟ್‌ ಕೂಡ ಆಗಿದ್ದಾರೆ. ಇದನ್ನೂ ಓದಿ:ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ಇನ್ನು ಇತ್ತೀಚಿನ ಟಾಸ್ಕ್‌ವೊಂದರಲ್ಲಿ ಜಶ್ವಂತ್ ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.

    ಇನ್ನು ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದು, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್‌ಗೆ ನೀರು ಹಾಕಿ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಮನೆಯಲ್ಲಿರುವ ರೀತಿಯ  ಜತೆಗೆ ಜಯಶ್ರೀ ಅವರ ಒರಟುತನ ಈ ಎಲ್ಲಾ ಕಾರಣಾದಿಂದಾಗಿ ಜಯಶ್ರೀ ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರನಡೆಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ಬಿಗ್ ಬಾಸ್ ಓಟಿಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗುತ್ತಿದೆ. ಇದೀಗ ಟಾಸ್ಕ್‌ವೊಂದರಲ್ಲಿ ಜಯಶ್ರೀ ಮಾಡಿದ ಎಡವಟ್ಟಿನಿಂದ ನಂದು ಕಣ್ಣಿಗೆ ನೋವಾಗಿದೆ. ಇದರಿಂದ ಬಿಗ್ ಬಾಸ್ ಕೆಂಗಣ್ಣಿಗೂ ಗುರಿಯಾಗಿರುವ ಜಯಶ್ರೀ, ಈ ವಾರ ಬಿಗ್ ಬಾಸ್ ಅವರಿಂದಲೇ ನೇರವಾಗಿ ನಾಮಿನೇಟ್ ಆಗಿದ್ದಾರೆ.

    ದೊಡ್ಮನೆಯ ಆಟ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು.

    ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.

    ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಿ, ಸೋಮಣ್ಣ ಜಯಭೇರಿ ಬಾರಿಸಿದ್ದಾರೆ. ಈ ವಿಚಾರವನ್ನು ಬಿಗ್ ಬಾಸ್ ಘೋಷಿಸಿದ್ದಾರೆ. ಸೋಮಣ್ಣ ಅವರಿಗಿಂತ ಜಯಶ್ರೀ ಜಾಸ್ತಿ ನಿಮಿಷವೇ ಆಡಿದ್ದರು ಕೂಡ, ಜಯಶ್ರೀ ಮಾಡಿದ ಎಡವಟ್ಟಿನಿಂದ ಸೋತಿದ್ದಾರೆ. ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದೆ, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್ ಕೂಡ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಈ ವೇಳೆ ವಾರದ ಆಕ್ಟಿವಿಟಿ ಗಮನಿಸಿ, ಬೆಸ್ಟ್ ಸ್ಪರ್ಧಿಯಾಗಿ ಗುರೂಜಿ ಹೊರಹೊಮ್ಮಿದರೆ, ಕಳಪೆ ಸ್ಪರ್ಧಿಯಾಗಿ ಜಯಶ್ರೀ ಬಿಗ್ ಬಾಸ್ ಮನೆಯ ಜೈಲಿಗೆ ಸೇರಿದ್ದಾರೆ. ಜಯಶ್ರೀ ಮಾಡಿದ ಎಡವಟ್ಟಿನಿಂದ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಾರ ಕೂಡ ನಾಮಿನೇಟ್ ಆಗಿರುವ ಜಯಶ್ರೀಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ

    Live Tv
    [brid partner=56869869 player=32851 video=960834 autoplay=true]