Tag: ಜಯಶ್ರೀ

  • ಕಬ್ಬು ತುಂಬಿದ ಲಾರಿಯೊಂದಿಗೆ ಸುವರ್ಣಸೌಧಕ್ಕೆ ಬಂದು ಪ್ರತಿಭಟಿಸಿದ್ದ ಜಯಶ್ರೀ ನಿಧನ

    ಕಬ್ಬು ತುಂಬಿದ ಲಾರಿಯೊಂದಿಗೆ ಸುವರ್ಣಸೌಧಕ್ಕೆ ಬಂದು ಪ್ರತಿಭಟಿಸಿದ್ದ ಜಯಶ್ರೀ ನಿಧನ

    ಬೆಳಗಾವಿ: ರೈತ ಹೋರಾಟಗಾರ್ತಿ ಜಯಶ್ರೀ ಗುರನ್ನವರ್(40) (Jayashree Gurannavar) ನಿಧನರಾಗಿದ್ದಾರೆ.

    ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಶ್ರೀ ಬುಧವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಇವರು ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟ ಮಾಡುತ್ತಾ ಸಂಘಟನೆ ಮಾಡಿದ್ದರು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಕಬ್ಬಿನ ಬಾಕಿ ಬಿಲ್ ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸುವ ಮೂಲಕ ಗಮನಸೆಳೆದಿದ್ದರು.

    ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ಮಾಡಿದ್ದ ಜಯಶ್ರೀ ಕುರಿತು ಕುಮಾರಸ್ವಾಮಿಯವರು ಹಗುರವಾಗಿ ಮಾತಾಡಿ ಟೀಕೆಗೆ ಒಳಗಾಗಿದ್ದರು. ಬಳಿಕ ರಾಜ್ಯಾದ್ಯಂತ ಸಂಚಾರ ಮಾಡಿ ಮಹಿಳೆಯರನ್ನ ರೈತ ಸಂಘಟನೆಯಲ್ಲಿ ಸೇರಿಸಿದ್ದರು. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತಕ್ಕೆ ಟೆಕ್ಕಿಗಳು ಬಲಿ ಪ್ರಕರಣ – ಅಪ್ರಾಪ್ತನ ಜಾಮೀನು ರದ್ದು

    ಸದ್ಯ ಜಯಶ್ರೀ ಅವರು ಓರ್ವ ಮಗನನ್ನ ಅಗಲಿದ್ದಾರೆ.

  • ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಹೆಣ್ಣುಮಕ್ಕಳ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ಸಲ್ಲಿಸಲಾಗಿದೆ. ಜಯಶ್ರೀ (Jayashree) ಎನ್ನುವವರು ದರ್ಶನ್ ವಿರುದ್ಧ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎನ್ನುವ ಮಾತುಗಳನ್ನು ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿಪರ್ವದಲ್ಲಿ ದರ್ಶನ್ ಹೇಳಿದ್ದರು.

    ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ದರ್ಶನ್ ಮಾತನಾಡಿದ್ದಾರೆ. ಇವತ್ತು ಇವಳು ಇರುತ್ತಾಳೆ, ನಾಳೆ ಅವಳು ಬರ್ತಾಳೆ ಎಂದು ದರ್ಶನ್ ಮಾತನಾಡಿದ್ದಾರೆ. ದರ್ಶನ್ ಹೇಳಿಕೆಗೆ ಒಕ್ಕಲಿಗ ಗೌಡತಿಯರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಇದು ಅವಮಾನ ಮಾಡುವಂಥದ್ದು ಎಂದು ದೂರಿ (Complaint)ನಲ್ಲಿ ಉಲ್ಲೇಖ ಮಾಡಿದ್ದಾರೆ.

    ಫಿಲ್ಮ್ ಚೇಂಬರ್ ನಲ್ಲೂ ದೂರು

    ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಕಟು ನುಡಿಗಳಲ್ಲಿ ಟೀಕಿಸಿರುವ ನಟ ದರ್ಶನ್ (Darshan) ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆಯು ಫಿಲ್ಮ್ ಛೇಂಬರ್ ಗೆ ದೂರು ನೀಡಿದೆ. ಸಾರ್ವಜನಿಕ ವೇದಿಕೆಯ ಮೇಲೆ ಉಮಾಪತಿಗೆ ತಗಡು, ಗುಮ್ಮಿಸ್ಕೋತೀಯಾ ರೀತಿಯ ಪದಗಳನ್ನು ಆಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಕಾಟೇರ ಸಿನಿಮಾದ ಕಥೆ ಬರೆಯಿಸಿದ್ದು ನಾನು, ಅದು ನನ್ನದೇ ಟೈಟಲ್ ಎಂದು ಉಮಾಪತಿ ಗೌಡ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಉತ್ತರ ಎನ್ನುವಂತೆ ಕಾಟೇರ ಸಿನಿಮಾದ ಐವತ್ತನೇ ದಿನದ ಸಂಭ್ರಮದಲ್ಲಿ ದರ್ಶನ್ ತಿರುಗೇಟು ನೀಡಿದ್ದರು. ಅಲ್ಲದೇ, ತಗಡು ಮತ್ತು ‘ಪ್ರತಿ ಬಾರಿ ಯಾಕೆ ನಮ್ಮಿಂದ ಗುಮ್ಮಿಸ್ಕೋಳ್ತಿಯಾ’ ಎನ್ನುವ ಮಾತುಗಳನ್ನು ಆಡಿದ್ದರು.

    ಈ ಕುರಿತಂತೆ ಸಂಘಟನೆಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು, ಈ ವಿಷಯದಲ್ಲಿ ದರ್ಶನ್ ಅವರು ಕ್ಷಮೆ ಕೇಳಬೇಕು. ಕ್ಷಮೆ ಕೇಳದೇ ಇದ್ದರೆ, ದರ್ಶನ್ ಮನೆಯ ಮುಂದೆ ನೂರಾರು ಕನ್ನಡ ಕಾರ್ಯಕರ್ತರು ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

     

    ಉಮಾಪತಿ ಮತ್ತು ದರ್ಶನ್ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿರ್ದೇಶಕರಾದ ತರುಣ್ ಸುಧೀರ್ ಮತ್ತು ಮಹೇಶ್ ಕುಮಾರ್ ಇಬ್ಬರೂ ದರ್ಶನ್ ಪರ ಬ್ಯಾಟ್ ಮಾಡುತ್ತಿದ್ದಾರೆ. ಇದಕ್ಕೆ ಕೌಂಟರ್ ಎನ್ನುವಂತೆ ಉಮಾಪತಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

  • ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಆದಿಲ್ ಬೆಂಬಲಕ್ಕೆ ನಿಂತು, ರಾಖಿಗೆ ಕೈಕೊಟ್ಟ ಜೀವದ ಗೆಳತಿಯರು

    ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಮತ್ತು ಆಕೆ ಪತಿ ಆದಿಲ್ ಜಗಳ ಕೋರ್ಟ್ ಮೆಟ್ಟಿಲು ಏರಿತ್ತು. ಆದಿಲ್ (Adil) ಜಾಮೀನು ಮೇಲೆ ಬಿಡುಗಡೆಯಾಗಿ ಬರುತ್ತಿದ್ದಂತೆಯೇ ಇಬ್ಬರೂ ಮತ್ತೆ ಮಾಧ್ಯಮಗಳ ಮುಂದೆ ಕಿತ್ತಾಡುತ್ತಿದ್ದಾರೆ. ದಿನಕ್ಕೊಂದು ಮಾಧ್ಯಮ ಗೋಷ್ಠಿ ಮಾಡಿ, ಆರೋಪಗಳ ಸುರಿಮಳೆ ಹರಿಸುತ್ತಿದ್ದಾರೆ.

    ಈವರೆಗೂ ರಾಖಿ ಸುತ್ತಲೇ ಸುತ್ತಿದ್ದ ಮತ್ತು ರಾಖಿಯ ಜೀವದ ಗೆಳತಿಯರು ಎಂದೇ ಗುರುತಿಸಿಕೊಂಡಿದ್ದ ನಟಿ ಶೆರ್ಲಿನ್ ಚೋಪ್ರಾ (Sherlyn Chopra) ಮತ್ತು ಜಯಶ್ರೀ (Jayashree)ಇದೀಗ ರಾಖಿಗೆ ಭಾರೀ ಶಾಕ್ ನೀಡಿದ್ದು, ಆದಿಲ್ ಪರವಾಗಿ ಇಬ್ಬರೂ ಬ್ಯಾಟ್ ಮಾಡುತ್ತಿದ್ದಾರೆ. ಸಹಜವಾಗಿಯೇ ಈ ನಡೆ ರಾಖಿಗೆ ನುಂಗಲಾರದ ತುಪ್ಪವಾಗಿದೆ.  ಇದನ್ನೂ ಓದಿ:ಹರ್ಷಿಕಾ-ಭುವನ್ ಮದುವೆಯಲ್ಲಿ ಬಗೆ ಬಗೆಯ ಭೋಜನ

    ರಾಖಿಯ ಕೆಟ್ಟ ದಿನಗಳಲ್ಲಿ ಜೊತೆಗೆ ನಿಂತು ಧೈರ್ಯ ತುಂಬಿದವರು ಶೆರ್ಲಿನ್ ಮತ್ತು ಜಯಶ್ರೀ. ಆದರೆ, ಇದೀಗ ಆದಿಲ್ ಪರವಾಗಿ ಮಾತನಾಡುತ್ತಿದ್ದಾರೆ. ಆದಿಲ್ ಕರೆದ ಪತ್ರಿಕಾಗೋಷ್ಠಿಗೆ ಇಬ್ಬರೂ ಬಂದು, ರಾಖಿ ವಿರುದ್ಧ ಕಿಡಿಕಾರಿದ್ದಾರೆ. ಆದಿಲ್ ತುಂಬಾ ಒಳ್ಳೆಯ ವ್ಯಕ್ತಿ. ಅವನಿಗೆ ಮೋಸ ಮಾಡಬಾರದಿತ್ತು ಎಂದಿದ್ದಾರೆ.

     

    ರಾಖಿ ಒಳ್ಳೆಯವಳು ಅಲ್ಲ ಎಂದು ಮೊನ್ನೆಯಷ್ಟೇ ಜಯಶ್ರೀ ಹೇಳಿದ್ದಳು. ಈ ಮಾತಿಗೆ ರಾಖಿ ಪ್ರತಿಕ್ರಿಯೆ ನೀಡಿ, ಜಯಶ್ರೀ ಹೀಗೆ ಮೋಸ ಮಾಡುತ್ತಾಳೆ ಎಂದು ಗೊತ್ತಿರಲಿಲ್ಲ ಎಂದಿದ್ದಳು. ಈಗ ಜಯಶ್ರೀ ಜೊತೆ ಶೆರ್ಲಿನ್ ಕೂಡ ಸೇರಿಕೊಂಡಿದ್ದಾಳೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ತಮ್ಮ ‘ಕೊನೆ ಆಸೆ’ ತಿಳಿಸಿದ ಸೋನು ಶ್ರೀನಿವಾಸ್ ಗೌಡ: ಅವನಿಗೆ ಹೃದಯ ಪೂರ್ವಕ ಹಾರೈಕೆ

    ಬಿಗ್ ಬಾಸ್ ಮನೆ ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರದ್ದು. ಮೊದಲ ದಿನದಿಂದ ಕೊನೆಯ ದಿನದವರೆಗೂ ಜಗಳ, ಕೋಪ, ಪ್ರೀತಿ ಮಾಡಿಕೊಂಡೇ ಎಲ್ಲರ ಗಮನ ಸೆಳೆದವರು. ಅದರಲ್ಲೂ ಜಯಶ್ರೀ (Jayashree), ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಗೆಳೆತನ ನೋಡುಗರಿಗೆ ಸಾಕಷ್ಟು ಮನರಂಜನೆ ನೀಡಿತು. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಅವರು ರಾಕೇಶ್ ಅಡಿಗನನ್ನು (Rakesh Adiga) ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಇದನ್ನೂ ಓದಿ:ಕೆಜಿಎಫ್ ತಾತಾ ನಟನೆಯ ‘ನ್ಯಾನೋ ನಾರಾಯಣಪ್ಪ’ ಟ್ರೇಲರ್ ರಿಲೀಸ್

    ಈ ಕುರಿತು ಮಾತನಾಡಿರುವ ಸೋನು, ‘ನಾನು ರಾಕೇಶ್ ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಅವನು ಮುಂದಿನ ಹಂತ ತಲುಪಿದ್ದಾನೆ ಎಂದು ಕೇಳಿ ಸಂಭ್ರಮಿಸಿದೆ. ಮತ್ತೆ ಅವನು ಬಿಗ್ ಬಾಸ್ ಗೆದ್ದು ಬರಲಿ. ನನ್ನ ಕೊನೆ ಆಸೆ ಏನು ಅಂತ ಸದ್ಯ ಕೇಳಿದರೆ, ಅದು ರಾಕೇಶ್ ಬಿಗ್ ಬಾಸ್ (Bigg Boss OTT) ಮನೆಯಲ್ಲಿ ವಿನ್ ಆಗಬೇಕು’ ಎಂದಿದ್ದಾರೆ ಸೋನು. ತಮ್ಮಿಬ್ಬರ ಸ್ನೇಹ, ಪ್ರೀತಿ ಮತ್ತು ಪ್ರೇಮಕ್ಕಿಂತಲೂ ಮಿಗಿಲಾಗಿದ್ದು ಎನ್ನುವುದು ಸೋನು ಮಾತು.

    ಸೋಷಿಯಲ್ ಮೀಡಿಯಾದಲ್ಲಿ ಅಪಾರ ಸಂಖ್ಯೆಯಲ್ಲಿ ಫಾಲೋವರ್ಸ್ ಹೊಂದಿರುವ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಹಲವು ರೀತಿಯಲ್ಲಿ ಬದಲಾಗಿದ್ದಾರಂತೆ. ಮೊದ ಮೊದಲು ಇವರು ಸೋಷಿಯಲ್ ಮೀಡಿಯಾದಲ್ಲಿ ಏನೇ ಹಾಕಿದರೂ ಟ್ರೋಲ್ ಆಗುತ್ತಿದ್ದರು. ನೆಗೆಟಿವ್ (Negative) ಕಾಮೆಂಟ್ ಮಾಡಲಾಗುತ್ತಿತ್ತು. ಆದರೆ, ಇದೀಗ ನೆಗೆಟಿವ್ ಕಾಮೆಂಟ್ ಮಾಡುವವರ ಸಂಖ್ಯೆ ಸಾಕಷ್ಟು ಇಳಿಮುಖ ಆಗಿದೆಯಂತೆ.

    ಈ ಕುರಿತು ಮಾತನಾಡಿರುವ ಅವರು, ಬಿಗ್ ಬಾಸ್ ಮನೆಯಿಂದ ಆಚೆ ಬಂದ ನಂತರ, ಪೋಸ್ಟ್ ಹಾಕಿದ್ದೆ. ನನ್ನನ್ನು ಜನರು ಎಷ್ಟು ಪ್ರೀತಿಸುತ್ತಿದ್ದಾರೆ ಎಂದು ಗೊತ್ತಾಯಿತು. ನೆಗೆಟಿವ್ ಕಾಮೆಂಟ್ ಒಂದೆರಡು ಬಂದಿರಬಹುದು. ಆದರೆ, ಪಾಸಿಟಿವ್ (Positive) ಆಗಿ ವಿಶ್ ಮಾಡಿದವರೇ ಹೆಚ್ಚು. ನೆಗೆಟಿವ್ ಕಾಮೆಂಟ್ ಗೆ ನಾನು ಮೊದಲಿನಿಂದಲೂ ಕೇರ್ ಮಾಡಿಲ್ಲ. ಈಗಲೂ ಮಾಡಿಲ್ಲ. ನಾನು ಹೇಗೆ ಎನ್ನುವುದು ನನ್ನನ್ನು ಪ್ರೀತಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ರಾಕೇಶ್ ‘ಕಿಸ್’ ಕೊಟ್ಟಿದ್ದು ನಿಜ. ಆದರೆ, ಅದು ಅಮ್ಮನ ಮುತ್ತಿನಂತಿತ್ತು: ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ (Bigg Boss OTT) ಮನೆಯಲ್ಲಿ ರಾಕೇಶ್  ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ (Sonu Srinivas Gowda)ಮುತ್ತಿನ ಕಾರಣದಿಂದಾಗಿಯೇ ಹೆಚ್ಚು ಸುದ್ದಿ ಮಾಡಿದರು. ಸೋನು ಕೇಳಿದಾಗೆಲ್ಲ ರಾಕೇಶ್ ಮುತ್ತಿಟ್ಟಿದ್ದಾನೆ. ಜಯಶ್ರೀ ಉರಿಸುವುದಕ್ಕಾಗಿಯೂ ಸೋನುಗೆ ರಾಕೇಶ್ ಕಿಸ್ ಮಾಡಿದ್ದಾರೆ. ಅಲ್ಲದೇ, ಸೋನುಗೆ ಕೋಪ ತರಿಸಲು ಜಯಶ್ರೀಗೂ (Jayashree) ರಾಕೇಶ್ ಮುತ್ತಿಟ್ಟಿದ್ದಾನೆ.  ಈ ಮುತ್ತಿನಾಟ (Kiss) ಭಾರೀ ಸದ್ದು ಮಾಡಿದೆ.

    ಈಗಾಗಲೇ ರಾಕೇಶ್ (Rakesh Adiga) ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 9ಕ್ಕೆ ಆಯ್ಕೆಯಾಗಿದ್ದಾನೆ. ರಾಕೇಶ್ ನನ್ನು ತುಂಬಾ ಇಷ್ಟ ಪಡುವ ಸೋನು ಮನೆಯಿಂದ ಆಚೆ ಬಂದಿದ್ದಾರೆ. ರಾಕೇಶ್ ಮತ್ತು ತಮ್ಮ ನಡುವಿನ ಸಂಬಂಧವನ್ನು ಅವರು ಹಂಚಿಕೊಂಡಿದ್ದಾರೆ. ರಾಕೇಶ್ ತುಂಬಾ ಒಳ್ಳೆಯ ಹುಡುಗ. ಒಂದು ರೀತಿಯಲ್ಲಿ ಅವನ ಪ್ರೀತಿ ಅಮ್ಮನ ರೀತಿಯದ್ದು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.

    ಅವನ ಮೇಲೆ ವಿಪರೀತಿ ಸೆಳೆತ ಇದ್ದದ್ದು ನಿಜ. ಅದು ಲವರ್ ಮಧ್ಯೆ ಇರುವಂತಹ ಆಕರ್ಷಣೆ ಅಲ್ಲ. ಅದೊಂದು ರೀತಿಯಲ್ಲಿ ಮಗ ಮತ್ತು ತಾಯಿ ಮಧ್ಯದಲ್ಲಿರುವ ಮಮಕಾರ. ನನಗೆ ರಾಕೇಶ್ ಹಾಗೆ. ಬೇರೆಯವರು ಏನು ಅಂದುಕೊಂಡರೂ ಡೋಂಟ್ ಕೇರ್. ನಾನು ನೇರವಾಗಿಯೇ ಮಾತನಾಡುವ ಹುಡುಗಿ. ಹಾಗಾಗಿಯೇ ಅವನು ನನಗೆ ಇಷ್ಟವಾದ. ನನಗೆ ಏನು ಅನಿಸುತ್ತಿತ್ತೋ ಅದನ್ನು ರಾಕೇಶ್ ಜೊತೆ ಮಾಡಿರುವೆ. ಆದರೆ, ಯಾವುದೂ ನಮ್ಮ ಮಧ್ಯೆ ಕೆಟ್ಟದ್ದು ಅನ್ನುವುದು ಇಲ್ಲ ಎನ್ನುತ್ತಾರೆ ಸೋನು.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀ ಮತ್ತೆ ರಾಕಿ ಸೋನುಳನ್ನು ರೇಗಿಸುವುದಕ್ಕೆ ಹೋಗಿ ಏನೆಲ್ಲಾ ಆಯ್ತು..?

    ಜಯಶ್ರೀ ಮತ್ತೆ ರಾಕಿ ಸೋನುಳನ್ನು ರೇಗಿಸುವುದಕ್ಕೆ ಹೋಗಿ ಏನೆಲ್ಲಾ ಆಯ್ತು..?

    ತ್ತೀಚೆಗೆ ಜಯಶ್ರೀ (Jayashree) ಸೋನುಳನ್ನು ಉರಿಸುವುದಕ್ಕೆ ಶುರು ಮಾಡಿದ್ದಾಳೆ. ಸೋನು (Sonu Srinivas Gowda) ಬಾಯಿ ಎಂಥದ್ದು ಎಂದು ಗೊತ್ತಿದ್ದರು, ತಮಾಷೆ ಮಾಡಲು ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾಳೆ. ಇದರ ನಡುವೆ ಆರ್ಯವರ್ಧನ್ ಕೂಡ ಅಲ್ಲಿ ಹೇಳಿದ್ದು ಇಲ್ಲಿ, ಇಲ್ಲಿ ಹೇಳಿದ್ದು ಅಲ್ಲಿ ಹೇಳುವುದಕ್ಕೆ ಶುರು ಮಾಡಿದ್ದಾರೆ. ಜಯಶ್ರೀ ಕೂಡ ಸೋನು ನಂಬಿ ಹೇಳಿದ್ದರೆ ಅದನ್ನು ತಂದು ರಾಕಿ ಬಳಿ ಹೇಳುತ್ತಿದ್ದಾಳೆ.

    ಸೋನು ಬಳಿ ಎಲ್ಲಾ ವಿಚಾರಗಳನ್ನು ಕೇಳಿಕೊಂಡ ಆರ್ಯವರ್ಧನ್ ರಾಕಿ ಬಂದ ಕೂಡಲೇ ಸೋನುಳದ್ದೇ ತಪ್ಪು ಎಂಬ ಚುಚ್ಚಿಕೊಟ್ಟಿದ್ದಾರೆ. ನೀವೂ ಜಯಶ್ರೀ ಜೊತೆ ಇರೋದು ಚೆನ್ನಾಗಿಲ್ಲವಂತೆ ಎಂದಿದ್ದಾರೆ. ಅದಕ್ಕೆ ನಾನು ಅವೈಡ್ ಮಾಡುತ್ತಾ ಇರುವುದು. ನಮ್ಮಿಂದ ಅವರ ಆಟ ಹಾಳಾಗಬಾರದಲ್ವಾ. ಕಿಸ್ ಕೊಡಬಾರದಂತೆ ಬೇರೆ ಹುಡಗಿಯರಿಗೆ. ಇದೆಲ್ಲವನ್ನು ನಿಮಗೆ ಹೇಳಿದ್ಲ ಎಂದಿದ್ದಾನೆ. ಆಗ ಗುರೂಜಿ ಇದನ್ನೆಲ್ಲಾ ಇನ್ನು ಮುಂದೆ ಬೇಕು ಅಂತ ಮಾಡು ಆಗ ಮಜಾ ಇರುತ್ತದೆ ಎಂದಿದ್ದಾರೆ. ಬೇಕು ಅಂತ ಅಲ್ಲ ನಾನು ಅದನ್ನೇ ಮಾಡುವುದು. ನನ್ನ ಯಾರು ಕಂಟ್ರೋಲ್ ಮಾಡುವುದಕ್ಕೆ ಆಗಲ್ಲ ಎಂದು ರಾಕಿ ಹೇಳಿದ್ದಾನೆ. ಇದನ್ನೂ ಓದಿ: ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಇದು ಉರಿಸುವ ಕೆಲಸಕ್ಕೆ ನಾಂದಿ ಹಾಕಿದಂತೆ ಆಗಿದೆ. ಸದ್ಯ ಬಿಗ್ ಬಾಸ್ (Bigg Boss) ಮನೆಯಲ್ಲಿ ಸೋನು ಹಾಗೂ ರಾಕಿ (Rakesh Adiga) ಮಾತನಾಡುವುದನ್ನು ಬಿಟ್ಟಿದ್ದಾರೆ. ಗುರೂಜಿ, ಸೋಮಣ್ಣನ ಬಳಿ ಇದನ್ನೇ ಮಾತನಾಡುತ್ತಾ ಇದ್ದರು. ಅಲ್ಲಿಗೆ ರಾಕಿ ಬಂದ, ಆಗ ಗುರೂಜಿ ರಾತ್ರಿಯೆಲ್ಲಾ ಫುಲ್ ದೂರು ರಾಕಿ ಮೇಲೆ ಅಂದಿದ್ದಾರೆ. ಆಗ ರಾಕಿ ಎಗ್ ರೈಸ್ ಬಗ್ಗೆ ಹೇಳಿದ್ದಾನೆ. ಅದೇ ಸಮಯಕ್ಕೆ ಜಯಶ್ರೀ ಕೂಡ ಅಲ್ಲಿಗೆ ಬಂದಿದ್ದಾಳೆ. ಆಗ ಗುರುಗಳು ಮತ್ತು ಸೋಮಣ್ಣ ಇಬ್ಬರು ಕೂಡ, ಸೋನುಗೆ ಉರಿಸುವ ಫ್ಲ್ಯಾನ್ ಮಾಡಿದ್ದಾರೆ. ಜಯಶ್ರೀ ನೀನು ಇನ್ನು ಹತ್ತಿರ ಕುಳಿತುಕೋ, ಹೆಗಲ ಮೇಲೆ ಕೈ ಹಾಕಿ ಅಂತೆಲ್ಲಾ ಹೇಳಿದ್ದಾರೆ. ಅವರು ಹೇಳಿದಂತೆಯೇ ಜಯಶ್ರೀ ಕೂಡ ಮಾಡಿದ್ದಾಳೆ.

    ಆಮೇಲೆ ಮಾತನಾಡಿದ ಜಯಶ್ರೀ, ಗುರುಗಳು ಇಂಥ ಸೀನ್ ಎಲ್ಲಾ ಚೆನ್ನಾಗಿ ಮಾಡುತ್ತಾರೆ. ರಾಕಿ ಇದೆಲ್ಲಾ ಹೇಗೆ ಆಗುತ್ತೆ ಅಂದ್ರೆ ಬೇಕಂತ, ಅವಳಿಗೆ ಉರಿಸುವುದಕ್ಕೆ ಮಾಡಿದಂತೆ ಆಗಿ ಬಿಡುತ್ತೆ. ನನ್ನ ಮೇಲೆ ಉರಿದುಕೊಳ್ಳುತ್ತಾಳೆ. ನಿನ್ನೆ ಜೆನ್ಯೂನ್ ಆಗಿ ಹೇಳಿದ್ದಾಳೆ. ನೀನು ರಾಕಿ ಜೊತೆ ಇದ್ರೆ ನಂಗೆ ಪೊಸೆಸಿವ್ ಫೀಲ್ ಆಗುತ್ತೆ ಅಂತ. ಹಂಗೆ ಹೇಳಿದ ಮೇಲೂ ನಿನ್ನ ಜೊತೆ ಹಿಂಗೆ ಇದ್ರೆ ಅವಳಿಗೆ ಹೇಗೆ ಅನ್ಸುತ್ತೆ ಹೇಳು? ನೀನು ನನ್ನ ಫ್ರೆಂಡ್ ಅಂತ ಹೇಳುತ್ತಾ ಇದ್ದೀನಿ ಅಂತ ಬೇರೆ ಹೇಳಿದ್ಲು ಅಂತ ಹೇಳುವಾಗಲೇ ಅದೇ ಜಾಗಕ್ಕೆ ಸೋನು ಬಂದಿದ್ದಾಳೆ. ಆಗ ಮಾತು ಇಬ್ಬರಲ್ಲೂ ಕ್ಲೋಸ್ ಆಗಿತ್ತು. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದವಳಂತೆ ಸೋಮಣ್ಣ ಮತ್ತು ಆರ್ಯವರ್ಧನ್ ನಡುವೆ ಕೂತು ಮಾತನಾಡುತ್ತಿದ್ದಳು. ಆದರೆ ಜಯಶ್ರೀ ನಡುವೆ ಮಾತನಾಡಿ, ನಾನು ಹೇಳಿದೆ ಸೋನು ನೀನು ಬೇರೆಯವರಿಗೆ ಉರಿಸುವುದಕ್ಕೆಲ್ಲಾ ನನ್ನ ಕರೆದು ಕೂರಿಸಿಕೊಳ್ಳಬೇಡ ಎಂದಿದ್ದೆ ತಡ. ಸೋನು ರೈಸ್ ಆಗಿದ್ದಾಳೆ. ನನಗೆ ಯಾಕೆ ಹೇಳುತ್ತಾ ಇದ್ದೀಯಾ. ನೀನ್ಯಾಕೆ ನನ್ನ ಹೆಸರನ್ನು ಹೇಳ್ತಿಯಾ. ನಾನು ಯಾರಿಗೂ ಉರಿಸುವುದಕ್ಕೆ ಹೇಳಲ್ಲ ಅಂತ ಸೋನು ಉತ್ತರ ಕೊಟ್ಟಿದ್ದಾಳೆ.

    ಆಗ ಜಯಶ್ರೀ, ಇರೋದು ಎರಡು ದಿನ ಸೋಮಣ್ಣ ಅವರೇ. ಇಷ್ಟು ದಿನ ಜೊತೆ ಜೊತೆಯಾಗಿ ಇದ್ದು ಬಿಟ್ಟು. ಎರಡು ದಿನಕ್ಕೆ ಏನೋ ಚೇಂಜ್ ಮಾಡುವುದಕ್ಕೆ ಹೊರಟಿದ್ದೀಯಾ ಅಂತ ರಾಕಿಯನ್ನು ಕೇಳಿದ್ದಾಳೆ.

    ಆಗ ಮತ್ತೆ ಸೋನು ಮಾತನಾಡಿ, ನಾನು ಅಲ್ಲಿ ಇಲ್ಲ ಎಂದಾಗ ನನ್ನ ಹೆಸರನ್ನು ಕರಿಬೇಡ ಅಂತ ಎಷ್ಟು ಸಲ ಹೇಳಿದ್ದೀನಿ. ಸೈಲೆಂಟ್ ಆಗಿ ಇರುವುದಕ್ಕೆ ಏನ್ ತಗೋಳ್ತಿಯಾ. ನೀನ್ ಯಾಕೆ ನನ್ನ ಕೇಳಿದೆ. ನಿಂಗೇನ್ ಜಲಸ್ ಫೀಲ್ ಹಾ ಅಂತ. ನಾನು ಹೇಳುವುದಕ್ಕೆ ಬಂದಿದ್ನಾ ನಂಗೆ ಉರಿತಿದೆ ಅಂತ. ಕಿಸ್ ಮಾಡೋದು ಏನೇ ಮಾಡಿದರೂ ಅದು ಒಂದು ಫೀಲಿಂಗ್ ಸುಮ್ಮ ಸುಮ್ಮನೆ ಮಾಡುವುದಕ್ಕೆ ಬರಲ್ಲ. ಅವರಿಗೂ ಬರಲ್ಲ ಬಿಡು ಅಂತ ಹೇಳಿದ್ದಾಳೆ. ಆಗ ಜಯಶ್ರೀ ಫುಲ್ ವಿವರಣೆ ನೀಡಿದ್ದಾಳೆ. ಆ ಬಳಿಕ ಅಲ್ಲಿಂದ ಸೋನು ಎದ್ದು ಹೋಗಿ, ಸೋಮಣ್ಣನ ಜೊತೆಗೆ ಬಾಲ್ ಆಟ ಆಡುವಾಗ ಇದೇ ಟಾಪಿಕ್ ಜಯಶ್ರೀ ಮಾತನಾಡುತ್ತಾ ಕುಳಿತಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    Live Tv
    [brid partner=56869869 player=32851 video=960834 autoplay=true]

  • ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    40 ದಿನಗಳ ಕಾಲ ಬಿಗ್ ಬಾಸ್ (Bigg Boss Kannada OTT)  ಮನೆಯಲ್ಲಿ ಕಳೆದಿದ್ದಾರೆ. ಆದರೆ ಒಂದಷ್ಟು ಜನ ಸಮಾನ ಮನಸ್ಕರಿದ್ದರೆ ಇನ್ನೊಂದು ಜನರಿಗೆ ಅಷ್ಟು ಕನೆಕ್ಟ್ ಆಗಿರಲಿಲ್ಲ. ಟಾಸ್ಕ್ ವಿಚಾರ ಬರುತ್ತೆ, ಮನೆಕೆಲಸದ ವಿಚಾರ ಬರುತ್ತೆ. ಆ ಸಮಯದಲ್ಲೆಲ್ಲಾ ಎಷ್ಟೋ ಸಲ ಜಗಳಗಳು ಆಗಿರುತ್ತವೆ. ಆ ಜಗಳ ಬೇರೆಯವರಿಗೆ ಹರ್ಟ್ ಆಗುವ ಹಂತಕ್ಕೂ ತಲುಪಿರುತ್ತದೆ. ಬಿಗ್ ಬಾಸ್ ಮುಗಿದ ಮೇಲೆ ಯಾರು, ಎಲ್ಲೆಲ್ಲಿ ಇರುತ್ತಾರೆ ಗೊತ್ತಿಲ್ಲ. ಮತ್ತೆ ಎಲ್ಲರೂ ಒಟ್ಟಿಗೆ ಭೇಟಿಯಾಗುತ್ತಾರೆ ಎಂಬುದು ಭರವಸೆ ಇರುವುದಿಲ್ಲ. ಆದರೆ ಬಿಗ್ ಬಾಸ್ ಮನೆಯಿಂದ ಹೊರಡುವುದಕ್ಕೂ ಮುನ್ನ ಯಾರ ಮನಸ್ಸಲ್ಲೂ ಭಾರ ಇಲ್ಲದಂತೆ ಮಾಡಿದೆ. ಕ್ಷಮೆ ಕೇಳುವವರು ಕೇಳಿದ್ದಾರೆ, ಥ್ಯಾಂಕ್ಸ್ ಹೇಳುವವರು ಹೇಳಿದ್ದಾರೆ, ಗಿಫ್ಟ್ ಕೊಡುವವರು ಕೊಟ್ಟಿದ್ದಾರೆ. ಅದರಲ್ಲಿ ಹೆಚ್ಚಾಗಿ ಸೋನು ಮತ್ತು ಜಯಶ್ರೀಗೇನೆ ಹಲವು ಬಾರಿ ಬಂದಿದೆ.

    ಮೊದಲಿಗೆ ರಾಕಿ (Rakesh Adiga)  ಸೋನುಳ (Sonu Srinivas Gowda) ಹೆಸರನ್ನು ತೆಗೆದುಕೊಂಡ. ಆತನ ಮನಸ್ಸಲ್ಲಿ ಕ್ಷಮೆ ಹಾಗೂ ಥ್ಯಾಂಕ್ಸ್ ಎರಡು ಇತ್ತು. ಆದರೆ ಅದಾಗಲೇ ಒಬ್ಬರಿಗೆ ಕ್ಷಮೆ ಕೇಳಿದ್ದರಿಂದ ಕ್ಷಮಾಪಣಾ ರೀತಿಯಲ್ಲಿಯೇ ಥ್ಯಾಂಕ್ಸ್ ಹೇಳಿದ್ದಾನೆ. ಸಾಕಷ್ಟು ಸಲ ನಮ್ಮ ನೆನಪಿಗೆ ಬರುತ್ತಾ ಇದ್ರು. ಕ್ರೀಮ್ ಹಚ್ಚುವುದಾಗಲಿ, ಯಾವ ರೀತಿ ಬೈತಾ ಇದ್ರು, ಜೆನ್ಯೂನ್ ಆಗಿ ನನಗೆ ಎಲ್ಲದನ್ನು ಕೊಟ್ಟಿದ್ದು ಸೋನು. ಅವಳಿಗೆ ಟಾಸ್ಕ್ ಪ್ರಕಾರ ಕ್ಷಮೆ ಹೇಳುವುದಕ್ಕೆ ಆಗಲ್ಲ. ಆದರೆ ಥ್ಯಾಂಕ್ಸ್ ಎಂದಿದ್ದಾನೆ. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಬಳಿಕ ಸೋನು ಹೆಸರನ್ನು ರೂಪೇಶ್ (Roopesh Shetty) ತೆಗೆದುಕೊಂಡಿದ್ದು, ನಾನೇನೋ ತಪ್ಪು ಮಾಡಿದ ವಿಚಾರಕ್ಕಲ್ಲ, ಎಗ್ ರೈಸ್ ಮಾಡಿಕೊಟ್ಟಿದ್ದಾಳೆ ಅನ್ನೋ ವಿಚಾರಕ್ಕೂ ಅಲ್ಲ. ಕೆಲವಾರು ವಿಚಾರಕ್ಕೆ ನಾನು ಅವಳನ್ನು ನಾಮಿನೇಟ್ ಮಾಡಿರುತ್ತೀನಿ, ಕೆಲವೊಂದು ವಿಚಾರಗಳು ಬಂದಾಗ ಅವಳ ಹೆಸರು ಎತ್ತಿರುತ್ತೀನಿ, ಕೆಲವೊಂದು ವಿಚಾರಗಳಲ್ಲಿ ಅವಳ ತಪ್ಪುಗಳನ್ನು ಹೇಳಿರುತ್ತೀನಿ ಎಲ್ಲರ ಮುಂದೆ. ಮೊನ್ನೆ ಕಳಪೆ ಬಂದಾಗಲೂ ಅವಳ ಹೆಸರನ್ನು ಎತ್ತಿದ್ದೀವಿ. ಆದರೆ ಅದರ ಹಿಂದೆ ಯಾವ ಉದ್ದೇಶವೂ ಇರಲ್ಲ. ಆದರೆ ನನ್ನಿಂದ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸು ಎಂದಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇನ್ನು ಸೋಮಣ್ಣ ಕೂಡ ಸೋನುಗೆ ಥ್ಯಾಂಕ್ಸ್ ಹೇಳಿದ್ದಾರೆ. ಯಾರಿಗೆ ಏನೇ ಇರಲಿ ಸೋನು ಅಂದ್ರೆ ಇಷ್ಟ. ನಂಗೆ ನೋವಾದಾಗ, ನಂಗೆ ನಗಿಸಿದ್ದು, ಎಂಗೇಜ್ ಮಾಡಿದ್ದು ಸೋನು ಎಂದಿದ್ದಾರೆ. ಆಗ ಸೋನು ರಿಯಾಕ್ಟ್ ಮಾಡಿದ್ದು, ನಾನು ಬೇಜಾರು ಮಾಡಲ್ಲ ಅಂತ ಅಲ್ಲ. ಖುಷಿನು ಕೊಟ್ಟಿದ್ದೀನಿ. ಆದರೆ ನನ್ನಿಂದ ನಕ್ಕಿದ್ದಾರೆ ಅಂದ್ರೆ ಅದು ನನಗೂ ಖುಷಿ ಕೊಟ್ಟಿದೆ ಎಂದಿದ್ದಾಳೆ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಬಳಿಕ ಸದಸ್ಯರ ಬಾಯಲ್ಲಿ ಬಂದ ಹೆಸರು ಜಯಶ್ರೀ, (Jayashree Aradhya) ಸೋಮಣ್ಣ (Somanna Machimada) ಜಯಶ್ರೀಗೆ ಕ್ಷಮೆ ಕೇಳಿದ್ದು, ಕ್ಷಮೆ ಕೇಳುವುದಕ್ಕೆ ನಾನು ಜಯಶ್ರೀಯನ್ನು ಕರೆಯುತ್ತೇನೆ. ಕ್ಯಾಪ್ಟೆನ್ಸಿ ಗೇಮ್ ನಲ್ಲೂ ನನಗೆ ಡಿಸ್ಟರ್ಬ್ ಮಾಡಿದ್ದರು. ಆ ಟಾಸ್ಕ್ ಆದ ಮೇಲೆ ನಾನು ತುಂಬಾ ರೂಡ್ ಆಗಿ ಬಿಹೇವ್ ಮಾಡಿದ್ದೆ. ಗೊತ್ತಿಲ್ಲ ಆ ಸಮಯದಲ್ಲಿ ಬೇಜಾರು ಆಗಿತ್ತು. ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ನಾನು ಎಲ್ಲರ ಬಳಿ ರಿಯಾಕ್ಟ್ ಮಾಡಿ ಬಿಡುತ್ತೇನೆ ಆದರೆ ನಿಮ್ಮ ಬಳಿ ನಾನು ಯಾಕೆ ಮಾಡಲ್ಲ ಎಂದರೆ ನಿಮ್ಮ ಮೇಲೆ ಗೌರವಾನು ಇದೆ, ಭಯಾನು ಇದೆ ಎಂದಿದ್ದಾರೆ.

    ಸಾನ್ಯಾ ಕೂಡ ಜಯಶ್ರೀ ಬಳಿ ಕ್ಷಮಾಪಣೆ ಕೇಳಿದ್ದಾಳೆ. ಇವಳಿಗೆ ಏನು ಮಾಡಿಯೇ ಇಲ್ಲ. ಆದರೂ ಪ್ರತಿಸಲ ನಾಮಿನೇಟ್ ಅಂತ ಬಂದಾಗ ನಿನ್ನ ಹೆಸರನ್ನೇ ಎತ್ತಿದ್ದೀನಿ. ಟಾಸ್ಕ್ ಆಡುವಾಗಲೂ ಫಿಟ್ನೆಸ್ ಇರಬೇಕು ಅಂತೆಲ್ಲಾ ಹೇಳಿದ್ದೀನಿ. ಆದರೆ ಈ ಮನೆಯಲ್ಲಿ ಅದು ಈಗ ಉಪಯೋಗಕ್ಕೆ ಇಲ್ಲ. ಗೊತ್ತೋ ಗೊತ್ತಿಲ್ಲದೆಯೋ ನಿನ್ನ ಹೆಸರನ್ನೇ ಹೆಚ್ಚು ಸಲ ಎತ್ತಿದ್ದೀನಿ ನನ್ನನ್ನು ಕ್ಷಮಿಸು. ನಿನ್ನ ಸದ್ಗುಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅರ್ಥಾನೆ ಮಾಡಿಕೊಳ್ಳಲಿಲ್ಲ. ನಾನು ನಿನ್ನ ಒಳ್ಳೆ ಗೆಳತಿಯಾಗಬೇಕು ಎಂದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಸದ್ಯಕ್ಕೆ ರಾಕಿ (Rakesh Adiga)  ಬಗ್ಗೆ ಇರುವ ಪೊಸೆಸಿವ್‍ನೆಸ್ ಅನ್ನು ಕಳೆಯುವುದಕ್ಕೆ ಯತ್ನಿಸುತ್ತಿದ್ದಾಳೆ. ಇಂದು ಬೆಳ್ಳಂ ಬೆಳ್ಳಗ್ಗೆಯೇ ಕುಳಿತು ರಾಕಿ ಬಗ್ಗೆ ಸೋಮಣ್ಣ (Somanna Machimada) ಹತ್ತಿರ ಮಾತನಾಡುತ್ತಿದ್ದಳು. ಬೇಬಿ ಥರ ಚೇಂಜ್ ಇರೋನು ಅಂದ್ರೆ ಅದು ನನ್ನ ಮೂರ್ಖತನ. ಅವನು ನನಗೆ ಆ ಸಲಿಗೆ ಕೊಟ್ಟು, ನನಗೆ ಕೇರ್ ಮಾಡಿದ್ದಾನೆ ಅಂದ್ರೆ ಅದು ನನಗೆ ಒಳ್ಳೆಯದ್ದೆ. ನಂಗೆ ಯಾವ ಥರದ್ದು ಫೀಲಿಂಗ್ಸ್ ಇಲ್ಲ ಸೋಮಣ್ಣ. ನಂಗೆ ಅವನ ಮೇಲೆ ಅಯ್ಯೋ ಎನಿಸಿದೆ. ಅಯ್ಯೋ ಎನಿಸಿದಾಗಲೇ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೇರ್ ಮಾಡುವುದಕ್ಕೆ ಸಾಧ್ಯ. ಸದ್ಯಕ್ಕೆ ನನಗೆ ಏನು ಕೊರತೆಯಾಗಿದೆ ಅಂದ್ರೆ. ಅವನ ಕ್ಯಾರೆಕ್ಟರ್ ಇರುವುದೇ ಹಾಗೆ ಅಲ್ವಾ. ಅವನು ನನ್ನ ಜೊತೆ ಇರುವ ತರ ಬೇರೆ ಹುಡುಗಿಯರ ಬಳಿ ಇದ್ದರೆ ನನಗ್ಯಾಕೆ ಪೊಸೆಸಿವ್‍ನೆಸ್ ಆಗ್ತಿದೆ. ಲವ್ ಅಲ್ಲ ಮಣ್ಣು ಅಲ್ಲ ಮಸಿ ಅಲ್ಲ ಎಂದಿದ್ದಾರೆ.

    ನನ್ನ ಫ್ಯೂಚರೇ ಬೇರೆ, ಅವನ ಕನಸೇ ಬೇರೆ. ಆದರೆ ಅವನು ಎಲ್ಲಾ ಹುಡುಗಿಯರ ಜೊತೆ ಇದ್ದಾಗ ನಂಗ್ಯಾಕೆ ಪೊಸೆಸಿವ್‍ನೆಸ್ ಬರುತ್ತಿದೆ ಗೊತ್ತಾಗುತ್ತಿಲ್ಲ. ಅವನು ಮೊದಲಿನಿಂದಲೂ ಎಲ್ಲಾ ಹುಡುಗಿಯರ ಜೊತೆಗೂ ಒಂದೇ ರೀತಿಯಲ್ಲಿ ಇದ್ದಿದ್ದರೆ ನಂಗೆ ಈ ರೀತಿಯೆಲ್ಲಾ ಅನ್ನಿಸುತ್ತಾ ಇರಲಿಲ್ಲ. ಆದರೆ ಅವನು ಮಾತಲ್ಲಿ ಹೇಳುತ್ತಿದ್ದಾನೆ. ಎರಡು ದಿನದಿಂದ ನಡವಳಿಕೆ ಚೇಂಜ್ ಆಗುತ್ತಿದೆ. ನೀನು ಪೊಸೆಸಿವ್‍ ಆಗಬೇಡ. ನಾನು ಎಲ್ಲರ ಜೊತೆಗೂ ಹೀಗೆ ಇರೋದು ಅಂತಿದ್ದಾನಲ್ಲ. ಹಂಗೆಲ್ಲಾ ಎಲ್ಲಿದ್ದ. ಮೊದಲಿನಿಂದ ನನ್ನ ಜೊತೆಗೆ ಮಾತ್ರ ಅಲ್ವಾ ಇದ್ದದ್ದು ಎಂದಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇದನ್ನೆಲ್ಲಾ ಕೇಳಿಸಿಕೊಂಡ ಗುರೂಜಿ, ಹಂಗೆಲ್ಲಾ ಏನಿಲ್ಲಾ ಕಣವ್ವ ನೀನೇ ಲೇಟ್ ಆಗಿ ಹೋಗಿ ನಂದೆ ಬಸ್ಸು ಅಂತ ಇದ್ದೀಯಾ. ಬಸ್ ಮುಂಚೆನೆ ಓಡಿದೆ, ಪಿಕಪ್ ಮಾಡಿದೆ, ಡ್ರಾಪ್ ಮಾಡಿದೆ ಎಲ್ಲಾ ಕಥೆ ಗೊತ್ತಿದ್ದರು, ನಂದೇ ಬಸ್ ನಂದೆ ಬಸ್ ಅಂದ್ರೆ. ಊರಿಗೆ ಗೊತ್ತು ಆ ಬಸ್ ಬೇರೆ ಹತ್ತಿದೆ ಅಂತ. ಟಿಕೆಟ್ ತಗೊಂಡ್ವಾ ಮನೆಗೋದ್ವಾ, ಇಳಿದ್ವಾ ಅಂತ ಅನ್ನೋದು ಬಿಡೋದು ಬಿಟ್ಟು ನಂದೆ ಬಸ್ ಅಂತಾ ಇದ್ರೆ ಅಂತ ಗುರೂಜಿ ಅಷ್ಟೆಲ್ಲಾ ಹೇಳಿದರೂ ಅದನ್ನು ಕೇಳುವುದಕ್ಕೆ ಸೋನು ರೆಡಿ ಇಲ್ಲ. ನಿನ್ನೆಯಿಂದ ನಾನು ಹ್ಯಾಪಿಯಾಗಿದ್ದೀನಿ. ಬಿಕಾಸ್ ನಿಮ್ಮತ್ರ ಎಲ್ಲಾ ಟೈಪಾಸ್ ಮಾಡುತ್ತಾ ಇದ್ದೀನಿ ಎಂದಿದ್ದಾಳೆ. ಜೊತೆಗೆ ನನಗೆ ಉರಿಸಬೇಕು ಅಂತ ಯಾರಾದರೂ ಮಾಡಿದರೆ ನಾನು ಉರಿದುಕೊಳ್ಳಲ್ಲ. ನಾಣು ಹೊರಗಡೆ ಬಂದು ಬಿಟ್ಟಿದ್ದೀನಿ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಅದಾದ ಮೇಲೆ ರಾಕಿಗೆ ಉರಿಸುವುದಕ್ಕೆ ಸೋನು (Sonu Srinivas Gowda) ಶುರು ಮಾಡಿದಳು. ಸೋನುಗೆ ಉರಿಸಲು ರಾಕಿ ಮತ್ತು ಜಯಶ್ರೀ ಶುರು ಮಾಡಿದರು. ಇದರ ಪರಿಣಾಮ ರೂಪೇಶ್ ಬಳಿ ಒಂದು ಮೊಟ್ಟೆ ತೆಗೆದುಕೊಂಡು, ತನ್ನ ಬಳಿಯಿದ್ದ ಒಂದು ಮೊಟ್ಟೆ ಹಾಕಿದ ಸೋನು (Jayashree Aradhya) ಸೂಪರ್ ಆಗಿ ಎಗ್ ರೈಸ್ (Egg Rice) ಮಾಡಿದಳು. ಜಯಶ್ರೀ ಒಂದೇ ಒಂದು ತುತ್ತು ಕೊಡು ಎಂದರೂ ಕೊಡಲಿಲ್ಲ. ಆದರೆ ರೂಪೇಶ್ (Roopesh Shetty)  ಮೂರು ಸ್ಪೂನ್ ಕೊಟ್ಟಿದ್ದಾನೆ. ಎಗ್ ರೈಸ್  ತಿನ್ನುವಾಗ ಡೈನಿಂಗ್ ಟೇಬಲ್ ಮೇಲೆ ನಾನಾ ಫನ್‍ಗಳು ನಡೆದಿವೆ. ಸೋನು, ರೂಪೇಶ್‍ಗೆ ಎಗ್ ರೈಸ್ ತುತ್ತು ಕೊಟ್ಟಿದ್ದಾಳೆ. ಆಗ ಎದುರಿಗಿದ್ದ ರಾಕಿ, ಕಿಸ್ ಕೊಡೇ ಜಯಶ್ರೀ, ನೀನೆ ಕೊಡ್ತಿಯಾ ಅಥವಾ ನಾನು ಕೊಡ್ಲಾ ಅಂತ ಹೇಳಿ ರಾಕಿನೆ ಕಿಸ್ ಕೊಟ್ಟಿದ್ದಾನೆ. ಈ ಕಡೆ ರೂಪಿಗೆ ಭಯ. ಸೋನು ಎಲ್ಲಿ ನನಗೆ ಕಿಸ್ ಕೊಟ್ಟು ಬಿಡುತ್ತಾಳೋ ಅಂತ. ಮುಖ ಮುಖ ನೋಡಿ ಗಾಬರಿಯಲ್ಲಿಯೇ ಎಗ್ ರೈಸ್ ತಿಂದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಮುಂದೆ ಕ್ಲೋಸ್ ಆಗಿರುವ ಜಯಶ್ರೀಯೇ ಸೋನು ಬಗ್ಗೆ ಕೆಟ್ಟ ಭವಿಷ್ಯ ನುಡಿದಳಾ?

    ಚೈತ್ರಾ ಹೋದ ಮೇಲೆ ಜಯಶ್ರೀಯ ಒಂಟಿತನಕ್ಕೆ ಒಂದಷ್ಟು ಜೊತೆಯಾಗಿದ್ದು ಸೋನು. ಈಗ ಜಯಶ್ರೀ (Jayashree) ಹೆಚ್ಚು ಸಮಯ ಸೋನು (Sonu Srinivas Gowda) ಜೊತೆಗೆ ಕಳೆಯುತ್ತಾಳೆ. ಆದರೆ ಸೋನು ಇಲ್ಲದೆ ಇರುವಂತ ಸಮಯ ನೋಡಿ ಸೋನು ಬಗ್ಗೆ ನೆಗೆಟಿವ್ ಆಗಿಯೇ ಮಾತನಾಡುವುದು ಹೆಚ್ಚು. ಸೋನು ಮುಂದೆ ಇದ್ದಾಗ ಉರಿದುಂಬಿಸಿ, ನಾನು ನಿನ್ನ ವೆಲ್ ವಿಷರ್ ಅನ್ನೋ ರೀತಿ ಬಿಂಬಿಸಿಕೊಳ್ಳುತ್ತಾಳೆ ಜಯಶ್ರೀ.

    ಸೋಮಣ್ಣ ಬಟ್ಟೆ ಮಡಿಚಿಡುತ್ತಿದ್ದರು. ಜಯಶ್ರೀ ಕುಳಿತು ಮಾತನಾಡುತ್ತಿದ್ದಳು. ಆಗ ಬಂದ ಸೋನು, ಸೋಮಣ್ಣ ನನ್ನ ವಾಟರ್ ಬಾಟೆಲ್ ನೋಡಿದ್ರಾ ಅಂದ್ಲು. ಅದಕ್ಕೆ ಸೋಮಣ್ಣ ಸ್ವಲ್ಪ ಕೋಪಗೊಂಡವರಂತೆ ಉತ್ತರಿಸಿದರು. ಬಳಿಕ ಕೋಪ ಮಾಡಿಕೊಂಡ ಸೋನು ಅಲ್ಲಿಂದ ಕಾಲ್ಕಿತ್ತಳು. ಆಮೇಲೆ ಜಯಶ್ರೀ, ಸೋನು ಮುಂದಿನ ಭವಿಷ್ಯದ ದಿನಗಳನ್ನು ಸೋಮಣ್ಣನ ಮುಂದೆ ತೆರೆದಿಟ್ಟಿದ್ದಾಳೆ. ಇದನ್ನೂ ಓದಿ: ಸೋನು-ರಾಕೇಶ್ ನಡುವೆ ಜಯಶ್ರೀ ಆಟ!

    ಸೋನು ಬಗ್ಗೆ ಮಾತು ಮುಂದುವರಿಸಿದ ಜಯಶ್ರೀ, ಒಳಗಡೆ ಇರುವವರಿಗೆ ಯಾರಿಗೂ ಇಷ್ಟವಾಗುವುದಿಲ್ಲ. ಹೊರಗಡೆ ನೋಡುಗರಿಗೆ ಮಜಾ ಕೊಡುತ್ತಾಳೆ ಅಷ್ಟೇ. ಮೊನ್ನೆ ಅವಳು ಟಾಪ್ ತ್ರಿ ತೆಗೆದುಕೊಂಡಾಗಲೂ ನಾನು ನನ್ನ ಒಪಿನಿಯನ್ ಹೇಳುತ್ತಾ ಇಲ್ಲ ಇಲ್ಲಿ. ಜಯಶ್ರೀಗೆ ಆ ಕ್ಯಾರೆಕ್ಟರ್ ನಿಜವಾಗಲೂ ಇಷ್ಟವಾಗಲ್ಲ. ನೋಡುವ ಜನರಿಗೂ ಅದು ಇಷ್ಟವಾಗುತ್ತೆ ಅಂತ ಹೇಳಲ್ಲ. ಮಜಾ ಕೊಡುತ್ತೆ. ಅವಳು ಆಡುವ ಮಾತು, ಬಿಹೇವಿಯರ್, ಏನೇನೋ ಮಾತನಾಡುವುದು ಮಜಾ ಕೊಡುತ್ತದೆ. ಸೀಸನ್ 9ಗೆ ಬರುವವರಿಗೆ ಏನಾದರೂ ಇವಳು ಬರ್ತಿದ್ದಾಳೆ ಅಂತ ಗೊತ್ತಾದರೆ, ಇವಳನ್ನು ಎಷ್ಟರಲ್ಲಿ ಬೇಕೋ ಅಷ್ಟರಲ್ಲಿ ಇಟ್ಟುಕೊಳ್ಳುತ್ತಾರೆ.

    ನಮಗೆಲ್ಲಾ ಹೇಗೆ ಆಗಿ ಬಿಟ್ಟಿದೆ ಅಂದ್ರೆ ಇಲ್ಲಿ, ಅಯ್ಯೋ ಅವಳ ಹತ್ರ ಮಾತನಾಡಿ ನಮ್ಮ ಇದನ್ನು ನಾವೇ ಯಾಕೆ ಹಾಳು ಮಾಡಿಕೊಳ್ಳಬೇಕು ಅಂತ ಸುಮ್ಮನೆ ಇರುತ್ತೀವಿ. ರಾಕಿ, ನನ್ನ ಮೊನ್ನೆ ಕೇಳುತ್ತಾ ಇದ್ದ. ನೀನು ಅಷ್ಟೊಂದು ರೇಗುತ್ತೀಯಾ, ಕೋಪ ಮಾಡಿಕೊಳ್ಳುತ್ತೀಯಾ. ಆದರೆ ಸೋನುನಾ ಅದೇಗೆ ಸಹಿಸಿಕೊಂಡು ಇದ್ದೀಯಾ ಅಂತ ಕೇಳಿದ. ನಾನು ಎಲ್ಲರಿಗೂ ಇಲ್ಲಿ ಮಾತನಾಡುತ್ತೀನಿ. ಅವಳ ವಿಚಾರವಾಗಿ ನಾನು ಯಾಕೆ ಮಾತನಾಡುವುದಿಲ್ಲ ಎಂದರೆ ಅವಳ ಮಾತು ನನಗೆ ಲೆಕ್ಕಕ್ಕೆ ಇಲ್ಲ. ನಿಜ ಜೀವನದಲ್ಲಿ ಅವಳ ಕ್ಯಾರೆಕ್ಟರ್ ಅನ್ನು ಸಹಿಸಿಕೊಂಡು ಯಾವನು ಇರಲ್ಲ ಎಂದಾಗ ಹು ಹು ಅಂತಿದ್ದ ಸೋಮಣ್ಣ ಕೂಡ ಮಾತು ಜೋಡಿಸಿದ್ದಾರೆ. ಚಾನ್ಸೆ ಇಲ್ಲ. ಬದುಕಿಗೂ ಇದೆಲ್ಲಾ ಯೂಸ್ ಆಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸೋನು ಹಿಂದೆ ಸಾವಿರ ಹುಡುಗರು ಇದ್ದಾರಂತೆ – ಹಿಂದೆ ನಿಂತಿದ್ದ ಗುರೂಜಿಗೆ ನಾನೊಬ್ಬನೆ ಅಲ್ವಾ ಅನ್ನೋ ಅನುಮಾನ!

    ಮಾತು ಮುಂದುವರೆಸಿದ ಜಯಶ್ರೀ, ಹುಹು ಈ ಥರ ಇದ್ದರೆ ಅವಳನ್ನು ಎಲ್ಲರು ಉಗಿದು ಉಪ್ಪಿನಕಾಯಿ ಹಾಕಿ, ದೂರ ಇಡುತ್ತಾರೆ ಬಿಟ್ಟರೆ, ಯಾರು ಅವಳನ್ನು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಸೋಮಣ್ಣ ಅವರೇ ನಾನೇ ಬರೆದುಕೊಡ್ತೀನಿ, ಹೊರಗೆ ಹೋದ ಮೇಲೆ ನೋಡಿ. ಈ ಸೀಸನ್ 9 ಕಂಟಿನ್ಯೂ ಆಗಬಹುದು ಆಗದೆಯೂ ಇರಬಹುದು. ಆದರೆ ಹೊರಗೆ ಹೋದ ಮೇಲೆ ಅವಳನ್ನ ಯಾರು ಏನು ಎಂಟರ್ಟೈನ್ ಮಾಡಿಕೊಂಡು, ಕಾಫಿಗೆ ಕರೆದುಕೊಂಡು, ಮನೆ ಫಂಕ್ಷನ್‌ಗೆ ಕರೆದುಕೊಂಡು ಆ ರೀತಿಯೆಲ್ಲಾ ಯಾರು ಅವಳನ್ನು ಇಷ್ಟ ಪಡಲ್ಲ ನನ್ನ ಪ್ರಕಾರ ಎಂದಿದ್ದಾಳೆ. ಆಗ ಸೋಮಣ್ಣ, ಹೌದು ಅವಳ ರೀತಿಯ ತಿಕ್ಕಲುಗಳೇ ಅವಳನ್ನು ಇಷ್ಟಪಡಬೇಕು ಎಂದಿದ್ದಾರೆ.

    ಆಗ ಜಯಶ್ರೀ, ಇಲ್ಲಿ ನಾವೆಲ್ಲಾ ಅವಳನ್ನು ಮಾತನಾಡಿಸಬಹುದು. ಆದರೆ ಹೊರಗಡೆ ಹೋದ್ರೆ ಯಾರೂ ಅವಳನ್ನು ಮಾತನಾಡಿಸುವುದಿಲ್ಲ. ಅವಳಿಗೆ ಲೀಸ್ಟ್ ಇಂಪಾರ್ಟೆಂಟ್ ಇರುತ್ತೆ ಎಂದು ಸೋನು ಬಗ್ಗೆ ಮಾತನಾಡಿದ್ದಾಳೆ. ರಾಕಿ ಬಳಿಯೂ ಹೋಗಿ ಸೋನು ನಿನ್ನ ಕೇರ್ ಟೇಕರ್ ಅಂದ್ಲು, ಫ್ರೆಂಡ್ ಆಗಿ ಜಲಸಿ ಇದೆ ಅಂದ್ಲು ಅಂತ ನಂಬಿ ಹೇಳಿದ್ದ ಮಾತನ್ನೆಲ್ಲಾ ಅವನ ಬಳಿ ಹೇಳುತ್ತಾ ಇದ್ದಳು. ಇದನ್ನೂ ಓದಿ: ಸೆ.25ರಿಂದ ಬರಲಿದೆ ಬಿಗ್ ಬಾಸ್ 9ನೇ ಸೀಸನ್

    Live Tv
    [brid partner=56869869 player=32851 video=960834 autoplay=true]

  • ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ –  ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ಪ್ರೀತಿಯಿಂದ ಆಯ್ಕೆ ಮಾಡಿದ ಸೋನು ಮಾತಿನಿಂದ ಜಯಶ್ರೀಗೆ ಬೇಸರ – ಎಲ್ಲರೂ ದಂಗಾಗುವಂತೆ ಕಿರುಚಿದ್ಯಾಕೆ ಜಯಶ್ರೀ

    ವತ್ತಿನ ಎಪಿಸೋಡ್ ಪೂರ್ತಿ ಗುರೂಜಿಯ ಸ್ವಾರ್ಥ, ಆ ಸ್ವಾರ್ಥದ ಹಿಂದಿನ ಉದ್ದೇಶ, ಅದರ ಜೊತೆಗೆ ಹೊತ್ತಿಕೊಂಡ ಬೆಂಕಿಯಿಂದಾನೇ ಅರ್ಧ ದಿನ ಕಳೆದು ಹೋಯ್ತು. ಗುರೂಜಿ ಹೇಳಿದ ಮಾತುಗಳಿಗೆ, ಸೋನು ಮತ್ತು ಜಯಶ್ರೀ ಕೊಟ್ಟ ವಿವರಣೆಗೆ ರೂಪೇಶ್ ಅಂಡ್ ರಾಕೇಶ್ ಬಿದ್ದು ಬಿದ್ದು ನಕ್ಕಿದ್ದಾರೆ. ಇಷ್ಟು ದಿನದ ಬಿಗ್ ಬಾಸ್ ಮನೆಯಲ್ಲಿ ಇಷ್ಟು ಒಳ್ಳೆಯ ಎಂಟರ್ಟೈನ್ಮೆಂಟ್ ಸಿಕ್ಕಿದ್ದು ಇಲ್ಲವೇ ಇಲ್ಲ ಎನಿಸುತ್ತದೆ.

    ಜಯಶ್ರೀ, ಸೋನುಳನ್ನು ಆಯ್ಕೆ ಮಾಡಿದ್ದಕ್ಕೆ ಗುರೂಜಿ ಕೋಪ ಹೆಚ್ಚಾಗಿದೆ. ಅದನ್ನು ಸೋಫಾದ ಮೇಲೆ ಕುಳಿತಾಗಲೂ ಹೇಳಿದ್ದಾರೆ. ಜಯಶ್ರೀ ನೋಡುವ ತನಕ ನೋಡಿ ಇದ್ಯಾಕೋ ನಿಲ್ಲಲ್ಲ ಎಂದು ಗೊತ್ತಾದಾಗ ಅಡುಗೆ ಮನೆ ಕಡೆಗೆ ಬಂದಿದ್ದಾಳೆ. ಆಗ ಸೋಮಣ್ಣ ಮತ್ತು ಸಾನ್ಯಾಗೆ ಅಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ವಿವರಿಸಿದ್ದಾಳೆ. ಅದೇ ಸಮಯಕ್ಕೆ ಗುರೂಜಿ ಮತ್ತೆ ಅಲ್ಲಿಗೆ ಬಂದಿದ್ದಾರೆ. ಬದವರು ಮತ್ತೆ ಅದೇ ಆಯ್ಕೆಯ ವಿಚಾರ ತೆಗೆದಿದ್ದಾರೆ. ಜಯಶ್ರೀ ಅದಾಗ್ಯೂ ನಾನು ಈಗಾಗಲೇ ಎಲ್ಲವನ್ನು ವಿವರಿಸಿದ್ದೀನಿ ಎಂದೇ ಹೇಳಿದ್ದಾಳೆ. ಆದರೆ ಗುರೂಜಿ ಮಾತ್ರ ತನ್ನ ವಿವರಣೆಯನ್ನು ಮಾತ್ರ ನಿಲ್ಲಿಸಲೇ ಇಲ್ಲ. ಇದನ್ನೂ ಓದಿ: ಸೋನು ಆಯ್ಕೆ ಮಾಡಿದ್ದಕ್ಕೆ ಗುರೂಜಿಗೆ ಕೋಪ – ನನ್ನ ವೋಟಿಗೆ ನ್ಯಾಯ ಬೇಕೆಂದು ಮನೆ ತುಂಬಾ ರಾದ್ಧಾಂತ!

    ನಿಂದೆಲ್ಲಾ ಓಕೆ, ನಾಲ್ಕು ಜನ ಒಳಗೆ ಇದ್ದಾಗ ನೀನು ಯೋಚಿಸಬೇಕು. ಇಲ್ಲಿಗೆ ಆಗೋಯ್ತು ಬಿಡು ಆದರೆ ಹೊರಗು ಸರಿಯಾಗಿ ಯೋಚನೆ ಮಾಡು ಎಂದು ಜಯಶ್ರೀಗೆ ಬುದ್ದಿ ಹೇಳಿದ್ದಾರೆ. ಅಲ್ಲಿಯೇ ಇದ್ದ ಸೋಮಣ್ಣ, ಆಯ್ತು ನೀವೂ ಇವತ್ತು ಎರಡು ಆಟ ಗೆದ್ದಿದ್ದೀರಿ ಅದನ್ನು ಸಂತೋಷ ಪಡಿ ಎಂದಿದ್ದಾರೆ. ಆಗ ಸುಮ್ಮನೆ ಕುಳಿತುಕೊಳ್ಳದ ಸೋನು, ಅವಳು ಅಂದುಕೊಂಡಿರಬಹುದು. ಈಗಾಗಲೇ ಎರಡು ಗೇಮ್ ಸೋತಿದ್ದೀನಿ ಮತ್ತೆ ಸೋಲುವುದು ಬೇಡ ಅಂತ ಆ ರೀತಿ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಒತ್ತಿ ಒತ್ತಿ ಹೇಳಿದ್ದಾಳೆ. ಈ ಮಧ್ಯೆ ಮತ್ತೆ ಮಾತನಾಡಿದ ಗುರೂಜಿ, ಅವರ ಬದಲು ನೀವೇ ವೋಟನ್ನು ಕೊಡಿ. ನಮ್ಮ ಮಧ್ಯೆ ಈ ರೀತಿ ಮಾತುಕತೆಯಾಗಿದೆ ಅಂತ ಕೇಳಬೇಕಿತ್ತು ಎಂದು ಸೋಮಣ್ಣನ ಬಳಿ ಹಂಚಿಕೊಳ್ಳುತ್ತಾ ಇದ್ದರು. ಇದನ್ನೂ ಓದಿ: ಆರ್ಯವರ್ಧನ್ ಮುಗ್ಧರಲ್ಲ ಅನ್ನೋದು ಮನೆಮಂದಿಗೆಲ್ಲ ಪ್ರೂವ್ ಆಯ್ತು!

    ಆಗ ಮತ್ತೆ ಮಾತು ಶುರು ಮಾಡಿದ ಸೋನು, ನೀನು ಅವರ ವೋಟು ತೆತಗೆದುಕೊಂಡು ದೊಡ್ಡ ತಪ್ಪು ಮಾಡಿದೆ ಎಂದು ಜಯಶ್ರೀಗೆ ಹೇಳಿದ್ದಾಳೆ. ಜಯಶ್ರೀ, ಆಯ್ತು ಬಿಡೆ. ಅದನ್ನೇ ಎಳಿಬೇಡ ಎಂದು ಇತ್ತ ಗುರೂಜಿಗೂ ಬುದ್ದಿ ಹೇಳಿದ್ದಾಳೆ. ಆಯ್ತು ಒಂದು ಮಾತಿಗೆ ಇದನ್ನು ಬಿಡಿ ಗುರೂಜಿ ಎಂದಿದ್ದಾಳೆ. ಆಗ ಮತ್ತೆ ಗುರೂಜಿ ಎರಡು ಥರ ಮಾತನಾಡಬೇಡ ಎಂದಿದ್ದಾರೆ. ಆಗ ಮತ್ತೆ ರೊಚ್ಚಿಗೆದ್ದ ಸೋನು, ಎರಡು ಥರ ಯಾರು ಮಾತನಾಡುತ್ತಿಲ್ಲ ಇಲ್ಲಿ. ನೆಗೆಟಿವಿಟಿಯಿಂದಾನೇ ಅವಳು ಬಿಟ್ಟಿದ್ದಾಳೆ. ಎರಡು ಗೇಮ್ ಸೋತಿರೋದಕ್ಕೆ ಬಿಟ್ಟಿದ್ದಾಳೆ ಎಂದಾಗ ಜಯಶ್ರೀ ಆ ಥರ ಎಲ್ಲಾ ಹೇಳಬೇಡ ಸೋನು, ಈ ಮಾತನ್ನೆಲ್ಲಾ ನಾನು ತಗೋಳುವುದಿಲ್ಲ. ನೆಕ್ಸ್ಟ್ ನಾನು ಆಡಿರುವ ಆಟಗಳಿದ್ದವು. ಆಡದೆ ಇರುವವರನ್ನು ಕರೆದುಕೊಂಡು ನಾನು ಆಡುತ್ತಾ ಇದ್ದೆ. ಗೆದ್ದು ತೋರಿಸಬೇಕು ಅಂತ ನಾನು ನಿಂತುಕೊಳ್ಳಬಹುದಿತ್ತು. ನಾನು ಅದಾಗಲೇ ಆಡಿದ್ದೀನಿ. ಈಗಾಗಲೇ ಜನರಿಗೆ ನಾವೂ ಏನು ಅಂತ ಗೊತ್ತಾಗಿದೆ. ಈ ಕೊನೆವಾರವನ್ನು ಎಂಜಾಯ್ ಮಾಡಲಿ ಅಂತ ಬಿಟ್ಟುಕೊಟ್ಟಿದ್ದು ಅಂತ ಜಯಶ್ರೀ ಹೇಳಿದ್ದಾಳೆ. ಮತ್ತೆ ಅದೇ ಚರ್ಚೆ ಜೋರಾಗಿದೆ. ಈಗ ಇನ್ನು ಬಿಗ್ ಬಾಸ್ ಆದೇಶ ಬಂದಿಲ್ಲ ತಾನೇ ಬದಲಾಯಿಸಿ ಎಂದಿದ್ದಾಳೆ. ಆಗ ಸೋನು ಜಸ್ಟ್ ಆಯ್ತು ಅವರ ಬಾಯಿಯನ್ನು ಮುಚ್ಚಿಸು ಎಂದಿದ್ದಾಳೆ. ಅದಕ್ಕೆ ರೊಚ್ಚಿಗೆದ್ದ ಜಯಶ್ರೀ, ಜೋರು ಧ್ವನಿಯಲ್ಲಿ ನಾನು ಅವರ ಬಾಯಿ ಮುಚ್ಚಿಸುವುದಕ್ಕೆ ಬಿಗ್ ಬಾಸ್‍ಗೆ ಬಂದಿಲ್ಲ ಕಣೇ. ಅವರು ಮಾತನಾಡುವುದಕ್ಕೆ ಎಲ್ಲಾ ಅಧಿಕಾರವೂ ಇದೆ. ನಾನು ಏನು ಅಲ್ಲ. ಅವರ ಮಗಳ, ಬಂಧುವ, ಬಳಗವಾ ಬಾಯಿ ಮುಚ್ಚಿಸು ಮುಚ್ಚಿಸು ಅಂತ ಹೇಳುವುದಕ್ಕೆ. ನಾನೇ ಅಲ್ಲಿಂದ ಎದ್ದು ಬಂದೆ. ಈಗ ನೀನು ಅವರಿರುವ ಕಡೆ ಇರಬೇಡ ಎದ್ದು ಹೋಗು ಎಂದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]