Tag: ಜಯನಗರ ಚುನಾವಣೆ

  • ಜಯನಗರದಲ್ಲಿ ಸೌಮ್ಯಾ ರೆಡ್ಡಿಗೆ ಜಯ:  ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮತ?

    ಜಯನಗರದಲ್ಲಿ ಸೌಮ್ಯಾ ರೆಡ್ಡಿಗೆ ಜಯ: ಯಾವ ಸುತ್ತಿನಲ್ಲಿ ಯಾರಿಗೆ ಎಷ್ಟು ಮತ?

    ಬೆಂಗಳೂರು: ಜಯನಗರ ಚುನಾವಣೆಯಲ್ಲಿ  ಮಾಜಿ ಸಚಿವ ರಾಮಲಿಂಗ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 2,889 ಮತಗಳ ಅಂತರದಿಂದ ಜಯಗಳಿಸಿದ್ದಾರೆ.  ಅನುಕಂಪದ ಆಧಾರದಿಂದ ಟಿಕೆಟ್ ಪಡೆದಿದ್ದ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಜನ ಸೋಲಿಸಿದ್ದಾರೆ. ಈ ಮೂಲಕ ಮತ್ತೆ ತಂದೆಯ ಕ್ಷೇತ್ರದಲ್ಲಿ ಮಗಳು  ಸೌಮ್ಯಾ ರೆಡ್ಡಿ  ಗೆಲುವಿನ ಸವಿಯನ್ನು ಕಂಡಿದ್ದಾರೆ.

    ಬೆಳಗ್ಗೆ 11.45:  ಎಲ್ಲ 16 ಸುತ್ತು ಮುಕ್ತಾಯಗೊಂಡಿದ್ದು, ಸೌಮ್ಯಾ ರೆಡ್ಡಿಗೆ  54,457 ಮತಗಳು ಬಿದ್ದರೆ, ಬಿಜೆಪಿ ಪ್ರಹ್ಲಾದ್ ಬಾಬು  51,568 ಮತಗಳು ಬಿದ್ದಿದೆ.

    ಬೆಳಗ್ಗೆ 11.23: ಸೌಮ್ಯ ರೆಡ್ಡಿಗೆ 15 ಸುತ್ತಿನಲ್ಲಿ 6,562 ಮತಗಳ ಮುನ್ನಡೆ. ಕಾಂಗ್ರೆಸ್ 51,347 ಬಿಜೆಪಿ 44,785

    ಬೆಳಗ್ಗೆ 11.09: 14ನೇ ಸುತ್ತಿನಲ್ಲಿ  ಕಾಂಗ್ರೆಸ್  51,192  ಬಿಜೆಪಿಗೆ 44,292 ಮತಗಳು ಬಿದ್ದಿವೆ.  6,900 ಮತಗಳ ಮುನ್ನಡೆ ಪಡೆದ ಸೌಮ್ಯಾ ರೆಡ್ಡಿ

    ಬೆಳಗ್ಗೆ 10.57: 13ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 48,456, ಬಿಜೆಪಿ- 39,919 ಕಾಂಗ್ರೆಸ್ ಗೆ 8,537 ಮತಗಳ ಭಾರೀ ಮುನ್ನಡೆ

    ಬೆಳಗ್ಗೆ 10.49: 12ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 45,975, ಬಿಜೆಪಿ- 35,798, ಕಾಂಗ್ರೆಸ್ ಗೆ 10,000 ಮತಗಳ ಭಾರೀ ಮುನ್ನಡೆ

    ಬೆಳಗ್ಗೆ 10.39: 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 43,478 ಬಿಜೆಪಿ- 30,748 , ಕಾಂಗ್ರೆಸ್ ಗೆ 12,730 ಮತಗಳ ಭಾರೀ ಮುನ್ನಡೆ

    ಬೆಳಗ್ಗೆ 10.31: 10ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್- 40,677, ಬಿಜೆಪಿ- 25,779, ಕಾಂಗ್ರೆಸ್ ಗೆ 14,838 ಮತಗಳ ಭಾರೀ ಮುನ್ನಡೆ

    ಬೆಳಗ್ಗೆ 10.21- 9ನೇ ಸುತ್ತಿನಲ್ಲೂ ಕಾಂಗ್ರೆಸ್ ಕಾಂಗ್ರೆಸ್ – 37,288, ಬಿಜೆಪಿ-21,943,ಕಾಂಗ್ರೆಸ್ ಗೆ 15, 345 ಮತಗಳ ಭಾರೀ ಮುನ್ನಡೆ

    ಬೆಳಗ್ಗೆ 10.15 -8ನೇ ಸುತ್ತು  ಕಾಂಗ್ರೆಸ್ 31,642, ಬಿಜೆಪಿಗೆ 21,437 ಮತ. 10,256 ಮತಗಳ ಮುನ್ನಡೆ ಗಳಿಸಿದ ಸೌಮ್ಯಾ ರೆಡ್ಡಿ

    ಬೆಳಗ್ಗೆ 10.02- 7ನೇ ಸುತ್ತಿನ ಮತ ಎಣಿಕೆ ಅಂತ್ಯ . ಕಾಂಗ್ರೆಸ್ 27,197, ಬಿಜೆಪಿ 19,873. ಸೌಮ್ಯಾ ರೆಡ್ಡಿಗೆ 7,324 ಮತಗಳ ಮುನ್ನಡೆ

    ಬೆಳಗ್ಗೆ 9.54 – 6ನೇ ಸುತ್ತು – ಕಾಂಗ್ರೆಸ್ 22,356, ಬಿಜೆಪಿ 18,813. 3543 ಮತಗಳ ಮುನ್ನಡೆ ಕಾಯ್ದಕೊಂಡ ಸೌಮ್ಯಾ ರೆಡ್ಡಿ

    ಬೆಳಗ್ಗೆ 9.43 – ಐದನೇ ಸುತ್ತು ಕಾಂಗ್ರೆಸ್  17,923, ಬಿಜೆಪಿ 16,331. ಸೌಮ್ಯಾ ರೆಡ್ಡಿಗೆ 1532  ಮತಗಳ ಮುನ್ನಡೆ

    ಬೆಳಗ್ಗೆ 9.30 -ನಾಲ್ಕನೇಯ ಸುತ್ತಿನಲ್ಲಿ  ಕಾಂಗ್ರೆಸ್  16,438, ಬಿಜೆಪಿ 11,141 ಮತಗಳು. 5,2297 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

    ಬೆಳಗ್ಗೆ 9.22– ಮೂರನೇ ಸುತ್ತು – ಕಾಂಗ್ರೆಸ್ 11,494,  ಬಿಜೆಪಿಗೆ 8566 ಮತಗಳು.   2,928 ಮತಗಳ ಅಂತರದಿಂದ ಸೌಮ್ಯಾ ರೆಡ್ಡಿ ಮುನ್ನಡೆ

    ಬೆಳಗ್ಗೆ 9.10 – ಎರಡನೇ ಸುತ್ತು – ಕಾಂಗ್ರೆಸ್ 6,719 ಬಿಜೆಪಿಗೆ 6,453 ಮತಗಳು.  266 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ  ಸೌಮ್ಯಾ ರೆಡ್ಡಿ

    ಬೆಳಗ್ಗೆ 8.45 – ಮೊದಲ ಸುತ್ತಿನ ಎಣಿಕೆಯಲ್ಲಿ  ಕಾಂಗ್ರೆಸ್ಸಿಗೆ  3,749, ಬಿಜೆಪಿಗೆ 3,322 ಮತ. ಸೌಮ್ಯ ರೆಡ್ಡಿ 427 ಮತಗಳಿಂದ ಮುನ್ನಡೆ.

    ಬೆಳಗ್ಗೆ 8.00 – ಅಂಚೆ ಮತದಾನದ ಎಣಿಕೆ ಆರಂಭ. ಒಟ್ಟು ನಾಲ್ಕು ಮತಗಳಲ್ಲಿ  3 ಬಿಜೆಪಿಗೆ, 1 ಮತ ಕಾಂಗ್ರೆಸ್ಸಿಗೆ ಬಿದ್ದಿದೆ.

    ಬೆಳಗ್ಗೆ 7:10 – 2013ರ ಚುನಾವಣೆಯಲ್ಲಿ ವಿಜಯ್ ಕುಮಾರ್ ಅವರು 12,312 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ವಿಜಯಕುಮಾರ್ ಅವರಿಗೆ 43,990 ಮತಗಳು ಬಿದ್ದಿದ್ದರೆ ಕಾಂಗ್ರೆಸ್ಸಿನ ವೇಣುಗೋಪಾಲ್ ಅವರಿಗೆ 31,678 ಮತಗಳು ಬಿದ್ದಿತ್ತು. ಜೆಡಿಎಸ್ ನ ಸಮಿವುಲ್ಲಾ ಅವರಿಗೆ 12,097 ಮತಗಳು ಸಿಕ್ಕಿತ್ತು.

    ಬೆಳಗ್ಗೆ 7 ಗಂಟೆ -ಎಸ್‍ಎಸ್‍ಆರ್‍ವಿ ಕಾಲೇಜಿನಲ್ಲಿ 7.30ಕ್ಕೆ ಸ್ಟ್ರಾಂಗ್ ರೂಮ್ ಓಪನ್. 3 ಎಸಿಪಿ, 6 ಇನ್ಸ್ ಪೆಕ್ಟರ್, 15 ಪಿಎಸ್‍ಐ, 27 ಎಎಸ್‍ಐ, 42 ಮುಖ್ಯ ಪೇದೆ, 120 ಪೊಲೀಸ್ ಪೇದೆ ನಿಯೋಜನೆ. ಅಹಿತಕರ ಘಟನೆ ತಡೆಯಲು 2 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.

  • ಜಯನಗರದಲ್ಲಿ ಏಕಾಂಗಿಯಾದ್ರಾ ಶಾಸಕ ರಾಮಲಿಂಗಾರೆಡ್ಡಿ ಮತ್ತು ಪುತ್ರಿ ಸೌಮ್ಯಾ ರೆಡ್ಡಿ?

    ಜಯನಗರದಲ್ಲಿ ಏಕಾಂಗಿಯಾದ್ರಾ ಶಾಸಕ ರಾಮಲಿಂಗಾರೆಡ್ಡಿ ಮತ್ತು ಪುತ್ರಿ ಸೌಮ್ಯಾ ರೆಡ್ಡಿ?

    ಬೆಂಗಳೂರು: ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದ ಮೇಲೆ ಕಾಂಗ್ರೆಸ್ ಜಯನಗರವನ್ನೇ ಮರೆತಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.

    ಹೌದು. ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಜೂನ್ 11 ರಂದು ಚುನಾವಣೆ ನಿಗದಿಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯವರು ಭರ್ಜರಿ ಪ್ರಚಾರ ನಡೆಸುತ್ತಿದ್ದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿ ಆಗಿರುವ ಕಾಂಗ್ರೆಸ್ ನಾಯಕರು ಜಯನಗರದತ್ತ ತಿರುಗಿಯೂ ನೋಡುತ್ತಿಲ್ಲ.

    ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿ ಕಣದಲ್ಲಿದ್ದಾರೆ. ರಾಮಲಿಂಗಾರರೆಡ್ಡಿ ಕಾಂಗ್ರೆಸ್ಸಿನ ಹಿರಿಯ ನಾಯಕರಾದ್ರೂ ಅವರಿಗೆ ಈ ಬಾರಿ ಹೈ ಕಮಾಂಡ್ ಸಚಿವ ಸ್ಥಾನ ಕೈ ಕೊಟ್ಟಿದೆ. ಇತ್ತ ಜಯನಗರ ಚುನಾವಣೆಗೆ ಯಾವುದೇ ಕಾಂಗ್ರೆಸ್ ನಾಯಕರು ಅವರಿಗೆ ಸಾಥ್ ನೀಡುತ್ತಿಲ್ಲ. ಹೀಗಾಗಿ ತಂದೆಯ ಜೊತೆ ಸೌಮ್ಯಾ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಏಕಾಂಗಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.

    ಇತ್ತ ಮತ್ತೊಮ್ಮೆ ಜಯನಗರನ್ನು ತನ್ನ ಬಳಿಯಲ್ಲೇ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಮಾತ್ರ ಜಯನಗರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಅನಂತ್ ಕುಮಾರ್, ಶೋಭಾ ಕರಂದ್ಲಾಜೆ ಹಾಗೂ ಸದಾನಂದಗೌಡ ಸೇರಿದಂತೆ ಹಿರಿಯ ನಾಯಕರ ದಂಡೇ ಜಯನಗರದಲ್ಲಿ ಪ್ರಚಾರ ಮಾಡುತ್ತಿದೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ:
    ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎನ್ನಲಾಗುತ್ತಿದೆ. ಈಗಾಗಲೇ ರಾಮಲಿಂಗಾರೆಡ್ಡಿ ದೇವೇಗೌಡರನ್ನು ಸಂಪರ್ಕಿಸಿ ಮೈತ್ರಿ ಕುರಿತು ಮಾತನಾಡಿದ್ದಾರೆ. ಅದಕ್ಕೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಕೂಡಾ ಅಸ್ತು ಅಂದಿದ್ದಾರೆ. ಹಾಗಾಗಿ ಜಯನಗರ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಆದ್ರೆ ಬಿಜೆಪಿ ಮಾತ್ರ ಎಲ್ಲಿಲ್ಲದ ಕಸರತ್ತು ನಡೆಸಿದೆ. ಹೃದಯ ಸಂಬಂಧಿ ಖಾಯಿಲೆಯಿಂದ ನಿಧನರಾದ ವಿಜಯಕುಮಾರ ಸಹೋದರ ಪ್ರಹ್ಲಾದ್ ಅವರು ಇಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.