Tag: ಜನೌಷಧಿ

  • ಜನೌಷಧಿ ಕೇಂದ್ರದಿಂದ ಮಧ್ಯಮ ವರ್ಗ, ಬಡವರಿಗೆ ಲಾಭ: ಮೋದಿ

    ಜನೌಷಧಿ ಕೇಂದ್ರದಿಂದ ಮಧ್ಯಮ ವರ್ಗ, ಬಡವರಿಗೆ ಲಾಭ: ಮೋದಿ

    ನವದೆಹಲಿ: ಜನರಿಕ್ ಔಷಧಿಗಳನ್ನು ಕೈಗೆಟಕುವ ದರದಲ್ಲಿ ಒದಗಿಸಲು ಸ್ಥಾಪಿಸಿರುವ ಜನೌಷಧಿ ಕೇಂದ್ರಗಳಿಂದ ಬಡವರು ಮತ್ತು ಮಧ್ಯಮ ವರ್ಗದವರು ಲಾಭ ಪಡೆದುಕೊಳ್ಳುವುದರ ಮೂಲಕ ಸುಮಾರು 13,000ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಜನೌಷಧಿ ದಿವಸ್‍ದ ಅಂಗವಾಗಿ ಜನ ಔಷಧಿ ಪರಿಯೋಜನಾ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಅವರು, ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸಲು ಫಾರ್ಮಾಸ್ಯುಟಿಕಲ್ಸ್ ಇಲಾಖೆಯು ಪ್ರಾರಂಭಿಸಿದ ಅಭಿಯಾನವಾಗಿದೆ ಎಂದು ತಿಳಿಸಿದರು.

    ಜನೆರಿಕ್ ಔಷಧಗಳನ್ನು ಒದಗಿಸಲು ಪಿಎಂಬಿಜೆಪಿ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಅವುಗಳು ಅಗ್ಗದ ಬೆಲೆಯಲ್ಲಿ ಲಭ್ಯವಿದ್ದು, ಗುಣಮಟ್ಟ ಮತ್ತು ಪರಿಣಾಮಕಾರಿತ್ವದಲ್ಲಿ ದುಬಾರಿ ಬ್ರಾಂಡ್ ಔಷಧಿಗಳಂತೆಯೇ ಇರುತ್ತವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ, 25 ಬಿಜೆಪಿ ಸಂಸದರಿದ್ರೂ ಹಣ ಕೇಳಲ್ಲ: ಸಿದ್ದರಾಮಯ್ಯ ವಾಗ್ದಾಳಿ

    ಇಂದು, ದೇಶದಲ್ಲಿ 8,500ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ಕೇವಲ ಸರ್ಕಾರಿ ಮಳಿಗೆಗಳಲ್ಲ ಆದರೆ ಸಾಮಾನ್ಯ ಜನರಿಗೆ ಪರಿಹಾರ ಕೇಂದ್ರಗಳಾಗಿವೆ ಎಂದು ಹೇಳಿದರು.

    ಕ್ಯಾನ್ಸರ್, ಕ್ಷಯ, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ 800ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ತಮ್ಮ ಸರ್ಕಾರ ನಿಯಂತ್ರಿಸಿದೆ ಎಂದು ತಿಳಿಸಿದರು. ಇದನ್ನೂ ಓದಿ: ದೇಶ ದ್ರೋಹಿಗಳಂದ್ರೆ ಕಾಂಗ್ರೆಸ್ಸಿಗರು, ಕಾಂಗ್ರೆಸ್ ಅಂದ್ರೆನೆ ದೇಶ ದ್ರೋಹ: ಚೈತ್ರಾ ಕುಂದಾಪುರ

    ಜನರಿಕ್ ಔಷಧಿಗಳ ಬಳಕೆ ಮತ್ತು ಜನೌಷಧಿ ಪರಿಯೋಜನಾ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 1 ರಿಂದ ದೇಶಾದ್ಯಂತ ಜನೌಷಧಿ ವಾರ ಆಚರಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

  • ರಸಗೊಬ್ಬರ, ಕೀಟನಾಶಕ ದಾಸ್ತಾನು ಬೇಕಷ್ಟಿದೆ –  ಡಿವಿಎಸ್ ಭರವಸೆ

    ರಸಗೊಬ್ಬರ, ಕೀಟನಾಶಕ ದಾಸ್ತಾನು ಬೇಕಷ್ಟಿದೆ –  ಡಿವಿಎಸ್ ಭರವಸೆ

    ನವದೆಹಲಿ: ಕರ್ನಾಟಕವೂ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಅಥವಾ ಕೀಟನಾಶಕಗಳ ಕೊರತೆ ಉಂಟಾಗಿಲ್ಲ. ಕರ್ನಾಟಕದಲ್ಲಿ ಸದ್ಯ 7.3 ಲಕ್ಷ ಟನ್ ರಸಗೊಬ್ಬರವಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ಬೇಡಿಕೆ 2.57 ಲಕ್ಷ ಟನ್. ಹಾಗಾಗಿ ರೈತರು ಈ ಸಲವೂ ಮಾಮೂಲಿಯಾಗಿ ಮುಂಗಾರು ಬಿತ್ತನೆಗೆ ತಯಾರಿ ಮಾಡಿಕೊಳ್ಳಬಹುದು ಎಂದು ಕೇಂದ್ರ ರಾಸಾಯನಿ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ಆರಂಭದಲ್ಲಿ ಒಂದೆರಡು ದಿನ ಸರಕು ಸಾಗಣೆಗೆ ತೊಂದರೆಯಾಗಿತ್ತು. ಆದರೆ ರಸಗೊಬ್ಬರ, ಕೀಟನಾಶಕ ಸೇರಿಂತೆ ಕೃಷಿಸಂಬಂಧಿತ ಎಲ್ಲ ಪರಿಕರಗಳನ್ನು ಅತ್ಯವಶ್ಯಕ ವಸ್ತುಗಳ ಪಟ್ಟಿಗೆ ಸೇರಿಸಿ ಉತ್ಪಾದನೆ ಹಾಗೂ ಸಾಗಣೆ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರವು ಸಂಪೂರ್ಣ ತೆಗೆದುಹಾಕಿತು. ರಸಗೊಬ್ಬರ ಕಾರ್ಖಾನೆಗಳು, ಗೋಡೌನ್‍ಗಳು, ಬಂದರಗಳು, ವಿತರಣಾ ಕೇಂದ್ರಗಳ ಮಧ್ಯೆ ರಸಗೊಬ್ಬರ ಸಾಗಣೆಗೆ ಬೇಡಿಕೆಗೆ ಅನುಗುಣವಾಗಿ ಗೂಡ್ಸ್ ರೈಲುಗಳನ್ನು ಒದಗಿಸುವಂತೆ ರೇಲ್ವೆ ಇಲಾಖೆಗೆ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಆದೇಶ ನೀಡಿದೆ. ಹಾಗೆಯೇ ಜಲ ಹಾಗೂ ಭೂಸಾರಿಗೆಗೆ ರಸಗೊಬ್ಬರ, ಕೀಟನಾಶಕ ಮತ್ತಿತರ ಕೃಷಿಸಂಬಂಧಿತ ಸರಕುಗಳನ್ನು ಸಾಗಣೆಗೆ ಮುಕ್ತ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

    ದೇಶದ ಬಹುತೇಕ ರಸಗೊಬ್ಬರ ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿವೆ. ಈ ಸಂದರ್ಭದಲ್ಲಿ ಲಾಕ್‍ಡೌನ್‍ ನಿಯಮಗಳನ್ನು (ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮುಖಗವಸು ಧರಿಸುವುದು ಇವೇ ಮುಂತಾದವು) ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ದೇಶದಲ್ಲಿ ಇನ್ನೂ ಹಲವು ತಿಂಗಳಿಗೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಸದ್ಯ 86.87 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಸ್ತಾನು ಇದೆ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ 7.57 ಲಕ್ಷ ಟನ್ ಯೂರಿಯಾ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.

    ದೇಶಾದ್ಯಂತ ರಸಗೊಬ್ಬರ ಮಳಿಗೆಗಳೂ ತೆರೆದಿದ್ದು ಎಂದಿನಂತೆ ವಹಿವಾಟು ನಡೆಸಿವೆ. ಕರ್ನಾಟಕದಲ್ಲಿ ಸಾಗಣೆ, ಪೂರೈಕೆಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದರೆ ಕೃಷಿ ಸಹಾಯವಾಣಿ 080-22212818 / 22210237 ಗೆ ಕರೆಮಾಡಿ ಬಗೆಹರಿಸಿಕೊಳ್ಳಬಹುದು. ನಾನು ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ರಸಗೊಬ್ಬರ, ಕೀಟನಾಶಕಗಳ ಕೊರತೆ ಇಲ್ಲ. ದಾಸ್ತಾನು ಸಾಕಷ್ಟಿದೆ. ಬೇಕಾದಷ್ಟು ಗೊಬ್ಬರ ಪೂರೈಸುವ ಜವಾಬ್ದಾರಿ ನಮ್ಮದು. ರೈತಬಾಂಧವರಿಗೆ ನನ್ನ ಮನವಿ. ನೀವು ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ. ನಿರಾತಂಕವಾಗಿ ಮುಂಗಾರು ಬಿತ್ತನೆಗೆ ತಯಾರಿಮಾಡಿಕೊಳ್ಳಿ. ನಿಮಗೆ ಶುಭವಾಗಲಿ ಎಂದು ಡಿವಿಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮನೆ-ಮನೆಗೆ ಜನೌಷಧಿ: ಈ ಮಧ್ಯೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ (PMBJP) ಜನೌಷಧಿ ಕೇಂದ್ರಗಳ ಮೂಲಕ ಮನೆಗೇ ಔಷಧ ಸರಬರಾಜು ಮಾಡುವ ಸೌಲಭ್ಯವನ್ನು ಆರಂಭಿಸಲಾಗಿದೆ. ಅಗತ್ಯವಿರುವವರು ವಿಶೇಷವಾಗಿ ಹಿರಿಯ ನಾಗರಿಕರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನಿಮ್ಮ ಸ್ಮಾರ್ಟ್ ಫೋನಿನಲ್ಲಿ ನಮ್ಮ ಸರ್ಕಾರವೇ ಅಭಿವೃದ್ಧಿಪಡಿಸಿರುವ ‘ಜನೌಷಧಿ ಸುಗಮ್, ಎಂಬ ಆ್ಯಪ್ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

    ಈ ಆ್ಯಪಿನಲ್ಲಿ ಹತ್ತಿರದ ಜನೌಷಧಿ ಕೇಂದ್ರ (ವಿಳಾಸ ಸಮೇತ), ಆ ಕೇಂದ್ರದ ಲೊಕೇಶನ್ ಮ್ಯಾಪ್, ಕೇಂದ್ರದಲ್ಲಿ ನಿಮಗೆ ಬೇಕಾದ ಔಷಧಿ ಲಭ್ಯತೆ ಇದೆಯೋ ಅಥವಾ ಇಲ್ಲವೋ, ಅಂಗಡಿಯ ದೂರವಾಣಿ ನಂಬರ್ – ಹೀಗೆ ಎಲ್ಲ ವಿವರಗಳು ಲಭ್ಯ. ಲಾಕ್‍ಡೌನ್ ಈ ಸಂದರ್ಭದಲ್ಲಿ ಔಷಧ ಅಂಗಡಿಗಳ ಬಳಿ ಗುಂಪು ಸೇರುವ ಅಗತ್ಯವಿಲ್ಲ. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಡಂತೆಯೂ ಆಯಿತು ಎಂದು ತಿಳಿಸಲಾಗಿದೆ.

    ಜನೌಷಧಿ ಸುಗಮ್ ಆ್ಯಪ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಜನೌಷಧಿ ಸುಗಮ್

  • ಹಳ್ಳ ಹಿಡಿದ ಪ್ರಧಾನಿಯ ಮಹತ್ವಾಕಾಂಕ್ಷೆ ಯೋಜನೆ-ಬಡವರ ಸಂಜೀವಿನಿಯಲ್ಲಿ ಮಹಾ ದೋಖಾ..!

    ಹಳ್ಳ ಹಿಡಿದ ಪ್ರಧಾನಿಯ ಮಹತ್ವಾಕಾಂಕ್ಷೆ ಯೋಜನೆ-ಬಡವರ ಸಂಜೀವಿನಿಯಲ್ಲಿ ಮಹಾ ದೋಖಾ..!

    ಬೆಂಗಳೂರು: ಭಾರತದಲ್ಲಿ ಬಡ ರೋಗಿಗಳು ಔಷಧಿಗಳನ್ನು ಕೊಳ್ಳಲಾಗದ ಪರಿಸ್ಥಿತಿ ಇನ್ನೂ ಇದೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿಯವರು ಬಡರೋಗಿಗಳು ಔಷಧಿ ಸಿಗದೇ ಕಷ್ಟ ಅನುಭವಿಸಬಾರದು ಅಂತಾ ದೇಶಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳನ್ನು ಪ್ರಾರಂಭ ಮಾಡಿ ವರ್ಷಗಳೇ ಕಳೆದಿದೆ. ಅದರೆ ಇದೀಗ ಬಡವರ ಸಂಜೀವಿನಿ ಕೇಂದ್ರಗಳು ಹಳ್ಳ ಹಿಡಿದಿವೆ. ಜನಔಷಧಿ ಕೇಂದ್ರಗಳು ಬೆಂಗಳೂರಿನಲ್ಲಿ ಇದ್ದೂ ಇಲ್ಲದಂತಾಗಿವೆ. ಈ ಕುರಿತು ಪಬ್ಲಿಕ್ ಟಿವಿ ಸೋಮವಾರ ರಿಯಾಲಿಟಿ ಚೆಕ್ ನಡೆಸಿದೆ.

    ರಿಯಾಲಿಟಿ ಚೆಕ್ 1
    ಆಸ್ಪತ್ರೆ: ವಿಕ್ಟೋರಿಯಾ ಆಸ್ಪತ್ರೆ ಆವರಣ
    ಸ್ಥಳ: ಕೆ.ಆರ್. ಮಾರುಕಟ್ಟೆ
    ಮಳಿಗೆ: ಜೆನರಿಕ್ ಮಳಿಗೆ
    ಸಮಯ: ಬೆಳಗ್ಗೆ 11.00


    ಬಡವರಿಗೆ ಕೈಗೆಟುಕುವ ಜನೌಷಧಿ ಸಿಗುತ್ತಿಲ್ಲ ಅಂತ ಪಬ್ಲಿಕ್ ಟಿವಿಗೆ ನಿರಂತರ ಕರೆ ಬಂದ ಹಿನ್ನೆಲೆಯಲ್ಲಿ ರಿಯಾಲಿಟಿ ಚೆಕ್‍ಗೆ ನಾವು ಮುಂದಾದ್ವಿ. ಬೆಳಗ್ಗೆ 11.00 ಗಂಟೆ ಸುಮಾರಿಗೆ ಕೆ.ಆರ್. ಮಾರುಕಟ್ಟೆ ಆವರಣದಲ್ಲಿರೋ ಜೆನರಿಕ್ ಔಷಧಿ ಕೇಂದ್ರಕ್ಕೆ ಸಾಗಿದ್ವಿ. ಅಲ್ಲಿ ಬಿಪಿ ಡಯಾಬಿಟಿಕ್ ಹಾಗೂ ಕೆಲ ಕ್ಯಾನ್ಸರ್‍ಗೆ ಸಂಬಂಧಿಸಿದ ಮಾತ್ರೆಗಳು ಇದ್ಯಾ ಅಂತಾ ಕೇಳಿದ್ವಿ. ಅಲ್ಲಿ ಬಂದ ಉತ್ತರವೇ ಬೇರೆ. ಈ ಮಾತ್ರೆ ಇಲ್ಲ, ಬೇರೆ ಇದೆ, ಅಷ್ಟು ಎಂಜಿ ಮಾತ್ರೆಗಳಿಲ್ಲ. ಇಷ್ಟೇ ಇರೋದು, ಸದ್ಯಕ್ಕೆ ಸ್ಟಾಕ್ ಖಾಲಿಯಾಗಿದೆ ಅನ್ನೋ ಉತ್ತರನೇ ಬರುತ್ತಿದೆ.

    ಪ್ರತಿನಿಧಿ – ಡಯಾಬಿಟ್ರಿಕ್ ಟ್ಯಾಬ್ಲೆಟ್ ಇದ್ಯಾ?
    ವಿಕ್ಟೋರಿಯಾ ಜೆನರಿಕ್ ಕೇಂದ್ರದವರು – ಇಲ್ಲಾ
    ಪ್ರತಿನಿಧಿ – ಬಿಪಿದು, ಯಾಕೆ ಮಾತ್ರೆಗಳು ಸ್ಟಾಕ್ ಇರಲ್ವಾ?
    ವಿಕ್ಟೋರಿಯಾ ಜೆನರಿಕ್ ಕೇಂದ್ರದವರು- ಅದು ಕಂಟೆಂಡ್ ನಲ್ಲಿ ಬರೋದು ಸ್ಟಾಕ್ ಇಲ್ಲ ಅಂತಾ ಅಲ್ಲ. ಬಿಪಿದು 40 ಎಂಜಿದು ಇಲ್ಲ ನಮ್ಮ ಹತ್ರ 20 ಎಂಜಿದು ಇದೆ ಅಷ್ಟೆ ಅಂದ್ರು.

    ಪ್ರತಿನಿಧಿ : ಸ್ಟಾಕ್ ಇಲ್ವಾ ಹೇಗೆ
    ವಿಕ್ಟೋರಿಯಾ ಜೆನರಿಕ್ : ಹಾಗೇನಿಲ್ಲ (ಅಷ್ಟರಲ್ಲಿ ಸಾರ್ವಜನಿಕರು ಪ್ರಿಸ್ಕಿಪ್ರಶ್ಯನ್ ಹಿಡಿದುಕೊಂಡು ಬಂದ್ರು)
    ಸಾರ್ವಜನಿಕರು – ಈ ಮಾತ್ರೆ ಇದ್ಯಾ (ಬಿಪಿ ಮಾತ್ರೆ)
    ವಿಕ್ಟೋರಿಯಾ ಜೆನರಿಕ್ – ಇಲ್ಲ

    ರಿಯಾಲಿಟಿ ಚೆಕ್ – 2
    ಸ್ಥಳ: ರಾಜಾಜಿನಗರ
    ಮಳಿಗೆ: ಜನೌಷಧಿ ಮಳಿಗೆ
    ಸಮಯ: ಮಧ್ಯಾಹ್ನ 1.00

    ಬೆಂಗಳೂರಿನ ರಾಜಾಜಿನಗರದಲ್ಲಿ ಜನೌಷಧಿ ಕೇಂದ್ರದ ಪರಿಸ್ಥಿತಿನೂ ಇದೇ ಆಗಿದೆ. ನೀವು ಯಾವ ಮಾತ್ರೆ ಕೇಳಿದ್ರೂ ಕೂಡ ಇಲ್ಲ ಅನ್ನೋ ಮಾತು ಬಿಟ್ರೆ ಅಲ್ಲಿ ಬರೆ ಮಾತೇ ಇಲ್ಲ.
    ಪ್ರತಿನಿಧಿ: ಸರ್ ಈ ಔಷಧಿಗಳು ಇದ್ಯಾ…?
    ಜನೌಷಧಿ ಕೇಂದ್ರ: ಯಾವುದೇ ಎಂಜಿಗಳು ಇಲ್ಲ. ಎಷ್ಟು ಎಷ್ಟು ಬೇಕು?
    ಪ್ರತಿನಿಧಿ: ಒಂದು ದಿನಕ್ಕೆ ಅಗುವಷ್ಟು ಮಾತ್ರೆಗಳನ್ನು ಕೊಡಿ.
    ಜನೌಷಧಿ ಕೇಂದ್ರ: ಇದರಲ್ಲಿ ಯಾವುದೂ ಇಲ್ಲ. ಒಂದು ಮಾತ್ರ ಇದೆ.
    ಪ್ರತಿನಿಧಿ: ಯಾಕೆ ಉಳಿದಿದ್ದು ಇಲ್ಲ?
    ಜನೌಷಧಿ ಕೇಂದ್ರ: ಯಾಕೆ ಇಲ್ಲ ಅಂದ್ರೆ ಸ್ಟಾಕ್ ಇಲ್ಲ.
    ಪ್ರತಿನಿಧಿ: ಸ್ಟಾಕ್ ಯಾಕೆ ಇಲ್ಲ.?
    ಜನೌಷಧಿ ಕೇಂದ್ರ: ಕಸ್ಟಮರ್ ಬಂದು ಎಲ್ಲಾ ತಗೂಂಡು ಹೋಗಿದ್ದಾರೆ.
    ಪ್ರತಿನಿಧಿ: ಎಷ್ಟು ದಿನದಿಂದ ಸ್ಟಾಕ್ ಇಲ್ಲ?
    ಜನೌಷಧಿ ಕೇಂದ್ರ: ಒಂದೂವರೆ ತಿಂಗಳಿಂದ ಸ್ಟಾಕ್ ಇಲ್ಲ.
    ಪ್ರತಿನಿಧಿ: ಶುಗರ್, ಬಿಪಿ ಯಾವುದು ಇಲ್ವಾ?
    ಜನೌಷಧಿ ಕೇಂದ್ರ: ಒಂದು ಮಾತ್ರೆ ಬಿಟ್ಟು ಯಾವುದು ಇಲ್ಲ..


    ಇದು ಬೆಂಗಳೂರಿನ ರಾಜಾಜಿನಗರದ ಜನಔಷದ ಕೇಂದ್ರದ ಪರಿಸ್ಥಿತಿ. ಜನಔಷದಿ ಕೇಂದ್ರ ಪ್ರಕಾರವೇ ಒಂದೂವರೇ ತಿಂಗಳಿನಿಂದ ರೋಗಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಪಿ ಶುಗರ್ ಮಾತ್ರೆಗಳೇ ಇಲ್ಲ. ಇದು ರಾಜಾಜಿನಗರದ ಪರಿಸ್ಥಿತಿಯಾದ್ರೆ. ಮತ್ತಿಕೆರೆ ಜನಔಷಧ ಕೇಂದ್ರದ ಪರಿಸ್ಥಿತಿ ಭಿನ್ನವಾಗಿಲ್ಲ.

    ಮತ್ತಿಕೆರೆ ಜನಔಷಧ ಕೇಂದ್ರದಲ್ಲಿ ಕೂಡ ಒಂದು ಟಾಬ್ಲೆಟ್‍ಗಳು ಇದ್ರೆ ಇನ್ನೊಂದು ಇಲ್ಲ. ಶ್ರೀರಾಂಪುರ ಜನಔಷಧಿ ಕೇಂದ್ರದ ಮಾಲೀಕರನ್ನ ಯಾವ ಯಾವ ಟಾಬ್ಲೇಟ್ ಇದೆ ಸರ್, ಶುಗರ್, ಬಿಪಿ ಮಾತ್ರೆಗಳು ಇದೀಯಾ ಅಂದ್ರೆ. ಯಾವುದು ಇದೆ ಅಂತಾ ಹೇಳಕ್ಕೆ ಅಗಲ್ಲ ರೀ ಅಂತಾ ಹೇಳುತ್ತಾರೆ

    ರಿಯಾಲಿಟಿ ಚೆಕ್ 3
    ಆಸ್ಪತ್ರೆ: ಶಂಕರ ಆಸ್ಪತ್ರೆ
    ಸ್ಥಳ: ಶಂಕರಪುರಂ, ಬಸವನಗುಡಿ,
    ಮಳಿಗೆ: ಜನೌಷಧಿ ಮಳಿಗೆ
    ಸಮಯ: ಮಧ್ಯಾಹ್ನ 2 ಗಂಟೆ

    ಸಾರ್ ಬಿಪಿ ಟ್ಯಾಬ್ಲೆಟ್ ಕೊಡಿ, ಸ್ಟಾಕ್ ಇಲ್ಲ, ಶುಗರ್‍ದು, ಅಯ್ಯೋ ಸ್ಟಾಕ್ ಇಲ್ಲ, ಫೀವರ್‍ದು ಇದ್ಯಾ? ಈ ಟ್ಯಾಬ್ಲೆಟ್ ಇಲ್ಲ ಬೇರೆ ಕಡೆ ಹೋಗಿ ಅಂತ ಹೇಳುತ್ತಾರೆ.
    ಪ್ರತಿನಿಧಿ – ಮೆಟಾಫಾರ್ಮಿನ್ ಇದ್ಯಾ
    ಜನೌಷಧ ಸೆಂಟರ್‍ನವರು – ಇಲ್ಲ
    ಪ್ರತಿನಿಧಿ – ಗ್ಲೂಕೋ ಮೀಟರ್, ಡಯಾಬಿಟಾನೋ
    ಜನೌಷಧ ಸೆಂಟರ್‍ನವರು – ಸ್ಟಾಕೇ ಇಲ್ಲ ನಾವೇನ್ ಮಾಡೋಣ

    ಕೇಂದ್ರದ ಮಾಹಿತಿ ಪ್ರಕಾರ ಕರ್ನಾಟಕಕ್ಕೆ ಅತಿ ಹೆಚ್ಚು ಔಷಧಿ ವಿತರಣೆಯಾಗುತ್ತಿದೆ. ಆದ್ರೆ ಕಳ್ಳಮಾರ್ಗದಲ್ಲಿ ಎಲ್ಲಿ ಹೋಗುತ್ತಿದೆ ಅನ್ನೋದೆ ಮಿಲಿಯನ್ ಡಾಲರ್ ಪ್ರಶ್ನೆ. ಕಳ್ಳನ ಮನಸು ಹುಳ್ಳ ಹುಳ್ಳಗೆ ಅನ್ನೋ ಹಾಗೆ ಜನೌಷಧ ಕೇಂದ್ರದ ಖಾಲಿ ಔಷಧ ರ್ಯಾಕ್‍ಗಳನ್ನು ಸೆರೆ ಹಿಡಿಯಲು ಹೋದಾಗ ಪಬ್ಲಿಕ್ ಟಿವಿ ಕ್ಯಾಮೆರ ಕಿತ್ತುಕೊಳ್ಳಲು ಮುಂದಾದ್ರು. ದುಗುಡದಲ್ಲಿ ಬಂದಿದ್ದ ಬಡಜೀವಗಳಿಗೆ, ದುಬಾರಿ ದುಡ್ಡು ಕೊಡಲಾಗದೇ ಜೀವ ಉಳಿಸುವ ಆಸೆಯಲ್ಲಿ ಜನೌಷಧಿ ಕೇಂದ್ರಕ್ಕೆ ಬರುವ ರೋಗಿಗಳಿಗೆ ಹಾಗೆ ವಾಪಸು ಕಳಿಸುತ್ತಿದ್ದಾರೆ ಜನಔಷಧಿ ಕೇಂದ್ರದವರು. ಜನೌಷಧ ಕೇಂದ್ರಕ್ಕೆ ಅಲೆದು ಅಲೆದು ಜನ ಹಿಡಿಶಾಪ ಹಾಕಿದ್ರು.

    ರಿಯಾಲಿಟಿ ಚೆಕ್ – 4
    ಎನ್ ಆರ್ ಕಾಲೋನಿ
    ಪ್ರತಿನಿಧಿ – ಗ್ಲಿಮಿಸ್ಟಾರ್ ಇದ್ಯಾ ಸರ್
    ಜನೌಷಧಿಯವರು – ಇಲ್ಲ
    ಪ್ರತಿನಿಧಿ – ಮೆಟಾಫಾರ್ಮಿನ್ ಇದ್ಯಾ
    ಜನೌಷಧಿಯವರು – ಅದ್ ಇಲ್ಲ ಸ್ಟಾಕ್ ಖಾಲಿಯಾಗಿದೆ, ಬರುತ್ತೆ ಅನಿಸುತ್ತೆ ಸದ್ಯದಲ್ಲಿಯೇ.

    ಹಾಗಿದ್ರೆ ಸದ್ಯ ಜೆನರಿಕ್ ಹಾಗೂ ಜನೌಷಧದಲ್ಲಿ ಯಾವೆಲ್ಲ ಮಾತ್ರೆಗಳು ಸಿಗಲ್ಲ ಇದಕ್ಕೆ ಏನು ಕಾರಣ ಅನ್ನೋದನ್ನು ಹೇಳ್ತೀವಿ ಕೇಳಿ

    ಮೆಟಾಫಾರ್ಮಿನ್ – ಹೈ ಬ್ಲಡ್ ಶುಗರ್ ಕಂಟ್ರೋಲ್‍ಗೆ
    ಗ್ಲೂಕೋ ಮೀಟರ್ – ಡಯಾಬಿಟಿಕ್
    ಡಯಾಬಿಟಾನೋ – ಡಯಾಬಿಟಿಸ್
    ಆಂಟಿಹೈಪರ್‍ಟೆನ್ಸಿವ್ – ಬಿಪಿ ಸಮಸ್ಯೆಗೆ
    ಟ್ಯಾಜಿಲ್ಕೋ – ಹೈಬ್ಲಡ್ ಶುಗರ್

    ಸಾಮಾನ್ಯವಾಗಿ ಡಯಾಬಿಟಿಸ್, ಶುಗರ್ ಹಾಗೂ ಬಿಪಿ ಮಾತ್ರೆಗಳು ದುಬಾರಿ. ಖಾಸಗಿ ಮೆಡಿಕಲ್‍ಗಿಂತ ಜನೌಷಧದಲ್ಲಿ ಶೇ 75 ರಷ್ಟು ಕಡಿಮೆ ಇರುತ್ತೆ. ಉದಾಹರಣೆಗೆ ಖಾಸಗಿ ಮೆಡಿಕಲ್‍ನಲ್ಲಿ ನೂರು ರೂ ಇರುವ ಬಿಪಿ ಮಾತ್ರೆ ಜನೌಷಧ ಕೇಂದ್ರದಲ್ಲಿ ಕೇವಲ ಹದಿನೈದು ರೂಗೆ ಲಭ್ಯ ಇರುತ್ತೆ. ಆದ್ರೇ ಈಗ ಅತಿ ಹೆಚ್ಚು ಜನ ಬಳಸೋ ಈ ಮಾತ್ರೆಗಳು ಜನೌಷಧ ಕೇಂದ್ರದಲ್ಲಿ ಸಿಗ್ತಾ ಇಲ್ಲ ಇದಕ್ಕೆ ಕಾರಣಗಳೇನು ಅನ್ನೋದನ್ನು ನೋಡಿದ್ರೆ

    ಜನೌಷಧ ಔಷಧಿ ಅಲಭ್ಯಕ್ಕೆ ಏನ್ ಕಾರಣ?
    1. ಖಾಸಗಿಯವರ ಲಾಬಿಗೆ ಮಣಿದಿರುವ ಸಾಧ್ಯತೆ. ಕೆಲ ಔಷಧಿಗಳು ಅಕ್ರಮವಾಗಿ ಮಾರಾಟವಾಗಿರುವ ಶಂಕೆಯೂ ಇದೆ.
    2. ಲಾರಿ ಮುಷ್ಕರದಿಂದ ಕೊಂಚ ಸಮಸ್ಯೆ ಆಗಿರೋದು ನಿಜ, ಆದ್ರೆ ಕೆಲ ಸ್ಟೋರ್‍ನಲ್ಲಿ ಕಳೆದೆರಡು ತಿಂಗಳಿಂದ ಸಮಸ್ಯೆ
    3. ಡೀಲರ್ಸ್ ಹಾಗೂ ವಿತರಕರ ಮಧ್ಯೆ ಸಂವಹನ ಕೊರತೆನೂ ಇರಬಹುದು.
    4. ಕೆಲ ಔಷಧಗಳನ್ನು ಸ್ಟೋರೆಜ್ ಮಾಡುವ ಅತ್ಯಾಧುನಿಕ ಸಾಧನ ಅನೇಕ ಕಡೆ ಇಲ್ಲ. ಇದ್ರಿಂದ ದೀರ್ಘಾವದಿಗೆ ಔಷಧಗಳನ್ನು ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ
    5 ಅತಿ ಹೆಚ್ಚು ಡಿಮ್ಯಾಂಡ್ ರಾಜ್ಯದಲ್ಲಿರೋದ್ರಿಂದ ಪೂರೈಕೆ ಸಮಸ್ಯೆ ಆಗುತ್ತಿರುವ ಸಾಧ್ಯತೆಯೂ ಇದೆ.

    ರಾಜ್ಯ ಸರ್ಕಾರದ ಬುಡದಲ್ಲಿಯೇ ಇರುವ ಜೆನೆರಿಕ್ ಔಷಧದಲ್ಲೂ ಸಮಸ್ಯೆಯಾಗಿದೆ. ಕೇಂದ್ರ ಜನೌಷಧದಲ್ಲೂ ಅವ್ಯವಸ್ಥೆ. ಜೀವ ನೀಡುವ ಭರವಸೆ ಕೊಟ್ಟು ಕೊಲ್ಲುವ ಕಟುಕರಾಗಿದೆ ಇರಲಿ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮೊದಲು ಔಷಧಿ ಕೇಂದ್ರವನ್ನು ಸರಿಪಡಿಸಲಿ .

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv