Tag: ಜಗನ ಮೋಹನ್ ರೆಡ್ಡಿ

  • ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ

    ಅಮರಾವತಿ: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್‍ರೆಡ್ಡಿ ಮತ್ತೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ವಿಧಾನ ಪರಿಷತ್ ಅನ್ನು ರದ್ದುಪಡಿಸುವ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದಾರೆ. ದಿನಪೂರ್ತಿ ಚರ್ಚೆ ಬಳಿಕ 130-0 ಮತದ ಅಂತರದಲ್ಲಿ ನಿರ್ಣಯಕ್ಕೆ ಅನುಮೋದನೆ ಸಿಕ್ಕಿದೆ.

    ಆಂಧ್ರಕ್ಕೆ ಮೂರು ರಾಜಧಾನಿ ಮತ್ತು ಆಂಧ್ರ ಪ್ರದೇಶ ಕ್ಯಾಪಿಟಲ್ ರೀಜಿನ್ ಡೆವಲಪ್‍ಮೆಂಟ್ ಅಥಾರಿಟಿ ರದ್ದಿಗೆ ಪರಿಷತ್‍ನಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ರೊಚ್ಚಿಗೆದ್ದಿರೋ ಜಗನ್‍ಮೋಹನ್ ರೆಡ್ಡಿ ಈಗ ಪರಿಷತ್ತನ್ನೇ ತೆಗೆದು ಹಾಕ್ತಿದ್ದಾರೆ. ವಿಧಾನಸಭೆಯಲ್ಲಿ ವೈಎಸ್‍ಆರ್ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಇರೋ ಕಾರಣ ಸುಲಭವಾಗಿ ಅನುಮೋದನೆ ಸಿಕ್ಕಿದೆ. ಈಗ ಸಂಸತ್‍ಗೆ ಕಳಿಸಬೇಕಿದೆ.

    ಮಸೂದೆಗಳಿಗೆ ಅಡ್ಡಿಪಡಿಸ್ತಾ ಹೋದರೆ ಪ್ರತಿವರ್ಷ 60 ಕೋಟಿಯಂತೆ 5 ವರ್ಷಕ್ಕೆ 300 ಕೋಟಿ ವ್ಯರ್ಥವಾಗುತ್ತೆ ಎಂಬುವುದು ಜಗನ್ ಪ್ರತಿಪಾದನೆಯಾಗಿದೆ. ಜಗನ್ ನಡೆಗೆ ಟಿಡಿಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸದ್ಯ ದೇಶದಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಹಾಗೂ ಬಿಹಾರ 6 ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಇದೆ.

  • ಮಂತ್ರಾಲಯದಲ್ಲಿ ಜನಾರ್ದನ ರೆಡ್ಡಿ- ವೈಎಸ್‍ಆರ್ ದೇವರು ಎಂದ್ರು ರೆಡ್ಡಿ

    ಮಂತ್ರಾಲಯದಲ್ಲಿ ಜನಾರ್ದನ ರೆಡ್ಡಿ- ವೈಎಸ್‍ಆರ್ ದೇವರು ಎಂದ್ರು ರೆಡ್ಡಿ

    ರಾಯಚೂರು: ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅತೀವ ಸಂತೋಷದಲ್ಲಿದ್ದಾರೆ. ಒಂದು ಕಾಲದಲ್ಲಿ ತಮ್ಮ ಗಣಿಗಾರಿಕೆಗೆ ಬೆಂಬಲವಾಗಿದ್ದ ಆಂಧ್ರ ಮಾಜಿ ಸಿಎಂ ವೈಎಸ್ ರಾಜಶೇಖರ್ ರನ್ನ ದೇವರಿಗೆ ಹೋಲಿಸಿ ರೆಡ್ಡಿ ಹೊಗಳಿದ್ದಾರೆ.

    ಈ ಕಾಲದಲ್ಲಿ ಮನುಷ್ಯರಲ್ಲಿ ದೇವರನ್ನ ಕಾಣೋದು ಕಷ್ಟ. ಆದರೆ ವೈಎಸ್ ರಾಜಶೇಖರ್ ರೆಡ್ಡಿ ಮಹಾನುಭಾವರು. ಅವರು ಮನುಷ್ಯರಲ್ಲ ದೇವರು. ಅವರ ಮಗ ಈಗ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗುತ್ತಿದ್ದಾರೆ ಇದರಿಂದ ಆಂಧ್ರಕ್ಕೆ ಒಳ್ಳೆಯದಾಗುತ್ತದೆ. ಇದು ನನ್ನೊಬ್ಬನ ಹರಕೆ ಅಲ್ಲ, ಇಡೀ ಆಂಧ್ರದ ಜನ ಅವರನ್ನ ಗೆಲ್ಲಿಸಲು ಮತ ಹಾಕಿದ್ದಾರೆ ಎಂದು ಜನಾರ್ದನ ರೆಡ್ಡಿ ತಿಳಿಸಿದರು.

    ಗಣಿಗಾರಿಕೆಯಲ್ಲಿ ರೆಡ್ಡಿಗೆ ಬೆಂಬಲವಾಗಿ ನಿಂತಿದ್ದ ವೈಎಸ್ ರಾಜಶೇಖರ್ ಪುತ್ರ ಈಗ ಆಂಧ್ರ ಸಿಎಂ ಆಗುತ್ತಿರೋದ್ರಿಂದ ರೆಡ್ಡಿಗೆ ಆನೆಬಲ ಬಂದಂತಾಗಿದೆ. ಗಾಣಗಾಪುರದಲ್ಲಿ ದತ್ತಾತ್ರೇಯನಿಗೆ ಹರಕೆ ಸಲ್ಲಿಸಿ ಬಳಿಕ ಮಂತ್ರಾಲಯದಲ್ಲಿ ರಾಯರಿಗೆ ಗಜ ರಥೋತ್ಸವ, ಬಂಗಾರ ರಥೋತ್ಸವ, ನವರತ್ನ ಖಚಿತ ರಥೋತ್ಸವ ಸೇರಿ ಐದು ಸೇವೆಗಳನ್ನ ಸಲ್ಲಿಸಿದ್ದಾರೆ. ಮೋದಿ ಕೂಡಾ ಭಗವಂತನ ಆಶೀರ್ವಾದದಿಂದ ಪ್ರಧಾನಿ ಆಗಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿರುವ ರೆಡ್ಡಿ ಒಳ್ಳೆಯದಕ್ಕೂ, ಕೆಟ್ಟದ್ದಕ್ಕೂ ಇತಿ ಮಿತಿ ಅನ್ನೋದು ಇರುತ್ತೆ. ಮುಂದೆ ರಾಜ್ಯಕ್ಕೂ ದೇಶಕ್ಕೂ ಒಳ್ಳೆಯದಾಗುತ್ತೆ ಎಂದಿದ್ದಾರೆ. ರಾಯರ ಮಠದಲ್ಲಿ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ ಅವರಿಗೆ ಮಠದ ಶ್ರೀಗಳು ಆಶಿರ್ವಚನ ನೀಡಿದ್ದಾರೆ.

    ಒಟ್ಟಾರೆ ಭಕ್ತರಾಗಿ ಮಠಕ್ಕೆ ಬಂದ ಜನಾರ್ದನರೆಡ್ಡಿ ದೇವರಿಗೆ ಸತತವಾಗಿ ಐದು ಸೇವೆಗಳನ್ನ ಸಲ್ಲಿಸಿದ್ದಾರೆ. ಆದರೆ ಜನಾರ್ದನ ರೆಡ್ಡಿ ಕಟ್ಕೊಂಡ ಹರಕೆ ಏನು..? ಈಡೇರಿದ ಅವರ ಬಯಕೆಗಳು ಯಾವುದು ಅನ್ನೋದು ಮಾತ್ರ ಸದ್ಯಕ್ಕೆ ತಿಳಿದಿಲ್ಲ.