Tag: ಜಕ್ಕಲಮಡುಗು ಜಲಾಶಯ

  • ಬರಿದಾಗುತ್ತಿದೆ ಜಕ್ಕಲಮಡಗು ಜಲಾಶಯ – ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಸಮಸ್ಯೆ

    ಬರಿದಾಗುತ್ತಿದೆ ಜಕ್ಕಲಮಡಗು ಜಲಾಶಯ – ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರಕ್ಕೆ ಕುಡಿಯುವ ನೀರಿನ ಸಮಸ್ಯೆ

    ಚಿಕ್ಕಬಳ್ಳಾಪುರ: ಅವಳಿ ನಗರಗಳಾದ ಚಿಕ್ಕಬಳ್ಳಾಪುರ (Chikkaballapura) ಮತ್ತು ದೊಡ್ಡಬಳ್ಳಾಪುರ (Doddaballapura) ಜನರಿಗೆ ಕುಡಿಯುವ ನೀರು ಪೂರೈಸುವ ಏಕೈಕ ಜಲಾಶಯ ಜಕ್ಕಲಮಡಗು (Jakkalamadagu) ಜಲಾಶಯ. ಕಳೆದ ವರ್ಷ ಒಂದಲ್ಲ ಎರಡಲ್ಲ ಮೂರು ಬಾರಿ ಕೋಡಿ ಹರಿದಿದ್ದ ಜಲಾಶಯ ಈ ಬಾರಿ ಒಮ್ಮೆಯೂ ಕೋಡಿ ಹರಿದಿಲ್ಲ.

    ಬರಗಾಲದ ಬೆನ್ನಲ್ಲೇ ಜಲಾಶಯದ ನೀರು ಸಹ ಬತ್ತಿ ಹೋಗುತ್ತಿದ್ದು, ಎರಡು ನಗರಗಳ ಜನರಿಗೆ ಈಗಲೇ ಆತಂಕ ಶುರುವಾಗಿದೆ. ಮುಂದೆ ಕುಡಿಯುವ ನೀರಿಗೆ ಏನು ಮಾಡೋದು ಅನ್ನೋ ಚಿಂತೆ ಈಗಲೇ ಕಾಡೋಕೆ ಶುರುವಾಗಿದೆ. ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿಗೆ ಜಕ್ಕಲಮಡಗು ಜಲಾಶಯವೇ ಕಾವೇರಿ. ಎರಡು ನಗರಗಳ ಲಕ್ಷಾಂತರ ಮಂದಿಗೆ ಕುಡಿಯುವ ನೀರು (Drinking Water) ಕೊಡುವ ಏಕೈಕ ಜಲಾಶಯವಿದು. ಇದನ್ನೂ ಓದಿ: ಅಕ್ರಮ ಹಣ ಪತ್ತೆ ಪ್ರಕರಣ ಸಿಬಿಐಗೆ ವಹಿಸಲಿ: ಅಶ್ವಥ್ ನಾರಾಯಣ್

    ಕಳೆದ 3 ವರ್ಷಗಳಿಂದ ಮೈದುಂಬಿ ಕೋಡಿ ಹರಿಯುತ್ತಿದ್ದ ಈ ಜಲಾಶಯ ಈ ಬಾರಿ ಕೋಡಿ ಹರಿದಿಲ್ಲ. ಹೀಗಾಗಿ ಜಕ್ಕಲಮಡಗು ಜಲಾಶದಯಲ್ಲಿ ಕಳೆದ ಬಾರಿ ಸಂಗ್ರಹವಾಗಿದ್ದ ನೀರನ್ನು ಈ ಬಾರಿಯೂ ಬಳಸಲಾಗುತ್ತಿದೆ. ಈಗಾಗಲೇ ಜಲಾಶಯದ 60% ರಷ್ಟು ಪ್ರಮಾಣದ ನೀರು ಖಾಲಿಯಾಗಿದ್ದು, ಅಧಿಕಾರಿಗಳಿಗೆ ಆತಂಕ ಶುರುವಾಗಿದೆ. ಜನರೇ ದಯಮಾಡಿ ನೀರನ್ನು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸರ್ಕಾರ ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಕೊಡಬೇಕು: ಜಿಟಿ ದೇವೇಗೌಡ

    ಜಕ್ಕಲಮಡಗು ಜಲಾಶಯದಿಂದ 60% ರಷ್ಟು ಭಾಗದ ನೀರನ್ನು ಚಿಕ್ಕಬಳ್ಳಾಪುರಕ್ಕೆ ಹಾಗೂ 40%ರಷ್ಟು ಭಾಗದ ನೀರನ್ನು ದೊಡ್ಡಬಳ್ಳಾಪುರಕ್ಕೆ ಪೂರೈಸಲಾಗುತ್ತದೆ. ಆದರೆ ಈಗ ನೀರು ಕಡಿಮೆಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾತ್ರ ದೊಡ್ಡಬಳ್ಳಾಪುರ ನಗರದ ಜನತೆಗೆ ನೀರು ಪೂರೈಸಲಾಗುತ್ತಿದೆ. ಇದರಿಂದ ಜನರಿಗೆ ಈಗಲೇ ನೀರಿನ ಅಭಾವ ಶುರುವಾಗಿದೆ. ಇದನ್ನೂ ಓದಿ: ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು: ಜಿಟಿ ದೇವೇಗೌಡ

    ಈಗಾಗಲೇ ಮಳೆಗಾಲ ಮುಗಿದು ಹೋಗಿದ್ದು, ಇನ್ನೂ ಮಳೆ ಬಂದು ಜಲಾಶಯ ತುಂಬೋದು ಅಷ್ಟಕಷ್ಟೇ. ಮತ್ತೊಂದೆಡೆ ಚಳಿಗಾಲ ಆರಂಭವಾಗಿದ್ದು, ಬೇಸಿಗೆ ಕಾಲ ಬರುವ ಮುನ್ನವೇ ನೀರಿಗೆ ಸಮಸ್ಯೆ ಎದುರಾಗುತ್ತಿದೆ. ಮುಂದೆ ಏನು ಅನ್ನೋ ಚಿಂತೆ ಅಧಿಕಾರಿಗಳನ್ನು ಕಾಡೋಕೆ ಶುರುವಾಗಿದೆ. ಇದನ್ನೂ ಓದಿ: ಲಘು ಶಸ್ತ್ರಚಿಕಿತ್ಸೆ ಬಳಿಕ ವಿಶ್ರಾಂತಿ – ಆಸ್ಪತ್ರೆಗೆ ಬರಬೇಡಿ ಎಂದ ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಲಾಶಯದ ಬಳಿ ಸಿಕ್ತು ಶಿಕ್ಷಕರ ಮೊಬೈಲ್, ಬೈಕ್ – ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

    ಜಲಾಶಯದ ಬಳಿ ಸಿಕ್ತು ಶಿಕ್ಷಕರ ಮೊಬೈಲ್, ಬೈಕ್ – ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

    ಚಿಕ್ಕಬಳ್ಳಾಪುರ: ಜಕ್ಕಲಮಡುಗು ಜಲಾಶಯಕ್ಕೆ ಹಾರಿ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಚಿಕ್ಕಗೌರಿಬಿದನೂರು ತಾಲೂಕಿನ ಬೊಮ್ಮಸಂದ್ರ ಗ್ರಾಮದ ಶಿಕ್ಷಕ ಶ್ರೀನಾಥ್ ರೆಡ್ಡಿಗೆ ಸೇರಿದ ಬೈಕ್ ಹಾಗೂ ಮೊಬೈಲ್ ಜಲಾಶಯದ ಬಳಿ ಪತ್ತೆಯಾಗಿದೆ. ಜಲಾಶಯದ ನೀರಿನಲ್ಲಿ ಶ್ರೀನಾಥ್ ರೆಡ್ಡಿ ಚಪ್ಪಲಿಗಳು ಸಹ ಪತ್ತೆಯಾಗಿವೆ. ಹೀಗಾಗಿ ಶಿಕ್ಷಕ ಶ್ರೀನಾಥ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅನುಮಾನ ವ್ಯಕ್ತವಾಗಿದ್ದು ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ.

    ಆಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸುತ್ತಿದ್ದು, ನಂದಿಗಿರಿಧಾಮ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬುದು ತಿಳಿದು ಬಂದಿಲ್ಲ. ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಈ ಜಲಾಶಯದಿಂದ ಚಿಕ್ಕಬಳ್ಳಾಪುರ ಹಾಗೂ ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತೆ.

  • ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಜಲಕಂಟಕ

    ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಅವಳಿ ನಗರಗಳಿಗೆ ಜಲಕಂಟಕ

    ಚಿಕ್ಕಬಳ್ಳಾಪುರ: ಅದು ಒಂದಲ್ಲ ಎರಡಲ್ಲ 8 ವರ್ಷಗಳಿಂದಲೂ ಬರಪೀಡಿತ ಜಿಲ್ಲೆಯಾದರೂ, ಅವಳಿ ನಗರಗಳ ಜನತೆಗೆ ಎಂದು ಕುಡಿಯುವ ನೀರು ಎಂದೂ ಕೊರತೆಯಾಗಿರಲಿಲ್ಲ. ಬೆಂಗಳೂರು ಮಹಾನಗರಕ್ಕೆ ಕಾವೇರಿ ಆಸರೆಯಾದಂತೆ, ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ಎರಡು ನಗರಗಳಿಗೆ ಜಕ್ಕಲಮಡುಗು ಜಲಾಶಯವೇ ಆಸರೆ ಆಗಿತ್ತು. ಆದರೆ ಈ ಬಾರಿ ಮಳೆಗಾಲದಲ್ಲೇ ಜಲಾಶಯ ಬತ್ತಿ ಬರಡಾಗಿದ್ದು ಲಕ್ಷಾಂತರ ಮಂದಿಗೆ ಈಗ ಎಲ್ಲಿಲ್ಲದ ಆತಂಕ ಶುರುವಾಗಿದೆ.

    ವಿಶ್ವವಿಖ್ಯಾತ ಸರ್ ಎಂ. ವಿಶ್ವೇಶರಯ್ಯನವರು ನಿರ್ಮಾಣದ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡುಗು ಜಲಾಶಯ ಕೇವಲ ಒಂದು ಜಲಾಶಯ ಅಲ್ಲ. ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರಗಳ ಜನರ ಪಾಲಿನ ಕಾವೇರಿ ನದಿಯಂತೆ. ಆದರೆ ಎರಡು ವರ್ಷ ಕಳೆಯೋದರೋಳಗೆ ಅವಳಿ ನಗರಗಳ ಜನರ ಜೀವದಾತೆ ಜಕ್ಕಲಮಡುಗು ಜಲಾಶಯದ ಚಿತ್ರಣವೇ ಬದಲಾಗಿ ಹೋಗಿದೆ. ಕಳೆದ 20 ತಿಂಗಳಲ್ಲಿ ತನ್ನ ಒಡಲಲ್ಲಿ ತುಂಬಿಕೊಂಡಿದ್ದ ನೀರನ್ನು ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರ ನಗರದ ಜನತೆಗೆ ಧಾರೆಯೆರೆದ ಜಕ್ಕಲಮಡುಗು ಜಲಾಶಯ ಈಗ ಬರಿದಾಗಿ ಹೋಗಿದೆ. ಜಲಾಶಯವೆಲ್ಲವೂ ಖಾಲಿ ಖಾಲಿಯಾಗಿ ಆಸ್ಥಿಪಂಜರದಂತೆ ಭಾವಾಗುತ್ತಿದ್ದು, ಇಷ್ಟು ದಿನ ಜಕ್ಕಲಮಡುಗು ಜಲಾಶಯದ ನೀರು ಕುಡಿಯುತ್ತಿದ್ದ ಅವಳಿ ನಗರಗಳ ಜನತೆಗೆ ಕುಡಿಯೋ ನೀರಿಗೆ ಮುಂದೆ ಏನು ಮಾಡೋದು ಎನ್ನುವ ಆತಂಕ ಶುರುವಾಗಿದೆ.

    ಬರದ ನಡುವೆಯೂ ಪ್ರತಿ ವರ್ಷವೂ ನಂದಿಗಿರಿ, ಸ್ಕಂದಗಿರಿ, ಚನ್ನಗಿರಿ ಬೆಟ್ಟ ಸಾಲುಗಳ ನಡುವೆ ಬೀಳುತ್ತಿದ್ದ ಮಳೆಯಿಂದ ಅಷ್ಟೋ ಇಷ್ಟೋ ತುಂಬಿ ತುಳುಕುತ್ತಿದ್ದ ಈ ಜಲಾಶಯ ಈ ಬಾರಿ ಮಳೆ ಕೊರತೆಯಿಂದ ಸಂಪೂರ್ಣ ಖಾಲಿ ಖಾಲಿಯಾಗಿದೆ. 2012ರಲ್ಲಿ ಪುನರ್ನಿರ್ಮಾಣಗೊಂಡು ಮೇಲ್ದರ್ಜೆಗೇರಿದ ಮೇಲೆ ಸತತ ಆರು ವರ್ಷಗಳಿಂದಲೂ ಬರಿದಾಗಿರಲಿಲ್ಲ. ಸದಾ ಚಿಕ್ಕಬಳ್ಳಾಪುರ-ದೊಡ್ಡಬಳ್ಳಾಪುರದ ಎರಡೂವರೆ ಲಕ್ಷ ಮಂದಿಗೆ ಜೀವ ಜಲ ನೀಡುತ್ತಿದ್ದ ಈ ಜಲಾಶಯ ಈಗ ಬರಿದಾಗಿರೋದು ಸ್ವತಃ ಜಿಲ್ಲಾಡಳಿತಕ್ಕೂ ದೊಡ್ಡ ಆತಂಕ ತಂದಿದೆ. ಹೀಗಾಗಿ ಸ್ವತಃ ಡಿಸಿ ಅನಿರುದ್ಧ್ ಶ್ರವಣ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ.

    ಇಷ್ಟು ದಿನ ಜಕ್ಕಲುಮಡುಗು ಜಲಾಶಯದ ನೀರು ಕುಡಿಯುತ್ತಿದ್ದ ಅವಳಿ ನಗರಗಳ ಜನರಿಗೆ ಈಗ ಕೊಳವೆ ಬಾವಿಗಳ ನೀರಷ್ಟೇ ಆಧಾರವಾಗಿದೆ.