Tag: ಜಕಾರ್ತ

  • ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಏಷ್ಯನ್ ಗೇಮ್ಸ್‌ನಲ್ಲಿ  ಭಾರತದ ಸಾರ್ವಕಾಲಿಕಾ ದಾಖಲೆ!

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಇತಿಹಾಸದಲ್ಲೇ ಅತಿಹೆಚ್ಚು ಪದಕಗಳನ್ನು ಗೆದ್ದಿದ್ದಾರೆ.

    ಕೊನೆಯ ದಿನವಾದ ಶನಿವಾರ ಪುರುಷರ ಹಾಕಿ ತಂಡ ಪಾಕಿಸ್ತಾನವನ್ನು 2-1 ಗೋಲುಗಳ ಅಂತರದಿಂದ ಸೋಲಿಸಿ ಕಂಚಿನ ಪದಕವನ್ನು ಪಡೆಯಿತು. ಮಹಿಳೆಯರ ಸ್ಕ್ವಾಶ್ ತಂಡ ಬೆಳ್ಳಿ ಪದಕ ಗೆದ್ದರೆ ಬಾಕ್ಸಿಂಗ್ ನಲ್ಲಿ ಅಮಿತ್ ಪಾಂಗಲ್ ಮತ್ತು ಬ್ರಿಡ್ಜ್ ಗೇಮ್(ಇಸ್ಪೀಟ್) ನಲ್ಲಿ ಪುರುಷರ ತಂಡ ಚಿನ್ನವನ್ನು ಗೆದ್ದುಕೊಂಡಿದೆ.

    2010ರಲ್ಲಿ ಚೀನಾದಲ್ಲಿ ನಡೆದಿದ್ದ 16ನೇ ಏಷ್ಯನ್  ಗೇಮ್ಸ್‌ನಲ್ಲಿ 65 ಪದಕಗಳನ್ನು ಗೆದ್ದಿದ್ದೇ ಭಾರತದ ಇವರೆಗಿನ ದಾಖಲೆಯಾಗಿತ್ತು. ಆದರೆ ಈ ಬಾರಿ 15 ಚಿನ್ನ, 24 ಬೆಳ್ಳಿ, 30 ಕಂಚು ಜಯಿಸುವ ಮೂಲಕ ಒಟ್ಟು 69 ಪದಕಗಳನ್ನು ಸ್ಪರ್ಧಿಗಳು ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಚಿನ್ನ ಗೆದ್ದ 16ರ ಹರೆಯದ ಶೂಟರ್ ಹಿಂದಿದೆ ಖೇಲೋ ಇಂಡಿಯಾ! ಏನಿದು ಯೋಜನೆ?

    2014ರ ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 11 ಚಿನ್ನ, 10 ಬೆಳ್ಳಿ, 36 ಕಂಚು ಸೇರಿ 57 ಪದಕ ಜಯಿಸಿತ್ತು. 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಕೂಟದಲ್ಲೂ ಭಾರತ ಕ್ರೀಡಾಪಟುಗಳು 57 ಪದಕ ಜಯಿಸಿದ್ದರೂ, ಗೆದ್ದ ಚಿನ್ನದ ಪದಕಗಳ ಸಂಖ್ಯೆ 13 ಆಗಿತ್ತು. 2006ರ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 53 ಹಾಗೂ 1962ರ ಜರ್ಕಾತದಲ್ಲಿ 52 ಪದಕಗಳನ್ನು ಗೆದ್ದುಕೊಂಡಿತ್ತು.  ಇದನ್ನೂ ಓದಿ: ಹೆಪ್ಟಾಥ್ಲಾನ್ ಚಿನ್ನದ ಹುಡುಗಿ ಸ್ವಪ್ನಾ ತಾಯಿಯ ಆನಂದಭಾಷ್ಪ ವಿಡಿಯೋ ವೈರಲ್

    ಭಾರತದ ಅಥ್ಲೆಟ್ ಗಳು ಈ ಬಾರಿ ವಿಶೇಷ ಸಾಧನೆ ಮಾಡಿದ್ದು ಒಟ್ಟು 7 ಚಿನ್ನ, 10 ಬೆಳ್ಳಿ, 2 ಕಂಚನ್ನು ಗೆಲ್ಲುವ ಮೂಲಕ ಒಟ್ಟು 19 ಪದಕಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಅಥ್ಲೆಟಿಕ್ಸ್ ನಲ್ಲಿ ಮೂರನೇ ಸ್ಥಾನ ಸಂಪಾದಿಸಿದ್ದಾರೆ. ಶೂಟಿಂಗ್ ನಲ್ಲಿ 2 ಚಿನ್ನ ಸೇರಿ ಒಟ್ಟು 9 ಪದಕ ಗೆದ್ದಿದ್ದರೆ, ಕುಸ್ತಿಯಲ್ಲ 2 ಚಿನ್ನ ಸೇರಿ ಒಟ್ಟು 3 ಪದಕವನ್ನು ಗೆದ್ದುಕೊಂಡಿದೆ.

    ಚಿನ್ನ ನಿರೀಕ್ಷಿಸಿದ್ದ ಕಬಡ್ಡಿ, ಹಾಕಿ, ಬಾಕ್ಸಿಂಗ್ ನಲ್ಲಿ ಕಂಚು, ಬೆಳ್ಳಿ ಪದಕ ಸಿಕ್ಕಿದ್ದರೆ, ಟೇಬಲ್ ಟೆನಿಸ್, ಸೈಲಿಂಗ್ (ಹಾಯಿದೋಣಿ) ಬ್ರಿಡ್ಜ್ (ಇಸ್ಪೀಟ್), ಈಕ್ವೇಸ್ಟ್ರಿಯನ್ (ಕುದುರೆ ಸವಾರಿ), ಲ್ಲಿ ಭಾರತದ ಕ್ರೀಡಾಪಟುಗಳು ಪದಕ ಗೆದ್ದಿರುವುದು ವಿಶೇಷ.  ಇದನ್ನೂ ಓದಿ:ಚಿನ್ನ ಗೆದ್ದ ಸ್ವಪ್ನಾ ಸಾಧನೆಯ ಹಿಂದಿದೆ ದ್ರಾವಿಡ್ ಸಹಾಯಹಸ್ತ!

     289 ಪದಕ ಪಡೆಯುವ ಮೂಲಕ ಚೀನಾ ಮೊದಲ ಸ್ಥಾನ ಪಡೆದರೆ ಸಿರಿಯಾ ಕೊನೆಯ 37ನೇ ಸ್ಥಾನ ಪಡೆದಿದೆ. 4 ಕಂಚಿನ ಪದಕ ಗೆದ್ದಿರುವ ಪಾಕಿಸ್ತಾನ ಪಟ್ಟಿಯಲ್ಲಿ 34ನೇ ಸ್ಥಾನ ಪಡೆದಿದೆ.

     

     

  • ಏಷ್ಯನ್ ಗೇಮ್ಸ್: ಪೂವಮ್ಮ ಟೀಂಗೆ ರಿಲೇಯಲ್ಲಿ ಚಿನ್ನ

    ಏಷ್ಯನ್ ಗೇಮ್ಸ್: ಪೂವಮ್ಮ ಟೀಂಗೆ ರಿಲೇಯಲ್ಲಿ ಚಿನ್ನ

    ಜಕಾರ್ತ: ಏಷ್ಯನ್ ಕ್ರೀಡಾಕೂಟದ ಮಹಿಳೆಯರ 4*400 ಮೀಟರ್ ರಿಲೇಯಲ್ಲಿ ಭಾರತ ಚಿನ್ನವನ್ನು ಗೆದ್ದುಕೊಂಡಿದೆ. ಈ ಮೂಲಕ ಸತತ 5ನೇ ಬಾರಿ ಭಾರತ ತಂಡ ಚಿನ್ನ ಜಯಿಸಿದೆ.

    ಕರ್ನಾಟಕದ ಪೂವಮ್ಮ, ಹಿಮಾದಾಸ್, ಲಕ್ಷ್ಮಿಬಾಯ್ ಗಾಯಕ್ವಾಡ್, ವಿಸ್ಮಯ ತಂಡ 3.28.72 ಸೆಕೆಂಡಿನಲ್ಲಿ ಗುರಿಯನ್ನು ಕ್ರಮಿಸಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ.  ಬಹರೈನ್ ಎರಡನೇ ಸ್ಥಾನವನ್ನು ಪಡೆದರೆ ವಿಯೆಟ್ನಾಂ ಮೂರನೇ ಸ್ಥಾನವನ್ನು ಪಡೆಯಿತು.

    ಪುರುಷರ 4*400 ಮೀಟರ್ ರಿಲೇಯಲ್ಲಿ ಭಾರತ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಕತಾರ್ ತಂಡ ಮೊದಲ ಸ್ಥಾನ ಪಡೆದರೆ ಜಪಾನ್ ಮೂರನೇ ಸ್ಥಾನ ಪಡೆದುಕೊಂಡಿದೆ.

    ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ. 3.44.72 ಸೆಕೆಂಡಿನಲ್ಲಿ ಓಡಿ ಗುರಿ ತಲುಪಿದರು.

     

  • ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಗೆದ್ದ ಉಷಾರಾಣಿಗೆ ಪ್ರಮೋಷನ್!

    – ಸರ್ಕಾರದಿಂದ ಸನ್ಮಾನ, ಡಿಸಿಎಂ ಅಭಿನಂದನೆ

    ಬೆಂಗಳೂರು: ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು ಆದ್ರೆ ಬೆಳ್ಳಿ ಗೆದ್ದಿದ್ದೇವೆ. ಇಂದು ರಾಜ್ಯ ಸರ್ಕಾರ ನನ್ನನ್ನು ಗೌರವಿಸಿ, ಬಿ ದರ್ಜೆಯ ಪ್ರಮೋಷನ್ ನೀಡಿದೆ ಅಂತ ಏಷ್ಯನ್ ಗೇಮ್ಸ್ ನ ಕಬಡ್ಡಿಯಲ್ಲಿ ಬೆಳ್ಳಿ ಪದಕ ಗೆದ್ದಿರುವ ರಾಜ್ಯ ಪೊಲೀಸ್ ಕಾನ್ಸ್ ಸ್ಟೇಬಲ್ ಉಷಾರಾಣಿ ಹೇಳಿದ್ದಾರೆ.

    ಉಷಾರಾಣಿ ಅವರು ರಾಷ್ಟ್ರಮಟ್ಟದಲ್ಲಿ ಕಬ್ಬಡಿ ತಂಡವನ್ನು ಪ್ರತಿನಿಧಿಸಿ, ಬೆಳ್ಳಿ ಗೆದ್ದಿದ್ದಾರೆ. ಹೀಗಾಗಿ ಸರ್ಕಾರದಿಂದ 15 ಲಕ್ಷ ಚೆಕ್ ನೊಂದಿಗೆ ಸನ್ಮಾನಿತಗೊಂಡರು. ಸನ್ಮಾನದ ನಂತರ ಗೆಲುವಿನ ಖುಷಿ ಹಂಚಿಕೊಂಡ ಅವರು, ಚಿನ್ನದ ಪದಕ ಗೆಲ್ಲುವ ನೀರಿಕ್ಷೆ ಇತ್ತು. ಆದ್ರೆ ಬೆಳ್ಳಿ ಗೆದ್ದಿದ್ದೇವೆ. ರಾಜ್ಯ ಸರ್ಕಾರ ನನ್ನನ್ನು ಗೌರವಿಸಿದ್ದಕ್ಕೆ ಹೆಮ್ಮೆ ಇದೆ. ಹೀಗಾಗಿ ತುಂಬಾ ಖುಷಿಯಾಗುತ್ತಿದೆ. ಬಿ ದರ್ಜೆಯ ಪ್ರಮೋಷನ್ ನೀಡಿದ್ದಾರೆ. ಇಲಾಖೆಯಲ್ಲಿ ಇದೇ ಮೊದಲಿಗೆ ಮುಂಬಡ್ತಿ ಕೊಡುತ್ತಿರುವುದು. ಅದು ನನಗೆ ಸಿಕ್ಕಿರೋದು ಖುಷಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಚಿನ್ನ ಗೆಲ್ಲುವ ಭರವಸೆ ಇದೆ. ನನ್ನ ಶ್ರಮಕ್ಕೆ ಇಲಾಖೆಯೂ ಸಹಕಾರ ಕೊಟ್ಟಿದೆ ಅಂತ ಅವರು ಹೇಳಿದ್ರು.

    ಉಷಾರಾಣಿ ಅವರಿಗೆ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಜಿ ನೀಲಮಣಿರಾಜು, ಎಡಿಜಿಪಿ ಭಾಸ್ಕರ್ ರಾವ್ ಮತ್ತು ಕಮಿಷನರ್ ಸುನೀಲ್ ಕುಮಾರ್ ಭಾಗಿಯಾದ್ದರು.  ಇದನ್ನೂ ಓದಿ: ಸಾಧನೆಯ ಹಾದಿಯನ್ನು ತೆರೆದಿಟ್ಟ ಏಷ್ಯನ್ ಗೇಮ್ಸ್ 2018ರ ಬೆಳ್ಳಿ ಪದಕ ವಿಜೇತೆ ಉಷಾರಾಣಿ

    ಡಿಸಿಎಂ ಅಭಿನಂದನೆ:
    ಜಕಾರ್ತ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮಹಿಳಾ ತಂಡ ಬೆಳ್ಳಿ ಪದಕ ಪಡೆದಿದೆ. ಮಹಿಳಾ ಕಬ್ಬಡಿ ತಂಡದಲ್ಲಿ ಬೆಂಗಳೂರಿನ ಉಷಾರಾಣಿ ಭಾಗವಹಿಸಿದ್ದರು. ಇವರು ನಮ್ಮ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಇದೀಗ ನಮ್ಮ ರಾಜ್ಯಕ್ಕೆ ನಮ್ಮ ಇಲಾಖೆಗೆ ಕೀರ್ತಿ ತಂದಿದ್ದಾರೆ. ನಮ್ಮ ಇಲಾಖೆ ಮತ್ತು ಯುವಜನಾ ಕ್ರೀಡಾ ಇಲಾಖೆಯಿಂದ 15 ಲಕ್ಷ ಚೆಕ್ ನೀಡಿದ್ದೇವೆ. ನಮ್ಮ ಪೊಲೀಸ್ ಇಲಾಖೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದೇವೆ ಅಂತ ಡಿಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಏಷ್ಯನ್ ಗೇಮ್ಸ್ 2018: ಕಬ್ಬಡ್ಡಿಯಲ್ಲಿ ಬೆಳ್ಳಿ ಪದಕ ಪಡೆದ ಕನ್ನಡತಿ

    ಹಿಮಾದಾಸ್ ಗೂ 15 ಲಕ್ಷ ರೂ.:
    ಸರ್ಕಾರದಲ್ಲಿ ನಿಯಮಾವಳಿಗಳನ್ನ ಬದಲಾವಣೆ ಮಾಡುತ್ತಿದ್ದೇವೆ. ಉಷಾರಾಣಿ ಅವರಿಗೆ ಬಿ ದರ್ಜೆಗೆ ಪ್ರಮೋಷನ್ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಚಿನ್ನದ ಪದಕ ಗಳಿಸಬೇಕು ಅಂತಾ ಆಶಿಸುತ್ತೇನೆ. ಅವರ ತಂದೆ ತಾಯಿ ಮತ್ತು ಕೋಚ್ ಜಗದೀಶ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ಬೆಳ್ಳಿ ಪದಕ ಪಡೆದ ಹಿಮಾದಾಸ್ ಅವರಿಗೂ 15 ಲಕ್ಷ ರೂಪಾಯಿ ಬಹುಮಾನ ನೀಡುತ್ತಿದ್ದೇವೆ. ನಮ್ಮ ರಾಜ್ಯದ ಫೋಲ್ಸ್ ಇರ್ಜಾ ಮತ್ತು ರೋಹಣ ಬೋಪಣ್ಣ ಅವ್ರಿಗೂ ಇಲಾಖೆ ವತಿಯಿಂದ ಗೌರವ ಸಮರ್ಪಣೆ ಮಾಡುತ್ತೇವೆ ಅಂತಾ ಪರಮೇಶ್ವರ್ ಅಂದ್ರು. ಇದನ್ನೂ ಓದಿ: 400 ಮೀಟರ್ ರೇಸ್: ಹಿಮಾದಾಸ್, ಅನಾಸ್‍ಗೆ ಬೆಳ್ಳಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಇದನ್ನೂ ಓದಿ:  ನಟ ಪುನೀತ್, ಡಿಸಿಪಿ ಚನ್ನಣ್ಣನವರಿಂದ ಹಿಮಾದಾಸ್ ಗೆ ಅಭಿನಂದನೆ

  • ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಏಷ್ಯನ್ ಗೇಮ್ಸ್ 2018: ಭಾರತದ 14 ವರ್ಷಗಳ ದಾಖಲೆ ಮುರಿದ ಹಿಮಾ ದಾಸ್!

    ಜಕಾರ್ತ: ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಮೊದಲ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದ ಹಿಮಾ ದಾಸ್ ಏಷ್ಯನ್ ಗೇಮ್ಸ್ ಸ್ಪರ್ಧೆಯಲ್ಲಿ ಭಾರತದ 14 ವರ್ಷಗಳ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

    ಶನಿವಾರ ನಡೆದ ಅರ್ಹತಾ ಸುತ್ತಿನ 400 ಮೀ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾ ದಾಸ್ ರವರು 51.00 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಈ ಸಾಧನೆಮಾಡಿದ್ದಾರೆ. ಈ ಮೂಲಕ ಭಾರತದ 14 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿ, ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಪದಕ ತಂದುಕೊಟ್ಟ ಹಿಮಾ ದಾಸ್ ಚಿರತೆಯ ಓಟದ ವಿಡಿಯೋ ನೋಡಿ

    ಈ ಮೊದಲು 2004 ರ ಚೆನ್ನೈನಲ್ಲಿ ನಡೆದಿದ್ದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಮಂಜಿತ್ ಕೌರ್ ಈ ದಾಖಲೆಯನ್ನು ಮಾಡಿದ್ದರು. ಅರ್ಹತಾ ಸುತ್ತಿನ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಹಿಮಾ ದಾಸ್ ರವರು ಅಂತಿಮ ಪಂದ್ಯಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ.

    ಅರ್ಹತಾ ಸುತ್ತಿನ ಓಟದಲ್ಲಿ ಬಹರೇನ್‍ನ ಸಲ್ವಾ ನಸರ್ ಜೊತೆ ಹಿಮಾ ದಾಸ್ ಓಡಿದ್ದು, ಸಲ್ವಾ ನಸರ್ ಸಹ ಸ್ಪರ್ಧೆ ಗೆಲ್ಲುವ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಇದನ್ನೂ ಓದಿ: ಹಿಮಾ ದಾಸ್ ಸಾಧನೆಗಿಂತ, ಜಾತಿಯನ್ನೇ ಹೆಚ್ಚಾಗಿ ಹುಡುಕಿದ ಜಾಲತಾಣಿಗರು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಏಷ್ಯನ್ ಗೇಮ್ಸ್ 2018: ಭಾರತಕ್ಕೆ ಮತ್ತೊಂದು ಚಿನ್ನದ ಪದಕ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಿನಿಶ್ ಪೋಗಟ್‍ರವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

    ಏಷ್ಯನ್ ಗೇಮ್ಸ್ 2018ರ ಎರಡನೇ ದಿನವಾದ ಇಂದು ಸಹ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದು, 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೀಶ್ ಪೋಗಟ್‍ರವರು ಚಿನ್ನ ಗೆದ್ದಿದ್ದಾರೆ.

    ಮಂಗಳವಾರ ನಡೆದ 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೀಶ್ ಪೋಗಟ್‍ರವರು ಜಪಾನಿನ ಯೂಕಿ ಇರ್ಕಿ ಅವರನ್ನು 6-2 ಅಂತರಗಳಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ದೇಶಕ್ಕೆ ಎರಡನೇ ಚಿನ್ನ ತಂದು ಕೊಟ್ಟ ಹಾಗೂ ಏಷ್ಯನ್ ಗೇಮ್ಸ್ ನ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಪಾತ್ರಕ್ಕೆ ವಿನೀಶ್ ಪೋಗಟ್ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತ ಕುಸ್ತಿ ವಿಭಾಗದಿಂದ 2 ಚಿನ್ನ, ಶೂಟಿಂಗ್ ವಿಭಾಗದಿಂದ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಏಷ್ಯನ್ ಗೇಮ್ಸ್ 2018: ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ

    ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಪ್ರಥಮ ಬೆಳ್ಳಿ ಪದಕ ಲಭಿಸಿದ್ದು, 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸಾಧನೆ ಮಾಡುವ ಮೂಲಕ ದೀಪಕ್ ಕುಮಾರ್ ಬೆಳ್ಳಿಯ ಪದಕಕ್ಕೆ ಕೊರಳ್ಳೊಡಿದ್ದಾರೆ.

    ಇಂದು ನಡೆದ ಪುರುಷರ 10 ಮೀ ಏರ್ ರೈಫಲ್ ವಿಭಾಗದ ಅಂತಿಮ ಹಂತದ ಪಂದ್ಯಾವಳಿಯಲ್ಲಿ ಭಾರತದ ದೀಪಕ್ ಕುಮಾರ್ ರವರು 247.7 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯುವಲ್ಲಿ ಸಫಲರಾದರು.

    ಚೀನಾದ ಯಾಂಗ್ ಹಾರಾನ್ 249.1 ಅಂಕಗಳಿಸಿ ಚಿನ್ನದ ಪದಕಗಳಿಸಿದರೆ, ಚೀನಾ ತೈಪಿಯ ಶಾವೊಕುವಾನ್ 226.8 ಅಂಕಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು. ಅಲ್ಲದೇ ಭಾರತದ ಮತ್ತೊಬ್ಬ ಆಟಗಾರರಾದ ರವಿಕುಮಾರ್ ರವರು 205.2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

    ಭಾನುವಾರ ಪುರುಷರ ಫ್ರೀ ಸ್ಟೈಲ್ ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ ಪೂನಿಯಾ ಸ್ವರ್ಣದ ಪದಕಕ್ಕೆ ಮುತ್ತಿಟ್ಟಿದ್ದರು. ಜಪಾನ್ ದೇಶದ ಟಕಟಾನಿ ಡೈಚಿ ವಿರುದ್ಧ ನಡೆದ ಅಂತಿಮ ಸುತ್ತಿನಲ್ಲಿ 11-8 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಪೂನಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಮಿಶ್ರ ಶೂಟಿಂಗ್ ವಿಭಾಗದ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾಗವಹಿಸಿದ್ದ ಅಪೂರ್ವಿ ಚಾಂಡೇಲಾ, ರವಿ ಕುಮಾರ್ ಜೋಡಿ ಕಂಚಿನ ಪದಕ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

    ಪ್ರಿಯತಮನ ಆತ್ಮದ ಹೆಸರಲ್ಲಿ 15 ವರ್ಷ ಕಾಲ ಗುಹೆಯಲ್ಲಿ ಕೂಡಿಹಾಕಿ ವೃದ್ಧನ ಸೆಕ್ಸ್!

    ಜಕಾರ್ತ: ಯುವತಿಯೊಬ್ಬಳನ್ನು ಗುಹೆಯಲ್ಲಿ ಕೂಡಿ ಹಾಕಿ ತನ್ನ ಕಾಮತೃಷೆಗೆ 15 ವರ್ಷಗಳ ಕಾಲ ಬಳಸಿಕೊಂಡ 83 ವರ್ಷದ ಮಂತ್ರವಾದಿ ಹಾಗೂ ನಕಲಿ ವೈದ್ಯನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದ್ದು ಮಂತ್ರವಾದಿಯ ಮನೆಯ ಸಮೀಪದಲ್ಲೇ ಇದ್ದ ಗುಹೆಯಲ್ಲಿ ಯುವತಿ ಕಾಣಿಸಿಕೊಂಡ ಬಳಿಕ ಪ್ರಕರಣ ಬಯಲಿಗೆ ಬಂದಿದೆ.

    ಆಗಿದ್ದೇನು?
    2003ರಲ್ಲಿ ಆಕೆ 13ರ ಬಾಲಕಿ. ಆಕೆಯ ಪೋಷಕರು ಚಿಕಿತ್ಸೆಗೆಂದು ಆಕೆಯನ್ನು 2003ರಲ್ಲಿ ನಕಲಿ ವೈದ್ಯನ ಬಳಿಗೆ ಕರೆ ತಂದಿದ್ದರು. ಚಿಕಿತ್ಸೆಗೆಂದು ಆಕೆಯನ್ನು ಅಲ್ಲೇ ಬಿಟ್ಟು ಪೋಷಕರು ತೆರಳಿದ್ದರು. ಇದಾದ ಕೆಲವು ದಿನಗಳ ನಂತರ ಮಗಳನ್ನು ನೋಡಲು ಪೋಷಕರು ವಾಪಸ್ ಬಂದಾಗ ಮಂತ್ರವಾದಿ ಕಟ್ಟುಕತೆ ಹೆಣೆದ. ಆಕೆ ಕೆಲಸ ಹುಡುಕಿಕೊಂಡು ಇಲ್ಲಿಂದ ಜಕಾರ್ತಾಗೆ ಹೊರಟಿದ್ದಾಳೆ ಎಂದು ಹೇಳಿ ಅವರನ್ನು ನಂಬಿಸಿದ್ದ. ಇದಾದ ಬಳಿಕ 15 ವರ್ಷಗಳ ಕಾಲ ಆಕೆಯ ಪೋಷಕರು ಎಲ್ಲಾ ಪ್ರಯತ್ನ ಮಾಡಿದರೂ ಯುವತಿಯ ಸುಳಿವು ಸಿಕ್ಕಿರಲೇ ಇಲ್ಲ. ಆದರೆ ಕಳೆದ ವಾರ ಆಕೆ ಗುಹೆಯೊಂದರಲ್ಲಿ ಕಾಣಿಸಿಕೊಂಡಿದ್ದಾಳೆ ಎಂಬ ರಹಸ್ಯ ವಿವರ ಬಹಿರಂಗವಾದ ಬೆನ್ನಲ್ಲೇ ಪೋಷಕರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಖಚಿತ ಮಾಹಿತಿ ಆಧರಿಸಿ ಹೋದ ಪೊಲೀಸರಿಗೆ ಆಕೆ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಆಕೆ ಪೊಲೀಸರ ವಶದಲ್ಲಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

    ಏನ್ಮಾಡ್ತಿದ್ದ ಮಂತ್ರವಾದಿ?
    ಪೊಲೀಸರು ಹೇಳುವ ಪ್ರಕಾರ, ಜಾಗೋ ಎಂಬ ಹೆಸರಿನ ಈತ ಅಮ್ರೀನ್ ಎಂಬಾತನ ಫೋಟೋ ತೋರಿಸಿ ಈತ ನಿನ್ನ ಬಾಯ್ ಫ್ರೆಂಡ್. ಆತನ ಆತ್ಮ ನನ್ನ ದೇಹ ಪ್ರವೇಶಿಸಿದೆ. ಅವನ ಶಕ್ತಿಯನ್ನು ನಾನು ಪಡೆದಿದ್ದೇನೆ ಎಂದು ಆಕೆಯನ್ನು ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರಂಭಿಸಿದ್ದ. ಇದರಿಂದಾಗಿ ಆಕೆ ಕಳೆದ 10 ವರ್ಷಗಳಲ್ಲಿ ಹಲವು ಬಾರಿ ಗರ್ಭಿಣಿಯಾಗಿದ್ದಾಳೆ. ಆಗ ಜಾಗೋ ಆಕೆಗೆ ಗರ್ಭಪಾತ ಮಾಡಿಸಿದ್ದ ಎಂದು ತನಿಖೆ ವೇಳೆ ಬಯಲಾಗಿದೆ. ಜಾಗೋ ನಡೆಸಿರುವ ಕೃತ್ಯಗಳು ಸಾಬೀತಾದರೆ 15 ವರ್ಷ ಕಾಲ ಜೈಲು ವಾಸ ಖಚಿತ ಎಂದು ಇಂಡೋನೇಷ್ಯಾದ ಕಾನೂನು ತಜ್ಞರು ಹೇಳುತ್ತಿದ್ದಾರೆ.

    ಹಗಲೆಲ್ಲಾ ಯುವತಿಯನ್ನು ಗುಹೆಯಲ್ಲಿರುವಂತೆ ಮಾಡಿದ್ದ ಜಾಗೋ ರಾತ್ರಿಯಾಗುತ್ತಿದ್ದಂತೆಯೇ ಅದರ ಪಕ್ಕದಲ್ಲೇ ಇದ್ದ ಗುಡಿಸಲಿಗೆ ಕರೆ ತಂದು ಆಕೆಯ ಜೊತೆ ಸೆಕ್ಸ್ ಮಾಡುತ್ತಿದ್ದ ಎಂಬ ವಿಚಾರವನ್ನೂ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಬಂಧಿತನ ವಿಚಾರಣೆ ವೇಳೆ 2008ರಿಂದ ತಾನು ಯುವತಿ ಜೊತೆ ಸೆಕ್ಸ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    ಯುವತಿ ಮಂತ್ರವಾದಿಯ ಸಂಬಂಧಿ..!
    ಇನ್ನೂ ಅಚ್ಚರಿಯ ವಿಚಾರವೆಂದರೆ ಮಂತ್ರವಾದಿ ಜಾಗೋನ ಪುತ್ರ ಈ ಯುವತಿಯ ಸೋದರಿಯನ್ನು ಮದುವೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆಗೂ ಈ ಪ್ರಕರಣದಲ್ಲಿ ಏನಾದರೂ ಸಂಬಂಧವಿದೆಯೇ ಎಂದೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ನಡೆದ ಗ್ರಾಮದಲ್ಲಿ ಈ ವ್ಯಕ್ತಿ ಭಾರೀ ಗೌರವಯುತ ವ್ಯಕ್ತಿಯಾಗಿದ್ದ. ಆದರೆ ಈ ಪ್ರಕರಣ ಬೆಳಕಿಗೆ ಬಂದ ನಂತರ ಈ ರೀತಿಯ ಇನ್ನೂ ಯಾವುದಾದರೂ ಪ್ರಕರಣ ನಡೆದಿರಬಹುದೇ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಯುವತಿಯ ಸೋದರಿಯೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಈ ವಿವರ ಇಟ್ಟುಕೊಂಡೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಯುವತಿಗಾಗಿ ಹುಡುಕಾಟ ಆರಂಭಿಸಿದ್ದರು.

    15 ವರ್ಷಗಳಿಂದ ಯುವತಿ ಗುಹೆಯಲ್ಲೇ ವಾಸ ಮಾಡಿದ್ದರಿಂದ ಈಗ ಜನರ ಜೊತೆ ಬೆರೆಯಲು ಹಿಂದೆ ಮುಂದೆ ನೋಡುತ್ತಿದ್ದಾಳೆ. ಆಲ್ಲದೆ ಜನರನ್ನು ಕಂಡ ತಕ್ಷಣ ನಾನು ಗುಹೆಗೆ ವಾಪಸ್ ಹೋಗುತ್ತೇನೆ. ಜನರನ್ನು ನೋಡಿದರೆ ನನಗೆ ಭಯವಾಗುತ್ತದೆ ಎಂದು ಹೇಳುತ್ತಿದ್ದಾಳೆ. ಗುಹೆಯಲ್ಲಿ ಯುವತಿ ಪತ್ತೆಯಾದ ಬಳಿಕ ಜನರು ತಂಡೋಪತಂಡವಾಗಿ ಗುಹೆಯ ಬಳಿ ಆಗಮಿಸುತ್ತಿದ್ದು, ಇದೊಂದು ಪಿಕ್ನಿಕ್ ಸ್ಪಾಟ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಟೇಕಾಫ್ ವೇಳೆ ಜೋಕ್‍ಗೆ ಹೆದರಿ ತುರ್ತು ದ್ವಾರ ಒಡೆದು ಹಾರಿದ್ರು ಪ್ರಯಾಣಿಕರು!

    ಟೇಕಾಫ್ ವೇಳೆ ಜೋಕ್‍ಗೆ ಹೆದರಿ ತುರ್ತು ದ್ವಾರ ಒಡೆದು ಹಾರಿದ್ರು ಪ್ರಯಾಣಿಕರು!

    ಜಕಾರ್ತ: ಟೇಕಾಫ್‍ಗೆ ವೇಳೆ ಬಾಂಬ್ ಇದೆ ಎಂದು ತಿಳಿದು ವಿಮಾನದಿಂದ ಹಾರಿ 10 ಮಂದಿ ಗಾಯಗೊಂಡ ಘಟನೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಇಂಡೋನೇಷ್ಯಾ ಲಯನ್ ಏರ್ ಲೈನ್ಸ್ ಗೆ ಸೇರಿದ್ದ ಬೋಯಿಂಗ್ 737 ವಿಮಾನ, ಇನ್ನೆನೂ ಕೆಲವೇ ಕ್ಷಣಗಳಲ್ಲಿ ಟೆಕಾಫ್‍ಗೆ ಸಿದ್ಧಗೊಂಡಿತ್ತು. ವಿಮಾನದಲ್ಲಿ ಸಹಪ್ರಯಾಣಿಕ ಹೇಳಿದ `ಬಾಂಬ್‍ಜೋಕ್’ ಅನ್ನು ಗಂಭೀರವಾಗಿ ತೆಗೆದುಕೊಂಡ ಪ್ರಯಾಣಿಕರು ವಿಮಾನದ ತುರ್ತು ದ್ವಾರವನ್ನು ಒಡೆದು ಕೆಳಕ್ಕೆ ಹಾರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಘಟನೆಯ ಕುರಿತು ಅಧಿಕಾರಿಗಳು ವಿಮಾನವನ್ನು ಪರಿಶೀಲಿಸಿದ್ದು, ವಿಮಾನದಲ್ಲಿ ಯಾವುದೇ ಬಾಂಬ್ ಹಾಗೂ ಸ್ಫೋಟಕಗಳು ದೊರೆತಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಬಾಂಬ್ ಇದೆ ಎಂದು ಜೋಕ್ ಮಾಡಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಣ ಉಳಿಸಿಕೊಳ್ಳುವ ಬರದಲ್ಲಿ ಪ್ರಯಾಣಿಕರು ಮೇಲಿಂದ ಹಾರಿದ್ದರಿಂದ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಯಾಣಿಕರು ವಿಮಾನದಲ್ಲಿ ಬಾಂಬ್ ಇದೆ ಹೇಳಿದರೂ ಕೂಡಲೇ ನಾನು ವಿಮಾನದ ತುರ್ತು ನಿರ್ಗಮದ ಮೂಲಕ ಹೊರಗೆ ಹೋಗುವಂತೆ ಸೂಚಿಸಿದೆ ಎಂದು ವಿಮಾನದ ಕ್ಯಾಪ್ಟನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

    ಈ ಘಟನೆಯಿಂದಾಗಿ ವಿಮಾನ ಹಾರಾಟ ವಿಳಂಬವಾಗಿದ್ದು, ಇದನ್ನು ಜೋಕ್ ಆಗಿ ತಿಳಿಯದೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತು ದ್ವಾರಗಳನ್ನು ತೆಗೆಯುವಂತೆ ತಿಳಿಸಿದ್ದೇವೆ ಎಂದು ಲಯನ್ ಸಂಸ್ಥೆಯ ಸಿಬ್ಬಂದಿ ಹೇಳಿಕೆ ನೀಡಿದ್ದಾರೆ.

    https://youtu.be/Bjcoq4-oGAE

  • ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಜಕಾರ್ತ: ಸತ್ತ ವ್ಯಕ್ತಿಗಳ ಶವವನ್ನು ಸಮಾಧಿಯಿಂದ ಹೊರ ತೆಗೆದು ಅದನ್ನು ಅಲಂಕರಿಸಿ ಮೆರವಣಿಗೆ ಮಾಡುವ ವಿಚಿತ್ರ ಆಚರಣೆಯನ್ನು ಇಂಡೋನೇಷ್ಯಾದಲ್ಲಿದೆ.

    ಇಂಡೋನೇಷ್ಯಾದ ದಕ್ಷಿಣ ಸುಲವೇಸಿಯಾ ಎಂಬಲ್ಲಿಯ ಗುಡ್ಡಗಾಡು ಜನಾಂಗದವರು `ತೋರ್ಜಾ’ ಎಂಬ ವಿಚಿತ್ರವಾದ ಆಚರಣೆ ಮಾಡ್ತಾರೆ. ಈ ಆಚರಣೆಯಲ್ಲಿ ತಮ್ಮ ಪೂರ್ವಜರ ದೇಹಗಳನ್ನು ಹೊರ ತೆಗೆಯುತ್ತಾರೆ. ಹೊರ ತೆಗೆದ ಶವಗಳನ್ನು ಮನೆಗೆ ತಂದು ಅಲಂಲಕರಿಸಲಾಗುತ್ತದೆ. ಅಲಂಕೃತಗೊಂಡ ಶವಗಳನ್ನು ಊರ ತುಂಬೆಲ್ಲಾ ನಡೆಸುತ್ತಾರೆ. ಕೊನೆಗೆ ಸ್ಮಶಾನಕ್ಕೆ ತೆರಳಿ ಅವುಗಳಿದ್ದ ಜಾಗದಲ್ಲಿ ಮತ್ತೆ ಹೂಳುತ್ತಾರೆ.

    ಗ್ರಾಮದ ಪ್ರತಿಯೊಬ್ಬರು ಸತ್ತ ದೇಹಗಳನ್ನು ಅಲಂಕರಿಸಿ, ಶವಪೆಟ್ಟಿಗೆಯಲ್ಲಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮನೆಯ ಕೋಣೆಯೊಂದರಲ್ಲಿ ತಮ್ಮ ಪೂರ್ವಜರ ಶವಗಳನ್ನು ಇಟ್ಟುಕೊಳ್ಳುತ್ತಿದ್ದಾರೆ.