Tag: ಜಂಬೂಸವಾರಿ

  • ಕಣ್ಮನ ತಣಿಸಿದ ದಸರಾ ವೈಭವ: ಅನಾವರಣವಾಯ್ತು ಕಲಾ ಶ್ರೀಮಂತಿಕೆ

    ಕಣ್ಮನ ತಣಿಸಿದ ದಸರಾ ವೈಭವ: ಅನಾವರಣವಾಯ್ತು ಕಲಾ ಶ್ರೀಮಂತಿಕೆ

    ಮೈಸೂರು: 407ನೇ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ವಿಜಯದಶಮಿಯ ದಿನವಾದ ಶನಿವಾರ ನಡೆದ ಜಂಬೂ ಸವಾರಿ ಮನಸೂರೆಗೊಂಡಿತು.

    ಅರಮನೆಯ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 2.15ಕ್ಕೆ ಶುಭಮಕರ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯ ಮುಖ್ಯದ್ವಾರದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಸಂಜೆ 4.45ಕ್ಕೆ ಸಿದ್ದರಾಮಯ್ಯ ಚಿನ್ನದ ಅಂಬಾರಿಯಲ್ಲಿ ಕುಳಿತಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು. ಈ ವೇಳೆ ಯುವರಾಜ ಯದುವೀರ್, ಮೇಯರ್ ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ, ಜಿಲ್ಲಾಧಿಕಾರಿ ಡಿ. ರಂದೀಪ್, ಸಂಸದ ಪ್ರತಾಪ್ ಸಿಂಹ ಶಾಸಕರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

    ನಗರ ಸಶಸ್ತ್ರ ಪಡೆಯ ಪೊಲೀಸರು 21 ಕುಶಾಲತೋಪುಗಳನ್ನು ಹಾರಿಸಿದರು. ಸಂಜೆ 5 ಗಂಟೆ ಹೊತ್ತಿಗೆ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆ ಹಾಕತೊಡಗಿದ. ಅರ್ಜುನನಿಗೆ ಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಸಾಥ್ ನೀಡಿದರು. ಅರಮನೆ ಆವರಣದಲ್ಲಿ ಸ್ವಲ್ಪ ದೂರ ಸಾಗಿದ ವೇಳೆ ಅಶ್ವದಳದ ಕುದುರೆಯೊಂದು ಬೆದರಿ, ಆನೆ ವಿಜಯಗೆ ಡಿಕ್ಕಿ ಹೊಡೆಯಿತು. ಇದರಿಂದ ಗಲಿಬಿಲಿಗೊಂಡ ವಿಜಯಾ ಅಂಬಾರಿ ಸಾರಥಿ ಅರ್ಜುನನನ್ನು ತಳ್ಳಿತು. ಈ ವೇಳೆ, ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಕುಮ್ಕಿ ವಿಜಯಾ ಆನೆಯನ್ನು ಮಾವುತ ತಹಬದಿಗೆ ತಂದರು.

    https://youtu.be/I05j3rIJEqk

     

    ನಂತರ ಬಲರಾಂ ಗೇಟ್ ಮುಖಾಂತರ ಹೊರಗೆ ಬಂದ ಜಂಬೂ ಸವಾರಿ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆರ್ಯುವೇದಿಕ ಆಸ್ಪತ್ರೆ ವೃತ್ತ, ಆರ್‍ಎಂಸಿ ಬಸ್ ನಿಲ್ದಾಣ, ಬಂಬೂ ಬಜಾರ್ ರಸ್ತೆ, ನೆಲ್ಸನ್ ಮಂಡೇಲಾ ರಸ್ತೆ ಮೂಲಕ ಬನ್ನಿಮಂಟಪದಲ್ಲಿ ಅಂತ್ಯವಾಯಿತು.

    ಸುಮಾರು ಐದೂವರೆ ಕಿ.ಮೀ.ನಲ್ಲಿ ಗಾಂಭೀರ್ಯದಿಂದ ಸಾಗಿದ ಜಂಬೂ ಸವಾರಿಯನ್ನು ರಸ್ತೆ ಇಕ್ಕೆಲಗಳಲ್ಲಿ ಉದ್ದಕ್ಕೂ ಜನ ಕಿಕ್ಕಿರಿದು ಸೇರಿ ದೇವಿಯ ದರ್ಶನ ಪಡೆದರು. ಸಯ್ಯಾಜಿ ರಾವ್ ರಸ್ತೆಗೆ ಸಿಮೆಂಟ್ ರಸ್ತೆ ಇದ್ದ ಕಾರಣ ಅರ್ಜುನ ಕೊಂಚ ಬಳಲಿದಂತೆ ಕಂಡು ಬಂದ ಆಮೇಲೆ 2 ಗಂಟೆ ಸಾಗಿ ಬನ್ನಿಮಂಟಪ ತಲುಪಿದ.

    ಅರಮನೆಯ ವಾದ್ಯವೃಂದ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೋಲಿಸ್ ಬ್ಯಾಂಡ್‍ಗಳ ಸಂಗೀತ, ಪೂಜಾಕುಣಿತ, ಕರಡಿ ಮಜಲು, ನಂದಿಕೋಲು, ಮರಗಾಲು, ಹುಲಿವೇಷಧಾರಿಗಳೂ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ದಸರಾ ಜಂಬೂಸವಾರಿ ಮೆರವಣಿಗೆಗೆ ಮೆರಗು ತಂದಿದ್ದವು.

    ರಾಜ್ಯದ ಕಲಾ ತಂಡಗಳಲ್ಲದೆ, ಪಂಜಾಬ್, ತೆಲಂಗಾಣ, ಒಡಿಸ್ಸಾ, ಡಾರ್ಜಲಿಂಗ್, ಉತ್ತರ ಪ್ರದೇಶ, ಹರಿಯಾಣ ರಾಜ್ಯಗಳ ಸುಮಾರು 40 ತಂಡಗಳು ಜಂಬೂ ಸವಾರಿಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ವೀರರಾಣಿ ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ದಾರ್ಶನಿಕರ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

    ಮೆರವಣಿಗೆಯಲ್ಲಿ ಕೆಎಸ್‍ಆರ್‍ಪಿ,ಅಂಡ್ ಗೈಡ್ಸ್, ಸೇವಾ ದಳ, ಮಹಿಳಾ ಪೊಲೀಸ್, ರಿಸರ್ವ್ ಪೊಲೀಸ್, ಅಗ್ನಿಶಾಮಕ ಸೇವೆ, ಮೌಂಟ್ ಬಿಟಾಲಿಯನ್, ಕರ್ನಾಟಕ ಪೊಲೀಸ್ ಬ್ಯಾಂಡ್, ಸ್ಕೌಟ್ಸ್ ರಿದಂತೆ ಅರಮನೆಯ ವಾದ್ಯವೃಂದ, ಪಿರಂಗಿ ಗಾಡಿಗಳು, ವಿಶೇಷ ವೇಷಧಾರಿಗಳ ತಂಡ, ಅಲೆಮಾರಿಗಳ ತಂಡ ಸೇರಿದಂತೆ 30 ತಂಡಗಳು ಪಾಲ್ಗೊಂಡಿದ್ದವು

    .

     

     

     

     

     

     

     

     

     

  • ಜಂಬೂ ಸವಾರಿ ವೇಳೆ ಭಯಗೊಂಡ ವಿಜಯಾ ಆನೆ: ವಿಡಿಯೋ ನೋಡಿ

    ಜಂಬೂ ಸವಾರಿ ವೇಳೆ ಭಯಗೊಂಡ ವಿಜಯಾ ಆನೆ: ವಿಡಿಯೋ ನೋಡಿ

    ಮೈಸೂರು: ಜಂಬೂ ಸವಾರಿ ವೇಳೆ ವಿಜಯಾ ಆನೆ ಭಯಗೊಂಡ ಘಟನೆ ನಡೆದಿದೆ.

    ಜಂಬೂಸವಾರಿ ಸಾಗುತ್ತಿದ್ದ ವೇಳೆ ಪೊಲೀಸ್ ಕುದುರೆಗಳ ನೋಡಿ ವಿಜಯಾ ಆನೆ ಭಯಗೊಂಡು ಗಲಿಬಿಲಿಯಾಗಿತ್ತು. ಕೂಡಲೇ ಮಾವುತ ವಿಜಯಾ ಆನೆಯನ್ನು ನಿಯಂತ್ರಿಸಿದರು.

    ಸಂಪುಟ ಸಹೋದ್ಯೋಗಿಗಳ ಜತೆ ವೋಲ್ವೋ ಬಸ್‍ನಲ್ಲಿ ಬಂದ ಸಿಎಂ ಸಿದ್ದರಾಮಯ್ಯ, ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜ ಪೂಜೆ ಸಲ್ಲಿಸಿದರು.  ನಂದಿಧ್ವಜ ಪೂಜೆಯ ಮೂಲಕ ವೈಭವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಕ್ಕಿತು.

    ಪೂಜೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಮುಂದಿನ ವರ್ಷವೂ ನಾನೇ ದಸರಾ ಪೂಜೆ ಮಾಡ್ತೇನೆ. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತೆ. ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

    https://youtu.be/I05j3rIJEqk

     

  • ಜಂಬೂ ಸವಾರಿ ಟಿಕೆಟ್: ಜಿಲ್ಲಾಧಿಕಾರಿ ಸಿಬ್ಬಂದಿ ಜೊತೆ ಜನ್ರ ಮಾತಿನ ಚಕಮಕಿ

    ಜಂಬೂ ಸವಾರಿ ಟಿಕೆಟ್: ಜಿಲ್ಲಾಧಿಕಾರಿ ಸಿಬ್ಬಂದಿ ಜೊತೆ ಜನ್ರ ಮಾತಿನ ಚಕಮಕಿ

    ಮೈಸೂರು: ಜಂಬೂಸವಾರಿ ವೀಕ್ಷಣೆಗೆಂದು ಟಿಕೆಟ್ ವಿತರಣೆ ವೇಳೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾಗಿದೆ.

    ದಸರಾ ವೀಕ್ಷಣೆಗೆ ವಿವಿಧ ಮುಖ ಬೆಲೆಯ ಟಿಕೆಟ್ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಕೌಂಟರ್ ತೆರೆಯಲಾಗಿದೆ. ಟಿಕೆಟ್ ಖರೀದಿಸಲು ಬಂದವರಿಗೆ ಸಿಬ್ಬಂದಿ ಕೆಲವು ನಿಬಂಧನೆಗಳನ್ನ ಹಾಕಿದ್ದರು. ಒಬ್ಬರಿಗೆ ಒಂದು ಟಿಕೆಟ್ ಎಂದು ಕಂಡೀಷನ್ ಹಾಕಿದಾಗ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

    ಕುಟುಂಬ ಸಮೇತ ನೋಡಬೇಕಾದ್ರೆ ಇಡೀ ಕುಟುಂಬವೇ ಬಂದು ಕ್ಯೂ ನಿಂತು ಟಿಕೆಟ್ ಖರೀದಿಸಬೇಕೆಂದು ಹಾಕಿದ ಷರತ್ತು ಅಸಮಾಧಾನಕ್ಕೆ ಕಾರಣವಾಗಿ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಸಿಬ್ಬಂದಿ ಕೌಂಟರ್ ಮುಚ್ಚಲು ಮುಂದಾದಾಗ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚಾಗಿ ಮಾತಿನ ಚಕಮಕಿಗೆ ಮುಂದಾದರು. ಇದೇ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರನ್ನ ಸಮಾಧಾನಪಡಿಸಿದರು.

    ಒಂದೇ ಟಿಕೆಟ್ ಯಾಕೆ?: ಜಂಬೂ ಸವಾರಿ ವೀಕ್ಷಿಸಲು ರಾಜ್ಯ ಅಲ್ಲದೇ ದೇಶ, ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಈ ವೇಳೆ ಒಬ್ಬರಿಗೆ ಜಾಸ್ತಿ ಟಿಕೆಟ್ ಕೊಟ್ಟರೆ ಅದನ್ನು ದುರ್ಬಳಕೆ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಕಾರಣ ಒಬ್ಬರಿಗೆ ಒಂದೇ ಟಿಕೆಟ್ ನೀಡಲಾಗುತ್ತದೆ.