Tag: ಛತ್ತೀಸಘಡ್

  • ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ನಾಗರಹಾವಿನ ಬಳಿ ಮಗುವನ್ನಿಟ್ಟು ಆಶೀರ್ವಾದಕ್ಕೆ ಮುಂದಾದ ದಂಪತಿ: ಹಾವು ಕಚ್ಚಿ ಮೃತಪಟ್ಟ 5 ತಿಂಗಳ ಕಂದಮ್ಮ

    ಸಾಂದರ್ಭಿಕ ಚಿತ್ರ

    ರಾಯ್ಪುರ: ಜೀವಂತ ನಾಗರಹಾವಿನ ಬಳಿ ಆಶೀರ್ವಾದಕ್ಕೆಂದು ತೆರಳಿ ತಮ್ಮ 5 ತಿಂಗಳ ಕಂದಮ್ಮನನ್ನು ದಂಪತಿ ಕಳೆದುಕೊಂಡ ಘಟನೆ ಛತ್ತೀಸಘಡದ ರಾಜಾನಂದ್‍ಗಾವ್ ಜಿಲ್ಲೆಯಲ್ಲಿ ನಡೆದಿದೆ.

    5 ತಿಂಗಳ ಮಗುವಿನ ಆರೋಗ್ಯದಲ್ಲಿ ಪದೇ ಪದೇ ಏರುಪೇರಾಗುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರು ಹತ್ತಿರದ ಹಾವಾಡಿಗನ ಬಳಿ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಈ ವೇಳೆ ಹಾವಾಡಿಗ ಬಿಲ್ಲು ರಾಮ್ ಮಾರ್ಕಮ್ ನಾಗ ದೇವನ ಆಚರಣೆ ಮಾಡಿದರೆ ನಿಮ್ಮ ಮಗುವಿನ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದ.

    ಹಾವಾಡಿಗನ ಮಾತಿನಂತೆ ಮಗುವಿನ ಪೋಷರು ನಾಗನಪೂಜೆಯನ್ನು ವಿಧಿವಿಧಾನವಾಗಿ ನೆರವೇರಿಸಿದ್ದಾರೆ. ಪೂಜೆ ವೇಳೆ ಹಾವಾಡಿಗ ತನ್ನ ಬಳಿಯಿದ್ದ ನಾಗರಹಾವಿನ ಬಳಿ ಮಗುವನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳುವಂತೆ ಸೂಚಿಸಿದ್ದಾನೆ. ಈತನ ಮಾತನ್ನು ನಂಬಿ ದಂಪತಿ ತಮ್ಮ 5 ತಿಂಗಳ ಮಗುವನ್ನು ನಾಗರಹಾವಿನ ತಲೆ ಬಳಿ ಇಟ್ಟಿದ್ದಾರೆ. ಮಗುವನ್ನು ನೋಡಿದ ಕೂಡಲೇ ನಾಗರಹಾವು ಕಚ್ಚಿದೆ. ಇದರಿಂದ ಗಾಭರಿಗೊಂಡ ಪೋಷಕರು ಹಾವಾಡಿಗನ ಬಳಿ ವಿಚಾರಿಸಿದಾಗ, ಇದು ಹಲ್ಲುಕಿತ್ತ ಹಾವು. ಮಗುವಿಗೆ ಏನು ತೊಂದರೆಯಾಗುವುದಿಲ್ಲವೆಂದು ಹೇಳಿ ಸಮಾಧಾನ ಮಾಡಿದ್ದಾನೆ.

    ಇದಾದ 2 ಗಂಟೆ ಬಳಿಕ ಮಗುವಿನ ಉಸಿರಾಟದಲ್ಲಿ ಏರುಪೇರು ಉಂಟಾಗಿದೆ. ಕೂಡಲೇ ಪೋಷಕರು ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ವ್ಯಾಪಿಸಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಮಗು ಕಳೆದುಕೊಂಡ ಸಿಟ್ಟಿನಿಂದ ಪೋಷಕರು ಹಾವಡಿಗ ಬಿಲ್ಲು ರಾಮ್ ಮಾರ್ಕಮ್ ನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

    ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸಿದ ಪ್ರಧಾನಿ ಮೋದಿ

    ರಾಯ್‍ಪುರ: ಛತ್ತೀಸಘಡ್ ರಾಜ್ಯದ ಬಿಜಾಪುರದಲ್ಲಿ ನಡೆದ ಕಾರ್ಯಕ್ರಮಮೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಡಕಟ್ಟು ಜನಾಂಗದ ಮಹಿಳೆಗೆ ಪಾದರಕ್ಷೆ ತೊಡಿಸುವ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇಲ್ಲಿನ ಅರಣ್ಯ ಪ್ರದೇಶದಲ್ಲಿ ಟೆಂಡು ಎಲೆಗಳ ಸಂಗ್ರಹಣೆಗಾಗಿ ಅಲೆಯುವ ಬುಡಕಟ್ಟು ಜನರಿಗಾಗಿ ರೂಪಿಸಿರುವ ‘ಚರಣ್ ಪಾದುಕಾ’ (ಪಾದರಕ್ಷೆ ವಿತರಣೆ) ಯೋಜನೆ ಅಡಿ ಪಾದರಕ್ಷೆ ವಿತರಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರಿಂದ ಸ್ಫೂರ್ತಿ ಪಡೆದುಕೊಳ್ಳಲು ಹಾಗೂ ಕೇಂದ್ರ ಸರ್ಕಾರ ನಿಮ್ಮದು ಎನ್ನುವ ವಿಶ್ವಾಸ ಮೂಡಿಸಲು ನಾನು ಇಲ್ಲಿಗೆ ಬಂದಿರುವೆ ಎಂದು ಹೇಳಿದರು.

    ಬಿಜಾಪುರಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯಾಗಿದ್ದು, ಇದು ಅವರ ನಾಲ್ಕನೇ ಭೇಟಿಯಾಗಿದೆ. ಮುಂದಿನ ವರ್ಷದಲ್ಲಿ ಛತ್ತೀಸಘಡ್ ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದೆ. ಛತ್ತೀಸಘಡ್ ಪ್ರವಾಸ ಕೈಗೊಂಡಿರುವ ಮೋದಿ, ಶನಿವಾರ ಬಿಜಾಪುರದಲ್ಲಿ ಆಯುಷ್ಮಾನ್ ಯೋಜನೆ ಅಡಿ ಪ್ರಧಾನ ಆರೋಗ್ಯ ಕೇಂದ್ರವನ್ನು ಹಾಗೂ ಬಿಜಾಪುರ, ನಾರಾಯಣಪುರ, ಬಸ್ತಾರ್, ಕಂಕರ್, ಕೊಂಡಗಾಂವ್, ಸುಕ್ಮಾ, ದಾಂತೇವಾಡ ಮೂಲಕ ಹಾದು ಹೋಗುವ ಬಾಸ್ಟರ್ ಇಂಟರ್‍ನೆಟ್ ಯೋಜನೆಯ ಮೊದಲ ಹಂತದ 40,000 ಕಿ.ಮೀ. ಉದ್ದದ ಫೈಬರ್ ಕೇಬಲ್ ಹಾಕುವ ಕಾಮಗಾರಿಯನ್ನು ಉದ್ಘಾಟಿಸಿದರು.

    ಗುಡುಮ್ ಮತ್ತು ಭಾನುಪ್ರತಾಪುರ ಮಧ್ಯದಲ್ಲಿ ಸಂಚರಿಸಲಿರುವ ಪ್ಯಾಸೆಂಜರ್ ರೈಲು ಹಾಗೂ ಹೊಸ ರೈಲು ಮಾರ್ಗಕ್ಕೆ ಚಾಲನೆ, ಬಿಜಾಪುರ ಸಮೀಪದ ಏಳು ಗ್ರಾಮದಲ್ಲಿ ಬ್ಯಾಂಕ್ ಶಾಖೆಗಳ ಉದ್ಘಾಟನೆ, 1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ ಮತ್ತು ಸೇತುವೆ ಕಾಮಗಾರಿಗೆ ಅಡಿಗಲ್ಲನ್ನು ಮೋದಿ ಹಾಕಿದರು.

    ಭಾರತ್ ಬಿಪಿಒ ಪ್ರಚಾರ್ ಯೋಜನೆ ಅಡಿ ಅಂತರ್ಜಾಲ ಸೌಲಭ್ಯ ಪಡೆದ ಅಭಿವೃದ್ಧಿ ಹೊಂದಿದ ಗ್ರಾಮೀಣ ಬಿಪಿಒಗಳಿಗೆ ಅವರು ಭೇಟಿ ನೀಡಿದರು.