Tag: ಛತ್ತಿಸ್‍ಗಢ

  • ಈಗಲೂ ಭಾರತದ ಈ ನಗರದಲ್ಲಿ ಆಟೋ, ಟ್ಯಾಕ್ಸಿ ಇಲ್ವೇ ಇಲ್ಲ – ಲಿಫ್ಟ್‌ನಲ್ಲೇ ಜೀವನ

    ಈಗಲೂ ಭಾರತದ ಈ ನಗರದಲ್ಲಿ ಆಟೋ, ಟ್ಯಾಕ್ಸಿ ಇಲ್ವೇ ಇಲ್ಲ – ಲಿಫ್ಟ್‌ನಲ್ಲೇ ಜೀವನ

    ಒಂದೆಡೆ ಭಾರತ (India) ಅಭಿವೃದ್ಧಿಯ ದಾಪುಗಾಲಿಡುತ್ತಾ ಸಾಗುತ್ತಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳನ್ನು ಹಿಂದಿಕ್ಕಿ 2038ರ ವೇಳೆಗೆ ವಿಶ್ವದ 2ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವ ನಿರೀಕ್ಷೆಯಿದೆ. ನಿರ್ಮಾಣಗೊಳ್ಳುತ್ತಿರುವ ಹೊಸ ಹೊಸ ಹೆದ್ದಾರಿಗಳು (National Highways) ದೇಶದ ಅಭಿವೃದ್ಧಿಯ ಪಥವನ್ನೇ ಬದಲಾಯಿಸುತ್ತಿವೆ. ಅತ್ಯಾಧುನಿಕ ರೈಲು, ಬಸ್‌ಗಳ ಸೇವೆಯನ್ನು (Train Bus Service) ನೀಡುತ್ತಾ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಇದು ಒಂದು ಮುಖವಾದ್ರೆ ಇಂದಿಗೂ ಆಟೋ ಟ್ಯಾಕ್ಸಿಗಳೇ ಇಲ್ಲದ ಊರು, ಬ್ಲ್ಯಾಕ್‌ ಅಂಡ್‌ ವೈಟ್‌ ಟಿವಿ ನೋಡಿಕೊಂಡು, ಮೊಬೈಲ್‌ ನೆಟ್‌ವರ್ಕ್‌ ಸಂಪರ್ಕವೇ ಇಲ್ಲದ ಊರುಗಳೂ ಇವೆ ಅಂದ್ರೆ ನೀವು ನಂಬಲೇಬೆಕು.

    ಹೌದು. ಭಾರತದ (India) ಈ ಹಳ್ಳಿಯಲ್ಲಿ ಇಂದಿಗೂ ಒಂದೇ ಒಂದು ಆಟೋ ಟ್ಯಾಕ್ಸಿ ಕೂಡ ಇಲ್ಲ. ಪರ್ವತ ದುರ್ಗಮ ಕಾಡು, ಪರ್ವತಗಳ ನಡುವೆ ನೆಲೆಗೊಂಡಿರುವ ಈ ಊರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಪ್ರಯತ್ನ ನಡೆದ ಹೊರತಾಗಿಯೂ ಅವು ವಿಫಲವಾದವು. ಬಳಿಕ ಜನರು ಈ ನಗರದಲ್ಲಿ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಿಂದ ಲಿಫ್ಟ್‌ ತೆಗೆದುಕೊಳ್ಳಲು ಶುರು ಮಾಡಿದ್ರು. ಈಗ ಅದೇ ಒಂದು ಸಂಪ್ರದಾಯದ ಆಗಿಬಿಟ್ಟಿದೆ. ಅಷ್ಟಕ್ಕೂ ಆ ನಗರ ಯಾವುದು? ಭಾರತದ ಯಾವ ರಾಜ್ಯದಲ್ಲಿದೆ? ಅಲ್ಲಿನ ಚಿತ್ರಣ ಹೇಗಿದೆ? ಎಂಬುದನ್ನು ತಿಳಿಯೋಣ…

    ಹೌದು.. ಈಗ ನಿಮಗೆ ಹೇಳ್ತಿರೋದು ದುರ್ಗಮ ಗುಡ್ಡಗಾಡು ಪ್ರದೇಶಗಳಲ್ಲಿರುವ ಛತ್ತಿಸ್‌ಗಢದ ಚಿರ್ಮಿರಿ ನಗರದ (Chhattisgarh’s Chirmiri City) ಬಗ್ಗೆ. ಕಲ್ಲಿದ್ದಲು ನಗರ, ಗಣಿನಾಡು ಎಂದೇ ಹೆಸರಾಗಿರುವ ಈ ನಗರ ಮತ್ತೊಂದು ವಿಶಿಷ್ಟ ಸಂಸ್ಕೃತಿಗೂ ಹೆಸರು ವಾಸಿಯಾಗಿದೆ. ಇಂದಿಗೂ ಕೂಡ ಈ ನಗರದಲ್ಲಿ ಒಂದೇ ಒಂದು ಆಟೋ, ಟಿಟಿ ಅಥವಾ ಟ್ಯಾಕ್ಸಿಯಾಗಲಿ ಹೊಂದಿಲ್ಲ. ಹಾಗಾಗಿ ಈ ಊರಿನ ಜನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಲಿಫ್ಟ್‌ ಪಡೆದೇ ಹೋಗಲು ಬಯಸುತ್ತಾರೆ.

    ಚಿರ್ಮಿರಿ 85 ಸಾವಿರ ಜನಸಂಖ್ಯೆ, 29 ಕಿಮೀಗಿಂತಲೂ ಕಡಿಮೆ ವಿಸ್ತೀರ್ಣ ಹೊಂದಿದೆ. ನಗರವು ಪೋಡಿ, ಹಲ್ಡಿ ಬಾರಿ, ಬಡಾ ಬಜಾರ್, ಡೊಮ್ನ್ ಹಿಲ್, ಗೆಹ್ಲಾಪಾನಿ ಮತ್ತು ಕೊರಿಯಾ ಕೊಲಿಯರಿಯಂತಹ ಪ್ರದೇಶಗಳನ್ನ ಒಳಗೊಂಡಿದ್ದು, ಒಂದೊಂದು ಊರುಗಳಿಗೆ ಕನಿಷ್ಠ 1 ರಿಂದ 7 ಕಿ.ಮೀ. ಅಂತರವಿದೆ. ಇಲ್ಲಿನ ದುರ್ಗಮ ಹಾದಿ, ದಟ್ಟ ಅರಣ್ಯದಿಂದ ಕೂಡಿದ ಭೌಗೋಳಿಕ ವಾತಾವರಣದಿಂದಾಗಿಯೇ ಸಾರಿಗೆ ಸೌಲಭ್ಯದಿಂದ ವಂಚಿತವಾಗಿದೆ. ಆಗಾಗ್ಗೆ ಕೆಲವೊಂದು ಗೂಡ್ಸ್‌ ಜೀಪ್‌ಗಳು ಈ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಚಲಿಸುತ್ತವೆ. ಅದೇ ಇಲ್ಲಿನ ಜನರಿಗೆ ಆಧಾರ.

    ಲಿಫ್ಟ್‌ ಪಡೆಯುವುದೇ ಅಭ್ಯಾಸ ಆಗೋಯ್ತು
    ಈ ಮೊದಲು ಈ ನಗರ ಅವಿಭಜಿತ ಮಧ್ಯಪ್ರದೇಶಕ್ಕೆ ಸೇರಿತ್ತು. ಕಪ್ಪು ವಜ್ರದ ನಗರ ಎಂದೇ ಕರೆಸಿಕೊಳ್ಳುವ ಈ ಊರಿಗೆ ಒಡಿಶಾ, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಿಂದಲೂ ಗಣಿ ಕೆಲಸಕ್ಕೆ ಬರುತ್ತಾರೆ. ಆರಂಭದಲ್ಲಿ ಬೆರಳೆಣಿಕೆ ಕಾರ್ಮಿಕರು ಸ್ಕೂಟರ್‌ಗಳನ್ನ ತರುತ್ತಿದ್ದರು. ಆದ್ರೆ ಇಲ್ಲಿನ ದುರ್ಗಮ ಹಾದಿಯಿಂದ ಸಂಚರಿಸೋದೂ ಕಷ್ಟವಾಗುತ್ತಿತ್ತು. ಕೆಲವು ಕೆಲವೇ ದಿನಗಳಲ್ಲಿ ಕೆಟ್ಟುಹೋಗುತ್ತಿದ್ದವು. ಹಾಗಾಗಿ ಅವರು ಈ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆವರೆಗೆ ಹಾದುಹೋಗುವವರಿಂದ ಲಿಫ್ಟ್‌ ತೆಗೆದುಕೊಳ್ಳಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ ಇದೇ ಒಂದು ಸಂಪ್ರದಾಯವಾಗಿ ಮಾರ್ಪಟ್ಟಿತು. ಇಂದಿಗೂ ರಸ್ತೆ ಬದಿಯಲ್ಲಿ ಯಾರಾದ್ರೂ ಕಾಯುತ್ತಿರುವುದು ಕಂಡರೆ ಕಾರು ಚಾಲಕರು ಅಥವಾ ಬೈಕ್‌ ಸವಾರರು, ಅಪರಿಚಿತರಾಗಿದ್ದರೂ ಇಲ್ಲಿನ ಜನರಿಗೆ ತಾವಾಗಿಯೇ ಲಿಫ್ಟ್‌ ಕೊಡುತ್ತಾರೆ ಅನ್ನೋದು ವಿಶೇಷ.

    ಪ್ರಯತ್ನಗಳೆಲ್ಲವೂ ಮಣ್ಣುಪಾಲು
    ಚಿರ್ಮಿರಿಯ ಭೌಗೋಳಿಕ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ. ಅದರಲ್ಲೂ ಈ ನಗರಕ್ಕೆ ಸೇರಿದ ಅತ್ಯಂತ ದಟ್ಟಾರಣ್ಯದ ಪ್ರದೇಶವೆಂದ್ರೆ ಹಲ್ದಿಬರಿ, ಇದು ಚಿರ್ಮಿರಿಯ ಪೋಡಿಯಿಂದ 3 ಕಿಮೀ ದೂರದಲ್ಲಿದೆ. ಇಲ್ಲಿಗೆ ಯಾವುದೇ ದಿಕ್ಕಿನಲ್ಲಿ ಬರಬೇಕಾದ್ರೂ ಅರ್ಧಗಂಟೆ ಕಾಡು ರಸ್ತೆಯಲ್ಲಿ ನಡೆದುಕೊಂಡು ಬರಬೇಕು.

    ಚಿರ್ಮಿತಿಯ ಮಾಜಿ ಮೇಯರ್‌ ದಮ್ರು ರೆಡ್ಡಿ ಈ ನಗರಕ್ಕೆ ಬಸ್‌ ಸೇವೆ ಕಲ್ಪಿಸಲು ಕೈಲಾದಷ್ಟು ಪ್ರಯತ್ನ ಮಾಡಿದ್ರು. ಆದ್ರೆ ಅದೂ ಕಾರ್ಯರೂಪಕ್ಕೆ ಬರಲಿಲ್ಲ. ಏಕೆಂದ್ರೆ ಇಲ್ಲಿನ ದುರ್ಗಮ ಹಾದಿ, ದಟ್ಟ ಕಾಡಿನ ರಸ್ತೆಯ ಕಾರಣದಿಂದಾಗಿ ಕೆಲ ಬಸ್‌ಗಳು ಕೆಟ್ಟು ಹೋಗುತ್ತಿದ್ದವು. ಅಷ್ಟೊತ್ತಿಗೆ ಸರ್ಕಾರ ಇಲ್ಲಿನ ಸಾರಿಗೆ ಸೌಲಭ್ಯಕ್ಕೆ ನೀಡಿದ್ದ 10 ವರ್ಷ ಟೆಂಡರ್‌ ಕೂಡ ಮುಗಿಯಿತು. ಇಳಿಜಾರು ಪ್ರದೇಶವಾದ್ದರಿಂದ ಇಲ್ಲಿಗೆ ಆಟೋ, ಟ್ಯಾಕ್ಸಿ ಸೌಲಭ್ಯಗಳೂ ಸಹ ಪ್ರಯೋಜನಕಾರಿಯಾಗಲಿಲ್ಲ. ಹೀಗಾಗಿ ಜನ ಇಲ್ಲಿ ಲಿಫ್ಟ್‌ ಸಂಸ್ಕೃತಿಗೆ ಹೊಂದಿಕೊಂಡಿದ್ದಾರೆ. ಇಂದಿಗೂ ಲಿಫ್ಟ್‌ ತೆಗೆದುಕೊಂಡು ಬಳಿಕ ಕಡಿದಾದದ ಹಾದಿಯಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದು. ಸರ್ಕಾರಕ್ಕೆ ಸದ್ಯ ಹೊಸ ಬಸ್‌ಗಳ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಲಾಗಿದೆ. ಇಂದಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

    29 ಕಿಮೀ ವಿಸ್ತೀರ್ಣ, 8 ವಿಭಿನ್ನ ದ್ವೀಪಗಳ ನಡುವಿನ ನಗರ
    ಕಪ್ಪುವಜ್ರದ ನಿಕ್ಷೇಪ ನಗರವಾದ ಚಿರ್ಮಿರಿ 29 ಕಿಮೀ ವಿಸ್ತೀರ್ಣ ಹೊಂದಿದ್ದು, 8 ವಿಭಿನ್ನ ದ್ವೀಪಗಳ ನಡುವೆ ನೆಲೆಗೊಂಡಿದೆ. ಈ ಊರಿಗೆ ಇನ್ನೂ ಆಟೋ, ಟ್ಯಾಕ್ಸಿ ತಲುಪದ ಕಾರಣ ಚಿರ್ಮಿರಿಯನ್ನು ಇಂದಿಗೂ ಆಟೋ, ಟ್ಯಾಕ್ಸಿಗಳಲ್ಲಿದ ʻಲಿಫ್ಟ್‌ʼ ಸಿಟಿ ಎಂದೇ ಕರೆಯುತ್ತಾರೆ. ಇನ್ಮುಂದಾದರೂ ಇಲ್ಲಿಗೆ ಸಾರಿಗೆ ಸೌಲಭ್ಯ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

  • ಬೆಟ್ಟಿಂಗ್ ಆಪ್ ಕೇಸ್‌ | `ಕೈʼ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

    ಬೆಟ್ಟಿಂಗ್ ಆಪ್ ಕೇಸ್‌ | `ಕೈʼ ನಾಯಕ ಭೂಪೇಶ್ ಬಘೇಲ್‌ ಮನೆ ಮೇಲೆ ಸಿಬಿಐ ದಾಳಿ

    ರಾಯ್ಪುರ್‌: ಮಹಾದೇವ್‌ ಬೆಟ್ಟಿಂಗ್‌ ಆಪ್‌ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಛತ್ತಿಸ್‌ಗಢದ ಮಾಜಿ ಸಿಎಂ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಭೂಪೇಶ್‌ ಬಘೇಲ್‌ (Bhupesh Baghel) ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳ (CBI) ಇಂದು ಬೆಳಗ್ಗೆ ದಾಳಿ ನಡೆಸಿದೆ.

    ಮೂಲಗಳ ಪ್ರಕಾರ, ಸಿಬಿಐ ಅಧಿಕಾರಿಗಳ ತಂಡ ರಾಯ್‌ಪುರ ಮತ್ತು ಭಿಲಾಯಿ ಎರಡೂ ಪ್ರದೇಶದಲ್ಲಿರುವ ಬಘೇಲ್‌ ನಿವಾಸದ ಮೇಲೆ ದಾಳಿನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಕಳೆದ ಮಾರ್ಚ್ 10 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ನಿವಾಸ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ನಿವಾಸ, ಸೇರಿ ದುರ್ಗ್ ಜಿಲ್ಲೆಯ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ನಡೆಸಿತ್ತು. ಇದನ್ನೂ ಓದಿ: Tumakuru | 19 ಸಾವಿರ ಗಡಿ ದಾಟಿದ ಕ್ವಿಂಟಲ್ ಕೊಬ್ಬರಿ ಧಾರಣೆ – ಸಾರ್ವಕಾಲಿಕ ದಾಖಲೆ

    508 ಕೋಟಿ ಲಂಚ:
    ಮಹದೇವ್‌ ಬೆಟ್ಟಿಂಗ್‌ ಆ್ಯಪ್ ಪ್ರವರ್ತಕರು (Mahadev Betting App Promoters) ಭೂಪೇಶ್‌ ಬಘೇಲ್‌ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಈ ಹಿಂದೆಯೇ ಹೇಳಿತ್ತು. ಈ ಹಿಂದೆ ದಾಳಿ ನಡೆಸಿದಾಗ 5.39 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಜೊತೆಗೆ ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್‌ ಖಾತೆಯನ್ನೂ ಜಪ್ತಿ ಮಾಡಿತ್ತು.

    ಇದೀಗ ಭೂಪೇಶ್‌ ಬಘೇಲ್‌ಗೆ ಸಂಬಂಧಿಸಿದ ಎರಡು ನಿವಾಸಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಶೋಧಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಬೆಟ್ಟಿಂಗ್‌ ಆ್ಯಪ್‌ನಿಂದ ಛತ್ತೀಸ್‌ಗಢ ಸಿಎಂಗೆ 508 ಕೋಟಿ ಲಂಚ

  • ಸೈಫ್‌ ಅಲಿ ಖಾನ್‌ ಚಾಕು ಇರಿತ ಕೇಸ್‌ – ಶಂಕಿತ ದಾಳಿಕೋರ ಅರೆಸ್ಟ್‌

    ಸೈಫ್‌ ಅಲಿ ಖಾನ್‌ ಚಾಕು ಇರಿತ ಕೇಸ್‌ – ಶಂಕಿತ ದಾಳಿಕೋರ ಅರೆಸ್ಟ್‌

    ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ (Saif Ali Khan) ಚಾಕು ಇರಿದ (Stabbing Case) ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ಶಂಕಿತ ದಾಳಿಕೋರನನ್ನ ಛತ್ತಿಸ್‌ಗಢದ ದುರ್ಗ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಶಂಕಿತ ದಾಳಿಕೋರನನ್ನು ಆಕಾಶ್‌ ಕೈಲಾಶ್‌ ಕನೋಜಿಯಾ (31) ಎಂದು ಗುರುತಿಸಲಾಗಿದೆ. ಮುಂಬೈ-ಹೌರಾ ಜ್ಞಾನೇಶ್ವರಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರಿಂದ (Mumbai Police) ಮಾಹಿತಿ ಪಡೆದಿದ್ದ ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಅಧಿಕಾರಿಗಳು ಆರೋಪಿಯನ್ನ ದುರ್ಗ್‌ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆತನ ಗುರುತು ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರು ಒಂದೆರಡು ಗಂಟೆಗಳಲ್ಲೇ ಛತ್ತಿಸ್‌ಗಢದ ದುರ್ಗ್‌ಗೆ ಭೇಟಿ ನೀಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಶಂಕಿತ ದಾಳಿಕೋರನನ್ನು ಬಂಧಿಸಿದ್ದು ಹೇಗೆ?
    ಮಧ್ಯಾಹ್ನ 2 ಗಂಟೆ ಸುಮಾರಿಗೆ ದುರ್ಗ್‌ ರೈಲು ನಿಲ್ದಾಣ ತಲುಪಿದ್ದ ಶಂಕಿತ ಜನರಲ್‌ ಕಂಪಾರ್ಟ್ಮೆಂಟ್‌ನಲ್ಲಿ ಕುಳಿತಿದ್ದ. ಆತನ ಬಳಿ ಯಾವುದೇ ಕಿಟ್‌ ಇರಲಿಲ್ಲ. ಆಕಾಶ್‌ ಕೈಲಾಶ್‌ನನ್ನ ನೋಡಿದ ಆರ್‌ಪಿಎಫ್ ಅನುಮಾನಗೊಂಡು ಕೆಳಗಿಳಿಸಿ, ವಿಚಾರಿಸಿದ್ದಾರೆ. ಮೊದಲು ನಾಗ್ಪುರಕ್ಕೆ ಹೋಗುವುದಾಗಿ ಹೇಳಿದ್ದ ಶಂಕಿತ, ವಿಚಾರಣೆ ವೇಳೆ ಬಿಲಾಸ್‌ಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದಾನೆ ಇದರಿಂದ ಅಧಿಕಾರಿಗಳ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಮೊದಲೇ ಶಂಕಿತನ ಫೋಟೋ, ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ ಹಾಗೂ ಖಚಿತ ಸ್ಥಳದ ಮಾಹಿತಿ ಪಡೆದಿದ್ದ ಆರ್‌ಪಿಎಫ್‌ ಆತನನ್ನ ಬಂಧಿಸಿದ್ದಾರೆ.

    ಸದ್ಯ ಮುಂಬೈ ಪೊಲೀಸರಿಗೆ ವಿಡಿಯೋ ಕರೆ ಮಾಡಿ ಶಂಕಿತನನ್ನ ಮುಂಬೈ ಪೊಲೀಸರೊಂದಿಗೆ ಮಾತನಾಡಿಸಿದ್ದಾರೆ. ಹೀಗಾಗಿ ಬಂಧಿತ ವ್ಯಕ್ತಿ ಘಟನೆಯಲ್ಲಿ ಭಾಗಿಯಾಗಿದ್ದಾನೋ ಇಲ್ಲವೋ ಅನ್ನೋದನ್ನ ಖಚಿತಪಡಿಸಿಕೊಳ್ಳಲು ಮುಂಬೈ ಪೊಲೀಸರ ತಂಡ ಛತ್ತಿಸ್‌ಗಢಕ್ಕೆ ಪ್ರಯಾಣ ಬೆಳೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ತನಿಖೆಗೆ 20ಕ್ಕೂ ಅಧಿಕ ತಂಡ ರಚನೆ:
    ಸೈಫ್ ಮನೆಯಿಂದ ಬಾಂದ್ರಾ ರೈಲ್ವೆ ನಿಲ್ದಾಣದವರೆಗೂ ಇರುವ ಹಲವು ಸಿಸಿಟಿವಿಗಳನ್ನು ಪರಿಶೀಲಿಸಿದ್ದ ಪೊಲೀಸರಿಗೆ ಆರೋಪಿ ಚಳ್ಳೆಹಣ್ಣು ತಿನ್ನಿಸಿದ್ದ. ಹಲವು ಬಾರಿ ಬಟ್ಟೆ ಬದಲಿಸಿ ತಲೆಮರಿಸಿಕೊಂಡಿದ್ದ. ಕೊನೆಯದ್ದಾಗಿ ಬಾಂದ್ರಾ ರೈಲ್ವೇ ನಿಲ್ದಾಣದ ಬಳಿ ಕಾಣಿಸಿಕೊಂಡಿದ್ದು, ಆತ ಮುಂಬೈನಿಂದ ಕಾಲ್ಕಿತ್ತಿರಬಹುದು ಎಂದು ಹೇಳಲಾಗುತ್ತಿತ್ತು. ಅದಕ್ಕಾಗಿ 20ಕ್ಕೂ ಅಧಿಕ ವಿಶೇಷ ತಂಡಗಳನ್ನು ರಚಿಸಲಾಗಿತ್ತು.

    ಇನ್ನೂ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಕರೀನಾ ಹಲವು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ದಾಳಿಕೋರ ಮನೆಯ ಒಳನುಗ್ಗಿದ ವೇಳೆ ಕಿರಿಯ ಮಗ ಜಹಾಂಗೀರ್ (ಜೆಹ್) ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡಿದ್ದ. ಇದನ್ನು ಮೊದಲು ಮನೆಯಲ್ಲಿ ಕೆಲಸ ಮಾಡುವ ಸಹಾಯಕಿ ಗುರುತಿಸಿದಳು. ಈ ವೇಳೆ, ಮಾತಿನ ಚಕಮಕಿ ನಡೆಯಿತು. ಇಬ್ಬರ ಗದ್ದಲದ ಬಳಿಕ ಎದ್ದು ಬಂದ ಸೈಫ್ ಮಹಿಳೆಯನ್ನು ರಕ್ಷಿಸಲು ಮಧ್ಯ ಪ್ರವೇಶಿಸಿದರು. ಈ ವೇಳೆ, ದಾಳಿಕೋರ ಸೈಫ್‌ಗೆ ಚಾಕು ಇರಿಯಲು ಆರಂಭಿಸಿದ. ನಾವು ಈ ಗದ್ದಲದ ನಡುವೆ ಮಕ್ಕಳನ್ನು ಸುರಕ್ಷಿತ ಕೊಠಡಿಗೆ ಕಳುಹಿಸಿದ್ದರು. ಕಾರು ಚಾಲಕ ಇಲ್ಲದ ಹಿನ್ನೆಲೆ ಸೈಫ್ ಅವರು ಮಗ ತೈಮೂರ್ ಜೊತೆಗೆ ಆಸ್ಪತ್ರೆ ಆಗಮಿಸಿದರು. ಆ ಸಂದರ್ಭದಲ್ಲಿ ಮನೆಯಲ್ಲಿ ತೆರೆದ ಸ್ಥಳದಲ್ಲಿ ಇರಿಸಲಾಗಿದ್ದ ಚಿನ್ನಾಭರಣಗಳನ್ನು ದಾಳಿಕೋರ ಮುಟ್ಟಲಿಲ್ಲ. ಹೀಗಾಗಿ ಕಳ್ಳತನದ ಉದ್ದೇಶ ಇತ್ತಾ? ಇಲ್ವಾ? ಎನ್ನುವ ಗೊಂದಲ ಇದೆ ಎಂದು ತಿಳಿಸಿದ್ದಾರೆ.

  • Chhattisgarh | ಭದ್ರತಾ ಸಿಬ್ಬಂದಿಯಿದ್ದ ವಾಹನ ಸ್ಫೋಟಿಸಿದ ನಕ್ಸಲರು – 9 ಮಂದಿ ದುರ್ಮರಣ

    Chhattisgarh | ಭದ್ರತಾ ಸಿಬ್ಬಂದಿಯಿದ್ದ ವಾಹನ ಸ್ಫೋಟಿಸಿದ ನಕ್ಸಲರು – 9 ಮಂದಿ ದುರ್ಮರಣ

    ರಾಯ್‌ಪುರ: ಭದ್ರತಾ ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು (Naxals) ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿ ಸ್ಫೋಟಿಸಿದ್ದಾರೆ (IED Blast). ಘಟನೆಯಲ್ಲಿ 8 ಮಂದಿ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಚಾಲಕ ಸೇರಿ 9 ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಛತ್ತೀಸ್‌ಗಢದ (Chhattisgarh) ಬಿಜಾಪುರ ಜಿಲ್ಲೆಯ ಬೇದ್ರೆ-ಕುತ್ರು ರಸ್ತೆಯಲ್ಲಿ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಿಬ್ಬಂದಿಯಿದ್ದ ವಾಹನವನ್ನು ನಕ್ಸಲರು ಐಇಡಿಯಿಂದ ಸ್ಫೋಟಿಸಿದ್ದಾರೆ.

    ಒಂದು ದಿನದ ಹಿಂದೆಯಷ್ಟೇ ಛತ್ತಿಸ್‌ಗಢದ ಬಸ್ತಾರ್‌ ಪ್ರದೇಶದಲ್ಲಿ ಭದ್ರತಾ ಪಡೆ (Security Personnel) ಹಾಗೂ ಮಾವೋವಾದಿಗಳ (Maoists) ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಮಾವೋವಾದಿಗಳು ಸಾವನ್ನಪ್ಪಿದರು. ಇದನ್ನೂ ಓದಿ: ಭದ್ರತಾ ಪಡೆ ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿ – ಓರ್ವ ಸಿಬ್ಬಂದಿ ಸಾವು 

    ನಾರಾಯಣಪುರ ಮತ್ತು ದಾಂತೇವಾಡ ಜಿಲ್ಲೆಗಳ ಗಡಿಯಲ್ಲಿರುವ ದಕ್ಷಿಣ ಅಬುಜ್‌ಮಾದ್‌ನ ಕಾಡಿನಲ್ಲಿ ಭದ್ರತಾ ಸಿಬ್ಬಂದಿ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿಯಾಗಿದ್ದಾರೆ. ಅಲ್ಲದೇ ಜಿಲ್ಲಾ ಮೀಸಲು ಗಾರ್ಡ್‌ನ (DRG) ಹೆಡ್ ಕಾನ್ಸ್‌ಟೇಬಲ್ ಸನ್ನು ಕರಮ್ ತೀವ್ರಗಾಯಗೊಂಡು ಸಾವನ್ನಪ್ಪಿದ್ದರು. ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭದ ವೇಳೆ ವಿದ್ಯಾರ್ಥಿಗಳಿಂದ ಗಾಳಿಯಲ್ಲಿ ಗುಂಡು – ಕೇಸ್‌ ದಾಖಲು

    ಗುಂಡಿನ ದಾಳಿ ಬಳಿಕ ನಾಲ್ವರು ಮಾವೋವಾದಿಗಳ ಮೃತದೇಹ ಮತ್ತು ಎಕೆ -47 ರೈಫಲ್ ಮತ್ತು ಸ್ವಯಂ ಲೋಡಿಂಗ್ ರೈಫಲ್ (SLR) ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಒಂದು ದಿನ ನಂತರ ನಕ್ಸಲರು ಪ್ರತಿದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ – ಇಬ್ಬರು CRPF ಸಿಬ್ಬಂದಿ ಸಾವು

    ರಾಯ್ಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟದಲ್ಲಿ ಇಬ್ಬರು ಸಿಆರ್‌ಪಿಎಫ್ (CRPF) ಸಿಬ್ಬಂದಿ ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ (Chhattisgarh) ಸುಕ್ಮಾ (Sukma) ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

    ಸುಕ್ಮಾ ಜಿಲ್ಲೆಯ ಸಿಲ್ಗರ್ ಮತ್ತು ತೆಕುಲಗುಡೆಮ್ ಗ್ರಾಮಗಳ ನಡುವೆ ನಕ್ಸಲರು ಐಇಡಿ ಅಳವಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ನೌಕಪಡೆಯಿಂದ ಭಾರತದ 22 ಮೀನುಗಾರರ ಅರೆಸ್ಟ್

    ಸಿಆರ್‌ಪಿಎಫ್‌ನ ಕೋಬ್ರಾ 201 ಬೆಟಾಲಿಯನ್‌ನ ಸಿಬ್ಬಂದಿ, ಸಿಲ್ಗರ್‌ನಿಂದ ಟೇಕುಲಗುಡೆಮ್ ಕ್ಯಾಂಪ್‌ಗಳಿಗೆ ಅದರ ರಸ್ತೆ ಉದ್ಘಾಟನೆಯ ಅಂಗವಾಗಿ ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ ಐಇಡಿ ಸ್ಫೋಟಗೊಂಡು ಘಟನೆ ನಡೆದಿದೆ. ಇದನ್ನೂ ಓದಿ: NEET ಪರೀಕ್ಷಾ ಅಕ್ರಮ ಕೇಸ್:‌ ʻಸಾಲ್ವರ್‌ ಗ್ಯಾಂಗ್‌ʼ ಕೆಲಸ ಏನಾಗಿತ್ತು? ಮಾಸ್ಟರ್‌ ಮೈಂಡ್‌ ಮಾಫಿಯಾಗೆ ಸಿಲುಕಿದ್ದು ಹೇಗೆ?

    ಘಟನೆಯಲ್ಲಿ ಮೃತಪಟ್ಟ ಸಿಬ್ಬಂದಿಯನ್ನು ಕೇರಳದ ತಿರುವನಂತಪುರದ ವಿಷ್ಣು ಆರ್ (35) ಮತ್ತು ಉತ್ತರ ಪ್ರದೇಶದ ಕಾನ್ಪುರದ ಶೈಲೇಂದ್ರ (29) ಎಂದು ಗುರುತಿಸಲಾಗಿದೆ. ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇಳಿವಯಸ್ಸಲ್ಲೂ ದೇವೇಗೌಡರಿಗೆ ಕೊಡಬಾರದ ನೋವು ಕೊಡ್ತಿದ್ದಾರೆ: ಹೆಚ್‍ಡಿಕೆ

  • Election Results: ಛತ್ತಿಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾವು ಏಣಿ ಆಟ

    Election Results: ಛತ್ತಿಸ್‌ಗಢದಲ್ಲಿ ಬಿಜೆಪಿ-ಕಾಂಗ್ರೆಸ್‌ ಹಾವು ಏಣಿ ಆಟ

    ರಾಯಪುರ: ಛತ್ತಿಸ್‌ಗಢದಲ್ಲಿ ಸದ್ಯ ಬಿಜೆಪಿ-ಕಾಂಗ್ರೆಸ್‌ (Congress, BJP) ನಡುವೆ ಹಾವು ಏಣಿ ಆಟ ಶುರುವಾಗಿದೆ. ಜಿದ್ದಾ ಜಿದ್ದಿ ಕಣದಲ್ಲಿ ಒಮ್ಮೆ ಬಿಜೆಪಿ, ಒಮ್ಮೆ ಕಾಂಗ್ರೆಸ್‌ ನಡುವೆ ಏರಿಳಿತ ಕಂಡುಬರುತ್ತಿದೆ.

    ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ. ಬೆಳಗ್ಗೆ 9:35ರ ವರೆಗೂ ಮುನ್ನಡೆ ಸಾಧಿಸಿದ್ದ ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ಇದ್ದಕ್ಕಿದ್ದಂತೆ ಒಂದೊಂದೇ ಸ್ಥಾನ ಇಳಿಕೆಯಾಗುತ್ತಿರುವುದು ಕಂಡುಬರುತ್ತಿದೆ.

    ಬೆಳಗ್ಗೆ 9:15ರ ವೇಳೆಗೆ ಛತ್ತಿಸ್‌ಗಢದಲ್ಲಿ (Chhattisgarh) ಬಿಜೆಪಿ 30, ಕಾಂಗೆಸ್ 49, ಇತರೇ 1 ಸ್ಥಾನಗಳಲ್ಲಿ, ಬೆಳಗ್ಗೆ 9:35ರ ವೇಳೆಗೆ ಬಿಜೆಪಿ 31, ಕಾಂಗೆಸ್ 59, ಇತರೇ 2 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. 10:05 ಗಂಟೆ ವೇಳೆಗೆ ಬಿಜೆಪಿ 42, ಕಾಂಗ್ರೆಸ್‌ 46 ಹಾಗೂ ಇತರೇ 2 ಸ್ಥಾನಕ್ಕೆ ಬಂದು ನಿಂತಿತ್ತು. ಆದ್ರೆ 10:06 ಗಂಟೆ ವೇಳೆಗೆ ಪುನಃ ಬಿಜೆಪಿ 45, ಕಾಂಗ್ರೆಸ್‌ 44, ಇತರೇ 1 ಸ್ಥಾನಕ್ಕೆ ಬಂದು ನಿಂತಿದೆ. ಸದ್ಯ ಛತ್ತಿಸ್‌ಗಡದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. ಪ್ರತಿ 5 ನಿಮಿಷಕ್ಕೆ ಫಲಿತಾಂಶ ಏರಿಳಿತ ಕಂಡುಬರುತ್ತಿದೆ.

    ಎಲ್ಲಿ ಎಷ್ಟು ಮ್ಯಾಜಿಕ್ ನಂಬರ್?
    ಮಧ್ಯಪ್ರದೇಶ: ಒಟ್ಟು ಸ್ಥಾನ- 230, ಸರಳ ಬಹುಮತಕ್ಕೆ-116, ರಾಜಸ್ಥಾನ: ಒಟ್ಟು ಸ್ಥಾನ- 199, ಸರಳ ಬಹುಮತಕ್ಕೆ-100, ಛತ್ತಿಸ್‌ಗಢ: ಒಟ್ಟು ಸ್ಥಾನ- 90, ಸರಳ ಬಹುಮತಕ್ಕೆ-46, ತೆಲಂಗಾಣ- ಒಟ್ಟು ಸ್ಥಾನ-119, ಸರಳ ಬಹುಮತಕ್ಕೆ-60.

  • ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

    ರಾಯ್ಪುರ: 18 ವರ್ಷದ ಮಗನನ್ನು ಕೊಂದು ಆತನ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಅಪಘಾತವಾಗಿ (Accident) ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ಛತ್ತಿಸ್‌ಗಢದ (Chattisgarh) ರಾಯ್‌ಗಢ (Raigarh) ಜಿಲ್ಲೆಯಲ್ಲಿ ನಡೆದಿದೆ.

    ಲೈಲುಂಗಾ (Lailunga) ಪೊಲೀಸ್ ಠಾಣಾ ವ್ಯಾಪ್ತಿಯ ಲೋಹದಪಾನಿ ಗ್ರಾಮದ ನಿವಾಸಿ ಕುಹ್ರು ಸಿಂಗರ್ ಅವರ ಪುತ್ರ ಟೆಕ್ಮಣಿ ಪೈಕಾರ ಅವರ ಮೃತದೇಹ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಪತ್ತೆಯಾಗಿದೆ ಎಂದು ಲೈಲುಂಗಾ ಉಪವಿಭಾಗಾಧಿಕಾರಿ ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳ ಪಟಾಕಿ ಕಾರ್ಖಾನೆ ಸ್ಫೋಟ ಪ್ರಕರಣ – ಮೂವರು ಅರೆಸ್ಟ್

    CRIME 2

    ಬೈಕ್ ಅಪಘಾತವಾಗಿ ಟೆಕ್ಮಾಣಿ ಸಾವನ್ನಪ್ಪಿದ್ದಾರೆ ಎಂದು ಮೃತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದರು. ಪ್ರಥಮ ಪಿಯುಸಿ ಓದುತ್ತಿದ್ದ ಟೆಕ್ಮಾಣಿ ಹಾಸ್ಟೆಲ್‌ನಿಂದ ಮನೆಗೆ ಬಂದಿದ್ದು, ಮತ್ತೆ ಬೈಕಿನಲ್ಲಿ ಹಿಂದಿರುಗಿದ್ದಾನೆ. ಬಳಿಕ ತಮ್ಮ ಮನೆಯ ಸಮೀಪವಿರುವ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮೃತನ ತಾಯಿ ಕರಮವತಿ ಪೈಕಾರ (40) ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ವರ ಕಪ್ಪಗಿದ್ದಾನೆ, ನನಗಿಂತ ತುಂಬಾ ವಯಸ್ಸಾಗಿದೆ- ಮಂಟಪದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಮೃತನ ಮರಣೋತ್ತರ ಪರೀಕ್ಷೆಯು ಆತನ ದೇಹದಲ್ಲಿ ಗಂಭೀರವಾದ ಗಾಯಗಳನ್ನು ಬಹಿರಂಗಪಡಿಸಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮೃತನ ಮನೆಯಲ್ಲಿ ತನಿಖೆ ನಡೆಸಿದಾಗ ಮನೆಯ ಅಲ್ಲಲ್ಲಿ ಹೊಸದಾಗಿ ಪೈಂಟ್‌ಗಳನ್ನು ಮಾಡಿಸಲಾಗಿತ್ತು. ಅಲ್ಲದೇ ಮನೆಯ ಅಂಗಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇದು ಮನುಷ್ಯನ ರಕ್ತ ಎಂದು ದೃಢಪಟ್ಟಿದೆ. ಇದನ್ನೂ ಓದಿ: ವಿವಾಹ ಸಮಾರಂಭದಲ್ಲಿ ವಧು-ವರರ ನಡುವೆ ವಿವಾದ- ವಿಷ ಕುಡಿದು ವರ ಸಾವು, ವಧು ಗಂಭೀರ

    ಈ ಕುರಿತು ಪೋಷಕರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ತನ್ನ ಮಗನಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲದೇ ಇದ್ದುದ್ದರಿಂದ ಹಾಸ್ಟೆಲ್‌ನಿಂದ ಮನೆಗೆ ಬಂದ ತಕ್ಷಣ ಆತನಿಗೆ ಹೊಡೆದಿದ್ದೇನೆ. ಇದರಿಂದ ಆತ ಮೃತಪಟ್ಟಿದ್ದು ಆತನ ಮೃತದೇಹ ಹಾಗೂ ಬೈಕನ್ನು ರಸ್ತೆ ಪಕ್ಕ ಇರಿಸಿ ಕೊಲೆಯನ್ನು ಮರೆಮಾಚುವ ಪ್ರಯತ್ನ ಮಾಡಿದ್ದೇವೆ ಎಂದು ಮೃತನ ತಂದೆ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪ್ರೇಯಸಿ ಮೇಲೆ ಅತ್ಯಾಚಾರ, ಖಾಸಗಿ ಅಂಗಕ್ಕೆ ಕಾರದಪುಡಿ ಹಾಕಿ ವಿಕೃತಿ – ಆರೋಪಿ ಅರೆಸ್ಟ್

    ಮಗನನ್ನು ಹತ್ಯೆಗೈದ ಪೋಷಕರನ್ನು ಬಂಧಿಸಿ ಕೊಲೆ, ಸಾಕ್ಷ್ಯ ನಾಶಪಡಿಸುವಿಕೆ ಮತ್ತು ಇತರ ಅಪರಾಧಗಳ ಆರೋಪವನ್ನು ಹೊರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ದೀಪಕ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ವಿಮಾನದಲ್ಲಿ ಬೀಡಿ ಸೇದಿದ ಪ್ರಯಾಣಿಕ – ಬೆಂಗ್ಳೂರಲ್ಲಿ ಇಳಿಯುತ್ತಿದ್ದಂತೆ ಪೊಲೀಸರಿಗೆ ಲಾಕ್‌

  • ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ – 11 ಮಂದಿ ಸಾವು

    ಛತ್ತಿಸ್‌ಗಢದಲ್ಲಿ ಎಸ್‌ಯುವಿ, ಟ್ರಕ್ ಮುಖಾಮುಖಿ ಡಿಕ್ಕಿ – 11 ಮಂದಿ ಸಾವು

    ರಾಯಪುರ: ಎಸ್‌ಯುವಿ (SUV) ಕಾರು ಟ್ರಕ್‌ವೊಂದಕ್ಕೆ (Truck) ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ 11 ಜನ ಸಾವನ್ನಪ್ಪಿರುವ ಘಟನೆ ಛತ್ತಿಸ್‌ಗಢದ (Chattisgarh) ಬಲೋದ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

    ಮೃತರು ಧಮತರಿ ಜಿಲ್ಲೆಯ ಸೋರಂ-ಭಟ್‌ಗಾಂವ್ ಗ್ರಾಮದ ನಿವಾಸಿಗಳಾಗಿದ್ದು, ಮದುವೆ ನಿಮಿತ್ತ ಕಂಕೇರ್ ಜಿಲ್ಲೆಯ ಮರ್ಕಟೋಲಾ ಗ್ರಾಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಜಾಗ್ತಾರಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಕಾರು ಟ್ರಕ್‌ವೊಂದಕ್ಕೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ ಎಂದು ಪುರೂರ್ ಪೊಲೀಸ್ ಠಾಣಾಧಿಕಾರಿ ಅರುಣ್ ಕುಮಾರ್ ಸಾಹು ತಿಳಿಸಿದ್ದಾರೆ. ಇದನ್ನೂ ಓದಿ: 12ನೇ ತರಗತಿ ಓದಿ ದಿನಕ್ಕೆ 10 ಕೋಟಿ ಸಂಪಾದನೆ – ಸೈಬರ್ ಕಿರಾತಕರು ಅಂದರ್

    ಘಟನೆ ಬಳಿಕ ಟ್ರಕ್ ಚಾಲಕ ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಎಸ್‌ಯುವಿ ಕಾರ್‌ನಲ್ಲಿದ್ದ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಮಗು ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಕೇಂದ್ರದ ಮಾಜಿ ನೌಕರನ ಮನೆ ಮೇಲೆ ಸಿಬಿಐ ದಾಳಿ – 20 ಕೋಟಿ ವಶ

    ವಾಹನ ಬಿಟ್ಟು ಪರಾರಿಯಾಗಿರುವ ಟ್ರಕ್ ಚಾಲಕನ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಈ ಘಟನೆಗೆ ಛತ್ತಿಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel) ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ಅರ್ಚಕ ನೇಣುಬಿಗಿದು ಆತ್ಮಹತ್ಯೆ – ಸಾಯುವ ಮೊದಲು ಫೇಸ್‌ಬುಕ್ ಲೈವ್

  • BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    BJP ನಾಯಕರ ಹೆಣ್ಮಕ್ಕಳು ಮುಸ್ಲಿಮರನ್ನು ಮದ್ವೆ ಆದ್ರೆ ಪ್ರೀತಿ ಅಂತಾರೆ, ಬೇರೆಯವರಾದ್ರೆ ಜಿಹಾದ್: ಛತ್ತೀಸ್‍ಗಢ ಸಿಎಂ

    ರಾಯ್ಪುರ: ಬಿಜೆಪಿ (BJP) ನಾಯಕರ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾದಾಗ ಅದನ್ನು ಅವರು ಪ್ರೀತಿ ಎಂದು ಕರೆಯುತ್ತಾರೆ, ಆದರೆ ಬೇರೆ ಯಾರಾದರೂ ಹಾಗೆ ಮಾಡಿದರೇ ಅದನ್ನು ಜಿಹಾದ್ (Jihad) ಎಂದು ಕರೆಯುತ್ತಾರೆ ಎಂದು ಛತ್ತೀಸ್‍ಗಢದ (Chhattisgarh) ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಮಾತನಾಡುವುದಾದರೆ ಅವರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಇದು ಲವ್ ಜಿಹಾದ್ ವರ್ಗಕ್ಕೆ ಸೇರುವುದಿಲ್ಲವೇ? ಛತ್ತೀಸ್‍ಗಢದ ಬಿಜೆಪಿಯ ದೊಡ್ಡ ನಾಯಕನ ಮಗಳು ಎಲ್ಲಿ ಹೋದಳು ಎಂದು ಕೇಳುತ್ತೀರಿ. ಅದು ಲವ್ ಜಿಹಾದ್ ಅಲ್ಲವೇ? ಅವರ ಮಗಳು ಅದನ್ನು ಮಾಡಿದರೆ ಅದು ಪ್ರೀತಿ ಆದರೆ ಬೇರೆಯವರು ಅದನ್ನು ಮಾಡಿದಾಗ ಲವ್ ಜಿಹಾದ್ ಆಗುತ್ತದೆಯೇ ಎಂದು ಕಿಡಿಕಾರಿದರು.

    ಬಿಜೆಪಿ ದ್ವಿಗುಣ ನೀತಿಯನ್ನು ಹೊಂದಿದೆ. ಬೆಮೆತಾರಾ ಜಿಲ್ಲೆಯ ಬಿರಾನ್‍ಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರದ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚುನಾವಣೆ ವೇಳೆ ಶಾಂತಿ ಕದಡಲು VHP ಅಧ್ಯಕ್ಷನ ಮೇಲೆ ಫೈರಿಂಗ್: ಬೋಪಯ್ಯ

    ಕೆಲವು ಅಂತರ್‌ಧರ್ಮೀಯ ವಿವಾಹಗಳ ನಂತರ ಬಿರಾನ್‍ಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಈ ಘರ್ಷಣೆಯನ್ನು ಪರೀಶಿಲಿಸಿಲ್ಲ. ಜೊತೆಗೆ ಬಂದ್‍ಗೆ ಕರೆ ನೀಡುವ ಮೊದಲು ಯಾವುದೇ ವರದಿಯನ್ನು ನೀಡಲಿಲ್ಲ. ಇಬ್ಬರು ಮಕ್ಕಳ ನಡುವಿನ ಜಗಳ ಘರ್ಷಣೆಗೆ ಕಾರಣವಾಯಿತು. ಇದು ದುಃಖಕರವಾದ ಸಂಗತಿಯಾಗಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೆಲಿಪ್ಯಾಡ್ ಬಳಿ ಬೆಂಕಿ – ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ತಪ್ಪಿದ ಅನಾಹುತ

  • ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು

    ನನ್ನ ಪತ್ನಿಯನ್ನು ಹುಡುಕಿಕೊಡಿ- ಬೆಂಗಳೂರು ಪೊಲೀಸರಿಗೆ ಛತ್ತಿಸ್‌ಗಢ ವ್ಯಕ್ತಿ ದೂರು

    ಬೆಂಗಳೂರು: ತನ್ನ ಪತ್ನಿ ಕಿಡ್ನಾಪ್ (Kidnap) ಆಗಿದ್ದಾಳೆ. ಆಕೆಯನ್ನು ರಕ್ಷಣೆ ಮಾಡಿ ಹುಡುಕಿಕೊಡಿ ಎಂದು ಛತ್ತಿಸ್‌ಗಢದ (Chhattisgarh) ವ್ಯಕ್ತಿಯೋರ್ವ ಟ್ವಿಟ್ಟರ್‌ನಲ್ಲಿ (Twitter) ಬೆಂಗಳೂರು  ಪೊಲೀಸರನ್ನು ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

    ಛತ್ತಿಸ್‌ಗಢದ ಕುಂಟಾಲ್ ಬ್ಯಾನರ್ಜಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬೆಂಗಳೂರು (Bengaluru) ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ನನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿದ್ದಾನೆ. ಪತ್ನಿಯನ್ನು ರಕ್ಷಣೆ ಮಾಡಿ ಹುಡುಕಿಕೊಡಿ ಎಂದು ಆರೋಪಿ ಅವಿನಭಾ ಚರ್ಕವರ್ತಿಯ ಫೋಟೋದೊಂದಿಗೆ ಆತನ ಮೊಬೈಲ್ ನಂಬರನ್ನು ದೂರಿನಲ್ಲಿ ನೀಡಿದ್ದಾರೆ. ಇದನ್ನೂ ಓದಿ: ಕಿರುಚಿತ್ರ ತಯಾರಕರಿಗೆ ವೇದಿಕೆ ಕಲ್ಪಿಸಿದ ಖ್ಯಾತ ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ

    ಈ ದೂರಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Oscars- ‘ಆಸ್ಕರ್’ ವಿಜೇತರಿಗೆ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ