Tag: ಚೆಂಡೆ

  • ಮದುವೆಗೆ ಚೆಂಡೆ ಬಡಿಯುತ್ತ ಬಂದ ವಧು – ತಂದೆ, ಭಾವಿ ಪತಿಯಿಂದ ಸಾಥ್‌

    ಮದುವೆಗೆ ಚೆಂಡೆ ಬಡಿಯುತ್ತ ಬಂದ ವಧು – ತಂದೆ, ಭಾವಿ ಪತಿಯಿಂದ ಸಾಥ್‌

    ತಿರುವನಂತಪುರಂ: ವಧುವೊಬ್ಬಳು (Bride) ಸಕತ್‌ ಉತ್ಸಾಹದಿಂದ ಚೆಂಡೆ ಬಡಿಯುತ್ತಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

    ಕೇರಳದ (Kerala) ಗುರುವಾಯೂರು ದೇವಸ್ಥಾನದಲ್ಲಿ ನಡೆದ ಮದುವೆಯ (Marriage) ಸಂಭ್ರಮಕ್ಕೆ ಹತ್ತಾರು ಜನ ಸಾಕ್ಷಿಯಾಗಿದ್ದಾರೆ. ವಧುವಿನ ಅಪ್ಪ – ಅಮ್ಮ ಕುಟುಂಬಸ್ಥರು ಮಗಳ ಮದುವೆ ಎನ್ನುವ ಸಂತಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಶಾಸ್ತ್ರೋಕ್ತಗಳಲ್ಲಿ ಭಾಗಿಯಾಗಬೇಕಾದ ವಧು ಶಿಲ್ಪಾ, ಮಂಟಪಕ್ಕೆ ಬರುವ ವೇಳೆ ಚೆಂಡೆ ತಂಡದೊಂದಿಗೆ ಚೆಂಡೆಯನ್ನು ಬಡಿಯುತ್ತಾ, ಖುಷಿ ಖುಷಿಯಲ್ಲಿ ಚೆಂಡೆ ತಂಡದ ಸದಸ್ಯರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.

     ಈ ವೇಳೆ ಇದರೊಂದಿಗೆ ವರ (Groom) ಹಾಗೂ ಚೆಂಡೆ ಮಾಸ್ಟರ್ ಆದ ವಧುವಿನ ತಂದೆಯೂ (Father) ಸಾಥ್‌ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ?: ವಧು ಚೆಂಡೆಯನ್ನು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ಚೆಂಡೆ ವಾದಕರ ಗುಂಪು ಸಂತೋಷದಿಂದ ವಧುವಿಗೆ ಸಾಥ್‌ ನೀಡಿದ್ದಾರೆ. ಕೊನೆಯಲ್ಲಿ ವಧುವಿನ ತಂದೆಯೂ ಚೆಂಡೆ ವಾದಕರೊಂದಿಗೆ ಸೇರಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವರ ಕೂಡ ಭಾಗವಹಿಸುತ್ತಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಮಾಜಿ ಕೇಂದ್ರ ಸಚಿವ

    ವಧು ಶಿಲ್ಪಾ ಅವರು ಚೆಂಡೆ ವಾದನದ ಅನುಭವಿ ಕಲಾವಿದೆ. ಹಲವಾರು ಚೆಂಡೆ ವಾದನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದವರು ಎಂದು ಮೂಲಗಳು ತಿಳಿಸಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    Live Tv
    [brid partner=56869869 player=32851 video=960834 autoplay=true]

  • ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ

    ಚೆಂಡೆ ಬಾರಿಸಿದ ಮಮತಾ ಬ್ಯಾನರ್ಜಿ

    ಚೆನ್ನೈ: ಕೋಲ್ಕತ್ತಾ ರಾಜ್ಯಪಾಲ ಲಾ ಗಣೇಶನ್ ಅವರ ಮನೆಯಲ್ಲಿ ನಡೆದಿದ್ದ ಸಮಾರಂಭಕ್ಕೆ ಆಗಮಿಸಿದ್ದ ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಚೆಂಡೆ ಬಾರಿಸಿದರು.

    ತಮಿಳುನಾಡಿನ (Tamil Nadu) ಚೆನ್ನೈನಲ್ಲಿ (Chennai) ನಡೆದ ಈ ಕಾರ್ಯಕ್ರಮದಲ್ಲಿ ಚೆಂಡೆ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿಯವರು ಚಂಡೆಯನ್ನು ಬಾರಿಸಿದರು.

    ಮಮತಾ ಬ್ಯಾನರ್ಜಿ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲಲ್ಲ. ಕೋಲ್ಕತ್ತಾದಲ್ಲಿ ದುರ್ಗಾಪೂಜೆಯ ಆಚರಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು 95 ದುರ್ಗಾ ಪೂಜೆಗಳನ್ನು ಒಳಗೊಂಡಿರುವ ಭವ್ಯ ಕಾರ್ನೀವಲ್‍ನಲ್ಲಿ ಬುಡಕಟ್ಟು ನೃತ್ಯಗಾರರ ಗುಂಪಿನೊಂದಿಗೆ ಹೆಜ್ಜೆ ಹಾಕಿದ್ದರು. ಇದನ್ನೂ ಓದಿ: ಕೆಂಪುಕೋಟೆಯ ಮೇಲೆ ದಾಳಿ – ಲಷ್ಕರ್‌ ಉಗ್ರ ಅಶ್ಫಾಕ್ ಆರಿಫ್‌ ಗಲ್ಲು ಖಾಯಂ

    ಅದಾದ ಬಳಿಕ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದಂದು ಜಾನಪದ ಕಲಾವಿದರೊಂದಿಗೆ ಕೈ ಕೈ ಹಿಡಿದು ನೃತ್ಯ ಮಾಡಿದ್ದರು. ಇದನ್ನೂ ಓದಿ: ನನ್ನ ಮಗನನ್ನು ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ನೀಡುತ್ತೇವೆ: ರೇಣುಕಾಚಾರ್ಯ

    Live Tv
    [brid partner=56869869 player=32851 video=960834 autoplay=true]