Tag: ಚುನಾವಣೆ 2019

  • ಬಿಗ್ ಬುಲೆಟಿನ್ | 20-07-2018

    ಬಿಗ್ ಬುಲೆಟಿನ್ | 20-07-2018

    https://www.youtube.com/watch?v=dZhL5fYMyyE

  • ಲೋಕಸಭಾ ಚುನಾವಣೆಗೆ ರಾಜ್ಯ ನಾಯಕರಿಗೆ ಮೋದಿ, ಶಾ ’23’ ಅಂಶಗಳ ಟಾಸ್ಕ್!

    ಲೋಕಸಭಾ ಚುನಾವಣೆಗೆ ರಾಜ್ಯ ನಾಯಕರಿಗೆ ಮೋದಿ, ಶಾ ’23’ ಅಂಶಗಳ ಟಾಸ್ಕ್!

    ಬೆಂಗಳೂರು: ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ರಚಿತವಾಗಿದ್ದರೆ ಇತ್ತ ಬಿಜೆಪಿ ಮಾತ್ರ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿದೆ. ಚುನಾವಣಾ ಪ್ರಚಾರದ ರೂಪುರೇಷಗಳು ಹೇಗಿರಬೇಕು ಎಂಬುದರ ಬಗ್ಗೆ ಹೈಕಮಾಂಡ್ ನಾಯಕರ ರಾಜ್ಯ ಬಿಜೆಪಿ ನಾಯಕರು ಸಮಾಲೋಚನೆ ನಡೆಸುತ್ತಿದ್ದಾರೆ.

    ಇದೇ ತಿಂಗಳ ಅಂತ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲ ನಾಯಕರೊಂದಿಗೆ ಚರ್ಚೆ ನಡೆಸಿ ಲೋಕಸಭಾ ಚುನಾವಣೆ ಸಿದ್ಧತೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ವಿಧಾನಸಭಾ ಚುನಾವಣೆ ವೇಳೆ ಅಮಿತ್ ಶಾ ರಾಜ್ಯ ನಾಯಕರಿಗೆ 19 ಅಂಶಗಳ ಟಾಸ್ಕ್ (ನಿಯಮ)ಗಳನ್ನು ನೀಡಿ, ಅವುಗಳನ್ನು ಕ್ರಮಬದ್ಧವಾಗಿ ಪಾಲಿಸುವಂತೆ ಅದೇಶಿಸಿದ್ದರು. ಈಗ ಅದೇ 19 ಟಾಸ್ಕ್ ಗಳಿಗೆ ಹೆಚ್ಚುವರಿಯಾಗಿ 4 ಟಾಸ್ಕ್ ಸೇರಿಸಿದ್ದಾರೆ. ಈ ಮೊದಲು 19 ಟಾಸ್ಕ್ ಗಳ ಪ್ರತಿಫಲ, ನಿರಂತರ ಸಭೆ, ಸಮಾವೇಶಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.

    2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕೆಂಬ ಗುರಿಯನ್ನು ಅಮಿತ್ ಶಾ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಅನುಸರಿಸಿದ 19 ಟಾಸ್ಕ್ ಗಳ ಜೊತೆಗೆ ಹೆಚ್ಚುವರಿಯಾಗಿ 4 ಟಾಸ್ಕ್ ನೀಡಿ ಒಟ್ಟು 23 ಅಂಶಗಳ ಸೂತ್ರಕ್ಕೆ ಪ್ಲಾನ್ ನಡೆದಿದೆ.

    ಅಮಿತ್ ಶಾ ರ 23 ಸೂತ್ರಗಳು ಏನು?
    1. ವಾರದಲ್ಲಿ ವಾಸ್ತವ್ಯ ಸಹಿತ ಎರಡು ದಿನ ಪ್ರವಾಸ.
    2. ಪ್ರತಿ ಮತಗಟ್ಟೆಗೆ ಶಕ್ತಿಕೇಂದ್ರದ ಪ್ರಮುಖರ ನೇಮಕ.
    3. ಮಂಡಳದ ವಿಸ್ತೃತ ಸಭೆ ನಡೆಸಲು ಸೂಚನೆ.
    4. ಶಕ್ತಿ ಕೇಂದ್ರದ ಪ್ರಮುಖರು ವಾರದಲ್ಲಿ ಎರಡು ದಿನ ಪ್ರವಾಸ ಕಡ್ಡಾಯ
    5. ಕಳೆದ ಎರಡು ಲೋಕಸಭೆ ಚುನಾವಣೆ ಆಧಾರದ ಮೇಲೆ ಮತಗಟ್ಟೆಗಳ ಎ, ಬಿ, ಸಿ ಎಂದು ವರ್ಗಿಕರಸಿಬೇಕು.

    6. ಮತಗಟ್ಟೆ ಸಶಕ್ತೀಕರಣ ಪೂರ್ಣಗೊಳಿಸಬೇಕು.
    7. ಎಸ್‍ಸಿ, ಎಸ್‍ಟಿ, ಓಬಿಸಿ ಸಮುದಾಯದ ಕನಿಷ್ಠ 10 ಮಂದಿಯನ್ನು ಹೊಸ ಸದಸ್ಯತ್ವ ಮಾಡಬೇಕು.
    8. ಸಹಕಾರಿ ನಿರ್ದೇಶಕರ ಮತ್ತು ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಸಿದ್ಧಪಡಿಸಬೇಕು.
    9. ಮಂದಿರ, ಮಠ, ಸಾಧು-ಸಂತರ ಪಟ್ಟಿ ಸಿದ್ದಪಡಿಸಿ ಚರ್ಚಿಸಬೇಕು.
    10. ಪಂಚಾಯಿತಿ ಚುನಾವಣೆ ಸೋತವರ ಪಟ್ಟಿ ಸಿದ್ಧಪಡಿಸಬೇಕು, ಪಕ್ಷಕ್ಕೆ ಸೇರ್ಪಡಿಸಿಕೊಳ್ಳಬೇಕು.

    11. ಸ್ಮಾರ್ಟ್ ಫೋನ್ ಇರುವವರ ಪಟ್ಟಿ ತಯಾರಿಸಬೇಕು.
    12. ಮೋಟರ್ ಬೈಕ್ ಇರುವವರ ಪಟ್ಟಿ ಸಿದ್ಧಪಡಿಸಬೇಕು.
    13. ಪ್ರತಿಮತಗಟ್ಟೆಯಲ್ಲಿ ಈ ಭಾರಿ ಬಿಜೆಪಿ ಸರ್ಕಾರ ಎಂಬ ಘೋಷಣೆಯುಳ್ಳ ಗೋಡೆಬರಹ 5 ಸ್ಥಳದಲ್ಲಿ ಬರೆಯಬೇಕು.
    14. ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರ ಪ್ರತಿನಿಧಿಸುವ ಕ್ಷೇತ್ರದ ಚಾರ್ಜ್ ಶೀಟ್ ತಯಾರಿಸಬೇಕು.
    15.ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 8-10 ಪ್ರಮುಖರ ಕೋರ್ ಕಮಿಟಿ ರಚನೆ.

    16. ಮತಗಟ್ಟೆಯ ಪ್ರತಿ ಬೂತ್ ಅಧ್ಯಕ್ಷರ ಮನೆ ಮೇಲೆ ಪಕ್ಷದ ಧ್ವಜಾರೋಹಣ.
    17. ನವಶಕ್ತಿ ಸಮಾವೇಶ ಕಡ್ಡಾಯವಾಗಿ ಆಯೋಜಿಸಬೇಕು.
    18. ಸಾಮಾಜಿಕ ಜಾಲತಾಣ ಕಾರ್ಯಾಗಾರ ನಡೆಸಬೇಕು.
    19. ಪ್ರಣಾಳಿಕೆ ಮತ್ತು ಚಾರ್ಜ್ ಶೀಟ್ ಕಾರ್ಯಾಗಾರ ಮಾಡಬೇಕು.
    20. ವಾಟ್ಸಪ್ ಗ್ರುಪ್ ಗಳ ರಚನೆ.

    21. ಚುನಾವಣೆ ವಿಸ್ತಾರಕರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳಬೇಕು.
    22. ಹೊರ ರಾಜ್ಯದ ಕ್ಷೇತ್ರ ಸಂಯೋಜಕರ ಜೊತೆ ಕಾರ್ಯ ವಿಭಜನೆ ಮಾಡಿಕೊಳ್ಳಬೇಕು.
    23. ಪೇಜ್ ಪ್ರಮುಖರ ನೇಮಕಾತಿಗೆ ಚಾಲನೆ ಕೊಡಬೇಕು.

    https://youtu.be/GnXEHOwe1Rw

  • ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ-ಲೋಕಸಭೆಗೆ ಆಷಾಢದಲ್ಲೇ ಆಪರೇಷನ್ ಶುರು ಮಾಡ್ತಾರಾ ಅಮಿತ್ ಶಾ?

    ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ-ಲೋಕಸಭೆಗೆ ಆಷಾಢದಲ್ಲೇ ಆಪರೇಷನ್ ಶುರು ಮಾಡ್ತಾರಾ ಅಮಿತ್ ಶಾ?

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಅಮಿತ್ ಶಾ ಅವರ ಎಂಟ್ರಿ ಕೊಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

    ಜುಲೈ 28ಕ್ಕೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದು, ಮೈತ್ರಿ ಸರ್ಕಾರದ ರಾಜಕಾರಣ ಕುರಿತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾರನ್ನು ಜೂನ್ 25 ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿಯಾಗಿ ಬಂದಿದ್ದರು. ಈ ವೇಳೆ ಯಡಿಯೂರಪ್ಪ ರಾಜ್ಯ ರಾಜಕಾರಣದ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಅದೇ ದಿನ ಬೆಂಗಳೂರಿಗೆ ಬಂದು ಹೋಗಿ ಎಂದು ಅಮಿತ್ ಶಾರಿಗೆ ಆಹ್ವಾನವನ್ನು ನೀಡಿದ್ದರಂತೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

    ಮೈತ್ರಿ ಸರ್ಕಾರದ ರಾಜಕಾರಣದ ಬಗ್ಗೆ ಖುದ್ದು ರಾಜ್ಯ ನಾಯಕರ ಬಳಿ ಅಮಿತ್ ಶಾ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆದ ಎಲ್ಲ ವಿದ್ಯಮಾನಗಳ ಮಾಹಿತಿಯನ್ನು ಸಹ ಅಮಿತ್ ಶಾ ಪಡೆಯಲಿದ್ದಾರಂತೆ. ಎಲ್ಲ ಮಾಹಿತಿ ಪಡೆದ ಬಳಿಕ ಅಮಿತ್ ಶಾ ಲೋಕಸಭಾ ಚುನಾವಣೆಗೆ ಸಿದ್ಧತೆ ಹೇಗೆ ನಡೆಸಬೇಕು? ಆಭ್ಯರ್ಥಿಗಳ ಆಯ್ಕೆ? ಎಂಬ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.

    ಇತ್ತ ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ರಚಿಸಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಹ ಲೋಕಸಭಾ ಚುನಾವಣೆಗಾಗಿ ಸಿದ್ಧತೆ ಆರಂಭಿಸಿದೆಯಂತೆ. ಆದ್ರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‍ಗೆ ಯಾವ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂಬ ವಿಷಯದಲ್ಲಿ ಗೊಂದಲವಿದೆ ಎಂದು ಹೇಳಲಾಗುತ್ತಿದೆ.

  • ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಅನಂತಕುಮಾರ್ ಹೆಗಡೆಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಭೀತಿ!

    ಬೆಳಗಾವಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರಿಗೆ 2019ರ ಲೋಕಸಭಾ ಚುನಾವಣೆಯ ಟಿಕೆಟ್ ತಪ್ಪುವ ಭೀತಿ ಉಂಟಾಗಿದ್ದು, ತಮ್ಮ ಆತಂಕವನ್ನು ಶುಕ್ರವಾರ ಎಂ.ಕೆ.ಹುಬ್ಬಳ್ಳಿಯಲ್ಲಿ ಹೊರ ಹಾಕಿದ್ದಾರೆ.

    ಕಿತ್ತೂರು ಶಾಸಕ ಮಹಾಂತೇಶ್ ದೊಡ್ಡನಗೌಡರ ಅಭಿನಂದನಾ ಕಾರ್ಯಕ್ರಮದಲ್ಲಿ ಅನಂತಕುಮಾರ್ ಹೆಗಡೆ ಭಾಗಿಯಾಗಿದ್ದರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ನನ್ನ ಯೋಗ್ಯತೆ ನೋಡಿ ಜನರು ವೋಟ್ ಕೊಟ್ಟಿಲ್ಲ. ಬದಲಿಗೆ ಪ್ರೀತಿ, ವಿಶ್ವಾಸದ ಮೇಲೆ ಮತ ಕೊಟ್ಟಿದ್ದಿರಿ. ಪಾರ್ಟಿ ಮೇಲಿನ ಬದ್ಧತೆ ಇಲ್ಲಿಯ ತನಕ ತಂದು ನಿಲ್ಲಿಸಿದೆ. 5 ಭಾರೀ ಎಂಪಿ ಮಾಡಿದ್ದಿರಿ ಇದಕ್ಕಿಂತ ಹೆಚ್ಚೆನು ಬೇಕು. 5 ಬಾರಿ ವೋಟಿನ ಗೌರವ ಕಡಿಮೆ ಆಗದಂತೆ ನೋಡಿಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಲೋಕಾಸಭಾ ಚುನಾವಣೆ – ಬಿಜೆಪಿಯ ಹಾಲಿ 150 ಎಂಪಿಗಳಿಗೆ ಟಿಕೆಟ್ ಇಲ್ಲ!

    ಮುಂದಿನ ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುವುದು ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲಬೇಕು. ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ ಎಂದು ಅನಂತಕುಮಾರ್ ಹೆಗಡೆ ತಮಗೆ ಟಿಕೆಟ್ ಸಿಗುತ್ತೋ, ಇಲ್ಲವೋ ಎಂಬ ಆತಂಕವನ್ನು ಹೊರಹಾಕಿದರು.

  • ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಇಂದು ಏನಾಗಿದೆ?: ಡಿವಿಎಸ್ ಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

    ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಇಂದು ಏನಾಗಿದೆ?: ಡಿವಿಎಸ್ ಗೆ ಬಿ.ಕೆ ಹರಿಪ್ರಸಾದ್ ತಿರುಗೇಟು

    ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಭವಿಷ್ಯ ನುಡಿದವರ ಭವಿಷ್ಯ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ ಹರಿಪ್ರಸಾದ್ ಕೇಂದ್ರ ಸಚಿವ ಸದಾನಂದ ಗೌಡರಿಗೆ ತಿರುಗೇಟು ನೀಡಿದರು.

    ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಕೆ ಹರಿಪ್ರಸಾದ್, ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಲಿವೆ. ದೇಶದಲ್ಲಿ ಬಿಜೆಪಿ ಪ್ರಧಾನಿ ಹೊರತು ಪಡಿಸಿ, ಯಾರಾದ್ರೂ ಪ್ರಧಾನಿಯಾಗಬಹುದು ಅದೇ ನಮ್ಮ ಗುರಿ ಎಂದರು.

    ಬಿಜೆಪಿ ಪ್ರಧಾನಿ ಉಳಿದುಕೊಳ್ಳಬಾರದು ಅನ್ನೋ ದೃಷ್ಟಿಕೋನ ಇಟ್ಟುಕೊಂಡು ನಾವು ಮುನ್ನಡೆಯುತ್ತಿದ್ದೇವೆ. ಕಾಂಗ್ರೆಸ್ ಗೆ ಏಕಾಂಗಿಯಾಗಿ ಸ್ಪರ್ಧಿಸುವ ಶಕ್ತಿ ಇದೆ. ಆದ್ರೆ ಬದಲಾದ ಪರಿಸ್ಥಿತಿ ಹಾಗೂ ಸನ್ನಿವೇಶದಲ್ಲಿ ಎಲ್ಲರ ಸಹಕಾರವನ್ನು ತೆಗೆದುಕೊಂಡು ಹೋಗುವ ಪ್ರಯತ್ನ ನಡೆಯುತ್ತಿದೆ ಅಂದ್ರು.

    ಇದೇ ವೇಳೆ ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂಬ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸ್ವಾಮೀಜಿಗಳ ಮಾತಿಗೆ ನಾನು ಪ್ರತಿಕ್ರಿಯಿಸಲ್ಲ. ರಾಜಕಾರಣಿಗಳು ಹೇಳಿಕೆ ನೀಡಿದಿದ್ದರೆ, ನಾನು ಪ್ರತಿಕ್ರಿಯಿಸುತ್ತಿದ್ದೆ ಅಂತ ಹೇಳಿ ನುಣುಚಿಕೊಂಡ್ರು.

    ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ನೇಮಕವನ್ನು ನಿರ್ಧರಿಸಲಿದ್ದಾರೆ. ನಿಗಮ ಮಂಡಳಿ ಆಯ್ಕೆಗೆ ಮೊದಲ ಹಂತದಲ್ಲಿ ಹಿರಿಯ ಶಾಸಕರಿಗೆ ನೀಡಲಾಗುತ್ತೆ, ಉಳಿದಂತೆ ಏರಿಯಾ ಕಾರ್ಯಕರ್ತರಿಗೆ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು.

    ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡಿವಿಎಸ್, ಯಾವುದೇ ಕ್ಷಣದಲ್ಲಿ ಸಮ್ಮಿಶ್ರ ಸರಕಾರ ಪತನವಾಗಬಹುದು. ಇವರು ಪ್ರತಿನಿತ್ಯ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಸಮ್ಮಿಶ್ರ ಸರಕಾರ ಯಾವಾಗ ಬೀಳುತ್ತೆ ಎಂದು ಜನ ಕಾಯುತ್ತಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿವೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳು ಹಿಡಿತ ಕಳಕೊಂಡಿದ್ದು ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿದ್ದಾರೆ. ಈ ಸರಕಾರ ಹೆಚ್ಚು ಕಾಲ ಬಾಳುವುದಿಲ್ಲ ಅನ್ನೋದು ನಿಶ್ಚಿತ ಅಂತ ಡಿವಿಎಸ್ ರಾಜ್ಯ ಸರಕಾರದ ಬಗ್ಗೆ ಭವಿಷ್ಯ ನುಡಿದಿದ್ದರು

  • 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

    2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

    ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ.
    ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ ಛಲದಿಂದ ದೇಶದ ಬಿಜೆಪಿಯೇತರ ಮುಂಚೂಣಿ ನಾಯಕರೆಲ್ಲಾ ದೋಸ್ತಿ ಮಂತ್ರ ಜಪಿಸುತ್ತಾ ಬಿಗ್ ದಂಗಲ್ ಅಖಾಡಕ್ಕಿಳಿದಿದ್ದಾರೆ ಅಂತಾ ಹೇಳಲಾಗ್ತಿದೆ.
    ಕರ್ನಾಟಕವೂ ಸೇರಿದಂತೆ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಹಾಘಟ ಬಂಧನ ಏರ್ಪಡುವ ಸಾಧ್ಯತೆ ನಿಚ್ಛಳವಾದಂತಿದೆ. ಬುಧವಾರ ಹೆಚ್.ಡಿ.ಕುಮಾರಸ್ವಾಮಿ ಪದಗ್ರಹಣ ಸಮಾರಂಭ ಕೇವಲ ಅಧಿಕಾರ ಹಿಡಿಯುವ ಕಾರ್ಯಕ್ರಮಕ್ಕೆ ಸೀಮಿತವಾಗದೇ ಮೋದಿ ವಿರುದ್ಧ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಡಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೋದಿಯ ಎದುರಾಳಿಗಳೆಲ್ಲಾ ಈ ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದ್ದಾರೆ.
    ಈ ಮೂಲಕ 2019ರ ಕುರುಕ್ಷೇತ್ರಕ್ಕೆ ಬೆಂಗಳೂರಿನಿಂದಲೇ ಪಾಂಚಜನ್ಯ ಮೊಳಗಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಈ ಮಹಾಮೈತ್ರಿ ಮೋದಿಗೆ ಯಾಕೆ ಎಚ್ಚರಿಕೆಯ ಗಂಟೆ..? ಇದು ಮೋದಿಗೆ ಯಾವ ಸಂದೇಶ ರವಾನಿಸಲಿದೆ..? ಯಾರೆಲ್ಲಾ ಮೋದಿ ವಿರುದ್ಧ ನಿಂತಿದ್ದಾರೆ..? ತ್ರಿಶೂಲ ವ್ಯೂಹದ ಒಳಸುಳಿ ಏನು..? ಎಂಬವುದು ಈ ಕೆಳಗಿನಂತಿದೆ.
    ತ್ರಿಶೂಲ ವ್ಯೂಹ..! 
    1. ತ್ರಿಶೂಲ ವ್ಯೂಹ – ಹೆಚ್.ಡಿ.ದೇವೇಗೌಡ
    ಕರ್ನಾಟಕ – ಕಾಂಗ್ರೆಸ್ + ಜೆಡಿಎಸ್
    ಲೋಕಸಭಾ ಸ್ಥಾನ – 28
    2. ತ್ರಿಶೂಲ ವ್ಯೂಹ – ಮಾಯಾವತಿ – ಅಖಿಲೇಶ್ ಯಾದವ್ 
    ಉತ್ತರ ಪ್ರದೇಶ -ಕಾಂಗ್ರೆಸ್ + ಎಸ್‍ಪಿ+ ಬಿಎಸ್‍ಪಿ
    ಲೋಕಸಭಾ ಸ್ಥಾನ – 80
    3. ತ್ರಿಶೂಲ ವ್ಯೂಹ – ಮಮತಾ ಬ್ಯಾನರ್ಜಿ
    ಪಶ್ಚಿಮ ಬಂಗಾಳ – ಕಾಂಗ್ರೆಸ್ + ತೃಣಮೂಲ ಕಾಂಗ್ರೆಸ್
    ಲೋಕಸಭಾ ಸ್ಥಾನ – 42
    4. ತ್ರಿಶೂಲ ವ್ಯೂಹ – ತೇಜಸ್ವಿ ಯಾದವ್
    ಬಿಹಾರ – ಕಾಂಗ್ರೆಸ್ + ಆರ್ ಜೆಡಿ
    ಲೋಕಸಭಾ ಸ್ಥಾನ – 40
    5. ತ್ರಿಶೂಲ ವ್ಯೂಹ – ಚಂದ್ರಬಾಬು ನಾಯ್ಡು
    ಆಂಧ್ರಪ್ರದೇಶ – ಕಾಂಗ್ರೆಸ್ + ಟಿಡಿಪಿ
    ಲೋಕಸಭಾ ಸ್ಥಾನ – 25
    6. ತ್ರಿಶೂಲ ವ್ಯೂಹ – ಚಂದ್ರಶೇಖರ್ ರಾವ್
    ತೆಲಂಗಾಣ – ಕಾಂಗ್ರೆಸ್ + ಟಿಆರ್‍ಎಸ್
    ಲೋಕಸಭಾ ಸ್ಥಾನ – 17
    7. ತ್ರಿಶೂಲ ವ್ಯೂಹ – ಸ್ಟಾಲಿನ್
    ತಮಿಳುನಾಡು – ಕಾಂಗ್ರೆಸ್ + ಡಿಎಂಕೆ
    ಲೋಕಸಭಾ ಸ್ಥಾನ – 39
    8. ತ್ರಿಶೂಲ ವ್ಯೂಹ   – ಪಿಣರಾಯಿ ವಿಜಯನ್
    ಕೇರಳ – ಯುಡಿಎಫ್ + ಎಲ್‍ಡಿಎಫ್
    ಲೋಕಸಭಾ ಸ್ಥಾನ – 20
    9. ತ್ರಿಶೂಲ ವ್ಯೂಹ – ಅರವಿಂದ್ ಕೇಜ್ರಿವಾಲ್
    ದೆಹಲಿ – ಕಾಂಗ್ರೆಸ್ + ಆಪ್
    ಲೋಕಸಭಾ ಸ್ಥಾನ – 07
    10. ತ್ರಿಶೂಲ ವ್ಯೂಹ   – ಶರದ್ ಪವಾರ್
    ಮಹಾರಾಷ್ಟ್ರ – ಕಾಂಗ್ರೆಸ್ + ಎನ್‍ಸಿಪಿ + ಶಿವಸೇನೆ
    ಲೋಕಸಭಾ ಸ್ಥಾನ – 48
    11. ತ್ರಿಶೂಲ ವ್ಯೂಹ   – ಹೇಮಂತ್ ಸೊರೇನ್
    ಜಾರ್ಖಂಡ್ – ಕಾಂಗ್ರೆಸ್ + ಜೆಎಂಎಂ
    ಲೋಕಸಭಾ ಸ್ಥಾನ – 14
    12. ತ್ರಿಶೂಲ ವ್ಯೂಹ – ಅಭಯ್ ಸಿಂಗ್ ಚೌಟಾಲ
    ಹರಿಯಾಣ – ಕಾಂಗ್ರೆಸ್ + ಲೋಕದಳ
    ಲೋಕಸಭಾ ಸ್ಥಾನ – 10
    13. ತ್ರಿಶೂಲ ವ್ಯೂಹ – ಕ್ಯಾಪ್ಟನ್ ಅಮರೇಂದರ್ ಸಿಂಗ್
    ಪಂಜಾಬ್ – ಕಾಂಗ್ರೆಸ್ + ಆಮ್ ಆದ್ಮಿ
    ಲೋಕಸಭಾ ಸ್ಥಾನ – 13
    14. ತ್ರಿಶೂಲ ವ್ಯೂಹ – ನವೀನ್ ಪಟ್ನಾಯಕ್
    ಒಡಿಶಾ – ಕಾಂಗ್ರೆಸ್ + ಬಿಜು ಜನತಾದಳ
    ಲೋಕಸಭಾ ಸ್ಥಾನ – 21
    15. ತ್ರಿಶೂಲ ವ್ಯೂಹ   – ಮೌಲಾನಾ ಬದ್ರುದ್ದೀನ್ ಅಜ್ಮಲ್
    ಅಸ್ಸಾಂ – ಕಾಂಗ್ರೆಸ್ + ಎಐಯುಡಿಎಫ್
    ಲೋಕಸಭಾ ಸ್ಥಾನ – 14
    16. ತ್ರಿಶೂಲ ವ್ಯೂಹ – ಓಮರ್ ಅಬ್ದುಲ್ಲಾ
    ಜಮ್ಮು ಕಾಶ್ಮೀರ – ಕಾಂಗ್ರೆಸ್ + ಜೆಎನ್‍ಸಿ
    ಲೋಕಸಭಾ ಸ್ಥಾನ – 06
    ತ್ರಿಶೂಲ ವ್ಯೂಹ  – ಮೋದಿ ಸೋಲಿಸಲು ಮಹಾ ಸ್ಕೆಚ್..!
    ಮಹಾಮೈತ್ರಿ – 424 ಸ್ಥಾನ
    ಒಟ್ಟು ಲೋಕಸಭೆ ಸ್ಥಾನ – 543