Tag: ಚುನಾವಣಾ ಫಲಿತಾಂಶ 2017

  • ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಗಾಂಧಿನಗರ: ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯುವ ನಾಯಕರಾದ ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಜಯಗಳಿಸಿದ್ದಾರೆ.

    ರಾಧನ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್ ಮತ್ತು ವಡಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಅವರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಜಿಗ್ನೇಶ್ ಮೇವಾನಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಿಗ್ನೇಶ್ ಮೇವಾನಿ 95,497 ಮತಗಳನ್ನು ಪಡೆದರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದಾರೆ.

    ಮೋದಿ ತೈವಾನ್ ಹಣಬೆ ತಿಂದು ಬೆಳ್ಳಗಾಗಿದ್ದಾರೆ ಅಂತ ಹೇಳಿಕೆ ಕೋಡೋ ಮೂಲಕ ಸುದ್ದಿಯಾಗಿದ್ದ ಅಲ್ಪೇಶ್ ಅವರು ರಾಧನ್ ಪುರ್ ಕ್ಷೇತ್ರದಲ್ಲಿ 14,857 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಪೇಶ್ ಠಾಕೂರ್ 85,777 ಮತ ಹಾಗೂ ಬಿಜೆಪಿಯ ಸೋಲಂಕಿ ಲಾವಿಂಗ್ಜಿ ಮುಲ್ವಿಜಿ ಠಾಕೂರ್ ಅವರು ಅವರನ್ನು 70,920 ಮತಗಳನ್ನು ಪಡೆದಿದ್ದಾರೆ.

  • ಇದೊಂದು ಸಮಾಧಾನಕರವಾದ ಗೆಲುವಾಗಿದೆ- ಡಿವಿಎಸ್

    ಇದೊಂದು ಸಮಾಧಾನಕರವಾದ ಗೆಲುವಾಗಿದೆ- ಡಿವಿಎಸ್

    ನವದೆಹಲಿ: ಇದೊಂದು ನಿರೀಕ್ಷಿತ ಗೆಲುವಾಗಿದೆ. ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಆದಿಕಾರಕ್ಕೆ ಬರುತ್ತೆ ಅಂತ ನಮಗೆ ಮೊದಲೇ ತಿಳಿದಿತ್ತು. ಹೀಗಾಗಿ ಇದೊಂದು ಸಮಾಧಾನಕರವಾದ ಗೆಲುವಾಗಿದೆ ಅಂತ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.

    ಗುಜರಾತ್ ಹಾಗೂ ಹಿಮಾಚಲಪ್ರದೇಶದ ಚುನಾವಣಾ ಫಲಿತಾಂಶದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 3 ವರ್ಷದಲ್ಲಿ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಹಾಗೂ ಗುಜರಾತಿನಲ್ಲಿ 13 ವರ್ಷ ಅವರು ನಡೆಸಿದ ಆಡಳಿತದಿಂದ ನಮಗೆ ಇಂದು ಈ ಗೆಲುವು ಲಭಿಸಿದೆ. ಅಲ್ಲದೇ ಈ ಗೆಲುವು ಇಡೀ ದೇಶದಲ್ಲೇ ಬರಬೇಕೆಂಬುದು ಜನ ಮನಸ್ಸಿನ ಭಾವನೆ ಅಂತ ಅವರು ಹೇಳಿದ್ರು.

    ಇದೊಂದು ಸಮಾಧಾನಕರವಾದ ಗೆಲುವಾಗಿದ್ದು, ಪಾಟೀದಾರ್ ಸಮುದಾಯವನ್ನು ಒಡೆದು ಆಳುವ ನೀತಿ ಇರಬಹುದು ಅಥವಾ ಹಿಂದುಳಿದ ಅಥವಾ ಬೇರೆ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸೇರಿಸಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹಲವು ತಂತ್ರಗಾರಿಕೆಗಳನ್ನು ರೂಪಿಸಿತ್ತು. ಆದ್ರೆ ಇವೆಲ್ಲದರ ಮಧ್ಯೆ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ ಅಂದ್ರೆ ಇದೊಂದು ಅಸಾಧಾರಣ ಗೆಲುವು ಅಂತಾನೇ ಹೇಳಬಹುದು ಅಂದ್ರು.

    ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಅವಕಾಶ ಕೊಡಬಾರದೆಂದು ಭಾರತೀಯ ಜನತಾ ಪಕ್ಷದ ಸ್ಪಷ್ಟ ವಿಚಾರವಾಗಿದೆ. ಆರೋಪಗಳು, ಪ್ರತ್ಯಾರೋಪಗಳು ರಾಜಕೀಯದಲ್ಲಿ ಸಾಮಾನ್ಯ. ಆ ಆರೋಪಗಳು ಸಾಬೀತಾಗಿಲ್ಲ ಅಂತ ಅದನ್ನು ಮತ್ತೆ ಮತ್ತೆ ಮುಂದುವರೆಸುವುದರಲ್ಲಿ ನೈತಿಕತೆ ಇಲ್ಲ ಅಂತ ಡಿವಿಎಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

     

  • ಗೆಲುವಿನಂಚಿನಲ್ಲಿರೋ ಪ್ರಧಾನಿ ಮೋದಿಯನ್ನು ಪ್ರಶ್ನಿಸಿ ನಟ ಪ್ರಕಾಶ್ ರೈ ಟ್ವೀಟ್

    ಗೆಲುವಿನಂಚಿನಲ್ಲಿರೋ ಪ್ರಧಾನಿ ಮೋದಿಯನ್ನು ಪ್ರಶ್ನಿಸಿ ನಟ ಪ್ರಕಾಶ್ ರೈ ಟ್ವೀಟ್

    ಬೆಂಗಳೂರು: ಪ್ರಿಯ ಪ್ರಧಾನ ಮಂತ್ರಿಗಳೇ, ಗೆಲುವಿಗಾಗಿ ಅಭಿನಂದನೆಗಳು. ಆದರೆ, ನೀವು ನಿಜಕ್ಕೂ ಸಂತೋಷವಾಗಿದ್ದೀರಾ? ಎಂದು ಬಹುಭಾಷಾ ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

    ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರೆಸಿರುವ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬಂದಿರುವ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ.

    ನನ್ನ ಪ್ರಿಯ ಪ್ರಧಾನಮಂತ್ರಿಗಳಿಗೆ ಎಂದು ಪತ್ರದ ಮಾದರಿಯಲ್ಲಿ ಆರಂಭವಾಗಿರುವ ಟ್ವೀಟ್‍ನಲ್ಲಿ ಆತ್ಮೀಯರೇ, ಅಭಿನಂದನೆಗಳು. ಹೌದು, ಆದರೆ ವಿಕಾಸದ ತಂತ್ರದಿಂದ ನೀವು ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆಲ್ಲಬೇಕಾಗಿತ್ತು. 150 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿಮ್ಮ ಗುರಿ ಏನಾಯ್ತು? ಒಂದು ಕ್ಷಣ ನಿಂತು ಆಲೋಚಿಸುತ್ತೀರಾ? ಒಡೆದು ಗೆಲ್ಲುವ ತಂತ್ರ ಫಲಿಸಿಲ್ಲ. ಪಾಕಿಸ್ತಾನ, ಧರ್ಮ, ಜಾತಿ, ದಬ್ಬಾಳಿಕೆ, ವೈಯಕ್ತಿಕ ಲಾಭಗಳಿಕೆಯ ಅಹಂಗಳಿಗಿಂತಲೂ ದೊಡ್ಡ ಸಮಸ್ಯೆಗಳು ನಮ್ಮ ದೇಶದಲ್ಲಿವೆ. ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದ ಮುಖ್ಯ ಸಮಸ್ಯೆಗಳು ಇವೆ. ರೈತರ ದನಿಯನ್ನು ನಿರ್ಲಕ್ಷ್ಯಿಸಲಾಗಿದೆ ಹಾಗೂ ಗ್ರಾಮೀಣ ಭಾರತದ ಸಮಸ್ಯೆಗಳ ದನಿ ಏರಿದೆ ಕೇಳಿಸುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

  • ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಕಾಂಗ್ರೆಸ್ ಹಿನ್ನಡೆಗೆ ಈ ಮೂರು ಕಾರಣಗಳಿವೆ ಅಂದ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ!

    ಬಾಗಲಕೋಟೆ: ಬಿಜೆಪಿಯಿಂದ ಇವಿಎಂ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಮತ್ತು ಅತಿಯಾದ ಸುಳ್ಳುಗಳೇ ಗುಜರಾತ್ ನಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳು ಅಂತ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದ್ದಾರೆ.

    ಚುನಾವಣಾ ಫಲಿತಾಂಶದ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ಜನರ ತೀರ್ಪಿಗೆ ತಲೆ ಬಾಗುತ್ತೇನೆ. ಹಿಮಾಚಲಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆಯಿಂದ ಸೋಲಾಗಿರೋದು ನಿಜ. ಗುಜರಾತ್ ದಲ್ಲಿ ಕಾಂಗ್ರೆಸ್ ಹಿನ್ನಡೆಗೆ ಮೂರು ಕಾರಣಗಳಿದ್ದು, ಬಿಜೆಪಿಯಿಂದ ಇವಿಎಮ್ ಮತ ಯಂತ್ರದ ದುರ್ಬಳಕೆ, ಉದ್ಯಮಿಗಳ ಹಣದ ಪ್ರಭಾವ ಹಾಗೂ ಬಿಜೆಪಿಯ ಅತಿಯಾದ ಸುಳ್ಳುಗಳೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅಂತ ಅವರು ಗಂಭೀರ ಆರೋಪ ಮಾಡಿದ್ರು.

    ಆದ್ರೆ ಈ ಫಲಿತಾಂಶ ಕರ್ನಾಟಕ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. 2018ರ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಾಂಗ್ರೆಸ್ ಪಕ್ಷ. ಇವುಗಳ ಮಧ್ಯೆ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿದೆ. ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷಕ್ಕೆ ಹೋಗಲ್ಲ. ಒಂದು ವೇಳೆ ಹೋದ್ರೆ ರಾತ್ರಿ ನೀರಿಲ್ಲದ ಬಾವಿ ಕಂಡು ಹಗಲು ಬಿದ್ದಂತೆ ಅಂತ ಅವರು ಹೇಳಿದ್ರು.