Tag: ಚೀಲ

  • ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

    ನಾಲ್ವರು ತೊಗರಿ ಕಳ್ಳರ ಬಂಧನ – 7.80 ಸಾವಿರ ಮೌಲ್ಯದ ತೊಗರಿ ಜಪ್ತಿ

    ಬೀದರ್: ಖಚಿತ ಮಾಹಿತಿ ಮೇರೆಗೆ ನ್ಯೂಟೌನ್ ಪೊಲೀಸರು ದಾಳಿ ಮಾಡಿ ನಾಲ್ವರು ತೊಗರಿ ಕಳ್ಳರನ್ನು ಬಂಧಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಇದನ್ನೂ ಓದಿ: ಟ್ರೇಲರ್ ಹೊತ್ತು ತಂದ ‘ಪೆಟ್ರೋಮ್ಯಾಕ್ಸ್’ ಚಿತ್ರತಂಡ – ನಗುವಿನ ರಸದೌತಣ ಪಕ್ಕಾ ಎಂದ ಪ್ರೇಕ್ಷಕರು

    Pigeon pea Thieves

     

    ಬಂಧಿತ ಖದೀಮರಿಂದ ಬರೋಬ್ಬರಿ ಪೊಲೀಸರು ಏಳು ಲಕ್ಷದ ಎಂಬತ್ತು ಸಾವಿರ ಮೌಲ್ಯದ ತೊಗರಿ ಜಪ್ತಿ ಮಾಡಿದ್ದು, ಬಂಧಿತ ನಾಲ್ವರು ತೊಗರಿ ಕಳ್ಳರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಬರೋಬ್ಬರಿ 120 ಚೀಲ ತೊಗರಿ ಕಳ್ಳತನ ಮಾಡಿ ಪರಾರಿಯಾಗಿದ್ದ ಖದೀಮರ ವಿರುದ್ಧ ಇತ್ತೀಚೆಗೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ: ಐಟಿ ದಾಳಿ ಬಳಿಕ ಕೊನೆಗೂ ಮೌನ ಮುರಿದ ಸೋನು ಸೂದ್

    ಪ್ರಕರಣ ದಾಖಲಾದ ಬಳಿಕ ತೊಗರಿ ಕಳ್ಳರಿಗಾಗಿ ಬಲೆ ಬಿದ್ದ ಬೀದರ್ ಪೊಲೀಸರು, ಸೋಮವಾರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ತೊಗರಿ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಚೀಲದಲ್ಲಿ ಪುಟ್ಟ-ಪುಟ್ಟ ಕರುಗಳನ್ನು ತುಂಬಿ ಸಾಗಾಟ- ಆರೋಪಿಯನ್ನು ಹಿಡಿದ ಜನ

    ಚೀಲದಲ್ಲಿ ಪುಟ್ಟ-ಪುಟ್ಟ ಕರುಗಳನ್ನು ತುಂಬಿ ಸಾಗಾಟ- ಆರೋಪಿಯನ್ನು ಹಿಡಿದ ಜನ

    ಬೆಂಗಳೂರು: ಗೋವುಗಳ ಹಾಗೂ ಗೋಮಾಂಸ ಸಾಗಾಟ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದಕ್ಕೆ ಇಂದು ಬಿಡದಿಯಯಲ್ಲಿ ಸಿಕ್ಕ ಘಟನೆಯೂ ಸಾಕ್ಷಿಯಾಗಿದೆ.

    ವ್ಯಕ್ತಿಯೊಬ್ಬ ಪುಟ್ಟ ಪುಟ್ಟ ಕರುಗಳನ್ನು ಯೂರಿಯಾ ಚೀಲದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದನು. ಈ ವಿಚಾರ ತಿಳಿದ ಸ್ಥಳೀಯರು ಅನುಮಾನದ ಮೇರೆಗೆ ಬಿಡದಿಯಲ್ಲಿ ಅಡ್ಡಗಟ್ಟಿ ಆತನ ಆಟೋವನ್ನು ನಿಲ್ಲಿಸಿದ್ದಾರೆ.

    ಆಟೋ ನಿಲ್ಲುತ್ತಿದ್ದಂತೆಯೇ ಸ್ಥಳೀಯರು ಒಟ್ಟು ಸೇರಿ ಅದರೊಳಗಡೆ ಇದ್ದ ಚೀಲಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯೂರಿಯಾ ಚೀಲಗಳೊಳಗೆ ಪುಟ್ಟ ಪುಟ್ಟ ಕರುಗಳು ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚೀಲಗಳನ್ನು ಆಟೋದಿಂದ ಇಳಿಸಿ ಕಟ್ಟಿದ ಹಗ್ಗವನ್ನು ಬಿಚ್ಚಿದಾಗ ಕರುಗಳು ಹೊರಬಂದವು.

    ಈ ದೃಶ್ಯ ನೆರೆದಿದ್ದವರಲ್ಲಿ ಕಣ್ಣೀರು ತರಿಸುವಂತಿತ್ತು. ಆರೋಪಿ ಆಟೋದಲ್ಲಿ ಸುಮಾರು 10-15 ಕರುಗಳನ್ನು ತುಂಬಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ. ಕರುಗಳು ಒದ್ದಾಡುತ್ತವೆ ಅನ್ನೋ ಕಾರಣಕ್ಕೆ ಅವುಗಳ ಕಾಲುಗಳನ್ನು ಮುರಿದು ಚೀಲದೊಳಗೆ ತುಂಬಿಸಿದ್ದಾನೆ. ಬಳಿಕ ಉಸಿರಾಡಲೆಂದು ಗೋಣಿಯಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಚೀಲವನ್ನು ಬಿಗಿಯಾಗಿ ಕಟ್ಟಿದ್ದಾನೆ.

    ಆದರೆ ಈ ರೀತಿ ಕಟ್ಟಿ ಎಲ್ಲಿಗೆ, ಯಾಕೆ ಸಾಗಾಟ ಮಾಡುತ್ತಿದ್ದ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಬಿಡದಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

  • ಪತ್ರಕರ್ತನ ಅಮ್ಮ, 1 ವರ್ಷದ ಮಗಳನ್ನು ಕೊಂದು ಶವವನ್ನು ಚೀಲದಲ್ಲಿ ತುಂಬಿ ಬಿಸಾಕಿದ!

    ಪತ್ರಕರ್ತನ ಅಮ್ಮ, 1 ವರ್ಷದ ಮಗಳನ್ನು ಕೊಂದು ಶವವನ್ನು ಚೀಲದಲ್ಲಿ ತುಂಬಿ ಬಿಸಾಕಿದ!

    ನಾಗ್ಪುರ: ಸ್ಥಳೀಯ ಪತ್ರಕರ್ತರೊಬ್ಬರ ತಾಯಿ ಹಾಗೂ ಒಂದು ವರ್ಷದ ಮಗಳನ್ನು ಕೊಲೆಗೈದು ಬಳಿಕ ಶವವನ್ನು ಚೀಲದಲ್ಲಿ ತುಂಬಿಸಿ ಬಿಸಾಕಿರೋ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪತ್ರಕರ್ತ ರವಿಕಾಂತ್ ಕಂಬ್ಳೆ ಅವರ 52 ವರ್ಷದ ಉಷಾ ಕಂಬ್ಳೆ ಹಾಗೂ ರಾಶಿ ದುಷ್ಕರ್ಮಿಗಳ ಕೈಯಲ್ಲಿ ಹತ್ಯೆಗೀಡಾದ ಮೃತ ದುರ್ದೈವಿಗಳು.

    ಏನಿದು ಘಟನೆ?: ಸ್ಥಳೀಯ ದೈನಂದಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿರೋ ರವಿಕಾಂತ್ ಅವರ ತಾಯಿ ಮತ್ತು ಮಗಳು ಭಾನುವಾರ ಸಂಜೆಯಿಂದಲೇ ನಾಪತ್ತೆಯಾಗಿದ್ದರು. ಆದ್ರೆ ಇದೀಗ ಅವರಿಬ್ಬರೂ ಶವವಾಗಿ ಸುಲ್ಲಾದ ಬಹದೂರ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಉಷಾ ಅವರು ಸಾಲ ನೀಡುವ ವ್ಯವಹಾರ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತ ನಿಲೇಶ್ ಭಾರ್ನೆ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.

    ಎಲ್ಲಿಂದ ನಾಪತ್ತೆ?: ತನ್ನ ಒಂದು ವರ್ಷದ ಮೊಮ್ಮಗಳೊಂದಿಗೆ ಉಷಾ ಅವರು ಭಾನುವಾರ ಸಂಜೆ 5.30ರ ಸುಮಾರು ಮನೆಯ ಪಕ್ಕದಲ್ಲಿರೋ ಜ್ಯುವೆಲ್ಲರಿ ಶಾಪ್ ಗೆ ತೆರಳಿದ್ದರು. ಹಾಗೆಯೇ ತೆರಳಿದವರು ತಡವಾದ್ರೂ ಬರದಿದ್ದಾಗ ಉಷಾ ಪತಿ ಕರೆ ಮಾಡಿದ್ದಾರೆ. ಆದ್ರೆ ಅದಾಗಲೇ ಉಷಾ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮಗ ರವಿಕಾಂತ್ ಕೆಲಸದಿಂದ ವಾಪಾಸ್ಸಾಗಿ ತಾಯಿ ಮತ್ತು ಮಗಳು ನಾಪತ್ತೆಯಾಗಿರೋ ವಿಚಾರ ಪೊಲೀಸರಿಗೆ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗ್ಪುರದ ಪವನ್ ಪುತ್ರ ಪ್ರದೇಶದ 26 ವರ್ಷದ ಗಣೇಶ್ ರಂಬಾರಣ್ ಶಾಹು ಎಂಬಾತನನನು ಬಂಧಿಸಲಾಗಿದೆ. ಈತ ಭಾನುವಾರ ಸಂಜೆಯಷ್ಟೇ ಹಣದ ವಿಚಾರವಾಗಿ ಉಷಾ ಅವರ ಜೊತೆ ಜಗಳವಾಡಿದ್ದನು ಎಂದು ಜಂಟಿ ಪೊಲೀಸ್ ಕಮಿಷನರ್ ಶಿವಾಜಿ ತಿಳಿಸಿದ್ದಾರೆ.

    ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಈ ವೇಳೆ ಉಷಾ ಅವರು ಮೆಟ್ಟಿಲಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಶಾಹಿ ಉಷಾ ಅವರ ಕುತ್ತಿಗೆಯನ್ನು ಸೀಳಿದ್ದಾನೆ. ಇದೇ ವೇಳೆ ಉಷಾ ಜೊತೆಯಿದ್ದ ಮೊಮ್ಮಗಳು ರಾಶಿಯನ್ನು ಕೂಡ ಕೊಲೆಗೈದಿದ್ದಾನೆ. ನಂತರ ಅವರಿಬ್ಬರ ಶವವನ್ನು ಒಂದು ಚೀಲದೊಳಗೆ ತುಂಬಿಸಿ ನುಲ್ಲಾ ಪ್ರದೇಶದಲ್ಲಿ ಬಿಸಾಕಿದ್ದಾನೆ ಅಂತ ವಿಚಾರಣೆ ನಡೆಸಿದಾಗ ಬಂಧಿತ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  • 4 ಚೀಲಗಳಲ್ಲಿ ಹಣ ತುಂಬಿಕೊಂಡು ಬಂದು ಕಾರ್ ಖರೀದಿಸಿದ್ಳು!

    4 ಚೀಲಗಳಲ್ಲಿ ಹಣ ತುಂಬಿಕೊಂಡು ಬಂದು ಕಾರ್ ಖರೀದಿಸಿದ್ಳು!

    ಬೀಜಿಂಗ್: ಚೀನಾದಲ್ಲಿ ಮಹಿಳೆಯೊಬ್ಬರು ನಾಲ್ಕು ಚೀಲದ ತುಂಬ ಹಣ ತುಂಬಿಕೊಂಡು ಕಾರ್ ಖರೀದಿಸಲು ಹೋಗಿ ಶೋರೂಂ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ.

    ಕಳೆದ ವಾರ ಶಾಂಡಾಂಗ್ ಪ್ರಾಂತ್ಯದ ನಿನ್‍ಝೋನಲ್ಲಿನ ಹೋಂಡಾ ಕಾರ್ ಡೀಲರ್‍ಶಿಪ್ ಶೋರೂಮಿನಲ್ಲಿ ಈ ಘಟನೆ ನಡೆದಿದೆ. ಮಹಿಳೆ ತಂದಿದ್ದ ಚೀಲಗಳ ತುಂಬಾ 1 ಯುವಾನ್ ಮುಖಬೆಲೆಯ ನೋಟುಗಳಿದ್ದು ಒಟ್ಟು 130,000 ಯುವಾನ್(ಅಂದಾಜು 12.50 ಲಕ್ಷ ರೂ.) ಹಣವಿತ್ತು. ಆದ್ರೆ ಇಷ್ಟು ಹಣವನ್ನ ಇಲ್ಲಿನ 20 ನೌಕರರು ಗಂಟೆಗಟ್ಟಲೆ ಎಣಿಸುವಂತಾಯ್ತು.

    ಮಹಿಳೆ ಕನ್‍ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿದ್ದು, ನಾಲ್ಕು ಚೀಲದ ತುಂಬ ಚಿಲ್ಲರೆ ಹಣವನ್ನ ಹೊಂದಿದ್ದರು. ಶೋರೂಮ್‍ನಲ್ಲಿ ಸಣ್ಣ ಮೊತ್ತದ ನೋಟುಗಳನ್ನ ಸ್ವೀಕರಿಸಲಾಗುತ್ತದೆ ಎಂದು ಗೊತ್ತಾದ ನಂತರ ಈಕೆ ಆ ಹಣದಲ್ಲಿ ಕಾರ್ ಖರೀದಿಸಲು ನಿರ್ಧರಿಸಿದ್ರು.

    ಗ್ರಾಹಕರೊಬ್ಬರು ಕರೆ ಮಾಡಿ ಸಣ್ಣ ನೋಟುಗಳಿಂದ ಹಣ ನೀಡಬಹುದಾ ಎಂದು ಕೇಳಿದ್ರು. ನಾನು ಖಂಡಿತವಾಗಿಯೂ ನೀಡಬಹುದು ಎಂದೆ. ನಂತರ ಆಕೆ ನಗದನ್ನು ತೆಗೆದುಕೊಂಡು ಹೋಗಿ ಬನ್ನಿ ಎಂದು ಕರೆದರು. ನಾನು ಹೋಗಿ ಕಾರ್‍ನ ಡಿಕ್ಕಿ ತೆಗೆದಾಗ 1 ಯುವಾನ್ ನೋಟುಗಳ ನಾಲ್ಕು ಚೀಲಗಳನ್ನ ನೋಡಿದೆ ಎಂದು ನೌಕರರೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

    ಹಣ ಎಣಿಸುವ ಕೆಲಸ ಜಾಸ್ತಿಯಾಗಿದ್ದರಿಂದ ಶೂರೂಮ್‍ನವರು ಕೊನೆಗೆ ಮೆಕ್ಯಾನಿಕ್‍ಗಳನ್ನೂ ಸಹಾಯಕ್ಕೆ ಕೆರೆದಿದ್ದಾರೆ. ಮಹಿಳೆ 200,000 ಯುವಾನ್(ಅಂದಾಜು 19.0 ಲಕ್ಷ ರೂ.) ಮೊತ್ತದ ಕಾರ್ ಖರೀದಿ ಮಾಡಿದ್ದು ಉಳಿದ ಹಣವನ್ನು ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

    https://www.youtube.com/watch?time_continue=39&v=Y271nd_Uupg