Tag: ಚಿತ್ರ ವಿಮರ್ಶೆ

  • ಡೈನಾಮಿಕ್ ಪ್ರಿನ್ಸ್ ‘ಜಂಟಲ್ ಮ್ಯಾನ್’ ಅವತಾರಕ್ಕೆ ಪ್ರೇಕ್ಷಕ ಫಿದಾ- ಕಥೆಯ ಫ್ರೆಶ್‍ನೆಸ್ ಚಿತ್ರದ ಹೈಲೈಟ್

    ಡೈನಾಮಿಕ್ ಪ್ರಿನ್ಸ್ ‘ಜಂಟಲ್ ಮ್ಯಾನ್’ ಅವತಾರಕ್ಕೆ ಪ್ರೇಕ್ಷಕ ಫಿದಾ- ಕಥೆಯ ಫ್ರೆಶ್‍ನೆಸ್ ಚಿತ್ರದ ಹೈಲೈಟ್

    ಡೈನಾಮಿಕ್ ಪ್ರಿನ್ ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಅಭಿನಯದ ‘ಜಂಟಲ್‍ಮ್ಯಾನ್’ ಚಿತ್ರ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಸಾಕಷ್ಟು ನಿರೀಕ್ಷೆಯನ್ನು ಚಿತ್ರ ಹುಟ್ಟುಹಾಕಿತ್ತು. ಇಂದು ಬಹು ನಿರೀಕ್ಷಿತ ಚಿತ್ರ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದೆ.

    ಹೊಸತನದ ಪ್ರಯತ್ನಗಳಿಗೆ ಕನ್ನಡ ಸಿನಿ ಪ್ರೇಕ್ಷಕ ಯಾವಾಗಲೂ ಫುಲ್ ಮಾರ್ಕ್ಸ್ ನೀಡುತ್ತಾನೆ ಅನ್ನೋದಕ್ಕೆ ಮತ್ತೊಂದು ಎಕ್ಸಾಂಪಲ್ ‘ಜಂಟಲ್‍ಮ್ಯಾನ್’ ಚಿತ್ರ. ಚಿತ್ರದ ಕಥೆಯಲ್ಲಿರೋ ಪ್ರೆಶ್‍ನೆಸ್ ಹಾಗೂ ಅದನ್ನು ತೆರೆ ಮೇಲೆ ಪ್ರಸ್ತುತ ಪಡಿಸಿರೋ ರೀತಿಗೆ ಪ್ರೇಕ್ಷಕ ಪ್ರಭು ಫಿದಾ ಆಗಿದ್ದಾನೆ.

    ‘ಜಂಟಲ್‍ಮ್ಯಾನ್’ ಚಿತ್ರದಲ್ಲಿ ಸಿನಿರಸಿಕರಿಗೆ ಬೇಕಾದ ಎಲ್ಲಾ ಎಲಿಮೆಂಟ್‍ಗಳು ಸಮಾನವಾಗಿ ದೊರೆತಿದೆ. ಕಥೆ ಹಾಗೂ ಎಲ್ಲೂ ಬೋರ್ ಹೊಡಿಸದ ಸ್ಕ್ರೀನ್ ಪ್ಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಪ್ರಮುಖ ಪಾತ್ರವಹಿಸಿದೆ.

    ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‍ನಿಂದ ಬಳಲೋ ನಾಯಕ ಭರತ್ ದಿನದ ಹದಿನೆಂಟು ಗಂಟೆ ಮಲಗಿಯೇ ಇರುತ್ತಾನೆ. ತನ್ನ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನೋ ಅರಿವು ಆತನಿಗೆ ಇರೋದಿಲ್ಲ. ಇದರ ನಡುವೆ ಕಳೆದು ಹೋದ ಅಣ್ಣನ ಮಗಳನ್ನು ಹುಡುಕೋ ಜವಾಬ್ದಾರಿ, ಜೊತೆಗೆ ಪ್ರೀತಿಸಿದವಳನ್ನು ಕಾಪಾಡಿಕೊಳ್ಳೋ ಜವಾಬ್ದಾರಿ. ಪ್ರತಿಬಾರಿ ಈ ಜವಾಬ್ದಾರಿ ನಿರ್ವಹಿಸುವಾಗ ಎದುರಾಗೋ ನಿದ್ರೆ ಏನೆಲ್ಲ ಸಮಸ್ಯೆ ಉಂಟುಮಾಡುತ್ತೆ. ಇದನ್ನೆಲ್ಲ ಮೀರಿ ಭರತ್ ಎಲ್ಲರನ್ನು ಕಾಪಾಡುತ್ತಾನಾ? ಎನ್ನುವುದು ಜಂಟಲ್ ಮ್ಯಾನ್ಸ್ ಸ್ಟೋರಿ ಲೈನ್.

    ಇದನ್ನು ತೆರೆ ಮೇಲೆ ಪ್ರೇಕ್ಷಕರನ್ನು ಹಿಡಿದಿಡುವಂತೆ ಕಟ್ಟಿಕೊಟ್ಟಿದ್ದಾರೆ. ಪ್ರತಿ ಹಂತದಲ್ಲೂ ಕುತೂಹಲ ಹುಟ್ಟಿಸಿರೋ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. `ಜಂಟಲ್‍ಮ್ಯಾನ್’ ಚಿತ್ರ ಪ್ರಜ್ವಲ್ ಸಿನಿ ಕರಿಯರ್‍ಗೆ ದೊಡ್ಡ ಬ್ರೇಕ್ ನೀಡುವುದರಲ್ಲಿ ಡೌಟೇ ಇಲ್ಲ. ಅಷ್ಟರ ಮಟ್ಟಿಗೆ ತೆರೆ ಮೇಲೆ ಅಭಿನಯ ಮಾಡಿದ್ದಾರೆ ಪ್ರಜ್ವಲ್ ದೇವರಾಜ್.

    ಸಂಚಾರಿ ವಿಜಯ್ ನಟನೆ ಬಗ್ಗೆ ಎರಡು ಮಾತಿಲ್ಲ. ನಿಶ್ವಿಕಾ ನಾಯ್ಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು, ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದ ಸಂಗೀತ, ಎಲ್ಲಾ ಪಾತ್ರವರ್ಗ ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ.

    ಚಿತ್ರ: ಜಂಟಲ್‍ಮ್ಯಾನ್
    ನಿರ್ದೇಶನ: ಜಡೇಶ್ ಕುಮಾರ್
    ನಿರ್ಮಾಪಕ: ಗುರುದೇಶಪಾಂಡೆ
    ಸಂಗೀತ: ಅಜನೀಶ್ ಲೋಕನಾಥ್
    ಛಾಯಾಗ್ರಹಣ: ಸುಧಾಕರ್ ಶೆಟ್ಟಿ
    ತಾರಾಬಳಗ: ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು, ಸಂಚಾರಿ ವಿಜಯ್, ಆರಾಧ್ಯ, ಇತರರು.

    Rating: 4/5

  • ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.

    ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.

    ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!

    ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.

    ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡಕ್ಕಾಗಿ ಒಂದನ್ನು ಒತ್ತಿ – ಅಕ್ಷರಗಳನ್ನು ಅಪ್ಪಿಕೊಂಡವನ ಪ್ರೇಮ ವಿಯೋಗ!

    ಕನ್ನಡಕ್ಕಾಗಿ ಒಂದನ್ನು ಒತ್ತಿ – ಅಕ್ಷರಗಳನ್ನು ಅಪ್ಪಿಕೊಂಡವನ ಪ್ರೇಮ ವಿಯೋಗ!

    ಬೆಂಗಳೂರು : ಪ್ರೀತಿಯೆಂಬೋ ಕಥಾ ವಸ್ತುವನ್ನು ಅದೆಷ್ಟು ಆಂಗಲ್ಲಿಂದ ಬಳಸಿಕೊಂಡರೂ ಅದರ ವ್ಯಾಲಿಡಿಟಿ ಮುಗಿಯುವಂಥಾದ್ದಲ್ಲ. ಒಂದೇ ಥರದ ಪ್ರೀತಿ… ವೆರೈಟಿ ವೆರೈಟಿ ವಿರಹ… ಇದರ ಮತ್ತೊಂದು ತೀವ್ರವಾದ ರೂಪದಲ್ಲಿ ತೆರೆ ಕಂಡಿರೋ ಚಿತ್ರ ಕನ್ನಡಕ್ಕಾಗಿ ಒಂದನ್ನು ಒತ್ತಿ. ಕೆಲವೊಂದಷ್ಟು ಕೊರತೆ ಮತ್ತು ಖಂಡುಗ ಖಂಡುಗ ಭಾವತೀವ್ರತೆಯೊಂದಿಗೆ ತೆರೆ ಕಂಡಿರುವ ಈ ಚಿತ್ರ ಹಳೇ ಪ್ರೇಮಕಾವ್ಯವ ಹೊಸತೊಂದು ಪುಟದಂತೆ ಪ್ರೇಕ್ಷಕರ ಎದೆಗಿಳಿದಿದೆ.

    ಎಂಎ ಮಾಡಿಕೊಂಡಿದ್ದರೂ ಹೊಟೇಲೊಂದರಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ನಾಯಕ. ಇಲ್ಲಿಯೇ ಈತನ ಕನ್ನಡ ಜ್ಞಾನ ಮತ್ತು ಸಾಹಿತ್ಯಾಸಕ್ತಿಯನ್ನು ಮನಗಂಡು ಹಳೇ ಪತ್ರಿಕೆಯ ಸಂಪಾದಕರೋರ್ವರು ತಮ್ಮ ಪತ್ರಿಕೆಯಲ್ಲಿ ಬರೆಯೋ ಅವಕಾಶ ಕೊಡುತ್ತಾರೆ. ಅಲ್ಲಿಂದ ಪತ್ರಿಕೋದ್ಯಮಕ್ಕೆ ಅಡಿಯಿರಿಸಿದವನೊಳಗೆ ಅದಾಗಲೇ ಹುಟ್ಟಿಕೊಂಡಿದ್ದ ಪ್ರೀತಿ ತೀವ್ರವಾಗಿ ಹೋಗುತ್ತದೆ. ಆದರೆ ಇನ್ನೇನು ಪಳಗಿಕೊಂಡ ಪ್ರೀತಿ ಕೈಗೆಟುಕುತ್ತದೆ ಎಂಬಷ್ಟರಲ್ಲಿ ಮೊಬೈಲ್ ಆಫ್ ಆಗೋದರೊಂದಿಗೆ ಎಲ್ಲವೂ ಅದಲು ಬದಲಾಗುತ್ತೆ.

    ಈ ಪ್ರೀತಿಯನ್ನು ತೀವ್ರವಾಗಿ ಹಚ್ಚಿಕೊಂಡು ಅದು ಕೈ ತಪ್ಪಿದಾಗ ಮಾಮೂಲಿ ಪ್ರೇಮಿಗಳಂತೆಯೇ ನಖಶಿಖಾಂತ ಕಂಗಾಲಾಗಿ ಕೂತಿದ್ದ ಆತನಿಗೆ ಬಾಲ್ಯ ಸ್ನೇಹಿತರಿಬ್ಬರು ಜೊತೆಯಾಗುತ್ತಾರೆ. ಅಲ್ಲಿ ಅವರವರ ವಿಫಲ ಪ್ರೇಮ ಕಥಾನಕಗಳೂ ಬಿಚ್ಚಿಕೊಳ್ಳುತ್ತವೆ. ಈ ಮೂವರದ್ದೂ ಕಥೆ ಬೇರೆ, ವ್ಯಥೆ ಒಂದೇ.

    ಇಂಥಾ ಕಥಾ ವಸ್ತುವನ್ನು ನಿರ್ದೇಶಕ ಕುಶಾಲ್ ಇನ್ನೂ ಒಂದಷ್ಟು ಶ್ರಮ ವಹಿಸಿ ಹ್ಯಾಂಡಲ್ ಮಾಡಿದ್ದರೆ ಅದರ ರುಚಿಯೇ ಬೇರೆಯದ್ದಿರುತ್ತಿತ್ತು. ಆದರೂ ಅವರು ನಿರೂಪಣೆಯಲ್ಲಿ ಹೊಸತನ ಕಾಯ್ದುಕೊಂಡಿದ್ದಾರೆ. ಅಲ್ಲಲ್ಲಿ ಕೊಂಚ ಪೇಲವ ಅನ್ನಿಸಿದರೂ ಪ್ರೇಕ್ಷಕರಿಗೆ ಹೊಸಾದೊಂದು ಭಾವ ಹುಟ್ಟಿಸುವಲ್ಲಿಯೂ ಅವರು ಸಫಲರಾಗಿದ್ದಾರೆ.

    ಈ ಹಿಂದೆ ದಯವಿಟ್ಟು ಗಮನಿಸಿ ಚಿತ್ರದಲ್ಲಿ ನಟಿಸಿದ್ದ ಅವಿನಾಶ್ ಗೆ ಇಲ್ಲಿಯೂ ಬೇರೆಯದ್ದೇ ಪಾತ್ರ ಸಿಕ್ಕಿದೆ. ನಾಯಕನಗಿ ಅವರದ್ದು ಪ್ರಾಮಾಣಿಕ ಪ್ರಯತ್ನ. ನಾಯಕನ ಸ್ನೇಹಿತರಾಗಿ ನಟಿಸಿರುವ ಚಿಕ್ಕಣ್ಣ ಮತ್ತು ಶಠಮರ್ಷಣ ಅವಿನಾಶ್ ಗಮನ ಸೆಳೆಯುತ್ತಾರೆ. ನಾಯಕಿ ಕೃಷಿ ತಾಪಂಡ ಗ್ಲಾಮರಸ್ ಆಗಿಯೂ ನಟನೆಯಲ್ಲಿಯೂ ಆವರಿಸಿಕೊಳ್ಳುತ್ತಾಳೆ.

    ಇಂಥಾದ್ದೊಂದು ಕಮರ್ಷಿಯಲ್ ವೆರೈಟಿಯ ಪ್ರೇಮ ಕಥೆಯಲ್ಲಿಯೂ ನಾಯಕನನ್ನು ಪುಸ್ತಕ ಪ್ರೇಮಿಯಾಗಿ ತೋರಿಸುತ್ತಲೇ ಕೆಲವಾರು ಸೆನ್ಸಿಟಿವ್ ಅಂಶಗಳತ್ತ ಫೋಕಸ್ ಮಾಡಿರೋದು ನಿರ್ದೇಶಕರ ಸೂಕ್ಷ್ಮವಂತಿಕೆಗೆ ಸಾಕ್ಷಿ. ಛಾಯಾಗ್ರಹಣ ಸೇರಿದಂತೆ ಎಲ್ಲವೂ ಕಥೆಗೆ ಸಾಥ್ ನೀಡಿವೆ.