Tag: ಚಿತ್ರ ತಂಡ

  • ಸುನೀಲ್ ಶೆಟ್ಟಿ ಫಿಟ್ನೆಸ್‍ಗೆ ಕಿಚ್ಚ ಫಿದಾ

    ಸುನೀಲ್ ಶೆಟ್ಟಿ ಫಿಟ್ನೆಸ್‍ಗೆ ಕಿಚ್ಚ ಫಿದಾ

    ಬೆಂಗಳೂರು: ಪೈಲ್ವಾನ್ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರು ತಮ್ಮ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಅಷ್ಟು ಫಿಟ್ ಆಗಿ ಇರೋದು ಅದ್ಭುತ ಎಂದು ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ.

    ಪಬ್ಲಿಕ್ ಟಿವಿಯ ಸಂದರ್ಶದ ವೇಳೆ ಮಾತನಾಡುತ್ತಾ ಸುದೀಪ್ ಸುನೀಲ್ ಶೆಟ್ಟಿ ಫಿಟ್ನೆಸ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುನೀಲ್ ಶೆಟ್ಟಿ ಅವರು ತಮ್ಮ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿದ್ದಾರೆ. ಈ ವಯಸ್ಸಿನಲ್ಲೂ ಅವರು ಅಷ್ಟು ಫಿಟ್ ಆಗಿ ಇರೋದು ಅದ್ಭುತ. ಅದಕ್ಕೆ ಅವರ ಪಾತ್ರದಲ್ಲಿ ಅವರು ಸೂಪರ್ ಆಗಿ ಕಾಣಿಸುತ್ತಾರೆ. ನಮಗಿಂತ ಅವರು ಸ್ಕ್ರೀನ್ ಮೇಲೆ ಚೆನ್ನಾಗಿ ಕಾಣುತ್ತಾರೆ. ಅವರ ಫಿಟ್ನೆಸ್ ಅನ್ನು ನಿಜಕ್ಕೂ ಮೆಚ್ಚಬೇಕು ಎಂದಿದ್ದಾರೆ. ಇದನ್ನೂ ಓದಿ:ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ, ಇದು ಜೋಕ್ ಅಲ್ಲ: ಸುದೀಪ್

    ಅವರಷ್ಟೇ ಅಲ್ಲ ನಟ ಶರತ್ ಕುಮಾರ್ ಅವರು ಕೂಡ ತುಂಬಾ ಚೆನ್ನಾಗಿ ಫಿಟ್ನೆಸ್ ಇಟ್ಟುಕೊಂಡು ಬಂದಿದ್ದಾರೆ, ಅವರನ್ನೂ ಮೆಚ್ಚಲೇಬೇಕು. ಮೊದಲು ನಾವು ಸುನೀಲ್ ಶೆಟ್ಟಿ ಹಾಗೂ ಶರತ್ ಕುಮಾರ್ ಇವರಿಬ್ಬರಲ್ಲಿ ಒಬ್ಬರನ್ನು ಸಿನಿಮಾದಲ್ಲಿ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೆವು. ಒಂದು ಹೊಸ ಪ್ರಯತ್ನ ಮಾಡೋಣ ಎಂದು ಸುನೀಲ್ ಶೆಟ್ಟಿ ಅವರನ್ನು ಕನ್ನಡಕ್ಕೆ ಕರೆತಂದೆವು. ಸುನೀಲ್ ಶೆಟ್ಟಿ ಅವರನ್ನು ಜಾಹೀರಾತಿನಲ್ಲಿ ನೋಡಿ ಇವರು ನಮ್ಮ ಸಿನಿಮಾ ಪಾತ್ರಕ್ಕೆ ಸರಿಯಾಗಿ ಒಪ್ಪುತ್ತಾರೆ ಎಂದು ಆಯ್ಕೆ ಮಾಡಿದೆವು ಎಂದು ತಿಳಿಸಿದರು. ಇದನ್ನೂ ಓದಿ:ಪೈರಸಿ ಮಾಡಿ ಅರೆಸ್ಟ್ ಆದ ಆರೋಪಿ ಬಗ್ಗೆ ಪೈಲ್ವಾನ್ ಪ್ರತಿಕ್ರಿಯೆ

    ಇದೇ ವೇಳೆ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಮತ್ತು ರವಿಶಂಕರ್ ಬಗ್ಗೆ ಮಾತನಾಡಿ, ಇಬ್ಬರು ಒಳ್ಳೆಯ ಕಲೆ ಇರುವ ವ್ಯಕ್ತಿಗಳು. ಅವರವರ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಈ ಇಬ್ಬರು ಕಲಾವಿದರೂ ನನ್ನ ಕೆಂಪೇಗೌಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯ ಆದರು ಎಂದು ಹೇಳಲು ಬಹಳ ಖುಷಿಯಾಗುತ್ತೆ ಎಂದು ಹೇಳಿದರು ಮತ್ತು ಪೈಲ್ವಾನ್ ರೀತಿ ಇನ್ನೊಂದು ಸಿನಿಮಾ ಬಂದರೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ:ನಾನು ಟ್ವಿಟ್ಟರನ್ನು ದುರುಪಯೋಗ ಪಡಿಸಿಕೊಂಡಿಲ್ಲ: ಸುದೀಪ್

    ಇದೇ ವೇಳೆ ಪೈಲ್ವಾನ್ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ ಕಿಚ್ಚ, ನನಗೆ ತುಂಬಾ ಖುಷಿ ಇದೆ. ಏಕೆಂದರೆ ಸಿನಿಮಾ ನೋಡಿದವರು ಉಪಯೋಗಿಸುತ್ತಿರುವ ಪದಗಳು, ಅಕ್ಷರಗಳು ಹೊಗಳಿಕೆಯಾಗಿ ಬರುತ್ತಿರುವುದನ್ನು ಕೇಳುವುದಕ್ಕೆ ಖುಷಿಯಾಗುತ್ತಿದೆ. ಇದರಲ್ಲಿ ನಮ್ಮ ಶ್ರಮ ತುಂಬಾ ಇದೆ. ಎಲ್ಲರದರ ನಡುವೆ ಜನರು ಚಿತ್ರಮಂದಿರ ಮುಂದೆ ಹೋಗಿ ಸೆಲೆಬ್ರೇಶನ್ ಮಾಡಿದಾಗ ಅದನ್ನು ನೋಡುವುದಕ್ಕೆ ನನಗೆ ಖುಷಿ ಹಾಗೂ ಹೆಮ್ಮೆ ಆಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಚೆನ್ನಾಗಿದೆ. ಆದರೆ ಇನ್ನೂ ಚೆನ್ನಾಗಿ ಆಗಬೇಕಿತ್ತು. ಕೆಲವು ಅಡಚಣೆಗಳು ಆಗುತ್ತಿರುತ್ತಿವೆ. ಈಗ ಮನೆಯಲ್ಲಿಯೇ ಕುಳಿತುಕೊಂಡು ಸಿನಿಮಾ ನೋಡುವಂತೆ ಆಗಿದೆ. ಆದರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿರುವ ಜನರ ಬಗ್ಗೆ ನನಗೆ ಖುಷಿಯಾಗುತ್ತದೆ. ಬ್ಯುಸಿನೆಸ್ ಪ್ರಕಾರ ಸಿನಿಮಾ ಇನ್ನೂ ಚೆನ್ನಾಗಿ ಆಗಬೇಕಿತ್ತು. ಈಗ ಸಿನಿಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ ಎಂದರು.

  • ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ, ಇದು ಜೋಕ್ ಅಲ್ಲ: ಸುದೀಪ್

    ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ, ಇದು ಜೋಕ್ ಅಲ್ಲ: ಸುದೀಪ್

    ಬೆಂಗಳೂರು: ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಸೀನ್‍ಗೆ 28 ದಿನ ಶೂಟಿಂಗ್ ಮಾಡಿದ್ದೇವೆ. ಕಷ್ಟವಾದರೂ, ಪೆಟ್ಟುಬಿದ್ದರೂ ಸಹಿಸಿಕೊಂಡು ಅಭಿನಯಿಸಿದ್ದೇನೆ. ಇದು ಜೋಕ್ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಸಂದರ್ಶದಲ್ಲಿ ಮಾತನಾಡಿದ ಅವರು, ಬಾಕ್ಸಿಂಗ್ ಕಷ್ಟವಾಗಿತ್ತು ನನಗೆ, ತುಂಬಾ ಪೆಟ್ಟಾಗುತ್ತಿತ್ತು. ಅದನ್ನೆಲ್ಲ ಸಹಿಸಿಕೊಂಡು ಕ್ಯಾಮೆರಾ ಮುಂದೆ ಅಭಿನಯ ಮಾಡಬೇಕಿತ್ತು. ಅವರು ಹೊಡೆದರೆ ಹೊಡೆದ ಹಾಗೆ ಅನಿಸಿಕೊಳ್ಳಬೇಕು. ಆ ನೋವನ್ನು ತೋರಿಸಬೇಕು. ಅದು ಬರೀ ಅಭಿನಯವಾಗಿರಲಿಲ್ಲ. ನಿಜವಾಗಿಯೂ ಸುಸ್ತಾಗುತ್ತಿತ್ತು. ಬಾಕ್ಸಿಂಗ್ ಸೀನ್‍ಗೆ ನಾವು 28 ದಿನ ಶೂಟಿಂಗ್ ಮಾಡಿದ್ದೇವೆ. ಇದು ಜೋಕ್ ಅಲ್ಲ. 28 ದಿನ ಸತತವಾಗಿ ರಿಂಗಿಗೆ ಹೋಗಿ, ಅಭ್ಯಾಸ ಮಾಡಿ, ಫೈಟ್ ಮಾಡಿ ತುಂಬಾ ಶ್ರಮಪಟ್ಟಿದ್ದೇವೆ. ಒಂದೊಂದು ಶಾಟ್ ತೆಗೆಯಲು ತುಂಬಾ ಸಮಯ ತೆಗೆದುಕೊಂಡು ಶೂಟಿಂಗ್ ಮಾಡಿದ್ದೇವೆ ಎಂದರು.  ಇದನ್ನೂ ಓದಿ:ಎಲ್ಲಿ ಹೋದ್ರೂ ಜನ ಪ್ರೀತಿಸ್ತಾರೆ, ನನಗಷ್ಟೇ ಸಾಕು- ಸ್ಟಾರ್‌ಡಮ್ ಬಗ್ಗೆ ಕಿಚ್ಚನ ಮಾತು

    ಇವತ್ತು ಅದಷ್ಟೂ ಶ್ರಮ ಜನಗಳ ಕಣ್ಣಿಗೆ ಕಾಣಿಸಿದೆ. ಮೊದಲೇ ನಾವು ಹೇಳಿರುವ ಹಾಗೆ ರಿಯಲ್ ಫೀಲ್ ಬರುವಂತೆ ಬಾಕ್ಸಿಂಗ್ ಸೀನ್‍ಗಳನ್ನು ತೆಗೆದಿದ್ದಾರೆ. ಅದಕ್ಕೊಂದು ಗ್ರಾಫ್ ಇದೆ, ಅದು ಸುಮ್ಮನೆ ಮಾಡಿಲ್ಲ. ನಾಯಕ ಯಾಕೆ ಬಾಕ್ಸಿಂಗ್ ಮಾಡುತ್ತಿದ್ದಾನೆ? ಯಾಕೆ ಫೈಟ್ ಮಾಡುತ್ತಿದ್ದಾನೆ ಎನ್ನುವ ಉದ್ದೇಶ ಚೆನ್ನಾಗಿತ್ತು. ಅಲ್ಲಿ ನಿರ್ದೇಶಕರು ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಬಾಕ್ಸಿಂಗ್ ಸೀನ್ ಬಗ್ಗೆ ಹೇಳಿದರು. ಇದನ್ನೂ ಓದಿ:ಪೈರಸಿ ಮಾಡೋದಕ್ಕೆ ತುಂಬಾ ಶ್ರಮಪಟ್ಟಿದ್ದಾರೆ, ದೇವ್ರು ಅವ್ರನ್ನು ಚೆನ್ನಾಗಿ ಇಟ್ಟಿರಲಿ: ಸುದೀಪ್

    ಅವಿನಾಶ್ ಅವರ ಜೊತೆಗೆ ನನ್ನ ಮಾತುಕಥೆ ಸೀನ್ ಚೆನ್ನಾಗಿತ್ತು. ನಿಜವಾಗಿಯೂ ಅದೊಂದು ಬ್ಯುಟಿಫುಲ್ ಸೀನ್. ಅದು ನನಗೆ ತುಂಬಾ ಇಷ್ಟ. ಆ ಸೀನ್‍ನಲ್ಲಿ ಬರುವ ಡೈಲಾಗ್‍ಗಳು, ತೆಗೆದಿರುವ ರೀತಿ ಬಹಳ ಚೆನ್ನಾಗಿದೆ. ಅದರಲ್ಲೂ ನನ್ನನ್ನು ತಲೆಯಲ್ಲಿ ಇಟ್ಟುಕೊಂಡು ಈ ಸೀನ್ ಡೈಲಾಗ್ ಬರೆದಿದ್ದಾರೆ. ನಾನು ಹೇಗೆ ಮಾತನಾಡುತ್ತೇನೆ ಅದೇ ರೀತಿ ಡೈಲಾಗ್ ಬರೆದಿದ್ದಾರೆ. ನಾನು ಸಹಜವಾಗಿ ಮಾತನಾಡುತ್ತಿದ್ದಾಗ ಬಳಸುವ ಪದಗಳನ್ನೇ ಡೈಲಾಗ್ ಮಾಡಿದ್ದಾರೆ. ಆದ್ದರಿಂದ ಆ ಸೀನ್ ತುಂಬಾ ಚೆನ್ನಾಗಿ ಮೂಡಿಬಂತು ಎಂದು ತಿಳಿಸಿದರು.

    ಸಿನಿಮಾದಲ್ಲಿ ಬಹುತೇಕ ಸೀನ್ ಡೈಲಾಗ್ ಕೇಳಿದರೆ ಫ್ಯಾನ್ಸ್ ಬಗ್ಗೆ ಹೇಳಿದ ಹಾಗೆ ಅನಿಸುತ್ತದೆ ಎಂದು ಪ್ರಶ್ನಿಸಿದಾಗ, ಹೌದು ಸಂಬಂಧಿಸಬೇಕು ಸ್ಪಂದಿಸಬೇಕು. ಫ್ಯಾನ್ಸ್ ಬಗ್ಗೆ ಬಿಡಿ, ಒಂದು ಭಾವಾನಾತ್ಮಕ ಸೀನ್ ಇದೆ ಅಂದುಕೊಳ್ಳಿ. ತಂದೆ ಮಗಳ ಸೀನ್ ಇದೆ ಅಂದಾಗ ಅದರಲ್ಲಿ ಬರುವ ಡೈಲಾಗ್‍ಗಳು, ಛಾಯಾಗ್ರಹಣ ಪ್ರೇಕ್ಷಕರಿಗೆ ಕನೆಕ್ಟ್ ಆದರೆ ತಾನೆ ಇಷ್ಟ ಆಗೋದು. ಅದೇ ರೀತಿ ನಾವು ಹೇಳುವ ಡೈಲಾಗ್, ಅಭಿನಯ ಅಭಿಮಾನಿಗಳಿಗೆ ಇಷ್ಟವಾದರೆ ತಾನೆ ಅವರು ವಿಶಿಲ್ ಹೊಡೆದು ಖುಷಿ ಪಡೋದು. ಇಷ್ಟವಾಗಿಲ್ಲ ಎಂದರೆ ಚಿತ್ರಮಂದಿರಕ್ಕೆ ಬಂದು ಸುಮ್ಮನೆ ಕೂತು ಸಿನಿಮಾ ನೋಡಿಕೊಂಡು ಹೋಗುತ್ತಾರೆ. ಅದೇ ರೀತಿ ಪೈಲ್ವಾನ್ ಚಿತ್ರದಲ್ಲಿ ಯಾರ‍್ಯಾರಿಗೆ ಲೈನ್ಸ್ ಕನೆಕ್ಟ್ ಆಗಬೇಕು ಎನ್ನುವುದನ್ನು ತಲೆಯಲ್ಲಿ ಇಟ್ಟುಕೊಂಡು ಡೈಲಾಗ್ ಬರೆದಿದ್ದೇವೆ ಎಂದು ಉತ್ತರಿಸಿದರು. ಇದನ್ನೂ ಓದಿ:ದುಡ್ಡು ನನಗೆ ಮುಖ್ಯವಲ್ಲ, ಅದು ನನ್ನ ವ್ಯಕ್ತಿತ್ವವೂ ಅಲ್ಲ: ಕಿಚ್ಚ

    ಸಿನಿಮಾದಲ್ಲಿ ಮದುವೆ ಮನೆಗೆ ಬಾಡಿಗಾರ್ಡ್‌ಗಳ ಜೊತೆ ನನ್ನ ಎಂಟ್ರಿ ಸೀನ್ ಕ್ರೆಡಿಟ್ ಕೃಷ್ಣಾ ಅವರಿಗೆ ಕೊಡಬೇಕು. ಅದು ಸಂಪೂರ್ಣ ಕೃಷ್ಣಾ ಅವರ ಐಡಿಯಾ. ಅದಕ್ಕೆ ಪ್ರಿಯಾ ಕೂಡ ಟ್ವೀಟ್ ಮಾಡಿದ್ದರು. ಮನೆಯಲ್ಲಿ ಇದ್ದವರಿಗೆ ಆ ಸೀನ್ ಅಷ್ಟು ಇಷ್ಟವಾಗಿರುವಾಗ, ಹೊರಗಿನವರಿಗೆ ಇನ್ನೆಷ್ಟು ಇಷ್ಟವಾಗಿರಬೇಕು ಅಂತ ಯೊಚಿಸಬೇಕು. ಆ ಸೀನ್ ತುಂಬಾ ಚೆನ್ನಾಗಿ ತೆಗೆದಿದ್ದಾರೆ. ಸೀನ್‍ನಲ್ಲಿ ಇರುವ ಫೀಲ್ ಎಲ್ಲರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಆ ಸೀನ್ ತುಂಬಾ ಚೆನ್ನಾಗಿ ತೆಗೆದಿದ್ದಾರೆ. ನಾನು ಅಂತ ಅಲ್ಲ, ಆ ಸ್ಥಾನದಲ್ಲಿ ಯಾವ ಹೀರೋ ಇದ್ದರೂ ಅದನ್ನು ಚಿತ್ರಿಸಿರುವ ರೀತಿ ಚೆನ್ನಾಗಿರುವ ಕಾರಣಕ್ಕೆ ಅದನ್ನು ನೋಡಿದ ತಕ್ಷಣ ಅದರಲ್ಲಿರುವ ಫೀಲ್ ಪ್ರೇಕ್ಷಕರಿಗೆ ತಲುಪುತ್ತದೆ ಎಂದು ಸಿನಿಮಾ ಮೇಕಿಂಗ್ ಬಗ್ಗೆ ಕಿಚ್ಚ ಹಂಚಿಕೊಂಡರು.

  • ರೀ- ರಿಲೀಸ್ ಆಗ್ತಿದೆ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ

    ರೀ- ರಿಲೀಸ್ ಆಗ್ತಿದೆ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ

    ಗಳಿಕೆಯಾದ ಹಣ ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮೀಸಲು

    ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೆರವು ನೀಡಲು ಚಿತ್ರತಂಡ ನಿರ್ಧರಿಸಿದೆ.

    ಶನಿವಾರದಂದು ನಡೆದ ಮಂಡ್ಯ ಬಸ್ ದುರಂತದಿಂದ ಅಂಬರೀಶ್ ಅವರು ಆಘಾತಕ್ಕೊಳಗಾಗಿದ್ದರು. ಹಾಗೆಯೆ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸಂತಾಪ ಸೂಚಿಸಿದ್ದರು. ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಅಂಬರೀಶ್ ಅವರು ಬಯಸಿದ್ದರು. ಆದರೆ ವಿಪರ್ಯಾಸವೆಂದರೇ ಮಂಡ್ಯ ಬಸ್ ದುರಂತದ ದಿನವೇ ರೆಬೆಲ್ ಸ್ಟಾರ್ ನಿಧನರಾದರು.

    `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಉಸ್ತವಾರಿಯನ್ನು ಕಿಚ್ಚ ಸುದೀಪ್, ಜಾಕ್ ಮಂಜು ಹಾಗೂ ಗುರದತ್ತ್ ಗಾಣಿಗ ಅವರು ವಹಿಸಿಕೊಂಡಿದ್ದರು. ಅಂಬರೀಶ್ ಅವರ ಆಸೆಯನ್ನು ಪೂರ್ತಿಗೊಳಿಸಬೇಕು ಎಂದು `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ ಸಿನಿಮಾವನ್ನು ರೀ- ರಿಲೀಸ್ ಮಾಡಲು ಮುಂದಾಗಿದೆ. ಚಿತ್ರ ಪ್ರದರ್ಶನದಿಂದ ಬಂದ ಹಣವನ್ನು ಮಂಡ್ಯ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ನೆರವು ನೀಡಲು ಚಿತ್ರತಂಡ ತೀರ್ಮಾನಿಸಿದೆ.

    ಹೀಗಾಗಿ ಇದೇ ಶುಕ್ರವಾರದಂದು ಮಂಡ್ಯ, ಬೆಂಗಳೂರು, ಮೈಸೂರು ಹಾಗೂ ಅಮೇರಿಕದಲ್ಲಿ ರೆಬೆಲ್ ಸ್ಟಾರ್ ಅಭಿನಯದ ಕೊನೆಯ ಚಿತ್ರ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾವನ್ನು ರೀ-ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಮೂಲಕ ಅಂಬರೀಶ್ ಅವರ ಆಸೆಯನ್ನು ತೀರಿಸಿ ಜನರಿಗೆ ಒಳ್ಳೆಯದನ್ನ ಮಾಡುವ ಚಿತ್ರತಂಡದ ಕೆಲಸವನ್ನು ಎಲ್ಲರು ಮೆಚ್ಚಲೇಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.

    ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.

    ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

    ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

    ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.