Tag: ಚಿತ್ರಹಿಂಸೆ

  • ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಗೆ ಚಿತ್ರಹಿಂಸೆ – 4 ಪೊಲೀಸ್ ಅಧಿಕಾರಿಗಳು ಅಮಾನತು

    ಪೊಲೀಸ್ ಕಸ್ಟಡಿಯಲ್ಲಿ ಮಹಿಳೆಗೆ ಚಿತ್ರಹಿಂಸೆ – 4 ಪೊಲೀಸ್ ಅಧಿಕಾರಿಗಳು ಅಮಾನತು

    ಚೆನ್ನೈ: ಕಳ್ಳತನದ ಆರೋಪದ ಮೇಲೆ ಮಹಿಳೆಯೊಬ್ಬಳಿಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದಕ್ಕೆ 4 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ತಮಿಳುನಾಡಿನಲ್ಲಿ ಮತ್ತೊಂದು ಕಸ್ಟಡಿ ಚಿತ್ರಹಿಂಸೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಾರಿ ತೂತುಕುಡಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ತನ್ನ ನೆರೆಹೊರೆಯವರ ಚಿನ್ನಾಭರಣಗಳನ್ನು ಕದ್ದಿದ್ದಾಳೆ ಎಂಬ ಶಂಕೆಯ ಮೇಲೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂಬ ಆರೋಪ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಬ್ಇನ್ಸ್‌ಪೆಕ್ಟರ್ ಮುತ್ತುಮಲೈ ಅವರನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ: ನವಜೋತ್‌ ಸಿಂಗ್‌ ಸಿಧುಗೆ 1 ವರ್ಷ ಜೈಲು ಶಿಕ್ಷೆ

    ಸುಮತಿ (42) ಕಸ್ಟಡಿಯೊಳಗೆ ಚಿತ್ರಹಿಂಸೆಗೊಳಗಾದ ಮಹಿಳೆ. ತೂತುಕುಡಿ ಜಿಲ್ಲೆಯ ಮುತ್ತಯ್ಯಪುರಂ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಈ ಹಿಂದೆ ಪ್ರಭಾಕರನ್ (45) ತಮಗೆ ಸೇರಿದ ಚಿನ್ನಾಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು.

    ಮೇ 4ರಂದು ಮದುವೆ ಮಂಟಪದಲ್ಲಿರುವ ವಧುವಿನ ಕೊಠಡಿಯಲ್ಲಿದ್ದ 4ರಿಂದ 5 ಕೆಜಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಮೇ 7ರಂದು ಸುಮತಿ ಅವರನ್ನು ವಿಚಾರಣೆಗೆ ಕರೆದೊಯ್ದಾಗ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಮುತ್ತಯ್ಯಪುರಂ ಪೊಲೀಸ್ ಅಧಿಕಾರಿಗಳು, ಪೊಲೀಸ್ ಠಾಣೆಯಲ್ಲಿ ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ. ನಂತರ ಸುಮತಿ ತೂತುಕುಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

    ಘಟನೆಯ ನಂತರ ಸುಮತಿ ತೂತುಕುಡಿ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಬಾಲಾಜಿ ಸರವಣನ್ ಅವರಿಗೆ ಅಧಿಕೃತ ದೂರು ದಾಖಲಿಸಿದ್ದಾರೆ. ವಿಚಾರಣೆಯ ನಂತರ, ಸಂತ್ರಸ್ತೆ ಸುಮತಿಯನ್ನು ಎಫ್‍ಐಆರ್ ಅಥವಾ ಔಪಚಾರಿಕ ದೂರು ಇಲ್ಲದೆ ಠಾಣೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

    ದೂರಿನ ಮೇರೆಗೆ ಎಸ್‍ಪಿ ತಕ್ಷಣ ಕ್ರಮ ಕೈಗೊಂಡು ಮೂವರು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ. ಮರ್ಸಿನಾ, ಕಲ್ಪನಾ ಮತ್ತು ಉಮಾ ಮಹೇಶ್ವರಿ. ಮತ್ತೊಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, (ಎಸ್ಪಿ) ಮುತ್ತುಮಲೈ ಅವರನ್ನು ಅಮಾನತುಗೊಳಿಸಿದ್ದಾರೆ.

  • ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಉಡುಪಿ: ಆತ ಆಕೆಯನ್ನ ಮದುವೆಯಾಗಿ ದುಡಿಮೆಗೆಂದು ವಿದೇಶಕ್ಕೆ ಹಾರಿದ್ದ. ತನ್ನ ಹೊಟ್ಟೆಯಲ್ಲೇ ಗಂಡನ ಪ್ರೀತಿ ಬೆಳೆಯುತ್ತಿದ್ದು ಆ ಮಗುವಿನಲ್ಲಿ ತನ್ನ ಗಂಡನನ್ನು ನೋಡಲು ಆಕೆ ಹಾತೊರೆಯುತ್ತಿದ್ದಳು. ಆದರೆ ರಾಕ್ಷಸ ರೂಪಿ ಗಂಡನ ಮನೆಯವರು ಆಕೆಯನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ.

    ಈಗ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಗಂಡ, ಮಾವ, ಅತ್ತೆ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಉಡುಪಿಯ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಂಡನ ಮನೆಯವರ ಹಿಂಸೆ ತಾಳಲಾರದೇ ಮಹಿಳೆ ತವರು ಮನೆ ಸೇರಿದ್ದಾಳೆ.

    ಏನಿದು ಪ್ರಕರಣ?
    ಮಂಗಳೂರಿನ ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಫ್ಲಾಟ್ ನಿವಾಸಿ ಝಿಯಾನಾ ಸಲೀಂ ಚಿಸ್ಪಿ(23) ಚಿತ್ರ ಹಿಂಸೆಗೊಳಗಾದ ಮಹಿಳೆ. 2017 ಜುಲೈ 18 ರಂದು ಝಿಯಾನಾ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ ಎಂಬಾತನೊಂದಿಗೆ ಮದುವೆಯಾಗಿತ್ತು. ಮಂಗಳೂರಿನ ಕಾಂತಿ ಚರ್ಚ್ ಸಭಾಂಗಣದಲ್ಲಿ ಮದುವೆಯಾಗಿದ್ದು, ಮದುವೆಯ ವೇಳೆ ಅವರಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಹಾಕಿದ್ದಾರೆ.

     

    ಮದುವೆಯ ಬಳಿಕ ಗಂಡ ಹೆಂಡತಿ ಒಳ್ಳೆಯ ರೀತಿಯಲ್ಲಿದ್ದರು. ಮನೆಯವರು ಕೂಡಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಆದರೆ ಗಂಡ ಹೊರ ದೇಶಕ್ಕೆ ಹೋದ ನಂತರ ಆರೋಪಿಗಳಾದ ಮಾವ, ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ಝಿಯಾನಾ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.

    40 ದಿನಗಳ ಗರ್ಭಿಣಿಯಾದಾಗ ಆಕೆಗೆ ತಿಳಿಯದಂತೆ ಆರೋಪಿಗಳು ವೈದ್ಯರು ಬರೆದುಕೊಟ್ಟ ಮಾತ್ರೆಯ ಜೊತೆಗೆ ಗರ್ಭಪಾತ ಮಾತ್ರೆಯನ್ನು ಸೇರಿಸಿ ಗರ್ಭಪಾತವಾಗುವಂತೆ ಮಾಡಿಸಿದ್ದಾರೆ. ಝಿಯಾನಾ ಇಷ್ಟೆಲ್ಲಾ ಆದ ಮೇಲೆ ಈಗ ಮಂಗಳೂರಿನಲ್ಲಿರುವ ಪೋಷಕರ ಮನೆಗೆ ಹೋಗಿದ್ದಾರೆ.

    ಗಂಡ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ, ತಾಹಿರಾ ಬಾನು, ಸಯೀದಾ, ಆಲಿಶಾ, ಸುನೈನಾ, ಗಫೂರ್ ಅಬ್ದುಲ್ ಜಬ್ಬರ್, ಅಜೀಜುನ್ನೀಸಾ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹುಬ್ಬಳ್ಳಿ: ಶಾಲಾ ಬಾಲಕನಿಗೆ ತಲೆಬೋಳಿಸಿದ ಶಿಕ್ಷಕಿ

    ಹುಬ್ಬಳ್ಳಿ: ಶಿಕ್ಷಕಿಯೊಬ್ಬರು ಶಾಲಾ ಬಾಲಕನಿಗೆ ವಿದ್ಯಾರ್ಥಿಗಳ ಸಮ್ಮುಖದಲ್ಲೇ ತಲೆ ಬೋಳಿಸಿ ಅವಮಾನವೀಯ ಘಟನೆ ಹುಬ್ಬಳ್ಳಿಯ ನೆಹರು ನಗರದ ಸೇಂಟ್ ಪಾಲ್ ಶಾಲೆಯಲ್ಲಿ ಬುಧವಾರ ನಡೆದಿದೆ.

    ಆರನೇ ತರಗತಿಯ ವಿದ್ಯಾರ್ಥಿ ಮುಖ್ಯ ಶಿಕ್ಷಕಿಯಿಂದ ಚಿತ್ರಹಿಂಸೆಗೆ ಒಳಗಾದ ಬಾಲಕ. ಕೂದಲು ಬಿಟ್ಟು ಜಡೆ ಹಾಕಿಕೊಂಡು ಬರುತ್ತಿದ್ದನು. ಇದರಿಂದ ಮುಖ್ಯ ಶಿಕ್ಷಕಿ ಲೋರಿಟಾ ವೇದಮುಕ್ತಿ ಎಂಬವರು ಬುಧವಾರ ಮಧ್ಯಾಹ್ನ ಶಾಲಾ ಆವರಣದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಅರ್ಧ ತಲೆ ಬೋಳಿಸಿ ಅವಮಾನ ಮಾಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಶ್ಯಾಮ್ಯೂಯಲ್ ಪಾಲಕರು, ಮನೆಯಲ್ಲಿ ಸೂತಕವಿದ್ದ ಕಾರಣ ನಮ್ಮ ಮಗನಿಗೆ ಕಟಿಂಗ್ ಮಾಡಿಸಿದ್ದಿಲ್ಲ. ಅಷ್ಟರಲ್ಲಿ ಶಾಲೆಯ ಶಿಕ್ಷಕಿಯೊಬ್ಬರು ನಮ್ಮ ಮಗನ ತಲೆ ಬೋಳಿಸಿ ಅವಮಾನಗೊಳಿಸಿದ್ದಾರೆ. ಚಿಕ್ಕಮಕ್ಕಳ ಜೊತೆಯಲ್ಲಿ ಅಮಾನವಿಯತೆಯಿಂದ ನಡೆದುಕೊಳ್ಳುವ ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಶಾಲೆಯಲ್ಲಿ ನಡೆದ ಘಟನೆಯಿಂದ ನಮ್ಮ ಮಗ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.

    ನಗರದಲ್ಲಿ ನಮ್ಮ ಶಾಲೆ ಶಿಸ್ತಿಗೆ ಹೆಸರಾಗಿದ್ದು, ನಾವು ಶ್ಯಾಮ್ಯೂಯಲನಿಗೆ ಒಂದು ತಿಂಗಳಿನಿಂದ ತಲೆ ಕೂದಲನ್ನು ಕತ್ತರಿಸುವಂತೆ ತಿಳಿಸಿದ್ದೇವು. ಅಷ್ಟೇ ಅಲ್ಲದೇ ಅವನ ಪಾಲಕರಿಗೂ ಈ ಕುರಿತು ತಿಳಿಸಲಾಗಿತ್ತು. ಕೊನೆಗೆ ಬುಧವಾರ ಎಲ್ಲ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ಯಾಮ್ಯೂಯಲ್ ತಲೆ ಬೋಳಿಸಲಾಗಿದೆ. ಈ ರೀತಿಯ ಘಟನೆಗಳು ನಮ್ಮಲ್ಲಿ ಈ ಹಿಂದೆಯೂ ನಡೆದಿದೆ. ಆದರೆ ಇದನ್ನು ಶ್ಯಾಮುಯಲ್ ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ ಎಂದು ಶಾಲೆಯ ಹೆಡ್ ಕ್ಲರ್ಕ್ ಜ್ಯೋತಿ ಹೇಳುತ್ತಾರೆ.