Tag: ಚಿತ್ರತಂಡ

  • RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    RRR ಚಿತ್ರದಲ್ಲಿ ಕರ್ನಾಟಕದ ಪ್ರಕೃತಿ ರೆಡ್ಡಿ ಹಾಡಿದ ಕೊಮ್ಮ ಉಯ್ಯಾಲ ಹಾಡು ರಿಲೀಸ್

    ಗಾಗಲೇ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ ಆರ್‌ಆರ್‌ಆರ್ ಚಿತ್ರತಂಡವು ವೀಕೆಂಡ್‌ನಲ್ಲಿ ಮತ್ತೊಂದು ಗುಡ್‌ನ್ಯೂಸ್ ಕೊಟ್ಟಿದೆ.

    ವೀಕೆಂಡ್ ಖುಷಿಯಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರದ ಆರಂಭದಲ್ಲೇ ಬರುವ `ಕೊಮ್ಮ ಉಯ್ಯಾಲ’ ಗೀತೆಯನ್ನು ಬಿಡುಗಡೆ ಮಾಡಿದೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು, ಮಲಯಾಳಂ ಭಾಷೆಗಳಲ್ಲೂ ಯುಟ್ಯೂಬ್‌ನಲ್ಲಿ ಸಾಂಗ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದಿದೆ. ಇದನ್ನೂ ಓದಿ: ಆಲಿಯಾ- ರಣಬೀರ್ ಮದುವೆಗೆ ರಾಕಿ ಸಾವಂತಗಿಲ್ಲ ಆಹ್ವಾನ: ರಾಕಿ ಆ ಬಯಕೆ ಈಡೇರಲೇ ಇಲ್ಲ

    RRR NEW SONG ONE

    ಆರ್‌ಆರ್‌ಆರ್ ಚಿತ್ರತಂಡ ಈಗಾಗಲೇ ಬಿಡುಗಡೆ ಮಾಡಿರುವ `ನಾಟು ನಾಟು’ ಸಾಂಗ್ 5 ಭಾಷೆಗಲ್ಲೂ ಸಖತ್ ಸೌಂಡ್ ಮಾಡಿದೆ. ರಾಮ್‌ಚರಣ್ ಹಾಗೂ ಜ್ಯೂ. ಎನ್‌ಟಿಆರ್ ಈ ಹಾಡಿಗೆ ಹಾಕಿರುವ ಜಬರ್ದಸ್ತ್ ಸ್ಟೆಪ್‌ಗಳು ಅಭಿಮಾನಿಗಳನ್ನು ಹುಚ್ಚೆಂದು ಕುಣಿಯುವಂತೆ ಮಾಡಿದೆ.

    ಇದೀಗ ಪ್ರತಿಯೊಬ್ಬರಿಗೂ ಇಷ್ಟವಾಗುವಂತ ಕೊಮ್ಮಾ ಉಯ್ಯಾಲ ಗೀತೆಯನ್ನು 5 ಭಾಷೆಗಳಲ್ಲೂ ಬಿಡುಗಡೆ ಮಾಡಿದ್ದು, ಮೆಚ್ಚುಗೆ ಗಳಿಸಿದೆ. ಅಜಾದ್ ವರದರಾಜ್ ಅವರು ಬರೆದಿರುವ ಈ ಸಾಂಗ್ ಅನ್ನು ಎಂ.ಎಂ.ಕೀರವಾಣಿ ಅವರ ಸಂಗೀತ ಸಂಯೋಜನೆಯಲ್ಲಿ ಖ್ಯಾತ ಗಾಯಕಿ ಪ್ರಕೃತಿ ರೆಟ್ಟಿ ಹಾಡಿ ಮಿಂಚಿದ್ದಾರೆ. 2.49 ನಿಮಿಷದ ಗೀತೆ ಎಲ್ಲರಿಗೂ ಅಚ್ಚುಮೆಚ್ಚಾಗಿದೆ. ಇದನ್ನೂ ಓದಿ : ಪೂಜಾ ಹೆಗ್ಡೆ 1 ಕೋಟಿ ಸಂಭಾವನೆ ಪಡೆದ ಹಾಡಿನಲ್ಲಿ ಏನಿದೆ?: ಫನ್ ಅಂಡ್ ಫ್ರಸ್ಟ್ರೇಷನ್ 

    ಹಸಿರು ಪ್ರಕೃತಿಯ ಅನಾವರಣದಿಂದ ಆರಂಭವಾಗುವ ಈ ಗೀತೆಗೆ ನುಡಿಸಿರುವ ವಾದ್ಯಗಳು ಹಾಗೂ ವಾತಾವರಣ ಅಪ್ಪಟ ಜನಪದ ಶೈಲಿಯಿಂದ ಕೂಡಿದಂತಿದೆ. ಕಾಡುಜನರ ಮುಗ್ಧ ಮನಸ್ಥಿತಿಯನ್ನೂ ಮುಖಭಾವದಲ್ಲಿ ಅರಳಿಸಿದ್ದಾರೆ. ಅಲ್ಲಲ್ಲಿ ಚಿತ್ರದ ಸನ್ನಿವೇಶಗಳನ್ನು ಹಿಡಿದಿದ್ದರೂ ಪ್ರಕೃತಿ ಸೌಂದರ್ಯವನ್ನೇ ಹೆಚ್ಚಾಗಿ ಕೇಂದ್ರೀಕರಿಸಿದೆ. ವಾದ್ಯಕ್ಕೆ ದನಿಗೂಡಿಸಿದಂತೆ ಕೇಳಿಬರುವ ಹಕ್ಕಿಗಳ ಚಿಲಿಪಿಲಿ ನಾದ ಪ್ರಕೃತಿ ಪ್ರಿಯರನ್ನೂ ಸೆಳೆಯುತ್ತದೆ.

    RRR NEW SONG (1)

    ತೆಲುಗಿನಲ್ಲಿ `ಕೋಮ್ಮಾ ಉಯ್ಯಾಲಾ ಕೋನಾ ಜಂಪಾಲ, ಅಮ್ಮಾ ಉಳ್ಳೋ ನೇನು ರೋಜು ವೋಗಾಲ ರೋಜು ವೋಗಾಲ’, ಕನ್ನಡದಲ್ಲಿ `ಕೊಂಬೆ ಉಯ್ಯಾಲೆ, ಕಾಡೆ ಹೊಂಬಾಳೆ, ಅಮ್ಮನ ಮಡಿಲೆನಗೆ ಲಾಲಿ ಸುವ್ವಾಲಿ’ ಹಾಗೂ ಹಿಂದಿ ಭಾಷೆಯಲ್ಲಿ `ಅಂಬರ್‌ಸೆ ತೋಡ, ಸೂರಜ್‌ಕೋ ಪ್ಯಾರಾ’ ಶೀರ್ಷಿಕೆಯೊಂದಿಗೆ ಮೂಡಿ ಬಂದಿರುವ ಈ ಗೀತೆ ಲಕ್ಷಾಂತರ ಅಭಿಮಾನಿಗಳಿಂದ ಬೇಶ್ ಎನಿಸಿಕೊಂಡಿದೆ. ಇದನ್ನೂ ಓದಿ : ಕೆಜಿಎಫ್-2 : ಎರಡನೇ ದಿನಕ್ಕೆ 240 ಕೋಟಿ ಬಾಚಿದ ರಾಕಿ ಭಾಯ್ : ಗ್ರೌಂಡ್ ರಿಪೋರ್ಟ್

    ಕೊಮ್ಮ ಉಯ್ಯಲ ಹಾಡನ್ನು ಬಳ್ಳಾರಿಯ ಪ್ರಕೃತಿ ರೆಡ್ಡಿ ಹಾಡಿದ್ದಾಳೆ. 2010 ಜುಲೈ 21ರಂದು ಬಳ್ಳಾರಿಯಲ್ಲಿ ಜನಿಸಿದ ಈಕೆ ತೆಲುಗಿನ ಸರಿಗಮಪ ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ದಳು. ಪ್ರಸ್ತುತ ಈಕೆ ಪೋಷಕರ ಜೊತೆ ಮುಂಬೈನಲ್ಲಿ ನೆಲೆಸಿದ್ದಾಳೆ.

  • 100 ಫೋನ್‍ಗಳನ್ನು ಗಿಫ್ಟ್ ಕೊಟ್ಟ ಸೋನು ಸೂದು

    100 ಫೋನ್‍ಗಳನ್ನು ಗಿಫ್ಟ್ ಕೊಟ್ಟ ಸೋನು ಸೂದು

    ಹೈದರಾಬಾದ್: ಚಿತ್ರತಂಡದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರ ಮಕ್ಕಳಿಗೆ, ಆನ್‍ಲೈನ್ ಕ್ಲಾಸ್ ಕೇಳಲು ನೂರು ಮೊಬೈಲ್‍ಗಳನ್ನು ಉಡುಗೊರೆಯಾಗಿ ಸೋನು ಸೂದ್ ಕೊಟ್ಟಿದ್ದಾರೆ.

    ಸ್ಮಾರ್ಟ್ ಫೋನ್ ಇಲ್ಲದೆ ಆನ್‍ಲೈನ್ ಶಿಕ್ಷಣ ಪಡೆಯಲು ಮಕ್ಕಳಿಗೆ ಕಷ್ಟವಾಗುತ್ತಿದೆ, ಎಂಬ ಸುದ್ದಿಯನ್ನು ತಿಳಿದ ಸೋನು ಸೂದ್ ತಕ್ಷಣ ನೂರು ಮೊಬೈಲ್ ಫೋನ್‍ಗಳನ್ನು ಆರ್ಡರ್ ಮಾಡಿದ್ದಾರೆ. ಆಚಾರ್ಯ ಚಿತ್ರತಂಡಲ್ಲಿ ಕೆಲಸ ಮಾಡುತ್ತಿರುವ 100 ಕಾರ್ಮಿಕರಿಗೆ ನೀಡಿದ್ದಾರೆ.

    ಸೊನು ಸುದ್ ಅವರು ಮೊಬೈಲ್ ತರಿಸಿ ಚಿತ್ರತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಬರಲು ಹೇಳಿದ್ದರೆ. ಈ ವಿಚಾರ ತಿಳಿಯದೆ ಇರುವ ಕಾರ್ಮಿಕರು ಗೊಂದಲ ಮತ್ತು ಆಶ್ಚರ್ಯದಿಂದ ಬಂದಿದ್ದಾರೆ. ಸೋನುಸೂದ್ ಅವರು ಸ್ಮಾರ್ಟ್ ಫೋನ್ ಹಂಚುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಸಂತೋಷಪಟ್ಟಿದ್ದಾರೆ. ಸೋನು ಅವರ ಕೈಯಿಂದ ಮೊಬೈಲ್ ಪಡೆದುಕೊಂಡ ಕಾರ್ಮಿಕರು ಖುಷಿಯಿಂದ ಕೂಗಾಡಿದ್ದಾರೆ. ಸೋನು ಅವರನ್ನು ಮನಸರೆ ಹರಿಸಿ ಹಾರೈಸಿದ್ದಾರೆ. ಸ್ಮಾಟ್ ಫೋನ್‍ಗಳನ್ನು ಸ್ವೀಕರಿಸಿದ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಈ ಹಿಂದೆ ಸರ್ಕಾರಿ ಶಾಲೆ ಮಕ್ಕಳಿಗೆ ಆನ್‍ಲೈನ್ ಕ್ಲಾಸ್ ಕೇಳಲು ಉಚಿತವಾಗಿ ಸ್ಮಾರ್ಟ್ ಫೋನ್ ನೀಡಿದ್ದರು. ಇದೀಗ ಮತ್ತೊಮ್ಮೆ ನೂರು ಫೋನ್ ಉಚಿತವಾಗಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಆಚಾರ್ಯ ಚಿತ್ರದಲ್ಲಿ ಸೋನು ಸೂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‍ನ ಕೊಕಾಪೇಟ್‍ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರ ತಂಡದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ತರಗತಿ ಕೇಳಲು ಸಹಾಯವಾಗಲು ಮೊಬೈಲ್ ಫೋನ್‍ಗಳನ್ನು ಉಚಿತವಾಗಿ ನೀಡಿದ್ದಾರೆ. ಈ ಹಿಂದೆ ಕೂಡಾ ತಾವು ಮಾಡಿರುವ ಉತ್ತಮ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡ ಸೋನು ಅವರು ಈ ಬಾರಿಯೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  • ‘ರಾಬರ್ಟ್’ ನಂತ್ರ ‘ಯುವರತ್ನ’ನಿಗೂ ತಟ್ಟಿದ ಕೊರೊನಾ ಭೀತಿ

    ‘ರಾಬರ್ಟ್’ ನಂತ್ರ ‘ಯುವರತ್ನ’ನಿಗೂ ತಟ್ಟಿದ ಕೊರೊನಾ ಭೀತಿ

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆತಂಕಕ್ಕೀಡುಮಾಡಿದೆ. ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಸುಮಾರು 77 ದೇಶಗಳಲ್ಲಿ ಹರಡಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಈ ಕೊರೊನಾ ಎಫೆಕ್ಟ್ ಸ್ಯಾಂಡಲ್‍ವುಡ್‍ಗೂ ತಟ್ಟಿದ್ದು, ‘ರಾಬರ್ಟ್’ ಚಿತ್ರತಂಡದ ಬಳಿಕ ‘ಯುವರತ್ನ’ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ರದ್ದು ಮಾಡಿದೆ.

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ `ಯುವರತ್ನ` ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.

    3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ `ಯುವರತ್ನ`ನ ಯುರೋಪ್ ಪ್ರವಾಸ ರದ್ದು ಮಾಡಿದೆ. ಹಣ ಹೋದರೆ ಹೋಗಲಿ ಕೊರೊನಾ ಸಹವಾಸ ಬೇಡಪ್ಪ ಎಂದು ಚಿತ್ರತಂಡ ಸುಮ್ಮನಾಗಿದೆ.

    ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ‘ರಾಬರ್ಟ್’ ಚಿತ್ರತಂಡವು ಶೂಟಿಂಗ್‍ಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ವಿಶ್ವಾದ್ಯಂತ ಹರಡುತ್ತಿರುವ ಕೊರೊನಾ ಭೀತಿಗೆ ವಿದೇಶ ಪ್ರವಾಸವನ್ನು ಚಿತ್ರತಂಡ ರದ್ದು ಮಾಡಿತ್ತು. ಇದೇ ಬೆನ್ನಲ್ಲೇ ಯುವರತ್ನ ಚಿತ್ರತಂಡ ಕೂಡ ವಿದೇಶದಲ್ಲಿ ನಡೆಯಬೇಕಿದ್ದ ಶೂಟಿಂಗ್ ಪ್ಲಾನ್ ರದ್ದುಮಾಡಿದೆ. ಅದೇ ರೀತಿ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯಿಸುತ್ತಿರುವ ‘ಅರ್ಜುನ್ ಗೌಡ’ ಸಿನಿಮಾ ತಂಡ ಕೂಡ ವಿದೇಶದಲ್ಲಿ ಮಾಡಬೇಕಿದ್ದ ಶೂಟಿಂಗ್ ಕ್ಯಾನ್ಸಲ್ ಮಾಡಿದೆ.

    ಈ ಹಿಂದೆ `ರಾಜಕುಮಾರ` ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಿಸಿದ ಸಂತೋಷ್ ಆನಂದ್ ರಾಮ್ ಅವರೇ `ಯುವರತ್ನ` ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದಲ್ಲಿ ಪವರ್ ಸ್ಟಾರ್ ಗೆ ಜೋಡಿಯಾಗಿ ಸಯೇಷ ಸೈಗಲ್ ಕಾಣಿಸಿಕೊಳ್ಳಲಿದ್ದು, ಇದರ ಜೊತೆಗೆ ಸೋನು, ಡಾಲಿ ಧನಂಜಯ್, ವಸಿಷ್ಠ ಸಿಂಹ ಸಿನಿಮಾದಲ್ಲಿ ನಟಿಸಲಿದ್ದಾರೆ.

    ಬುಧವಾರ ಬೆಳಗ್ಗೆಯವರೆಗೆ ಭಾರತದಲ್ಲಿ 438 ಮಂದಿ ಕೊರೊನಾ ಶಂಕಿತರೆಂದು ವರದಿಯಾಗಿದೆ. ಅದರಲ್ಲಿ 225 ಜನರ ಮೇಲೆ 28 ದಿನಗಳ ಕಾಲ ತೀವ್ರ ನಿಗಾ ವಹಿಸಲಾಗಿತ್ತು. 189 ಮಂದಿ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 89 ಮಂದಿಯನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 118 ಮಂದಿ ಕೊರೊನಾ ಪರೀಕ್ಷೆ ಮಾಡಿಸಿದ್ದು, 103 ಜನರ ವರದಿಯಲ್ಲಿ ನೆಗೆಟಿವ್ ಬಂದಿದ್ದು, 4 ಮಂದಿಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  • ನೆರೆ ಸಂತ್ರಸ್ತರ ಗ್ರಾಮವನ್ನು ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರತಂಡ

    ನೆರೆ ಸಂತ್ರಸ್ತರ ಗ್ರಾಮವನ್ನು ದತ್ತು ಪಡೆದ ಥರ್ಡ್ ಕ್ಲಾಸ್ ಚಿತ್ರತಂಡ

    ಬಾಗಲಕೋಟೆ: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಚಲನಚಿತ್ರದ ತಂಡವೊಂದು ವಿನೂತನ ಹೆಜ್ಜೆ ಇಡುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ “ಥರ್ಡ್ ಕ್ಲಾಸ್” ಚಿತ್ರತಂಡ ಹಲವು ಸಾಮಾಜಿಕ ಕಾರ್ಯಗಳ ಮೂಲಕ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗುತ್ತಿದೆ.

    ಈ ಚಿತ್ರತಂಡ ಆಡಿಯೋ ರಿಲೀಸ್ ಸಂದರ್ಭದಲ್ಲೇ ಆಟೋ ಚಾಲಕರು, ಅನಾಥ-ಅಂಧ ಮಕ್ಕಳಿಗೆ ಜೀವ ವಿಮೆ ಮಾಡಿಸುವುದರ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯ ಮತ್ತೆ ಚಿತ್ರದ ನಿರ್ಮಾಪಕ, ನಟ ಜಗದೀಶ್ ನೇತೃತ್ವದಲ್ಲಿ ನೆರೆ ಸಂತ್ರಸ್ತರ ಗ್ರಾಮವೊಂದನ್ನು ದತ್ತು ಪಡೆದುಕೊಂಡಿದ್ದಾರೆ. ಬಾದಾಮಿ ತಾಲೂಕಿನ ಕರ್ಲಕೊಪ್ಪ ಗ್ರಾಮವನ್ನು ಅಭಿವೃದ್ಧಿಗೊಳಿಸಲು ಸಜ್ಜಾಗಿ ನಿಂತಿದ್ದು, ಅದರ ಪ್ರಯುಕ್ತ ಚಿತ್ರತಂಡ ಗ್ರಾಮದಲ್ಲೇ ಗ್ರಾಮ ವಾಸ್ತವ್ಯ ಹೂಡಿದೆ.

    ಚಿತ್ರತಂಡ ರಾತ್ರಿ ಶಾಲಾ ಮಕ್ಕಳೊಂದಿಗೆ, ಗ್ರಾಮಸ್ಥರೊಂದಿಗೆ ಹಾಡಿ, ಕುಣಿದು, ಅವರೊಂದಿಗೆ ಬೆರೆತು ಮಕ್ಕಳಿಗೆ ಊಟ ಬಡಿಸಿ ಸಾಮಾಜಿಕ ಕಳಕಳಿ ಮೆರೆದಿದೆ. ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ಮಕ್ಕಳೊಂದಿಗೆ ಹೆಜ್ಜೆ ಹಾಕಿ, ಅವರೊಂದಿಗೆ ಊಟ ಮಾಡಿ, ಊಟ ಬಡಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ಪ್ರವಾಹದಲ್ಲಿ ಮನೆ ಹಾಗೂ ಶಾಲೆ ಕಳೆದುಕೊಂಡ ಸಂತ್ರಸ್ತ ಶಾಲಾ ಮಕ್ಕಳ ಪರವಾಗಿ ನಿಂತಿರುವ ಚಿತ್ರತಂಡದ ಕಾರ್ಯ ಸದ್ಯ ಶ್ಲಾಘನೆಗೆ ಕಾರಣವಾಗಿದೆ.

    ಗ್ರಾಮದ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯ ಕಟ್ಟಡ ಮಲಪ್ರಭೆ ನದಿಯ ಪ್ರವಾಹದಿಂದಾಗಿ ಸಂಪೂರ್ಣವಾಗಿ ಹಾಳಾಗಿತ್ತು. ಆ ಶಾಲೆಯ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಮುಂದಾಗಿ ಇಂದು (ಜನವರಿ 20) ಕಾಮಗಾರಿ ಆರಂಭಿಸಲಿದೆ. ಚಿತ್ರ ತಂಡದ ಈ ಕಾರ್ಯ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಈ ಚಿತ್ರ ಬರುವ ಫೆ. 2ರಂದು ತೆರೆ ಕಾಣಲಿದೆ. ಈ ಕುರಿತು ಚಿತ್ರದ ನಾಯಕ ಜಗದೀಶ ಹಾಗೂ ನಾಯಕಿ ರೂಪಿಕಾ ತಮ್ಮ ಸಾಮಾಜಿಕ ಕಳಕಳಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

  • ರಶ್ಮಿಕಾ ಮಂದಣ್ಣ ಮೇಲೆ ತಮಿಳು ಚಿತ್ರರಂಗ ಗರಂ

    ರಶ್ಮಿಕಾ ಮಂದಣ್ಣ ಮೇಲೆ ತಮಿಳು ಚಿತ್ರರಂಗ ಗರಂ

    ಚೆನ್ನೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್ ನಂತರ ಈಗ ಕಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈಗ ಅವರ ವಿರುದ್ಧ ತಮಿಳು ಚಿತ್ರರಂಗ ಗರಂ ಆಗಿದೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

    ರಶ್ಮಿಕಾ ಮಂದಣ್ಣ ಅವರು ನಟ ಕಾರ್ತಿ ಅವರ ಜೊತೆ ತಮ್ಮ ಮೊದಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಚಿತ್ರದ ಟೈಟಲ್ ರಿವೀಲ್ ಮಾಡಿದ್ದಾರೆ. ಹೀಗಾಗಿ ತಮಿಳು ಚಿತ್ರರಂಗ ಅವರ ವಿರುದ್ಧ ಗರಂ ಆಗಿದೆ ಎಂಬ ವಿಷಯ ತಮಿಳು ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ನೋಡಿದ ನಂತರ ತಮಿಳುನಾಡಿನ ಜನತೆ ರಶ್ಮಿಕಾ ಅವರನ್ನು ಕಾಲಿವುಡ್‍ಗೆ ಸ್ವಾಗತಿಸಿ ಅವರಿಗೆ ಶುಭಾಶಯ ಕೋರಿದ್ದಾರೆ. ಆದರೆ ರಶ್ಮಿಕಾ ಚಿತ್ರದ ಟೈಟಲ್ ರಿವೀಲ್ ಮಾಡಿದ್ದು, ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ. ಮೂಲಗಳ ಪ್ರಕಾರ ಚಿತ್ರತಂಡ ಅಧಿಕೃತವಾಗಿ ಟೈಟಲ್ ಪ್ರಕಟಿಸಲು ನಿರ್ಧರಿಸಿತ್ತು ಎನ್ನಲಾಗಿದೆ.

    ಸಾಮಾನ್ಯವಾಗಿ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾದ ಟೈಟಲ್ ಫಸ್ಟ್ ಲುಕ್ ಪೋಸ್ಟರ್ ಮೂಲಕ ರಿವೀಲ್ ಮಾಡಲಾಗುತ್ತದೆ. ಸುಲ್ತಾನ್ ಚಿತ್ರತಂಡ ಕೂಡ ಇದೇ ರೀತಿ ಮಾಡುವುದಕ್ಕೆ ನಿರ್ಧರಿಸಿತ್ತು. ಆದರೆ ಅಷ್ಟರಲ್ಲಿ ರಶ್ಮಿಕಾ ಚಿತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ.

    ರಶ್ಮಿಕಾ ಮಂದಣ್ಣ ಅವರ ಈ ವರ್ತನೆಯಿಂದ ಸುಲ್ತಾನ್ ಚಿತ್ರತಂಡ ಹಾಗೂ ಚಿತ್ರದ ನಾಯಕ ಕಾರ್ತಿ ಅವರ ಮೇಲೆ ಬೇಸರಗೊಂಡಿದ್ದಾರೆ. ಅಲ್ಲದೆ ತನ್ನ ತಪ್ಪಿಗೆ ರಶ್ಮಿಕಾ ಚಿತ್ರತಂಡದ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಿದೆ.

    ಸುಲ್ತಾನ್ ಚಿತ್ರವನ್ನು ರೆಮೋ ಖ್ಯಾತಿಯ ಭಾಗ್ಯರಾಜ್ ಕಣ್ಣನ್ ನಿರ್ದೇಶಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್.ಆರ್ ಪ್ರಭು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ವಿವೇಕ್ ಮರ್ವೀನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

  • ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚಿತ್ರತಂಡಕ್ಕೆ 400 ಚಿನ್ನದ ಉಂಗುರ ಗಿಫ್ಟ್ ನೀಡಿದ ವಿಜಯ್

    ಚೆನ್ನೈ: ತಮಿಳುನಟ ವಿಜಯ್ ಅವರು ತಮ್ಮ ‘ಬಿಗಿಲ್’ ಚಿತ್ರತಂಡಕ್ಕೆ ಒಟ್ಟು 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ.

    ವಿಜಯ್ ತಮ್ಮ ಬಹುನಿರೀಕ್ಷಿತ ಬಿಗಿಲ್ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಅವರು ತಮ್ಮ ಚಿತ್ರತಂಡಕ್ಕೆ 400 ಚಿನ್ನದ ಉಂಗುರವನ್ನು ಗಿಫ್ಟ್ ಆಗಿ ನೀಡಿದ್ದಾರೆ. ವಿಶೇಷ ಅಂದರೆ ಚಿನ್ನದ ಉಂಗುರದ ಮೇಲೆ ಬಿಗಿಲ್ ಎಂದು ಬರೆಯಲಾಗಿದೆ.

    ಚಿತ್ರತಂಡಕ್ಕೆ ವಿಜಯ್ ಚಿನ್ನದ ಉಂಗುರವನ್ನು ಹಂಚುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಜಯ್ ಅವರ ಈ ಕೆಲಸ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಬಿಗಿಲ್ ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರಿಗೂ ಉಂಗುರವನ್ನು ನೀಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

    ಮಂಗಳವಾರ ಬಿಗಿಲ್ ಚಿತ್ರದ ಚಿತ್ರೀಕರಣ ಮುಗಿದಿದೆ. ಜನವರಿಯಲ್ಲಿ ಈ ಚಿತ್ರದ ಚಿತ್ರೀಕರಣ ಶುರುವಾಗಿತ್ತು. ಈಗ ಎರಡು ದಿನದಲ್ಲಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು, ಇದೇ ವರ್ಷ ಅಕ್ಟೋಬರ್ 27ರಂದು ಚಿತ್ರ ಬಿಡುಗಡೆ ಆಗಲಿದೆ.

    ಈ ಚಿತ್ರದಲ್ಲಿ ವಿಜಯ್ ಸೇರಿದಂತೆ ನಟಿ ನಯನತಾರಾ, ಜಾಕಿ ಶ್ರಾಫ್, ವಿವೇಕ್ ಡೇನಿಯಲ್ ಬಾಲಾಜಿ, ಆನಂದ್‍ರಾಜ್, ಇಂದುಜಾ ರವಿಚಂದ್ರನ್, ವರ್ಷ ಬೋಲಮ್ಮ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

    https://twitter.com/ActorAATHMA/status/1161279624904663043?ref_src=twsrc%5Etfw%7Ctwcamp%5Etweetembed%7Ctwterm%5E1161279624904663043&ref_url=https%3A%2F%2Fwww.timesnownews.com%2Fentertainment%2Fsouth-gossip%2Farticle%2Fviral-video-thalapathy-vijay-is-winning-the-internet-as-he-surprises-team-bigil-by-gifting-400-gold-rings%2F468727

  • ತಂಡದ ಜೊತೆ ಸ್ವಲ್ಪ ಮಸ್ತಿ ಮಾಡಲೇಬೇಕು ಎಂದ ಸನ್ನಿ- ವಿಡಿಯೋ ನೋಡಿ

    ತಂಡದ ಜೊತೆ ಸ್ವಲ್ಪ ಮಸ್ತಿ ಮಾಡಲೇಬೇಕು ಎಂದ ಸನ್ನಿ- ವಿಡಿಯೋ ನೋಡಿ

    ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡಿದ್ದು, ಆ ವಿಡಿಯೋವನ್ನು ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸನ್ನಿ ಲಿಯೋನ್ ಮಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸನ್ನಿ ಮಲಯಾಳಂ ನಟ ಮಮ್ಮುಟಿ ನಟಿಸಿದ ‘ಮಧುರ ರಾಜ’ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಈಗ ಸನ್ನಿ ಸಂತೋಷ್ ನಾಯರ್ ನಿರ್ದೇಶಿಸುತ್ತಿರುವ ‘ರಂಗೀಲಾ’ ಚಿತ್ರದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ.

    ಇಂದು ರಂಗೀಲಾ ಚಿತ್ರದ ಚಿತ್ರೀಕರಣದ ವೇಳೆ ಸನ್ನಿ ಲಿಯೋನ್ ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡಿದ್ದಾರೆ. 90ರ ದಶಕದಲ್ಲಿ ನಟ ಗೋವಿಂದ ಹಾಗೂ ನಟಿ ಕರಿಷ್ಮಾ ಕಪೂರ್ ನಟಿಸಿದ ‘ಕೂಲಿ ನಂ 1’ ಚಿತ್ರದ ‘ಅ ಜಾನಾ ಅ ಜಾನಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

     

    View this post on Instagram

     

    First day of shoot at a beautiful hotel and hanging by the pool! So nice #rangeela day 1

    A post shared by Sunny Leone (@sunnyleone) on

    ಸನ್ನಿ ತಾವು ಚಿತ್ರತಂಡದ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ತಂಡದ ಜೊತೆ ದಿನಕ್ಕೆ ಸ್ವಲ್ಪವಾದರೂ ಮಸ್ತಿ ಮಾಡಲೇಬೇಕು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ರಂಗೀಲಾ ಚಿತ್ರದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಸಲೀಂ ಕುಮಾರ್, ಸುರಜ್ ವೆಂಜರಮ್ಮೂಡು, ರಮೇಶ್ ಪಿಶಾರೋಡಿ ಹಾಗೂ ಅಜು ವರ್ಗಿಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ನಟಿಗೆ ಮಾಲಿವುಡ್‍ನಲ್ಲಿ ಕಿರುಕುಳ

    ಸ್ಯಾಂಡಲ್‍ವುಡ್ ನಟಿಗೆ ಮಾಲಿವುಡ್‍ನಲ್ಲಿ ಕಿರುಕುಳ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಕ್ಷತಾ ಶ್ರೀಧರ್ ತಮಗೇ ಮಾಲಿವುಡ್ ಚಿತ್ರ ಕಿರುಕುಳ ನೀಡಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ದೂರು ನೀಡಿದ್ದಾರೆ.

    ‘ಕೊಚ್ಚಿನ್ ಶಾದಿ ಚೆನ್ನೈ 03’ ಹೆಸರಿನಲ್ಲಿ ನಿರ್ಮಾಣವಾಗಲಿರುವ ಚಿತ್ರದಲ್ಲಿ ಅಭಿನಯಿಸಲು ಚಿತ್ರತಂಡ ನನಗೆ ಆಹ್ವಾನ ನೀಡಿತ್ತು. ಆದರೆ ಅಲ್ಲಿಗೆ ತೆರಳಿದ ಮೇಲೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಅಕ್ಷತಾ ಶ್ರೀಧರ್ ಆರೋಪ ಮಾಡಿದ್ದಾರೆ.

    ಏನಿದು ಪ್ರಕರಣ?
    ನಟಿ ಅಕ್ಷತಾ ಶ್ರೀಧರ್ ಅವರಿಗೆ ಮಾಲಿವುಡ್ ಚಿತ್ರತಂಡ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿತ್ತು. ಅದರಂತೆ ಶೂಟಿಂಗ್ ಗಾಗಿ ಕಳೆದ ವಾರ ಕೇರಳಕ್ಕೆ ಹೋಗಿದ್ರು. ಆದರೆ ಆ ವೇಳೆ ನಟಿಗೆ ನೀಡಿದ್ದ ಹೋಟೆಲ್ ಕೊಠಡಿ ಕ್ಲೀನ್ ಮಾಡಿರಲಿಲ್ಲ. ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಅವರೊಂದಿಗೆ ಜಗಳ ಮಾಡಿದ್ದಾರೆ. ಅಲ್ಲದೇ ಜಗಳ ಅತಿರೇಕಕ್ಕೆ ಹೋಗಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಶೂಟಿಂಗ್ ಕರೆಯಿಸಿಕೊಂಡ ಚಿತ್ರತಂಡ ಕೂಡ ಬೆಂಬಲ ನೀಡದೇ ನಟಿ ವಿರುದ್ಧವೇ ತಿರುಗಿ ಬಿದ್ದಿತ್ತು ಎಂದು ಆರೋಪ ಮಾಡಿದ್ದಾರೆ.

    ಚಿತ್ರತಂಡದ ವರ್ತನೆಯಿಂದ ಭಯಗೊಂಡ ಅಕ್ಷತಾ ಅವರು ಹೋಟೆಲ್ ನೀಡಬೇಕಿದ್ದ 56 ಸಾವಿರ ರೂ. ಹಣವನ್ನು ಪಾವತಿ ಮಾಡಿ ಚಿತ್ರೀಕರಣದಿಂದ ಹಿಂದಿರುಗಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೇ ಈಗಾಗಲೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೂ ಮೌಖಿಕ ದೂರು ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಮಾಲಿವುಡ್‍ನಲ್ಲಿ ತಮಗಾದ ಅನುಭವದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಕ್ಷತಾ ಅವರು ಶೀಘ್ರವೇ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಅಂದಹಾಗೇ ಅಕ್ಷತಾ ಅವರು ಕನ್ನಡ ತ್ರಾಟಕ, ಪಾನಿಪುರಿ, ರಾಜೀವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕನ್ನಡ ಶಾಲೆ ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಸಿನಿಮಾ ಮಾಡಿದ್ವಿ- ರಿಷಬ್ ಶೆಟ್ಟಿ

    ಕನ್ನಡ ಶಾಲೆ ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಸಿನಿಮಾ ಮಾಡಿದ್ವಿ- ರಿಷಬ್ ಶೆಟ್ಟಿ

    ಧಾರವಾಡ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ತಂಡ ಇಂದು ಧಾರವಾಡಕ್ಕೆ ಆಗಮಿಸಿತ್ತು. ಈ ವೇಳೆ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

    ಈ ವೇಳೆ ನಗರದ ಕೆಸಿಡಿ ಕಾಲೇಜ್ ಬಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ತಂಡದ ಸದಸ್ಯರು ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನಂತರ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಜೊತೆ ಮಾಧ್ಯಮಗೋಷ್ಠಿ ನಡೆಸಿದ ಸಿನಿಮಾ ನಿರ್ದೇಶಕ ರಿಷಬ್ ಶಟ್ಟಿ, ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ಹೇಳಿದರು. ಕನ್ನಡ ಶಾಲೆಗಳಿಗೆ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ವಿಷಯದ ಮೇಲೆ ಈ ಚಿತ್ರ ಮಾಡಲಾಗಿದೆ ಎಂದ ಅವರು, ಸರ್ಕಾರಿ ಶಾಲೆಯ ಮಕ್ಕಳು ರ‍್ಯಾಂಕ್ ಬರ್ತಾರೆ ಎಂದು ಹೇಳಿದರು.

    ಕಾಸರಗೋಡಿನ ಒಂದು ಸರ್ಕಾರಿ ಶಾಲೆ ಅದು ಶಿಥಿಲಾವಸ್ಥೆಯಲ್ಲಿದೆ ಎಂಬ ನೆಪ ಹೇಳಿ ಕೇರಳದ ಶಿಕ್ಷಣ ಅಧಿಕಾರಿಯೊಬ್ಬ ಶಾಲೆಯನ್ನು ಮುಚ್ಚಿಸುತ್ತಾನೆ. ಮಕ್ಕಳು ಮತ್ತು ಊರ ಮಂದಿ ದಿಕ್ಕು ಕಾಣದಂತಾಗುತ್ತಾರೆ. ಕಡೆಗೆ ಮಕ್ಕಳೆಲ್ಲ ಸೇರಿ ಸಮಾಜಸೇವಕ ಅನಂತಪದ್ಮನಾಭ ಪಿ.(ಅನಂತನಾಗ್) ಅವರನ್ನು ಕರೆತರುತ್ತಾರೆ. ಅನಂತ್ ಬರೋತನಕ ಮಕ್ಕಳ ಕೀಟಲೆ, ಸಣ್ಣ ವಯಸ್ಸಿನಲ್ಲೇ ಶುರುವಾಗುವ ಪ್ರೀತಿಯ ಸೆಳೆತ ಮುಂತಾದವುಗಳ ಜೊತೆಗೆ ಸಾಗುವ ಕಥೆ ಅನಂತ್ ನಾಗ್ ಅವರು ಬರುತ್ತಿದ್ದಂತೇ ಬೇರೆಯದ್ದೇ ಆಯಾಮ ಪಡೆಯುತ್ತದೆ. ಅನಂತ್ ನಾಗ್ ಕೋರ್ಟ್ ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಂತೂ ಎಂಥವರಿಗಾದರೂ ನಗು ಮತ್ತು ಅಳು ಒಟ್ಟೊಟ್ಟಿಗೆ ಒತ್ತರಿಸಿಕೊಂಡು ಬರುತ್ತದೆ.

    ಬಹುಶಃ ಇದೇ ಕಥೆಯನ್ನೇ ತೀರಾ ಗಂಭೀರವಾಗಿ ಹೇಳಿದ್ದಿದ್ದರೆ ಅದು ಮಾಮೂಲಿ ಕಲಾತ್ಮಕ ಸಿನಿಮಾವಾಗಿ ಅಥವಾ ಡಾಕ್ಯುಮೆಂಟರಿ ರೀತಿಯ ಚಿತ್ರವಾಗಿಯಷ್ಟೇ ದಾಖಲಾಗುತ್ತಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಗಡಿನಾಡು ಮತ್ತು ಭಾಷೆಯ ಸಮಸ್ಯೆಯನ್ನು ಹೊಂದಿರುವ ತೀರಾ ಗಂಭೀರವಾದ ವಿಚಾರವನ್ನು ಪಕ್ಕಾ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ರಂಜಿಸುತ್ತಲೇ ಸೀರಿಯಸ್ಸಾದ ವಿಚಾರವನ್ನು ನೋಡುಗರ ಮನಸ್ಸಿಗೆ ದಾಟಿಸಿದ್ದಾರೆ.

    ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮತ್ತು ಎಲ್ಲ ಮಕ್ಕಳೂ ಅದ್ಭುತವಾಗಿ ನಟಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಕಣ್ಣೆದುರೇ ಕಾಸರಗೋಡನ್ನು ಕಟ್ಟಿಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರ ಸಂಭಾಷಣೆ ಮನಸ್ಸಿಗೆ ಹತ್ತಿರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೆಟ್ಟೇರಿತ್ತು `ದಚ್ಚು ದೀಪು’ ಸಿನಿಮಾ!

    ಸೆಟ್ಟೇರಿತ್ತು `ದಚ್ಚು ದೀಪು’ ಸಿನಿಮಾ!

    ಬೆಂಗಳೂರು: `ದಚ್ಚು ದೀಪು’ ಎನ್ನುವ ಶೀರ್ಷಿಕೆಯಲ್ಲಿ ಕನ್ನಡ ಸಿನಿಮಾ ಸೆಟ್ಟೇರಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರನ್ನು ಸ್ಯಾಂಡಲ್‍ವುಡ್‍ನಲ್ಲಿ ದಚ್ಚು, ದೀಪು ಎನ್ನುವ ಹೆಸರಿನಿಂದ ಕರೆಯಲಾಗುತ್ತೆ. ಹೀಗಾಗಿ ಇಂದು ಸೆಟ್ಟೇರಿರುವ `ದಚ್ಚು ದೀಪು’ ಸಿನಿಮಾ ಕುತೂಹಲಕ್ಕೆ ಕಾರಣವಾಗಿದೆ.

    ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸ್ನೇಹ, ವೈರತ್ವದ ಕಥೆ ಚಿತ್ರದಲ್ಲಿರುತ್ತೆ ಎಂದು ಚಿತ್ರದ ನಾಯಕ ಚಂದು ಹೇಳಿದ್ದಾರೆ. ಇನ್ನೂ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಮತ್ತು ಸುದೀಪ್ ಪೋಸ್ಟರ್ ಗಳನ್ನೂ ಹಾಕಲಾಗಿದೆ.

    ಇಬ್ಬರು ನಟರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗಾಗಿ ನಾವು ಅವರ ಅಭಿಮಾನಿಯಾಗಿದ್ದು, ಅವರ ಆರ್ಶೀವಾದದಿಂದ ಈ ಸಿನಿಮಾ ಮಾಡೋಣ ಅನ್ನಿಸಿತ್ತು ಎಂದು ನಿರ್ದೇಶಕ ಆನಂದ್ ತಿಗಡಿ ಹೇಳಿದ್ದಾರೆ.

    ರಂಜಿತ್ ತಿಗಡಿ ನಿರ್ದೇಶನದ ದಚ್ಚು ದೀಪು ಸಿನಿಮಾದಲ್ಲಿ ಆನಂದ್, ಚಂದು ಹೊಸ ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ನಡೆದಿದೆ. ಜಗ್ಗೇಶ್ ಮತ್ತು ಅಜಯ್ ರಾವ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.