Tag: ಚಿತ್ರಕಲೆ

  • ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯದಲ್ಲಿ ಶಾಲಾ ಹೆಣ್ಮಕ್ಕಳ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ – ವಿಕೃತ ಕಾಮಿ ಅಂದರ್‌!

    ಮಂಡ್ಯ: ತನ್ನ ಬಳಿ ಕ್ರೀಡೆ ಹಾಗೂ ಚಿತ್ರಕಲೆ (Sports, Painting) ಕಲಿಯಲು ಬರುತ್ತಿದ್ದ ಪ್ರೌಢ ಶಾಲೆಯೊಂದರ ವಿದ್ಯಾರ್ಥಿನಿಯರ ಬೆತ್ತಲೆ ಚಿತ್ರ ಕ್ಲಿಕ್ಕಿಸಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬನನ್ನು ಪೊಲೀಸರು (Mandya Police) ಬಂಧಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಅಮೃತಹಳ್ಳಿಯ ಯೋಗಿ ಬಂಧಿತ ಆರೋಪಿಯಾಗಿದ್ದಾನೆ. ಅಲ್ಲದೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೂ ಎಸಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಇದನ್ನೂ ಓದಿ: ಶಾಲೆಯಿಂದ ಹೊರಗೆ ಉಳಿದಿದ್ದ ನನ್ನನ್ನು ರಾಜಪ್ಪ ಮೇಸ್ಟ್ರು ಶಾಲೆಗೆ ಸೇರಿಸದಿದ್ದರೆ ನಾನು ಸಿಎಂ ಆಗ್ತಿರಲಿಲ್ಲ

    ಈ ಸಂಬಂಧ ನಾಲ್ವರು ವಿದ್ಯಾರ್ಥಿನಿಯರ ಹೇಳಿಕೆ ಆಧರಿಸಿ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ (Child Rights Protection Unit) ಕಾನೂನು ಪರಿವೀಕ್ಷಣಾಧಿಕಾರಿ ಎಸ್‌.ಎಂ. ಶೈಲಜಾ ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು 15 ರಿಂದ 17 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹತ್ರಾಸ್ ಸತ್ಸಂಗದಿಂದ ನಾಸಿಕ್‌ನ ಕುಂಭಮೇಳದವರೆಗೆ; ಭಾರತದಲ್ಲಿ ನಡೆದ ಕಾಲ್ತುಳಿತ ದುರಂತಗಳಿವು

    ಆಸಾಮಿ ತಗಲಾಕ್ಕೊಂಡಿದ್ದು ಹೇಗೆ?
    ಆರೋಪಿ ಯೋಗಿ ವಿದ್ಯಾರ್ಥಿನಿಯರು ಸಂತ್ರಸ್ತ ವಿದ್ಯಾರ್ಥಿನಿಯರು ಓದುತ್ತಿದ್ದ ಪ್ರೌಢಶಾಲೆಯಲ್ಲೇ ಹಳೆಯ ವಿದ್ಯಾರ್ಥಿಯಾಗಿದ್ದ. ಶಾಲೆ ಸಮೀಪದಲ್ಲೇ ಸ್ವಂತ ತರಬೇತಿ ಕೇಂದ್ರ ನಡೆಸುತ್ತಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಕ್ರೀಡೆ, ಚಿತ್ರಕಲೆಯಲ್ಲಿ ಆಸಕ್ತಿ, ಇದ್ದ ಕಾರಣ, ತರಬೇತಿಗೆ ಸೇರಿಕೊಂಡಿದ್ದರು. ತನ್ನ ಬಳಿ ಬರುವ ವಿದ್ಯಾರ್ಥಿನಿಯರಿಗೆ ಮೊದಲು ಅಣ್ಣನಂತೆ ನಾಟಕವಾಡಿ ನಂಬಿಸುತ್ತಿದ್ದ.

    ತರಬೇತಿ ಕೇಂದ್ರದ ಪಿಟಿ ರೂಮಿನಲ್ಲೇ ಇರುತ್ತಿದ್ದ ಈತ ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ತನ್ನ ಮೊಬೈಲ್‌ನಿಂದ ಬೆತ್ತಲೆ, ಅರೆಬೆತ್ತಲೆ ಫೋಟೋಗಳನ್ನು ತೆಗೆದು, ಪೋಷಕರಿಗೆ ಕಳುಹಿಸುವುದಾಗಿ ಬೆದರಿಕೆ ಒಡ್ಡುತ್ತಿದ್ದ. ತನ್ನೊಂದಿಗೆ ಮಲಗುವಂತೆ ಬಲವಂತ ಮಾಡುತ್ತಿದ್ದ. ತರಬೇತಿ ನೀಡುವ ವೇಳೆ ಕೆಟ್ಟದ್ದಾಗಿ ವರ್ತಿಸುತ್ತಿದ್ದ. ಒಂದೊಮ್ಮೆ ಅದೇ ಗ್ರಾಮದ ವಿದ್ಯಾರ್ಥಿನಿಯೋರ್ವಳಿಗೆ ಐಸ್‌ಕ್ರೀಮ್‌ ಕೊಡಿಸಿ, ಪ್ರಜ್ಞೆ ತಪ್ಪಿಸುವಂತೆ ಮಾಡಿದ್ದ. ಬಳಿಕ ಆಕೆಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ, ನೀನು ನನ್ನೊಂದಿಗೆ ಮಲಗದಿದ್ದರೆ, ನಿಮ್ಮ ಪೋಷಕರಿಗೆ ಫೋಟೋ ತೋರಿಸುವುದಾಗಿ ಬೆದರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಸಂಬಂಧ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಕ್ಕೆ ವಿದ್ಯಾರ್ಥಿನಿಯರು ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ. ಬಳಿಕ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳು ಪೊಲೀಸ್‌ ಠಾಣೆಗೆ ನೀಡಿದ ದೂರಿನ ಮೇಲೆ ಯೋಗಿ ಎಂಬಾತನನ್ನ ಬಂಧಿಸಿ, ಎಫ್‌ಐಆರ್‌ ದಾಖಲಾಗಿದೆ. ಪೋಕ್ಸೋ ಕೇಸ್‌ ಜೊತೆಗೆ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್‌ 354 ಎ, 354 ಡಿ, 509 ಅಡಿಯಲ್ಲಿ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಭಾರದಿಂದ ಕಂಗೆಟ್ಟ ಸರ್ಕಾರ -ಆಪರೇಷನ್ ಬಿಪಿಎಲ್ ಕಾರ್ಡ್‌ಗೆ ಪ್ಲಾನ್!

  • ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ತಲೆ ಕೆಳಗಾಗಿ ಚಿತ್ರ ಬಿಡಿಸುವ ಗಂಗಾವತಿಯ ಯುವ ಕಲಾವಿದ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಲ್ಗುಡಿಯ ನಿವಾಸಿ ಹಜರತ್ ಬಳಿಗಾರ ಕಾಲಿನಿಂದ ಚಿತ್ರ ಬಿಡಿಸುವ ಕಲಾವಿದ.

    ಕೊಪ್ಪಳದ ಸರ್ಕಾರಿ ಕಾಲೇಜಿನಲ್ಲಿ ಪದವಿ ಓದುತ್ತಿರುವ ಹಜರತ್, ನಗರದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿದ್ದನು. ಆದ್ರೆ ಕೊರೊನಾ ಲಾಕ್‍ಡೌನ್ ಆಗಿದ್ದರಿಂದ ಮನೆಗೆ ಬಂದಿದ್ದ ಹಜರತ್ ಓದಿನ ಜೊತೆಯಲ್ಲಿ ವಿಶೇಷ ಕಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿತ್ರ ಬಿಡಿಸೋದು ದೊಡ್ಡ ಸವಾಲಿನ ಕೆಲಸ. ಆದರೆ ಹಜರತ್ ಈ ಸವಾಲಿನ ಕೆಲಸವನ್ನು ವಿಭಿನ್ನವಾಗಿ ಮಾಡುವ ಮೂಲಕ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

    ಹಜರತ್ ತಂದೆ ಚಾಂದ್‍ಪಾಶಾ ಕೃಷಿಕರಾಗಿದ್ದು, ತಾಯಿ ಅಲ್ಲಾಭಿ ಬಳೆ ವ್ಯಾಪಾರ ಮಾಡುತ್ತಾರೆ. ಹಜರತ್‍ಗೆ ಇಮಾಮ್ ಅನ್ನೋ ಪುಟ್ಟ ತಮ್ಮನಿದ್ದಾನೆ. ಚಿತ್ರಕಲೆ ಜೊತೆ ಓದಿನಲ್ಲಿ ಮುಂದಿರುವ ಹಜರತ್ ಶಿಕ್ಷಕರಿಗೂ ಅಚ್ಚುಮೆಚ್ಚು. ಇದನ್ನೂ ಓದಿ: ಜೋಕಾಲಿಯಿಂದ 6,300 ಅಡಿ ಕೆಳಗೆ ಬಿದ್ದ ಮಹಿಳೆಯರು- ವೀಡಿಯೋ ವೈರಲ್

    ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿರುವ ಹಜರತ್, ತಲೆ ಕೆಳೆಗಾಗಿ ಮತ್ತು ಕಾಲಿನಿಂದಲೂ ಚಿತ್ರ ಬಿಡಿಸುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾನೆ. ಹಜರತ್ ಕುಂಚದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಅಬ್ದುಲ್ ಕಲಾಂ, ಅಂಬೇಡ್ಕರ್, ಧೋನಿ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರ ಚಿತ್ರಗಳು ಅರಳಿವೆ. ಇದನ್ನೂ ಓದಿ: ಇಂಜಿನೀಯರ್ ಬಾಳಿಗೆ ಆಸರೆಯಾದ ನರೇಗಾ – ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೂಲಿ ಹಣ ಬಳಕೆ

  • ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಆಟ- ಗೀಚಾಟ ವಿಶೇಷ ಕಾರ್ಯಕ್ರಮ- ಮಕ್ಕಳಿಂದ ಮೂಡಿಬಂದ ಚಿತ್ರ

    ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಸಾಂಗತ್ಯ ವೇದಿಕೆಯ ಮೂಲಕ ಮಕ್ಕಳಲ್ಲಿನ ಸೃಜನಾತ್ಮಕತೆಯನ್ನು ಗುರುತಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಟ-ಗೀಚಾಟ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

    ಮಾಲಿನ್ಯದ ವಿರುದ್ಧ ಹೋರಾಟ ಮತ್ತು ಬದುಕು ವಿಷಯದಡಿ ಮಕ್ಕಳು ಚಿತ್ರ ರಚಿಸಿದ್ದರು. ಉತ್ತಮವಾಗಿ ರಚಿಸಿದ ಮಕ್ಕಳಿಗಾಗಿ ಅಭಿನಂದನಾ ಸಮಾರಂಭ ಹಾಗೂ ಚಿತ್ರಕಲಾ ಪ್ರಾತ್ಯೆಕ್ಷಿಕೆ ನಡೆಸಲಾಯಿತು.

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀರೇಶ್ ಹನಗೋಡಿಮಠ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಂದು ಮಕ್ಕಳು ಚಿತ್ರಕಲೆಯ ಮೂಲಕ ಹೊರಜಗತ್ತಿನೊಂದಿಗೆ ಸಂವಾದಿಸುತ್ತವೆ. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ನಾವು ಅರಿತು ಅವರಿಗೆ ಕಲಾಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮಥ್ರ್ಯವನ್ನು ಬೆಳೆಸುವ ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೆಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಈ ಆಟ ಗೀಚಾಟವೇ ಸಾಕ್ಷಿಯಾಗುತ್ತದೆ. ಚಿತ್ರಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವುದು ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ. ಮಕ್ಕಳ ಶಿಕ್ಷಣದಲ್ಲಿ ಚಿತ್ರಕಲೆಯೇ ಮಹತ್ವವಾಗಿದ್ದು, ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ. ನಮ್ಮ ನಿತ್ಯ ಜೀವನದಲ್ಲಿ ಪ್ರತಿಯೊಂದು ವಿಷಯಗಳಲ್ಲಿ ಕಲೆಯ ಪ್ರಭಾವ ಇದ್ದೇ ಇರುತ್ತದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

    ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ರಚಿಸಿದ ತನಿಷ್ಕಾ ಎಸ್. ಕುಬಸದ, ಸಂಜನಾ.ಪಿ.ಸಿ, ಖುಷಿ ಉಜ್ಜಪ್ಪನಳ್ಳಿ, ಸುನಿಧಿ ಗುಡ್ಡದ, ಕೆ. ರಾಜನಂದಿನಿ, ನಮನಾ ಸಿ.ಮಾಳಿಗೇರ, ಸಮರ್ಥ.ಪಿ.ಸಿ, ವರ್ಷಿಣಿ.ಎ.ಎಮ್, ಮದಿಹಾ ಖಾಜಿ, ನಿಹಾಲ್ ಬಣಕಾರ ಇವರುಗಳಿಗೆ ಪುರಸ್ಕಾರ ನೀಡಲಾಯಿತು.

    ಈ ಸಂದರ್ಭದಲ್ಲಿ ದೇವರಾಜ ಹುಣಸಿಕಟ್ಟಿ, ಸವಿತಾ ಮಲ್ಲಾಡದ, ಸುಮಂಗಲಾ ಹೊಸಳ್ಳಿ, ಡಾ.ವೆಂಕಟೇಶ.ಹೆಚ್ ಹಾಗೂ ಪಾಲಕರು ಉಪಸ್ಥಿತರಿದ್ದರು. ಕು.ಸೌಜನ್ಯ ಹೊಸಳ್ಳಿ ಪ್ರಾರ್ಥಿಸಿದರು. ಕು.ಪಂಕಜ್ ಕಾಗದಗಾರ ವಂದಿಸಿದರು. ಕು.ಕುಶಾಲ್ ಕಾಗದಗಾರ ಸ್ವಾಗತಿಸಿದರು.

  • 25 ಲಕ್ಷ ರೂ. ಗಳಿಸಿದ ಐದರ ಪೋರ

    25 ಲಕ್ಷ ರೂ. ಗಳಿಸಿದ ಐದರ ಪೋರ

    ಬೆಂಗಳೂರು: ಐದು ವರ್ಷದ ಮಕ್ಕಳು ಸ್ಪಷ್ಟವಾಗಿ ಮಾತಾಡೋದು ನಡೆಯೋದು ಕಷ್ಟ. ಆದರೆ ನಗರದ ಐದು ವರ್ಷದ ಪೋರನೊಬ್ಬ 25 ಲಕ್ಷ ರೂ. ಗಳಿಸುವ ಮೂಲಕ ಲಕ್ಷಾಧಿಪತಿಯಾಗಿದ್ದಾನೆ.

    ನಗರದ ಯಲಹಂಕ ನಿವಾಸಿಗಳಾದ ದಿವ್ಯಾ ಹಾಗೂ ರಾಜಶೇಖರನ್ ದಂಪತಿಯ ಪುತ್ರ ವಿರಾಟ್ ಕರಣ್ ಇದೀಗ ಲಕ್ಷಾಧಿಪತಿ. ವಿರಾಟ್ ಕುಂಚ ಹಿಡಿದು ಆಡುತ್ತಿದ್ದಾಗ ಪೋಷಕರು ಚಿತ್ರ ಬಿಡಿಸಲು ಪ್ರೋತ್ಸಾಹಿಸಿ ಕ್ಯಾನ್ವಾಸ್ ಮೇಲೆ ಚಿತ್ರ ಬಿಡಿಸಲು ಕಲಿಸಿದ್ದಾರೆ. ಹೀಗೆ ಕಲಿತ ವಿರಾಟ್ ಸುಮಾರು 150 ಕಲಾಕೃತಿಗಳನ್ನು ರಚಿಸಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಇವನ ಒಂದೊಂದು ಪೇಂಟಿಂಗ್ಸ್ ಗಳು 15 ಸಾವಿರಕ್ಕೂ ಅಧಿಕ ಮೊತ್ತದಲ್ಲಿ ಮಾರಾಟವಾಗಿವೆ.

    ದುಬೈ, ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಹಾಗೂ ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ವಿರಾಟ್ ಪೇಂಟಿಂಗ್ ಪ್ರದರ್ಶನಗೊಂಡಿದ್ದು, ಭರ್ಜರಿ ವ್ಯಾಪಾರವಾಗುತ್ತಿವೆ. ಇವೆಲ್ಲವೂ ಅಬ್ ಸ್ಟ್ರ್ಯಾಕ್ಟ್ ಪೇಂಟಿಂಗ್ಸ್ ಗಳಾಗಿವೆ. ಈ ಪೇಂಟಿಂಗ್ ಮೇಲೆ ಕ್ರಾಫ್ಟ್ ವರ್ಕ್ ಕೂಡ ಮಾಡಿ ಎಲ್ಲರ ಮನ ಗೆದ್ದಿದ್ದಾನೆ.

    ಕಾರ್ ರೇಸ್ ಟ್ರಾಕ್, ಫ್ಲವರ್ಸ್ ಸೇರಿದಂತೆ ತನ್ನ ಕಲ್ಪನೆಯಲ್ಲಿ ಬರುವ ಅನೇಕ ಕಲಾಕೃತಿಗಳನ್ನು ರಚಿಸಿದ್ದಾನೆ. ಸಾವಿರ ಪದಗಳಲ್ಲಿ ವರ್ಣಿಸಲಾಗದ್ದನ್ನು, ಈ ಚಿತ್ರಗಳ ಮೂಲಕ ಈ ಪುಟಾಣಿ ಹೇಳುತ್ತಿದ್ದಾನೆ. ಇದುವರೆಗೂ ವಿರಾಟ್ 150 ಪೇಂಟಿಂಗ್ಸ್ ಗಳಿಂದ 25 ಲಕ್ಷ ರೂಪಾಯಿ ಗಳಿಸಿದ್ದಾನೆ.

  • ಕಾಲಿನಿಂದಲೇ ವಿಶ್ವದ ಅತೀ ದೊಡ್ಡ ಪೇಂಟಿಂಗ್ ರಚಿಸಿದ ಯುವತಿ

    ಕಾಲಿನಿಂದಲೇ ವಿಶ್ವದ ಅತೀ ದೊಡ್ಡ ಪೇಂಟಿಂಗ್ ರಚಿಸಿದ ಯುವತಿ

    ಹೈದರಾಬಾದ್: ಮುತ್ತಿನನಗರಿ ಹೈದರಾಬಾದ್‍ನ ಯುವತಿಯೊಬ್ಬರು ವಿಶಿಷ್ಟ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ. ಇಲ್ಲಿನ 18 ವರ್ಷದ ಜಾಹ್ನವಿ ಮಗಂಟಿ ಕಾಲಿನಿಂದಲೇ ವಿಶ್ವದ ಬೃಹತ್ ಪೇಂಟಿಂಗ್ ಮಾಡಿದ್ದಾರೆ. ಈ ಮೂಲಕ ಗಿನ್ನಿಸ್ ದಾಖಲೆ ಪುಟ ಸೇರಲು ಯತ್ನಿಸಿದ್ದಾರೆ.

    ಇದುವರೆಗೂ ವೈಕ್ತಿಕವಾಗಿ ಕಾಲಿನಿಂದ ಮಾಡಿದ 100 ಚದರ ಮೀಟರ್ ಪೇಂಟಿಂಗ್ ಗಿನ್ನಿಸ್ ದಾಖಲೆಯ ಪುಟ ಸೇರಿದೆ. ಆದರೆ ಜಾಹ್ನವಿ ಅವರು 140 ಚದರ ಮೀಟರ್ ಪೇಂಟಿಂಗ್ ಮಾಡುವ ಮೂಲಕ ಈ ದಾಖಲೆಯನ್ನ ಮುರಿದಿದ್ದಾರೆ.

    ನಗರದ ಗಚ್ಚಿಬೌಲಿಯ ಕ್ಲಬ್ ಹೌಸ್‍ನಲ್ಲಿ ಶುಕ್ರವಾರ ವಿಶ್ವ ದಾಖಲೆಯ 140 ಚದರ ಮೀಟರ್ ಪೇಂಟಿಂಗ್ ಬಿಡಿಸಿದ್ದಾರೆ. ಗಿನ್ನಿಸ್ ರೆಕಾರ್ಡ್ ಪ್ರತಿನಿಧಿಗಳ ಮುಂದೆ ಜಾಹ್ನವಿ ಪೇಂಟಿಂಗ್ ಮಾಡಿದ್ದಾರೆ. ಕಾಲಿನಿಂದ ಬಣ್ಣಗಳ ಅದ್ಭುತ ಚಿತ್ರವನ್ನು ಬಿಡಿಸಿದ್ದಾರೆ.

    ಬಿಟ್ರನ್‍ ನ ವಾರ್ವಿಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಜಾಹ್ನವಿ ಅವರು ಪೇಂಟಿಂಗ್‍ನಲ್ಲಿ ಮಾತ್ರವಲ್ಲದೇ, ನೃತ್ಯ, ಸಂಗೀತದಲ್ಲೂ ಪರಿಣಿತಿ ಹೊಂದಿದ್ದಾರೆ. ಡ್ಯಾನ್ಸ್ ಮಾಡುತ್ತಾ ಪೇಂಟಿಂಗ್ ಮಾಡುವುದರಲ್ಲೂ ಜಾಹ್ನವಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಕ್ರೀಡೆಯಲ್ಲೂ ಮುಂದಿರುವ ಇವರು ರಾಷ್ಟ್ರೀಯ ತಂಡದ ಬ್ಯಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದಾರೆ. ಇತ್ತೀಚೆಗೆ ಜಾಹ್ನವಿ ಅವರು ನೃತ್ಯ ಮಾಡುತ್ತಾ ಕಮಲ ಹಾಗೂ ನವಿಲುಗರಿಯ ಚಿತ್ರವನ್ನು ಬಿಡಿಸಿದ್ದಾರೆ.