Tag: ಚಿಟ್ಟೆ

  • ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಎದೆ ಮೇಲಿನ ‘ಚಿಟ್ಟೆ’ಗೆ ವಿಶೇಷ ಅರ್ಥ ಕಲ್ಪಿಸಿದ ನಟಿ ಅನನ್ಯ

    ಬಾಲಿವುಡ್ (Bollywood) ಖ್ಯಾತ ನಟಿ ಅನನ್ಯ ಪಾಂಡ್ಯ (Ananya Pandey) ಕಾಸ್ಟ್ಯೂಮ್ (Costume) ವಿಷಯದಲ್ಲಿ ಪಕ್ಕಾ ಕಟ್ಟುನಿಟ್ಟು. ಅವರು ತಮಗಿಷ್ಟದ ಬಟ್ಟೆ ಹೊರತಾಗಿ ಬೇರೆ ಕಾಸ್ಟ್ಯೂಮ್ ಧರಿಸುವುದಿಲ್ಲ. ಈ ಕುರಿತಂತೆ ಹಲವಾರು ಬಾರಿ ಹೇಳಿದ್ದೂ ಇದೆ. ಇತರರಿಗೆ ಮುಜಗರ ಅನಿಸುವಂತಹ ಕಾಸ್ಟ್ಯೂಮ್ ಹಾಕಿಕೊಳ್ಳುವುದಿಲ್ಲ ಎಂದು ಘೋಷಿಸಿ ಆಗಿದೆ. ಆದರೆ, ಎಲ್ಲರೂ ಅಚ್ಚರಿ ಪಡುವಂತಹ ಕಾಸ್ಟ್ಯೂಮ್ ಅನ್ನು ಅನನ್ಯ ಧರಿಸಿದ್ದಾರೆ.

    ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಅದಾಗಿದ್ದು, ಎದೆ ಮೇಲಿನ ಚಿಟ್ಟೆ (Butterfly) ಕಂಡು ಹಲವರು ಹಲವು ರೀತಿಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ಲಕ್ಷಾಂತರ ಜನರು ಲೈಕ್ ಮಾಡಿದ್ದರೆ, ಸಾವಿರಾರು ಜನರು ಕಾಮೆಂಟ್ ಮಾಡಿದ್ದಾರೆ. ಈ ಚಿಟ್ಟೆ ಯಾಕೆ ಎಂದು ಕೇಳಲಾದ ಪ್ರಶ್ನೆಗೆ ಅನನ್ಯ ಸೊಗಸಾಗಿ ಉತ್ತರಿಸಿದ್ದಾರೆ.

    ಅನನ್ಯ ಪಾಂಡೆ ಈ ಬಟ್ಟೆಯನ್ನು ಹಾಕಿದ್ದು ಪ್ಯಾರಿಸ್ ನಲ್ಲಿ ನಡೆದ ಫ್ಯಾಷನ್ ಶೋ ನಲ್ಲಿ. ಈ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ರಾಹುಲ್ ಮಿಶ್ರಾ. ಪರಿಸರ ಮತ್ತು ಕೀಟಗಳ ಮೇಲಿನ ಪ್ರೀತಿಯಿಂದಾಗಿ ಇಂಥದ್ದೊಂದು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರಂತೆ ರಾಹುಲ್. ಅಳಿವಿನಂಚಿಗೆ ತಳ್ಳಿರುವ ಕೀಟಗಳನ್ನು ಉಳಿಸೋ ಜಾಗೃತಿ ಕೂಡ ಇದಾಗಿದೆಯಂತೆ.

     

    ಪ್ರಾಣಿ, ಪಕ್ಷಿಗಳು ಹಾಗೂ ಕೀಟಗಳ ಬಗ್ಗೆ ಅನನ್ಯ ಯಾವಾಗಲೂ ಕಾಳಜಿ ತೋರಿಸುತ್ತಲೇ ಇರುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹಾಕುವ ಮೂಲಕ ಫ್ಯಾಷನ್ ವೇದಿಕೆಯ ಮೇಲೆ ಕಾಳಜಿ ಪ್ರದರ್ಶಿಸಿದ್ದಾರೆ.

  • ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    ಮಳೆಗಾಲದಲ್ಲಿ ಮೋಡಿ ಮಾಡುವ ಅಟ್ಲಾಸ್ ಮೋತ್

    – ಉಡುಪಿಯ ಚಿಟ್ಟೆ ಆಸಕ್ತ ನಜೀರ್‌ರಿಂದ ಆನ್‍ಲೈನ್ ಕಾರ್ಯಾಗಾರ

    ಉಡುಪಿ: ದೈತ್ಯಾಕಾರದ ಪತಂಗ ಅಟ್ಲಾಸ್ ಮೋತ್ ಉಡುಪಿ ಜಿಲ್ಲೆಯ ಹಲವು ಭಾಗಗಳಲ್ಲಿ ಪತ್ತೆಯಾಗುತ್ತಿದೆ. ಬೃಹತ್ ಆಕಾರದಲ್ಲಿರುವ ಈ ಪತಂಗವು ಎಲ್ಲರಲ್ಲೂ ಆಶ್ಚರ್ಯ ಮತ್ತು ಕುತೂಹೂಲ ಮೂಡಿಸುತ್ತದೆ.

    ಬಹುತೇಕ ಮಂದಿ ಇದನ್ನು ಚಿಟ್ಟೆ ಅಥವಾ ಪಾತರಗಿತ್ತಿ ಎಂದೇ ಭಾವಿಸಿಕೊಂಡಿದ್ದಾರೆ. ಇದು ಪತಂಗವೇ ಹೊರತು ಚಿಟ್ಟೆ ಅಲ್ಲ. ಪತಂಗವನ್ನು ಆಂಗ್ಲ ಭಾಷೆಯಲ್ಲಿ ಮೊತ್ ಎಂಬುದಾಗಿ ಕರೆಯಲಾಗುತ್ತದೆ. ಚಿಟ್ಟೆಗೂ ಪತಂಗಕ್ಕೂ ತುಂಬಾ ವ್ಯಾತ್ಯಾಸ ಇದೆ. ಪತಂಗವೂ ಹಲವು ವರ್ಷಗಳ ಹಿಂದೆ ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಪತಂಗ ಎಂಬುದಾಗಿ ಗುರುತಿಸಿಕೊಂಡಿತ್ತು. ಅಧ್ಯಯನದಲ್ಲಿ ಇದಕ್ಕಿಂತ ದೊಡ್ಡ ಗಾತ್ರದ ಪತಂಗ ಇರುವುದನ್ನು ಗುರುತಿಸಲಾಗಿದೆ.

    ಈ ಪತಂಗವನ್ನು ಬೃಹತ್ ಆಕಾರದ ಪಂತಗ ಎಂಬುದಾಗಿ ಬರೆಯಬಹುದೇ ಹೊರತು ಪ್ರಪಂಚದ ಅತ್ಯಂತ ದೊಡ್ಡ ಪತಂಗ ಎಂಬುದು ಬರೆಯುವುದು ಸರಿಯಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಪಂಚದ ಅತ್ಯಂತ ಬೃಹತ್ ಗಾತ್ರದ ಈ ಪತಂಗದ ವೈಜ್ಞಾನಿಕ ಹೆಸರು ಅಟ್ಟಾಕಾಸ್ ಅಟ್ಲಾಸ್. ಇದರ ರೆಕ್ಕೆಯ ವಿಸ್ತೀರ್ಣ 24 ಸೆ.ಮೀ. ಆಗಿದೆ. ಈ ಪತಂಗ ಸ್ಥಳೀಯವಾಗಿ ಕಂಡುಬರುವ ಪೇರಳೆ, ಸಂಪಿಗೆ ಸೇರಿದಂತೆ ಕೆಲವೊಂದು ಸೀಮಿತ ಮರಗಳ ಎಲೆಗಳಲ್ಲಿ ಮೊಟ್ಟೆ ಇಡುತ್ತದೆ.

    ಮೊಟ್ಟೆಯಿಂದ ಹೊರ ಬರುವ ಹುಳ ಆ ಮರದ ಎಲೆಗಳನ್ನು ತಿಂದು ಕೋಶವನ್ನು ರಚಿಸುತ್ತದೆ. ಅದರಿಂದ ಹೊರಗೆ ಬರುವ ಗಂಡು ಪತಂಗವು, ಹೆಣ್ಣು ಪತಂಗದೊಂದಿಗೆ ಸೇರಿ ಸಾಯುತ್ತದೆ. ಮುಂದೆ ಹೆಣ್ಣು ಪತಂಗ ಮೊಟ್ಟೆ ಇಟ್ಟು ನಂತರ ಸಾಯುತ್ತದೆ ಎಂದು ಉಡುಪಿಯ ಚಿಟ್ಟೆ ಆಸಕ್ತ, ತಜ್ಞ, ಛಾಯಾಗ್ರಾಹಕ ನಜೀರ್ ಪೊಲ್ಯ ಮಾಹಿತಿ ನೀಡಿದ್ದಾರೆ. ಉಡುಪಿಯಲ್ಲಿ ಅವರು ಚಿಟ್ಟೆಗಳ ಬಗ್ಗೆ ವಿಶೇಷ ಆನ್‍ಲೈನ್ ಕಾರ್ಯಾಗಾರ ನಡೆಸಿ ಮಾಹಿತಿ ನೀಡಿದರು.

    ವಿಶೇಷ ಅಂದರೆ ಈ ಪತಂಗಕ್ಕೆ ಬಾಯಿ, ಜೀರ್ಣಾಂಗ ವ್ಯವಸ್ಥೆ ಎಂಬುದೇ ಇಲ್ಲ. ಆದುದರಿಂದ ಕೋಶದಿಂದ ಹೊರಬಂದು ಪೂರ್ಣಾವಸ್ಥೆಯ ಪತಂಗ ಆದ ನಂತರ ಯಾವುದನ್ನೂ ತಿನ್ನುವುದಿಲ್ಲ. ಇದಕ್ಕೆ ಬೇಕಾದ ಎಲ್ಲ ಎನರ್ಜಿಯನ್ನು ಹುಳ ಆಗಿರುವಾಗಲೇ ಎಲೆಗಳನ್ನು ತಿಂದು ಇಟ್ಟುಕೊಳ್ಳುತ್ತದೆ. ಇದು ಒಂದು ಅಥವಾ ಎರಡು ವಾರಗಳ ಕಾಲ ಮಾತ್ರ ಬದುಕಿರುತ್ತದೆ.

    ತನ್ನ ಎನರ್ಜಿಯನ್ನು ಹಾಗೆಯೇ ಉಳಿಸಿಕೊಳ್ಳಲು ಅದು ತುಂಬಾ ಕಡಿಮೆ ಹಾರಾಟ ಮಾಡುತ್ತದೆ. ಹೆಚ್ಚು ಸಮಯ ಎಲೆಯ ಮೇಲೆ ವಿಶ್ರಾಂತಿಯಲ್ಲಿರುತ್ತದೆ. ದಿನ ಕಳೆದಂತೆ ತುಂಬಾ ಬಲಹೀನವಾಗುವ ಈ ಪತಂಗ ಹಕ್ಕಿ, ಓತಿ, ಇರುವೆಗಳಿಗೆ ಆಹಾರವಾಗುತ್ತದೆ ಎಂದು ಉಡುಪಿಯ ಚಿಟ್ಟೆ ತಜ್ಞ ನಜೀರ್ ತಿಳಿಸಿದ್ದಾರೆ.

  • ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

    ರಾಜ್ಯದಲ್ಲಿ ಮೊದಲ ಬಾರಿ ಪತಂಗಗಳ ಗಣತಿ- ದಾಂಡೇಲಿಯಲ್ಲಿ ನಡೆಯಲಿದೆ ಉತ್ಸವ

    ಕಾರವಾರ: ರಾಜ್ಯದಲ್ಲಿ ಪ್ರಥಮ ಬಾರಿಗೆ ಪತಂಗಗಳ ಗಣತಿ ನಡೆಸಲು ಅರಣ್ಯ ಇಲಾಖೆ ಮುಂದಾಗಿದೆ. ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯಲ್ಲಿ ಡಿ. 14 ಹಾಗೂ 15 ರಂದು ಬೆಂಗಳೂರು ಬಟರ್ ಫ್ಲೈ ಕ್ಲಬ್ (ಬಿಬಿಸಿ)ಸಹಕಾರದೊಂದಿಗೆ ಆಯೋಜಿಸಲು ಸಿದ್ಧತೆ ನಡೆದಿದೆ.

    ರಾಜ್ಯದಲ್ಲಿ ಅಂದಾಜು 130 ಪ್ರಭೇದದ ಪತಂಗಗಳಿವೆ. ಆದರೆ, ಕೇರಳ, ತಮಿಳುನಾಡಿನಲ್ಲಿ ಹೊರತುಪಡಿಸಿದರೆ ಇದುವರೆಗೂ ಅವುಗಳ ಸಮೀಕ್ಷೆ ಎಲ್ಲೂ ನಡೆದಿಲ್ಲ.

    ಗಣತಿ ಹೇಗೆ ಮಾಡಲಾಗುತ್ತದೆ?
    ಪ್ರಾಣಿಗಳನ್ನಾದರೆ ಹೆಜ್ಜೆ ಗುರುತು ಹಾಗೂ ಕ್ಯಾಮೆರಾ ಮೂಲಕ ಟ್ರ್ಯಾಪ್ ಮಾಡಿ ಮಾಡಲಾಗುತ್ತದೆ. ಆದರೆ ಚಿಟ್ಟೆಗಳ ಗಣತಿ ಮಾಡಬೇಕಾದರೆ ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಅವುಗಳ ಚಲನ-ವಲನ ಸಮಯ ಹೀಗೆ ಪ್ರತಿಯೊಂದನ್ನೂ ಲೆಕ್ಕ ಹಾಕಿ ಅವುಗಳ ಬಣ್ಣ ಆಕಾರ, ದೇಹದ ಶೈಲಿ ಹೀಗೆ ಪ್ರತಿಯೊಂದರ ಮೇಲೂ ನಿಗಾ ಇಟ್ಟು ಮಾಡಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನುರಿತ ತಜ್ಞರು, ಛಾಯಾಗ್ರಾಹಕರನ್ನು ಒಳಗೊಂಡ ತಂಡವನ್ನು ಅರಣ್ಯ ಇಲಾಖೆ ಜೊತೆಗೂಡಿ ಕಾಡಿನಲ್ಲಿ ಸುತ್ತಾಡಲಿದೆ. ಕರ್ನಾಟಕದ ನಿತ್ಯ ಹರಿದ್ವರ್ಣ ಕಾಡುಗಳನ್ನು ಒಳಗೊಂಡಿರುವ ದಾಂಡೇಲಿ ಹುಲಿ ರಕ್ಷಿತಾ ಕಾಡನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಗಣತಿ ಹೇಗೆ ನಡೆಯಬೇಕು, ಯಾವ್ಯಾವ ಕಾರ್ಯಕ್ರಮಗಳು ಇರಬೇಕು ಎಂಬುದು ನಿರ್ಧರಿಸಿ ಕಾರ್ಯಾಚರಣೆಗೆ ಇಳಿಯಲಿದೆ.

    ದಾಂಡೇಲಿ ಪ್ರದೇಶವೇ ಆಯ್ಕೆ ಏಕೆ? ವಿಶೇಷತೆಯೇನು?
    ದಾಂಡೇಲಿ, ಜೊಯಿಡಾ, ಹಳಿಯಾಳ ತಾಲೂಕುಗಳನ್ನೊಳಗೊಂಡ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ. ಇದು 1,300 ಚದರ ಕಿ.ಮೀಯಷ್ಟು ವ್ಯಾಪ್ತಿಯನ್ನು ವಿಸ್ತಾರವಾಗಿ ಹೊಂದಿದೆ. ಇಲ್ಲಿನ ವಾತಾವರಣ ಪರಿಸರ ಸಾಕಷ್ಟು ಪ್ರಭೇದಗಳ ಪತಂಗಗಳಿಗೆ ಆವಾಸ ಸ್ಥಾನ ಕೂಡ ಆಗಿದೆ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ಈ ಪ್ರದೇಶ ಜನರನ್ನು ಸೆಳೆಯುವ ಆಲೋಚನೆಯೂ ಅರಣ್ಯ ಇಲಾಖೆಯ ಉದ್ದೇಶವಾಗಿದೆ.

    ಇಲ್ಲಿರುವ ಪತಂಗಗಳ ಅಂದ, ಚಂದ ನೋಡುವ, ಕ್ಯಾಮೆರಾಗಳಲ್ಲಿ ಸೆರೆ ಹಿಡಿಯುವ, ತಜ್ಞರನ್ನು ಕರೆಸಿ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಸುವ ಆಸಕ್ತರಿಗೆ ಇದೊಂದು ಬಟರ್ ಫ್ಲೈ ಉತ್ಸವವಾಗಿ ರೂಪಿಸುವುದು ಅರಣ್ಯ ಇಲಾಖೆಯ ಉದ್ದೇಶ ಕೂಡ ಆಗಿದೆ.

    ದಾಂಡೇಲಿ ಹಾರ್ನ್ ಬಿಲ್ ಸಂರಕ್ಷಿತ ಅರಣ್ಯ ಎಂಬ ಖ್ಯಾತಿ ಕೂಡ ಇದ್ದು, ಪ್ರತಿ ವರ್ಷ ದಾಂಡೇಲಿಯಲ್ಲಿ ಹಾರ್ನ್ ಬಿಲ್ ಉತ್ಸವ ಆಯೋಜಿಸಲಾಗುತ್ತಿದೆ. ಕೈಗಾ ಹಾಗೂ ದಾಂಡೇಲಿಗಳಲ್ಲಿ ಹಲವು ವರ್ಷಗಳಿಂದ ಬರ್ಡ್ ಮ್ಯಾರಾಥಾನ್ ಆಯೋಜಿಸುವ ಮೂಲಕ ಪಕ್ಷಿಗಳ ಪ್ರಭೇದದ ದಾಖಲೀಕರಣ ನಡೆಸಲಾಗುತ್ತಿದೆ.

    ಅದೇ ಮಾದರಿಯಲ್ಲಿ ಬಟರ್ ಫ್ಲೈ ಉತ್ಸವ ಆಯೋಜಿಸಿದ್ದಲ್ಲಿ ದಾಂಡೇಲಿ ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ದೊರಕುವ ಜೊತೆಗೆ ಚಿಟ್ಟೆಗಳ ಬಗ್ಗೆ ಅಧಿಕೃತ ಅಧ್ಯಯನಕ್ಕೂ ಚಾಲನೆ ದೊರೆಯಲಿದೆ ಎಂಬುದು ಅಧಿಕಾರಿಗಳ ಯೋಜನೆಯಾಗಿದೆ.

    ಪತಂಗ ಪಾರ್ಕ್:
    ಜೊಯಿಡಾ, ಕಾರವಾರದಲ್ಲಿ ಅರಣ್ಯ ಇಲಾಖೆ ಚಿಟ್ಟೆ ಪಾರ್ಕ್ ನಿರ್ಮಿಸಿದೆ. ಕೈಗಾದಲ್ಲಿ ಎನ್ ಪಿಸಿಐಎಲ್ ಚಿಟ್ಟೆ ಪಾರ್ಕ್ ಅಭಿವೃದ್ಧಿ ಮಾಡಿದೆ. ಆದರೆ, ಅವುಗಳ ಗಣತಿ, ದಾಖಲೀಕರಣ, ಅಧ್ಯಯನ ಇಲಾಖೆಯಿಂದ ನಡೆದಿಲ್ಲ. ಈ ಗಣತಿ ಚಿಟ್ಟೆ ಪಾರ್ಕ್ ಗಳ ಅಭಿವೃದ್ಧಿಗೂ ಮುಂದೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ.

    ಅರಣ್ಯಾಧಿಕಾರಿಗಳಿಗೆ ಹೆಚ್ಚಿನ ಮಾಹಿತಿ ಇಲ್ಲ!
    ದಾಂಡೇಲಿಯಲ್ಲಿ ಚಿಟ್ಟೆಗಳ ಗಣತಿ ಕಾರ್ಯ ನಡೆಸಲು ಯೋಜಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಹಣ ಕೂಡ ಮೀಸಲಿಡಲಾಗಿದ್ದು ಕಮಿಟಿ ಸಹ ಮಾಡಿದೆ. ಆದರೆ ಅದರ ಅಧಿಕೃತ ರೂಪುರೇಷೆ ಇದುವರೆಗೂ ಸಿದ್ಧವಾಗಿಲ್ಲ. ಗಣತಿ ಬಗ್ಗೆ ಯಾವುದೇ ಮಾಹಿತಿ ಅರಣ್ಯ ಅಧಿಕಾರಿಗಳಿಗೆ ಕೂಡ ಇಲ್ಲ. ಎಲ್ಲವನ್ನೂ ಬೆಂಗಳೂರಿನ ಬಟರ್ ಪ್ಲೈ ಕ್ಲಬ್ ನವರನ್ನು ಆಶ್ರಯಿಸಿದೆ.

    ಇಲಾಖೆ ಪ್ರಬಾರ ಡಿಎಫ್ ಒ ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ಅಧಿಕಾರಿ ವಸಂತ ರೆಡ್ಡಿ ರವರಿಗೆ ವಹಿಸಿದೆ. ಆದರೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪತಂಗಗಳ ಅಧ್ಯಯನಕ್ಕೆ ಕೈ ಹಾಕಿರುವುದು ಶ್ಲಾಘನೀಯ. ಆದರೆ ಕೇವಲ ಸರ್ಕಾರದಿಂದ ಬರುವ ಅನುದಾನವನ್ನು ಖರ್ಚು ಮಾಡುವುದಕ್ಕಷ್ಟೇ ಸೀಮಿತವಾಗಿರದಿರಲಿ ಎಂಬುದೇ ನಮ್ಮ ಆಶಯ. ಪ್ರಶಾಂತ್ ಎಸ್.ಎನ್ ಅವರ ಕ್ಯಾಮೆರಾದಲ್ಲಿ ಚಿಟ್ಟೆಗಳು ಸೆರೆಯಾಗಿವೆ.

  • ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ ಚಿಟ್ಟೆ ಹರ್ಷಿಕಾ!

    ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ ಚಿಟ್ಟೆ ಹರ್ಷಿಕಾ!

    ಬೆಂಗಳೂರು: ಒಂದಷ್ಟು ಕಾಲ ಚಿತ್ರರಂಗದಿಂದ ಮರೆಯಾದಂತಿದ್ದ ಹರ್ಷಿಕಾ ಪೂಣಚ್ಚ ಚಿಟ್ಟೆ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದರ ಜೊತೆಗೇ ಹರ್ಷಿಕಾರ ಪಾತ್ರ ಮತ್ತು ಅಭಿನಯವನ್ನೂ ಕೂಡಾ ಮೆಚ್ಚಿಕೊಂಡಿದ್ದಾರೆ. ರೀಎಂಟ್ರಿ ಕೊಟ್ಟ ಘಳಿಗೆಯಲ್ಲಿಯೇ ಇಂಥಾದ್ದೊಂದು ಗೆಲುವು ಸಿಕ್ಕಿದ್ದರಿಂದ ಹರ್ಷಿಕಾ ಖುಷಿಗೊಂಡಿದ್ದಾರೆ.

    ಈ ಖುಷಿಯನ್ನು ಡಿಫರೆಂಟಾಗಿ ಸೆಲೆಬ್ರೇಟ್ ಮಾಡೋ ಇರಾದೆಯಿಂದ ಸೀದಾ ಆಮ್‍ಸ್ಟರ್ ಡ್ಯಾಮ್‍ಗೆ ಹಾರಿದ್ದಾರಂತೆ. ಈ ವಿಚಾರವನ್ನು ಖುದ್ದು ಹರ್ಷಿಕಾ ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರು ಮಾಡಿದ್ದಾರೆ.

    https://twitter.com/actressharshika/status/1021661279453425664

    ಆಮ್‍ಸ್ಟರ್ ಡ್ಯಾಮ್‍ಗೆ ಹರ್ಷಿಕಾ ಕೆಲ ಸ್ನೇಹಕೂಟದೊಂದಿಗೆ ತೆರಳಿದ್ದಾರೆ. ಅಲ್ಲಿನ ಸುಂದರವಾದ ವಾತಾವರಣದಲ್ಲಿ ಇವರೆಲ್ಲರೊಂದಿಗೆ ಅವರು ಚೆಂದದ್ದೊಂದು ಪಾರ್ಟಿ ಆಯೋಜಿಸಿದ್ದಾರಂತೆ. ಅಚಾನಕ್ಕಾಗಿ ಬಹುಕಾಲದಿಂದ ಹಂಬಲಿಸಿದ್ದ ಗೆಲುವೊಂದು ಸಿಕ್ಕು ಬಿಟ್ಟರೆ ಮನಸು ಚಿಟ್ಟೆಯಾಗಿ ಹಾರಾಡುತ್ತದಲ್ಲಾ, ಅಂಥಾದ್ದೇ ಮೂಡಿನಲ್ಲಿರುವ ಹರ್ಷಿಕಾ ಖುಷಿಗೆ ಎಣೆಯಿಲ್ಲದಂತಾಗಿದೆ.

    ಚಿಟ್ಟೆ ಚಿತ್ರದ ನಂತರ ಹಲವಾರು ಕನ್ನಡ ಚಿತ್ರಗಳ ಅವಕಾಶಗಳು ಹರ್ಷಿಕಾರನ್ನು ಅರಸಿ ಬರಲಾರಂಭಿಸಿವೆಯಂತೆ. ಆದರೆ ಅವೆಲ್ಲವನ್ನೂ ಪರಿಶೀಲಿಸಿ ಈ ಪಾರ್ಟಿ ಮುಗಿಸಿಕೊಂಡು ಬಂದ ನಂತರವಷ್ಟೇ ಹರ್ಷಿಕಾ ಹೊಸಾ ಚಿತ್ರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳೋ ತೀರ್ಮಾನ ಮಾಡಿದಂತಿದೆ.

  • ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಕಾಸ್ಟಿಂಗ್ ಕೌಚ್‍ನಿಂದಾಗಿ ಎರಡು ಬಾಲಿವುಡ್ ಸಿನಿಮಾ ಕೈ ಬಿಟ್ಟೆ: ಹರ್ಷಿಕಾ ಪೂಣಚ್ಚ

    ಬೆಂಗಳೂರು: ಕಾಸ್ಟಿಂಗ್ ಕೌಚ್ ಬಗ್ಗೆ ಮತ್ತೊಬ್ಬ ಕನ್ನಡದ ನಟಿ ಮಾತನಾಡಿದ್ದಾರೆ. ಬಾಲಿವುಡ್ ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದಾರೆ.

    ಬಾಲಿವುಡ್‍ನಲ್ಲಿ ನಾನು ಎರಡು ದೊಡ್ಡ ಸಿನಿಮಾಗಳನ್ನು ಮಾಡಬೇಕಿತ್ತು. ಕಾಸ್ಟಿಂಗ್ ಕೌಚ್ ಕಾರಣದಿಂದಾಗಿ ಸಿನಿಮಾ ಬಾಲಿವುಡ್ ಸಿನಿಮಾ ಬಿಟ್ಟು ಹೊರ ಬಂದಿದ್ದೇನೆ ಎಂದು ನಟಿ ಹರ್ಷಿಕಾ ಪೂಣಚ್ಚ ಚಿಟ್ಟೆ ಸಿನಿಮಾದ ಸಾಂಗ್ ಲಾಂಚ್ ವೇಳೆ ಅನುಭವವನ್ನು ಹಂಚಿಕೊಂಡಿದ್ದಾರೆ.

    ಹರ್ಷಿಕಾ ಪೂಣಚ್ಚ ಹೇಳಿದ್ದು ಹೀಗೆ:
    ಅವಕಾಶ ಇದೆ ಎನ್ನುವ ಕಾರಣಕ್ಕೆ ನಾನು ಬಾಲಿವುಡ್‍ಗೆ ಹೋಗಿದ್ದೆ. ಆದರೆ ಸಿನಿಮಾ ಶುರುವಾಗಿರಲಿಲ್ಲ. ಸಿನಿಮಾ ಶೂಟಿಂಗ್‍ಗಾಗಿ ಫೋಟೋಶೂಟ್‍ ಕೂಡ ಮಾಡಿಸಿ ಎಲ್ಲ ತಯಾರಿ ನಡೆಸಿಕೊಳ್ಳಲಾಗಿತ್ತು. ಸಿನಿಮಾ ಶೂಟಿಂಗ್‍ಗೆ ಒಂದು ವಾರ ಇದ್ದಾಗ ಮ್ಯಾನೇಜರ್ ಕರೆ ಮಾಡಿ, ನಮ್ಮ ಪ್ರೊಡಕ್ಷನ್ ನಿಮ್ಮ ಜೊತೆ ಕಮಿಟ್‍ಮೆಂಟ್ ಮಾಡಲು ಇಚ್ಛಿಸುತ್ತಿದೆ ಎಂದು ಹೇಳಿದ್ದರು.

    ಈ ಕರೆಗೆ ಸಿಟ್ಟಾಗಿ ನಾನು, ಸರಿ ಎಂದು ಹೇಳಿ ಮೊದಲ ಫ್ಲೈಟ್‍ನಲ್ಲೇ ಮುಂಬೈನಿಂದ ಬೆಂಗಳೂರಿಗೆ ಬಂದೆ. ನಾನು ಅವರಿಗೆ ಒಂದು ಮಾತನ್ನು ಹೇಳಲಿಲ್ಲ. ಅವರಿಗೆ ನಾನು ಎಲ್ಲಿ ಹೋದೆ ಎಂಬುದು ತಿಳಿಯಲಿಲ್ಲ. ನನ್ನ ಫೋನ್ ಕೂಡ ಸ್ವಿಚ್ ಆಫ್ ಮಾಡಿ ನಾನು ಅಲ್ಲಿಂದ ಹೊರಡಿದ್ದೆ ಮತ್ತೆ ಅವರನ್ನು ನಾನು ಸಂಪರ್ಕಿಸಲು ಇಷ್ಟಪಡಲಿಲ್ಲ. ಏಕೆಂದರೆ ಇದು ನನ್ನ ನಿರ್ಧಾರ. ನನಗೆ ಒಂದು ಇಷ್ಟವಿಲ್ಲ ಎಂದರೆ ಅದು ನನಗೆ ಇಷ್ಟವಿಲ್ಲ ಎಂದೇ ಅರ್ಥ.

    ಈ ವಿಷಯದಲ್ಲಿ ನಾನು ಯಾರನ್ನೂ ಆರೋಪಿಸುವುದಿಲ್ಲ. ಏಕೆಂದರೆ ನಮ್ಮ ಸ್ಯಾಂಡಲ್‍ವುಡ್ ನಲ್ಲಿ ಈ ರೀತಿ ಎಂದಿಗೂ ನಡೆಯಲಿಲ್ಲ. ಹಾಗಾಗಿ ನಾನು ಆರಾಮಾಗಿ ಆಟವಾಡಿಕೊಂಡು ಸಿನಿಮಾ ಮಾಡುತ್ತಿದ್ದೆ. ಒಂದೇ ಬಾರಿಗೆ ಒಂದು ದೊಡ್ಡ ಹೆಜ್ಜೆ ಇಟ್ಟು ದೊಡ್ಡ ಮೀನು ಹಿಡಿಯುವುದಕ್ಕೆ ಬಾಲಿವುಡ್‍ಗೆ ಕಾಲಿಟ್ಟೆ. ಆದರೆ ಈ ವಿಚಾರ ಗೊತ್ತಾಗಿ ನನಗೆ ಬೇಸರವಾಯಿತು. ಇದನ್ನೂ ಓದಿ: ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ

    ನಾನು 15 ವರ್ಷವಿರುವಾಗ ಚಿತ್ರರಂಗಕ್ಕೆ ಕಾಲಿಟ್ಟಿದೆ. ಆಗ ಸ್ಯಾಂಡಲ್‍ವುಡ್‍ನಲ್ಲಿ ನನಗೆ ತುಂಬಾ ಚೆನ್ನಾಗಿ ನೋಡಿಕೊಂಡರು. ಹಾಗಾಗಿ ಆಟವಾಡಿಕೊಂಡು ಸಿನಿಮಾಗಳನ್ನು ಮಾಡುತ್ತಿದೆ. ಹಾಗಾಗಿ ನನಗೆ ಕಾಸ್ಟಿಂಗ್ ಕೌಚ್ ಬಗ್ಗೆ ತಿಳಿದಿರಲಿಲ್ಲ. ಮೊದಲ ಬಾರಿಗೆ ಬಾಲಿವುಡ್‍ಗೆ ಹೋದಾಗ ನನಗೆ ಈ ರೀತಿಯ ಅನುಭವ ಆಯ್ತು. ಅವರು ಆ ರೀತಿ ಹೇಳಿದ್ದಾಗ ನಾನು ಅವರ ಚಿತ್ರಕ್ಕೆ ಸೂಕ್ತ ವ್ಯಕ್ತಿ ಅಲ್ಲ ಎಂದು ಅಲ್ಲಿಂದ ನನ್ನ ತಂದೆ ಜೊತೆ ಹೊರಟು ಬೆಂಗಳೂರಿಗೆ ಬಂದೆ. ಇದನ್ನೂ ಓದಿ: ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಬೆಂಗಳೂರಿಗೆ ಬಂದಾಗ ಪ್ರತಿಯೊಬ್ಬರು ನಾನು ಬಾಲಿವುಡ್‍ಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿದೆ ಎಂದು ಹೇಳುತ್ತಿದ್ದರು. ಆದರೆ ನನಗೆ ಆ ಸಮಯ ಏನು ಹೇಳಬೇಕೆಂಬುದು ತಿಳಿದಿರಲಿಲ್ಲ. ಬಾಲಿವುಡ್ ಸಿನಿಮಾ ಅವಕಾಶ ಸಿಕ್ಕ ಖುಷಿಗೆ ನಾನು ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿದ್ದೆ. ಆ ಸಮಯದಲೇ ನನಗೆ ಆ ವಿಷಯದ ಬಗ್ಗೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನಾನು ಅದರ ಬಗ್ಗೆ ಯೋಚಿಸುತ್ತಿರಲಿಲ್ಲ. ಆಗ ನಾನು ಅಲ್ಲಿ ನನಗೆ ತೊಂದರೆ ಆಗಿದೆ ಎಂದು ಎಲ್ಲರಿಗೂ ಹೇಳುತ್ತಿದ್ದೇನೆ ಎಂದರು.

    https://www.youtube.com/watch?v=5JRSNBMt95Q

  • ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಚೆಲುವೆ ಹರ್ಷಿಕಾ ಮೈ ಮೇಲೆ ಚಿಟ್ಟೆಯ ಚಿತ್ತಾರ

    ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ತಮ್ಮ ಮೈ ಮೇಲೆ ಸುಂದರವಾದ ಚಿಟ್ಟೆಯ ಚಿತ್ತಾರವನ್ನು ಬಿಡಿಸಿಕೊಂಡಿದ್ದಾರೆ. ಚಿಟ್ಟೆ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರಕ್ಕಾಗಿ ಪಾತರಗಿತ್ತಿಯ ಚಿತ್ರದ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

    ಹೊಸದಾಗಿ ಮದುವೆಯಾದ ನವಜೋಡಿ ತಮ್ಮ ಹನಿಮೂನ್ ಬಳಿಕ ಹೊಸ ಜೀವನ ಕಟ್ಟಿಕೊಳ್ಳುವ ಸುಂದರ ಕಥೆಯನ್ನು ಸಿನಿಮಾ ಹೊಂದಿದೆ. `ರಂಗಪ್ಪ ಹೋಗಿ ಬಿಟ್ನಾ’ ಸಿನಿಮಾ ನಿರ್ದೇಶನ ಮಾಡಿದ್ದ ಎಂ.ಎಲ್.ಪ್ರಸನ್ನ ಚಿಟ್ಟೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

    ಚಿತ್ರಕ್ಕಾಗಿ ಹರ್ಷಿಕಾ ಮೈ ಮೇಲೆ ವಸ್ತ್ರ ವಿನ್ಯಾಸಕಿ ಚಂದನಾ ಆರಾಧ್ಯ ಅವರು ಚಿತ್ರ ಬಿಡಿಸಿದ್ದಾರೆ. ಹರ್ಷಿಕಾ ಮೈ ಮೇಲೆ ಚಿಟ್ಟೆ ಚಿತ್ರ ಬಿಡಿಸುವಾಗ ಚಂದನಾ ನರ್ವಸ್ ಆಗಿದ್ದರೂ ಸತತ 4 ಗಂಟೆಗಳ ಪರಿಶ್ರಮದಲ್ಲಿ ಸುಂದರ ಚಿಟ್ಟೆಯನ್ನು ಸೃಷ್ಟಿಸಿದ್ದಾರೆ. ಸುಮಾರು 12 ಗಂಟೆಗಳ ಕಾಲ ಹರ್ಷಿಕಾ ಅವರ ಮೈ ಮೇಲೆ ಚಿಟ್ಟೆಯ ಚಿತ್ರವಿತ್ತು.

    ಮೈ ಮೇಲೆ ಚಿಟ್ಟೆ ಹಾಕಿಸಿಕೊಂಡಾಗ ನನ್ನ ಹೈಸ್ಕೂಲ್ ದಿನಗಳು ನೆನಪಿಗೆ ಬಂದವು. ಚಿಟ್ಟೆಯಲ್ಲಿ ನಾನು ನಟಿಸುತ್ತಿರುವುದು ಸಾಕಷ್ಟು ಖುಷಿಯನ್ನು ಕೊಟ್ಟಿದೆ. ವಿಭಿನ್ನ ಪಾತ್ರಗಳಲ್ಲಿ ನಟಿಸಬೇಕೆಂದು ಹಲವು ದಿನಗಳ ಕಾಯುತ್ತಿದ್ದೇವೆ. ಆ ವೇಳೆ ನನಗೆ ದೊರೆತಿದ್ದು `ಚಿಟ್ಟೆ’ ಸಿನಿಮಾ ಎಂದು ಹರ್ಷಿಕಾ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

    ಚಿತ್ರದಲ್ಲಿ ನಾಯಕ ನಟನಾಗಿ ಯಶಸ್ ಸೂರ್ಯ ನಟಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣವಿದ್ದು, ಪ್ರಸನ್ನ ಮತ್ತು ಬಿ.ಶ್ರೀನಿವಾಸ ಚಿಟ್ಟೆಗೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳ ಚಿತ್ರೀಕರಣ ಮುಗಿದಿದೆ. ನಿದೇಶಕ ಪ್ರಸನ್ನ ಅವರ ಸಿನಿಮಾಗೆ ಸಂಗೀತ ನೀಡಿದ್ದಾರೆ.

    https://twitter.com/actressharshika/status/925281087449735170