Tag: ಚಾರ್ಜ್ ಶೀಟ್

  • ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

    ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ

    ಬೆಂಗಳೂರು: ಅಂಬಿಡೆಂಟ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಬಳ್ಳಾರಿ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ವಿರುದ್ಧ ವಿಶೇಷ ತನಿಖಾ ತಂಡ (ಎಸ್‍ಐಟಿ) ಚಾರ್ಜ್ ಶೀಟ್ ಸಲ್ಲಿಸಿದೆ.

    ಶೇಖ್ ಸಾಬ್ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿ ಮತ್ತು ಆಪ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ್ಕಕೆ ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿ ಜನಾರ್ದನ ರೆಡ್ಡಿ ಎ 1 ಆರೋಪಿಯಾಗಿದ್ದು, ಎ 2 ಆಗಿ ಅಲಿಖಾನ್ ಹಾಗೂ ಎ 3 ಆರೋಪಿಯಾಗಿ ಶ್ರೀನಿವಾಸ ರೆಡ್ಡಿ ಅವರ ಹೆಸರು ಉಲ್ಲೇಖ ಮಾಡಲಾಗಿದೆ. ಉಳಿದಂತೆ ಮತ್ತೊಬ್ಬ ಆರೋಪಿ ಖಾರದ ಪುಡಿ ಮಹೇಶ್ ಸೇರಿ ಹಲವರನ್ನು ಚಾರ್ಜ್ ಶೀಟ್ ನಿಂದ ಕೈ ಬಿಡಲಾಗಿದೆ.

    ಜನಾರ್ದನ ರೆಡ್ಡಿ ವಿರುದ್ಧ IPಅ 379, 420, 120ಬಿ, ಎಂಎಂಡಿಆರ್ ಕಾಯ್ದೆಯ 125ನಿಯಮ, ಕರ್ನಾಟಕ ಅರಣ್ಯ ಖಾಯ್ದೆ ನಿಯಮ 144ರ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಸುಮಾರು 1,069 ಮೆಟ್ರಿಕ್ ಟನ್ ಅದಿರು ಅಕ್ರಮ ಗಣಿಗಾರಿಗೆ ನಡೆಸಿದ್ದಾರೆ ಹಾಗು ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯ ಸರ್ಕಾರಕ್ಕೆ 23,89,650 ರೂ. ನಷ್ಟ ಮಾಡಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಅಂದಹಾಗೇ ಶೇಖ್ ಸಾಬ್ ಎಂಬವರಿಂದ ರೆಡ್ಡಿ & ಟೀಂ ಗಣಿ ಕಂಪನಿಯ ಗುತ್ತಿಗೆ ಪಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೂಥ್ ಬ್ರಶ್‍ನಿಂದ ಗೌರಿ ಲಂಕೇಶ್ ಹಂತಕರು ಅರೆಸ್ಟ್!

    ಟೂಥ್ ಬ್ರಶ್‍ನಿಂದ ಗೌರಿ ಲಂಕೇಶ್ ಹಂತಕರು ಅರೆಸ್ಟ್!

    -ಸುಳಿವು ನೀಡಿತ್ತು ಟೂಥ್ ಬ್ರಶ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಸುದೀರ್ಘ 6 ಸಾವಿರ ಪುಟಗಳಿರುವ ಚಾರ್ಜ್ ಶೀಟ್ ಅನ್ನು ಟ್ರಂಕ್‍ನಲ್ಲಿ ಇಟ್ಟು ಎಸ್‍ಐಟಿ ಅಧಿಕಾರಿಗಳು ಕೋರ್ಟ್‍ಗೆ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಆರೋಪಿಗಳ್ನು ಪೊಲೀಸರು ಹೇಗೆ ಪತ್ತೆ ಮಾಡಿದರು ಎಂಬುವುದು ಮಾಹಿತಿಗಳು ಉಲ್ಲೇಖವಾಗಿರುತ್ತವೆ. ಚಾರ್ಜ್ ಶೀಟ್ ಉಲ್ಲೇಖವಾದ ಕೆಲ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಆರೋಪಿಗಳ ಬಗ್ಗೆ ಟೂಥ್ ಬ್ರಶ್ ಒಂದು ಸುಳಿವು ನೀಡಿತ್ತು.

    ಹಂತಕರು ಗೌರಿ ಹತ್ಯೆಗೂ ಮುನ್ನ ನಗರದ ಸುಂಕದಕಟ್ಟೆಯ ಸುರೇಶ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಗೌರಿ ಹಂತಕ ಪರಶುರಾಮ್ ವಾಗ್ಮೋರೆ, ಬೈಕ್ ಓಡಿಸಿದ್ದ ಗಣೇಶ್ ಮಿಸ್ಕಿನ್ ಇಬ್ಬರೂ ಸುರೇಶ್ ಮನೆಯಲ್ಲಿದ್ದರು. ಹಂತಕರು ಕೊಲೆಯ ಬಳಿಕ ಸುರೇಶ್ ಮನೆಯಲ್ಲಿ ತಮ್ಮ ಟೂಥ್ ಬ್ರೆಶ್ ಬಿಟ್ಟು ಹೋಗಿದ್ದರು. ಈ ಟೂಥ್ ಬ್ರಶ್‍ನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ವಾಗ್ಮೋರೆ, ಮಿಸ್ಕಿನ್ ಡಿಎನ್‍ಎ ಟೆಸ್ಟ್ ಮಾಡಿಸಿದ್ದರು.

    ಗೌರಿ ಹತ್ಯೆ ಬಳಿಕ ಸುರೇಶ್ ಮನೆಗೆ ವಾಪಸ್ಸಾಗದೇ ಪರಶುರಾಮ್ ಓಡಿಹೋಗಿದ್ದನು. ತಾನು ವಾಸ್ತವ್ಯ ಹೂಡಿದ್ದ ಮನೆಯಲ್ಲಿ ತನ್ನದೊಂದು ಅಂಗಿಯನ್ನು ವಾಗ್ಮೋರೆ ಬಿಟ್ಟು ಹೋಗಿದ್ದನು. ಈ ಅಂಗಿಯಲ್ಲಿ ಕೂದಲುಗಳು ಪತ್ತೆಯಾಗಿದ್ದುವು. ಪೊಲೀಸರು ಕೂದಲನ್ನು ಸಹ ಡಿಎನ್ ಎ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಶರ್ಟ್ ನಲ್ಲಿದ್ದ ಕೂದಲಿಗೂ ಪರಶುರಾಮ್ ವಾಗ್ಮೋರೆ ಮೈ ಮೇಲಿನ ಕೂದಲಿಗೂ ಸಾಮ್ಯತೆ ಕಂಡು ಬಂದಿದೆ. ಇತ್ತ ಟೂಥ್ ಬ್ರಶ್ ಪರೀಕ್ಷೆಯಲ್ಲಿ ಪೊಲೀಸರಿಗೆ ಸಕಾರಾತ್ಮಕ ಉತ್ತರ ಬಂದಿದೆ. ಈ ಎಲ್ಲ ಬಲವಾದ ಆಧಾರಗಳ ಮೇಲೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿಗಳು ಹಿಂದೂ ಧರ್ಮದ ವಿರೋಧಿಗಳು ಯಾರು ಎಂಬುದನ್ನ ಮೂರು ವರ್ಗ ಮಾಡಿಕೊಂಡಿದ್ದರು. ಮೊದಲನೆಯದ್ದು ಹಿಂದೂಗಳಾಗಿದ್ದುಕೊಂಡು ಹಿಂದೂ ಧರ್ಮವನ್ನು ವಿರೋಧಿಸುವುದು. ಎರಡನೇಯದು, ಹಿಂದೂ ಧರ್ಮವನ್ನು ವಿರೋಧಿಸುವ ಅನ್ಯಧರ್ಮೀಯರು ಮತ್ತು ನಾಸ್ತಿಕರು ಎಂದು ಮೂರು ರೀತಿಯಲ್ಲಿ ವಿಂಗಡನೆ ಮಾಡಿಕೊಂಡಿದ್ದರು. ಆರೋಪಿಗಳು 2023ರ ವೇಳೆಗೆ ಭಾರತವನ್ನ ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ಮಾಡುವ ಟಾರ್ಗೆಟ್ ಹೊಂದಿದ್ದರು ಎಂದು ಹೇಳಲಾಗುತ್ತಿದೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ಗೌರಿ ಲಂಕೇಶ್ ತಮ್ಮ ಭಾಷಣದಲ್ಲಿ ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ, ಅದೊಂದು ಧರ್ಮವೇ ಅಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಯಿಂದಲೇ ಹಂತಕರು ಮೊದಲಿಗೆ ಗೌರಿ ಲಂಕೇಶ್ ಅವರನ್ನೆ ಟಾರ್ಗೆಟ್ ಮಾಡಿಕೊಂಡಿದ್ದರು.

    ಎಸ್‍ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ ಅವರ ಮೂಲಕ 1ನೇ ಸಿಸಿಎಚ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಒಟ್ಟು 18 ಜನ ಆರೋಪಿಗಳು ಭಾಗಿ ಆಗಿರುವ ಕುರಿತು ಮಾಹಿತಿ ನೀಡಲಾಗಿದೆ. ಒಟ್ಟು 16 ಜನರನ್ನು ಬಂಧಿಸಿ ಕೋಕಾ ಕಾಯ್ದೆಯಡಿ ಎಸ್‍ಐಟಿ ಪ್ರಕರಣವನ್ನು ದಾಖಲಿಸಿತ್ತು. ಗೌರಿ ಹತ್ಯೆ ಪ್ರಕರಣ ಸಂಬಂಧ 650 ಪುಟಗಳ ಮೊದಲ ದೋಷಾರೋಪ ಪಟ್ಟಿಯನ್ನು 2018ರ ಮೇ ತಿಂಗಳಲ್ಲಿ ಎಸ್‍ಐಟಿ ಸಲ್ಲಿಸಿತ್ತು. ಹೆಚ್ಚುವರಿ ಆರೋಪ ಸಲ್ಲಿಕೆಗೆ ನವೆಂಬರ್ 27 ಕೊನೆಯ ದಿನವಾಗಿತ್ತು. ಹೀಗಾಗಿ ಶುಕ್ರವಾರ ಎಸ್‍ಐಟಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಈ ಪ್ರಕರಣದಲ್ಲಿ ಬೇಕಾಗಿದ್ದ ದಾದಾ ಹಾಗೂ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ 450ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ.

    ಆರೋಪಿಗಳು ಯಾರು?
    ಪ್ರಕರಣದ ಪ್ರಮುಖ ಆರೋಪಿ (ಎ1) ಮಹಾರಾಷ್ಟ್ರ ಅಮೋಲ್ ಕಾಳೆ ಇವನು ಹತ್ಯೆಯ ಪ್ರಧಾನ ಸಂಚುಕಾರ, ಉಳಿದಂತೆ (ಎ2) ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ -ಶೂಟರ್, (ಎ3) ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ – ಬೈಕ್ ರೈಡರ್, (ಎ4) ಹುಬ್ಬಳ್ಳಿ ಅಮಿತ್ ಬುದ್ಧ -ರೈಡರ್ ಸಹಾಯಕ, (ಎ5) ಮಹಾರಾಷ್ಟ್ರದ ಅಮಿತ್ ದೇಗ್ವೇಕರ್ -ಹಣಕಾಸು ಉಸ್ತುವಾರಿ, (ಎ6) ಬೆಳಗಾವಿಯ ಭರತ್ ಕುರ್ನೆ – ಶಸ್ತ್ರಾಸ್ತ್ರ ತರಬೇತಿಗೆ ಆಶ್ರಯ ನೀಡಿದ್ದು, (ಎ7) ಮಹಾರಾಷ್ಟ್ರದ ಸುಧನ್ವಾ ಗೋಲೆಧಕರ್ – ಸಂಚುಗಾರ, (ಎ8) ಮಹಾರಾಷ್ಟ್ರದ ಶರದ್ ಕಲಾಸ್ಕರ್ – ಸಂಚುಗಾರ, (ಎ9) ಕೊಡಗಿನ ರಾಜೇಶ್ ಬಂಗೇರಾ – ಶಸ್ತ್ರಾಸ್ತ್ರ ತರಬೇತುದಾರ, (ಎ10) ಮಹಾರಾಷ್ಟ್ರದ ಶ್ರೀಕಾಂತ್ ಪಂಗಾರ್ಕರ್ – ಸಂಚುಗಾರ ಇವರನ್ನು ಸೇರಿದಂತೆ ಒಟ್ಟು 17 ಜನ ಆರೋಪಿಗಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸ್ರಿಂದ ಮತ್ತೊಂದು ಶಾಕ್

    ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸ್ರಿಂದ ಮತ್ತೊಂದು ಶಾಕ್

    ಬೆಂಗಳೂರು: ನಟ ದುನಿಯಾ ವಿಜಯ್‍ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಈಗ ಸ್ಟೇಷನ್ ಮೆಟ್ಟಿಲು ಹತ್ತಿ ಹೈರಾಣಾಗಿದ್ದ ವಿಜಿಗೆ ಪೊಲೀಸರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

    ನಿರ್ಮಾಪಕ ಸುಂದರ್ ಗೌಡನನ್ನ ಪರಾರಿ ಮಾಡಿಸಿದ ಪ್ರಕರಣದಲ್ಲಿ ದುನಿಯಾ ವಿಜಯ್ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಸಿಕೆ ಅಚ್ಚುಕಟ್ಟು ಪೊಲೀಸರಿಂದ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಚಾರ್ಜ್ ಶೀಟ್ ನ ಎಕ್ಸ್ ಕ್ಲೂಸಿವ್ ಕಾಪಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಏನಿದು ಕೇಸ್?
    ಸುಂದರ್ ಗೌಡ ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರ ಸಾವಿನ ಕೇಸ್ ನಲ್ಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಬಳಿಕ ರಾಮನಗರ ನ್ಯಾಯಾಲಯದಿಂದ ಸುಂದರ್ ಪಿ ಗೌಡನ ಮೇಲೆ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು. ಹೀಗಾಗಿ ಸುಂದರ್ ಗೌಡನನ್ನು ಅರೆಸ್ಟ್ ಮಾಡಲು ಮೇ ತಿಂಗಳಲ್ಲಿ ಸಿಕೆ ಅಚ್ಚುಕಟ್ಟುವಿನಲ್ಲಿರುವ ಮನೆಗೆ ತಾವರೆಕೆರೆ ಪೊಲೀಸರು ಅರೆಸ್ಟ್ ವಾರೆಂಟ್ ತಂದಿದ್ದರು. ಈ ವೇಳೆ ಅಲ್ಲೇ ಇದ್ದ ದುನಿಯಾ ವಿಜಿ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದ್ದರು.

    ರಾತ್ರಿ ವೇಳೆ ದಬ್ಬಾಳಿಕೆ ಮಾಡುತ್ತೀರಾ, ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಅಂತ ಅವಾಜ್ ಹಾಕಿದ್ದರು. ಅಲ್ಲದೇ ಸುಂದರ್ ಪಿ ಗೌಡನನ್ನ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ತಾವರೆಕೆರೆ ಪೊಲೀಸ್ ಠಾಣೆಯ ಎಚ್‍ಸಿ ಗೋವಿಂದರಾಜು ದೂರು ದಾಖಲಿಸಿದ್ದರು. ಕೋರ್ಟ್ ಆದೇಶವನ್ನ ಉಲ್ಲಂಘಿಸಿ, ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ದೂರು ದಾಖಲಾಗಿತ್ತು.

    ದೂರು ದಾಖಲಾಗುತ್ತಿದ್ದಂತೆ ದುನಿಯಾ ವಿಜಿ ಪರಾರಿಯಾಗಿದ್ದರು. ಬಳಿಕ ಎಸ್‍ಐ ವಿನಯ್ ಅವರು ಬಂಡೀಪುರ ಟೈಗರ್ ರೆಸಾರ್ಟ್ ನಲ್ಲಿ ವಿಜಿಯನ್ನು ಪತ್ತೆ ಮಾಡಿದ್ದರು. ಕೂಡಲೇ ಸಿಕೆ ಅಚ್ಚುಕಟ್ಟು ಪೊಲೀಸರು ವಿಜಿಯನ್ನ ಬಂಡೀಪುರದಿಂದ ಕರೆತಂದು ಅರೆಸ್ಟ್ ಮಾಡಿದ್ದರು. ಬಳಿಕ ದುನಿಯಾ ವಿಜಿ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದರು.

    ಪೊಲೀಸರು ಈಗ ದುನಿಯಾ ವಿಜಯ್ ಮೇಲೆ 65 ಪುಟಗಳ ಚಾರ್ಜ್ ಶೀಟ್ ಸಿದ್ಧಪಡಿಸಿ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಸಂಬಂಧ 9 ಮಂದಿಯನ್ನ ಸಾಕ್ಷಿಯನ್ನಾಗಿ ಪರಿಗಣಿಸಿ ಹೇಳಿಕೆ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು !

    ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು !

    – ಮತ್ತೊಂದು ಸಂಕಷ್ಟದಲ್ಲಿ ಸ್ಯಾಂಡಲ್‍ವುಡ್ ಪದ್ಮಾವತಿ

    ಬೆಂಗಳೂರು: ಮಾಜಿ ಸಂಸದೆ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

    ಕಾಂಗ್ರೆಸ್ ಐಟಿ ಸೆಲ್ ನಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆಗೆ ಐಟಿ ಸೆಲ್ ಮುಖ್ಯಸ್ಥೆ ರಮ್ಯಾರಿಂದ ನಿಂದನೆ ಆಗಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಈಗ ರಮ್ಯಾ ವಿರುದ್ಧ ದೂರುದಾರೆ ಗಂಭೀರ ಆರೋಪ ಮಾಡುತ್ತಿದ್ದಾರೆ.

    ದೂರು ಕೊಟ್ಟರೂ ಲೈಂಗಿಕ ಕಿರುಕುಳ ನೀಡಿದ್ದ ಪಟ್ನಾಯಕ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಆದರೆ ರಮ್ಯಾ ಅವರು ನನ್ನನ್ನೇ ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ ಲೈಂಗಿಕ ಕಿರುಕುಳ ಕೊಟ್ಟ ಐಟಿ ಸೆಲ್ ಸದಸ್ಯ ಚಿರಾಗ್ ಪಟ್ನಾಯಕ್ ಪರವೇ ರಮ್ಯಾ ನಿಂತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸುತ್ತಿದ್ದಾರೆ.

    ಸದ್ಯ ಸಂತ್ರಸ್ತೆಯ ಆರೋಪದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ನಲ್ಲಿ ರಮ್ಯಾ ಹೆಸರು ಉಲ್ಲೇಖವಾಗಿದೆ. ಐಟಿ ಸೆಲ್ ಸದಸ್ಯೆ 2013 ಏಪ್ರಿಲ್ 4ರಿಂದ ಮೇ 23ರವರೆಗೆ ಐಟಿ ಸೆಲ್ ಸದಸ್ಯ ಚಿರಾಗ್ ಪಟ್ನಾಯಕ್ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪ ಮಾಡಿದ್ದಾರೆ.

    ಈ ಹಿಂದೆ ಕೂಡ ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ನಿಂದ ಪಕ್ಷಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯಿಂದ ಕಿಕ್‍ಔಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಇದಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ಅವರಿಗೆ ಕೋಕ್ ನೀಡಲಾಗಿದೆ ಎಂದು ವರದಿಯಾಗಿತ್ತು.

    ಈ ಸುದ್ದಿಗೆ ಪೂರಕ ಎಂಬಂತೆ ರಮ್ಯಾ ಅವರು ಈ ಹಿಂದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ, ಸಂಸದೆ ಎಂದು ಬರೆದುಕೊಂಡಿದ್ದರು. ಆದರೆ ಈಗ ಈ ಎಲ್ಲ ಮಾಹಿತಿಗಳನ್ನು ಡಿಲೀಟ್ ಮಾಡಿದ್ದಾರೆ.

    ಏನಿದು ಟ್ವೀಟ್?
    ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು. ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=h7Pafv4CDXY

  • ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ-ವಿಚಾರವಾದಿ ಭಗವಾನ್‍ಗೆ ಗುಂಡು ಹಾರಿಸಲು ಮುಂದಾಗಿದ್ದು ಯಾರು..?

    – ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆ

    ಉಡುಪಿ: ವಿಚಾರವಾದಿ, ಸಾಹಿತಿ ಪ್ರೋ. ಕೆ.ಎಸ್.ಭಗವಾನ್ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ 750 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ನಲ್ಲಿ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ.

    ಗುಂಡುಗಳನ್ನು ನೀಡಿದ್ದು ಯಾರು?:
    ಭಗವಾನ್ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಎರಡು ಜೀವಂತ ಗುಂಡುಗಳನ್ನು ನೀಡಿದ್ದನು. ನವೀನ್ ಬಳಿಯ ಎರಡು ಗುಂಡುಗಳನ್ನು ಪ್ರವೀಣ್ ಅಲಿಯಾಸ್ ಸುಜಿತ್ ಪಡೆದುಕೊಂಡಿದ್ದನು. ಪ್ರವೀಣ್ ಇದೇ ಗುಂಡುಗಳನ್ನು ನಿಹಾಲ್ ದಾದಾನಿಗೆ ತೋರಿಸಿದಾಗ, ಮುಂದೊಂದು ದಿನ ಧರ್ಮ ವಿರೋಧಿಗಳ ಸಮಾಪ್ತಿಗೆ ಗುಂಡುಗಳ ಉಪಯೋಗ ಆಗಲಿದೆ ಎಂದು ನಿಹಾಲ್ ದಾದಾ ಹೇಳಿದ್ದನು. ಗುಂಡುಗಳನ್ನು ಭದ್ರವಾಗಿ ಪ್ರವೀಣ್ ತನ್ನ ದಾವಣಗೆರೆಯ ಅಜ್ಜಿ ಮನೆಯಲ್ಲಿ ಅಕ್ರಮವಾಗಿ ಇರಿಸಿದ್ದನು.

    ಬೆಳಗಾವಿಯಲ್ಲಿ ಸ್ಕೆಚ್:
    ಭಗವಾನ್ ಹತ್ಯೆಗೆ ಬೆಳಗಾವಿ ಸುಖಸಾಗರ್ ಹೋಟೆಲ್‍ನಲ್ಲಿ ಸ್ಕೆಚ್ ರೂಪಿಸಲಾಗಿತ್ತು. ಹೋಟೆಲ್‍ನಲ್ಲಿ ಪ್ರವೀಣ್ ಅಲಿಯಾಸ್ ಸುಜಿತ್, ಅಮೋಲ್ ಕಾಳೆ, ಅಮಿತ್ ದಗ್ವೇಕರ್ ನಿಹಾಲ್ ದಾದಾ, ಮನೋಹರ್ ಯಡವೆ ಎಲ್ಲರೂ ಸೇರಿ ಹತ್ಯೆಗೆ ಸಂಚು ರೂಪಿಸಿದ್ದರು. ಕೆ.ಎಸ್.ಭಗವಾನ್ ಧರ್ಮಕ್ಕೆ ಅಪಮಾನ ಮಾಡುತ್ತಿರುವುದರಿಂದ ಅವರನ್ನ ಕೊಲೆ ಮಾಡಬೇಕೆಂದು ಎಲ್ಲರು ನಿರ್ಧರಿಸಿದ್ದರು.

    ಭಗವಾನ್ ಹತ್ಯೆ ಮಾಡಲು ಗುಂಡುಗಳು ಸಿದ್ಧವಾಗಿದ್ದವು ಆದ್ರೆ ಗನ್ ಸಿಕ್ಕಿರಲಿಲ್ಲ. ಅನಿಲ್ ಎಂಬಾತನಿಂದ ಏರ್ ಪಿಸ್ತೂಲ್ ಮತ್ತು ಏರ್‍ಗನ್ ಖರೀದಿ ಮಾಡಿದ್ದರು. ಏರ್ ಗನ್ ಖರೀದಿ ಮಾಡಲು ಆರೋಪಿ ಕೆ.ಟಿ.ನವೀನ್ ಧನ ಸಹಾಯ ಮಾಡಿದ್ದನು. ಬೆಳಗಾವಿಯಲ್ಲಿಯೇ ಏರ್‍ಗನ್ ಚಲಾಯಿಸುವ ತರಬೇತಿಯನ್ನು ಸಹ ಆರೋಪಿಗಳು ಪಡೆದುಕೊಂಡಿದ್ದರು.

    ಭಗವಾನ್ ಟಾರ್ಗೆಟ್ ಯಾಕೆ?:
    ಮೈಸೂರಿನ ಮೈಲಾರಿ ಹೋಟೆಲ್ ಬಳಿ ಆರೋಪಿಗಳೆಲ್ಲರೂ ಮತ್ತೊಮ್ಮೆ ನನ್ನ ಹತ್ಯೆಗೆ ಸ್ಕೆಚ್ ರೂಪಿಸಿದ್ದರು. ಇನ್ನು ಆರೋಪಿ ಕೆ.ಟಿ. ನವೀನ್ ಕುಮಾರ್‍ನನ್ನು ಎಲ್ಲೋ ನೋಡಿದ ಹಾಗಿದೆ. ಹಾಗಾಗಿ ನನ್ನ ಕೊಲೆಗೆ ಇವರೆಲ್ಲಾ ಸಂಚು ರೂಪಿಸಿರುವ ಸಾಧ್ಯತೆಗಳಿವೆ. ಹಿಂದೂ ಧರ್ಮದ ಶೋಷಣೆಗಳ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯ ವಿಚಾರಣೆ ನಡೆಸಿ ಸತ್ಯಾಸತ್ಯೆತಯನ್ನು ಪತ್ತೆ ಹಚ್ಚಬೇಕೆಂದು ಕೆ.ಎಸ್.ಭಗವಾನ್ ಉಪ್ಪಾರ ಪೇಟೆ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಹಿಂದೂ ಸಂಘಟನೆಯ ಕಾರ್ಯಕರ್ತನಾಗಿದ್ದ ಪ್ರವೀಣ್ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿದ್ದನು. ಯಾವ ಸಂಘಟನೆಯಲ್ಲಿ ಯಾರು ಮೂಲ ಹೆಸರುಗಳನ್ನು ಹೇಳುವಂತಿಲ್ಲ ಮತ್ತು ಕರೆಯುವಂತಿಲ್ಲ ಎಂದು ಎಲ್ಲ ಆರೋಪಿಗಳು ನಿರ್ಧರಿಸಿದ್ದರು. ಒಂದು ವೇಳೆ ಪೊಲೀಸರಿಗೆ ಯಾರಾದರೂ ಸಿಕ್ಕರೆ ನಮ್ಮ ಹೆಸರುಗಳು ಬಹಿರಂಗವಾಗಬಾರದು ಎಂಬ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದರು. ನವೀನ್ ಬಂಧನದ ಬಳಿಕ ಬೆದರಿದ ಎಲ್ಲ ಆರೋಪಿಗಳಿಗೂ ತಪ್ಪಿಸಿಕೊಳ್ಳುವಂತೆ ಅಮಿತ್ ಸೂಚಿಸಿದ್ದನು.

    ಅಮಿತ್ ಸೂಚನೆಯಂತೆ ಎಲ್ಲರೂ ತಲೆ, ಮೀಸೆ ಬೋಳಿಸಿಕೊಂಡು ಗುರುತು ಸಿಗದಂತೆ ಮಹಾರಾಷ್ಟ್ರದಲ್ಲಿ ಅವಿತುಕೊಂಡಿದ್ದರು. ಬಹು ದಿನಗಳ ನಂತರ ದಾವಣಗೆರೆಗೆ ಆಗಮಿಸಿದ್ದ ಅಮೋಲ್ ಕಾಳೆ , ಬಸ್ ನಿಲ್ದಾಣದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದನು.

    ಯಾರು ಅಮಿತ್ ದೆಗ್ವೇಕರ್?:
    ಸನಾತನ್ ಪ್ರಭಾತ್‍ನಲ್ಲಿ ಪ್ರೂಫ್ ರೀಡರ್ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ಅಮಿತ್ ದೆಗ್ವೇಕರ್. ಹಿಂದೂ ಧರ್ಮದ ಬಗ್ಗೆ ಕಾಳಜಿಯುಳ್ಳ ಅಮಿತ್ ಮಠ, ಮಂದಿರ ಆಶ್ರಮಗಳಿಗೆ ಭೇಟಿ ಕೊಡುತ್ತಿದ್ದನು. ಅಮಿತ್ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಧರ್ಮದ ಕಾರ್ಯಗಳಲ್ಲಿ ತೊಡಗಿದ್ದನು. ಕರ್ನಾಟಕಕ್ಕೆ ಬಂದಾಗ ಪ್ರವೀಣ್ ಮತ್ತು ದಾದಾನ ಪರಿಚಯವಾಗಿತ್ತು. ಮುಂದೆ ಇದೇ ಪ್ರವೀಣ್ ಮೂಲಕ ನವೀನ್‍ಕುಮಾರನ ಸ್ನೇಹ ಸಂಪಾದಿಸಿದ್ದನು. ನವೀನ್ ಮೂಲಕವೇ ಧರ್ಮದ ರಕ್ಷಣೆಗೆ ಶಸ್ತ್ರ ಸಜ್ಜಿತ ಹೋರಾಟಕ್ಕೆ ಅಮಿತ್ ಇಳಿದಿದ್ದನು.

    ಮತ್ತೋರ್ವ ಆರೋಪಿ ಮನೋಹರ್ ಯಡವೆ ಸಹ ಧರ್ಮ ರಕ್ಷಣೆಯ ಹೋರಾಟಕ್ಕಾಗಿ ನವೀನ್‍ಗ್ಯಾಂಗ್ ಸೇರಿಕೊಂಡಿದ್ದನು. ಗ್ಯಾಂಗ್ ಸೇರುವ ಮುನ್ನ ಭಾರತೀಯ ಸೇನೆ, ವೀರ ಹೋರಾಟಗಾರ ಹೆಸರಿನಲ್ಲಿ ಧರ್ಮ ರಕ್ಷಣೆಗೆ ಕೆಲಸ ಮಾಡುತ್ತಿದ್ದನು.

  • ಬಿಜೆಪಿ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕೋದಕ್ಕೆ ಲಾಯಕ್ : ರಾಮಲಿಂಗಾ ರೆಡ್ಡಿ

    ಬಿಜೆಪಿ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕೋದಕ್ಕೆ ಲಾಯಕ್ : ರಾಮಲಿಂಗಾ ರೆಡ್ಡಿ

    ಬೆಂಗಳೂರು: ಬಿಜೆಪಿಯ ಚಾರ್ಜ್ ಶೀಟ್ ಕಸದ ಬುಟ್ಟಿಗೆ ಹಾಕುವುದಕ್ಕೆ ಲಾಯಕ್ಕಾಗಿರೋ ಪೇಪರ್ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರಿನ ಕಸದ ಸಮಸ್ಯೆಯ ಸುದ್ದಿ ನ್ಯೂಯಾರ್ಕ್ ಟೈಮ್ಸ್ ನಲ್ಲೂ ಪ್ರಕಟವಾಗಿದೆ ಎಂದು ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಚಾರ್ಜ್ ಶೀಟ್ ನಲ್ಲಿನ ಆರೋಪಗಳ ಕುರಿತು ಬಿಜೆಪಿಯವರಿಗೆ ಕ್ಲಾರಿಟಿ ಇಲ್ಲ ಎಂದು ಕಿಡಿಕಾರಿದ್ದಾರೆ.

    ಬೆಂಗಳೂರಿನ ಮಾನ ಮರ್ಯಾದೆ ಕಳೆದಿದ್ದು ಬಿಜೆಪಿಯವರು. 2012ರ ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಗಾರ್ಡನ್ ಸಿಟಿಯನ್ನು ಗಾರ್ಬೆಜ್ ಸಿಟಿ ಅನ್ನೋದಾಗಿ ವರದಿ ಮಾಡಿತ್ತು. ಆಗ ಇದ್ದದ್ದು ಬಿಜೆಪಿ ಸರ್ಕಾರ. ಅಧಿಕಾರಕ್ಕೆ ಬಂದು ಮೂರು ವರ್ಷವಾಗಿದ್ದರೂ ಬಿಜೆಪಿಯವರು ಬೆಂಗಳೂರಿನ ಕಸದ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸೋತಿದ್ದರು ಎಂದು ಟೀಕಿಸಿದರು.  ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಮತ್ತೆ ಎಡವಟ್ಟು ಮಾಡಿಕೊಂಡ ಬಿಜೆಪಿ

    ಕಾಂಗ್ರೆಸ್ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ ಏಳು ತ್ಯಾಜ್ಯ ಸಂಸ್ಕರಣಾ ಘಟಕ ಮಾಡಲಾಗಿದೆ. ತ್ಯಾಜ್ಯ ವಿಂಗಡಣೆ, ಸಂಸ್ಕರಣೆ ಸರಿಯಾಗಿಯೇ ನಡೆದಿದೆ. 2012ರ ಬಿಜೆಪಿಯವರ ಅವಧಿಯಲ್ಲಿ ನಡೆದಿದ್ದನ್ನು ನಮ್ಮ ಸರ್ಕಾರ ಬಂದ ಮೇಲೆ ಅಂತ ತಿರುಗಿಸಿ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

  • ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    ಅಮಿತ್ ಶಾ ಸೂಚನೆಯಂತೆ ಬಿಜೆಪಿ ಚಾರ್ಜ್ ಶೀಟ್- 22 ಪುಟಗಳ ಆರೋಪ ಪಟ್ಟಿ ಬಿಡುಗಡೆ

    – ಸಿದ್ದರಾಮಯ್ಯ ಸರ್ಕಾರಕ್ಕೆ ಉರುಳಾಗುತ್ತಾ ಚಾರ್ಜ್ ಶೀಟ್?

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯ ಬಿಜೆಪಿ ಚಾರ್ಜ್ ಶೀಟ್ ತಯಾರಿಸಿದೆ. ಇವತ್ತು ಬಿಬಿಎಂಪಿ ಆಡಳಿತಕ್ಕೆ ಸಂಬಂಧಿಸಿದಂತೆ 22 ಪುಟಗಳ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದೆ.

    ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಇವತ್ತು ಮಧ್ಯಾಹ್ನ 12.30ಕ್ಕೆ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ. ವ್ಯಕ್ತಿ ಆಧಾರಿತ ಚಾರ್ಜ್ ಶೀಟ್ ಕೈ ಬಿಟ್ಟು, ವಿಷಯಾಧಾರಿತ ಚಾರ್ಜ್ ಶೀಟ್ ತಯಾರಿಸಿದೆ ಎನ್ನಲಾಗಿದೆ.

    ಕಾಮಗಾರಿಗಳಲ್ಲಿನ ಅವ್ಯವಹಾರ, ಕಸದ ಸಮಸ್ಯೆ, ವೈಟ್ ಟ್ಯಾಪಿಂಗ್ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚಾರ್ಜ್ ಶೀಟ್ ಬಿಡುಗಡೆ ಮಾಡಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಇವತ್ತು ಬಿಡುಗಡೆಯಾಗುವ ಚಾರ್ಜ್ ಶೀಟ್ ಸಿದ್ದರಾಮಯ್ಯ ಸರ್ಕಾರಕ್ಕೆ ಚಾರ್ಜ್ ಆಗುವ ತರಹ ಇರುತ್ತಾ…? ಅನ್ನೋದನ್ನ ಕಾದುನೋಡಬೇಕಿದೆ.

  • 20 ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

    20 ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

    ಕೊಪ್ಪಳ: ಇಪ್ಪತ್ತು ವರ್ಷಗಳ ಹಿಂದೆ ಮೃತಪಟ್ಟ ಯುವಕನ ಮೇಲೆ ಗಂಗಾವತಿ ನಗರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ 1998 ರಲ್ಲಿ ಮೃತಪಟ್ಟಿದ್ರು. ಆದರೆ ಈಗ ಅವರ ಮೇಲೆ ಗಂಗಾವತಿ ನಗರ ಠಾಣೆ ಪೊಲೀಸರು ಮೂರು ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

    2016 ರಲ್ಲಿ ಗಂಗಾವತಿಯಲ್ಲಿ ಕೋಮು ಗಲಭೆಯಾದ ಸಂದರ್ಭ ಪೊಲೀಸರು 92 ಜನರ ವಿರುದ್ಧ ದೂರು ದಾಖಲಿಸಿದ್ರು. ದೂರು ದಾಖಲಿಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸೋ ವೇಳೆ ಮೃತನ ಹೆಸರನ್ನು ಪರಿಶೀಲಿಸದೇ ಎಡವಟ್ಟು ಮಾಡಿದ್ದಾರೆ.

    ಗಂಗಾವತಿ ನಗರ ಠಾಣೆಯ ಪಿ.ಐ ಆಗಿದ್ದ ಭೀಮನಗೌಡ ಬೀರಾದಾರ್ ಮೃತನ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದು ಬೆಳಕಿಗೆ ಬಂದಿದೆ. ಕೋಮು ಗಲಭೆ ಸಮಯದಲ್ಲಿ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಸಿಕ್ಕ ಸಿಕ್ಕವರ ಮೇಲೆ ಕೇಸ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಇದೀಗ ಅದು ಸಾಬೀತಾಗಿದ್ದು ಮೃತನನ್ನು ಪೊಲೀಸರು ಆರೋಪಿಯಾಗಿ ಮಾಡಿದ್ದು ಇದೀಗ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

    ಮಲ್ಲಿಕಾರ್ಜುನ್ ಪರ ವಕೀಲರು ಮರಣ ಪತ್ರವನ್ನು ನ್ಯಾಯಲಯಕ್ಕೆ ನೀಡಿ ಕಾನೂನು ಹೋರಾಟ ಮಾಡುತ್ತಿದ್ದಾರೆ.