Tag: ಚಾಮುಂಡಿ ದೇವಿ

  • ವಸ್ತ್ರಸಂಹಿತೆ ವಾರ್ ಮತ್ತೆ ಮುನ್ನೆಲೆಗೆ- ಚಾಮುಂಡಿ ದೇವಿ ದರ್ಶನಕ್ಕೆ ಡ್ರೆಸ್‍ಕೋಡ್‍ಗೆ ಆರ್ಡರ್

    ವಸ್ತ್ರಸಂಹಿತೆ ವಾರ್ ಮತ್ತೆ ಮುನ್ನೆಲೆಗೆ- ಚಾಮುಂಡಿ ದೇವಿ ದರ್ಶನಕ್ಕೆ ಡ್ರೆಸ್‍ಕೋಡ್‍ಗೆ ಆರ್ಡರ್

    ಮೈಸೂರು: ದೇವಸ್ಥಾನಗಳಲ್ಲಿ ಡ್ರೆಸ್‍ಕೋಡ್ (Dresscode in Temple) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ (Chamundeshwari Temple) ಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್‍ಕೋಡ್ ಕಡ್ಡಾಯ ಮಾಡಬೇಕೆಂಬ ಕೂಗು ಜೋರಾಗಿದೆ. ಈ ಬಗ್ಗೆ ಹಲವು ಮಹಿಳಾ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳೂ ಕೂಡ ಧ್ವನಿಗೂಡಿಸಿವೆ.

    ರಾಜ್ಯದ ಹಾಗೂ ಹೊರ ರಾಜ್ಯದ ಪ್ರಮುಖ ದೇವಸ್ಥಾನಗಳ ಪ್ರವೇಶಕ್ಕೆ ವಸ್ತ್ರಸಂಹಿತೆ ಇದೆ. ಇದೇ ರೀತಿ ನಾಡದೇವತೆ ಚಾಮುಂಡಿ ದರ್ಶನಕ್ಕೂ ವಸ್ತ್ರಸಂಹಿತೆ ಜಾರಿ ಮಾಡುವಂತೆ ಆಗ್ರಹಿಸಲಾಗಿದೆ. ಚಾಮುಂಡಿ ದೇವಸ್ಥಾನದಲ್ಲಿ ಈವರೆಗೂ ಯಾವುದೇ ಡ್ರೆಸ್‍ಕೋಡ್ ಇರಲಿಲ್ಲ. ಹೀಗಾಗಿ ದೇವಾಲಯಕ್ಕೆ ಬರುವ ಭಕ್ತರು ತಮಗಿಷ್ಟ ಬಂದ ಉಡುಪು ಧರಿಸಿ ದೇವಸ್ಥಾನಕ್ಕೆ ಬರುತ್ತಿದ್ರು. ಇದೀಗ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಕಡ್ಡಾಯಗೊಳಿಸುವಂತೆ ಮೈಸೂರಿನ ಹಲವು ಮಹಿಳಾ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಮನವಿ ಮಾಡ್ತಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    ದೇವಸ್ಥಾನಕ್ಕೆ ಬರುವ ಕೆಲವು ಮಹಿಳೆಯರು, ಯುವತಿಯರು ಅರೆಬರೆ ಬಟ್ಟೆ ಹಾಕಿಕೊಂಡು ಬರುತ್ತಾರೆ. ಪುರುಷರು ಅರ್ಧ ಚಡ್ಡಿ ಧರಿಸಿ ಬರುತ್ತಾರೆ. ಇದು ದೇವಸ್ಥಾನದ ಗೌರವ, ಪಾವಿತ್ರ್ಯತೆ ವಾತಾವರಣ ಹಾಳು ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಸೀರೆ ಅಥವಾ ಚೂಡಿದಾರ, ಪುರುಷರಿಗೆ ದೇವಸ್ಥಾನ ಪ್ರವೇಶಕ್ಕೆ ಪಂಚೆ ಅಥವಾ ಪ್ಯಾಂಟ್ ಕಡ್ಡಾಯ ಮಾಡಿ ವಸ್ತ್ರ ಸಂಹಿತೆ ಜಾರಿಗೆ ತರಬೇಕೆಂದು ಹೋರಾಟ ಆರಂಭಿಸಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರಕ್ಕೆ, ಚಾಮುಂಡಿ ದೇವಸ್ಥಾನದ ಅಧಿಕಾರಿಗಳಿಗೆ ಮನವಿ ಕೊಟ್ಟು ವಸ್ತ್ರಸಂಹಿತೆ ಜಾರಿಗೆ ಆಗ್ರಹಿಸಿದ್ದಾರೆ. ಸರ್ಕಾರ ಇದಕ್ಕೆ ಸ್ಪಂದಿಸದೆ ಇದ್ದರೆ ಬೀದಿಗೆ ಇಳಿದು ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

    ಇತ್ತ ಮಹಿಳಾ ಹಾಗೂ ಕನ್ನಡ ಪರ ಸಂಘಟನೆಗಳ ಕೂಗಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಕೂಡ ದನಿಗೂಡಿಸಿದ್ದು ವಸ್ತ್ರಸಂಹಿತೆ ಅಗತ್ಯವಿದೆ ಎಂದು ಹೇಳುವ ಮೂಲಕ ಹೋರಾಟಕ್ಕೆ ಬಲ ತುಂಬಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ದೇವಾಸ್ಥಾನದ ಆಡಳಿಯ ಮಂಡಳಿ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾಡದೇವತೆ ಚಾಮುಂಡಿಗೆ ವರ್ಧಂತಿ ಉತ್ಸವ – ತಾಯಿಯ ಹುಟ್ಟುಹಬ್ಬಕ್ಕೆ ಹರಿದುಬಂತು ಭಕ್ತಸಾಗರ

    ನಾಡದೇವತೆ ಚಾಮುಂಡಿಗೆ ವರ್ಧಂತಿ ಉತ್ಸವ – ತಾಯಿಯ ಹುಟ್ಟುಹಬ್ಬಕ್ಕೆ ಹರಿದುಬಂತು ಭಕ್ತಸಾಗರ

    ಮೈಸೂರು: ಇಂದು ಆಷಾಢ ಮಾಸದ ಮೂರನೇ ಶುಕ್ರವಾರ. ಇದರ ಜೊತೆಗೆ ಚಾಮುಂಡಿ ತಾಯಿಯ ವರ್ಧಂತಿ ಅರ್ಥಾತ್ ಹುಟ್ಟುಹಬ್ಬ. ಆದ್ದರಿಂದ ನಾಡದೇವಿ ಚಾಮುಂಡಿಗೆ ವರ್ಧಂತಿ ಉತ್ಸವ ನಡೆಯುತ್ತಿದೆ.

    ವರ್ಧಂತಿ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರವೇ ಹರಿದಿದೆ. ಪ್ರಾತಃಕಾಲದಿಂದಲೇ ವಿವಿಧ ಅಭಿಷೇಕ ಮತ್ತು ಪೂಜೆಗಳು ನಡೆದಿವೆ. ಬೆಳಗ್ಗೆ 9.30 ಕ್ಕೆ ಮಹಾಮಂಗಳಾರತಿ ನೆರವೇರಿದ್ದು, 10.25ಕ್ಕೆ ಚಾಮುಂಡಿ ದೇವಿಯ ಚಿನ್ನದ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿದೆ. ಈ ವರ್ಧಂತಿ ಉತ್ಸವದಲ್ಲಿ ಯದುವಂಶದ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಭಾಗಿಯಾಗಿದ್ದು. ಅಲ್ಲದೆ ಸಾವಿರಾರು ಭಕ್ತರು ಆಗಮಿಸಿ ಈ ಕ್ಷಣವನ್ನ ಕಣ್ತುಂಬಿಕೊಂಡರು.


    ಪ್ರತಿ ಆಷಾಢ ಶುಕ್ರವಾರಕ್ಕಿಂತ ಇಂದು ಹೆಚ್ಚಿನ ಭಕ್ತರು ಬೆಟ್ಟದಲ್ಲಿ ಸೇರಿದ್ದಾರೆ. ಚಾಮುಂಡಿ ದೇವಾಲಯದಲ್ಲಿ ವಿವಿಧ ರೀತಿ ಪುಷ್ಪಗಳಿಂದ ದೇವಾಸ್ಥಾನವನ್ನು ಅಲಂಕಾರ ಮಾಡಲಾಗಿದೆ. ಹೂವಿನ ಅಲಂಕಾರ ಭಕ್ತರನ್ನು ಹೆಚ್ಚು ಆಕರ್ಷಿಸುತ್ತಿದೆ. ಚಾಮುಂಡಿ ವರ್ಧಂತಿ ಹಿನ್ನೆಲೆಯಲ್ಲಿ ಬೆಟ್ಟದಲ್ಲಿ ದೇವಿಯ ಚಿನ್ನದ ಫಲ್ಲಕ್ಕಿ ಉತ್ಸವ ಅದ್ಧೂರಿಯಿಂದ ನೆರವೇರಿದೆ.

  • ಚಾಮುಂಡಿ ದೇವಿಯ ಸೀರೆಯಿಂದ ಬಂತು ಕೋಟಿ ಆದಾಯ

    ಚಾಮುಂಡಿ ದೇವಿಯ ಸೀರೆಯಿಂದ ಬಂತು ಕೋಟಿ ಆದಾಯ

    ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಭಕ್ತರು ಚಾಮುಂಡಿ ದೇವಿಗೆ ಹರಕೆ ರೂಪದಲ್ಲಿ ನೀಡುವ ಸೀರೆಗಳ ಹರಾಜಿನಿಂದ ದೇವಸ್ಥಾನಕ್ಕೆ ಬಾರಿ ಆದಾಯ ಬಂದಿದೆ.

    ದೇವಿಗೆ ಉಡಿಸುವ ಸೀರೆಗಳ ಹರಾಜಿನಿಂದ ಈ ವರ್ಷ ಒಂದು ಕೋಟಿ 73 ಲಕ್ಷ ರೂಪಾಯಿ ಆದಾಯ ಬಂದಿದೆ. ಈ ಮೊದಲು ಬಹಿರಂಗ ಹರಾಜಿನಲ್ಲಿ ಸೀರೆ ಹರಾಜು ಮಾಡಲಾಗುತ್ತಿತ್ತು. ಆಗ ಬಾರಿ ಬೆಲೆಯ ಸೀರೆಗಳು ಕಡಿಮೆ ಬೆಲೆಗೆ ಹರಾಜು ಆಗುತಿತ್ತು. ಹೀಗಾಗಿ ಸೀರೆಗಳ ಬಹಿರಂಗ ಹರಾಜಿನಿಂದ ಕಡಿಮೆ ಆದಾಯ ಬರುತ್ತಿತ್ತು.

    ಈಗ ಈ ಪದ್ಧತಿ ಬದಲಾಯಿಸಿ ಸೀರೆಯ ಮುಖಬೆಲೆಯ ಮೇಲೆ ಶೇಕಡಾ 25 ರಷ್ಟು ನೀಡಿ ಹರಾಜು ಮಾಡಲಾಗುತ್ತಿದೆ. ಪರಿಣಾಮ ಸೀರೆ ಹರಾಜಿನಿಂದ ಆದಾಯ ದುಪ್ಪಟ್ಟವಾಗಿದೆ. ಆದ್ದರಿಂದ ಈ ಬಾರಿ ಸೀರೆಗಳು ಹರಾಜಿನಿಂದ ಆದಾಯ ಹೆಚ್ಚಳವಾಗಿ ಬಂದಿದೆ.

  • ಚಾಮುಂಡಿ ದೇವಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಿದ ವಿಚಾರಕ್ಕೆ ಟ್ವಿಸ್ಟ್- ದೇವಿಗೆ ಉಡಿಸಿದ್ದು ಎರಡೆರಡು ಸೀರೆಗಳು!

    ಚಾಮುಂಡಿ ದೇವಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಿದ ವಿಚಾರಕ್ಕೆ ಟ್ವಿಸ್ಟ್- ದೇವಿಗೆ ಉಡಿಸಿದ್ದು ಎರಡೆರಡು ಸೀರೆಗಳು!

    ಮೈಸೂರು: ವಿಜಯದಶಮಿ ಹಬ್ಬದ ದಿನ ಚಿನ್ನದ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡಿ ದೇವಿಯ ಉತ್ಸವ ಮೂರ್ತಿಗೆ ಸಿಎಂ ಪತ್ನಿ ಕೊಟ್ಟಿದ್ದ ಸೀರೆ ಉಡಿಸಿದ ವಿಚಾರಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

    ಅಂಬಾರಿ ಒಳಗೆ ಕೂರಿಸಿದ್ದ ಚಾಮುಂಡಿ ದೇವಿ ಉತ್ಸವ ಮೂರ್ತಿಗೆ ಉಡಿಸಿದ್ದು ಎರಡೆರಡು ಸೀರೆ ಎಂಬ ಅಂಶ ಈಗ ಸಾಕ್ಷಿ ಸಮೇತ ಬಹಿರಂಗವಾಗಿದೆ. ಈ ಮೂಲಕ ಉತ್ಸವ ಮೂರ್ತಿಗೆ ಉಡಿಸಿದ್ದ ಸೀರೆಯಲ್ಲೂ ದೊಡ್ಡ ರಾಜಕೀಯವೇ ನಡೆದಿರುವುದು ಬಹಿರಂಗವಾಗಿದೆ.

    ವಿಜಯದಶಮಿ ದಿನ ಚಿನ್ನದ ಅಂಬಾರಿಯಲ್ಲಿ ಕೂರಿಸಿದ್ದ ಚಾಮುಂಡೇಶ್ವರಿಗೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಲಾಗಿತ್ತು. ಆದ್ರೆ ಅದಕ್ಕೂ ಮುನ್ನ ಮತ್ತೊಂದು ಸೀರೆ ಉಡಿಸಲಾಗಿತ್ತು. ಉತ್ಸವ ಮೂರ್ತಿಗೆ ಮೊದಲು ಉಡಿಸಿದ್ದು ಮೈಸೂರಿನ ಮೇಯರ್ ರವಿಕುಮಾರ್ ನೀಡಿದ್ದ ಸೀರೆ. ಆ ಸೀರೆ ಮೇಲೆ ಸಿಎಂ ಪತ್ನಿ ಕೊಟ್ಟಿದ್ದ ಸೀರೆಯನ್ನು ದೇವಸ್ಥಾನ ಮಂಡಳಿ ಉಡಿಸಿದೆ.

    ಇಷ್ಟು ವರ್ಷ ಸೀರೆ ನೀಡುತ್ತಿದ್ದ ಬೆಂಗಳೂರಿನ ಬಳೇಪೇಟೆ ಭಕ್ತನನ್ನು ಮೇಯರ್ ರವಿಕುಮಾರ್ ಮನವೊಲಿಸಿ ಮೈಸೂರಿನ ಹಿತಕ್ಕಾಗಿ ಹಾಗೂ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಗ್ಯ ಸುಧಾರಿಸಲು ಉತ್ಸವ ಮೂರ್ತಿಗೆ ಸೀರೆ ಉಡಿಸಲು ಯಶಸ್ವಿಯಾಗಿದ್ದರು. ಮೇಯರ್ ಕೊಟ್ಟ ಸೀರೆ ಉಡಿಸಿ ಪೂಜೆ ಮಾಡಲಾಗಿತ್ತು. ಇದನ್ನು ನೋಡಿ ಮೇಯರ್ ಪೂಜೆ ಸಲ್ಲಿಸಿ ಚಾಮುಂಡಿ ಬೆಟ್ಟದಿಂದ ವಾಪಸ್ಸಾಗಿದ್ದರು. ನಂತರ ಕೆಲವೇ ಕ್ಷಣಗಳಲ್ಲಿ ಈ ಸೀರೆ ಮೇಲೆ ಸಿಎಂ ಪತ್ನಿ ಕೊಟ್ಟ ಸೀರೆ ಉಡಿಸಲಾಗಿದೆ. ಈ ಮೂಲಕ ಸೀರೆ ಉಡಿಸುವ ವಿಚಾರದಲ್ಲಿ ರಾಜಕೀಯ ಒತ್ತಡ ತಂದಿರುವುದು ಸ್ಪಷ್ಟವಾಗಿದೆ.

  • 4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    4 ತಿಂಗ್ಳಲ್ಲಿ ಚಾಮುಂಡಿ ದೇವಿ ಹುಂಡಿಗೆ 11 ಕೋಟಿಗೂ ಅಧಿಕ ಆದಾಯ

    ಮೈಸೂರು: ನಾಲ್ಕೇ ತಿಂಗಳಲ್ಲಿ ಮೈಸೂರಿನ ಅಧಿದೇವತೆ ಚಾಮುಂಡಿಬೆಟ್ಟದ ಚಾಮುಂಡಿ ದೇವಿಗೆ ದಾಖಲೆ ಪ್ರಮಾಣದ ಕಾಣಿಕೆ ಹರಿದು ಬಂದಿದೆ.

    ಈ ಹುಂಡಿಗೆ ಸುಮಾರು ಮೂರು ಮುಕ್ಕಾಲು ಕೋಟಿ ಹಣ ಬಂದಿದೆ. ಹಾಗೆ ವಿವಿಧ ರೂಪದಲ್ಲಿ ದೇವಾಲಯಕ್ಕೆ 7 ಕೋಟಿಗೂ ಅಧಿಕ ಆದಾಯ ಕೂಡ ಬಂದಿದೆ. ಆಷಾಢದ ಮಾಸದಲ್ಲೇ ಒಂದೂ ಮುಕ್ಕಾಲು ಕೋಟಿ ಹಣ ಸಂಗ್ರಹವಾಗಿದೆ.

    4 ತಿಂಗಳಲ್ಲಿ ಒಟ್ಟು 11 ಕೋಟಿಗೂ ಅಧಿಕ ಆದಾಯ ಬಂದಿದೆ. ಕಳೆದೆರಡು ವರ್ಷಕ್ಕಿಂತ ಶೇ 40ರಷ್ಟು ಆದಾಯ ಹೆಚ್ಚಾಗಿದೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.