Tag: ಚಾಮುಂಡಿ

  • ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

    – ಚಾಮುಂಡಿಯನ್ನು ಒಪ್ಪುವವರು ಮಾತ್ರ ದಸರಾ ಉದ್ಘಾಟಿಸಬೇಕು ಅಂತ ಕಾನೂನು ತರ್ತೀವಿ: ವಿಪಕ್ಷ ನಾಯಕ

    ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿ ಕಾರಿಕಾರಿದ್ದಾರೆ.

    ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿ.ಕೆ.ಶಿವಕುಮಾರ್

    ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್‌ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಬಾನು ಮುಸ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ ಕುರಿತು ಮಾತನಾಡಿ, ಮುಸ್ಲಿಮರೇ ಮೂರ್ತಿ ಪೂಜೆ ಮಾಡಲ್ಲ ಅಂತ ಹೇಳಿದ್ದಾರೆ. ಯಾರೇ ಹೇಳಿದ್ರು ಮೂರ್ತಿ ಪೂಜೆ ಅದು ಅಪರಾಧ ಅಂತಾರೆ. ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಹೊರಡುವುದು. ಹೂ ಹಾಕಿ ಪೂಜೆ ಮಾಡಿ ಹೊರಡಬೇಕು. ಅವರ ಧರ್ಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ಗೆ ಮುಸ್ಲಿಂ ವೋಟ್ ಬಿಟ್ಟರೆ ತಲೆಯಲ್ಲಿ ಬೇರೆನೂ ಇಲ್ಲ. ಹಿಂದೂಗಳಲ್ಲಿ ಯೋಗ್ಯತೆ ಇಲ್ವಾ? ದಸರಾ ಉದ್ಘಾಟನೆಗೆ ಹಿಂದೂಗಳು ಇರಲಿಲ್ವಾ? ನಮ್ಮ ಸರ್ಕಾರ ಬಂದಾಗ ಇದಕ್ಕೆ ಒಂದು ಕಾನೂನು ತರ್ತೀವಿ. ಚಾಮುಂಡಿಯನ್ನ ಯಾರು ಒಪ್ಪುವರೋ ಅವರು ಮಾತ್ರ ಉದ್ಘಾಟನೆ ಮಾಡಬೇಕು ಅನ್ನೋ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    ಮೈಸೂರಿನಲ್ಲಿ ಪರಮೇಶ್ವರೋತ್ಸವ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹಿರಿಯರು. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಕಾಂಗ್ರೆಸ್ ಅವರನ್ನ ಕರಿಬೇವಿನ ಥರ ಬಳಕೆ ಮಾಡಿಕೊಳ್ಳುತ್ತಿದೆ. ಯಾವಾಗ ಬೇಕೋ ಅವಾಗ ಬಳಕೆ ಮಾಡಿಕೊಳ್ಳುತ್ತಾರೆ. ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುತ್ತಾರೆ. ಅವರು ಒಳ್ಳೆಯವರು ಎಂದು ಹೇಳಿದ್ದಾರೆ.

  • ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

    ದಸರಾ ವಿಶೇಷ: ದೇವಿಗೆ ಚಾಮುಂಡಿ, ರಕ್ತೇಶ್ವರಿ ಹೆಸರು ಬಂದಿದ್ದು ಹೇಗೆ?

    ದೇವಿ ಮಹಾತ್ಮೆಯ ಐದನೇ ಅಧ್ಯಾಯದಲ್ಲಿ ಶುಂಭ ನಿಶುಂಭರ (Shumba, Nishumba) ಕಥೆ ಬರುತ್ತದೆ. ಶುಂಭ, ನಿಶುಂಭರು ರಾಕ್ಷಸರಾಗಿದ್ದು ದೇವಲೋಕವನ್ನು ಆಕ್ರಮಿಸುವ ಕನಸು ಕಾಣುತ್ತಾರೆ. ಈ ಕನಸು ನನಸಾಗಬೇಕಾದರೆ ನಮಗೆ ವಿಶೇಷ ವರ ಸಿಗಬೇಕೆಂದು ತಿಳಿದು ಬ್ರಹ್ಮನನ್ನು ಮೆಚ್ಚಿಸಲು ಘೋರ ತಪಸ್ಸು ಮಾಡುತ್ತಾರೆ. ಇವರ ತಪಸ್ಸನ್ನು ಮೆಚ್ಚಿ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ಈ ವೇಳೆ ಅಯೋನಿಜೆಯಾದ ಕನ್ಯೆ ಅಲ್ಲದೇ ಯಾರಿಂದಲೂ ನಮಗೆ ಮರಣ ಬಾರಬಾರದು ಎಂದು ವರ ಕೇಳುತ್ತಾರೆ. ಬ್ರಹ್ಮ ತಥಾಸ್ತು ಎಂದು ಹೇಳಿ ಈ ವಿಶೇಷ ವರವನ್ನು ದಯಪಾಲಿಸುತ್ತಾನೆ.

    ವರ ಸಿಕ್ಕಿದ ಬೆನ್ನಲ್ಲೇ ಶುಂಭ, ನಿಶುಂಭರು ದೇವಲೋಕಕ್ಕೆ ಹೋಗಿ ಯುದ್ಧ ಮಾಡಿ ದೇವತೆಗಳನ್ನು ಅಲ್ಲಿಂದ ಓಡಿಸುತ್ತಾರೆ. ಈ ವೇಳೆ ಏನು ಮಾಡಬೇಕು ಎನ್ನುವುದನ್ನು ತಿಳಿಯದ ದೇವತೆಗಳು ನೇರವಾಗಿ ಆದಿಶಕ್ತಿಯಾದ ಪಾರ್ವತಿಯ ಬಳಿ ಬರುತ್ತಾರೆ. ಪಾರ್ವತಿಯ (Parvathi) ಬಳಿ ಬರುವುದಕ್ಕೂ ಕಾರಣವಿದೆ. ಹಿಂದೆ ಮಹಿಷಾಸುರನನ್ನು ಸಂಹಾರ ಮಾಡಿದ ಬಳಿಕ ದೇವಿ ನಿಮಗೆ ಯಾವುದೇ ಕಷ್ಟ ಬಂದರೂ ನನ್ನ ಬಳಿ ಬನ್ನಿ. ನಿಮ್ಮ ಕಷ್ಟವನ್ನು ನಾನು ಪಾರು ಮಾಡುತ್ತೇನೆ ಎಂದು ದೇವತೆಗಳಿಗೆ ಅಭಯ ನೀಡಿದ್ದಳು.

    ದೇವತೆಗಳು ಲೋಕಕಂಟಕರಾಗಿರುವ ಶುಂಭ, ನಿಶುಂಭರ ಕಾಟವನ್ನು ವಿವರಿಸಿ ನಮ್ಮನ್ನು ರಕ್ಷಿಸಬೇಕೆಂದು ಆದಿಶಕ್ತಿಯ ಬಳಿ ಮೊರೆ ಇಡುತ್ತಾರೆ. ದೇವತೆಗಳು ಆದಿಶಕ್ತಿಯನ್ನು ಹೊಗಳಿದಾಗ ಆಕೆಯ ದೇಹದಿಂದ ಕೌಶಿಕಿಯೆಂಬ (Kaushiki) ಸ್ತ್ರೀ ಹೊರಬಂದು ದೇವತೆಗಳಿಂದ ಸಕಲ ಆಯುಧಗಳನ್ನು ಪಡೆಯುತ್ತಾಳೆ. ನಂತರ ಸೌಂದರ್ಯಭರಿತವಾದ ಬಾಲೆಯ ರೂಪವನ್ನು ತಳೆದು ಹಿಮಾಲಯದ ತಪ್ಪಲಿನಲ್ಲಿ ಉಯ್ಯಾಲೆಯಾಡುತ್ತಾ ವಿನೋದಲ್ಲಿ ಕುಳಿತು ತನ್ನದೇ ಲೋಕದಲ್ಲಿ ವಿಹರಿಸುತ್ತಿರುತ್ತಾಳೆ.

    ಈ ಸಂದರ್ಭದಲ್ಲಿ ಬೇಟೆಯಾಡಲು ಬಂದಿದ್ದ ಶುಂಭ, ನಿಶುಂಭರ ಸೇನಾಧಿಪತಿಯಾದ ಚಂಡ, ಮುಂಡರು (Chanda, Munda) ದೇವಿಯನ್ನು ನೋಡಿ ಮನಸೋಲುತ್ತಾರೆ. ಈಕೆಯ ಸೌಂದರ್ಯವನ್ನು ನೋಡಿ ಈ ವಿಚಾರವನ್ನು ಶುಂಭನಿಗೆ ತಿಳಿಸುತ್ತಾರೆ. ಶುಂಭ ಆಕೆಯನ್ನು ಕರೆ ತರುವಂತೆ ಧೂಮ್ರಲೋಚನಿಗೆ ಸೂಚಿಸುತ್ತಾನೆ. ಈ ವೇಳೆ ದೇವಿ,”ನನ್ನ ಕೈ ಹಿಡಿಯಬೇಕಾದ ವರನಾದವನು ನನಗಿಂತಲೂ ಬಲಶಾಲಿಯಾಗಿರಬೇಕು. ನನ್ನನ್ನು ಯಾರು ಯುದ್ಧದಲ್ಲಿ ಸೋಲಿಸುತ್ತಾರೋ ಅವರನ್ನು ಮದುವೆಯಾಗುತ್ತೇನೆ. ಹೀಗಾಗಿ ಯುದ್ಧದಲ್ಲಿ ಸೋಲಿಸಿದರೆ ಮಾತ್ರ ಶುಂಭನನ್ನು ಮದುವೆಯಾಗುತ್ತೇನೆ” ಎಂದು ಹೇಳುತ್ತಾಳೆ. ಈ ಕಾದಾಟದಲ್ಲಿ ಧೂಮ್ರಲೋಚನ ಹತನಾದ ವಿಚಾರ ತಿಳಿದು ಶುಂಭ ಚಂಡ, ಮುಂಡರಿಗೆ ಆಕೆಯನ್ನು ಕರೆ ತರುವಂತೆ ಆದೇಶಿಸುತ್ತಾನೆ. ಚಂಡಮುಂಡರು ದೇವಿ ಜೊತೆ ಯದ್ಧ ಮಾಡುತ್ತಾರೆ. ಈ ಸಮಯದಲ್ಲಿ ದೇವಿ ಕಪ್ಪು ಬಣ್ಣಕ್ಕೆ ತಿರುಗಿ ಆಕೆಯ ಹಣೆಯಿಂದ ಕಾಳಿ ಹೊರ ಬಂದು ಇಬ್ಬರನ್ನು ಸಂಹಾರ ಮಾಡುತ್ತಾಳೆ. ಇಬ್ಬರನ್ನು ಸಂಹಾರ ಮಾಡಿದ್ದಕ್ಕೆ ʼಚಾಮುಂಡಿʼ, ʼಚಾಮುಂಡೇಶ್ವರಿʼ ಎಂಬ ಹೆಸರು ದೇವಿಗೆ ಬರುತ್ತದೆ. ಇದನ್ನೂ ಓದಿ: ಶಿರಸಿ ಮಾರಿಕಾಂಬಾ ದರ್ಶನಕ್ಕೆ ವಸ್ತ್ರಸಂಹಿತೆ ಜಾರಿ

    ಚಂಡಮುಂಡರನ್ನು ದೇವಿ ಹತ್ಯೆ ಮಾಡಿದ ವಿಚಾರ ತಿಳಿದು ಶುಂಭ ರಕ್ತ ಬೀಜನನನ್ನು (Raktabeeja) ಯುದ್ಧಕ್ಕೆ ಕಳುಹಿಸುತ್ತಾನೆ. ಯುದ್ಧದ ಸಮಯದಲ್ಲಿ ಆತನ ರಕ್ತದ ಬಿಂದುಗಳು ನೆಲಕ್ಕೆ ಬೀಳುತ್ತಿದ್ದಂತೆ ಮತ್ತಷ್ಟು ರಾಕ್ಷಸರು ಹುಟ್ಟುತ್ತಿರುತ್ತಾರೆ. ರಕ್ತದಿಂದ ರಾಕ್ಷಸರು ಜನಿಸಲು ಕಾರಣವಿದೆ. ತನ್ನ ದೇಹದಿಂದ ಬಿದ್ದ ಒಂದೊಂದು ತೊಟ್ಟು ರಕ್ತವೂ ತನ್ನಂತೆಯೇ ಪರಾಕ್ರಮಶಾಲಿಯಾದ ರಾಕ್ಷಸರು ಹುಟ್ಟುವಂತೆ ಈಶ್ವರನಿಂದ ವರ ಪಡೆದಿದ್ದ. ಯುದ್ಧದಲ್ಲಿ ಈತನನ್ನು ಸೋಲಿಸುವುದು ಅಸಾಧ್ಯ ಎಂದು ತಿಳಿದ ದೇವಿ ನಾಲಗೆಯನ್ನು ಹೊರ ಚಾಚಿ ಯುದ್ಧ ಮಾಡುತ್ತಾಳೆ. ನಾಲಗೆಯ ಮೇಲೆ ನಿಂತು ರಕ್ತಬೀಜ ಯುದ್ಧ ಮಾಡಿದ. ಆತನ ದೇಹದಿಂದ ಬಿದ್ದ ರಕ್ತವನ್ನು ನಾಲಗೆಯ ಮೂಲಕ ಹೀರಿದ್ದರಿಂದ ರಕ್ತಬೀಜನ ಶಕ್ತಿ ಕಡಿಮೆಯಾಗಿ ಕೊನೆಗೆ ಹತನಾಗುತ್ತಾನೆ. ರಕ್ತಬೀಜನನ್ನು ಸಂಹರಿಸಿದ್ದಕ್ಕೆ ದೇವಿಗೆ ʼರಕ್ತೇಶ್ವರಿʼ ಎಂಬ ಹೆಸರು ಬರುತ್ತದೆ.

    ದುಮ್ರಲೋಚನ, ಚಂಡ, ಮುಂಡ, ರಕ್ತ ಬೀಜನನ್ನು ಹತ್ಯೆ ಮಾಡಿದ್ದಕ್ಕೆ ಸಿಟ್ಟಾದ ನಂತರ ಶುಂಭ, ನಿಶುಂಭರು ದೇವಿಯೊಡನೆ ಯುದ್ಧಕ್ಕೆ ಬರುತ್ತಾರೆ. ಇವರಿಬ್ಬರನ್ನು ಕೌಶಿಕಿ ಸಂಹಾರ ಮಾಡಿ ದೇವಲೋಕವನ್ನು ಮರಳಿ ದೇವತೆಗಳಿಗೆ ನೀಡುತ್ತಾಳೆ.

  • ಚಾಮುಂಡಿ ತಾಯಿಯ ದರ್ಶನ ಬಂದ್

    ಚಾಮುಂಡಿ ತಾಯಿಯ ದರ್ಶನ ಬಂದ್

    ಮೈಸೂರು: ಕೇತುಗ್ರಸ್ತ ಸೂರ್ಯ ಗ್ರಹಣ (Solar Eclipse) ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ದೇಗುಲವನ್ನು ಬಂದ್ ಮಾಡಲಾಗಿದೆ.

    ಆಡಳಿತ ಮಂಡಳಿಯು ಇಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಇದೀಗ ಮಧ್ಯಾಹ್ನ ಒಂದು ಗಂಟೆಯ ಬಳಿಕ ದೇವರ ದರ್ಶನವಿರುವುದಿಲ್ಲ ಅಂತಾ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಬೆಳಗಾವಿಯ ಬಹುತೇಕ ದೇಗುಲಗಳಲ್ಲಿ ದೇವರ ದರ್ಶನಕ್ಕೆ ಅವಕಾಶ, ಎಂದಿನಂತೆ ಪೂಜೆ

    ಇದೀಗ ಒಂದು ಗಂಟೆಯಾದ ಹಿನ್ನೆಲೆಯಲ್ಲಿ ಚಾಮುಂಡಿ (Chamundi Devi) ತಾಯಿಯ ದರ್ಶನ ಬಂದ್ ಆಗಿದೆ. ಗ್ರಹಣ ಸ್ಪರ್ಶ, ಮೋಕ್ಷ ಕಾಲದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನಡೆಯಲಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]