Tag: ಚಾನೆಲ್

  • ಚಾನೆಲ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದವನ ವಿರುದ್ಧ ದೂರು ದಾಖಲು

    ಚಾನೆಲ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿದ್ದವನ ವಿರುದ್ಧ ದೂರು ದಾಖಲು

    ಮೈಸೂರು: ರಾಜ್ಯದ ಪ್ರತಿಷ್ಠಿತ ಟಿವಿ ಚಾನಲ್ ಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಲ್ಲಿ ವೆಬ್ ಚಾನಲ್ ವರದಿಗಾರ ಪ್ರಶಾಂತ ಸೇರಿ ಇಬ್ಬರ ವಿರುದ್ಧ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎಚ್.ಡಿ.ಕೋಟೆ ಪಟ್ಟಣದ ಆಸ್ಪತ್ರೆ ಬಡಾವಣೆಯ ನಿವಾಸಿ ಪ್ರಶಾಂತ್, ಟಿವಿ ಚಾನಲ್ ಹೆಸರಿನಲ್ಲಿ ಬ್ಲಾಕ್ ಮೇಲ್ ಗೆ ಮುಂದಾಗಿದ್ದ. ಪಟ್ಟಣದ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ಮಾಲೀಕರ ಪತಿಯಿಂದ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡದೇ ಇದ್ದರೆ ಪ್ರತಿಷ್ಠಿತ ಟಿವಿ ಚಾನಲ್ ಗಳಲ್ಲಿ ಸುದ್ದಿ ಪ್ರಚಾರ ಮಾಡುವ ಬೆದರಿಕೆಯಾಕಿದ್ದ. ಹಣ ನೀಡಿದರೆ ಸುದ್ದಿ ಬಿತ್ತರಿಸದೇ ತಡೆ ಹಿಡಿಯಲು ಚಾನಲ್ ಅವರೊಂದಿಗೆ ಮಾತುಕತೆ ಮಾಡುವುದಾಗಿ ನಂಬಿಸಿದ್ದ.

    ಪ್ರಶಾಂತ್ ಮಾತುಕತೆ ಆಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದೆ. ಸರಗೂರು ಸರ್ಕಾರಿ ಆಸ್ಪತ್ರೆ ಶುಶ್ರೂಷಕನಾಗಿ ಪುಟ್ಟರಾಜು ಸೇವೆ ಸಲ್ಲಿಸುತ್ತಿದ್ದು, ಅವರ ಪತ್ನಿ ಪಾರ್ವತಿ ಎಚ್.ಡಿ.ಕೋಟೆ ಪಟ್ಟಣದಲ್ಲಿ ಪಾರ್ವತಿ ಹೆಲ್ತ್ ಕೇರ್ ಕ್ಲಿನಿಕ್ ನಡೆಸುತ್ತಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದು ಕ್ಲಿನಿಕ್ ನಡೆಸುವ ಸುದ್ದಿ ಬಿತ್ತರಿಸುವ ಬೆದರಿಕೆ ಹಾಕಿ ಹಣಕ್ಕೆ ಒತ್ತಾಯ ಮಾಡಿದ್ದ.

    ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐದಾರು ವರ್ಷಗಳಿಂದ ಒಣಗಿದ್ದ ಚಾನಲ್‍ಗೆ ವಿವಿ ಸಾಗರ ಜಲಾಶಯದಿಂದ ನೀರು

    ಐದಾರು ವರ್ಷಗಳಿಂದ ಒಣಗಿದ್ದ ಚಾನಲ್‍ಗೆ ವಿವಿ ಸಾಗರ ಜಲಾಶಯದಿಂದ ನೀರು

    – ರೈತರ ಮೊಗದಲ್ಲಿ ಮಂದಹಾಸ

    ಚಿತ್ರದುರ್ಗ: ಕಳೆದ ಐದಾರು ವರ್ಷಗಳಿಂದ ಮಳೆಯಾಗಿಲ್ಲ ಅಂತ ನಿಲ್ಲಿಸಲಾಗಿದ್ದ ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ಇಂದು ಚಾನಲ್ ಮೂಲಕ ಹೊರಬಿಡಲಾಯಿತು. ಹೀಗಾಗಿ ನೀರಿಲ್ಲದೇ ವಿನಾಶದ ಅಂಚಿನಲ್ಲಿದ್ದ ಬರದನಾಡಿನ ಜಮೀನುಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಹಾಗೂ ಜಿಲ್ಲೆಯ ಮುರಘಾ ಶ್ರೀಗಳು ಸೇರಿದಂತೆ ವಿವಿಧ ಮಠಗಳ ಮಠಾಧೀಶರು ಇದಕ್ಕೂ ಮುನ್ನ ಜಲಾಶಯದ ಆವರಣದಲ್ಲಿರುವ ಕಣಿವೆ ಮಾರಮ್ಮ ದೇಗುಲದ ಬಳಿ ಹೋಮಹವನ, ವಿಶೇಷ ಪೂಜಾಕಾರ್ಯ ಹಾಗೂ ಗಂಗಾ ಪೂಜೆ ಸಲ್ಲಿಸಿದ್ದಾರೆ. ನಂತರ ಎಲ್ಲರೂ ಸೇರಿ ಚಾನಲ್ ಮೂಲಕ ನೀರು ಹರಿಸಲು ಜಾಕ್‍ವಾಲ್ ಎತ್ತಿದರು.

    ಹೀಗಾಗಿ ಸುಮಾರು ಐದಾರು ವರ್ಷಗಳಿಂದ ಖಾಲಿಯಾಗಿ ಒಣಗಿ ಹೋಗಿದ್ದ ಚಾನಲ್‍ಗಳಲ್ಲಿ ರಭಸವಾಗಿ ನೀರು ಹರಿಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೇ ಈ ಭಾಗದ ಕೊಳವೆ ಬಾವಿಗಳೆಲ್ಲ ಬತ್ತಿ ಬರಿದಾಗಿದ್ದವು. ವಿವಿಸಾಗರ ಜಲಾಶಯದಲ್ಲಿನ ನೀರು ಸಹ ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿತ್ತು. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಕಳೆದ ನಾಲ್ಕು ವರ್ಷದ ಹಿಂದೆಯೇ ಚಾನಲ್ ಮೂಲಕ ನೀರು ಹರಿಯದಂತೆ ನಿಲ್ಲಿಸಲಾಗಿತ್ತು.

    ಪರಿಣಾಮ ಹಿರಿಯೂರು ತಾಲೂಕಿನ ರೈತರ ತೋಟಗಳಲ್ಲಿದ್ದ ಅಡಿಕೆ, ತೆಂಗು, ದಾಳಿಂಬೆ ಬೆಳೆಗಳು ಒಣಗಿ ರೈತರು ಕಂಗಾಲಾಗಿದ್ದರು. ಹೀಗಾಗಿ ರೈತರು ನೀರು ಬಿಟ್ಟು ರೈತರನ್ನು ಉಳಿಸಿ ಅಂತ ಹೋರಾಟ ಕೂಡ ನಡೆಸಿದ್ದರು. ರೈತರ ಕಷ್ಟ ನೋಡಲಾರದ ವರುಣ ಕೃಪೆತೋರಿ ಉತ್ತಮಮಳೆಯಾದ ಹಿನ್ನೆಲೆಯಲ್ಲಿ 101.65 ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ಇಂದು ಜಿಲ್ಲೆಯ ಮಠಾಧೀಶರ ನೇತೃತ್ವದಲ್ಲಿ ಹೋಮಹವನ ನಡೆಸಿ ಚಾನಲ್ ಮೂಲಕ ರೈತರ ಬಳಕೆಗಾಗಿ ನೀರು ಹರಿಸಲಾಯಿತು.

    ರೈತರ ತೋಟಗಳಿಗೆ ಚಾನಲ್ ಮೂಲಕ ವಿವಿ ಸಾಗರ ಜಲಾಶಯದ 1.21 ಟಿ.ಎಂಸಿ ನೀರನ್ನು ಇಂದು ಹರಿಸಲಾಗಿದೆ. ಅಲ್ಲದೇ ಎಡನಾಲೆ ಹಾಗೂ ಬಲನಾಲೆ ಎರಡರಲ್ಲೂ ನೀರು ಹರಿಯುತ್ತಿದ್ದು, ಒಂದು ಹೊಸ ಫಾಲ್ಸ್ ಧುಮುಕುವಂತೆ ಹರಿಯುತ್ತಿರುವ ಚಾನಲ್ ನೋಡಲು ಜನಸಾಗರವೇ ವಿವಿಸಾಗರದತ್ತ ಹರಿದು ಬರುತ್ತಿದೆ.

    ಈ ನೀರು ಹಿರಿಯೂರು ತಾಲೂಕಿನ ಜಾನುವಾರುಗಳಿಗೆ ಕುಡಿಯುವ ನೀರು, ಅಚ್ಚುಕಟ್ಟು ಪ್ರದೇಶದ ರೈತರ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಹಾಗೂ 38 ಗ್ರಾಮಗಳ ಜನತೆಗೆ ತುಂಬಾ ಅನುಕೂಲವಾಗಲಿದೆ ಎಂದು ಶಾಸಕಿ ಪೂರ್ಣಿಮಾ ಪ್ರತಿಕ್ರಿಯಿಸಿದರು.

  • ಟಿವಿಗೆ ಲಗ್ಗೆ ಇಟ್ಟ ‘ಕೆಜಿಎಫ್’

    ಟಿವಿಗೆ ಲಗ್ಗೆ ಇಟ್ಟ ‘ಕೆಜಿಎಫ್’

    ಬೆಂಗಳೂರು: ಭಾರತದಾದ್ಯಂತ ಹವಾ ಎಬ್ಬಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ರಿಲೀಸ್ ಆಗಿ ಬಹುತೇಕ ಎರಡು ತಿಂಗಳು ಆಗಿದೆ. ಆದರೂ ಇದರ ಹವಾ ಇನ್ನೂ ಕಡಿಮೆ ಆಗಿಲ್ಲ. ಇದೀಗ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವಾಗಲು ಸಜ್ಜಾಗುತ್ತಿದೆ.

    ಈಗಾಗಲೇ ಕೆಜಿಎಫ್ ಸಿನಿಮಾ ಬಾಲಿವುಡ್ ಕಿರುತೆರೆಯಲ್ಲಿ ಪ್ರಸಾರವಾಗಿದ್ದು, ಕನ್ನಡದಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಮಾತ್ರ ಪ್ರಸಾರ ಆಗುತ್ತಿತ್ತು. ಈಗ ದುಬಾರಿ ಬೆಲೆಗೆ ಕೆಜಿಎಫ್ ಸಿನಿಮಾವನ್ನು ಖಾಸಗಿ ಚಾನಲ್ ಖರೀದಿಸಿದೆ. ಈ ಮೂಲಕ ಸದ್ಯದಲ್ಲೇ ಕೆಜಿಎಫ್ ಸಿನಿಮಾವನ್ನು ಮನೆಯಲ್ಲಿಯೇ ಕುಳಿತು ನೋಡಬಹುದಾಗಿದೆ.

    ಕೆಜಿಎಫ್ ಸಿನಿಮಾದ ಟಿವಿ ಹಕ್ಕನ್ನು ಕಲರ್ಸ್ ಕನ್ನಡ ವಾಹಿನಿ ಖರೀದಿಸಿರುವುದು ಖಚಿತವಾಗಿದ್ದು, ಈಗಾಗಲೇ ವಾಹಿನಿ ಸಿನಿಮಾ ರಿಲೀಸ್ ಪ್ರೋಮೋ ಟೆಲಿಕಾಸ್ಟ್ ಮಾಡುತ್ತಿದೆ. ಈ ಮೂಲಕ ಥಿಯೇಟರ್, ಮೊಬೈಲ್, ಲ್ಯಾಪ್‍ಟಾಪ್ ನಲ್ಲಿ ಸಿನಿಮಾ ನೋಡಿದ್ದೀರಿ. ಈಗ ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ವೀಕ್ಷಿಸಬಹುದು.

    ಕೆಜಿಎಫ್ ಸಿನಿಮಾ ದೇಶಾದ್ಯಂತ ಪಂಚಭಾಷೆಗಳಲ್ಲಿ ರಿಲೀಸ್ ಆಗಿದ್ದು, ಇನ್ನೂ ರಾಜ್ಯದ ಹಲವು ಚಿತ್ರಮಂದಿರದಲ್ಲಿ ಕೆಜಿಎಫ್ ಪ್ರದರ್ಶನವಾಗುತ್ತಿದೆ. ಒಟ್ಟಾರೆ 200 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv