Tag: ಚಳಿಗಾಲ

  • ಚಳಿಗಾಲದ ಅತಿಥಿ ಅವರೆಕಾಯಿಗೆ ರೇಷ್ಮೆನಾಡಲ್ಲಿ ಫುಲ್ ಡಿಮ್ಯಾಂಡ್

    ಚಳಿಗಾಲದ ಅತಿಥಿ ಅವರೆಕಾಯಿಗೆ ರೇಷ್ಮೆನಾಡಲ್ಲಿ ಫುಲ್ ಡಿಮ್ಯಾಂಡ್

    ರಾಮನಗರ: ಚಳಿಗಾಲ ವಿಶೇಷ ಅತಿಥಿ ಎಂದೇ ಕರೆಸಿಕೊಳ್ಳುವ ಅವರೆಕಾಯಿಗೆ ರೇಷ್ಮೆನಗರಿ ರಾಮನಗರ ಜಿಲ್ಲೆಯಲ್ಲಿ ಫುಲ್ ಡಿಮ್ಯಾಂಡ್ ಇದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಅವರೆಕಾಯಿ ರಾಮನಗರಕ್ಕೆ ಬಂದು ಬೀಳ್ತಿದೆ. ವಿಶೇಷವೆಂದರೆ ಹುಣಸೂರಿನ ಅವರೆಕಾರಿ ಈ ಬಾರಿ ಜಿಲ್ಲೆಯ ತಾಲೂಕುಗಳಿಗೆ ಎತ್ತೇಚ್ಚವಾಗಿ ಹರಿದು ಬರುತ್ತಿದೆ.

    ತೊಗರಿಕಾಯಿ ನಂತರ ಮಾರುಕಟ್ಟೆ ಪ್ರವೇಶಿಸುವ ಅವರೆಕಾಯಿ ಸಾಮಾನ್ಯವಾಗಿ ನವೆಂಬರ್ ನಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಅದರಂತೆ ಈ ವರ್ಷವೂ ಯಥೇಚ್ಚ ಪ್ರಮಾಣದಲ್ಲಿ ಅವರೆಕಾಯಿ ಮಾರುಕಟ್ಟೆಗೆ ಬಂದಿದೆ.

    ಡಿಸೆಂಬರ್ ಅಂತ್ಯದಿಂದ ಜನವರಿ ಮೊದಲೆರಡು ವಾರ ಅತಿ ಹೆಚ್ಚು ಅವರೆಕಾಯಿ ಫಸಲು ಬರುತ್ತೆ. ಇದೀಗ ಈ ಅವರೆಕಾಯಿ ರಾಮನಗರ ಜಿಲ್ಲೆಯ ಮಾಗಡಿ, ಚನ್ನಪಟ್ಟಣ, ಕನಕಪುರ ಅಷ್ಟೇ ಅಲ್ಲದೆ ಕುಣಿಗಲ್, ನೆಲಮಂಗಲ ಮಾರುಕಟ್ಟೆಯಲ್ಲಿಯೂ ಸಹ ಸೋನೆ ಅವರೆಕಾಯಿಯ ಘಮಲು ಜೋರಾಗಿದ್ದು, ಚಳಿಗಾಲದಲ್ಲಿ ಬಾಯಿಗೆ ರುಚಿ ನೀಡುವ ಅವರೆಕಾಯಿಗೆ ಎಲ್ಲಿಲ್ಲದ ಬೇಡಿಕೆಯುಂಟಾಗಿದೆ.

    ಪ್ರತಿನಿತ್ಯ ಮಾರುಕಟ್ಟೆಗೆ 2-3 ಟೆಂಪೋ ಅವರೆಕಾಯಿ ರಾಮನಗರ ಜಿಲ್ಲೆಗೆ ಬಂದು ಬೀಳುತ್ತಿದೆ. ಪ್ರತಿ ಲೋಡ್‍ನಲ್ಲಿ ತಲಾ 65-70 ಕಿಲೋ ಅವರೆಕಾಯಿ ತುಂಬಿದ 25-30 ಚೀಲಗಳನ್ನು ತುಂಬಲಾಗುತ್ತಿದೆ. ಹೋಲ್‍ಸೇಲ್ ವ್ಯಾಪಾರಿಗಳು ಹುಣಸೂರಿನಿಂದ ತಂದ ಕಾಯಿಯನ್ನು ಸ್ಥಳೀಯವಾಗಿ ಅಂಗಡಿ ಮಾಲೀಕರು, ಕೈಗಾಡಿ ವ್ಯಾಪಾರಸ್ಥರು ಖರೀದಿಸಿ ಖುಷಿಖುಷಿಯಾಗಿ ಮಾರಾಟ ಮಾಡುತ್ತಿದ್ದಾರೆ.

    ಚಳಿಗಾಲದ ಅತಿಥಿಯಾಗಿರುವ ಅವರೆಕಾಯಿಗೆ ಹೋಟೆಲ್, ಮನೆ ಮನೆಗಳಲ್ಲಿಯೂ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಹೋಟೆಲ್‍ಗಳಲ್ಲಿ ಅವರೆಕಾಯಿ ಉಪ್ಪಿಟ್ಟು, ಅವರೆಕಾಯಿ ಪಲ್ಯ, ಅವರೆಕಾಯಿ ಸಾರು, ಮುದ್ದೆ ಊಟಕ್ಕೆ ಗ್ರಾಹಕರು ಮುಗಿಬೀಳ್ತಿದ್ದಾರೆ. ಅಲ್ಲದೆ ಮನೆಗಳಲ್ಲಿ ಅವರೆಕಾಯಿ ಸಾಂಬಾರ್, ಮುದ್ದೆ, ಅವರೆಕಾಯಿ ಸೊಪ್ಪಿನ ಬಸ್ಸಾರು, ಹಿದುಕಿದ ಅವರೆಕಾಯಿ ಸಾಂಬಾರ್ ಈ ರೀತಿಯ ನಾನಾ ತರಹದ ಅಡುಗೆಗಳಲ್ಲಿ ಅವರೆಕಾಯಿ ಬಳಕೆಯಾಗುತ್ತಿದೆ.

  • ದೆಹಲಿಯಲ್ಲಿ ಮೈ ಕೊರೆಯುವ ಚಳಿ – ದಾಖಲಾಯ್ತು ಕನಿಷ್ಠ ಉಷ್ಣಾಂಶ

    ದೆಹಲಿಯಲ್ಲಿ ಮೈ ಕೊರೆಯುವ ಚಳಿ – ದಾಖಲಾಯ್ತು ಕನಿಷ್ಠ ಉಷ್ಣಾಂಶ

    ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕನಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಇಂದು ಬೆಳಗ್ಗೆ 6:10ಕ್ಕೆ 2.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಕಡಿಮೆ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇಂದು ದೆಹಲಿಯ ಲೋದಿ ರೋಡ್‍ನಲ್ಲಿ 1.7 ಡಿಗ್ರಿ ಸೆಲ್ಸಿಯಸ್, ಆಯಾ ನಗರ 1.9 ಡಿಗ್ರಿ ಸೆಲ್ಸಿಯಸ್, ಸಬ್ದರ್‍ಜಂಗ್ ಎನಕ್ಲೇವ್ 2.7 ಡಿಗ್ರಿ ಸೆಲ್ಸಿಯಸ್, ಪಾಲಂ ಏರ್‍ಪೋರ್ಟ್ 3.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತಲೆ ಸುಡುವ ಬಿಸಿಲು, ಮಾರಕ ಮಾಲಿನ್ಯ ಕಂಡಿದ್ದ ದೆಹಲಿ ಜನರು ಮೈ ಕೊರತೆಯುವ ಚಳಿಗೆ ಬೆಚ್ಚಿ ಬಿದ್ದಿದ್ದಾರೆ.

    ಬೆಳಗ್ಗೆ ಮಂಜು ಮುಸುಕಿದ ವಾತವರಣ ಕೂಡಿದ್ದು, ಸ್ಪಷ್ಟತೆ ಇಲ್ಲದ ಕಾರಣ ನಾಲ್ಕು ವಿಮಾನಗಳ ಹಾರಾಟದ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೆ ದೆಹಲಿಯಿಂದ ಹೊರಡುವ, ಆಗಮಿಸುವ 24 ರೈಲುಗಳು ತಡವಾಗಿ ಸಂಚರಿಸುತ್ತಿವೆ.

    ಬೆಳಗ್ಗಿನ ವೇಳೆ ಗರಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದ್ರೆ, ರಾತ್ರಿ ಕನಿಷ್ಠ 4.5 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಗಾಳಿಯ ದಿಕ್ಕು ಬದಲಾವಣೆ ಆಗಿರುವ ಕಾರಣ ಈ ಪ್ರಮಾಣದಲ್ಲಿ ಉಷ್ಣಾಂಶ ಇಳಿಕೆ ಆಗಿದೆ. ಡಿ.31ರಂದು ದೆಹಲಿಯಲ್ಲಿ 4.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ಇದು 1919ರಲ್ಲಿ ದಾಖಲಾಗಿದ್ದ ಚಳಿ ಮತ್ತೆ ಪುನರಾವರ್ತನೆಯಾಗಲಿದೆ. ಜೊತೆಗೆ 118 ವರ್ಷಗಳ ಬಳಿಕ ದಾಖಲೆಯ ಚಳಿ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

  • ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮೈ ಕೊರೆಯೋ ಚಳಿಯ ವಾತಾವರಣದಲ್ಲಿ ಎಂಜಾಯ್ ಮಾಡ್ತಿರುವ ಪ್ರವಾಸಿಗರು

    ಮಡಿಕೇರಿ: ಮೈ ಕೊರೆಯುವ ಚಳಿಗಾಲ ಬಂದರೆ ಸಾಕು ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಾತ್ರೆಯೇ ಸೇರುತ್ತೆ, ದೇಶದ ನಾನಾ ಭಾಗಗಳಿಂದ ಆಗಮಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಸರ್ಗದ ಮಡಿಲಲ್ಲಿ ಮೈ ಮರೆಯುತ್ತಾ ಕಳೆದು ಹೋಗುತ್ತಾರೆ. ಚಳಿಯ ವಾತಾವರಣಕ್ಕೆ ಇದೀಗ ಕಾಫಿನಾಡು ರಂಗೇರಿದ್ದು ಪ್ರವಾಸಿಗರು ಕೊಡಗಿಗೆ ಲಗ್ಗೆಯಿಟ್ಟು ಎಂಜಾಯ್ ಮಾಡ್ತಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮೈ ಕೊರೆಯುವ ಚಳಿಯ ವಾತಾವರಣ ನಿರ್ಮಾಣವಾಗಿದ್ದು, ಚಳಿಯ ಆಹ್ಲಾದಕಾರ ವಾತಾವರಣವನ್ನು ಸವಿಯಲು ಇದೀಗ ಪ್ರವಾಸಿಗರು ಕೊಡಗಿನತ್ತ ಲಗ್ಗೆ ಹಾಕುತ್ತಿದ್ದಾರೆ. ದೇಶದ ವಿವಿಧೆಡೆಗಳಿಂದ ಆಗಮಿಸಿರುವ ಪ್ರಕೃತಿ ಪ್ರಿಯರು ಕೊಡಗಿನ ಹಿತಕರ ವಾತಾವರಣದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

    ಸಂಜೆ ಆಗುತ್ತಲೆ ಮಡಿಕೇರಿಯ ರಾಜಾಸೀಟ್ ಜನರಿಂದ ತುಂಬಿ ತುಳುಕುತ್ತೆ. ಪ್ರಕೃತಿ ಸೌಂದರ್ಯ ಸವಿಯುತ್ತಲೆ ಸಂಜೆಯ ಹಿತಕರ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಟ್ಟಗುಡ್ಡಗಳ ನಡುವೆ ಕರಗುವ ಕೆಂಪು ಸೂರ್ಯನನ್ನು ಕಣ್ಣು ತುಂಬಿಕೊಂಡು ಮೈ ಮರೆಯುತ್ತಿದ್ದಾರೆ.

    ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ನಲ್ಲಿ ಮಡಿಕೇರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚೆ ಭಾರೀ ಸಂಖ್ಯೆಯ ಜನರು ಕೊಡಗಿನತ್ತ ಆಗಮಿಸಿ ಎಂಜಾಯ್ ಮಾಡುತ್ತಿದ್ದಾರೆ. ವಿಶೇಷವಾಗಿ ರಾಜಾಸೀಟ್ ತುಂಬೆಲ್ಲಾ ಜನ ಸಾಗರವೇ ತುಂಬಿಕೊಂಡಂತೆ ನೆರೆದಿದ್ದ ಜನಸ್ಥೋಮ ರಾಜಾಸೀಟ್‍ನ ಸೂರ್ಯಾಸ್ಥದ ಸವಿಯನ್ನು ಸವಿಯುತ್ತಾ ತಮ್ಮ ಪ್ರವಾಸದ ಕ್ಷಣಗಳನ್ನು ಎಂಜಾಯ್ ಮಾಡಿದರು.

    ನಿಸರ್ಗದ ಸೌಂದರ್ಯವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿಯುತ್ತಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ನಿತ್ಯದ ಕಾಯಕ ಮುಗಿಸಿ ಬೆಟ್ಟಗುಡ್ಡಗಳ ಮಡಿಲಲ್ಲಿ ವಿರಮಿಸುವ ನೇಸರನ ಕಂಡು ಜನರು ಖುಷಿಪಟ್ಟರು. ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ಚಳಿಯ ವಾತಾವರಣದಲ್ಲಿ ಸಂಭ್ರಮಿಸುತ್ತಿದ್ದಾರೆ.

  • ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ನೋಡಿ ಮಂತ್ರಮುಗ್ಧರಾದ ಪ್ರವಾಸಿಗರು

    ಚಿಕ್ಕಮಗಳೂರು: ಚಳಿಗಾಲ ಆರಂಭವಾಗಿದ್ದು, ಕಾಫಿನಾಡಿನ ಫಾಲ್ಸ್‌ಗಳಿಗೆ ಜೀವಕಳೆ ಬಂದು ಗಿರಿಯ ಪ್ರಕೃತಿ ವಿಸ್ಮಯವನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಳಿಯ ಗಾಳಿಯೊಂದಿಗಿನ ಮಂಜಿನಾಟ ನೋಡುಗರಿಗೆ ರಸದೌತಣ. ಇಲ್ಲಿನ ಮನಮೋಹಕ ತಾಣಗಳಿಗೆ ಫಿದಾ ಆಗಿರುವ ಪ್ರವಾಸಿಗರಿಗೆ ಕಾಫಿನಾಡೆಂದರೆ ಪುಣ್ಯಭೂಮಿ. ಅದರಲ್ಲೂ ಈ ಬಾರಿ ನವೆಂಬರ್ ನ ಚಳಿಯಲ್ಲೂ ಕಾಫಿನಾಡಿನ ಫಾಲ್ಸ್‌ಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

    ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ ಜಲಪಾತಗಳು ನವೆಂಬರ್-ಡಿಸೆಂಬರ್ ವೇಳೆಗೆ ಶಾಂತವಾಗಿರುತ್ತವೆ. ಆದರೆ ಈ ಬಾರಿ ಗಿರಿಯಲ್ಲಿನ ನಿರಂತರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿವೆ. ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳ, ಕಲ್ಲತ್ತಿಗರಿ, ಝರಿ ಫಾಲ್ಸ್‌ಗಳು ನವೆಂಬರ್ ನ ಚಳಿಯಲ್ಲೂ ನೋಡುಗರಿಗೆ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿವೆ.

    ಕಾಫಿನಾಡಿನ ಗಿರಿಭಾಗದ ಯಾವುದೇ ಸ್ಥಳಕ್ಕೆ ಹೋಗಬೇಕೆಂದರೂ ಈ ಝರಿಯೇ ಜಂಕ್ಷನ್, ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿಗೆ ಭೇಟಿ ನೀಡುವ ಪ್ರವಾಸಿಗರೆಲ್ಲ ಈ ಮಿನಿ ಜಲಪಾತದಲ್ಲಿ ಮಿಂದೇಳದೆ ಮುಂದೆ ಹೋಗಲ್ಲ. ಕಾಫಿನಾಡಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರತಿಯೊಬ್ಬರೂ ಇಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನೀರಲ್ಲಿ ಆಡಿ, ಫೋಟೋ ಶೂಟ್ ಮಾಡಿಸಿಕೊಂಡೇ ಮುಂದೆ ಹೋಗುತ್ತಾರೆ.

    ಚಿಕ್ಕಮಗಳೂರಿನ ಕೈ ಮರದಿಂದ ಹೊರಟರೆ, ಹಾವು ಬಳುಕಿನ ಮೈಕಟ್ಟಿನ ರಸ್ತೆಯುದ್ದಕ್ಕೂ ಎಂಜಾಯ್ ಮಾಡುತ್ತಲೇ ಸಾಗುವ ಪ್ರವಾಸಿಗರು ಗಿರಿಭಾಗಕ್ಕೆ ಎಂಟ್ರಿ ಕೊಟ್ಟ ಕೂಡಲೇ ಹೆಜ್ಜೆ-ಹೆಜ್ಜೆಗೂ ಮಲೆನಾಡನ್ನ ಸುಖಿಸುತ್ತಾರೆ. ನಿಮಿಷಕ್ಕೊಮ್ಮೆ ಬದಲಾಗುವ ಪ್ರಕೃತಿಯನ್ನು ಕಂಡು ಮೂಕವಿಸ್ಮಿತರಾಗುತ್ತಾರೆ. ನೋಡ-ನೋಡುತ್ತಿದ್ದಂತೆಯೇ ಮೋಡ ದಾರಿಯೇ ಕಾಣದಂತೆ ಕವಿದರೆ, ಕ್ಷಣಾರ್ಧದಲ್ಲಿ ತಣ್ಣಗೆ ಬೀಸುವ ಗಾಳಿ ಪ್ರವಾಸಿಗರ ಅನುಕೂಲಕ್ಕೆಂದೇ ಇದೆ ಏನೋ ಎಂದು ಅನ್ನಿಸುತ್ತೆ.

    ಇಲ್ಲಿನ ಗಾಳಿ ಹಾಗೂ ಮೋಡದ ನಡುವಿನ ಚೆಲ್ಲಾಟ ನೋಡುಗರಿಗೆ ಇನ್ನಷ್ಟು ಖುಷಿ ನೀಡುತ್ತಿದೆ. ಮುಗಿಲೆತ್ತರದ ಬೆಟ್ಟಗುಡ್ಡಗಳ ಮೇಲೆ ನಿಂತು ಪ್ರಕೃತಿ ಸೌಂದರ್ಯ ಸವಿಯುವುದೇ ಪ್ರವಾಸಿಗರಿಗೆ ಬಲು ಪ್ರೀತಿ. ಇಂತಹ ಸಂಪದ್ಭರಿತ ನಾಡಿಗೆ ವರ್ಷಕ್ಕೆ ಮೂರ್ನಾಲ್ಕು ಬಾರಿಯಾದರೂ ಬರಬೇಕು ಎನ್ನುವುದು ಅದೆಷ್ಟೋ ಪ್ರವಾಸಿಗರ ಆಸೆಯಾಗಿದೆ. ಕಾಫಿನಾಡಲ್ಲಿ ಇಂತಹ ಅದೆಷ್ಟೋ ನೈಸರ್ಗಿಕ ತಾಣಗಳಿವೆ. ಅವುಗಳಲ್ಲಿ ಬೆಳಕಿಗೆ ಬಂದಿರುವುದು ಒಂದೆರೆಡಾದರೆ, ಬಾರದಿರೋದು ಹತ್ತಾರು ಇವೆ.

  • ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವ ರೀತಿ ಕಾಪಾಡಿಕೊಳ್ಳಬೇಕು- ಇಲ್ಲಿದೆ ಟಿಪ್ಸ್

    ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವ ರೀತಿ ಕಾಪಾಡಿಕೊಳ್ಳಬೇಕು- ಇಲ್ಲಿದೆ ಟಿಪ್ಸ್

    ಬೆಂಗಳೂರು: ಚಳಿಗಾಲ ಈಗ ಶುರುವಾಗಿದ್ದು, ಎಲ್ಲರೂ ತಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಬೇಕು. ಬೆಂಗಳೂರಿನಲ್ಲಿ ಶೀತ ಗಾಳಿ ಹೆಚ್ಚಾಗಿದ್ದು ದಾಖಲೆಯ ಮಟ್ಟದಲ್ಲಿ ಚಳಿ ನಡುಗಿಸುತ್ತಿದೆ. ಚಳಿಗಾಲ ಶುರುವಾದಂತೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಕೂಡ ಕಾಡುತ್ತವೆ.

    ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗಿ ರಕ್ತದ ಚಲನೆಯ ವೇಗವೂ ಕಡಿಮೆಯಾಗುತ್ತದೆ. ವಾತಾವರಣ ವೈಪರೀತ್ಯದಿಂದಾಗಿ ದೇಹದಲ್ಲಿ ಬ್ಯಾಕ್ಟೀರಿಯಾ ವೈರಸ್ ಬೆಳವಣಿಗೆಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಸೋಂಕುಗಳು ಬೇಗ ಹರಡುತ್ತೆ. ಚಳಿಗಾಲದಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತೆ, ಯಾವೆಲ್ಲ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು, ಏನ್ ಫುಡ್ ತಗೋಬೇಕು. ಹೆಲ್ತ್ ಟಿಪ್ಸ್ ಇಲ್ಲಿದೆ. ಇದನ್ನೂ ಓದಿ: ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದ ಕಾಯಿಲೆಗಳು- ಆರೋಗ್ಯ ಜೋಪಾನ!
    * ಶೀತ, ಕೆಮ್ಮು, ಜ್ವರ ಸಾಮಾನ್ಯ.
    * ಚಳಿಗಾಲದಲ್ಲಿ ಜ್ವರ ಬಹುತೇಕ ನ್ಯೂಮೋನಿಯಾವಾಗಿ ಬದಲಾಗುತ್ತೆ. ಜ್ವರ ಬಂದಾಗ ಜೋಪಾನವಾಗಿರಿ.
    * ಶ್ವಾಸಕೋಶ ಸಂಬಂಧಿ ಕಾಯಿಲೆ ಹೆಚ್ಚಾಗುತ್ತೆ. ಉಸಿರಾಟದ ತೊಂದರೆ ಕಾಣಿಸುತ್ತೆ.
    * ಅಸ್ತಮಾ ರೋಗಿಗಳಿಗೆ ಇನ್ನು ತೊಂದರೆ ಹೆಚ್ಚು ಆಗುತ್ತದೆ.
    * ವಯಸ್ಸಾದವರಿಗೆ ಪಾದಗಳಲ್ಲಿ ನೋವು, ಮಂಡಿನೋವು ಚಳಿಗಾಲದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.
    * ಚರ್ಮಶುಷ್ಕವಾಗುತ್ತೆ ಹಾಗೂ ಚರ್ಮ ಸಂಬಂಧಿ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
    * ಚಳಿಗಾಲದಲ್ಲಿ ಹೃದಯಾಘಾತ ಪ್ರಮಾಣ ಹೆಚ್ಚು ಎನ್ನಲಾಗಿದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯುಳ್ಳವರು ಎಚ್ಚರ ವಹಿಸುವುದು ಅತೀ ಮುಖ್ಯ. ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ರಕ್ತದೊತ್ತಡ ಹಾಗೂ ಪ್ರೋಟಿನ್ ಪ್ರಮಾಣ ಹೆಚ್ಚಾಗಿ ರಕ್ತ ಹೆಪ್ಪುಗಟ್ಟಬಹುದು. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಹೃದಯಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತವಾಗುವ ಸಾಧ್ಯತೆ ಅಧಿಕ.
    * ಮಧುಮೇಹ ಇದ್ದವರಿಗೆ ಚಳಿಗಾಲದಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಾಣಿಸುತ್ತೆ. ಇದನ್ನೂ ಓದಿ: ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಚಳಿಗಾಲದ ಹೆಲ್ತ್ ಟಿಪ್ಸ್:
    * ಸಾಧ್ಯವಾದಷ್ಟು ಬೆಚ್ಚಗಿರುವ ಬಟ್ಟೆಗಳನ್ನು ಬಳಸಿ.
    * ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡದೇ ವೈದ್ಯರನ್ನು ಭೇಟಿಯಾಗಿ
    * ಸೀಸನಲ್ ಫ್ರೂಟ್ಸ್ ತಿನ್ನಿ ಹೆಚ್ಚಾಗಿ ದಾಳಿಂಬೆ, ಕಿತ್ತಳೆ ಸೇವಿಸಿ. ಇದ್ರಿಂದ ರಕ್ತಕಣ ಹೆಚ್ವಾಗುತ್ತೆ
    * ಸಾಧ್ಯವಾಷ್ಟು ಬಿಸಿ ಬಿಸಿ ಇರುವ ಊಟ, ತಿಂಡಿಯನ್ನು ಮಾಡಿ. ಬಿಸಿ ಪಾನೀಯ, ಕಾಫಿ, ರಾಗಿ ಗಂಜಿ ತರಕಾರಿ ಸೂಪ್ ಕುಡಿಯಿರಿ.
    * ಚರ್ಮದ ಸಮಸ್ಯೆ ಹೆಚ್ಚಾಗಿ ಕಾಣಿಸೋದ್ರಿಂದ ಕೊಬ್ಬರಿ ಎಣ್ಣೆಯನ್ನು ಮೈ ಕೈಗೆ ಹಚ್ಚಿಕೊಳ್ಳಿ. ವೀಕೆಂಡ್ ನಲ್ಲಿ ಎಣ್ಣೆಸ್ನಾನ ಬೆಸ್ಟ್.
    * ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ ಕರಿಮೆಣಸಿನ ಬಳಕೆ ಆಹಾರ ಪದಾರ್ಥದಲ್ಲಿ ಹೆಚ್ಚಿರಲಿ.
    * ಬಿಸಿ ನೀರನ್ನು ಸೇವಿಸಿ. ಎಣ್ಣೆ ಹೆಚ್ಚಾಗಿ ಹಾಕಿದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಕರಿದ ತಿಂಡಿಗಳನ್ನು ಸೇವಿಸಬೇಡಿ.

    ಮಕ್ಕಳು ವೃದ್ಧರು ಹುಷಾರು: ಮಕ್ಕಳಿಗೆ ಹಾಗೂ ವೃದ್ಧರಿಗೆ ಚಳಿಗಾಲ ಬಂದರೆ ಆಹಾರ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತೆ. ಮಕ್ಕಳಿಗೆ ಬೆಚ್ಚಗಿನ ಬಟ್ಟೆ, ಕುಲಾವಿ ಹಾಕಿ. ವಯಸ್ಸಾದವರೂ ಕೂಡ ಆರೋಗ್ಯದ ಕಾಳಜಿ ಚಳಿಗಾಲದಲ್ಲಿ ಹೆಚ್ಚಾಗಿ ಮಾಡಬೇಕು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಚಳಿಗಾಲದಲ್ಲಿ ಮಗು ಆರೋಗ್ಯವಾಗಿರಲು ಹೀಗೆ ಮಾಡಿ

    ಕಿಲಕಿಲ ನಗುವ ಮಗು ಮನೆಯಲ್ಲಿದ್ದರೆ ಯಾರಿಗೆ ತಾನೇ ಇಷ್ಟ ಆಗಲ್ಲ. ಆ ಮಗು ಆರೋಗ್ಯವಾಗಿರಬೇಕೆಂದು ಮನೆಯಲ್ಲಿ ಎಲ್ಲರೂ ಬಯಸುತ್ತಾರೆ. ಆದರೆ ಚಳಿಗಾಲ ಬಂದರೆ ಸಾಕು ಮಕ್ಕಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತದೆ. ಇಂತಹ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಕೇರ್ ಮಾಡಬೇಕಾಗುತ್ತದೆ. ಈ ವಿಂಟರ್ ನಲ್ಲಿ ಆರೋಗ್ಯವಂತ ಮಗುವಿಗಾಗಿ ಹೀಗೆ ಮಾಡಿ.

    * ಶೀತ ಮತ್ತು ನೆಗಡಿ:
    – ನೆಗಡಿ ಮತ್ತು ಶೀತ ಚಳಿಗಾಲದಲ್ಲಿ ಹೆಚ್ಚಾಗಿ ಮಕ್ಕಳನ್ನು ಕಾಡುವ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳನ್ನು ತುಂಬಾ ಬೆಚ್ಚಗೆ ಇಡಬೇಕಾಗುತ್ತದೆ. ನೀರಿನಲ್ಲಿ ಹೆಚ್ಚು ಸಮಯ ಆಡಲು ಬಿಡಬಾರದು. ಮಕ್ಕಳಿಗೆ ಬಿಸಿ ನೀರು ಕುಡಿಸಬೇಕು. ಆಟವಾಡಿದ ಮೇಲೆ ಮಕ್ಕಳ ಕೈ, ಕಾಲುಗಳನ್ನು ನೀರಿನಿಂದ ತೊಳೆಯಬೇಕು. ಇದರಿಂದ ರೋಗಕಾರಕ ಕೀಟಾಣುಗಳು (viral infection) ಹರಡುವುದನ್ನು ತಡೆಯಬಹುದು.

    * ಉಸಿರಾಟ ಸಮಸ್ಯೆ:
    – ಚಳಿಗಾಲದ ವೇಳೆ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಹೆಚ್ಚು ಚಳಿ ಇದ್ದಾಗ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗುವುದನ್ನು ಕಡಿಮೆ ಮಾಡಬೇಕು. ಔಟಿಂಗ್ ಹೋಗಲೇಬೇಕಿದ್ದರೆ ಬೆಚ್ಚನೆಯ ಸ್ವೆಟರ್, ಸ್ಕಾರ್ಫ್, ಟೋಪಿ ಧರಿಸಿ ಕರೆದುಕೊಂಡು ಹೋಗಿ.

    * ಡ್ರೈ ಸ್ಕಿನ್:
    – ಮಕ್ಕಳು ಬೆಣ್ಣೆಯಂತಹ ಚರ್ಮ ಹೊಂದಿದ್ದರೆ ಎತ್ತಿಕೊಂಡು ಮುದ್ದಾಡಲು ಚೆಂದ. ಆದರೆ ರ‌್ಯಾಶಸ್, ಒರಟು ಚರ್ಮದಿಂದ ಇರಿಸುಮುರಿಸಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಪ್ಪಿಸಬೇಕು. ಮಕ್ಕಳಿಗೆ ಸ್ನಾನ ಮಾಡಿಸಿದ ನಂತರ ಲೋಷನ್, ಕ್ರೀಮ್ ಹಚ್ಚುವುದು. ಸ್ನಾನದ ಬಳಿಕ ಚರ್ಮದ ರಂಧ್ರಗಳು ಓಪನ್ ಆಗಿರುತ್ತವೆ. ಈ ವೇಳೆ ಲೋಷನ್ ಹಚ್ಚಿದರೆ ಚರ್ಮದ ಆಳಕ್ಕೆ ಇಳಿದು ದೀರ್ಘ ಕಾಲ ತೇವಾಂಶವನ್ನು ಕಾಪಾಡುತ್ತದೆ.

    * ಜ್ವರ, ನೆಗಡಿ, ಕೆಮ್ಮು ಬಾಧಿತರಿಂದ ದೂರ ಇರಿಸಿ:
    – ಇದು ದೊಡ್ಡ ಕಾಯಿಲೆ ಏನಲ್ಲ. ಆದರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುತ್ತದೆ. ಮಕ್ಕಳು ಹೆಚ್ಚಾಗಿ ಸೆನ್ಸಿಟೀವ್ ಆಗಿರುತ್ತಾರೆ. ಇದರಿಂದ ಬಹುಬೇಗನೇ ರೋಗಾಣುಗಳು ದೇಹ ಸೇರಬಹುದು. ಬಳಿಕ ಜ್ವರ, ನೆಗಡಿ, ಕೆಮ್ಮು, ಇತರೆ ಅಲರ್ಜಿಗಳಾಗಿ ಯಾತನೆ ಅನುಭವಿಸಬೇಕಾಗುತ್ತದೆ. ಇದಕ್ಕಾಗಿ ಜ್ವರ, ಕೆಮ್ಮು ಬಂದವರಿಂದ ಆದಷ್ಟು ಮಕ್ಕಳನ್ನು ದೂರ ಇರಿಸಿ. ದೂರ ಇರುವಂತೆ ಸೂಚಿಸಿ. ಮನೆಯವರಾಗಲಿ, ಅಕ್ಕಪಕ್ಕದವರಾಗಲಿ ಯಾರೇ ಆಗಲಿ ನಮ್ಮ ಮಕ್ಕಳ ಆರೋಗ್ಯ ಮುಖ್ಯ.

    * ಹಣ್ಣು ತರಕಾರಿಗಳ ಸೇವನೆ:
    – ನಿಮ್ಮ ಮಕ್ಕಳಿಗೆ ವಿಟಮಿನ್‍ಯುಕ್ತ, ಪ್ರೊಟೀನ್‍ಯುಕ್ತ ಆಹಾರವನ್ನು ತಿನ್ನಿಸಿ. ಮನೆಯಲ್ಲೇ ತಯಾರಿಸಿದ ಆಹಾರವನ್ನು ಬಿಸಿ ಇರುವಾಗಲೇ ಸೇವಿಸುವಂತೆ ಬಲವಂತ ಮಾಡಿ. ಇದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯಕವಾಗುತ್ತದೆ.

    * ಪ್ರತ್ಯೇಕ ಬಾಟಲ್, ಹ್ಯಾಂಡ್ ಟವಲ್:
    – ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾದ ನೀರಿನ ಬಾಟಲ್, ಹ್ಯಾಂಡ್ ಟವಲ್ ಅನ್ನು ಕೊಟ್ಟು ಕಳಿಸಿ. ಇದರಿಂದ ಶಾಲೆಯಲ್ಲಿ ಮಕ್ಕಳೊಂದಿಗೆ ಆಡುವ ಮೂಲಕ ಹರಡಬಹುದಾದ ವೈರಲ್ ಸೋಂಕುಗಳನ್ನು ತಡೆಯಬಹುದು. ಮನೆಗೆ ಬಂದ ಬಳಿಕ ಬಾಟಲಿ ಮತ್ತು ಹ್ಯಾಂಡ್ ಟವಲ್ ಅನ್ನು ಡೆಟಲ್ ಹಾಕಿ ಬಿಸಿ ನೀರಿನಿಂದ ತೊಳೆದಿಡಿ.

    ಕೆಲವೊಂದು ಸಿಂಪಲ್ ಟಿಪ್ಸ್
    * ಕೈ ತೊಳೆಯಲು ಹ್ಯಾಂಡ್ ವಾಷಿಂಗ್ ಲಿಕ್ವಿಡ್ ಬಳಸಿ.
    * ಹೊರಗಿಂದ ಬಂದ ತಕ್ಷಣ ಕೈ, ಕಾಲು, ಮುಖ ತೊಳೆಯುವುದು.
    * ಕೈ ಬೆರಳುಗಳ ಮಧ್ಯೆ, ಉಗುರುಗಳ ಮಧ್ಯೆ ಚೆನ್ನಾಗಿ ತೊಳೆಯುವುದು.
    * ಮನೆಯಿಂದ ಹೊರ ಹೋಗುವಾಗ ಬೆಚ್ಚನೆಯ ಉಡುಪು ಧರಿಸುವುದು.
    * ಕಸ ಹಾಕಿ ಬಂದ ಬಳಿಕ, ಪ್ರಾಣಿಗಳನ್ನು ಮುಟ್ಟಿದ ನಂತ್ರ, ಟಾಯ್ಲೆಟ್‍ಗೆ ಹೋಗಿಬಂದ ಮೇಲೆ, ಮಕ್ಕಳಿಗೆ ಡೈಪರ್ ಚೇಂಜ್ ಮಾಡಿದ ನಂತ್ರ ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳುವುದು.


    * ಸೀನುವಾಗ, ಕೆಮ್ಮುವಾಗ ಬಾಯಿಗೆ ಅಡ್ಡಲಾಗಿ ಬಟ್ಟೆ ಬಳಸುವುದು.
    * ಮನೆಯಲ್ಲಿ, ಮತ್ತೆ ಹೊರ ಹೋಗುವಾಗ ಪ್ರತ್ಯೇಕ ನೀರಿನ ಬಾಟಲ್, ಹ್ಯಾಂಡ್ ಟವಲ್ ಬಳಸುವುದು.
    * ರಾತ್ರಿ ವೇಳೆ ಮಕ್ಕಳನ್ನು ಬೆಚ್ಚಗಿಡುವುದು.
    * ಮಲಗುವಾಗ ಮಕ್ಕಳ ಕೈ, ಕಾಲುಗಳಿಗೆ ಕ್ರೀಮ್ ಹಚ್ಚುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಚುಮು ಚುಮು ಚಳಿಗೆ ಡ್ರೈ ಸ್ಕಿನ್ ಸಮಸ್ಯೆನಾ? – ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ.

    ಕೈ, ಕಾಲಿನ ತೇವಾಂಶ ಕಡಿಮೆಯಾಗಿ ಒರಟು ಒರಟಾಗಿ ಕಾಣೋದು. ಕೂದಲು ಒಣಗಿದಂತೆ ಅನ್ನಿಸುವುದು, ತುಟಿ ಒಡೆಯುವುದು ಸರ್ವೆ ಸಾಮಾನ್ಯ. ಇದಕ್ಕಾಗಿ ಚರ್ಮದ ಆರೈಕೆ ಮಾಡಲೇಬೇಕು. ಇನ್ನು ಬೆಳಗ್ಗೆ ಬೇಗನೇ ಎದ್ದು ಕೆಲಸಕ್ಕೆ ಹೋಗುವವರನ್ನು ಹೆಚ್ಚಾಗಿ ಈ ಡ್ರೈ ಸ್ಕಿನ್ ಸಮಸ್ಯೆ ಬಾಧಿಸುತ್ತದೆ. ಡ್ರೈ ಸ್ಕಿನ್ ಸಮಸ್ಯೆಯಿಂದ ಮುಕ್ತಿ ಹೊಂದಲು ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್, ಕೋಲ್ಡ್ ಕ್ರೀಮ್, ಲೋಷನ್, ಸೋಪ್‍ಗಳು ಲಗ್ಗೆ ಇಟ್ಟಿವೆ. ಅವೆಲ್ಲಾವನ್ನು ಒಮ್ಮೆ ಟ್ರೈ ಮಾಡಿ ಎಫೆಕ್ಟ್ ಕಾಣದಾದರೆ ಅದಕ್ಕೂ ಬೇಸರ. ಈಗ ಆ ಬೇಸರ ಬೇಡ, ನಾವು ಕೊಡೋ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಈ ವಿಂಟರ್ ಅನ್ನು ಎಂಜಾಯ್ ಮಾಡಿ.

    ಸುಲಭ ವಿಧಾನಗಳು:
    * ಅರಿಶಿಣ ಪುಡಿ ಮತ್ತು ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ, ಕೈ-ಕಾಲಿಗೆ ಹಚ್ಚಿಕೊಂಡು ತಣ್ಣೀರಿನಲ್ಲಿ ತೊಳೆಯಿರಿ. ಇದು ನಿಮ್ಮ ಚರ್ಮ ಸೌಂದರ್ಯವನ್ನು ಮರಳಿಸುತ್ತದೆ.
    * ಎಣ್ಣೆ ಚರ್ಮದವರು ಕಡಲೆಹಿಟ್ಟು ಮತ್ತು ರೋಸ್ ವಾಟರ್ ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿ. ನಾಲ್ಕೈದು ನಿಮಿಷಗಳ ಬಳಿಕ ಮುಖ ತೊಳೆಯಿರಿ. ಇದರಿಂದ ಚರ್ಮ ಸಡಿಲಗೊಂಡು ಕಾಂತಿಯುಕ್ತವಾಗುತ್ತದೆ.
    * ಹಾಲಿನ ಕೆನೆಗೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ಮುಖ, ಕೈ ಕಾಲಿಗೆ ಹಚ್ಚಿಕೊಂಡು ಬಳಿಕ ಸ್ವಲ್ಪ ಹೊತ್ತಿನ ಬಳಿಕ ಮುಖ ತೊಳೆಯಿರಿ. ಹೀಗೆ ಮಾಡುವದರಿಂದ ಚರ್ಮ ಒಣಗಿದಂತೆ ಕಾಣಲ್ಲ.
    * ಚರ್ಮದ ಬಳಿಕ ತುಟಿಗಳು ಈ ಕಾಲದಲ್ಲಿ ಹೆಚ್ಚಾಗಿ ಒಡೆಯುವುದು ಒರಟಾಗುವುದು ಕಾಮನ್. ಅದಕ್ಕೆ ಯಾವಾಗಲೂ ಲಿಪ್ ಬಾಮ್ ಇಟ್ಟುಕೊಂಡಿರಿ. ರಾತ್ರಿ ವೇಳೆ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಆಲಿವ್ ಆಯಿಲ್ ಇರಲ್ಲಿ ಯಾವುದು ನಿಮಗೆ ಉಪಯುಕ್ತವೂ ಅದನ್ನು ತುಟಿಗೆ ಹಚ್ಚಿ ಮಲಗಿ. ಇದು ಯಾವುದು ಬೇಡ ಅನ್ನುವರು ಹಾಲಿನ ಕೆನೆಯನ್ನು ಸಹ ಬಳಸಬಹುದು.

    * ಚಳಿಗಾಲದಲ್ಲಿ ಸ್ನಾನಕ್ಕೆ ಆದಷ್ಟು ಕಡಲೆಹಿಟ್ಟು ಬಳಸಿದರೆ ಉತ್ತಮ. ಸೋಪ್ ಬಳಕೆ ಕಡಿಮೆ ಮಾಡಿ.
    * ಚಳಿಗಾಲದಲ್ಲಿ ಪಾದದ ಬಿರುಕು ಸರ್ವೇ ಸಾಮಾನ್ಯ. ರಾತ್ರಿ ಮಲಗುವಾಗ, ಹೊರಗೆ ಹೋಗುವಾಗ ಕಾಲಿಗೆ ಸಾಕ್ಸ್ ಧರಿಸಿ ಹೆಚ್ಚಿನ ಬಿರುಕು ಇದ್ದರೆ ಕ್ರ್ಯಾಕ್ ಹೀಲ್ ಹಚ್ಚಿಕೊಂಡು ಮಲಗಿ.
    * ಹೆಚ್ಚು ಚಳಿ ಕೂದಲ ಸಮಸ್ಯೆ ಫಿಕ್ಸ್. ಇದಕ್ಕಾಗಿ ಅಟ್ ಲೀಸ್ಟ್ ವಾರಕ್ಕೊಮ್ಮೆಯಾದರೂ ತಲೆಗೆ ತುಸು ಬಿಸಿ ಇರುವ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆ ಮಸಾಜ್ ಮಾಡಿ ಸ್ನಾನ ಮಾಡಿದ್ರೆ ಗುಡ್. ಹೀಗೆ ಮಾಡುವದರಿಂದ ಸ್ಟ್ರೆಸ್ (ಮಾನಸಿಕ ಅಥವಾ ಕೆಲಸದ ಒತ್ತಡ) ಕಡಿಮೆ ಆಗುತ್ತದೆ.

    * ಬೆಳಗಿನ ಜಾವ ಅಥವಾ ಸಂಜೆ ಚಳಿಗಾಲದಲ್ಲಿ ಹೊರಗೆ ಹೋಗಲು ಅಬ್ಬಾ ಚಳಿ ಅಂತ ಮನೆಯಲ್ಲಿರುವ ಕೆಲವರು ಇಷ್ಟಪಡುತ್ತಾರೆ. ಹೊರಗೆ ಹೋಗುವಂತಿದ್ದರೆ ತುಂಬು (ಉದ್ದ) ತೋಳಿನ ಬಟ್ಟೆ ಧರಿಸಿ. ನಿಮ್ಮ ಪರಿಸರದಲ್ಲಿ ತಣ್ಣನೆಯ ಗಾಳಿಯಿದ್ದರೆ ಕಿವಿಗೆ ಹತ್ತಿ ಇಟ್ಟುಕೊಳ್ಳಿ. ಕೆಲಸದ ನಿಮಿತ್ತ ಹೊರ ಹೋದಾಗ ಹಿಂದಿರುಗುವ ಸಮಯ ಬದಲಾಗಬಹುದು. ಹಾಗಾಗಿ ಮುಂಜಾಗ್ರತೆಗಾಗಿ ಅಥವಾ ಪ್ರಯಾಣ ಮಾಡುವಾಗ ಸ್ವೆಟರ್, ಸಾಕ್ಸ್, ಸ್ಕಾರ್ಫ್ ಜೊತೆ ಇಟ್ಟುಕೊಳ್ಳುವುದು ಉತ್ತಮ.

    ಈ ಮನೆಮದ್ದುಗಳನ್ನೆಲ್ಲಾ ಯಾರು ಟ್ರೈ ಮಾಡೋರು. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಕಾಸ್ಮೆಟಿಕ್, ಕೋಲ್ಡ್ ಕ್ರೀಮ್, ಲೋಷನ್ ಬಂದಿದೆ ಎಂದು ಅಂಗಡಿಗಳಿಗೆ ಲಗ್ಗೆ ಇಡುವ ಮುನ್ನ ಎಚ್ಚರ. ನಿಮ್ಮ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಹೆಚ್ಚಾಗಿ ಇರುತ್ತಾರೆ. ಹಾಗಾಗಿ ಬ್ರ್ಯಾಂಡೆಡ್, ಹೆಸರುವಾಸಿ ಆಗಿರುವ ಉತ್ಪನ್ನ(ಪ್ರಾಡಕ್ಟ್)ಗಳನ್ನೇ ಖರೀದಿಸಿ. ಕಡಿಮೆ ಬೆಲೆಗೆ ಸಿಕ್ತು ಎಂದು ಯಾವುದೋ ಪ್ರಾಡಕ್ಟ್ ಖರೀದಿಸಿ ಬಳಸಿದರೆ ಮುಂದೆ ಹೆಚ್ಚಿನ ದಂಡ ತೆರಬೇಕಾದಿತು ಎಚ್ಚರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ಯದಲ್ಲಿ ಇನ್ನೆರಡು ದಿನ ಮಳೆ

    ರಾಜ್ಯದಲ್ಲಿ ಇನ್ನೆರಡು ದಿನ ಮಳೆ

    ಬೆಂಗಳೂರು: ರಾಜ್ಯದ ಜನರು ಇನ್ನೊಂದೆರಡು ದಿನ ಕೈಲಿ ಛತ್ರಿ ಹಿಡ್ಕೊಂಡು ಓಡಾಡೋದೇ ಒಳ್ಳೆಯದು. ಯಾಕಂದ್ರೆ ಇನ್ನೂ ಎರಡು ದಿನ ಮಳೆಯಬ್ಬರ ಜೋರಾಗಿರಲಿದೆ. ಶುಕ್ರವಾರ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಸಿಲಿಕಾನ್ ಸಿಟಿ ಫುಲ್ ಚಿಲ್ಡ್ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಯಾವಾಗ ಮಳೆ ಬರುತ್ತೆ ಅನ್ನೋದೆ ಗೊತ್ತಾಗುತ್ತಿಲ್ಲ.

    ಈಗಾಗಲೇ ಕಳೆದೆರೆಡು ದಿನಗಳಿಂದ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದ್ದು, ಮಲೆನಾಡಿನಂತೆ ಮೆಟ್ರೋ ನಗರಿ ಫುಲ್ ಕೂಲ್ ಕೂಲ್ ಆಗಿದೆ. ಇದರಿಂದ ಬಿಸಿಲಿನಿಂದ ಬೆಂದಿದ್ದ ಬೆಂಗಳೂರಿಗರು ಫುಲ್ ಖುಷಿಯಾಗಿದ್ದಾರೆ. ಈ ವಾತಾವರಣದಿಂದ ಕೆಮ್ಮು, ನೆಗಡಿ, ಗಂಟಲು ನೋವು ಮತ್ತಿತರ ರೋಗಗಳು ಹೆಚ್ಚಾಗಿ ಮಕ್ಕಳು ಹಾಗೂ ವೃದ್ಧರನ್ನು ಆವರಿಸುತ್ತವೆ. ಆದಷ್ಟು ಬೆಚ್ಚಗಿನ ವಾತಾವರಣ ಇದ್ರೇ ಯಾವುದೇ ಸಮಸ್ಯೆಯಾಗಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

    ಬೆಂಗಳೂರಷ್ಟೇ ಅಲ್ಲ ಮುಂದಿನ 24 ಗಂಟೆಗಳ ಕಾಲ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಳೆಗಾಲ ಮುಗಿದು ಚಳಿಗಾಲ ಬಂದಿದೆ. ಮಳೆ ಬರಲ್ಲ ಎಂದುಕೊಂಡು ಹೋದ್ರೊ ನೆನೆದು ಅನಾರೋಗ್ಯಕ್ಕೆ ತುತ್ತಾಗೋದು ಮಾತ್ರ ಗ್ಯಾರೆಂಟಿ. ಹಾಗಾಗಿ ಮನೆಯಿಂದ ಹೊರಗೆ ಬರೋ ಮುನ್ನ ನೆನಪು ಮಾಡಿಕೊಂಡು ಛತ್ರಿ ತಗೆದುಕೊಂಡು ಹೋಗೋದು ಓಳ್ಳೆಯದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

    ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಹೀಗೆ ಕಾಪಾಡಿಕೊಳ್ಳಿ

    ಳಿಗಾಲದಲ್ಲಿ ತ್ವಚೆ ಒಣಗುವುದು, ಹಿಮ್ಮಡಿಗಳು ಬಿರುಕು ಬಿಡುವುದು, ಮುಖದಲ್ಲಿ ಕಾಂತಿ ಕಡಿಮೆಯಾಗುವುದು, ಆರೋಗ್ಯದಲ್ಲಿ ಏರುಪೇರಾಗುವುದು ಈ ಎಲ್ಲಾ ಸಮಸ್ಯೆಗಳು ಸಹಜವಾಗಿ ಬಹುತೇಕ ಜನರು ಎದುರಿಸುತ್ತಾರೆ. ನಿಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ಈ ಸುಲಭ ಕ್ರಮಗಳನ್ನ ಅನುಸರಿಸಿದರೆ ಚಳಿಗಾಲದ ಸಮಸ್ಯೆಯಿಂದ ದೂರ ಆಗಬಹುದು.

    1. ಚಳಿಯಿಂದ ರಕ್ಷಣೆ:
    ನಿಮ್ಮನ್ನು ಚಳಿಯಿಂದ ರಕ್ಷಿಸಿಕೊಳ್ಳಲು ಆದಷ್ಟು ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನ ಧರಿಸಿರಿ. ಸಾಧ್ಯವಾದಷ್ಟು ಬಿಸಿಲಿನಿಂದ ದೂರವಿರಿ. ಹೊರಗಡೆ ಹೋಗುವಾಗ ನಿಮ್ಮ ಜೊತೆ ಒಂದು ಸನ್ ಗ್ಲಾಸ್ ಮತ್ತು ಮಾಯಿಶ್ಚರೈಜರ್ ಕ್ರೀಂ ಇಟ್ಟುಕೊಳ್ಳಿ.

    2. ನೀರನ್ನ ಹೆಚ್ಚು ಕುಡಿಯಿರಿ:
    ಚಳಿಗಾಲದಲ್ಲಿ ದೇಹದಲ್ಲಿನ ನೀರಿನಾಂಶ ಕಡಿಮೆ ಆಗುತ್ತಿರುತ್ತದೆ. ಹಾಗಾಗಿ ನೀರನ್ನು ಕುಡಿಯುತ್ತೀರಿ. ಇದರಿಂದ ನಿಮ್ಮ ಚರ್ಮದ ಕೋಮಲತೆಯನ್ನು ಕಾಪಾಡಬಹುದು.

    3. ಮುಖದ ರಕ್ಷಣೆ:
    ಚಳಿಗಾಲದಲ್ಲಿ ನಾವು ಯಾವಾಗಲು ಅತಿಯಾದ ಬಿಸಿ ನೀರನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತೇವೆ. ಆದರೆ ಇದು ನಿಮಗೆ ಗೊತ್ತಿರಲಿ, ಹೆಚ್ಚು ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಮತ್ತು ಸುಕೋಮಲತೆ ಕಡಿಮೆಯಾಗುತ್ತದೆ. ಹಾಗಾಗಿ ಉಗುರು ಬೆಚ್ಚಗಿನ ನೀರನಲ್ಲಿ ಮುಖ ತೊಳೆಯುವುದು ಉತ್ತಮ.

    4. ವಾರಕ್ಕೊಮ್ಮೆ ಎಣ್ಣೆ ಸ್ನಾನ:
    ಎಣ್ಣೆ ಸ್ನಾನ ಮಾಡುವುದರಿಂದ ನಮ್ಮ ದೇಹದ ಆಯಾಸ ಕಡಿಮೆಯಾಗಿ ಮಾಂಸ ಖಂಡಗಳು ಬಲಗೊಳ್ಳುತ್ತದೆ. ಇದಲ್ಲದೆ ಚರ್ಮದಲ್ಲಿ ಎಣ್ಣೆ ಅಂಶವನ್ನ ಹೆಚ್ಚಿಸಲಿದ್ದು, ಇದರಿಂದ ಸುಕ್ಕುಗಳು, ನೆರೆಗೆ, ಮತ್ತು ತ್ವಚೆ ಬಿರುಕು ಬಿಡುವುದರಿಂದ ರಕ್ಷಿಸುತ್ತದೆ.

    5. ನಿಮ್ಮ ಕಾಲುಗಳಿಗೆ ಕಾಳಜಿ ನೀಡಿ:
    ಚಳಿಗಾಲದಲ್ಲಿ ಕೈ-ಕಾಲುಗಳನ್ನ ಆದಷ್ಟು ಮಾಯಿಶ್ಚರಾಜರ್ ಹಾಕಿ. ಮನೆಯಲ್ಲಿದ್ದಾಗ ಕಾಲುಗಳಿಗೆ ಸಾಕ್ಸ್ ಹಾಕಿ ಬೆಚ್ಚನೆ ಇರಿಸಿ. ಒಡೆದ ಹಿಮ್ಮಡಿಗಳಿಗೆ ವ್ಯಾಸ್ಲೀನ್ ಜೆಲ್ ಹಚ್ಚಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಳಿಗಾಲದ ಕಾಮನ್ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ 5 ಟಿಪ್ಸ್

    ಚಳಿಗಾಲದ ಕಾಮನ್ ಸಮಸ್ಯೆಗಳ ಪರಿಹಾರಕ್ಕೆ ಇಲ್ಲಿದೆ 5 ಟಿಪ್ಸ್

    ಳಿಗಾಲ ಬಂತೆದ್ರೆ ಡ್ರೈ ಸ್ಕಿನ್ ಸಮಸ್ಯೆ ಇದ್ದಿದ್ದೇ. ಮುಖ, ಕೈ-ಕಾಲಿನ ತೇವಾಂಶ ಕಡಿಮೆಯಾಗೋದಲ್ಲದೆ ಕಪ್ಪಾಗಿ ಕಾಣುತ್ತದೆ. ಕೂದಲು ಒಣಗಿದಂತಾಗಿ ಹುಲ್ಲಿನಂತೆ ಕಾಣುತ್ತೆ. ಇನ್ನು ಪಾದದ ಬಿರಕುನ ಸಮಸ್ಯೆ ಹೇಳೊದೇ ಬೇಡ. ಈಗಾಗಲೇ ಚಳಿಗಾಲ ಶುರುವಾಗಿರೋದ್ರಿಂದ ಇನ್ನೂ ಮೂರ್ನಾಲ್ಕು ತಿಂಗಳು ಈ ಎಲ್ಲಾ ಸಮಸ್ಯೆಗಳು ಕಾಮನ್. ಇದರಿಂದ ಸ್ವಲ್ಪ ರಿಲೀಫ್ ಪಡೆಯೋಕೆ ಈ ಟಿಪ್ಟ್ ಟ್ರೈ ಮಾಡಿ.

    1. ತುಟಿಗೆ ಇರಲಿ ಆರೈಕೆ
    ಚಳಿಗಾಲದಲ್ಲಿ ಮೊದಲು ಎದುರಾಗೋ ಸಮಸ್ಯೆಯೇ ತುಟಿ ಒಡೆಯುವುದು, ಅಥವಾ ಕಪ್ಪಾಗುವುದು. ಪ್ರತಿನಿತ್ಯ ಲಿಪ್ ಬಾಮ್ ಹಚ್ಚಿದ್ರೂ ಚಳಿಗಾಲದಲ್ಲಿ ಹೆಚ್ಚಿನ ಕೇರ್ ಮಾಡಿಕೊಳ್ಳಬೇಕಾಗುತ್ತೆ. ಹೀಗಾಗಿ ಯಾವಾಗ್ಲೂ ಲಿಪ್ ಬಾಮ್ ಜೊತೆಯಲ್ಲಿರಲಿ. ರಾತ್ರಿ ಮಲಗುವಾಗ ಮರೆಯದೇ ಲಿಪ್ ಬಾಮ್ ಅಥವಾ ವ್ಯಾಸಲೀನ್ ಹಚ್ಚಿ ಮಲಗಿ. ತುಟಿ ತುಂಬಾ ಒಡೆದಿದ್ದು, ಕಪ್ಪಾಗಿದ್ದರೆ ಗ್ಲಿಸರಿನ್ ಅಥವಾ ಬದಾಮಿ ಎಣ್ಣೆ/ ಆಲೀವ್ ಎಣ್ಣೆ ಹಚ್ಚಿ ಮಲಗಿ. ಮೂರು ದಿನಗಳಿಗೊಮ್ಮೆ ಸ್ಕ್ರಬ್ ಮಾಡಿ. ವ್ಯಾಸಲೀನ್‍ಗೆ ಸ್ವಲ್ಪ ಸಕ್ಕರೆ ಬೆರೆಸಿ ತುಟಿಯ ಮೇಲೆ ನಿಧಾನವಾಗಿ ಉಜ್ಜಿ ಸ್ಕ್ರಬ್ ಮಾಡಬಹುದು.

    2. ಸ್ನಾನಕ್ಕೆ ಸೋಪ್ ಬಳಸಬೇಡಿ
    ಚಳಿಗಾಲದಲ್ಲಿ ಸೋಪ್ ಬಳಸಿ ಸ್ನಾನ ಮಾಡಿದ್ರೆ ಚರ್ಮ ಮತ್ತಷ್ಟು ಡ್ರೈ ಆಗುತ್ತದೆ. ಜೊತೆಗೆ ಸ್ನಾನ ಮಾಡಿ ಹೊರಬಂದ ನಂತರ ಮೈ ಮೇಲೆ ಬಿಳಿ ಪದರದಂತೆ ಕಾಣುತ್ತದೆ ಅಥವಾ ಚರ್ಮದಲ್ಲಿ ಹುರುಕಿ ಬಿಟ್ಟಂತೆ ಕಾಣುತ್ತದೆ. ಆದ್ದರಿಂದ ಸೋಪ್ ಬಳಸೋದನ್ನ ಸಾಧ್ಯವಾದಷ್ಟು ಕಡಿಮೆ ಮಾಡಿ. ಬದಲಿಗೆ ಕಡಲೆಹಿಟ್ಟು ಬಳಸಿ ಸ್ನಾನ ಮಾಡಿ. ಇನ್ನು ಮುಖಕ್ಕಂತೂ ಸೋಪ್ ಹಚ್ಚಲೇಬೇಡಿ. ಕಡಲೆಹಿಟ್ಟು ಬಳಸಿದ್ರೆ ಉತ್ತಮ. ಸ್ನಾನವಾದ ಕೂಡಲೇ ಬಾಡಿ ಲೋಷನ್ ಬಳಸಿ. ಯಾಕಂದ್ರೆ ಬಿಸಿನೀರಿನಿಂದ ರಂಧ್ರಗಳು ತೆರೆದುಕೊಂಡಿದ್ದು, ಆಗ ಲೋಷನ್ ಹಚ್ಚಿದರೆ ಚರ್ಮದ ಮೇಲೆ ಮಾತ್ರ ಇರದೆ, ಒಳಗೆ ಹೋಗಿ ಮಾಯ್‍ಶ್ಚರೈಸ್ ಮಾಡುತ್ತದೆ.

    3. ಪಾದದ ಬಿರುಕು ಕಡಿಮೆಯಾಗಿಸಲು ಹೀಗೆ ಮಾಡಿ
    ಚಳಿಗಾಲದಲ್ಲಿ ಪಾದದಲ್ಲಿ ಬಿರುಕು ಉಂಟಾಗೋದು ಸಾಮಾನ್ಯ. ಇದಕ್ಕೆ ಮೊದಲೇ ಎಚ್ಚರಿಕೆ ವಹಿಸಿದ್ರೆ ಉತ್ತಮ. ಆದ್ದರಿಂದ ಹೊರಗಡೆ ಹೋಗುವಾಗ ಕಾಲಿಗೆ ಶೂ, ಸಾಕ್ಸ್ ಧರಿಸಿ. ಹಾಗೂ ಬಿರುಕು ಉಂಟಾಗಿದ್ದರೆ ಚಿಂತೆ ಬೇಡ. ರಾತ್ರಿ ಮಲಗುವ ಮುನ್ನ ಕಾಲನ್ನ ಬೆಚ್ಚಗಿನ ನೀರಿನಲ್ಲಿ ತೊಳೆದು, ಬಟ್ಟೆಯಿಂದ ಒರೆಸಿ, ವ್ಯಾಸಲೀನ್ ಅಥವಾ ಬಾಡಿ ಲೋಷನ್/ಫುಟ್ ಕ್ರೀಮ್ ಹೆಚ್ಚಿಕೊಳ್ಳಿ. ಪಾದದಲ್ಲಿ ಜಾಸ್ತಿ ಬಿರುಕಿದ್ದರೆ ಅದಕ್ಕೆಂದೇ ಇರುವ ಕ್ರ್ಯಾಕ್ ಹೀಲ್ ಆಯಿಂಟ್‍ಮೆಂಟ್ ಹಚ್ಚಿ. ವ್ಯಾಸಲೀನ್ ಕೂಡ ಬಳಸಬಹುದು. ಒಂದೆರಡು ನಿಮಿಷಗಳ ನಂತರ ಸಾಕ್ಸ್ ಧರಿಸಿ ನಂತರ ಮಲಗಿ. ಬೆಳಗ್ಗೆ ಎದ್ದ ನಂತರ ನಿಮ್ಮ ಕಾಲು ಸಾಫ್ಟ್ ಆಗಿರೋದನ್ನ ನೀವೇ ಗಮನಿಸಬಹುದು.

    3. ಕೋಮಲ ಕೈಗಳಿಗೆ ಇಲ್ಲಿದೆ ಸೀಕ್ರೆಟ್
    ಒಂದು ವೇಳೆ ನಿಮ್ಮ ಕೈಗಳು ತುಂಬಾ ಒಣಗಿದಂತಾಗಿದ್ದು, ಸುಕ್ಕುಗಟ್ಟಿದಂತೆ ಕಾಣುತ್ತಿದ್ದರೆ ಹೀಗೆ ಮಾಡಿ. ರಾತ್ರಿ ಮಲಗುವ ಮುನ್ನ ಕೈಗಳಿಗೆ ವ್ಯಾಸಲೀನ್ ಹಚ್ಚಿ ಒಂದು ನಿಮಿಷದ ನಂತರ ಗ್ಲವ್ಸ್ ಧರಿಸಿ ಮಲಗಿ. ಇದರ ಜೊತೆಗೆ ದಿನದ ಮಧ್ಯೆ ಕೈಗಳು ಡ್ರೈ ಆದಂತೆ ಅನ್ನಿಸಿದ್ರೆ ಹ್ಯಾಂಡ್ ಕ್ರೀಂ ಅಥವಾ ಬಾಡಿ ಲೋಷನ್ ಹಚ್ಚಿಕೊಳ್ಳಿ.

    4. ಕೂದಲು ಕಳೆಗುಂದದಿರಲಿ
    ಚಳಿಗಾಲದಲ್ಲಿ ಕೂದಲ ಸಮಸ್ಯೆಯೂ ಒಂದು. ಕೈ ಕಾಲುಗಳಂತೆ ಕೂದಲು ಸಹ ಡ್ರೈ ಆಗುತ್ತದೆ. ಹೀಗಾಗಿ ವಾರಕ್ಕೊಂದು ಬಾರಿ ಬಿಸಿ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ ಸ್ನಾನ ಮಾಡಿ. ಮೈ ತುಂಬಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ಅಭ್ಯಂಗ ಮಾಡಬಹುದು. ಇದರಿಂದ ಸ್ಟ್ರೆಸ್ ಕೂಡ ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆ/ ಆಲಿವ್ ಎಣ್ಣೆ ಅಥವಾ ಹೆರಳೆಣ್ಣೆ ನಿಮಗೆ ಯಾವುದು ಇಷ್ಟವೋ ಆ ಎಣ್ಣೆ ಬಳಸಬಹುದು. ಆದ್ರೆ ಎಣ್ಣೆಯನ್ನ ಬಿಸಿ ಮಾಡೋದು ಮರೆಯಬೇಡಿ. ಹಾಗಂತ ಹೊಗೆಯಾಡುವಂತೆ ಕಾಯಿಸಬೇಡಿ. ಸ್ವಲ್ಪ ಬೆಚ್ಚಗೆ ಮಾಡಿ ಹಚ್ಚಿದ್ರೆ ಆಯ್ತು.

    5. ಬೆಚ್ಚಗಿರಿ
    ಚಳಿಗಾಲಕ್ಕೆ ತಕ್ಕಂತೆ ನಿಮ್ಮ ಉಡುಗೆ ಇರಲಿ. ಕೊರೆಯೋ ಚಳಿಯಲ್ಲಿ ಸ್ಲೀವ್ ಲೆಸ್ ಟಾಪ್ ಹಾಕೊಂಡು ಹೋದ್ರೆ ಫ್ರೀಜ್ ಆಗ್ತೀರಾ ಅಷ್ಟೇ. ಜ್ಯಾಕೆಟ್/ ಸ್ವೆಟರ್, ಸ್ಕಾರ್ಫ್ ಯಾವಾಗ್ಲೂ ಜೊತೆಯಲ್ಲಿರಲಿ. ಬಟ್ಟೆ ತುಂಬಾ ತೆಳುವಿದ್ದರೆ ಅದಕ್ಕೆ ಹೊಂದಿಕೆಯಾಗುವಂತ ಟ್ಯಾಂಕ್ ಟಾಪ್ ಅಥವಾ ಸ್ಪೆಗೆಟ್ಟಿ ಧರಿಸಿ ಅದರ ಮೇಲೆ ಟಾಪ್ ಧರಿಸಿ. ಚಳಿಗೆ ತಲೆನೋವು ಬರುವ ಸಮಸ್ಯೆ ನಿಮಗಿದ್ದರೆ ಸಣ್ಣದಾದ ಹತ್ತಿ ಉಂಡೆಯನ್ನ ಕಿವಿಗೆ ಇಟ್ಟುಕೊಳ್ಳಿ. ಬಿಸಿ ನೀರು, ಸೂಪ್ ಕುಡಿಯಿರಿ. ಆರೋಗ್ಯದ ಬಗ್ಗೆ ಗಮನ ಇರಲಿ.

    ನಿಮ್ಮ ಬ್ಯಾಗ್‍ನಲ್ಲಿ ಈ ವಸ್ತುಗಳು ಸದಾ ಇರಲಿ: ಲಿಪ್ ಬಾಮ್, ಹ್ಯಾಂಡ್ ಕ್ರೀಂ/ ಚಿಕ್ಕದಾದ ಬಾಡಿ ಲೋಷನ್ ಬಾಟಲ್, ಸ್ಕಾರ್ಫ್, ಸ್ವೆಟರ್/ಜಾಕೆಟ್, ಅಗತ್ಯವಿದ್ದರೆ ಗ್ಲವ್ಸ್