Tag: ಚಳಿಗಾಲ

  • ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಚಳಿಗಾಲಕ್ಕೆ ಬಿಸಿ ಬಿಸಿಯಾದ ಮಟನ್ ಸೂಪ್ ಮಾಡಿ

    ಳಿಗಾಲ ಬಂತೆಂದರೆ ಸಾಕು ಮಾಂಸಾಹಾರ ಪ್ರಿಯರಿಗಂತೂ ತಮ್ಮ ನಾಲಿಗೆ ಹಸಿವನ್ನು ತಣಿಸುವ ವಿವಿಧ ಖಾದ್ಯಗಳನ್ನು ಸವಿಯಲು ನಾಲಿಗೆ ಬಯಸುತ್ತದೆ. ಚಳಿಗಾಲಕ್ಕೆ ಎಂದೇ ಹೆಸರುವಾಸಿಯಾಗಿರುವ ಕೆಲವೊಂದು ರುಚಿಕರ ಮತ್ತು ಸ್ವಾದಿಷ್ಟವಾದ ಕೆಲವು ಸೂಪ್‍ಗಳಿವೆ. ಬಿಸಿ ಬಿಸಿ, ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಮಟನ್ ಸೂಪ್ ಎಂದಾದರೂ ಸೇವಿಸಿದ್ದೀರಾ..? ಈ ಸೂಪ್‌ ಮಾಡೋ ಸರಳ ವಿಧಾನ ನಿಮಗೆ ಗೊತ್ತಾ..?

    ಬೇಕಾಗುವ ಸಾಮಗ್ರಿಗಳು:
    * ಮಟನ್- 1 ಕೆಜಿ
    * ಟೊಮೆಟೋ- 1
    * ಕರಿಬೇವಿನ ಎಲೆಗಳು- ಸ್ವಲ್ಪ
    * ಎಳ್ಳಿನ ಎಣ್ಣೆ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಆಲೂಗಡ್ಡೆ- 1
    * ಕಾಳುಮೆಣಸು- 1 ಟೀಸ್ಪೂನ್
    * ಜೀರಿಗೆ- 2 ಟೀಸ್ಪೂನ್
    * ಶುಂಠಿ ಸ್ವಲ್ಪ
    * ಬೆಳ್ಳುಳ್ಳಿ – 2
    * ಅರಿಶಿಣ ಪುಡಿ- 1 ಚಮಚ
    * ಅಡುಗೆ ಎಣ್ಣೆ- ಅರ್ಧ ಕಪ್

    ಮಾಡುವ ವಿಧಾನ:
    * ಮೊದಲಿಗೆ ಮಟನ್ ಸ್ವಚ್ಛ ಮಾಡಿಕೊಳ್ಳಬೇಕು.
    * ಟೊಮೆಟೋ, ಆಲೂಗಡ್ಡೆ, ಕಾಳುಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಅರಿಶಿಣವನ್ನು ಸೇರಿಸಿ ರುಬ್ಬಿ ಇಟ್ಟುಕೊಳ್ಳಿ.  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    * ಕುಕ್ಕರಲ್ಲಿ ಅಡುಗೆ ಎಣ್ಣೆ, ಮಟನ್ ತುಂಡುಗಳು ಹಾಗೂ ರುಬ್ಬಿದ ಮಸಾಲೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ನಂತರ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ನಂತರ ನೀರು ಮತ್ತು ಎಣ್ಣೆಯನ್ನು ಅದಕ್ಕೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಯಿಸಿಕೊಳ್ಳಬೇಕು.


    * ಮಟ್ಟನ್ ಬೇಯಿಸಿದ ನಂತರ ಎಳ್ಳಿನ ಎಣ್ಣೆ, ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ ರುಚಿಯಾದ ಮಟ್ಟನ್ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

  • ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಚುಮು ಚುಮು ಚಳಿಯಲ್ಲಿ ಚರ್ಮದ ಆರೈಕೆಗೆ ಏನು ಮಾಡಬೇಕು ಗೊತ್ತಾ?

    ಳಿಗಾಲ ಆರಂಭವಾಗಿದ್ದು, ಜೀವನ ಶೈಲಿ ಬದಲಾವಣೆ ಆಗುತ್ತಾ ಹೋಗುತ್ತೆ. ಬೀರುವಿನಲ್ಲಿದ್ದ ಉಣ್ಣೆಯ ಬಟ್ಟೆಗಳು ಹೊರ ಬರುತ್ತವೆ. ಅಬ್ಬಾ ಎಷ್ಟು ಚಳಿ ಎಂದು ದಿನಕ್ಕೆ ಒಂದೆರೆಡು ಸಾರಿ ಹೆಚ್ಚು ಚಹಾ ಕುಡಿಯುವವರು ಕಾಣಸಿಗುತ್ತಾರೆ. ಚಳಿಗಾಲ ಆರಂಭವಾಗುತ್ತಲೇ ಎಲ್ಲ ವಯೋಮಾನದವರಲ್ಲಿ ಒಣ ತ್ವಚೆ (ಡ್ರೈ ಸ್ಕಿನ್) ಸಮಸ್ಯೆ ಆರಂಭವಾಗುತ್ತದೆ. ಇಷ್ಟು ಅಲ್ಲದೇ 3 ರಿಂದ 4 ತಿಂಗಳು ಪಾದಗಳು ಬಿರುಕು ಬಿಡಲು ಆರಂಭಿಸುತ್ತವೆ. ಈ ಸಮಸ್ಯೆಗಾಗಿ ಕೆಲವು ಟಿಪ್ಸ್​ ಈ ಕೆಳಗಿನಂತೆ ನೀಡಲಾಗಿದೆ.

    ತುಟಿ ಒಡೆಯುವುದು, ಪಾದಗಳು ಬಿರುಕು ಬಿಡುವುದು, ಕೂದಲು ಉದುರುವುದು ಸರ್ವಸಾಮಾನ್ಯವಾಗಿದೆ. ಹಲವರಿಗೆ ಚಳಿಗಾಗಲದಲ್ಲಿ ಈ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಬಳಕೆ ಮಾಡಿರುತ್ತೀರ. ಆದರೆ ನೀವೆ ಮನೆಯಲ್ಲಿ ನಿಮ್ಮನ್ನು ನೀವು ಚಳಿಗಾಲದಲ್ಲಿ ಆರೈಕೆ ಮಾಡಿಕೊಳ್ಳಬಹುದಾಗಿದೆ. ಇದನ್ನೂ ಓದಿ:   ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್

    * ನೀರು, ಹೆಚ್ಚು ಹೆಚ್ಚು ಕುಡಿಯುವುದರಿಂದ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಜ್ಯೂಸ್, ಬಿಸಿ ಸೂಪ್‍ಗಳನ್ನು ಆಗಾಗ ಕುಡಿಯುತ್ತಿರಬೇಕು.
    * ಪೌಷ್ಟಿಕಾಂಶಕ್ಕಾಗಿ ಪಾಲಕ, ಕ್ಯಾರೆಟ್ ಮತ್ತು ಬೀನ್ಸ್‌ನಂತಹ ಕ್ಯಾಲೋರಿಭರಿತ ತರಕಾರಿಗಳನ್ನು ಸೇವಿಸಿ. ಪಾಲಕ್ ನಂತಹ ಹಸಿರು ತರಕಾರಿಗಳಲ್ಲಿ ನೀರಿನಂಶ ಸಮೃದ್ಧವಾಗಿವೆ. ಆದ್ದರಿಂದ, ಹೆಚ್ಚು ಹಸಿರು ತರಕಾರಿಗಳನ್ನು ತಿನ್ನುವುದು ನಿಮಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    * ಚಳಿಗಾದಲ್ಲಿ ಸ್ನಾನ ಮಾಡುವಾಗ ಸೋಪ್ ಬಳಸುವ ಬದಲಾಗಿ ಕಡಲೆ ಹಿಟ್ಟನ್ನು ಬಳಸಬಹುದಾಗಿದೆ.
    * ಅರಿಶಿಣ ಪುಡಿಯನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ ಮುಖ ಮತ್ತು ಕೈ, ಕಾಲಗಳಿಗೆ ಹಚ್ಚಿ ತಣ್ಣಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮದ ಆರೈಕೆ ಮಾಡಬಹುದಾಗಿದೆ.

    * ಹೆಚ್ಚಿನವರಲ್ಲಿ ಪಾದಗಳಲ್ಲಿ ಬಿರುಕು ಕಾಣಿಕೊಳ್ಳುತ್ತದೆ. ಹೀಗಾಗಿ ಅಂತಹವರು ರಾತ್ರಿ ಮಲಗುವಾಗ ಮತ್ತು ಹೊರಗೆ ಹೊಗುವ ವೇಳೆ ಸಾಕ್ಸ್ ಧರಿಸುವುದನ್ನು ರೂಢಿಮಾಡಿಕೊಳ್ಳುವುದು ಉತ್ತಮವಾಗಿದೆ.
    * ಎಣ್ಣೆ ಚರ್ಮವನ್ನು ಹೊಂದಿದವರು ರೋಸ್ ವಾಟರ್, ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಹಚ್ಚುವುದರಿಂದ ಚರ್ಮ ಕಾಂತಿಯುಕ್ತವಾಗುತ್ತದೆ.

    * ತುಟಿ ಒಡೆಯುವುದು, ಒರಟಾಗುವಂತಿದ್ದರೆ ನೀವು ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ, ಹಾಲಿನಕೆನೆಯನ್ನು ಹಚ್ಚಿ ಮಲಗುವ ಅಭ್ಯಾಸವನ್ನು ಚಳಿಗಾಲದಲ್ಲಿ ಮಾಡಿಕೊಳ್ಳಬೇಕು.
    * ಕೂದಲು ಉದುರುವ ಸಮಸ್ಯೆ ಚಳಿಗಾಗಲದಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ನೀವು ಕೊಬ್ಬರಿ ಎಣ್ಣೆ, ಹರಳೆಣ್ಣೆಯನ್ನು ತುಸು ಬಿಸಿಮಾಡಿಕೊಂಡು ಹಚ್ಚುವುದು ಒಳ್ಳೆಯದಾಗಿದೆ.

    * ಉಣ್ಣೆಯ ಬಟ್ಟೆಯನ್ನು ಧರಿಸುವುದು, ಕಿವಿಗೆ ಹತ್ತಿಯನ್ನು ಇಟ್ಟುಕೊಳ್ಳುವುದರಿಂದ ಚಳಿಯಿಂದ ದೇಹವನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.
    * ಸ್ವೆಟರ್, ಸ್ಕಾರ್ಪ್, ಸಾಕ್ಸ್ ಚಳಿಗಾಲದಲ್ಲಿ ಬಳಕೆ ಮಾಡುವುದು ಉತ್ತಮವಾಗಿದೆ.


    * ಚಳಿಗಾಲದಲ್ಲಿ ತೈಲ ಆಧಾರಿತ ಮಾಯಿಶ್ಚರೈಸ್‍ಗಳಾದ ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಮತ್ತು ಆಲಿವ್ ಎಣ್ಣೆಯಂತಹ ನೈಸರ್ಗಿಕ ತೈಲಗಳು ನಿಮ್ಮ ಚರ್ಮವನ್ನು ತೇವಗೊಳಿಸಲು ಉತ್ತಮ ಮಾರ್ಗವಾಗಿದೆ.

  • ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    – ಗೂಡು ಕಟ್ಟುವ ರೊಮ್ಯಾಂಟಿಕ್ ಕಥನ ಇಲ್ಲಿದೆ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಈಗ ಎಲ್ಲಿ ನೋಡಿದರು ಬಣ್ಣ ಬಣ್ಣ. ಹಸಿರು ಮೈಹೊದ್ದುಕೊಂಡ ದೃಶ್ಯ ಮಳೆಗಾಲದಲ್ಲೂ ಕೂಡ ಅಪರೂಪ. ಆದರೆ ನಗರದ ಐತಿಹಾಸಿಕ ಎರಡು ಸುತ್ತಿನ ಕೋಟೆ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಹಕ್ಕಿಗಳ ಕಲರವ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯ ಕೆರೆಗಳಿಗೆ ಬೇಸಿಗೆಯಲ್ಲಿ ವಲಸೆ ಹಕ್ಕಿಗಳು ಸಾಮಾನ್ಯವಾಗಿ ಬರುತ್ತವೆ. ಆದರೆ ಈ ಬಾರಿ ಚಳಿಗಾಲದಲ್ಲಿ ಸ್ಥಳೀಯ ಹಕ್ಕಿಗಳ ಕಲರವವೇ ಜೋರಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಕೋಟೆಯ ಕಂದಕ ಪ್ರದೇಶದಲ್ಲಿ ಗೀಜಗ ಹಕ್ಕಿಗಳು ಗೂಡಗಳನ್ನು ಕಟ್ಟಿ ಚಿಲಿಪಿಲಿಗುಟ್ಟುತ್ತಿವೆ.

    ಕಂದಕದ ತುಂಬಾ ಚರಂಡಿ ನೀರು ಹರಿಯುತ್ತಿದ್ದರೂ ಹಕ್ಕಿಗಳಿಗೆ ಅದೇ ಆಸರೆಯಾಗಿದೆ. ಹಳದಿ ಬಣ್ಣದ ತಳಿಯ ಗೀಜಗ, ನೇಕಾರ ಹಕ್ಕಿ, ಬಯಾ ಹಕ್ಕಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಗಂಡುಹಕ್ಕಿಗಳು ಗೂಡುಗಳನ್ನು ಕಟ್ಟಲು ಆರಂಭಿಸುತ್ತವೆ. ನೀರು ಹತ್ತಿರ ಇರಬೇಕು, ಸಾಕಷ್ಟು ಆಹಾರ ಸಿಗುತ್ತಿರಬೇಕು, ಇತರ ಪಕ್ಷಿ ಪ್ರಾಣಿಗಳಿಂದ ಅಪಾಯ ಇರಬಾರದು ಅಂತಹ ಸ್ಥಳ ಹುಡುಕಿ ಗೂಡು ಕಟ್ಟುವುದು ಗಿಜಗಹಕ್ಕಿಯ ಜಾಣತನ. ಹತ್ತಿ, ತೆಂಗಿನ ನಾರು, ಈಚಲು ನಾರು, ಭತ್ತದ ಹುಲ್ಲು ನಾರಿನಿಂದ ಗೂಡು ಕಟ್ಟುತ್ತವೆ. ಗಿಡದ ರೆಂಬೆ ಕೊಂಬೆಗಳ ತುದಿಯಲ್ಲಿ, ನೀರಿನ ಕಡೆ ಭಾಗಿದ ಕಡೆಗಳಲ್ಲಿ ಗೂಡುಗಳನ್ನ ಕಟ್ಟುತ್ತವೆ. ಶಂಕಾಕಾರದಲ್ಲಿ ಗೂಡು ಕಟ್ಟಿ ತುದಿಯಲ್ಲಿ ಬಾಲದ ರೀತಿಯಲ್ಲಿ ಗೂಡು ಹೆಣೆದಿರುತ್ತವೆ. ಬೇರೆ ಪಕ್ಷಿಗಳು ಗೂಡು ಪ್ರವೇಶಿಸುವುದನ್ನು ತಡೆಯಲು ಈ ರೀತಿ ಮಾಡಿರುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಸಂತಾನೋತ್ಪತ್ತಿ ಬಳಿಕ ಗೂಡು ಖಾಲಿ ಮಾಡುತ್ತವೆ ಆದರೆ ಈ ಬಾರಿ ಹಕ್ಕಿಗಳ ಕಲರವ ಮುಂದುವರಿದಿದೆ.

    ಗೀಜಗ ಪಕ್ಷಿಗಳು ಗೂಡು ಕಟ್ಟುವುದು ಒಂದು ರೊಮ್ಯಾಂಟಿಕ್ ಕಥನ ಎಂದು ಪಕ್ಷಿ ಪ್ರೇಮಿ, ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕ ಪ್ರೋ.ಶಾನು ಕುಮಾರ್ ಹೇಳಿದ್ದಾರೆ. ಗಂಡು ಹಕ್ಕಿ ಅರ್ಧದಷ್ಟು ಗೂಡುಕಟ್ಟಿ ಹೆಣ್ಣು ಹಕ್ಕಿಗಾಗಿ ಕಾಯುತ್ತಿರುತ್ತವಂತೆ. ಹೆಣ್ಣು ಹಕ್ಕಿ ಗೂಡನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟರೆ ಗೂಡು ಕಟ್ಟುವುದನ್ನ ಗಂಡು ಹಕ್ಕಿ ಮುಂದುವರಿತ್ತದೆ. ಇಲ್ಲದಿದ್ದರೆ ಗಂಡು ಹಕ್ಕಿ ಗೂಡುಕಟ್ಟಲು ಮತ್ತೊಂದು ಸ್ಥಳವನ್ನ ಹುಡುಕುತ್ತದೆ. ಇನ್ನೂ ಕೆಲ ಗಂಡು ಹಕ್ಕಿ ಮೂರ್ನಾಲ್ಕು ಗೂಡುಗಳನ್ನು ಅರ್ಧಕ್ಕೆ ಹೆಣೆದಿರುತ್ತವೆ, ಹೆಣ್ಣು ಹಕ್ಕಿ ಆಯ್ಕೆಮಾಡುವ ಗೂಡನ್ನು ಒಟ್ಟಾಗಿ ಪೂರ್ಣ ಕಟ್ಟಿಕೊಳ್ಳುತ್ತವೆ. ಗೂಡು ಪೂರ್ಣಗೊಂಡ ನಂತರ ಸಂತಾನೋತ್ಪತ್ತಿ ಮಾಡುತ್ತವೆ. ಮಳೆ ನೀರು ಒಳಗೆ ಬರದಂತೆ ಗೂಡನ್ನ ಮಣ್ಣಿನಿಂದ ಮೆತ್ತಿ ಕಟ್ಟಿರುತ್ತವೆ. ಮಿಂಚು ಹುಳುಗಳನ್ನ ತಂದಿಟ್ಟುಕೊಂಡು ಬೆಳಕು ಮಾಡಿಕೊಳ್ಳುತ್ತವೆ. 18 ರಿಂದ 20 ದಿನದಲ್ಲಿ ಒಂದು ಗೂಡನ್ನ ಕಟ್ಟುತ್ತವೆ. ಸುಮಾರು ಐವತ್ತು ಸಾವಿರ ಹುಲ್ಲಿನ ಎಳೆಗಳಿಂದ ಗೂಡು ಕಟ್ಟಿಕೊಳ್ಳುತ್ತವೆ.

    ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಗೂಡುಕಟ್ಟಲು ಗೀಜಗ ಹಕ್ಕಿಗಳು ಪ್ರಾರಂಭಿಸುತ್ತವೆ. ಮಳೆಗಾಲ ಮುಗಿದ ಬಳಿಕ ಗೂಡು ಬಿಡುತ್ತವೆ. ಈ ಬಾರಿ ಚಳಿಗಾಲದಲ್ಲೂ ರಾಯಚೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ.

  • ಅಕಾಲಿಕ ಮಳೆ ಅವಾಂತರ-ತೊಗರಿ, ಕಡಲೆ ಬೆಳೆಗೆ ಭಾರೀ ಎಫೆಕ್ಟ್

    ಅಕಾಲಿಕ ಮಳೆ ಅವಾಂತರ-ತೊಗರಿ, ಕಡಲೆ ಬೆಳೆಗೆ ಭಾರೀ ಎಫೆಕ್ಟ್

    ರಾಯಚೂರು: ಕಳೆದ ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಅಲ್ಲಲ್ಲಿ ಸುರಿಯುತ್ತಿರುವ ಚಳಿಗಾಲದ ಮಳೆ ಕೆಲ ಅವಾಂತರವನ್ನ ಸೃಷ್ಟಿಸುತ್ತಿದೆ. ಬಿಸಿಲನಾಡು ರಾಯಚೂರು ಈ ವರ್ಷ ಚಳಿ ಮಳೆಯನ್ನೇ ಹೆಚ್ಚು ಕಾಣುತ್ತಿದೆ. ಆದರೆ ಈಗ ಬದಲಾಗಿರುವ ವಾತಾವರಣ ಕೆಲ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ.

    ಉತ್ತರ ಭಾರತದಲ್ಲಿನ ಚಳಿಗಾಲದ ಮಳೆ, ಪಶ್ಚಿಮದ ಗಾಳಿ, ಹಿಂದೂ ಮಹಾಸಾಗರದಿಂದ ಸುಳಿಗಾಳಿ ಬರುವುದು ವಾತಾವರಣದಲ್ಲಿ ಬದಲಾವಣೆ ತಂದಿದೆ. ಬಂಗಾಳ ಕೊಲ್ಲಿ ಸಮುದ್ರ ಮೇಲ್ಮೈನಲ್ಲಿನ ಸುಳಿಗಾಳಿಯೂ ರಾಜ್ಯದಲ್ಲಿನ ತುಂತುರು ಮಳೆಗೆ ಕಾರಣವಾಗಿದೆ. ಚಳಿಗಾಲದಲ್ಲಿ ಮಳೆ ಬರುವುದು ಅಚ್ಚರಿಯನ್ನ ಮೂಡಿಸುವುದರ ಜೊತೆ ಕೆಲ ಆತಂಕಗಳನ್ನೂ ಸೃಷ್ಟಿಸಿದೆ. ಮನುಷ್ಯರಿಗೆ ನೆಗಡಿ, ಜ್ವರದಂತ ಸಮಸ್ಯೆ ಹೆಚ್ಚು ಮಾಡಿದರೆ ಬೆಳಗಳ ಇಳುವರಿ ಮೇಲೆ ನೇರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಕಡಲೆ, ತೊಗರಿ ಬೆಳೆ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯನ್ನ ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.

    ಕಡಲೆ ಬೆಳೆಯ ಮೇಲಿನ ಹುಳಿ ಮ್ಯಾಲಿಕ್ ಆಸಿಡ್ ಮಳೆಗೆ ತೊಳೆದುಕೊಂಡು ಹೋಗಿ ಇಳುವರಿ ಕಡಿಮೆಯಾಗುತ್ತದೆ ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ತೊಗರಿ, ಹತ್ತಿ, ಮೆಣಸಿನಕಾಯಿ ಇಳುವರಿ ಕೈಗೆ ಬರುವ ಹಂತದಲ್ಲಿ ಹಾಳಾಗುವ ಭೀತಿ ಎದುರಾಗಿದೆ. ಬಿಡಿಸುವ ಹಂತದಲ್ಲಿರುವ ಹತ್ತಿ ಒದ್ದೆಯಾದರೆ ಬೆಲೆ ಸಿಗುವುದು ಕಷ್ಟವಿದೆ. ಈಗಾಗಲೇ ಬಿಡಿಸಿ ಜಮೀನಿನಲ್ಲಿ ಒಣಗಲು ಹಾಕಿರುವ ಮೆಣಸಿನಕಾಯಿ ಬಣ್ಣವೇ ಬದಲಾಗುವ ಆತಂಕವಿದೆ ಅಂತ ರಾಯಚೂರು ಕೃಷಿ ವಿಜ್ಞಾನಗಳು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ ಹೇಳಿದ್ದಾರೆ.

    ಗಾಯದ ಮೇಲೆ ಬರೆ ಎನ್ನುವಂತೆ ಹಿಂದೆ ಚಂಡಮಾರುತಕ್ಕೆ ಹಾನಿಯಾದ ಬೆಳೆ ಪರಿಹಾರ ಇನ್ನೂ ಸಿಕ್ಕಿಲ್ಲ .ಈಗ ವಾತಾವರಣ ಬದಲಾಗಿದ್ದು, ಜಿಟಿಜಿಟಿ ಮಳೆ ಬರುತ್ತಿರುವುದು ನಷ್ಟಕ್ಕೆ ಮತ್ತೊಂದು ದಾರಿಯಂತೆ ಕಾಣುತ್ತಿದೆ ಅಂತ ರೈತರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಬದಲಾದ ವಾತಾವರಣ ಅಕಾಲಿಕ ಮಳೆಯನ್ನ ತಂದು ರೈತರನ್ನ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡುತ್ತಿದೆ. ಜನವರಿಯಲ್ಲಿ ಜನ ಚಳಿ ಚಳಿ ಅಂತಿದ್ರೆ ಮಳೆ ಇನ್ನಷ್ಟು ನಡುಕ ಹುಟ್ಟಿಸಿದೆ. ರೈತರು ಬೆಳೆಗಳನ್ನ ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.

  • ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ- ಉಭಯ ಸದನಗಳಲ್ಲಿ ಕೈ, ಕಮಲ ವಾಕ್ಸಮರ

    ಇಂದಿನಿಂದ ವಿಧಾನಮಂಡಲದ ಚಳಿಗಾಲದ ಅಧಿವೇಶನ- ಉಭಯ ಸದನಗಳಲ್ಲಿ ಕೈ, ಕಮಲ ವಾಕ್ಸಮರ

    – ಅಧಿವೇಶನದಲ್ಲಿ ಕೋಲಾಹಲ, ಗದ್ದಲ ಸಾಧ್ಯತೆ

    ಬೆಂಗಳೂರು: ಇಂದಿನಿಂದ ಇದೇ 15 ರವರೆಗೆ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಉಭಯ ಸದನಗಳ ಕಲಾಪಗಳಲ್ಲೂ ಆಡಳಿತ ಪಕ್ಷ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಪರಸ್ಪರ ವಾಕ್ಸಮರ ನಡೆಯಲಿದೆ.

    ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿದೆ. ನೆರೆ ಪರಿಹಾರದಲ್ಲಿನ ವೈಫಲ್ಯ, ಕೇಂದ್ರದಿಂದ ಪರಿಹಾರ ಬಿಡುಗಡೆಯಲ್ಲಿನ ತಾರತಮ್ಯ, ರೈತರ ಸಮಸ್ಯೆಗಳು, ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ, ಸಚಿವ ಸಂಪುಟ ವಿಸ್ತರಣೆಯ ಗೊಂದಲಗಳಿಂದ ಆಡಳಿತದ ಮೇಲೆ ಆಗಿರುವ ಪರಿಣಾಮಗಳು, ನಾಯಕತ್ವ ಬದಲಾವಣೆಯ ಚರ್ಚೆ, ಬಿಜೆಪಿಯಲ್ಲಿ ನಡೆದಿರುವ ರಾಜಕೀಯ ವಿದ್ಯಮಾನಗಳು. ಈ ಎಲ್ಲವನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸೋದು ಕಾಂಗ್ರೆಸ್ ಪ್ಲಾನ್ ಆಗಿದೆ.

    ಜೆಡಿಎಸ್ ಸಹ ತನ್ನ ವ್ಯಾಪ್ತಿಯಲ್ಲಿ ಸರ್ಕಾರದ ವೈಫಲ್ಯ ಬಯಲಿಗೆಳೆಯಲು ಸಿದ್ಧವಾಗಿದೆ. ಪ್ರತಿಪಕ್ಷಗಳಿಗೆ ಚರ್ಚೆ, ಅಂಕಿ ಅಂಶಗಳ ಮೂಲಕ ತಕ್ಕ ಉತ್ತರ ಕೊಡಲು ಬಿಜೆಪಿಯೂ ಪ್ರತ್ಯಾಸ್ತ್ರ ಹೂಡಲಿದೆ. ಈ ಅಧಿವೇಶನದಲ್ಲಿ ಗೋಹತ್ಯೆ ತಡೆ ಮತ್ತು ಲವ್ ಜಿಹಾದ್ ತಡೆ ವಿಧೇಯಕಗಳು ಮಂಡನೆಗೂ ಬಿಜೆಪಿ ಪ್ಲಾನ್ ರೂಪಿಸುತ್ತಿದೆ.

    ಈ ಎರಡೂ ವಿಧೇಯಕಗಳೂ ಕಲಾಪಗಳಲ್ಲಿ ದೊಡ್ಡ ಕೋಲಾಹಲ ಸೃಷ್ಟಿಸಲಿವೆ. ಸರ್ಕಾರ ಲವ್ ಜಿಹಾದ್ ತಡೆ ಮತ್ತು ಗೋಹತ್ಯೆ ನಿಷೇಧ ಸೇರಿದಂತೆ 10 ಮಸೂದೆಗಳನ್ನು ಮಂಡಿಸಲು ಬಿಜೆಪಿ ಮುಂದಾಗಿದೆ. ಗೋಹತ್ಯೆ ಮತ್ತು ಲವ್ ಜಿಹಾದ್ ತಡೆ ಮಸೂದೆಗಳಿಗೆ ಕಾಂಗ್ರೆಸ್ ಈಗಾಗಲೇ ವಿರೋಧ ವ್ಯಕ್ತಪಡಿಸಿರುವುದರಿಂದ ಅಧಿವೇಶನದಲ್ಲಿ ಕೋಲಾಹಲ, ಗದ್ದಲಗಳು ಸೃಷ್ಟಿಯಾಗೋದು ಖಚಿತ.

  • ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಮಾಲ್ಡಿವ್ಸ್‌ನಲ್ಲಿ ನಟಿ ಮಣಿಯರು ಮಸ್ತ್ ಮಜಾ- ಹೋಟೆಲ್ ದರ ಎಷ್ಟು ಗೊತ್ತಾ!

    ಬೆಂಗಳೂರು: ಕೊರೊನಾ ಬಳಿಕ ನಟಿಮಣಿಯರಿಗೆ ಮಾಲ್ಡಿವ್ಸ್ ಫೇವರಿಟ್ ಪ್ಲೇಸ್ ಎನ್ನುವಂತಾಗಿದ್ದು, ಸ್ಯಾಂಡಲ್‍ವುಡ್, ಬಾಲಿವುಡ್ ಮಾತ್ರವಲ್ಲದೆ ಇದೀಗ ಟಾಲಿವುಡ್‍ನ ಸಮಂತಾ ಸಹ ಮಾಲ್ಡಿವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಹತ್ತಾರು ನಟಿಯರು ಐಲ್ಯಾಂಡ್‍ಗಳಲ್ಲಿ ಮೊಕ್ಕಾಂ ಹೂಡಿದ್ದು, ಕಡಲ ಕಿನಾರೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ನಟಿಮಣಿಯರು ಮಾಲ್ಡಿವ್ಸ್ ಗೆ ಭೇಟಿ ನೀಡಲು ಕಾರಣವೇನು, ಇದ್ದಕ್ಕಿದ್ದಂತೆ ಹೋಗಿದ್ದೇಕೆ, ಅಲ್ಲಿನ ಹೋಟೆಲ್ ಹೇಗಿವೆ, ಒಂದು ರಾತ್ರಿ ಹೋಟೆಲ್‍ಗಳಲ್ಲಿ ಕಾಲ ಕಳೆಯಲು ದರ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

     

    View this post on Instagram

     

    A post shared by Shanvi sri (@shanvisri)

    ಕೊರೊನಾ ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಇದೀಗ ಗೂಡಿನಿಂದ ಹಾರಿದ ಹಕ್ಕಿಗಳಂತಾಗಿದ್ದು, ತನಮ್ಮ ನೆಚ್ಚಿನ ಸ್ಥಳಗಳಿಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ನಟಿಮಣಿಯರಿಗೆ ಬೀಚ್, ನೀರು ಎಂದರೆ ಎಲ್ಲಿಲ್ಲದ ಪ್ರೀತಿ ಹೀಗಾಗಿ ಸ್ಯಾಂಡಲ್‍ವುಡ್, ಬಾಲಿವುಡ್ ಹಾಗೂ ಟಾಲಿವುಡ್‍ನ ಬೆಡಗಿಯರು ಮಾಲ್ಡಿವ್ಸ್‍ನ್ನು ತಮ್ಮ ಪ್ರವಾಸದ ಡೆಸ್ಟಿನೇಶನ್ ಮಾಡಿಕೊಂಡಿದ್ದಾರೆ. ಹತ್ತಾರು ನಟಿಯರು ಮತ್ಸ್ಯ ಕನ್ಯೆಯರಂತೆ ಸಮುದ್ರ ವಿಹಾರಿಗಳಾಗಿದ್ದಾರೆ.

    ಕನ್ನಡದ ಪ್ರಣೀತಾ, ಅವನೇ ಶ್ರೀಮನ್ನಾರಾಯಣ ಬೆಡಗಿ ಶಾನ್ವಿ ಶ್ರೀವಾಸ್ತವ್, ತೆಲುಗಿನ ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್ ದಂಪತಿ, ಬಾಲಿವುಡ್‍ನ ರಕುಲ್ ಪ್ರೀತ್ ಸಿಂಗ್, ದಿಶಾ ಪಟಾಣಿ, ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ, ವರುಣ್ ಧವನ್, ಟೈಗರ್ ಶ್ರಫ್, ಮೌನಿ ರಾಯ್, ನೇಹಾ ಧುಪಿಯಾ ಸೇರಿದಂತೆ ಹತ್ತು ಹಲವು ನಟಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗೆ ತಂಡೋಪತಂಡವಾಗಿ ಒಮ್ಮೆಲೆ ನಟಿಮಣಿಯರು ಮಾಲ್ಡಿವ್ಸ್ ಗೆ ತೆರಳಿದ್ದಾರೆ.

     

    View this post on Instagram

     

    A post shared by Tiger Shroff (@tigerjackieshroff)

    ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್‍ನಿಂದ 31 ಡಿಗ್ರಿ ಸೆಲ್ಸಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ.

    ಮಾಲ್ಡಿವ್ಸ್ ಯಾಕೆ ಇಷ್ಟ?
    ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ. ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ. ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ. ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.

     

    View this post on Instagram

     

    A post shared by Rakul Singh (@rakulpreet)

    ಇಲ್ಲಿ ‘ಒಂದು ದ್ವೀಪ ಒಂದು ರೆಸಾರ್ಟ್’ ಪರಿಕಲ್ಪನೆಯನ್ನು ಅನುಸರಿಸಲಾಗುತ್ತದೆ. ಇದರಿಂದ ಮಾಲ್ಡಿವ್ಸ್ ಗೆ ಭೇಟಿ ನೀಡುವ ಪ್ರಯಾಣಿಕರು ತಾವು ಉಳಿದುಕೊಂಡ ರೆಸಾರ್ಟ್‍ಗೆ ಸೀಮಿತವಾಗುತ್ತಾರೆ. ಹೀಗಾಗಿ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ಸುರಕ್ಷಿತ ಎನ್ನಿಸುತ್ತದೆ. ಅಲ್ಲದೆ ಮಾಲ್ಡಿವ್ಸ್ ಗೆ ಭೇಟಿ ನೀಡದ ಬಳಿಕ ಕ್ವಾರಂಟೈನ್ ಆಗುವ ಅಗತ್ಯವಿಲ್ಲ. ಮಾತ್ರವಲ್ಲದೆ ಪಾಸ್‍ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.

     

    View this post on Instagram

     

    A post shared by Shanvi sri (@shanvisri)

    ರೆಸಾರ್ಟ್ ದರವೆಷ್ಟು?
    ಮಾಲ್ಡಿವ್ಸ್ ನಲ್ಲಿ ಪ್ರತಿ ದ್ವೀಪಕ್ಕೊಂದು ರೆಸಾರ್ಟ್ ಇದ್ದು, ಸಾವಿರಕ್ಕೂ ಅಧಿಕ ರೆಸಾರ್ಟ್‍ಗಳಿವೆ. ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್‍ಗಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ. ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ.

     

    View this post on Instagram

     

    A post shared by Sonakshi Sinha (@aslisona)

    ಇತ್ತೀಚೆಗೆ ನಟಿ ಕಾಜಲ್ ಅಗರ್ವಾಲ್ ಹಾಗೂ ಗೌತಮ್ ಕಿಚ್ಲು ಜೋಡಿ ಸಹ ಹನಿಮೂನ್‍ಗಾಗಿ ಮಾಲ್ಡಿವ್ಸ್ ಗೆ ತೆರಳಿದ್ದರು. ಇವರು ಅಂಡರ್ ವಾಟರ್ ಹೋಟೆಲ್‍ನಲ್ಲಿ ತಂಗಿದ್ದರು. ಇದು ವಿಶ್ವದ ಮೊದಲ ಸಬ್‍ಮರ್ಜಡ್ ಹೋಟೆಲ್ ಆಗಿದ್ದು, ಹಿಂದೂ ಮಹಾಸಾಗರದ ಮೇಲ್ಮೈಗಿಂತ 16 ಅಡಿ ಆಳದಲ್ಲಿರುವ ವಿಶ್ವದ ಮೊದಲ ಹೋಟೆಲ್ ಆಗಿದೆ. ಕಾಜಲ್ ದಂಪತಿ ಮುರಾಕಾ ಹೋಟೆಲ್‍ನಲ್ಲಿ ತಂಗಿದ್ದು, ಇದರ ಒಂದು ದಿನದ ಬಾಡಿಗೆ ಅಂದಾಜು 37.33 ಲಕ್ಷ ರೂ.ಗಳಾಗಿವೆ. ಇತ್ತೀಚೆಗೆ ಕಾಜಲ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಸಮುದ್ರದ ಆಳದಲ್ಲಿರುವ ಗಾಜಿನ ರೂಮ್‍ನಲ್ಲಿ ಕುಳಿತಿರುವ ಚಿತ್ರವನ್ನು ಅವರು ಪೋಸ್ಟ್ ಮಾಡಿದ್ದರು. ಈ ಮೂಲಕ ಅಂಡರ್ ವಾಟರ್ ವೇವ್ ತೋರಿಸಿದ್ದರು.

    ರೆಸಾರ್ಟ್‍ಗಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ. ಹೀಗಾಗಿಯೇ ಇದೀಗ ತಂಡೋಪ ತಂಡವಾಗಿ ತೆರಳಿದ್ದಾರೆ.

  • ಚಳಿಗಾಲದಲ್ಲಿ ಹೆಚ್ಚಾಗುತ್ತಂತೆ ಕೊರೊನಾ ಪಾಸಿಟಿವ್ ಪ್ರಕರಣಗಳು!

    ಚಳಿಗಾಲದಲ್ಲಿ ಹೆಚ್ಚಾಗುತ್ತಂತೆ ಕೊರೊನಾ ಪಾಸಿಟಿವ್ ಪ್ರಕರಣಗಳು!

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಇದೀಗ ಚಳಿಗಾಲದಲ್ಲಿ ಕೊರೊನಾ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿಗೆ ಎಂಬ ಆತಂಕಕಾರಿ ವಿಚಾರವೊಂದು ಬಯಲಾಗಿದೆ.

    ಬೇಸಿಗೆಯಲ್ಲಿ ಅಟ್ಟಹಾಸ ಮೆರೆದಿರೋ ಮಹಾಮಾರಿ ಕೊರೊನಾ ಚಳಿಗಾಲದಲ್ಲಿಯೂ ಬ್ಯಾಟಿಂಗ್ ಮಾಡೋಕೆ ಸಜ್ಜಾಗಿದೆ. ಹೀಗಾಗಿ ಚಳಿಗಾಲದಲ್ಲಿ ಸ್ವಲ್ಪ ಯಾಮಾರಿದರೂ ಮನೆ ಬಾಗಿಲಿಗೆ ಕೊರೊನಾ ಹೆಮ್ಮಾರಿ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಚಳಿಗಾಲದಲ್ಲಿ ಶೀತ, ಕೆಮ್ಮು ಹಲವು ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಚಳಿಗಾಲದಲ್ಲಿ ವಯಸ್ಸಾದವರು ಮನೆಯಿಂದ ಹೊರ ಬಂದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ 9 ಲಕ್ಷ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗೋ ಸಾಧ್ಯತೆ ಇದ್ದು, ಚಳಿಗಾಲದ ಬಗ್ಗೆ ತಜ್ಞರು ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

    ಈ ಸಂಬಂಧ ಐಸಿಯು ತಜ್ಞ ಡಾ.ಜಗದೀಶ್ ಹಿರೇಮಠ ಮಾತನಾಡಿ, ಚಳಿಗಾಲದಲ್ಲಿ ಕೊರೊನಾ ವೈರಸ್ ಮಲ್ಟಿಪಲ್ ಆಗೋ ಸಾಧ್ಯತೆ ಇದೆ. ಜೊತೆಗೆ ಜನರು ಒಬ್ಬರ ಹತ್ತಿರ ಮತ್ತೊಬ್ಬರು ಇರ್ತಾರೆ. ಈ ವೇಳೆ ಸಾಮಾಜಿಕ ಅಂತರ ಕಡಿಮೆ ಆಗುತ್ತದೆ. ಹೀಗಾಗಿ ಸಾಂಕ್ರಾಮಿಕ ರೋಗಗಳು ಬಹುಬೇಗ ಹರಡುತ್ತವೆ. ಪರಿಣಾಮ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಆಗುತ್ತದೆ ಎಂದು ಹೇಳಿದ್ದಾರೆ.

  • ಈ ಬಾರಿಯ ಮಳೆಗಾಲ, ಚಳಿಗಾಲ ಎರಡೂ ಡೇಂಜರ್ – ಐಐಟಿ, ಏಮ್ಸ್ ಸಂಶೋಧಕರ ಜಂಟಿ ಅಧ್ಯಯನ ವರದಿ

    ಈ ಬಾರಿಯ ಮಳೆಗಾಲ, ಚಳಿಗಾಲ ಎರಡೂ ಡೇಂಜರ್ – ಐಐಟಿ, ಏಮ್ಸ್ ಸಂಶೋಧಕರ ಜಂಟಿ ಅಧ್ಯಯನ ವರದಿ

    ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಪ್ರತಿ ದಿನ ಹೊಸ ದಾಖಲೆ ಸೃಷ್ಟಿಸುತ್ತಲೇ ಇದೆ. ಅಬ್ಬಾಬ್ಬ ಅಂದ್ರೆ ಇನ್ನೊಂದಿಷ್ಟು ದಿನಗಳ ಈ ಸಂಕಷ್ಟ, ಲಾಕ್‍ಡೌನ್ ಜಂಜಾಟ ಅಂದುಕೊಂಡವರಿಗೆ ಹೊಸ ಅಧ್ಯಯನ ವರದಿಯೊಂದು ಶಾಕ್ ನೀಡಿದೆ. ಹೌದು ಐಐಟಿ ಭುವನೇಶ್ವರ ಮತ್ತು ಏಮ್ಸ್ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಆತಂಕದ ವಿಚಾರ ಗೊತ್ತಾಗಿದೆ.

    ಪ್ರೊ. ವಿ. ವಿನೋಜ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದಲ್ಲಿ ಮಳೆಗಾಲ ಮತ್ತು ಚಳಿಗಾಲದಲ್ಲಿ ಕೊರೊನಾ ಸೋಂಕು ಮತ್ತಷ್ಟು ಹೆಚ್ಚಾಗಬಹುದು ಎಂದು ಎಚ್ಚರಿಸಲಾಗಿದೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ತಾಪಮಾನ ಕುಸಿತದಿಂದ ಕೊರೊನಾ ವೈರಸ್ ಗೆ ಪೂರಕ ವಾತವರಣ ಸೃಷ್ಟಿಯಾಗಲಿದೆ. ಇದು ಕೊರೊನಾ ವೈರಸ್ ಹರಡುವಿಕೆ ವೇಗ ಹೆಚ್ಚಾಗಲು ಸಹಕಾರಿಯಾಗಲಿದೆ ಎಂದು ಅಧ್ಯಯನ ಹೇಳಿದೆ.

    ಐಐಟಿ ಮತ್ತು ಏಮ್ಸ್ ಹೊರ ಹಾಕಿರುವ ಈ ಜಂಟಿ ಅಧ್ಯಯನ ಭಾರತದಲ್ಲಿ ಎರಡನೇ ಹಂತದಲ್ಲಿ ಸೋಂಕು ಹರಡುವ ಎಚ್ಚರಿಕೆ ನೀಡಿದೆ. ಈ ಹಿಂದೆ ಚೀನಾದ ತಜ್ಞರು ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದಕ್ಕೆ ಪೂರಕ ಎನ್ನುವಂತೆ ಯುರೋಪಿಯನ್ ದೇಶಗಳಲ್ಲಿ ಸೋಂಕು ಹೆಚ್ಚಾಗಿತ್ತು. ಈ ಭಾರತದ ತಜ್ಞರೇ ಇಂತದೊಂದು ಮಾಹಿತಿ ಹೊರಹಾಕಿದ್ದು ಮತ್ತಷ್ಟು ಭೀತಿ ಹೆಚ್ಚಿಸಿದೆ.

    ಉತ್ತರ ಭಾರತವೂ ಸೇರಿ ರಾಜ್ಯದ ಹಲವೆಡೆ ಅತಿವೃಷ್ಠಿ: ಈ ನಡುವೆ ದೇಶದಲ್ಲಿ ಮುಂಗಾರು ಶುರುವಾಗಿದ್ದು ಎಲ್ಲೆಡೇ ಉತ್ತಮ ಮಳೆಯಾಗುತ್ತಿದೆ. ಅಸ್ಸಾಂ, ಬಿಹಾರ, ಮಹಾರಾಷ್ಟ್ರದಲ್ಲಿ ಅತಿವೃಷ್ಠಿಯಾದ್ರೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಈ ಹಿನ್ನೆಲೆ ಈ ಮುಂಗಾರು ಮಳೆಯಿಂದ ತಾಪಮಾನ ಕಡಿಮೆಯಾಗಲಿದ್ದು ಮತ್ತೊಂದು ಆತಂಕ ಹುಟ್ಟಿಸಿದೆ.

    ಈ ವರ್ಷದ ಕೊನೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರಬಹುದು ಎಂದು ಅಂದುಕೊಂಡಿದ್ದ ಜನರಿಗೆ ಐಐಟಿ ಏಮ್ಸ್ ಅಧ್ಯಯನ ವರದಿ ಚಳಿಗಾಲ ಮಳೆಗಾಲ ದೇಶದಲ್ಲಿ ಸೃಷ್ಟಿಸಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಸಿದೆ. ಹೀಗಾಗಿ ಮತ್ತಷ್ಟು ಎಚ್ಚರದಿಂದರಬೇಕಿದೆ.

  • ಭಾರತದಲ್ಲಿ 2ನೇ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದು: ಡಾ.ರಣದೀಪ್ ಗುಲೇರಿಯಾ

    ಭಾರತದಲ್ಲಿ 2ನೇ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಬಹುದು: ಡಾ.ರಣದೀಪ್ ಗುಲೇರಿಯಾ

    ನವದೆಹಲಿ: ಭಾರತದಲ್ಲಿ ಚಳಿಗಾಲದಲ್ಲಿ 2ನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಕೇಂದ್ರ ಸರ್ಕಾರದ ಟಾಸ್ಕ್ ಫೋರ್ಸ್ ಸದಸ್ಯ ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಚೀನಾದ ಭೀತಿ ಭಾರತಕ್ಕೂ ಕಾಡಲು ಆರಂಭಿಸಿದ್ದು, ಸೋಂಕು ಚಳಿಗಾಲದಲ್ಲಿ 2ನೇ ಹಂತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಕೊರೊನಾ ತಾತ್ಕಾಲಿಕವಲ್ಲ ವರ್ಷಕ್ಕೂ ಹೆಚ್ಚಿನ ಕಾಲದ ಸುದೀರ್ಘ ಯುದ್ಧ ಎಂದು ಭಾವಿಸಬೇಕು. ದೇಹದಲ್ಲಿ ಸುದೀರ್ಘ ಕಾಲದಲ್ಲಿರುವ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಡಾ.ರಣದೀಪ್ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ಕೊರೊನಾ ಆಸ್ಪತ್ರೆಗಳ ಹಾಸಿಗೆಗಳನ್ನು ಹೆಚ್ಚಿಸಲಾಗುತ್ತಿದೆ. ವೆಂಟಿಲೇಟರ್ ವೈದ್ಯಕೀಯ ಸಿಬ್ಬಂದಿಗಳನ್ನು ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಂದ ಮಾತ್ರ ಕೊರೊನಾ ವಿನಾಶ ಸಾಧ್ಯವಿಲ್ಲ. ಕೊರೊನಾ ಹೋರಾಟಕ್ಕೆ ಖಾಸಗಿ ಆಸ್ಪತ್ರೆ ಬೆಂಬಲ ಬೇಕು ಎನ್ನುವ ಮೂಲಕ 2ನೇ ಹಂತದ ಹೋರಾಟದ ಮಾಹಿತಿಯನ್ನು ಅವರು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ

    ಕೊರೊನಾ ಸೂಚಿ ಭಾರತದಲ್ಲಿ ಇನ್ನೂ ಇಳಿಕೆ ಬಂದಿಲ್ಲ, ಸೋಂಕು ಏರಿಕೆಯಲ್ಲಿದೆ ಈ ನಡುವೆ ಲಾಕ್‍ಡೌನ್ ವಿನಾಯತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಅಗತ್ಯ ಸಮುದಾಯಕ್ಕೆ ಸೋಂಕು ಹರಡುವಿಕೆ ತಡೆಯುವುದು ಆಸ್ಪತ್ರೆಗಳ ಕೈಲಿಲ್ಲ. ಸಮುದಾಯದ ಸೋಂಕು ಹರಡುವುದು ತಡೆಯುವುದು ಜನರ ಕೈಯಲ್ಲಿದೆ. ಆದ್ದರಿಂದ ಜನರು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

  • ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಬೆಂಗಳೂರು: ಫೆಬ್ರವರಿ ತಿಂಗಳಿನಿಂದ ಜನರ ಜೀವಕ್ಕೆ ಅಪಾಯವೆಸಗುವ “ದಿ ಮೋಸ್ಟ್ ಡೇಂಜರಸ್ ಸೂರ್ಯ ಶಿಕಾರಿ” ಎಲ್ಲರನ್ನೂ ಕಾಡಲಿದೆ. ಏಕೆಂದರೆ ಎರಡೆರಡು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಹೀಟ್ ವೇವ್ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಜನವರಿ ಅಂತ್ಯದ ಬಿಸಿಲು ಭರ್ತಿ 150 ವರ್ಷದ ಇತಿಹಾಸವನ್ನು ಪುಡಿಗಟ್ಟಿತ್ತು. ಜನವರಿಯ ಬಿಸಿಲು 150 ವರ್ಷದಲ್ಲಿಯೇ ದಾಖಲೆಯ ಬಿಸಿಲು. ಇನ್ನು ಸಣ್ಣಗೆ ಚಳಿ ಇರಬೇಕಾಗಿದ್ದ ಫೆಬ್ರವರಿಯಲ್ಲಿ ಸೂರ್ಯನ ಬಿಸಿಲು ನೆತ್ತಿ ಸುಡುತ್ತಿದೆ. ಜನ ಈಗಲೇ ಬೆವರು ಒರೆಕೊಳ್ಳುವಂತಾಗಿದೆ.

    ಈ ಬಾರಿ ನಿಮಗೆ ಸೂರ್ಯ ನರಕ ದರ್ಶನ ಮಾಡಿಸಲಿದ್ದಾನೆ ಎನ್ನಲಾಗಿದೆ. ಹಾಗಂತ ಬೇಸಿಗೆ ಯುದ್ಧಕ್ಕೂ ಬಿಸಿಲ ಬೇಗೆ ಇರಲ್ಲ. ಬದಲಾಗಿ ಒಂದೊಂದು ದಿನ ಒಂದೊಂದು ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹೇಳಲಾಗುತ್ತಿದ್ದು, ಇದು ವಿಜ್ಞಾನಿಗಳನ್ನೇ ಆತಂಕಕ್ಕೀಡು ಮಾಡಿದೆ. ಒಂದು ದಿನ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಬಿಸಿಲು ಬೆಂಗಳೂರು ಸೇರಿದಂತೆ ಇಡೀ ಕರುನಾಡನ್ನು ಕಾಡಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

    ಪಿಲಿಫೈನ್ಸ್, ನ್ಯೂಜಿಲ್ಯಾಂಡ್, ಸುಮಾತ್ರ ಹೀಗೆ ನಾನಾ ಕಡೆ ಈ ಬಾರಿ ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟವಾಗುತ್ತಿದೆ. ಈ ಸ್ಫೋಟದ ತೀವ್ರತೆಯ ಪರಿಣಾಮ ಅದ್ಯಾವ ಪರಿ ಇರುತ್ತೆ ಎಂದರೆ, ಇಡೀ ಬೇಸಿಗೆಯನ್ನು ಜನರ ಪಾಲಿಗೆ ನರಕವನ್ನಾಗಿಸುತ್ತೆ ಎನ್ನಲಾಗಿದೆ. ಒಂದಿನ ಅಸಾಧ್ಯ ಎನ್ನುವ ಬಿಸಿಲು, ಇನ್ನೊಂದು ದಿನ ಚಳಿ, ಇದರಿಂದ ಕಾಯಿಲೆಗಳು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

    ಅದರಲ್ಲೂ ಆಕಾಶ ಚುಂಬಿಸುವಂತೆ ಭೂಮಿಯಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ಕಪ್ಪು ಅನಿಲ ವಿಷ ಅನಿಲವನ್ನು ಹೊರ ಸೂಸುತ್ತಿದೆ. ಹೀಗಾಗಿ ರಣಭೀಕರ ಕಾಯಿಲೆಗಳು ಬರಲಿದೆ ಎಂದು ಭೂಗರ್ಭ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.