Tag: ಚಪ್ಪಲಿ

  • ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ಹಾಲಿ ಶಾಸಕನಿಂದ ಮಾಜಿ ಶಾಸಕನ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನ

    ವಿಜಯನಗರ (ಬಳ್ಳಾರಿ): ಬಿಜೆಪಿಯ ಮಾಜಿ ಶಾಸಕ ನೇಮಿರಾಜನಾಯ್ಕ್ ಮೇಲೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾ ನಾಯಕ್ ಚಪ್ಪಲಿಯಿಂದ ಹಲ್ಲೆಗೆ ಯತ್ನಸಿದ್ದಾರೆ.

    ನಿನ್ನೆ ನಡೆದ ಪುರಸಭೆಯ ಚುನಾವಣೆಯ ಮತದಾನದ ವೇಳೆ ಮತಕೇಂದ್ರದ ಒಳಗೆ ನೇಮಿರಾಜ್ ನಾಯಕ್, ಅವರು ಹೋಗಿದ್ದ ಕಾರಣ ಆರಂಭವಾದ ಜಗಳವು, ಇಬ್ಬರು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಭರಾಟೆಯಲ್ಲಿ ಭೀಮಾ ನಾಯಕ್ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಹಾಲಿ ಶಾಸಕ ಕೈಯಲ್ಲಿ ಚಪ್ಪಲಿ ಹಿಡಿದು ಹಲ್ಲೆ ಮಾಡಲು ಮುಂದಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇಂದು ವೈರಲ್ ಆಗಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆ ಇಲ್ಲ: ಸುನಿಲ್ ಕುಮಾರ್

    ಪುರಸಭೆ ಚುನಾವಣೆಯಲ್ಲಿ ಮತದಾನ ಕೇಂದ್ರದ ಮುಂದೆ ಪರಸ್ಪರ ಈ ವಾಗ್ವಾದ ನಡೆದಿದ್ದು, ನೇಮಿರಾಜ್ ನಾಯಕ್ ಹಾಗೂ ಅವರ ಬೆಂಬಲಿಗರ ಮೇಲೆ ಹಾಲಿ ಶಾಸಕ ಹಲ್ಲೆ ಮಾಡಲು ಮುಂದಾಗಿದ್ದರು. ಈ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

  • ಆ ಕೊಲೆ ಮನೆ ಮುಂದಿದ್ದ ಚಪ್ಪಲಿಯಿಂದ ಬಯಲಾಯ್ತು!

    ಆ ಕೊಲೆ ಮನೆ ಮುಂದಿದ್ದ ಚಪ್ಪಲಿಯಿಂದ ಬಯಲಾಯ್ತು!

    ಪುಣೆ: ಕಳೆದ ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಜೊತೆಗಿನ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ವಿವಾಹಿತ ಮಹಿಳೆಯ ಪತಿ ಸೇರಿ ಮೂವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.

    POLICE JEEP

    ಕೊಲೆಯಾದ ವ್ಯಕ್ತಿಯ ಚಪ್ಪಲಿಯ ಸಾಕ್ಷ್ಯ ಆಧಾರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮನೆಗೆ ಕೊಲೆಯಾದ 27 ವರ್ಷದ ಯುವಕ ಬಂದಿದ್ದ. ಇದೇ ಮನೆಯ ಮುಂಭಾಗದಲ್ಲಿ ಚಪ್ಪಲಿಯೊಂದು ಸಿಕ್ಕಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆಯ ಪತಿ ಹಾಗೂ ಇನ್ನಿಬ್ಬರು ಸಿಕ್ಕಿಬಿದ್ದಿದ್ದಾರೆ.

    ಕೊಲೆಯಾದ ಯುವಕ ಕಳೆದ ಅಕ್ಟೋಬರ್ 22ರಂದು ಬಾವ್ಧಾನ್ ಎಂಬಲ್ಲಿಂದ ನಾಪತ್ತೆಯಾಗಿದ್ದಾನೆ ಎಂದು ಆತನ ತಾಯಿ ದೂರು ನೀಡಿದ್ದರು. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಕಿಡ್ನ್ಯಾಪ್ ಆಗಿರಬಹುದು ಎಂದು ಕೂಡಾ ವಿಚಾರಣೆ ನಡೆಸಿದ್ದರು. ಇದೇ ವೇಳೆ ಮನೆಯೊಂದರ ಮುಂದೆ ಯುವಕ ಬಳಸುತ್ತಿದ್ದ ಚಪ್ಪಲಿ ಸಿಕ್ಕಿದೆ.

    ಏನಾಯ್ತು?: ಪೊಲೀಸರು ಹೇಳುವ ಪ್ರಕಾರ, ಕೊಲೆಯಾದ ಯುವಕ ಚಪ್ಪಲಿ ಸಿಕ್ಕಿದ ಮನೆಯ ಮಾಲೀಕನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ. ಹತ್ಯೆ ಮಾಡುವುದಕ್ಕೂ ಮುನ್ನ ಆರೋಪಿ ತನ್ನ ಪತ್ನಿಯ ಮೊಬೈಲ್‍ನಲ್ಲಿ 2 ಮಿಸ್ಡ್ ಕಾಲ್ ಬಂದಿರೋದನ್ನ ನೋಡಿದ್ದಾನೆ. ಇದರಿಂದ ಆಕೆಯ ಪತಿಗೆ ಅನುಮಾನ ಶುರುವಾಗಿದೆ. ಅಕ್ಟೋಬರ್ 21ರಂದು ರಾತ್ರಿ ಇದೇ ನಂಬರ್‍ನಿಂದ ಯುವಕನಿಗೆ ಕಾಲ್ ಹೋಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ ಆದೇಶ ಹಿಂಪಡೆದ ರಾಜ್ಯ ಸರ್ಕಾರ

    ಮಧ್ಯರಾತ್ರಿ ಬಳಿಕ ಯುವಕ ಮಹಿಳೆಯ ಮನೆಯತ್ತ ಹೋಗಿದ್ದಾನೆ. ಇದಕ್ಕಾಗಿ ಹೊಂಚು ಹಾಕಿ ಕೂತಿದ್ದ ಆರೋಪಿ ಇನ್ನಿಬ್ಬರ ಜೊತೆ ಸೇರಿ ಯುವಕನ ಎದೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿದ್ದಾರೆ. ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿಕೊಂಡ ಬಳಿಕ ಆರೋಪಿಗಳಲ್ಲೊಬ್ಬನ ಕಳ್ಳಭಟ್ಟಿ ಕೇಂದ್ರಕ್ಕೆ ಕೊಂಡೊಯ್ದು ಮೃತದೇಹವನ್ನು ಸುಟ್ಟಿದ್ದಾರೆ. ಬಳಿಕ ಅಳಿದುಳಿದ ಅವಶೇಷಗಳನ್ನು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಎಸೆದು ಪರಾರಿಯಾಗಿದ್ದರು.

    ಪೊಲೀಸರ ತನಿಖೆ ವೇಳೆ ಒಬ್ಬ ಪುಣೆಯಲ್ಲಿ ಪತ್ತೆಯಾದರೆ, ಪರಾರಿಯಾಗಿದ್ದ ಪ್ರಮುಖ ಆರೋಪಿ ಹಾಗೂ ಆತನ ಸಹಚರನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ.

  • ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ

    ಚಪ್ಪಲಿಯೊಳಗೆ ಬ್ಲ್ಯೂಟೂತ್, ಮೊಬೈಲ್ -ಪರೀಕ್ಷೆಗೆ ಬಂದ ಐವರ ಬಂಧನ

    ಜೈಪುರ್: ಚಪ್ಪಲಿಯೊಳಗೆ ಬ್ಲ್ಯೂಟೂತ್ ಹಾಗೂ ಮೊಬೈಲ್ ಫೋನ್ ಇಟ್ಟುಕೊಂಡು ಪರೀಕ್ಷೆ ಬರೆಯಲು ಮುಂದಾದ ಐವರನ್ನು ಬಂಧಿಸಿರುವ ಘಟನೆ ನಡೆದಿದೆ.

    ರಾಜಸ್ಥಾನ ಶಿಕ್ಷಕರ ನೇಮಕಾತಿ ಪರೀಕ್ಷೆಯ (REET) ವೇಳೆ ಅಭ್ಯರ್ಥಿಗಳು ಚಪ್ಪಲಿಯೊಳಗೆ ಬ್ಲೂಟೂತ್ ಹಾಗೂ ಮೊಬೈಲ್ ಫೋನ್ ಅಡಗಿಸಿಟ್ಟುಕೊಂಡು ಚೀಟ್ ಮಾಡುತ್ತಿದ್ದ ವಿಷಯವೊಂದು ಬಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗೋಕರ್ಣದಲ್ಲಿ ಸಮುದ್ರದ ಪಾಲಾಗುತಿದ್ದ ಪ್ರವಾಸಿಗನ ರಕ್ಷಣೆ

    ಮೋಸ ಮಾಡಲು ಮುಂದಾದ ಅಭ್ಯರ್ಥಿಗಳಿಂದ ಒಟ್ಟು 6 ಲಕ್ಷ ಮೌಲ್ಯದ ಚಪ್ಪಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಚಪ್ಪಲಿಯೊಳಗೆ ಬ್ಲ್ಯೂಟೂತ್ ಮತ್ತು ಮೊಬೈಲ್  ಫೋನ್?ಗಳನ್ನು ಇರಿಸಿಕೊಳ್ಳಲಾಗಿತ್ತು. ಜತೆಗೆ ಅಭ್ಯರ್ಥಿಗಳು ಬ್ಲ್ಯೂಟೂತ್ ಸಹಾಯದಿಂದ ಉತ್ತರವನ್ನು ಹೊರಗಡೆ ನಿಂತಿದ್ದ ವ್ಯಕ್ತಿಯಿಂದ ಕೇಳಿ ತಿಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಂಡಿದ್ದರು. ಇದನ್ನೂ ಓದಿ:  ಮತ್ತೆ ಚೀನಾ ಸೈನಿಕರ ಕಿರಿಕ್ – ಭಾರತ ಗಡಿ ಪ್ರವೇಶಿಸಿ ಸೇತುವೆ ಧ್ವಂಸ

    ರಾಜಸ್ಥಾನ ಶಿಕ್ಷಕರ ಅರ್ಹತಾ ನೇಮಕಾತಿ ಪರೀಕ್ಷೆಯು ಭಾನುವಾರ ನಡೆಯಿತು. ರಾಜಸ್ಥಾನ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಲು ಖಇಇಖಿ ಉತ್ತೀರ್ಣರಾಗಬೇಕು. ಐವರು ಅಭ್ಯರ್ಥಿಗಳು ಬ್ಲ್ಯೂಟೂತ್ ಇದ್ದ ಚಪ್ಪಲಿಯನ್ನು ಧರಿಸಿ ಪರೀಕ್ಷಾ ಕೊಠಡಿಯನ್ನು ಪ್ರವೇಶಿಸುವ ಮೊದಲೇ ಅವರನ್ನು ತಡೆಯಲಾಗಿದೆ. ಜತೆಗೆ ಈ ದಂಧೆಯಲ್ಲಿ ಪಾಲ್ಗೊಂಡಿದ್ದ ಇತರರನ್ನೂ ಸಹ ಬಂಧಿಸಲಾಗಿದೆ. ಚೀಟಿಂಗ್ ಮಾಡಲು ಬಳಕೆ ಮಾಡಲಾಗುತ್ತಿದ್ದ ಚಪ್ಪಲಿಗಳನ್ನು ಬರೋಬ್ಬರಿ 2 ರಿಂದ 6 ಲಕ್ಷದ ವರೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ವರದಿಗಳಿಂದ ತಿಳಿದು ಬಂದಿದೆ.

  • ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ವರನಿಗೆ ವೇದಿಕೆ ಮೇಲೆಯೇ ಚಪ್ಪಲಿಯಲ್ಲಿ ಹೊಡೆದ ತಾಯಿ

    ಲಕ್ನೋ: ಮದುವೆ ಸಮಾರಂಭದ ವೇದಿಕೆ ಮೇಲೆಯೇ ವರನಿಗೆ ತಾಯಿ ಚಪ್ಪಲಿಯಲ್ಲಿ ಹೊಡೆದ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೃಜನ್ ಜೊತೆಗಿನ ಮದುವೆ ಮುರಿದಿದ್ದಕ್ಕೆ ವಿಜಯಲಕ್ಷ್ಮಿ ಸ್ಪಷ್ಟನೆ

    ಈ ಘಟನೆ ಉತ್ತರ ಪ್ರದೇಶದ ಹಮೀರ್‍ಪುರ ಜಿಲ್ಲೆಯ ಭರೂವಾ ಸುಮೇರ್‍ಪುರ ಗ್ರಾಮದಲ್ಲಿ ನಡೆದಿದ್ದು, ವಧು ಹಾಗೂ ವರ ಇಬ್ಬರು ಹಾರ ಬದಲಾಯಿಸಿಕೊಳ್ಳುತ್ತಿರುತ್ತಾರೆ. ಈ ವೇಳೆ ಇದಕ್ಕಿದಂತೆ ಮೆಟ್ಟಿಲುಗಳನ್ನು ಹತ್ತಿ ವೇದಿಕೆ ಮೇಲೆ ಬಂದ ವರನ ತಮ್ಮ ಚಪ್ಪಲಿಯನ್ನು ಕಾಲಿನಿಂದ ಬಿಚ್ಚಿ ವರನಿಗೆ ಹೊಡೆಯಲು ಆರಂಭಿಸುತ್ತಾರೆ.

    ಈ ದೃಶ್ಯವನ್ನು ಕಂಡು ಸಮಾರಂಭಕ್ಕೆ ಆಗಮಿಸಿದ್ದ ಅಥಿತಿಗಳಿಗೆ ಆಶ್ಚರ್ಯವಾಗಿದೆ. ನಂತರ ಮಗನು ಬೇರೆ ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಅಸಮಾಧಾನಗೊಂಡ ತಾಯಿ ವರ ಉಮೇಶ್ ಚಂದ್ರರಿಗೆ ಹೊಡೆದಿದ್ದಾರೆ ಎಂಬ ಅಸಲಿ ಸತ್ಯ ಬಹಿರಂಗಗೊಂಡಿದೆ.

    ಕುಟುಂಬಸ್ಥರ ವಿರೋಧದ ನಡುವೆ ಉಮೇಶ್ ಚಂದ್ರರವರು ಅಂಕಿತಾ ಎಂಬವರನ್ನು ನೋಂದಣಿ ಕಚೇರಿಯಲ್ಲಿ ಮದುವೆಯಾಗಿದ್ದಾರೆ. ವಿವಾಹದ ನಂತರ ವಧುವಿನ ತಂದೆ ಜುಲೈ 3 ರಂದು ಜಿಲ್ಲಾ ಸಭಾಂಗಣವೊಂದರಲ್ಲಿ ಸಣ್ಣದಾಗಿ ಫಂಕ್ಷನ್ ಮಾಡಲು ನಿರ್ಧರಿಸಿದ್ದರು. ಆದರೆ ಸಮಾರಂಭಕ್ಕೆ ವರನ ಕುಟುಂಬ ಮತ್ತು ಅವರ ಸಹೋದರರನ್ನು ಆಹ್ವಾನಿಸಿದ ಕಾರಣ ಆಕ್ರೋಶಗೊಂಡು ವರನ ತಾಯಿ ಸ್ಥಳಕ್ಕೆ ಆಗಮಿಸಿ ಮಗನಿಗೆ ಎಲ್ಲರ ಸಮ್ಮುಖ ವೇದಿಯಲ್ಲಿಯೇ ಚಪ್ಪಲಿ ಮೂಲಕ ಹೊಡೆದಿದ್ದಾರೆ.

    https://youtu.be/AWL9p72roF4

  • ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ವೈಷ್ಣವಿ, ಗರ್ಲ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನೀಡಿದಾಗಲಿಂದಲೂ ಮನೆಯಲ್ಲಿ ರೌಡಿಯಂತೆ ಅವಾಜ್ ಹಾಕುತ್ತಾ ಮಿಂಚುತ್ತಿದ್ದಾರೆ.

    ನಿನ್ನೆ ರಘು ಬಾಯ್ಸ್ ಹಾಸ್ಟೆಲ್‍ಗೆ ವೈಷ್ಣವಿಯನ್ನು ಎತ್ತಿಕೊಂಡು ಹೋಗಿ ಹಾಕೋಣ. ಎರಡು ಪಾಯಿಂಟ್ ಆದರೂ ಸಿಗುತ್ತದೆ ಎಂದು ಅಣಕಿಸುತ್ತಿರುತ್ತಾರೆ. ಆಗ ವೈಷ್ಣವಿ ಧೈರ್ಯ ಇದ್ದರೆ ಇಲ್ಲಿ ಬಂದು ಮಾತಾಡು ಎಂದು ಅವಾಜ್ ಹಾಕುತ್ತಾರೆ. ಆಗ ರಘು ವೈಷ್ಣವಿ ಚಪ್ಪಲಿಯನ್ನು ಜೋರಾಗಿ ಒದೆಯುತ್ತಾರೆ. ನಂತರ ವೈಷ್ಣವಿಯವರ ಮತ್ತೊಂದು ಕಾಲಿನ ಚಪ್ಪಲಿಯನ್ನು ಶಮಂತ್ ಹಾಗೂ ರಘು ಸೇರಿಕೊಂಡು ಗಾರ್ಡನ್ ಏರಿಯಾದ ಮೇಲಿರುವ ಸ್ಪೀಕರ್‍ವೊಂದರ ಮೇಲೆ ಇಡುತ್ತಾರೆ.

    ನಂತರ ವೈಷ್ಣವಿಯನ್ನು ಎಳೆದುಕೊಂಡು ಹೋಗಲು ಮಂಜು, ರಾಜೀವ್, ಶಮಂತ್, ರಘು ಪ್ರಯತ್ನಿಸುತ್ತಾರೆ. ಈ ವೇಳೆ ಶುಭ ವೈಷ್ಣವಿಯನ್ನು ಸೇವ್ ಮಾಡಲು ಶುಭಾ ಪೂಂಜಾ ಸಖತ್ ಸರ್ಕಸ್ ನಡೆಸುತ್ತಾರೆ. ಆದರೂ ಬಿಡದ ಹುಡುಗರು ವೈಷ್ಣವಿಯನ್ನು ಬಾಯ್ಸ್ ಹಾಸ್ಟೆಲ್ ವಿಭಾಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ವೈಷ್ಣವಿ ಓಡಿ ಬರುತ್ತಾರೆ. ಮತ್ತೆ ವೈಷ್ಣವಿಯನ್ನು ಎತ್ತಿಕೊಂಡು ಬಿಸಾಕಿ ಬಿಡುತ್ತೇನೆ ಎಂದು ಮಂಜು ಹೇಳುತ್ತಾರೆ.

    ಆಗ ಶುಭ ಮಂಜುರವರ ಒಂದು ಚಪ್ಪಲಿಯನ್ನು ದೂರಕ್ಕೆ ಎಸೆದರೆ ವೈಷ್ಣವಿ ಮತ್ತೊಂದು ಚಪ್ಪಲಿಯನ್ನು ಸ್ಪೀಕರ್ ಮೇಲೆ ಎಸೆಯಲು ಹೋಗಿ ಬಿಗ್ ಮನೆಯ ಕಾಂಪೌಂಡ್‍ನಿಂದ ಹೊರಕ್ಕೆ ಎಸೆಯುತ್ತಾರೆ. ಈ ವೇಳೆ ಇದನ್ನು ಕಂಡು ಮನೆ ಮಂದಿಯೆಲ್ಲಾ ಸೂಪರ್ ಎಂದು ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಬಳಿಕ ಮಂಜು ಶನಿವಾರ ನೀನು ಹೀಲ್ಸ್ ಚಪ್ಪಲಿ ಹಾಕಿಕೊಳ್ಳುತ್ತೀಯಾ ಅಲ್ವಾ? ಐತೆ ಇರು ಎಂದು ರೇಗಿಸುತ್ತಾರೆ.

  • ಮಹಿಳೆಗೆ ಅಶ್ಲೀಲ ಸಂದೇಶ ರವಾನಿಸಿದ ಯುವಕನಿಗೆ ಬಿತ್ತು ಗೂಸಾ

    ಮಹಿಳೆಗೆ ಅಶ್ಲೀಲ ಸಂದೇಶ ರವಾನಿಸಿದ ಯುವಕನಿಗೆ ಬಿತ್ತು ಗೂಸಾ

    – ಲವ್ ಮಾಡ್ತೀನಿ ಅಂತ ಹೇಳ್ಕೊಂಡು ತಿರುಗಾಡ್ತಿದ್ದ ಯುವಕ

    ಕೊಪ್ಪಳ: ಇಲ್ಲಿನ ಜಿಲ್ಲಾ ಆಸ್ಪತ್ರೆ ಮುಂಭಾಗ ಮಹಿಳೆಯೊಬ್ಬಳು ಯುವಕನೊಬ್ಬನನ್ನು ಹಿಗ್ಗಾಮುಗ್ಗ ಥಳಿಸಿದ್ದಾಳೆ.

    ವೀರಯ್ಯ, ಚಪ್ಪಲಿ ಏಟು ತಿಂದ ಯವಕ. ಮೂಲತಃ ಕೊಪ್ಪಳ ತಾಲೂಕಿನ ನರೇಗಲ್ ನಿವಾಸಿ. ಇದೀಗ ವೀರಯ್ಯ ಮಾಡಬಾರದ ಕೆಲಸ ಮಾಡಿ ಧರ್ಮದೇಟು ತಿಂದಿದ್ದಾನೆ.

    ಅವನಿಗಿಂತ ದೊಡ್ಡವಳು, ಅದರಲ್ಲೂ ಮದುವೆಯಾಗಿರೋ ಮಹಿಳೆಗೆ ಅಶ್ಲೀಲ ಸಂದೇಶ ಕಳಿಸಿ ತಗ್ಲಾಕ್ಕೊಂಡಿದ್ದಾನೆ. ಪದೇ ಪದೇ ಮೊಬೈಲ್ ಗೆ ಅಶ್ಲೀಲ ಸಂದೇಶದ ಜೊತೆಗೆ ನಾನು ಅವಳನ್ನ ಲವ್ ಮಾಡ್ತೀನಿ ಎಂದೂ ಊರವರ ಮುಂದೆ ಹೇಳಿಕೊಂಡಿದ್ದನು. ಹೀಗಾಗಿ ರೊಚ್ಚಿಗೆದ್ದ ಮಹಿಳೆ ವೀರಯ್ಯನನ್ನು ಮನಬಂದಂತೆ ಥಳಿಸಿದ್ದಾಳೆ.

    ವೀರಯ್ಯ ನನ್ನ ತಮ್ಮ ತಮ್ಮ ಎಂದು ಮಹಿಳೆ ಸಲುಗೆ ಕೊಟ್ಟಿದ್ದಳು. ಆದರೆ ಅದೇ ಸಲುಗೆಯನ್ನ ದುರಪಯೋಗ ಮಾಡಿಕೊಂಡ ವೀರಯ್ಯ ಯುವತಿ ಮೊಬೈಲ್ ಗೆ ಅಶ್ಲೀಲ ಸಂದೇಶ ಕಳಿಸಿದ್ದನಂತೆ. ಇದರಿಂದ ಮಹಿಳೆಯ ಮನೆಯವರು ಅವನಿರೋ ಜಾಗಕ್ಕೆ ಬಂದು ಚಪ್ಪಲಿ ಏಟು ನೀಡಿದ್ದಾರೆ.

    ಮಹಿಳೆ ಕೊಪ್ಪಳ ತಾಲೂಕಿನ ಹುಣಸಿಹಾಳ ತಾಂಡಾ ನಿವಾಸಿಯಾಗಿದ್ದು, ಜಾಗ ಕೊಡಿಸೋ ವಿಚಾರಕ್ಕೆ ಇವರಿಬ್ಬರ ಮಧ್ಯೆ ಪರಿಚಯವಾಗಿದೆ. ಪರಿಚಯದಿಂದ ಕಳೆದ ಒಂದು ವರ್ಷದಿಂದ ಫೋನ್ ಅಲ್ಲಿ ಮಾತಾಡಿದ್ದಾರೆ. ಮಹಿಳೆಯ ಮನೆಗೆ ವೀರಯ್ಯ ಬಂದು ಹೋಗೋದು ಮಾಡಿದ್ದಾನೆ. ಮಹಿಳೆ ಕೂಡ ತಮ್ಮ ತಮ್ಮ ಎಂದೇ ಮಾತಾನಾಡಿದ್ದಾಳೆ. ಆದರೆ ವೀರಯ್ಯ ಮಾತ್ರ ನಾನ ಅವಳನ್ನ ಲವ್ ಮಾಡ್ತೀನಿ ಎಂದು ಬಿಲ್ಡಪ್ ಕೊಟ್ಟಿದ್ದಾನೆ. ಮಹಿಳೆಯ ಊರಲ್ಲೂ ಅದನ್ನೇ ಹೇಳಿ ತಿರುಗಾಡಿದ್ದಾನೆ.

    ವೀರಯ್ಯ ಜಿಲ್ಲಾ ಆಸ್ಪತ್ರೆ ಮುಂಬಾಗ ಎಳನೀರು ಮಾರಾಟ ಮಾಡ್ತಾನೆ. ಈ ಹಿಂದೆನೇ ಹಲವಾರು ಬಾರಿ ಮಹಿಳೆ ಎಚ್ಚರಿಕೆ ಕೊಟ್ಟಿದ್ದಳು. ಆದರೂ ವೀರಯ್ಯ ಪದೇ ಪದೇ ಫೋನ್ ಮಾಡೋದು, ಮೆಸೇಜ್ ಮಾಡೋದು ಮಾಡಿದ್ದಾನೆ. ಹೀಗಾಗಿ ಮಹಿಳೆ ಇಂದು ನಡು ರಸ್ತೆಯಲ್ಲಿ ಚಪ್ಪಲಿ ಏಟು ನೀಡಿ, ಜಾಡಿಸಿ ಒದ್ದಿದ್ದಾಳೆ.

    ಇತ್ತ ಧರ್ಮದೇಟು ತಿಂದ ಯುವಕ ಪೊಲೀಸರನ್ನ ಕರೆಸಿ ಎಂದು ಬೇಡಿಕೊಳ್ಳುತ್ತಿದ್ದನು. ಕೊನೆಗೆ ಪೊಲೀಸರು ಬಂದು ವೀರಯ್ಯನನ್ನ ಕರೆದುಕೊಂಡು ಹೋದ್ರು. ಸದ್ಯ ವೀರಯ್ಯ ಕೊಪ್ಪಳ ಮಹಿಳಾ ಪೊಲೀಸರ ವಶದಲ್ಲಿದ್ದಾನೆ.

  • ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    ಪತಿ ಚಪ್ಪಲಿ ಕೊಡಿಸದ ಕೋಪಕ್ಕೆ ಮಗುವನ್ನ ನದಿಗೆ ಎಸೆದ್ಳು

    – ಗಂಡ, ಹೆಂಡ್ತಿ ಜಗಳದಲ್ಲಿ 3ರ ಕಂದಮ್ಮ ಬಲಿ

    ಲಕ್ನೋ: ಪತಿ ಚಪ್ಪಲಿ ಕೊಡಿಸದಿದ್ದಕ್ಕೆ ಮಹಿಳೆ ತನ್ನ ಮೂರು ವರ್ಷದ ಮಗುವನ್ನ ನದಿಗೆ ಎಸೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ಶವವನ್ನ ನದಿಯಿಂದ ಮೇಲೆಕ್ಕೆತ್ತಿದ್ದಾರೆ.

    ಬಾಂದಾ ಜಿಲ್ಲೆಯ ಗಂಛಾ ಗ್ರಾಮದ ಪಪ್ಪು ನಿಷಾದ್ ಮತ್ತು ರನ್ನೋ ನಡುವೆ ಸದಾ ಜಗಳ ನಡೆಯುತ್ತಿತ್ತು. ಶನಿವಾರ ಪಪ್ಪು ಪತ್ನಿಗೆ ಚಪ್ಪಲಿ ಕೊಡಿಸಲು ಹಿಂದೇಟು ಹಾಕಿದ್ದಾರೆ. ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿದೆ. ಕೆಲವೇ ದಿನಗಳಲ್ಲಿ ಹಣ ನೀಡೋದಾಗಿ ಪತಿ ಹೇಳಿದ್ದಾನೆ.

    ಶನಿವಾರ ಮಗು ಕಾಣದಿದ್ದಾಗ ಕುಟುಂಬಸ್ಥರು ಆತಂಕಗೊಂಡು ರನ್ನೋಳನ್ನ ವಿಚಾರಿಸಿದ್ದಾರೆ. ಆರಂಭದಲ್ಲಿ ತನಗೆ ಏನು ತಿಳಿಯದಂತೆ ನಾಟಕ ಮಾಡಿದ್ದಾಳೆ. ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ಮಗು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರನ್ನೋಳನ್ನ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನ ಕೇನ್ ನದಿಯಲ್ಲಿ ಎಸೆದಿರೋದಾಗಿ ಹೇಳಿದ್ದಾಳೆ.

    ಪೊಲೀಸರು ನದಿಗೆ ತೆರಳಿ ಸ್ಥಳೀಯ ಮೀನುಗಾರರು ಮತ್ತು ಗ್ರಾಮಸ್ಥರ ಸಹಾಯದೊಂದಿಗೆ ಮಗುವಿಗಾಗಿ ಶೋಧ ನಡೆಸಿದ್ದಾರೆ. ಕೆಲ ಗಂಟೆ ಬಳಿಕ ಮಗುವಿನ ಮೃತದೇಹ ಪತ್ತೆಯಾಗಿದೆ. ಆದ್ರೆ ರನ್ನೋ ಮಗುವನ್ನ ಎಷ್ಟೊತ್ತಿಗೆ ನದಿಗೆ ಎಸೆದಿರುವ ಬಗ್ಗೆ ಹೇಳದೇ ಮೌನವಾಗಿದ್ದಾಳೆ. ಪ್ರಕರಣಂ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯನ್ನ ಬಂಧಿಸಿದ್ದಾರೆ.

     

  • ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

    ತಿಂಗಳಲ್ಲಿ 24 ಗಂಟೆ ಚಪ್ಪಲಿ ಧರಿಸಿ – 4 ಲಕ್ಷ ರೂ. ಸಂಬಳ ಪಡೆಯಿರಿ

    – 2 ದಿನ 12 ಗಂಟೆ ಚಪ್ಪಲಿ ಧರಿಸಿದರೆ ಸಂಬಳ

    ಲಂಡನ್: ನೀವು ಕೆಲಸ ಹುಡುಕುತ್ತಿದ್ದೀರಾ, ಇಲ್ಲಿದೆ ಅದ್ಭುತ ಅವಕಾಶ. ಫುಟ್‍ವೇರ್ ಕಂಪನಿಯೊಂದು ಕೆಲಸದ ಜಾಹೀರಾತು ಪ್ರಕಟಿಸಿದ್ದು, ತಿಂಗಳಲ್ಲಿ 24 ಗಂಟೆಗಳ ಕಾಲ ಚಪ್ಪಲಿ ಧರಿಸಿದರೆ 4 ಲಕ್ಷ ರೂ. ಸಂಬಳ ನೀಡುವುದಾಗಿ ಘೋಷಿಸಿದೆ.

    ಬ್ರಿಟನ್‍ನ ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥೆ ಈ ಭರ್ಜರಿ ಕೆಲಸ ನೀಡುತ್ತಿದ್ದು, ‘ಸ್ಲಿಪ್ಪರ್ ಟೆಸ್ಟರ್’ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ. ಇದಕ್ಕಾಗಿ ಆಕರ್ಷಕ ಸಂಬಳವನ್ನು ಸಹ ಘೋಷಿಸಿದೆ. ಕಂಪನಿಯ ಇತ್ತೀಚಿನ ಹೊಸ ಚಪ್ಪಲಿ ಹಾಗೂ ಶೂಗಳ ವಿನ್ಯಾಸ ಪರೀಕ್ಷಿಸಲು ಹಾಗೂ ಪರಿಶೀಲಿಸಲು ಮುಂದಾಗಿದ್ದು, ಇದಕ್ಕಾಗಿ ಸ್ಲಿಪ್ಪರ್ ಟೆಸ್ಟರ್ಸ್ ಗಳನ್ನು ಕೆಲಸಕ್ಕೆ ಆಹ್ವಾನಿಸಿದೆ.

    ಕೊರೊನಾ ಕಾರಣದಿಂದ ಕೆಲಸ ಕಳೆದುಕೊಂಡು ಮನೆಯಲ್ಲೇ ಇರುವವರಿಗೆ ಸೂಕ್ತ ಕೆಲಸವಾಗಿದ್ದು, ಅಲ್ಲದೆ ಲಾಕ್‍ಡೌನ್ ಇರುವ ಪ್ರದೇಶದ ಜನರು ಸಹ ಟ್ರೈ ಮಾಡಬಹುದಾಗಿದೆ. ಆದರೆ ಸಂಸ್ಥೆ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ಮಾತ್ರ ಅವಕಾಶ ನೀಡುತ್ತಿದ್ದು, ಕೆಲಸಕ್ಕೆ ಆಯ್ಕೆಯಾದವರು ಕಂಪನಿ ನೀಡುವ ಚಪ್ಪಲಿಗಳನ್ನು ತಿಂಗಳಿಗೆ ಕೇವಲ ಎರಡು ದಿನ, ಪ್ರತಿ ದಿನ 12 ಗಂಟೆಗಳ ಕಾಲ ಧರಿಸಬೇಕು. ಹೀಗೆ ಒಂದು ವರ್ಷ ಕೆಲಸ ಮಾಡಬೇಕು. ಬಳಿಕ ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಬೇಕು. ಸಂಸ್ಥೆ ಅವರಿಗೆ ಪ್ರತಿ ತಿಂಗಳು ನಾಲ್ಕು ಲಕ್ಷ ರೂ. ಸಂಬಳ ನೀಡಲಿದೆ.

    ಇದು ಉದ್ಯೋಗ ಮಾರುಕಟ್ಟೆಯ ಸಿಂಡ್ರೆಲ್ಲಾ ಎಂದು ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥೆ ಹೇಳಿದೆ. ಅಲ್ಲದೆ ಲಾಕ್‍ಡೌನ್ ವೇಳೆ ಮಾಡಬಹುದಾದ ಸೂಕ್ತ ಕೆಲಸವಾಗಿದೆ. ವಿದ್ಯಾರ್ಥಿಗಳು, ಪಾರ್ಟ್‍ಟೈಮ್ ಕೆಲಸ ಮಾಡುವವರು ಅಥವಾ ಮನೆಯಲ್ಲೇ ಇರುವ ಪೋಷಕರಿಗೆ ಸರಿಯಾಗುತ್ತದೆ ಎಂದು ಬೆಡ್‍ರೂಮ್ ಅಥ್ಲೆಟಿಕ್ಸ್ ಸಂಸ್ಥಾಪಕ ಹೊವಾರ್ಡ್ ವೆಟರ್ ಹೇಳಿದ್ದಾರೆ. ಈ ಜಾಹೀರಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಆಸಕ್ತರು ಬೆಡ್‍ರೂಮ್ ಅಥ್ಲೆಟಿಕ್ಸ್ ವೆಬ್‍ಸೈಟ್‍ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ನೀವು ಈ ಕೆಲಸಕ್ಕೆ ಯಾಕೆ ಸೂಕ್ತ ವ್ಯಕ್ತಿ ಎಂಬ ಕಾರಣವನ್ನು ನೀಡಬೇಕಿದೆ. ಬಳಿಕ ಸಂಸ್ಥೆ ಇಬ್ಬರನ್ನು ಮಾತ್ರ ಆಯ್ಕೆ ಮಾಡಲಿದೆ.

  • 7 ವರ್ಷದ ಮಗಳಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿಸಿದ ತಂದೆ ಅರೆಸ್ಟ್

    7 ವರ್ಷದ ಮಗಳಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗ ಥಳಿಸಿದ ತಂದೆ ಅರೆಸ್ಟ್

    – ಹೊಡೆತದ ಪರಿಣಾಮ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿ
    – ತಾಯಿ ಜೊತೆ ವಾಸವಾಗಿದ್ದ ಮಕ್ಕಳು

    ತಿರುವನಂತಪುರಂ: ಏಳು ವರ್ಷದ ತನ್ನ ಮಗಳಿಗೆ ಚಪ್ಪಲಿಯಲ್ಲಿ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ ಪಾಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿ ತಂದೆಯನ್ನು ರಾಜೇಶ್(41) ಎಂದು ಗುರುತಿಸಲಾಗಿದೆ. ಈತ ಚಿರಾಯಿಂಕಿಜು ನಿವಾಸಿ. ರಾಜೇಶ್ ಹಾಗೂ ಪತ್ನಿ ನಡುವೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪ ಇದ್ದು, ಮಾತುಕತೆ ಇರಲಿಲ್ಲ. ಮಕ್ಕಳು ಕೂಡ ತಾಯಿ ಜೊತೆ ಬೇರೆಯಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಒಂದು ದಿನ ರಾಜೇಶ್ ಮಕ್ಕಳನ್ನು ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ.

    ಮನೆಗೆ ಕರೆದುಕೊಂಡು ಬಂದ ಬಳಿಕ ರಾಜೇಶ್ ಕಂಠಪೂರ್ತಿ ಕುಡಿದು ಬಂದು ಮಗಳಿಗೆ ಪ್ರತಿದಿನ ಹೊಡೆಯುತ್ತಿದ್ದನು. ಘಟನೆ ನಡೆದ ದಿನ ರಾಜೇಶ್ ಕುಡಿದು ಬಂದು ಮಗಳಿಗೆ ಚಪ್ಪಲಿಯಲ್ಲಿ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಗಾಯಗೊಂಡ ಬಾಲಕಿ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಇದನ್ನು ಗಮನಿಸಿದ ನೆರೆಹೊರೆಯವರು ಕೂಡಲೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

    ಇತ್ತ ಆಸ್ಪತ್ರೆ ಸಿಬ್ಬಂದಿ ಚೈಲ್ಡ್ ಲೈನ್ ಹಾಗೂ ಕಡಕ್ಕವೂರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಬೇರೆ ಮನೆಯಲ್ಲಿ ವಾಸವಾಗಿರುವ ರಾಜೇಶ್ ಪತ್ನಿಯನ್ನು ಠಾಣೆಗೆ ಕರೆದು ಮಕ್ಕಳನ್ನು ಅವರಿಗೆ ಒಪ್ಪಿಸಿದ್ದಾರೆ.

  • ಚಪ್ಪಲಿಯಲ್ಲಿ ಚಿನ್ನ ಇಟ್ಟು ಸಾಗಿಸ್ತಿದ್ದ – ಏರ್ ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ

    ಚಪ್ಪಲಿಯಲ್ಲಿ ಚಿನ್ನ ಇಟ್ಟು ಸಾಗಿಸ್ತಿದ್ದ – ಏರ್ ಪೋರ್ಟ್ ನಲ್ಲಿ ಸಿಕ್ಕಿ ಬಿದ್ದ

    ಚೆನ್ನೈ: ಚಪ್ಪಲಿಯಲ್ಲಿ ಚಿನ್ನವನ್ನು ಇಟ್ಟು ಸಾಗಿಸುತ್ತಿದ್ದ ವ್ಯಕ್ತಿ ಏರ್ ಪೋರ್ಟ್ ನಲ್ಲಿ   ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

    ಏರ್ ಪೋರ್ಟ್ ನಲ್ಲಿ  ವ್ಯಕ್ತಿಯೊಬ್ಬನ ಚಪ್ಪಲಿ ಕಿತ್ತು ಹೋಯಿತ್ತು ಎಂದು ಸಹಾಯ ಮಾಡಲು ಸಿಬ್ಬಂದಿ ಹೋದಾಗ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸಮೇತ ಆರೋಪಿ ಸಿಕ್ಕಿಬಿದ್ದಿರುವ ಘಟನೆ ಚೆನ್ನೈ ಏರ್‍ಪೋರ್ಟ್ ನಲ್ಲಿ ನಡೆದಿದೆ.

    ಆರೋಪಿ ತಮಿಳುನಾಡಿನ ರಾಮನಾಥಪುರಂನ ಮೊಹಮ್ಮದ್ ಹಾಸಿಂ ಅಲಿ(21) ಎಂದು ಗುರುತಿಸಲಾಗಿದೆ. ಈತ ದುಬೈನಿಂದ ಚೆನ್ನೈಗೆ ಬರುತ್ತಿದ್ದನು. ಆಗ ವಿಮಾನ ನಿಲ್ದಾಣದಲ್ಲಿ ಈತ ಧರಿಸಿದ್ದ ಚಪ್ಪಲಿ ಕಿತ್ತು ಹೋಗಿದೆ. ಇದನ್ನು ಗಮನಿಸಿದ ಕಸ್ಟಮ್ ಇಲಾಖೆಯ ಸಿಬ್ಬಂದಿ ಚಪ್ಪಲಿಯನ್ನು ಹಿಂದಿರುಗಿಸಲು ಹೋದಾಗ ಸಿಬ್ಬಂದಿಗೆ ಅನುಮಾನ ಬಂದಿದೆ.

    ಸಾಮಾನ್ಯವಾಗಿ ಚಪ್ಪಲಿಗೆ ಅಗಲವಾದ ಪಟ್ಟಿ ಇರುತ್ತದೆ. ಆದರೆ ಈ ಚಪ್ಪಲಿಗೆ ಕೊಂಚ ವಿಭಿನ್ನವಾಗಿ ಇದೆ. ಹಾಗೆ ಭಾರವಾಗಿದೆ ಎಂದು ಅನುಮಾನದಿಂದ ಅಧಿಕಾರಿಗಳು ಪರಿಶೀಲಸಿ ನೋಡಿದಾಗ ಚಪ್ಪಲಿಯ ಪಟ್ಟಿಯಲ್ಲಿ ಸಣ್ಣ ರಂಧ್ರ ಕೊರೆದು ದ್ರವೀಕೃತ ಚಿನ್ನವನ್ನು ಸುತ್ತಿಟ್ಟಿದ್ದು ಪತ್ತೆಯಾಗಿದೆ. ಈ ಹಿಂದೆಯೂ 14.12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಈತ ಹೀಗೆ ಸಾಗಿಸಿದ್ದನು ಎಂದು ತಿಳಿದು ಬಂದಿದೆ.