Tag: ಚಕ್ರವರ್ತಿ ಚಂದ್ರಚೂಡ

  • ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಎಷ್ಟು ದಿನ ಫ್ರೆಂಡ್ ನೀವು ನನಗೆ: ಚಕ್ರವರ್ತಿ ವಿರುದ್ಧ ರೊಚ್ಚಿಗೆದ್ದ ಶಮಂತ್

    ಪ್ರತಿವಾರ ಬಿಗ್‍ಬಾಸ್ ಮನೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪರ್ಧಿಗೆ ಮನೆಯ ಎಲ್ಲಾ ಸದಸ್ಯರು ಸೇರಿ ಕಳಪೆ ಬೋರ್ಡ್ ಹಾಕುವುದು ನಿಯಮ. ಅದರಂತೆ ಈ ವಾರ ಮನೆಮಂದಿಯೆಲ್ಲಾ ಒಂದೊಂದು ಕಾರಣಗಳನ್ನು ಹೇಳಿ ಚಕ್ರವರ್ತಿ ಚಂದ್ರಚೂಡ್‍ಗೆ ಕಳಪೆ ಬೋರ್ಡ್ ನೀಡಿದ್ದಾರೆ.

    ಈ ಮಧ್ಯೆ ಇಷ್ಟು ದಿನ ಒಳ್ಳೆಯ ಸ್ನೇಹಿತರಾಗಿದ್ದ ಶಮಂತ್ ಹಾಗೂ ಚಕ್ರವರ್ತಿ ನಡುವೆ ಇದೇ ಮೊದಲ ಬಾರಿಗೆ ಜಗಳ ನಡೆದಿದೆ. ಕಳಪೆ ಬೋರ್ಡ್ ನೀಡಲು ಶಮಂತ್ ನೀಡಿದ್ದ ಕಾರಣವನ್ನು ವಿರೋಧಿಸಿದ ಚಕ್ರವರ್ತಿಯವರು, ಕಳಪೆ ಬೋರ್ಡ್ ಹಾಕುವ ಮುನ್ನವೇ ಶಮಂತ್ ನನಗೆ ಮೊದಲೇ ಹೇಳಿದ್ದರು, ನಿಮಗೆ ಕಳಪೆ ಬೋರ್ಡ್ ನೀಡುತ್ತೇನೆ ಎಂದು ದಿವ್ಯಾ ಅರವಿಂದ್ ಜೊತೆ ಮಾತನಾಡುತ್ತಿರುತ್ತಾರೆ.

    ಈ ವೇಳೆ ಶಮಂತ್, ದಿವ್ಯಾ ಉರುಡುಗರವರನ್ನು ನೀವು ಹಿಡಿದು ಕೊಳ್ಳಬಾರದಾಗಿತ್ತು. ನಿಮ್ಮದು ಮಿಸ್‍ಟೇಕ್ ಇದೆ, ಅದು ಬೇಕು, ಬೇಕು ಎಂದು ನೀವು ಮಾಡಿಲ್ಲ. ಇದೊಂದು ತಪ್ಪು ಬಿಟ್ಟರೆ ಬೇರೆ ಏನು ಇಲ್ಲ ಎಂದು ಹೇಳುತ್ತಾರೆ. ಅಲ್ಲದೇ ಇದೇ ವೇಳೆ ಪ್ರಿಯಾಂಕ ವಿಚಾರವಾಗಿ ಮಾತನಾಡಿದ ಚಕ್ರವರ್ತಿಯವರು, ಸಂದರ್ಭ ಬಂದಾಗ ಕೈ ಎತ್ತಿ ಬಿಡುತ್ತೀಯಾ, ಇದೇನಾ ನೀನು ವಿಶ್ವಾಸಕ್ಕೆ ಕೊಡುವ ಗೌರವ, ಮೋಸ ಮಾಡಿ ಬಿಡುತ್ತೀಯಾ, ಸುಳ್ಳು ಹೇಳಿ ನುಣುಚಿಕೊಂಡು ಬಿಡುತ್ತೀಯಾ, ತಪ್ಪಿಗೆ ತಪ್ಪು ಎಂದು ಹೇಳು, ಸರಿಗೆ ಸರಿ ಅಂತ ಹೇಳು, ನೀನು ಯಾವ ಸ್ನೇಹಿತರಿಗೆ ಬೇಕಾದರೂ ಕತ್ತು ಕುಯ್ದುಬಿಡುತ್ತೀಯಾ ಎಂದು ಬೈಯ್ಯುತ್ತಾರೆ.

    ಇದರಿಂದ ರೊಚ್ಚಿಗೆದ್ದ ಶಮಂತ್, ಯಾವುದಕ್ಕೊ, ಯಾವುದೋ ಪದ ಬಳಸಬೇಡಿ. ನಾನು ಕತ್ತು ಕುಯ್ಯುವ ಕೆಲಸ ಮಾಡಿಲ್ಲ. ನಾನು ಇಷ್ಟು ವಾರ ಕಳಪೆ ಹಾಕಿದವರು ಯಾವತ್ತು ಕೂಡ ನನಗೆ ಕತ್ತು ಕುಯ್ದೆ ಎಂದು ಹೇಳಿಲ್ಲ. ಹೇಳಿದ ಕಾರಣವನ್ನು ಸ್ವೀಕರಿಸಿ, ನನ್ನದೇ ಎಲ್ಲೋ ತಪ್ಪು ಇರಬಹುದು ಎಂದು ಸುಮ್ಮನೇ ಆಗಿದ್ದಾರೆ. ನನ್ನನ್ನು ಕಾರಣ ಕೇಳಿದ್ದಾರೆ, ನಾನು ಕಾರಣ ಹೇಳಿದ್ದೇನೆ ಅಷ್ಟೇ. ಕತ್ತು ಕುಯ್ಯೊದು ನಂಬಿಕೆ ದ್ರೋಹ, ಫ್ರೆಂಡ್ಸ್‍ನ ಕಳೆದುಕೊಳ್ಳುವುದು, ನಿಮಗೆ ಇದೆಲ್ಲದರ ಬಗ್ಗೆ ಮಾತನಾಡಲು ಯಾವುದೇ ಹಕ್ಕಿಲ್ಲ. ಎಷ್ಟು ದಿನ ಫ್ರೆಂಡ್ ನೀವು ನನಗೆ, ನನ್ನ ಬಗ್ಗೆ ಏನು ಗೊತ್ತು ನಿಮಗೆ, ಹೇಗೆ ಕತ್ತು ಕುಯ್ದೆ ಎಂದು ಹೇಳುತ್ತೀರಾ. ಕತ್ತು ಕುಯ್ದನಾ ನಾನು ನಿಮಗೆ, ಸುಮ್ಮನೆ ರಾಂಗ್ ಸ್ಟೇಟ್‍ಮೆಂಟ್ ಮಾಡಿ, ಇಲ್ಲದೇ ಇರುವ ಅನಿಸಿಕೆಯನ್ನು ಸೃಷ್ಟಿಸುವುದನ್ನು ಬಿಡಿ ಮೊದಲು, ನಾನು ಏನು ಬೇಕಾದರೂ ಮಾಡುತ್ತೇನೆ. ನಿಮಗೆ ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿಲ್ಲ ಎಂದರೆ ಮಾತನಾಡಬಾರದು, ಮಾತನಾಡಬೇಡಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ:ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್

  • ಅಹಂಕಾರ ಮಾಡಿದ್ರೆ ಮುದ್ದು ಮಾಡ್ತೀನಿ, ದುರಾಂಕಾರ ತೋರಿದ್ರೆ ಮದ್ದಾನೆ ಆಗ್ತೀನಿ: ಚಕ್ರವರ್ತಿ

    ಅಹಂಕಾರ ಮಾಡಿದ್ರೆ ಮುದ್ದು ಮಾಡ್ತೀನಿ, ದುರಾಂಕಾರ ತೋರಿದ್ರೆ ಮದ್ದಾನೆ ಆಗ್ತೀನಿ: ಚಕ್ರವರ್ತಿ

    ಬಿಗ್‍ಬಾಸ್ ಮೊದಲನೇ ಇನ್ನಿಂಗ್ಸ್ ಕೊರೊನಾದಿಂದಾಗಿ ರದ್ದಾಗಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕ ದಿನದಲ್ಲೇ ಚಕ್ರವರ್ತಿ ಚಂದ್ರಚೂಡ್ ಅವರು ಪ್ರತಿಸ್ಪರ್ಧಿಗಳಿಗೆ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.

    6 ವಾರಗಳ ಕಾಲ ಮನೆಯಲ್ಲಿ ಇದ್ದು ಮನೆಯಿಂದ ಹೊರ ಹೋಗಿದ್ದ ಚಕ್ರವರ್ತಿ, ಇದೀಗ ಸೆಕೆಂಡ್ ಇನ್ನಿಂಗ್ಸ್ ಆಡಲು ಬಿಗ್ ಮನೆಗೆ ಕಾಲಿಟ್ಟಿದ್ದಾರೆ. ಈ ಸಂದರ್ಭ ಸುದೀಪ್ ಅವರು ಮನೆಯಿಂದ ಹೊರ ಹೋದವರು ಮತ್ತೆ ಬಂದಿದ್ದೀರಿ. ಇದೀಗ ಏನು ಬದಲಾವಣೆಯೊಂದಿಗೆ ಬಂದಿದ್ದೀರಿ ಎಂದಾಗ ಚಕ್ರವರ್ತಿ, ನನ್ನಲ್ಲಿ ಒಂದು ಸ್ವಭಾವ ಇದೆ. ನಾನು ಅಹಂಕಾರ ಮಾಡಿದ್ರೆ ಮುದ್ದು ಮಾಡ್ತೀನಿ, ದುರಾಂಕಾರ ತೋರಿಸಿದ್ರೆ ಮದ್ದಾನೆ ಆಗ್ತೀನಿ. ಈ ಹಿಂದೆ ಅಣ್ಣ ಅಂದ್ರೆ ಅವರು ತಂಗಿ ಅಂದುಕೊಂಡಿದ್ದೆ, ಅಪ್ಪ ಎಂದರೆ ಅವರು ಮಗಳು ಅಂದುಕೊಂಡಿದ್ದೆ. ಆದರೆ ಆ ಎರಡು ಹೆಸರಲ್ಲಿ ಸಿಕ್ಕಾಪಟ್ಟೆ ಬೆನ್ನಿಗೆ ಚೂರಿ ಬಿದ್ದಿದೆ. ಈ ಬಾರಿ ಆ ಚೂರಿನ ಅವರ ಕೈಯಲ್ಲಿ ತೆಗಿಸಬೇಕೆಂದುಕೊಂಡು ಬಂದಿದ್ದೇನೆ ಎಂದು ಪ್ರತಿಸ್ಪರ್ಧಿಗಳಿಗೆ ವಾರ್ನ್ ಮಾಡಿದ್ದಾರೆ. ಇದನ್ನೂ ಓದಿ:  ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ಬಿಗ್‍ಬಾಸ್‍ನಲ್ಲಿ ನನ್ನನ್ನು ನೋಡಿ, ಏನೋ ಹೊಸತನ ಕಲಿಕೆಗೆ ಇದೆ. ನೀನು ಹೋಗಿ ಇನ್ನಷ್ಟು ಬದಲಾವಣೆ ಆಗಿದ್ದಿ, ಹೀಗೆ ಮುಂದುವರಿ ಎಂದು ನನ್ನ ಆಪ್ತರು ಸಲಹೆ ನೀಡಿದ್ದಾರೆ. ಹಾಗೆ ಕರ್ನಾಟಕದ ಜನ ನನಗೆ ಭಯೋತ್ಪಾದಕನ ರೂಪದ ಬುದ್ಧ ಎಂಬ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಸಂತೋಷ ಪಟ್ಟರು.

    ಈ ಮೊದಲು ಮಾತು ಪ್ರಾರಂಭಿಸಿದ ಚಕ್ರವರ್ತಿ, ನನ್ನನ್ನು ಮೊದಲು ಮನುಷ್ಯ ಅಂದುಕೊಂಡಿದ್ದರು, ಇದೀಗ ತುಂಬಾ ಒಳ್ಳೆ ಮನುಷ್ಯ ಅಂದುಕೊಂಡಿದ್ದಾರೆ. ಈ ಹಿಂದೆ ನಾನು ಒರಟು ಮನುಷ್ಯ ಹಾಗಾಗಿ ಹೆಣ್ಣು ಮಕ್ಕಳು ಪ್ರೀತಿ ಮಾಡಲ್ಲ ಅಂದುಕೊಂಡಿದ್ದೆ. ಇಲ್ಲಿಂದ ಹೊರ ಹೋದ ಬಳಿಕ ತುಂಬಾ ಹೆಣ್ಣು ಮಕ್ಕಳು ಪ್ರೀತಿಸಲು ಮತ್ತು ಅಭಿಮಾನಿಸಲು ಪ್ರಾರಂಭಿಸಿದ್ದಾರೆ ಎಂದು ತಮ್ಮ ಖುಷಿಯನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಟೂ ವೀಲರ್ ಮಾತ್ರವಿಲ್ಲ – ದಿವ್ಯಾ ಕಾಲೆಳೆದ ಸುದೀಪ್

  • ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಗೆಳೆಯ ಚಕ್ರವರ್ತಿಗೆ ಸಂಬರಗಿ ಚಾಲೆಂಜ್

    ಮಂಗಳವಾರದ ಬಿಗ್‍ಬಾಸ್ ಎಪಿಸೋಡ್ ಅಕ್ಷರಷಃ ರಣಾಂಗಣವಾಗಿ ಬದಲಾಗಿತ್ತು. ಯಾರು ನಂಬರ್ ಒನ್ ವಿಚಾರದಲ್ಲಿ ಅನಾವಶ್ಯಕ ವಿಚಾರಗಳನ್ನ ಮುನ್ನಲೆಗೆ ತಂದ ಪ್ರಶಾಂತ್ ಸಂಬರಗಿ ವಿರುದ್ಧ ಮತ್ತೊಮ್ಮೆ ಇಡೀ ಮನೆ ಕೆಂಡವಾಗಿತ್ತು. ನಿನ್ನ ವಾದಗಳನ್ನ ಸರಿಯಾದ ಮಾರ್ಗದಲ್ಲಿ ಮಂಡಿಸು ಎಂದು ಸಲಹೆ ಹೇಳಿದ ಗೆಳೆಯ ಚಕ್ರವರ್ತಿಗೆ ಪ್ರಶಾಂತ್ ಸಂಬರಗಿ ಚಾಲೆಂಜ್ ಹಾಕಿದರು.

    ಈ ಟಾಸ್ಕ್ ನಲ್ಲಿ ವೋಟಿಂಗ್ ಇರಲಿಲ್ಲ. ಆದ್ರೂ ವೋಟಿಂಗ್ ಮಾಡಿ ನನಗೆ 11ನೇ ಸ್ಥಾನ ನೀಡಿದ್ರು. ಎಲ್ಲ ಆಟ ಮುಗಿದ್ಮೇಲೆ ಮಾತಾಡೋದು ತಪ್ಪು. ಐದರಿಂದ 11ನೇ ಸ್ಥಾನಕ್ಕೆ ಬಂದಾಗಲೇ ಮಾತಾಡಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು ಎಂದು ಸಲಹೆ ನೀಡಿದರು.

    ಈ ವೇಳೆ ನಿಗಿ ನಿಗಿ ಕೆಂಡವಾಗಿದ್ದ ಪ್ರಶಾಂತ್ ಸಂಬರಗಿಯ ಸಮಾಧಾನಕ್ಕೆ ಶಮಂತ್ ಮುಂದಾದ್ರು. ನಿಮ್ಮ ಪೆಟ್ರೋಲ್, ಫ್ಯೂಯೆಲ್ ಸೇವ್ ಮಾಡಿಕೊಳ್ಳಿ. ಮುಂದಿನ ನಾಲ್ಕೈದು ವಾರ ನಿಮ್ಮ ಆಟ ತೋರಿಸಿ ಅಂತ ಹೇಳಿದ್ರು. ಆದ್ರೆ ಕೋಪದಿಂದ ಕುಣಿಯುತ್ತಿದ್ದ ಸಂಬರಗಿ, ಇದು ದ್ವೇಷದ ಆಟ ಎಂದು ಹೇಳಿ ಇಡೀ ಮನೆ ಸದಸ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ರು.

    ಇನ್ನೂ ಅಲ್ಲಿಯೇ ನಿಂತಿದ್ದ ಚಕ್ರವರ್ತಿ, ಆಟದ ವೇಳೆ ಪ್ರಶಾಂತ್ ಸಂಬರಗಿಯ ಕೆಲ ಹೇಳಿಕೆಗಳನ್ನ ಖಂಡಿಸಿದ್ರು. ದಿವ್ಯಾ ಸುರೇಶ್ ಜೊತೆ ಚೆನ್ನಾಗಿಯೇ ಮಾತಾಡ್ತಿಯಾ. ಮಂಜು ವಿಷಯದಲ್ಲಿ ಆಕೆ ಹೆಸರನ್ನ ಬಳಸಿಕೊಳ್ಳೋದು ತಪ್ಪು. ಮಂಜು ಕಾಮಿಡಿ ಇಷ್ಟ ಆಗಲ್ಲ ಅಂದ್ರೆ ನೇರವಾಗಿ ಹೇಳು. ಪದೇ ಪದೇ ದಿವ್ಯಾ ಹೆಸರನ್ನ ತೆಗೆದುಕೊಳ್ಳಬೇಡ. ಎಲ್ಲ ವಿಷಯಗಳನ್ನ ತಾಳ್ಮೆಯಿಂದ ಯೋಚಿಸಿ ಬಗೆಹರಿಸಿಕೊಳ್ಳಬೇಕೇ ಹೊರತು ಹೀಗೆ ಕೂಗಾಡಿಲ್ಲ ಎಂದು ಸಂಬರಗಿಗೆ ಚಕ್ರವರ್ತಿ ತಿಳಿ ಹೇಳಿದರು.

    ನಾನು ಇನ್ಮುಂದೆ ಹೆಣ್ಣಿನ ಹೆಸರು ಬಳಸಬಾರದು ಅಂತ ಡಿಸೈಡ್ ಮಾಡಿದ್ದೀನಿ. ನಿನಗಿಂತ ಹೆಚ್ಚು ಮಹಿಳೆಯರನ್ನ ಗೌರವಿಸುತ್ತೇನೆ ಮತ್ತು ಪೂಜಿಸುತ್ತೇನೆ. ಯಾರ ವೈಯಕ್ತಿಕ ವಿಚಾರಗಳನ್ನು ಮಾತಾಡಿಲ್ಲ. ಯಾರ ಪರ್ಸನಲ್ ವಿಚಾರ ಮಾತಾಡಿದ್ದೀನಿ ಅಂತ ತೋರಿಸು ಎಂದು ಚಕ್ರವರ್ತಿಗೆ ಸಂಬರಗಿ ಸವಾಲು ಹಾಕಿದರು.

  • ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಅಂದಿದ್ಯಾಕೆ ಚಂದ್ರಚೂಡ ?

    ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಅಂದಿದ್ಯಾಕೆ ಚಂದ್ರಚೂಡ ?

    ಬೆಂಗಳೂರು: ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಕೊಟ್ಟು ಸದಾ ಮನೆಯಲ್ಲಿ ಒಂದಲ್ಲ ಒಂದು ಕಿರಿಕ್ ಮಾಡುವ ಚಕ್ರವರ್ತಿ ಚಂದ್ರಚೂಡ ಇದೀಗ ಬಿಗ್ ಮನೆಯ ಸ್ಪರ್ಧಿಗಳಲ್ಲಿ ನನಗೆ ಚಪ್ಪಲಿಯಲ್ಲಿ ಹೊಡಿಯಿರಿ ಎನ್ನುವ ಮೂಲಕ ಮನೆಯವರೆಲ್ಲರಿಗೂ ಪಂಥಾಹ್ವಾನ ನೀಡಿದ್ದಾರೆ.

    ಬಿಗ್‍ಬಾಸ್ ನೀಡಿದ ಟಾಸ್ಕ್ ಒಂದನ್ನು ಮಂಜು, ಅರವಿಂದ್ ಮತ್ತು ರಾಜೀವ್ ಅವರು ಮಾಡಿದರು. ಇದರ ಕುರಿತು ಮಾತಿಗಿಳಿದ ಚಕ್ರವರ್ತಿ ಬಿಗ್‍ಮನೆಯಲ್ಲಿ ಟಾಸ್ಕ್ ಕೊಟ್ಟಾಗ ನಾವು ಆಟ ಆಡಿ ತೋರಿಸುತ್ತೇವೆ ಎಂದಾಗ ಕೆಲವರು ಈ ಆಟವನ್ನು ಇಂತವರೇ ಆಡಲಿ ಎಂದು ಬೊಟ್ಟು ಮಾಡುತ್ತಾರೆ. ನಾವು ಆಟವಾಡಲು ಸಿದ್ಧರಾದರೆ. ಬೇಡ ಎಂದು ಹೇಳುತ್ತಾರೆ. ಅಂತವರ ವಿರುದ್ಧ ನಾನು ಧ್ವನಿ ಎತ್ತುತ್ತೇನೆ ಆದರೆ ನನ್ನಿಂದ ಮನೆಯಲ್ಲಿ ಜಗಳವಾಗುವುದು ಬೇಡ ಎಂದು ಸುಮ್ಮನಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದನ್ನು ಕೇಳಿಸಿಕೊಂಡ ಮಂಜು, ಅರವಿಂದ್ ಮತ್ತು ರಾಜೀವ್ ನೀವು ಆಟ ಆಡಬಾರದು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ನಾನು ಆಟವಾಡಲು ಹೊರಟಾಗ ನಿಧಿ ಅವರು ರಾಜೀವ್ ಅವರು ಆಟವಾಡಲಿ. ನೀವು ಆಟವಾಡುವುದು ಬೇಡ ಎಂದಿದ್ದರು ಎಂದರು. ಇದಕ್ಕೆ ಗರಂ ಆದ ನಿಧಿ ಎಲ್ಲದಕ್ಕೂ ನನ್ನ ಹೆಸರನ್ನು ತೆಗೆದುಕೊಳ್ಳಬೇಡಿ ನಾನು ನೀವು ಆಡಬಾರದು ಎಂದು ಹೇಳಿಲ್ಲ ಎಂದರು.

    ನಂತರ ಚಕ್ರವರ್ತಿ ನಾನು ಆಡುತ್ತೇನೆ ಎಂದು ಕೈ ಎತ್ತಿದಾಗ ಬೇಡ ರಾಜೀವ್ ಆಡಲಿ ಎಂದು ನಿಧಿ ಹೇಳಿದ್ದು ಕೇಳಿಸಿಕೊಂಡಿದ್ದೇನೆ ಎಂದರು. ನಂತರ ಮಾತಿನ ಚಕಮಕಿ ಜೋರಾಗಿ ಚಕ್ರವರ್ತಿ ನಾನು ರಘು, ಸಂಬರಗಿ ಮತ್ತು ಶಮಂತ್ ಜೊತೆಗಿದ್ದೆ ಆ ಸಂದರ್ಭ ನಾನು ನಿಧಿ ಅವರ ಬಗ್ಗೆ ಮಾತನಾಡಿದ್ದೆ ಎಂದು ಅವರು ಹೇಳಿದರೆ ನನಗೆ ನೀವು ಚಪ್ಪಲಿಯಲ್ಲಿ ಹೊಡಿಯಿರಿ ಎಂದರು.

    ನಂತರ ಮಾತು ಮುಂದುವರಿಸಿದ ನಿಧಿ ಚಕ್ರವರ್ತಿ ಅವರು ಯಾಕೆ ಸುಮ್ಮನೆ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಕಾರಾರು ಎತ್ತಿದರು. ಸದಾ ಒಂದಲ್ಲ ಒಂದು ವಿಷಯಗಳನ್ನು ಹಿಡಿದುಕೊಂಡು ರೆಬಲ್ ಆಗುವ ಚಕ್ರವರ್ತಿ ಇದೀಗ ನಿಧಿ ಮೇಲೆ ಆಟದ ವಿಷಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎನ್ನುವ ಮೂಲಕ ಮಾತಿನೇಟು ನೀಡಿದ್ದಾರೆ.

  • ಪ್ರಿಯಾಂಕ ತಿಮ್ಮೇಶ್ ಬಗ್ಗೆ ಚಕ್ರವರ್ತಿ, ಸಂಬರಗಿ ಗುಸು ಗುಸು

    ಪ್ರಿಯಾಂಕ ತಿಮ್ಮೇಶ್ ಬಗ್ಗೆ ಚಕ್ರವರ್ತಿ, ಸಂಬರಗಿ ಗುಸು ಗುಸು

    ಹೊಸ ಸ್ಪರ್ಧಿ ಪ್ರಿಯಾಂಕ ಆಟ ಹೇಗೆ ಆಡ್ತಾರೆ ಅನ್ನೋದರ ಬಗ್ಗೆ ಪ್ರಶಾಂತ್ ಸಂಬರಗಿ ಮತ್ತು ಚಕ್ರವರ್ತಿ ಚಂದ್ರಚೂಡ ಮಾತಾಡಿಕೊಳ್ಳುತ್ತಿದ್ದರು. ಈ ವೇಳೆ ಪ್ರಿಯಾಂಕ ಚಾರ್ಮಿಂಗ್ ಗರ್ಲ್ ಹೇಗೆ ಆಡಬೇಕು ಅನ್ನೋದು ಗೊತ್ತಿದೆ ಅಂದ್ರು ಪ್ರಶಾಂತ್ ಸಂಬರಗಿ.

    ಮಂಜುಗೆ ಬಿಳಿ ಕೂದಲು ತೆಗೆಯೋದೇನು? ಶಮಂತ್‍ಗೆ ಲವ್ ಪ್ರಪೋಸ್ ಮಾಡದೇನು? ರಘು ತಲೆಗೆ ಎಣ್ಣೆ ಹಚ್ಚೋದೇನು? ಇದೆಲ್ಲ ಪ್ರಿಯಾಂಕಾ ಆರ್ಟಿಪಿಶಿಯಲ್ ಅನ್ನೋದು ಗೊತ್ತಾಗುತ್ತೆ ಅಲ್ಲವಾ ಎಂದು ಚಕ್ರವರ್ತಿ ಚಂದ್ರಚೂಡ ಕೇಳಿದರು. ಚೆನ್ನಾಗಿದೆ, ಮನೆಯಲ್ಲಿ ಎಲ್ಲರೂ ಬೇಕು. ಫಸ್ಟ್ ಡೇ ಬಂದಾಗ ಕೈ ನೋಯ್ತಾ ಇದೆ. ಮಸಾಜ್ ಮಾಡಿ ಅಂದಾಗ ಶಾಕ್ ಆದೆ. ಒಂದು ಕ್ಷಣ ಡಗ್ ಅನ್ನಿಸಿತು ಎಂದು ಸಂಬರಗಿ ಹೇಳಿದರು.

    ಮನೆಯಲ್ಲಿ ಯಾರನ್ನ ಹೇಗೆ ಸೆಟ್ ಮಾಡ್ಕೊಬೇಕು ಅನ್ನೋದು ಆ ಹುಡುಗಿಗೆ ತಿಳಿದಿದೆ ಎಂದು ಚಕ್ರವರ್ತಿ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಅದು ಅವಳ ಗೇಮ್ ಪ್ಲಾನ್ ಮಾಡಿಕೊಳ್ಳಲಿ ಬಿಡು ಎಂದು ಪ್ರಶಾಂತ್ ಸಂಬರಗಿ ಮಾತು ಬದಲಿಸಿದರು.

    ಇದೇ ವೇಳೆ ದಿವ್ಯಾ ಸುರೇಶ್ ವಿಚಾರದಲ್ಲಿ ಯಾವುದೋ ಒಂದು ನಿಲುವಿಗೆ ಬದ್ಧವಾಗಿರು. ಬೈದ ಮೇಲೆ ಅವಳನ್ನ ಸಮಾಧಾನ ಮಾಡೋಕೆ ಏನೇನೂ ಕಸರತ್ತು ಮಾಡೋದು ಬೇಕಿರಲ್ಲ. ಬೈದಿದ್ರೆ ಆ ನಿಲುವಿಗೆ ನೀನು ಬದ್ಧ ಆಗಿರಬೇಕು ಎಂದು ಸಂಬರಗಿಗೆ ಚಕ್ರವರ್ತಿ ಸಲಹೆ ನೀಡಿದರು.

  • ಆಡಿದ ಮಾತಿಗೆ ಪ್ರಾಯಶ್ಚಿತಕ್ಕೆ ಮುಂದಾದ ಚಕ್ರವರ್ತಿ

    ಆಡಿದ ಮಾತಿಗೆ ಪ್ರಾಯಶ್ಚಿತಕ್ಕೆ ಮುಂದಾದ ಚಕ್ರವರ್ತಿ

    ಬಿಗ್‍ಬಾಸ್ ಮನೆಯಲ್ಲಿ ನಗು, ಅಳುವಿನ ಕುರಿತಾಗಿ ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಚಕ್ರವರ್ತಿಯವರು ಹೇಳಿದ ಮಾತನ್ನು ಕೇಳಿ ಶುಭಾ ಕಣ್ಣೀರು ಹಾಕಿದ್ದಾರೆ.

    ಶುಭಾ ಹುಡುಗ ಬೇರೆ ಹುಡುಗಿಯನ್ನು ನೋಡಿಕೊಳ್ಳುತ್ತಾನೆ ಎಂದು ಚಕ್ರವರ್ತಿ ಹೇಳಿ ಮುಗಿಸುವಷ್ಟರಲ್ಲಿ ಶುಭಾ ಕಣ್ಣೀರು ಹಾಕಿದ್ದಾರೆ. ಹಾಗೇ ಹೇಳಬೇಡಿ ಅಂದಿದ್ದಾರೆ. ನಾನು ನಿನ್ನ ಅಳಿಸಬೇಕು ಅಂತಾ ಹಾಗೇ ಹೇಳಿದೆ. ಕ್ಷಮಿಸು ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ಅಲ್ಲಿಯೇ ಇದ್ದ ಮನೆಯ ಸ್ಪರ್ಧಿಗಳು ಏನು ಮಾತನಾಡದೇ ಸುಮ್ಮನೆ ಕುಳಿತಿದ್ದಾರೆ.

    ಈ ವಿಚಾರವಾಗಿ ಮನನೊಂದ ಚಕ್ರವರ್ತಿ ನಾನು ಹಾಗೇ ಹೇಳಬಾರದಿತ್ತು. ತಪ್ಪು ಮಾಡಿದೆ. ನಾನು ಪ್ರಾಯಶ್ಚಿತ ಮಾಡಿಕೊಳ್ಳಬೇಕು ಇವತ್ತು ನನಗೆ ಊಟ ಬೇಡ. ನಾನು ಎಷ್ಟು ಕ್ಷಮೆ ಕೇಳಿದರೂ ಸಾಲದು. ನಾನು ಕಷ್ಟವನ್ನು ಅನುಭವಿಸಿದ್ದೇನೆ ಎಂದು ಮಂಜು ಬಳಿ ಹೇಳಿಕೊಂಡಿದ್ದಾರೆ.

    ನನಗೆ ಬೇಸರವಿಲ್ಲ. ನೀವು ಊಟ ಮಾಡಿ. ನನಗೆ ಅವನು ಜೀವನದಲ್ಲಿ ತುಂಬಾ ಮುಖ್ಯ ಎಂದು ಶುಭಾ ಚಕ್ರವರ್ತಿ ಅವರಿಗೆ ಹೇಳಿದ್ದಾರೆ. ಇಲ್ಲ ನಾನು ಯಾವತ್ತೂ ಹಾಗೇ ಮಾತನಾಡುವುದಿಲ್ಲ. ನನ್ನ ತಂಗಿಯ ಹಾಗೇ ನೀನು ನಿನಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಕ್ರವರ್ತಿ ಶುಭಾ ಅವರಿಗೆ ಹೇಳಿದ್ದಾರೆ.

    ಆಡಿದ ಮಾತನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ ಆದರೆ ಪ್ರಾಯಶ್ಚಿತಮಾಡಿಕೊಳ್ಳ ಬಹುದು ಎಂದು ಮಾತು ಆರಂಭಿಸಿದ ಸುದೀಪ್ ಈ ವಿಚಾರವನ್ನು ಕಟ್ಟೆ ಪಂಚಾಯ್ತಿಯಲ್ಲಿ ಮಾತನಾಡಿದ್ದಾರೆ. ನಾನು ಹಾಗೇ ಸರ್… ಚಕ್ರವರ್ತಿ ಅವರು ಹೇಳಿದ ಮಾತು ಬೇಸರವಾಯಿತ್ತು ಎಂದು ಶುಭಾ ಅವರು ಸುದೀಪ್ ಬಳಿ ಹೇಳಿದ್ದಾರೆ.

    ಶುಭಾ ಅವರಿಗೆ ಹೇಳಿದ ಮಾತು ತುಂಬಾ ಬೇಸರವಾಯುತು. ನಾನು ನೊಂದಿದ್ದೇನೆ. ನಾನು ಹಾಗೇ ಹೇಳಬಾರದಿತ್ತು. ನನಗೂ ಒಬ್ಬಳು ಮಗಳಿದ್ದಾಳೆ. ಯಾವುದೇ ವ್ಯಕ್ತಿಗೆ ಬೇಕು ಅಂತಾ ನೋವು ಕೊಡಬಾರದು ಸರ್ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ನಿಮ್ಮ ತಪ್ಪು ಅರಿತುಕೊಂಡು ಕ್ಷಮೆ ಕೇಳಿದ್ದಿರಾ. ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಹೋಗಿ ಪ್ರಾಯಶ್ಚಿತ ಮಾಡಿಕೊಂಡಿದ್ದಿರಾ ಒಳ್ಳೆಯದು ಎಂದು ಸುದೀಪ್ ಹೇಳಿದ್ದಾರೆ.

  • ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲಿಯೇ ಬೆಳೆದ ರಘು, ನಿನ್ನೆ ವೈಷ್ಣವಿ ಬಳಿ ತಮ್ಮ ತಾಯಿಯ ಬಗ್ಗೆ ಮಾತನಾಡಿ ನೋವನ್ನು ಹಂಚಿಕೊಂಡಿದ್ದಾರೆ.

    ವೈಲ್ಡ್‍ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ ಚಂದ್ರಚೂಡ ಚಕ್ರವರ್ತಿ, ನಿನ್ನೆ ರಘು ಜೊತೆ ನಿಮ್ಮ ಹೃದಯದಲ್ಲಿ ನಿಮ್ಮ ತಾಯಿಗೆ ಹೇಳಬೇಕಾದ ಬಹಳ ವಿಚಾರವಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಯಾರಾದರೂ ಬಳಿ ಇಲ್ಲಿಯವಗೂ ಹೇಳಿಕೊಂಡಿದ್ದೀರಾ? ನಿಮಗೆ ನಿಮ್ಮ ಒಳಗಿರುವ ನೋವನ್ನು ಕರಗಿಸಿಕೊಳ್ಳಬೇಕು ಎಂಬ ಆಸೆ ಇದ್ಯಾ? ಎಂದು ಪ್ರಶ್ನಿಸುತ್ತಾರೆ.

    ಆಗ ರಘು ಹೌದು ಎಂದಾಗ, ವೈಷ್ಣವಿಯವರ ಕಣ್ಣನ್ನು ನೋಡಿಕೊಂಡು ನಿಮ್ಮ ತಾಯಿಯನ್ನು ಹುಡುಕಿ, ಹಾಗೇನಾದರೂ ನಿಮ್ಮ ತಾಯಿಯ ಭಾವನೆ ಅವರಲ್ಲಿ ಕಂಡರೆ ನಿಮ್ಮ ತಾಯಿ ಬಳಿ ಹೇಳಿಕೊಳ್ಳಬೇಕೆಂದು ಕೊಂಡಿದ್ದನ್ನೆಲ್ಲಾ ಹೇಳಿಕೊಳ್ಳಿ ಎಂದು ತಿಳಿಸುತ್ತಾರೆ.

    ಬಳಿಕ ವೈಷ್ಣವಿ ನೋಡುತ್ತಾ ರಘು, ನಿನ್ನ ಕೋಪ, ಅಸಹಾಯಕತೆ, ಬೇಸರ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗಬಹುದಿತ್ತೇನೋ ಆದರೆ ನನಗೆ ಅದು ತಿಳಿಯಲಿಲ್ಲ. ನೀನು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿದ್ದವು. ಒಂದು ಸಮಯದಲ್ಲಿ ನನ್ನನ್ನು ನೀನು ಬೇಡ ಅಂದೇ, ದರಿದ್ರ, ಅನಿಷ್ಟ ಎಂದೇ ಅದನ್ನು ನಾನು ಅರ್ಥಮಾಡಿಕೊಂಡೆ, ಒಮ್ಮೊಮ್ಮೆ ನೀನು ಸತ್ತಿದ್ದೆ ನನಗೆ ಬೆಸ್ಟ್ ಎಂದು ಕೂಡ ಅನಿಸಿತ್ತು. ಯಾಕೆಂದರೆ ನಾನು 14-15 ವರ್ಷಗಳ ಹಿಂದೆ ನೋಡಿದ ಅಮ್ಮನಂತೆ ನೀನು ಇರಲಿಲ್ಲ. ನೀನು ತುಂಬಾ ಸ್ಟ್ರಾಂಗ್ ಆಗಿದ್ದೆ, ತುಂಬಾ ನಗುತ್ತಿದ್ದೆ, ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಆದರೆ ಸಾಯುವ ಕೊನೆಯ ಮೂರು ತಿಂಗಳ ಹಿಂದೆ ನೀನು ಯಾಕೆ ಹಾಗೇ ಆದೆ ಎಂದು ನಿನಗೆ ಮಾತ್ರ ಗೊತ್ತು. ಪ್ರತಿ ಬಾರಿ ನೀನು ನನಗೆ ಹುಚ್ಚು ಹಿಡಿದಂತೆ ಆಗುತ್ತಿದೆ. ನನಗೆ ಸಾಯುವುದಕ್ಕೂ ಇಷ್ಟವಾಗುತ್ತಿಲ್ಲ ರೋಡಿಗೆ ಹೋಗುತ್ತೇನೆ ನಾನು ಹುಚ್ಚಿಯಾಗುತ್ತೇನೆ ಎಂದಾಗ ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿರಲಿಲ್ಲ.

    ನನಗೆ ಎಷ್ಟೋ ಬಾರಿ ನಿನ್ನನ್ನು ಸಾಯಿಸಿ ನಾನು ಸಾಯಬೇಕು ಎಂದುಕೊಂಡಿದ್ದೆ. ಆದರೆ ಆ ಧೈರ್ಯ ನನಗೆ ಇರಲಿಲ್ಲ ಎಂದು ಕಣ್ಣೀರಿಟ್ಟರು. ನೀನು ಹುಟ್ಟಿದ ಮೇಲೆ ಹೀಗಾದೆವು ಎಂದರೆ ನಾನೇನು ತಪ್ಪು ಮಾಡಿದ್ದೇ. ನೀನು ಏನು ಮಾಡಿದ್ದರೂ ನಾನು ಪ್ರಾಣಕ್ಕಿಂತ ನಿನ್ನನ್ನು ಇಷ್ಟಪಡುತ್ತಿದ್ದೆ. ಮುಂದೆಯೂ ಹೀಗೆ ಇಷ್ಟ ಪಡುತ್ತೇನೆ. ನೀನು ಏನು ಕಷ್ಟಪಟ್ಟಿದ್ಯೋ ಅದು ಯಾರಿಗೂ ಆಗಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ನೋವನ್ನು ವೈಷ್ಣವಿ ಬಳಿ ತೋಡಿಕೊಳ್ಳುತ್ತಾರೆ.

    ನಂತರ ವೈಷ್ಣವಿ ನಿಮ್ಮ ತಂದೆ-ತಾಯಿಗೆ ಏನು ನೋವಿತ್ತು ಎಂಬುವುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮೊದಲನೇಯದಾಗಿ ನಾವು ಅವರನ್ನು ಗೌರವಿಸಬೇಕು. ಇಂದಿನಿಂದ ನೀವು ಬದಲಾಗಿ ಎಲ್ಲವನ್ನು ಮರೆತು ಚೆನ್ನಾಗಿ ಬದುಕಿ ಎಂದು ಸಮಾಧಾನ ಪಡಿಸುತ್ತಾರೆ.

  • ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ ಸ್ಪರ್ಧಿಗಳು ನಿದ್ದೆಗೆ ಜಾರಲ್ಲ. ಒಬ್ರು ಮತ್ತೊಬ್ಬರ ಆಟ. ಹೀಗೆ ಹಾಗೆ ಅಂತ ಗುಸು ಗುಸು ಸ್ಟಾರ್ಟ್ ಆಗಿರುತ್ತೆ. ನಿನ್ನೆ ಸಹ ರಾತ್ರಿ ಒಂದು ಗಂಟೆ ಆಗಿತ್ತು. ನಿಧಿ ಮತ್ತು ಶುಭಾ ಇಬ್ಬರ ಪಿಸು ಮಾತು ಮಾತ್ರ ಕೇಳಿಸಿತ್ತು. ಬಹುತೇಕ ಎಲ್ಲರೂ ನಿದ್ದೆ ಮಾಡ್ತಿದ್ದರಿಂದ ಮನೆ ಶಾಂತವಾಗಿತ್ತು. ಅಷ್ಟರಲ್ಲಿ ಕೇಳಿದ ಚಪ್ಪಾಳೆ ಸದ್ದು ಮನೆ ಮಂದಿಯನ್ನ ಬೆಚ್ಚಿ ಬೀಳಿಸಿತು.

    ರಾತ್ರಿ 1.5 ನಿಮಿಷಕ್ಕೆ ಎಲ್ಲರೂ ಮಲಗಿದ್ರೆ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಧ್ಯಾನ ಮಾಡ್ತಿದ್ರು. ಈ ವೇಳೆ ದಿಢೀರ್ ಅಂತ ಚಪ್ಪಾಳೆ ಹೊಡೆದ್ರು. ಮನೆ ಪೂರ್ಣ ಸೈಲೆಂಟ್ ಗಿದ್ದರಿಂದ ಚಪ್ಪಾಳೆ ಸೌಂಡ್ ಜೋರಾಗಿಯೇ ಕೇಳಿಸ್ತು. ಇನ್ನು ಪಿಸು ಮಾತುಗಳನ್ನಾಡುತ್ತಿದ್ದ ಶುಭಾ ಮತ್ತು ನಿಧಿ ಸಹ ಒಂದು ಕ್ಷಣ ತಬ್ಬಿಬ್ಬಾಗಿ ಯಾರು ಕ್ಲ್ಯಾಪ್ ಮಾಡಿದ್ದು ಅಂತ ಅತ್ತಿತ್ತ ನೋಡುತ್ತಿದ್ದರು.

    ಚಪ್ಪಾಳೆಯ ಸದ್ದಿನಿಂದ ಎಚ್ಚರಗೊಂಡ ಶಮಂತ್ ಮತ್ತು ಅರವಿಂದ್ ಯಾರ್ ಗುರು ಕ್ಲ್ಯಾಪ್ ಹಾಕಿದ್ರೂ ಅನ್ನೋ ರೀತಿ ಸನ್ನೆ ಮಾಡಿದ್ರು. ನಂತರ ಚಕ್ರವರ್ತಿ ಅವರೇ ಚಪ್ಪಾಳೆ ಹಾಕಿದ್ದು ಅಂತ ತಿಳಿದು ಎಲ್ಲರೂ ನಕ್ಕು ನಿದ್ದೆಗೆ ಜಾರಿದ್ರು.

    ಇನ್ನೂ ಬೆಳಗಾಗುತ್ತಲೇ ಚಪ್ಪಾಳೆ ವಿಷಯ ಮನೆಯ ಹಾಟ್ ಟಾಪಿಕ್ ಆಗಿ ಬದಲಾಯ್ತು. ಚಂದ್ರಚೂಡ ಮೆಡಿಟೇಷನ್ ಮಾಡುವಾಗ ಮಧ್ಯ ಒಂದು ಸಾರಿ ಚಪ್ಪಾಳೆ ತಟ್ಟುತ್ತೇನೆ. ಆದ್ರೆ ಮಂಜು ಕೂಗಿದ್ದು ಕೇಳಿಸಿಲ್ಲ. ನಿಮಗೆಲ್ಲ ತೊಂದರೆ ಆಗ್ತಿದ್ರೆ ಹೊರಗೆ ಮೆಡಿಟೇಷನ್ ಮಾಡ್ತೀನಿ ಅಂದ್ರು. ಇತ್ತ ಮಂಜು ಪಾವಗಡ ಮಾತ್ರ, ಕೇಳಿಸಿದ್ರೂ ಕೇಳಿಸದೇ ರೀತಿ ನಟಿಸರಬಹುದು ಅಂತ ಕಾಲೆಳೆದ್ರು.

  • ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ವಿಶ್ವನಾಥ್ ಮುಂದೆ ತಮ್ಮ ಆಸೆ ಹೊರ ಹಾಕಿದ ಚಕ್ರವರ್ತಿ

    ಬಿಗ್‍ಬಾಸ್ ಮನೆಗೆ ಬಂದಿರೋ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಹಳೆಯ ಆಟಗಾರರ ಸ್ನೇಹ ಸಂಪಾದಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ತಿಂಗಳು ಮನೆಯ ಮಂದಿ ಹೊರಗೆ ಹೇಗೆ ಬಿಂಬಿತರಾಗಿದ್ದಾರೆ ಅನ್ನೋ ವಿಷಯ ಸದ್ಯ ಅಲ್ಲಿರುವ ಚಕ್ರವರ್ತಿ ಅವರಿಗೆ ಮಾತ್ರ ಗೊತ್ತು. ಹೀಗಾಗಿ ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಅಂಕ ಸಹ ನೀಡಿದ್ರು. ಇದೀಗ ವಿಶ್ವನಾಥ್ ಮುಂದೆ ಕೆಲ ವಿಷಯಗಳನ್ನ ಹಂಚಿಕೊಂಡಿರುವ ಚಕ್ರವರ್ತಿ, ಆಟ ಸೇರಿದಂತೆ ಮನೆಯಲ್ಲಿ ಹೆಚ್ಚು ಸಕ್ರಿಯನಾಗುವಂತೆ ಸಲಹೆ ನೀಡಿದ್ದಾರೆ.

    ರಘು, ನಿಧಿ, ನನಗೆ ಸೇರಿದಂತೆ ಬಹುತೇಕರಿಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಜೀವನದ ಸೆಕೆಂಡ್ ಹಾಫ್. ನಾವೆಲ್ಲ 40 ವರ್ಷ ಮೇಲ್ಪಟ್ಟವರು. ಆದ್ರೆ ನೀನು ಇನ್ನೂ ಚಿಕ್ಕವನು. ನಿನ್ನಲ್ಲಿರುವ ಟ್ಯಾಲೆಂಟ್ ಜನತೆಗೆ ತೋರಿಸು. ನಾವೆಲ್ಲ ಇಲ್ಲಿ ಬಂದಿರೋದು ನಮ್ಮ ಪ್ರತಿಭೆ ತೋರಿಸಲು ಎಂದು ಚಕ್ರವರ್ತಿ ಹೇಳಿದ್ರು. ನೀನು ನಿನ್ನ ಪ್ರತಿಭೆ ತೋರಿಸಬೇಕು ಅನ್ನೋದು ನನ್ನ ಆಸೆ ಎಂದು ಹೇಳಿದರು.

    ಚಕ್ರವರ್ತಿ ಮಾತುಗಳಿಗೆ ಉತ್ತರಿಸಿದ ವಿಶ್ವನಾಥ್, ಬರೆಯೋದಕ್ಕೆ ಪೆನ್ನು, ಪೇಪರ್ ಇಲ್ಲ ಅನ್ನೋ ನೆಪ ಹೇಳಲ್ಲ. ಆದ್ರೆ ಇಲ್ಲಿಯ ಒತ್ತಡದಿಂದ ಆಗ್ತಿಲ್ಲ ಅಂದ ಸಮಜಾಯಿಷಿ ಕೊಟ್ರು. ಅದೇನೇ ಸ್ಟ್ರೆಸ್ ಇರಲಿ, ನಾನು ನಿಂಗೆ ಸಾಹಿತ್ಯ ಬರೆದುಕೊಡ್ತೀನಿ ಅಂತ ಮಾತು ಕೊಟ್ಟರು.

    ಚಕ್ರವರ್ತಿ ಚಂದ್ರಚೂಡ ಓರ್ವ ಮಾಜಿ ಪತ್ರಕರ್ತ ಮತ್ತು ಬರಹಗಾರರು. ಇತ್ತ ವಿಶ್ವನಾಥ್ ಸಹ ಒಳ್ಳೆಯ ಗಾಯಕ. ಮುಂದೆ ಈ ಜೋಡಿಯಿಂದ ಹೊಸ ಹಾಡುಗಳನ್ನ ಬಿಗ್ ಮನೆಯಲ್ಲಿ ಕೇಳುವ ಸಾಧ್ಯತೆಗಳಿವೆ.