Tag: ಚಕ್ರವರ್ತಿ ಚಂದ್ರಚೂಡ್

  • ಮಜಾ ಮಾಡೋಕೆ ಗೋವಾ ಹೋಗಬೇಕೆಂದ ಪ್ರಿಯಾಂಕ

    ಮಜಾ ಮಾಡೋಕೆ ಗೋವಾ ಹೋಗಬೇಕೆಂದ ಪ್ರಿಯಾಂಕ

    ಬಿಗ್‍ಬಾಸ್ ಮನೆ ಮಂದಿಯ ಕೈ ನೋಡಿ ಶಾಸ್ತ್ರವನ್ನು ಹೇಳಿದ್ದ ಚಕ್ರವರ್ತಿ ಚಂದ್ರಚೂಡ್ ಇದೀಗ ಪ್ರಿಯಾಂಕ ತಿಮ್ಮೇಶ್ ಅವರಿಗೆ ಜೀವನದಪಾಠವನ್ನು ಮಾಡಿ ಸುದ್ದಿಯಾಗಿದ್ದಾರೆ.

    ನಿಮಗೆ ಜೀವನ ಅರ್ಥ ಆಗಬೇಕೆಂದ್ರೆ ಮೂರು ಪದದ ಅರ್ಥ ಆಗಬೇಕು, ಸಮಾಜದ ಕುರಿತಾಗಿ ನೀವು ತಿಳಿದುಕೊಳ್ಳಬೇಕು ಎಂದು ಚಕ್ರವರ್ತಿ ಚಂದ್ರಚೂಡ್ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಜೀವನದ ಪಾಠ ಮಾಡಿರುವ ವೀಡಿಯೋವನ್ನು ಖಾಸಗಿವಾಹಿನಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

    ಪ್ರಿಯಾಂಕ ಸುಮ್ಮನೇ ಒಬ್ಬರೇ ಕುಳಿತಿರುತ್ತಾರೆ. ಆಗ ಅಲ್ಲಿಗೆ ಬಂದ ಚಕ್ರವರ್ತಿ ಪ್ರಿಯಾಂಕಾಗೆ ಜೀವನದ ಪಾಠವನ್ನು ಮಾಡಿದ್ದಾರೆ. ಪ್ರಿಯಾಂಕ ಹೂಂ… ಹಾಕುತ್ತಾ ಸುಮ್ಮನೇ ಕೇಳಿಸಿಕೊಂಡಿದ್ದಾರೆ. ಚಕ್ರವರ್ತಿ ಮಾತ್ರ ಮೂರೇ ಪದಗಳಲ್ಲಿ ಜೀವನದ ಕುರಿತಾಗಿ ಅರ್ಥಗರ್ಭಿತವಾಗಿ ಹೇಳಿದ್ದಾರೆ.

    ಜೀವನ ಅರ್ಥವಾಗಬೇಕಾದರೆ ನಿನಗೆ ಸಮಾಜದ ಕುರಿತಾಗಿ ತಿಳಿಯಬೇಕು. ಸ.. ಮಾ..ಜ ಎಂದು ಮೂರು ಪದಗಳಿವೆ. ಸಮಾನತೆ, ಸಂಸ್ಕøತಿ, ಸಂತಸ ತೆಗೆದುಬಿಟ್ರೆ ಬರೀ ಮಜಾ ಇರುತ್ತದೆ ಎಂದು ಹೇಳಿದ್ದಾರೆ. ಮಜಾದಲ್ಲಿ ಜೀವನವಿಲ್ಲ. ಈ ವೇಳೆ ಪ್ರಿಯಾಂಕ ಮಜಾ ಮಾಡಬೇಕು ಎಂದರೆ ಗೋವಾ ಹೋಗಬೇಕು ಎಂದಿದ್ದಾರೆ. ಈ ವೇಳೆ ಚಕ್ರವರ್ತಿ ನಾನು ಹೇಳುವುದು ಕೇಳು ಎಂದು ಹೇಳುತ್ತಾ ಮಾತು ಮುಂದುವರಿಸಿದ್ದಾರೆ.

    ಮನಸ್ಸು, ಮಮತೆ, ಮಾತೃತ್ವ ತೆಗೆದರೆ ಸಜಾ ಆಗಿ ಬಿಡುತ್ತದೆ. ಜೀವನ ಶಿಕ್ಷೆಯಾಗಿ ಬಿಡುತ್ತದೆ. ಕೊನೆಯಲ್ಲಿ ಜಾ ಉಳಿಯಿತ್ತು, ಜಿಗುಪ್ಸೆ, ಜಂಜಾಟವನ್ನು ಮನಸ್ಸಿನಿಂದ ತೆಗೆದುಬಿಡಬೇಕು. ಆಗ ಜೀವನ ಸಮವಾಗಿರುತ್ತದೆ. ಜೀವನದಲ್ಲಿ ಯಾವ ಪದವನ್ನು ತೆಗೆಯುತ್ತಿಯಾ? ಯಾವುದುನ್ನು ಅಳವಡಿಸಿಕೊಳ್ಳುತ್ತೀಯಾ ಎನ್ನುವುದರ ಮೇಲೆ ಇರುತ್ತದೆ. ಈ ಕುರಿತಾಗಿ 10 ನಿಮಿಷ ಯೋಚನೆ ಮಾಡು ನಿನಗೆ ಜೀವನ ಗೊತ್ತಾಗುತ್ತದೆ ಎಂದು ಜೀವನದ ಪಾಠ ಮಾಡಿದ್ದಾರೆ. ಪ್ರಿಯಾಂಕ ಮಾತ್ರ ಕೇಳಿಯೂ ಕೇಳದ ಹಾಗೇ ಸುಮ್ಮನೆ ಕುಳಿತಿದ್ದಾರೆ.

  • ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿ

    ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಇನ್ಮುಂದೆ ಸರ್ವಾಧಿಕಾರಿ

    ಬಿಗ್‍ಬಾಸ್ ಕನ್ನಡ ಸೀಸನ್ 8ರ ಮನೆಯಲ್ಲಿ ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟು ಸಖತ್ ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ್ ಅವರು ಕಳಪೆ ಪ್ರದರ್ಶನ ತೋರಿ ಜೈಲು ಸೇರಿದ್ದಾರೆ. ಅವರ ವರ್ತನೆ ಮನೆಯ ಸದಸ್ಯರಿಗೆ ಹಿಡಿಸಿಲ್ಲ. ಆದರೆ ಚಕ್ರವರ್ತಿಯವರು ಜೈಲಿನಲ್ಲಿ ಇದ್ದುಕೊಂಡು ನಿಜವಾದ ಆಟ ಆಡುವ ಎಂದು ಪ್ಲ್ಯಾನ್ ಹಾಕಿದ್ದಾರೆ.

    ಬಿಗ್‍ಬಾಸ್ ಮನೆ ಪ್ರವೇಶ ಮಾಡಿದಕೂಡಲೇ ಎಲ್ಲರೂ ಯೋಚನೆ ಮಾಡುವ ಶೈಲಿ ಬದಲಾಯ್ತು, ಮನೆಯ ಸದಸ್ಯರು ಬೇರೆ ಬೇರೆ ಆಗಿ ಗ್ರೂಪ್ ಮಾಡಿಕೊಂಡರು. ಎಲ್ಲರ ನಡುವೆ ಮನಸ್ತಾಪ ಶುರುವಾಯ್ತು. ಚಕ್ರವರ್ತಿ ಬಂದನಂತರ ಮನೆಯ ವಾತಾವರಣವೇ ಬದಲಾಯ್ತು ಅಂತ ಕೂಡ ಮನೆಯ ಸದಸ್ಯರು ಹೇಳಿದ್ದಾರೆ. ಒಟ್ಟಿನಲ್ಲಿ ಅತಿ ಕಡಿಮೆ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ವರ್ತನೆ ಅನೇಕರಿಗೆ ಇಷ್ಟವಾಗಿಲ್ಲ. ಚಕ್ರವರ್ತಿ ಅವರು ಬಂದ ಕೆಲವೇ ದಿನಗಳಲ್ಲಿ ಅವರ ಆಟವನ್ನು ಶುರು ಮಾಡಿದ್ದಾರೆ.

    ಚಕ್ರವರ್ತಿ ಅವರು ಜಗಳ ಆಡಿದ್ದಾರೆ, ನೇರವಾಗಿ ಬೇರೆಯವರ ಮನಸ್ಸಿಗೆ ಬೇಸರ ಆಗುವಂತೆ ಕಾಮೆಂಟ್ ಕೂಡ ನೀಡಿದ್ದರು ಎಂದು ಸ್ಪರ್ಧಿಗಳು ಹೇಳಿದ್ದಾರೆ. ಜೈಲಿಗೆ ಸೇರಿದ್ದು ಚಕ್ರವರ್ತಿಗೆ ಸಿಟ್ಟು ತರಿಸಿದೆ. ಸರ್ವಾಧಿಕಾರಿ ಆಗಿ ಮುಂದೆಯೂ ಇರ್ತೀನಿ, ವಾರ ವಾರ ಜೈಲಿಗೆ ಬರ್ತೀನಿ, ಎಲ್ಲರಿಗೂ ಉತ್ತರ ಕೊಡ್ತೀನಿ ಅಂತ ಚಕ್ರವರ್ತಿ ಹೇಳಿದ್ದಾರೆ.

    ಚಕ್ರವರ್ತಿ ಅವರು ಜೈಲಿನಲ್ಲಿ ತರಕಾರಿ ಹೆಚ್ಚಿಕೊಡಬೇಕಿದೆ. ಅವರಿಗೆ ನೀಡಿದ್ದ ಜೈಲಿನ ಟೋಪಿಯ ಅಳತೆ ಸರಿ ಇಲ್ಲವಂತೆ, ಮುಂದಿನ ಬಾರಿ ಟೋಪಿಯ ಸೈಜ್ ಬೇರೆ ಕೊಡಬೇಕು ಎಂದು ಚಕ್ರವರ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ಕಳಪೆ ಪಟ್ಟ ನೀಡಿರೋದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಬೇಸರ ತರಿಸಿದೆ. ನಿಧಿ ಸುಬ್ಬಯ್ಯ, ದಿವ್ಯಾ ಸುರೇಶ್, ಮಂಜು ಪಾವಗಡ, ದಿವ್ಯಾ ಉರುಡುಗ ಮುಂತಾದವರು ಚಕ್ರವರ್ತಿಗೆ ಕಳಪೆ ಪಟ್ಟ ನೀಡಿದ್ದರು. ದಿವ್ಯಾ ಅವರು ಬಿಟ್ಟಿ ಸಲಹೆ ನೀಡ್ತಾರೆ ಅಂತ ಕಾಮೆಂಟ್ ಮಾಡಿದ್ದು ಚಕ್ರವರ್ತಿ ಕೋಪವನ್ನು ತಾರಕಕ್ಕೇರಿಸಿದೆ.

    ನಾನು ತರಕಾರಿ ಕಟ್ ಮಾಡಿಕೊಟ್ಟ್ರೆ ಇವರಿಗೆ ಊಟಾ ಎಂದರೆ ನಾನು ಕಟ್ ಮಾಡಿಕೊಡುವುದಿಲ್ಲ. ನನ್ನ ಜೈಲುವಾಸಕ್ಕೆ ಕಾರಣವಾಗಿರುವ ಪ್ರತಿಯೊಬ್ಬರಿಗೂ ನಿದ್ದೆ ಕೆಡಿಸುತ್ತೇನೆ ಇದು ನನ್ನ ಶಪಥ. ಜೈಲಿಗೆ ಹಾಕಿದ್ರೆ ಪ್ರತಿವಾರ ವಿಚಿತ್ರ ಮಾಡುತ್ತೇನ. ಪ್ರತಿವಾರ ಇನ್ನು ಚಳುವಳಿ ನಡೆಯುತ್ತದೆ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ನಕ್ಕು ಸುಮ್ಮನಾಗಿದ್ದಾರೆ.

  • ಕಬ್ಬು ಬೆಳೆಯೋದು ಹೇಗೆ? – ಬಿಗ್ ಮನೆ ಮಂದಿಗೆ ಸಂಬರಗಿ ಪಾಠ

    ಕಬ್ಬು ಬೆಳೆಯೋದು ಹೇಗೆ? – ಬಿಗ್ ಮನೆ ಮಂದಿಗೆ ಸಂಬರಗಿ ಪಾಠ

    ಬಿಗ್‍ಬಾಸ್‍ಮನೆಯ ಅನ್‍ಸೀನ್‍ಗಳಲ್ಲಿ ಇರುವ ಕೆಲವು ವಿಚಾರಗಳು ಸಖತ್ ಇಂಟ್ರಸ್ಟಿಂಗ್ ಆಗಿರುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್‍ಬಾಸ್ ಪ್ರಸಾರ ಮಾಡವು ಖಾಸಗಿ ವಾಹಿನಿ ತನ್ನ ಇನ್‍ಸ್ಟ್ರಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಸ್ಪರ್ಧಿಗಳು ಬಿಗ್‍ಬಾಸ್ ನೀಡುವ ಟಾಸ್ಕ್ ಕುರಿತಾಗಿ ಯೋಚನೆ ಮಾಡದೇ ಬೇರೆಯದ್ದೇ ವಿಚಾರವನ್ನು ಮಾತನಾಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಟಿ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದ ಪ್ರಶಾಂತ್ ಸಂಬರಗಿ ಇದೀಗ ಕಬ್ಬು ಬೆಳೆಯುವ ವಿಚಾರಕ್ಕಾಗಿ ಬಿಗ್‍ಬಾಸ್ ಮನೆಯಲ್ಲಿ ಸುದ್ದಿಯಾಗುತ್ತಿದ್ದಾರೆ. ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ಒಂಡು ಕಡೆ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಸಂಬರ್ಗಿ ಕೃಷಿಕ ಹೌದಾ ಇಲ್ಲವಾ ಎನ್ನುವುದು ಸಾಬೀತು ಮಾಡು ಎಂದು ಹೇಳಿದ್ದಾರೆ.

    ಕಬ್ಬು ಬೆಳೆಯುವುದು ಹೇಗೆ ಎಂದು 2ನಿಮಿಷದಲ್ಲಿ ಹೇಳು ಎಂದು ಚಕ್ರವರ್ತಿ, ಸಂಬರಗಿಗೆ ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರಗಿ ಕಬ್ಬು ಕಟಾವ್ ಮಾಡುವ ವೇಳೆ ಕಾಂಡವನ್ನು ಇಟ್ಟಿರಬೇಕು ಎಂದಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿ ಕಾಂಡವನ್ನು ಎಲ್ಲಿ ಇಟ್ಟಿರಬೇಕು, ಹೇಗೆ ಇಟ್ಟಿರಬೇಕು ಹಾಗೇ ಹೀಗೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಏ.. ನೀನು ಸುಮ್ನೆ ಇರು ನಾನು ಶಮಂತ್‍ಗೆ ಹೇಳುಕೊಡುತ್ತನೆ ಎಂದು ಹೇಳಿದ್ದಾರೆ. ಈ ವೇಳೆ ಚಕ್ರವರ್ತಿ ಮಾತ್ರ ಬಿಡದೇ ಅವರ ಪ್ರಶ್ನೆಗೆಗಳನ್ನು ಕೇಳುತ್ತಾ ಸಂಬರಗಿಗೆ ಫುಲ್ ಕಂಪ್ಯೂಸ್ ಮಾಡಿದ್ದಾರೆ.

    ಕಬ್ಬು ಕಟಾವ್ ಆದ ಬಳಿಕ ಕಾಂಡವನ್ನು ಇಟ್ಟುಕೊಂಡಿರ ಬೇಕು ಎಂದು ಹೇಳುತ್ತಾ ಸಂಬರಗಿ ಮೊದಲಿನಿಂದ ಪ್ರಾರಂಭಿಸುತ್ತಾರೆ. ಮತ್ತೇ ಮಧ್ಯಪ್ರವೇಶಿದ ಚಕ್ರವರ್ತಿ ಎಷ್ಟು ದಿನ ಇಡುತ್ತೀರಾ ನಮಗೆ ಗೊತ್ತಾಗಬೇಕು ಅಲ್ಲವಾ ಎಂದು ಹೇಳುತ್ತಾ ತಮಾಷೆ ಮಾಡಿದ್ದಾರೆ. ಸಂಬರಗಿಗೆ ನಗು ಜೊತೆಗೆ ಕೋಪವು ಬಂದಿದೆ. ಕಬ್ಬು ಬೆಳೆಯುವುದು ಹೇಗೆ ಎಂದು ಸೀರಿಯಸ್ ಆಗಿ ಕೇಳುತ್ತಾ ಕುಳಿತಿದ್ದ ಮನೆ ಮಂದಿ ಚಕ್ರವರ್ತಿ ಅವರ ತರ್ಲೆ ಪ್ರಶ್ನೆಗೆಗಳಿಗೆ ಬಿದ್ದು ಬಿದ್ದು ನಕ್ಕಿದ್ದಾರೆ.

    ಕೊನೆಗೂ ಸಂಬರಗಿಗೆ ಮಾತ್ರ ಕಬ್ಬು ಬೆಳೆಸಯುವುದನ್ನು ಪೂರ್ತಿಯಾಗಿ ಹೇಳಲು ಮಾತ್ರ ಚಕ್ರವರ್ತಿ ಬಿಟ್ಟಿಲ್ಲ. ಈ ದೃಶ್ಯ ಮಾತ್ರ ಸಖತ್ ಮಜವಾಗಿತ್ತು. ಸಂಬರಗಿಗೆ ಬಾಯಿ ಮುಚ್ಚಿಸುವ ಸ್ಪರ್ಧಿ ಮನೆಯಲ್ಲಿ ಒಬ್ಬರಾದರೂ ಇದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ಬಿಗ್‍ಬಾಸ್ ಮನೆಯಲ್ಲಿ ದಿನಕ್ಕೊಂದು ವಿಶೇಷ ಸುದ್ದಿಗಳಿರುತ್ತವೆ. ಜಗಳ, ಗಾಸಿಪ್, ಡ್ರಾಮಾ, ಗುಸು ಗುಸು ಇರುತ್ತವೆ. ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟ ಚಕ್ರವರ್ತಿ ಚಂದ್ರಚೂಡ್ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಟದ ವಿಚಾರವಾಗಿ ರಘು ಮತ್ತು ಚಕ್ರವರ್ತಿ ನಡುವೆ ಡೊಡ್ಡ ಜಗಳವೇ ಆಗಿದೆ.

    ಚಕ್ರವರ್ತಿ ಚಂದ್ರಚೂಡ್ ಹಾಗೂ ರಘು ಗೌಡ ಅವರು ವೈಯಕ್ತಿಕ ವಿಷಯ ಇಟ್ಟುಕೊಂಡು ಜಗಳ ಆಡಿದ್ದಾರೆ. ರಘು ಮಾತು ಕೇಳಿ ಕೋಪಗೊಂಡ ಚಕ್ರವರ್ತಿ ಅವರು ಇನ್ಮುಂದೆ ಯಾರಿಗೂ ಸಹಾಯ ಮಾಡೋದಿಲ್ಲ ಎಂದಿದ್ದಾರೆ.

    ಬಿಗ್‍ಬಾಸ್ ನೀಡಿರುವ ಟಾಸ್ಕ್‍ನಲ್ಲಿ ಯಾರು ಏಜೆಂಟ್ ಅಂತ ದೊಡ್ಡ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ಆಟವನ್ನು ಗೆಲ್ಲಬೇಕು. ಇಲ್ಲಿ ಆಟ ಗೆಲ್ಲಿಸುವವರೂ ಇದ್ದಾರೆ, ಸೋಲಿಸುವವರೂ ಇದ್ದಾರೆ. ಆ ವೇಳೆ ಚಕ್ರವರ್ತಿ ಚಂದ್ರಚೂಡ್ ಅವರು ಏಜೆಂಟ್ ಆಗಿ ಆಟ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ರಘು ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

    ಚಕ್ರವರ್ತಿ ಅವರು ಸೈಕಲಾಜಿಕಲ್ ಆಗಿ ಆಟ ಆಡಿದ್ದಾರೆ ಅಂತ ರಘು ಆರೋಪ ಮಾಡಿದ್ದಾರೆ. ರಘು ಮಾತ್ರ ಯಾರಿಗೂ ಸಪೋರ್ಟ್ ಮಾಡಲಿಲ್ಲ ಅಂತ ಚಕ್ರವರ್ತಿ ಹೇಳಿದ್ದಾರೆ. ವೈಷ್ಣವಿಯಂತೆ ಚಕ್ರವರ್ತಿ ಅವರಿಗೆ ಫಿಟ್‍ನೆಸ್ ಇದೆ ಅಂತ ರಘು ನಂಬಿದ್ದೇನು. ಆದರೂ ಆಟ ಆಡಲಿಲ್ಲ ಹೀಗಾಗಿ ಚಕ್ರವರ್ತಿ ಅವರೇ ಏಜೆಂಟ್ ಅಂತ ರಘು ಹೇಳಿದ್ದಾರೆ.

    ನಾನು ಸಹಾಯ ಮಾಡಿದ್ದು ತಪ್ಪೇ? ಎಷ್ಟು ನೀಚ ಆಟ ಆಡ್ತಿದ್ದೀಯಾ? ವೈಯಕ್ತಿಕವಾಗಿ ಯಾಕೆ ವಿಷಯ ತರುತ್ತಿದೀಯಾ? ಸೈಕಾಲಜಿ, ಕೌನ್ಸಿಲಿಂಗ್ ಮಾಡಿದ್ದು ವೈಯಕ್ತಿಕವಾದ ವಿಷಯ. ವೈಯಕ್ತಿಕವಾಗಿ ಸಹಾಯ ಮಾಡಿದ್ದಕ್ಕೆ, ಆಟದಲ್ಲಿ ಸಹಾಯ ಮಾಡಿದ್ದಕ್ಕೆ ಮೋಸ ಅಂದರೆ ನಾನು ಏನು ಮಾಡೋಕೆ ಆಗಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಅರವಿಂದ್ ಮತ್ತು ವಿಶ್ವನಾಥ್ ಮಧ್ಯಪ್ರವೇಶಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ವೈಯಕ್ತಿಕವಾಗಿ ವಿಷಯ ಎತ್ತಬೇಡಿ, ಪರ್ಸನಲ್ ಮ್ಯಾಟರ್ ಎತ್ತಬೇಡಿ, ಸರಿ ಅಲ್ಲ, ನಾನು ಪರ್ಸನಲ್ ಮ್ಯಾಟರ್ ಎತ್ತಿದ್ದು ತಪ್ಪು. ನೀವು ಏಜೆಂಟ್ ಅಲ್ಲ ಅಂತ ನಿರೂಪಿಸಿ ಅಂತ ರಘು ಗೌಡ ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾರಿಗೂ ಸಹಾಯ ಮಾಡಲ್ಲ. ಇದು ನಾನು ಕಲಿತ ಪಾಠ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರ ಸುದ್ದಿಯಾಗುತ್ತಲೇ ಇರುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಡೊಡ್ಡದಾಗಿ ಮಾಡುಕೊಂಡು ಅವರಿಗೆ ಅನ್ನಿಸಿದ ಮಾತುಗಳನ್ನಾಡುತ್ತಾ ಸುದ್ದಿಯಾಗುವ ಒಂಟಿಮನೆಯ ಸ್ಪರ್ಧಿಗಳ ಹಿಂದೆ ನಿಂತು ಆಟ ಆಡುಸುತ್ತಿರುವವರು ಬಿಗ್‍ಬಾಸ್.

  • ಸುದೀಪ್ ಹೇಳಿದ ಒಂದು ಮಾತಿಗೆ ಶಾಕ್ ಆದ ಬಿಗ್ ಸ್ಪರ್ಧಿಗಳು

    ಸುದೀಪ್ ಹೇಳಿದ ಒಂದು ಮಾತಿಗೆ ಶಾಕ್ ಆದ ಬಿಗ್ ಸ್ಪರ್ಧಿಗಳು

    ವಾರದ ಕಥೆಯಲ್ಲಿ ಸುದೀಪ್ ಅವರು ವಾರ ಪೂರ್ತಿಯಾಗಿ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ವಿಚಾರಗಳನ್ನು ಆಧರಿಸಿ ಮಾತನಾಡುತ್ತಾರೆ. ಬಿಗ್ ಮನೆಯ ಸ್ಪರ್ಧಿಗಳಿಗೆ ಸರಿ, ತಪ್ಪಿನ ಕುರಿತಾಗಿ ತಿಳಿಸುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ವಾರ ಸುದೀಪ್ ಹೇಳಿರುವ ಆ ಒಂದು ಮಾತನ್ನು ಕೇಳಿ ಸ್ಪರ್ಧಿಗಳು ಆಘಾತಕ್ಕೊಳಗಾಗಿದ್ದಾರೆ.

    ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕವಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರವಾಗಿ ಮನೆ ಮಂದಿಗೆ ಕೊಂಚ ಬೇಸರವಾಗಿದೆ. 35 ದಿನವಾಗಿದೆ ನಾವು ಬಂದು ನಾವು ಹಾಯ್ ಆಗಿ ಇದ್ದೇವು, ಈಗ ವೈಲ್ಡ್ ಕಾರ್ಡ್ ಎಂಟ್ರಿ ಬೇಡವಾಗಿತ್ತು ಎಂದು ಹಲವರು ನೇರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

     ಸುದೀಪ್ ಹೇಳಿದ್ದೇನು?
    ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದು ಎಷ್ಟರಮಟ್ಟಿಗೆ ಖುಷಿ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಸುದೀಪ್ ಮನೆಯವರ ಬಳಿ ಚಕ್ರವರ್ತಿ ಚಂದ್ರಚೂಡ್ ಅವರ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಮನೆ ಮಂದಿಗೆ ಅವರು ಬಿಗ್‍ಬಾಸ್ ಮನೆಗೆ ಬಂದಿರುವ ಕುರಿತಾಗಿ ಬೇಸರವಾಗಿದೆ ಎನ್ನುವುದು ತಿಳಿದಿದೆ. ಮನೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೀಗೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

    ಈ ವೇಳೆ ಸುದೀಪ್ ಬಿಗ್‍ಬಾಸ್ ಮನೆ ಯಾರ ಮನೆಯಲ್ಲ.. ಅಲ್ಲಿರುವವರು ಯಾರು ನಿಮ್ಮವರಲ್ಲ ಆದರೂ ಹೀಗೆ ಒಂದು ಅಭಿಪ್ರಾಯವಿದೆ. ಆದರೆ ಬಿಗ್‍ಬಾಸ್ ಮನೆಗೆ  ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿರುವುದು ಇದು ಆರಂಭ ಮಾತ್ರವಾಗಿದೆ ಎಂದಿದ್ದಾರೆ. ಸುದೀಪ್ ಅವರ ಈ ಒಂದು ಮಾತು ಕೇಳಿ ಮನೆ ಮಂದಿ ಶಾಕ್ ಆಗಿದ್ದಾರೆ.

    ವೈಲ್ಡ್ ಕಾರ್ಡ್ ಎಂಟ್ರಿ ಇದು ಆರಂಭ ಮಾತ್ರ ಎಂದು ಹೇಳುವ ಮೂಲಕವಾಗಿ ಇನ್ನು ಹಲವರು ಬರಲಿದ್ದಾರೆ ಎನ್ನುವ ಸೂಚನೆಯನ್ನು ಕೊಟ್ಟಿದ್ದಾರೆ. ಒಂಟಿ ಮನೆಗೆ ಘಟಾನುಘಟಿ ಸ್ಫರ್ಧಿಗಳು ಬರಲಿದ್ದಾರೆ ಎನ್ನುವ ಸೂಚನೆಯನ್ನು ಸುದೀಪ್ ನೀಡಿದ್ದಾರೆ. ಸುದೀಪ್ ಅವರ ಮಾತನ್ನು ಕೇಳಿ ಮನೆಯ ಸ್ಪರ್ಧಿಗಳಿಗೆ ನಡುಕ ಶುರುವಾದಂತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ನೆಟ್ಟಿಗರು ಚರ್ಚೆ ಮಾಡಲು ಪ್ರಾರಂಭಿಸಿದ್ದಾರೆ.

  • ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಕಾಮನ ಬಿಲ್ಲಿಗೆ ಬಣ್ಣ ಬಣ್ಣದ ಕಲರ್ ಕಾಗೆ ಹಾರಿಸುವವನು ಪ್ರಶಾಂತ್ ಅಂದಿದ್ಯಾಕೆ ಚಕ್ರವರ್ತಿ

    ಬಿಗ್‍ಬಾಸ್ ಕಾರ್ಯಕ್ರಮ ಆರಂಭವಾಗಿ ಐದನೇ ವಾರದತ್ತ ಸಾಗುತ್ತಿದೆ. ಸದ್ಯ ನಿನ್ನೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ನಡೆಯಿತು. ಈ ವೇಳೆ ಮನೆಗೆ ಹೊಸದಾಗಿ ಬಂದ ಸದಸ್ಯ ಚಕ್ರವರ್ತಿ ಚಂದ್ರಚೂಡ್ ಕಿಚ್ಚನ ಮುಂದೆ ಪ್ರಶಾಂತ್ ಸಂಬರ್ಗಿಯವರ ಕುರಿತಂತೆ ಸಾಹಿತ್ಯವೊಂದನ್ನು ಬರೆದಿದ್ದಾರೆ.

    ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು, ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು, ಕಡಲನೇ ತಂದು ಮಡಿಲಿಗೆ ಸುರಿದವನು. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಎಂದು ಚಕ್ರವರ್ತಿ ಚಂದ್ರಚೂಡರವರು ಹೇಳುತ್ತಾರೆ. ಈ ವೇಳೆ ಕಿಚ್ಚ ಸುದೀಪ್ ಪ್ರಶಾಂತ್ ಸಂಬರ್ಗಿಯವರೆ ನಿಮಗೆ ಯಾಕೆ ಈ ಸಾಲುಗಳನ್ನು ಹೇಳಿದರು ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರಶಾಂತ್ ಗೊತ್ತಿಲ್ಲ ಎಂದಾಗ ಸುದೀಪ್ ಹಾಸ್ಯಮಯವಾಗಿ ನಿಮಗೆ ಗೊತ್ತಿಲ್ವಾ ಎನ್ನುತ್ತಾ ನಗುತ್ತಾರೆ.

    ಬಳಿಕ ಸುದೀಪ್ ಚಕ್ರವರ್ತಿವಯರೇ ವಿವರಿಸಿ ಯಾಕೆ ಪ್ರಶಾಂತ್ ಸಂಬರ್ಗಿಯವರ ಮೇಲೆ ಈ ಸಾಹಿತ್ಯ ಬರೆದಿದ್ದೀರಾ ಎಂದು ಹೇಳಿದಾಗ, ಕಲ್ಲದೇವರನ್ನೇ ಕಡಿದು ದೇವರಾಗಿಸಿದವನು ಎಂದರೆ ಕಲ್ಲಾಗಿದ್ದಾಗ ಅದು ಯಾರಿಗೂ ಬೇಡವಾಗಿರುತ್ತದೆ, ಆದರೆ ಅದು ದೇವರಾದಾಗ ಎಲ್ಲರಿಗೂ ಬೇಕಾಗುತ್ತದೆ. ಒಂದು ಬೇಡವಾಗಿರುವುದನ್ನು ಬೇಕಾಗಿಸುವಂತಹ ಶಕ್ತಿ ಪ್ರಶಾಂತ್‍ರವರಿಗೆ ಇದೆ. ಮೊಸಳೆಯ ಸಾಕಿ ಹಸುಳೆಯನ್ನಾಗಿಸಿದವನು ಎಂದರೆ ಮೊಸಳೆ ನೀರಿನಲ್ಲಿದ್ದಾಗ ಯಾರಾದರೂ ಹೋದರೆ, ಒಮ್ಮೆ ಅದು ಹಿಡಿದುಕೊಂಡರೆ ಬಿಡುವುದಿಲ್ಲ. ಆದರೆ ಅದನ್ನು ಮಗುವಿನಂತೆ ಮಾಡಿಸುತ್ತಾನೆ ಎಂದರೆ ಅವನು ನೂರಾರು ಬ್ರಹ್ಮಗಳಿಗೆ ತಂದೆ ಎಂದರ್ಥ.

    ಕಡಲನೇ ತಂದು ಮಡಿಲಿಗೆ ಸುರಿದ ಎಂದರೆ ಈ ಮನುಷ್ಯ ಯಾರಿಗಾದರೂ ಸಂತೋಷ ಕೊಡಲು ಪ್ರಾರಂಭಿಸಿದರೆ, ಅಷ್ಟು ಸಂತೋಷ ಕೊಡುವ ತಾಕತ್ತಿದೆ. ಹಾಗೇಯೇ ಅಷ್ಟೇ ಕಾಟವನ್ನು ಕೂಡ ಕೊಟ್ಟು ಬಿಡುತ್ತಾನೆ. ಕಾಮನ ಬಿಲ್ಲಿಗೆ ಬಣ್ಣ ಬಣ್ಣಗಳ ಕಲರ್ ಕಾಗೆ ಹಾರಿಸಿದವನು ಅಂದರೆ ಕಾಮನ ಬಿಲ್ಲು ಶಾಶ್ವತ ಅಲ್ಲ ಹೀಗೆ ಬಂದು ಹೀಗೆ ಹೋಗುತ್ತದೆ. ಸುಳ್ಳನ್ನೆ ತಂದು, ಸುಳ್ಳನ್ನೇ ಅಡುಗೆ ಮಾಡಿ, ಸುಳ್ಳನ್ನೇ ಬಡಿಸುವಷ್ಟು ಸತ್ಯವಂತ ಅಂತ ನಾನು ಭಾವಿಸಿದ್ದೇನೆ ಎಂದು ವ್ಯಂಗ್ಯಮಯವಾಗಿ ನುಡಿಯುತ್ತಾ, ಪ್ರಶಾಂತ್ ಸಂಬರ್ಗಿಯವರ ಮೇಲೆ ಕವಿತೆ ಬರೆದು ಬಣ್ಣಿಸಿದ್ದಾರೆ.

    ಒಟ್ಟಾರೆ ಚಕ್ರವರ್ತಿಯವರು ಆನ್ ದಿ ಸ್ಪಾರ್ಟ್ ಬರೆದ ಈ ಸಾಹಿತ್ಯ ಕೇಳಿ ಮನೆಯ ಎಲ್ಲಾ ಸದಸ್ಯರು ಎದ್ದು-ಬಿದ್ದು ನಕ್ಕಿದ್ದಾರೆ.

  • ಚಕ್ರವರ್ತಿಗೆ ಅಂಕಕೊಟ್ಟು ಅಳೆದ ಬಿಗ್‍ಬಾಸ್ ಸ್ಪರ್ಧಿಗಳು

    ಚಕ್ರವರ್ತಿಗೆ ಅಂಕಕೊಟ್ಟು ಅಳೆದ ಬಿಗ್‍ಬಾಸ್ ಸ್ಪರ್ಧಿಗಳು

    ಬಿಗ್‍ಬಾಸ್ ಮನೆಯ ವಾರದ ಕಟ್ಟೆ ಪಂಚಾಯ್ತಿಗಾಗಿ ವೀಕ್ಷಕರು ಕಾಯುತ್ತಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲ್ಲಿ ಮನೆಯ ಸದಸ್ಯರೆಲ್ಲರೂ ಒಂದಾಗಿ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಯನ್ನು ಬೇರೆ ಎಂದು ನೋಡುತ್ತಿದ್ದಾರೆ ಎಂಬುದು ಬಯಲಾಗಿದೆ.

    ಮನೆಯಲ್ಲಿರುವ ಸದಸ್ಯರು ಎಷ್ಟೇ ಚೆನ್ನಾಗಿ ಇರುತ್ತಾರೆ ಎಂದರೂ ಗೆಲ್ಲುವ ಹಂಬಲ ಎಲ್ಲರಲ್ಲಿಯೂ ಇದೆ. ತಾನು ಸೇವ್ ಆಗಬೇಕು, ಅಂತಿಮ ಘಟ್ಟದವರೆಗೂ ನಾವು ಇರಬೇಕು ಎಂದು ಪ್ರತಿಯೊಬ್ಬ ಬಿಗ್‍ಬಾಸ್ ಸ್ಪರ್ಧಿಯು ಕೂಡ ಅಂದುಕೊಳ್ಳುತ್ತಾನೆ. ಹೀಗಿದ್ದರೂ ಮನೆಯವರಿಗೆ ನಾವೆಲ್ಲ ಒಂದೇ ಎನ್ನುವ ಭಾವನೆಯೂ ಇದೆ ಎನ್ನುವುದು ತಿಳಿದು ಬಂದಿದೆ.

    ಮನೆಗೆ ಹೊಸ ಅತಿಥಿ ಬಂದ ದಿನದಿಂದಲೂ ಮನೆಯವರಿಗೆ ಆತಂಕ ಎದುರಾಗಿದೆ. ವೈಲ್ಡ್ ಕಾರ್ಡ್ ಎಂಟಿ ಮೂಲಕವಾಗಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಒಂಟಿ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಈ ವಿಚಾರವಾಗಿ ಬಿಗ್‍ಬಾಸ್ ಮನೆಯ ಸ್ಪರ್ಧಿಗಳಿಗೆ ಕೊಂಚ ಬೇಸರವಾಗಿದೆ. ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕುರಿತಾಗಿ ಏನು ಹೇಳುತ್ತಾರೆ ಎಂದು ತಿಳಿದುಕೊಳ್ಳಲು ಸುದೀಪ್, ಚಕ್ರವರ್ತಿ ಅವರಿಗೆ ನೀವು ಅಂಕವನ್ನು ಕೊಟ್ಟು, ಸೂಕ್ತ ಕಾರಣವನ್ನು ಹೇಳಿ ಎಂದು ಹೇಳಿದ್ದಾರೆ. ಈ ವೇಳೆ ಮನೆ ಮಂದಿ ಅಂಕವನ್ನುಕೊಟ್ಟು ಕೇಳಿರುವ ಹೇಳಿಕೆಯನ್ನು ಕೇಳಿ ಸುದೀಪ್ ಸುಮ್ಮನೆ ನಿಂತು ಕೇಳುತ್ತಿದ್ದಾರೆ.

    ಒಂದು, ಝೀರೋ, ಮೈನಸ್ ಒಂದು, ಝೀರೋ, ಅರ್ಧ ಎಂದು ಮಾಕ್ರ್ಸ್ ಕೊಟ್ಟಿದ್ದಾರೆ. ಅವರ ಬಳಿ ಭಾಷೆಯ ಮೇಲೆ ಹಿಡಿತ ಇರಬಹುದು ಅದನ್ನು ಇಟ್ಟುಕೊಂಡು ಬೇರೆ ಟ್ಯಾಲೆಂಟ್‍ನ್ನು ರೂಲ್ ಮಾಡಲು ಸಾಧ್ಯವಿಲ್ಲ. ತುಂಬಾ ಡಾಮಿನೇಟಿಂಗ್, ಬೇರೆಯವರ ಬಗ್ಗೆ ಕಾಮೆಂಟ್ ಮಡುವುದು ಸುಲಭ. ಆದರೆ ಅದರಂತೆ ನಡೆಯುವುದು ಕಷ್ಟ.. ಹೀಗೆ ಹಲವು ಕಾರಣಗಳನ್ನು ಕೊಟ್ಟಿದ್ದಾರೆ.

    ಮನೆಯವರು ಅಂಕವನ್ನು ಕೊಟ್ಟು ಕೆಲವಷ್ಟು ಕಾರಣಗಳನ್ನು ಹೇಳುತ್ತಿರುವಾಗ ಸುದೀಪ್ ಅವರು ನಕ್ಕಿದ್ದಾರೆ. ಆದರೆ ಮನೆಯವರ ಅನಿಸಿಕೆಗಳನ್ನು ಕೇಳಿದ ಚಕ್ರವರ್ತಿ ಚಂದ್ರಚೂಡ್ ಮಾತ್ರ ತಲೆ ಅಲ್ಲಾಡಿಸುತ್ತಾ ಸುಮ್ಮನೆ ಕುಳಿತು ಕೇಳಿದ್ದಾರೆ. ಇಂದಿನ ಸಂಚಿಕೆಯಲ್ಲಿ ಮನೆಯವರು ಅಂಕವನ್ನು ಕೊಟ್ಟು ವೈಲ್ಡ್ ಕಾರ್ಡ್ ಎಂಟ್ರಿ ಕುರಿತಾಗಿ ಬಿಸಿ ಬಿಸಿ ಚರ್ಚೆಯಾಗಲಿದೆ.

    ಮನೆಯಲ್ಲಿ ಬಿಗ್‍ಬಾಸ್ ಆಟ ಶುರುವಾಗಿದೆ. ಮನೆಯ ಆಟ ದಿನದಿಂದ ದಿನಕ್ಕೆ ರಂಗೇರುವ ಸಮಯದಲ್ಲಿಯೆ ವೈಲ್ಡ್ ಕಾರ್ಡ್ ಎಂಟ್ರಿ ಮನೆಯಲ್ಲಿ ಇನ್ನುಷ್ಟು ಆಟದ ವೈಖರಿಯೆ ಬದಲಾದಂತಿದೆ. ಇಂದಿನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಯಾವೆಲ್ಲಾ ಇಂಟ್ರೆಸ್ಟಿಂಗ್ ವಿವರಗಳು ಹೊರ ಬರುತ್ತವೆ ಎಂಬುದನ್ನು ಕಾದುನೋಡಬೇಕಿದೆ.

  • ನೋಡದಕ್ಕೆ ಮಾತ್ರ ಹುಡುಗಿ ಮನಸ್ಸು ಹುಡುಗ ಎಂದು ಚಂದ್ರಚೂಡ ಹೇಳಿದ್ದು ಯಾರಿಗೆ?

    ನೋಡದಕ್ಕೆ ಮಾತ್ರ ಹುಡುಗಿ ಮನಸ್ಸು ಹುಡುಗ ಎಂದು ಚಂದ್ರಚೂಡ ಹೇಳಿದ್ದು ಯಾರಿಗೆ?

    ಬೆಂಗಳೂರು: ಬಿಗ್‍ಬಾಸ್ ಸೀಸನ್ 8 ರ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿರುವ ಚಕ್ರವರ್ತಿ ಚಂದ್ರಚೂಡ, ಬಿಗ್‍ಮನೆಯಲ್ಲಿರುವ ಇತರ ಸ್ಪರ್ಧಿಗಳೊಂದಿಗೆ ಬೆರೆಯಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮಾತಿನ ಮೂಲಕವೇ ಮೋಡಿ ಮಾಡಲು ಹೊರಟಿರುವ ಚಂದ್ರಚೂಡ, ನೀನು ನೋಡುದಕ್ಕೆ ಮಾತ್ರ ಹುಡುಗಿ ಮನಸ್ಸು ಮಾತ್ರ ಹುಡುಗನ ಹಾಗೆ ಎಂದು ಸ್ಪರ್ಧಿಯೊಬ್ಬರ ಕಾಲೆಳೆದಿದ್ದಾರೆ.

    ಹೌದು ಚಂದ್ರಚೂಡ ಬೆಳಗ್ಗೆ ಎದ್ದು ಪ್ರಶಾಂತ್, ರಘು ಮತ್ತು ನಿಧಿ ಸುಬ್ಬಯ್ಯ ಅವರೊಂದಿಗೆ ಮಾತಿಗಿಳಿದಿದ್ದರು. ಈ ವೇಳೆ ಮುಂದೆ ಕುಳಿದ್ದ ನಿಧಿಯನ್ನು ಕುರಿತು ನಾನು ನಿಧಿಮಾನನ್ನು ಹುಡುಗಿ ಎಂದು ನೋಡೋದೆ ಇಲ್ಲ. ಇವರು ನೋಡುದಕ್ಕೆ ಮಾತ್ರ ಹುಡುಗಿ ಮನಸ್ಸೆಲ್ಲ ಹುಡುಗನ ಹಾಗೆ ಇದೆ. ಇವರ ಸೈಕಾಲಜಿ ಪುರುಷರ ಸೈಕಾಲಜಿ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ಮೊದಲು ಚಂದ್ರಚೂಡ, ನಿಧಿ ನಿಮಗೆ ನಾನು ಕಪಲ್‍ಬಾತ್ ಮತ್ತು ಬುದ್ಧ ವಾಕಿಂಗ್ ಹೇಳಿಕೊಡುತ್ತೇನೆ ಪ್ರತಿದಿನ ಹದಿನೈದು ನಿಮಿಷ ಇದನ್ನು ಮಾಡಬೇಕು ಇದರಿಂದ ನಿಮ್ಮ ಎನರ್ಜಿ ಹೆಚ್ಚಾಗುತ್ತದೆ ಎಂದರು. ನಂತರ ಚಂದ್ರಚೂಡ ನಾನು ಇದನ್ನು ವೈಷ್ಣವಿ ಅವರಿಗೂ ಹೇಳಿಕೊಡಬೇಕು ಬಿಗ್‍ಬಾಸ್ ಮನೆಯಲ್ಲಿ ಅವರ ಎನರ್ಜಿ ತುಂಬಾ ಚೆನ್ನಾಗಿದೆ. ಪಾಸಿಟಿವ್ ಎನರ್ಜಿ ಕಾಣಿಸುತ್ತಿದೆ, ನಮ್ಮ ಮುಂದೆ ಕುಳಿತಿರುವವರನ್ನು ನೋಡಿದಾಗ ಅವರ ಶಕ್ತಿಯ ಬಗ್ಗೆ ಅರಿವಾಗುತ್ತದೆ ಎಂದರು.

    ಈ ವೇಳೆ ಮಾತು ಪ್ರಾರಂಭಿಸಿದ ರಘು ನಾನು ಬಿಗ್‍ಬಾಸ್ ಮನೆಗೆ ಬಂದ ನಂತರ ಇಲ್ಲಿ ಒಂದಿಬ್ಬರು, ಮೂವರಲ್ಲಿ ಈ ರೀತಿಯ ಎನರ್ಜಿ ನೋಡಿದ್ದೇನೆ ಎಂದರು. ನಾವು ಹೆಣ್ಣು ಗಂಡು ಅಂತ ಬೇರೆ ಬೇರೆ ನೋಡಬಾರದು ಹೆಣ್ಣು ಗಂಡು ಒಂದೇ ಎಂದು ಚಂದ್ರಚೂಡ ತಿಳಿಸಿ, ನಿಧಿ ಒಳ್ಳೆ ಹುಡುಗಿ ಆದರೆ ನೋಡುದಕ್ಕೆ ಹಾಗೆ ಕಾಣುವುದಿಲ್ಲ ಎಂದು ತಮಾಷೆ ಮಾಡಿದರು.

    ಬಿಗ್‍ಮನೆಗೆ ಬಂದಂತಹ ಕೆಲ ಸ್ಪರ್ಧಿಗಳು ಎಲಿಮಿನೆಟ್ ಆಗಿ ಹೊರನಡೆದಿದ್ದರೆ, ಇದೀಗ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ಚಂದ್ರಚೂಡ ಮಾತ್ರ ತಮ್ಮ ಮಾತು ಮತ್ತು ವರ್ತನೆಯ ಮೂಲಕ ಬಿಗ್‍ಬಾಸ್ ಮನೆಯಲ್ಲಿ ಹೊಸ ಮಂದಹಾಸ ಮೂಡಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವರೀತಿ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

  • ಕೊಡಗಿನ ಜನತೆಗೆ ನೆರವಾಗಲು ರಂಗಸಪ್ತಾಹ- ಭಾಗವಹಿಸಿ, ಸಹಾಯ ಮಾಡಿ

    ಕೊಡಗಿನ ಜನತೆಗೆ ನೆರವಾಗಲು ರಂಗಸಪ್ತಾಹ- ಭಾಗವಹಿಸಿ, ಸಹಾಯ ಮಾಡಿ

    ಬೆಂಗಳೂರು: ಕೊಡಗಿನ ಅನಾಹುತಕ್ಕೆ ನೆರವಾಗಲು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಆರಂಭವಾದ ಪೀಪಲ್ ಫಾರ್ ಕೊಡಗು ತಂಡವು ರಂಗಸಪ್ತಾಹ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

    ಬೆಂಗಳೂರಿನ ಕಲಾಗ್ರಾಮದಲ್ಲಿ ನವೆಂಬರ್ 11 ರಿಂದ ನವೆಂಬರ್ 16ರ ತನಕ ಪ್ರತಿದಿನ ಸಂಜೆ 5.30ಕ್ಕೆ ಗಾಯನ ಹಾಗೂ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಟಿಕೆಟ್ ಬೆಲೆ 100 ರೂ. ಹಾಗೂ 600 ರೂ. ಸೀಸನ್ ಪಾಸ್ ದರ ನಿಗದಿ ಮಾಡಲಾಗಿದೆ.

    ಪೀಪಲ್ ಫಾರ್ ಪೀಪಲ್ ಮನವಿ ಏನು?
    ಮಳೆ ನಿಂತಿತು, ಕೊಡಗು ಕೂಡ ಜನರ ನೆನಪಿನಿಂದ ಮರೆಯಾಗತೊಡಗಿತು. ನಮ್ಮ ದೇಶದಲ್ಲಿ ಸಮಸ್ಯೆಗಳೇ ಹಾಗೆ. ತಕ್ಷಣದ ಅನುಭೂತಿ ಮುಗಿದ ಮೇಲೆ ನಾವೆಲ್ಲರೂ ಮರೆಯುತ್ತೇವೆ. ಆದರೆ ಕೊಡಗು ನಮ್ಮೆಲ್ಲರ ಹೆಮ್ಮೆ. ಈ ಕೊಡಗು ಸರಿ ಹೋಗಿಲ್ಲ ಸಮಸ್ಯೆಗಳ ಸಾಗರವೇ ಇದೆ. ಕೊಡಗನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಟ್ಟದಷ್ಟು ಕೆಲಸಗಳು ಬಾಕಿ ಇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತಿದ್ದರೂ ಮರುನಿರ್ಮಾಣಕ್ಕೆ ವರ್ಷಾನುಗಟ್ಟಲೆಯ ಬದ್ಧತೆ ಬೇಕಿದೆ, ಶ್ರಮ ಹಾಕಬೇಕಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ “ಪೀಪಲ್ ಫಾರ್ ಪೀಪಲ್” ತಂಡ 25ಕ್ಕೂ ಹೆಚ್ಚು ದಿನಗಳ ಕಾಲ ಕೊಡಗಿನ ನೆರೆ ಪೀಡಿತ ಪ್ರದೇಶಗಳಲ್ಲಿ ನಿಂತು ಕೆಲಸ ಮಾಡಿದ್ದಲ್ಲದೆ ಸರಕಾರಕ್ಕೆ ಆಗಲೇಬೇಕಾದ 19 ಅವಶ್ಯ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದ ಮೂಲಕ ಕೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಲು ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರನ್ನು ಕೈಜೋಡಿಸುವಂತೆ ಕೇಳಿಕೊಂಡಿದೆ. ಖುಷಿಯ ವಿಚಾರವೆಂದರೆ ಮಠ ಮಾನ್ಯಗಳಿಂದ ಹಿಡಿದು ರೈತ ಸಂಘದ ವರೆಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

    ಈಗ ಆಗಬೇಕಾಗಿದ್ದು ಏನು?
    ಜಾಗೃತಿ, 719 ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ, 6095 ಮನೆಗಳ ಮರುನಿರ್ಮಾಣ, 2000 ಜಾನುವಾರು ಮತ್ತು ಹೈನುಗಾರಿಕೆಗೆ ವ್ಯವಸ್ಥೆ, 183 ಶಾಲೆಗಳ ನಿರ್ಮಾಣ, ಹಾಳಾದ 13 ಸಾವಿರ ಹೆಕ್ಟೇರ್ ಭೂ ಪ್ರದೇಶವನ್ನು ವಾಸಯೋಗ್ಯವಾಗಿ ನಿರ್ಮಿಸುವುದು, ಕ್ಯಾಂಪ್ ಗಳ ನಿರ್ವಹಣೆ, ಮುಖ್ಯವಾಗಿ ಐದು ನದಿಗಳ ಪುನರುಜ್ಜೀವನ ಇದಕ್ಕೆ ಸಾಕಷ್ಟು ಶ್ರಮ ಬೇಕು ಜೊತೆಗೆ ಹಣವೂ ಬೇಕು. ಸಿಎಂ ಫಂಡ್ ಕೂಡ ಸಾಲುವುದಿಲ್ಲ. ಹತ್ತು ವರುಷದ ಶ್ರಮ ಬೇಡುವ ಸಮಸ್ಯೆ. ಈ ನಿಟ್ಟಿನಲ್ಲಿ ಪರಿಹಾರ ಕೆಲಸವಾಗಬೇಕಿದೆ. ತಾತ್ಕಾಲಿಕ ಉದ್ಯೋಗ ಮೇಳ, ಆರೋಗ್ಯ ಮೇಳ ಮೆಡಿಕಲ್ ಟರ್ಮ್ ಕೆಲಸ ಆಗಬೇಕು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: Kodagigagi Rangasapthaha

    ಈ ಎಲ್ಲ ಸದುದ್ದೇಶಗಳಿಗಾಗಿ ಈ ರಂಗ ಸಪ್ತಾಹದ ಕಾರ್ಯಕ್ರಮ ನಾಡಿನ ಅತ್ಯುತ್ತಮ ರಂಗತಂಡಗಳು ನವೆಂಬರ್ 11 ರಿಂದ ನವೆಂಬರ್ 17 ರ ವರೆಗೆ ರಂಗ ಪ್ರದರ್ಶನ ನೀಡುವುದರ ಮೂಲಕ ಈ ಮಹಾತ್ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಮೂಲಕ ಏನು ಸಿಗುತ್ತದೊ ಅದನ್ನ ಕೊಡಗಿಗೆ ಬಳಸುವುದು ನಮ್ಮ ಉದ್ದೇಶ.

    ಇದೆಲ್ಲದರ ಜೊತೆ ಕೊಡಗಿನ ಸಮಸ್ಯೆಗಳನ್ನು ಒಳಗೊಂಡ ವೈಜ್ಞಾನಿಕ ವಿಶ್ಲೇಷಣೆಯ ಯಾವುದೇ ಪಕ್ಷ, ಸಂಘಟನೆ ಪರವಾಗಿರದ ತಜ್ಞರ ರಿಸರ್ಚ್ ಆಧಾರದಲ್ಲಿ ಸಹ್ಯಾದ್ರಿ ಬದುಕಿಗೆ ಪರ್ಯಾಯ ಆಂದೋಲನ ರೂಪಿಸುವ ಶಕ್ತಿಗಾಗಿ ಸವಿವರವಾದ ‘ಜಮ್ಮಾ ಭೂಮಿರ ಕಥೆ’ ಸಾಕ್ಷ್ಯಚಿತ್ರ ನಿರ್ಮಾಣದ ಕಾರ್ಯವನ್ನೂ ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಕಿಂಚಿತ್ತು ಸಹಾಯ, ಉದಾರ ಸಹಾಯಹಸ್ತ ಮುಳುಗಿ ಹೋಗಿರುವ ನಮ್ಮದೇ ನಾಡಿನ ಜನರ ಬದುಕು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews