Tag: ಚಕ್ರವರ್ತಿ ಚಂದ್ರಚೂಡ್

  • ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಹೊರಗಡೆ ತುಂಬಾ ಜನ ‘ಬೇಕಾದವರಿದ್ದಾರೆ’, ಅದಕ್ಕಾಗಿ ಬಂದಿಲ್ಲ

    ಳೆದ ಕೆಲ ದಿನಗಳಿಂದ ಪ್ರಿಯಾಂಕಾ ಹಾಗೂ ಶಮಂತ್ ಜೋಡಿ ಕುರಿತು ಸಖತ್ ಚರ್ಚೆಯಾಗುತ್ತಿದ್ದು, ಚಕ್ರವರ್ತಿ ಇವರಿಬ್ಬರನ್ನು ಸೇರಿಸಲು ಹರಸಾಹಸಪಡುತ್ತಿದ್ದಾರೆ. ಆದರೆ ಪ್ರಿಯಾಂಕಾ ಮಾತ್ರ ನಾಚುತ್ತಲೇ ತಿರಸ್ಕರಿಸುತ್ತಿದ್ದಾರೆ. ಇಬ್ಬರೂ ಪರೋಕ್ಷವಾಗಿ ಮಾತನಾಡುವ ಮೂಲಕ ಗಮನಸೆಳೆಯುತ್ತಿದ್ದಾರೆ. ಈ ಮಧ್ಯೆ ಕನ್ವಿನ್ಸ್ ಮಾಡಲು ಬಂದ ಚಕ್ರವರ್ತಿ ಅವರಿಗೆ ನಗುತ್ತಲೇ ತಕ್ಕ ಉತ್ತರ ನೀಡಿದ್ದಾರೆ.

    ನಿನ್ನೆ ನಾನು ಹೇಳಿದ್ದಕ್ಕೆ ಶಮಂತ್ ತುಂಬಾ ಡಿಸ್ಟರ್ಬ್ ಆಗಿಬಿಟ್ಟಿದ್ದಾನೆ, ಹಾಗೆ ಹೇಳಬೇಡಿ ಸರ್ ಎಂದು ಜಗಳ ಮಾಡಿದ. ನನಗೆ ಇಂಟರೆಸ್ಟ್ ಇಲ್ಲ, ಹೋಗಿ ನೇರವಾಗಿ ಹೇಳುತ್ತೇನೆ ಅವರಿಗೆ ಎಂದು ರೇಗಾಡಿದ ಎಂದು ಚಕ್ರವರ್ತಿ ಪ್ರಿಯಾಂಕಾಗೆ ಹೇಳಿದ್ದಾರೆ. ಇದಕ್ಕೆ ಕೋಪದಿಂದಲೇ ಉತ್ತರಿಸಿದ ಪ್ರಿಯಾಂಕಾ, ನೀವು ನಿನ್ನೆ ತುಂಬಾ ಅತಿಯಾಗಿ ಮಾತನಾಡಿದಿರಿ ಎಂದು ಹೇಳಿದ್ದಾರೆ. ಇದಕ್ಕೆ ಚಕ್ರವರ್ತಿ ಉತ್ತರಿಸಿ ನನಗೇನು ಗೊತ್ತು, ನೀನು ಲವ್ ಸಿಂಬಲ್ ಮಾಡಿದ್ದಕ್ಕೆ ಆ ರೀತಿ ಅಫೆಕ್ಷನ್ ಇರಬಹುದು ಎಂದುಕೊಂಡೆ ಎಂದಿದ್ದಾರೆ. ತಕ್ಷಣವೇ ಉತ್ತರಿಸಿದ ಪ್ರಿಯಾಂಕಾ, ನನಗೆ ಹೊರಗಡೆ ತುಂಬಾ ಜನ ಬೇಕಾದವರಿದ್ದಾರೆ, ಈ ಮನೆಗೆ ಅದಕ್ಕೋಸ್ಕರ ಬಂದಿಲ್ಲ. ಆ ರೀತಿ ಯೋಚನೆಗಳೂ ಬರಲ್ಲ ಎಂದು ಖಾರವಾಗಿ ಪ್ರತಿಕ್ರಿಸಿದ್ದಾರೆ.

    ಇದಕ್ಕಾಗಿಯೇ ಬರಲ್ಲ, ಆ ರೀತಿ ಸಂಭವಿಸಬಹುದು ಎಂದು ಚಕ್ರವರ್ತಿ ಸಮರ್ಥಿಸಿಕೊಳ್ಳಲು ಹೋಗಿದ್ದಾರೆ. ನಿಮಗೆ ನೀವೇ ಹೇಗೆ ಯೋಚನೆ ಮಾಡುತ್ತೀರಿ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಹಾಗೆ ಅನ್ನಿಸಿದ್ದಕ್ಕೆ ಬಂದು ನಿನ್ನನ್ನು ಕೇಳಿದೆ, ಹಾಗೆ ಅನ್ನಿಸಿಲ್ಲ ಎಂದು ಗೊತ್ತಾದ ಮೇಲೆ ಬಿಟ್ಟಾಕಿದೆ ಎಂದು ಚಕ್ರವರ್ತಿ ಹೇಳಿದ್ದಾರೆ. ನೀವು ಅಷ್ಟು ಬುದ್ಧಿವಂತರಾಗಿ ಹೀಗೆ ಮಾಡಿದರೆ ಹೇಗೆ ಎಂದು ಪ್ರಿಯಾಂಕಾ ಹೇಳಿದ್ದಾರೆ. ಈ ಬಗ್ಗೆ ಶಮಂತ್ ಸಹ ಬೇಡ ಸರ್ ನಂಗೆ ಇಂಟರೆಸ್ಟ್ ಇಲ್ಲ ಅಂದ, ಸರಿ ಫ್ರೆಂಡ್ ಆಗಿರಿ ಎಂದು ಹೇಳಿದೆ ಎಂದು ಚಕ್ರವರ್ತಿ ಹೇಳುತ್ತಾರೆ.

    ಹಾಗಾದರೆ ನಮಗೆ ಇಂಟರೆಸ್ಟ್ ಇದೆ ಅಂತಾನಾ ಎಂದು ಪ್ರಿಯಾಂಕಾ ಪ್ರಶ್ನಿಸಿದ್ದಾರೆ. ಆಗ ನನಗೆ ಮೂರ್ನಾಲ್ಕು ದಿನದಿಂದ ಹಾಗೆ ಅನ್ನಿಸುತ್ತಿತ್ತು, ನಿಮ್ಮಿಬ್ಬರ ನಡುವೆ ಅಫೆಕ್ಷನ್ ಇದೆ ಎಂದು ಭಾಸವಾಗಿತ್ತು ಎಂದು ಚಕ್ರವರ್ತಿ ಹೇಳಿದ್ದಾರೆ. ಅಲ್ಲದೆ ನೀನು ಬಿಗ್ ಬಾಸ್‍ನಲ್ಲಿ ಅಥವಾ ಎಲ್ಲಿ ಪರಿಚಯವಾಗಿದ್ದಿಯಾ ಗೊತ್ತಿಲ್ಲ, ಒಟ್ನಲ್ಲಿ ನೀನು ಚೆನ್ನಾಗಿರಬೇಕು ಅಷ್ಟೇ. ಇದಕ್ಕಾಗಿ ನಮ್ಮ ಕೈಲಾಗಿದ್ದನ್ನು ನಾವು ಮಾಡುತ್ತೇವೆ, ನಮಗೆ ದೇವರು ಶಕ್ತಿ, ಅಸ್ಥಿತ್ವ ಕೊಟ್ಟಿದ್ದಾನೆ ಎಂದು ಚಕ್ರವರ್ತಿ ಹೇಳುತ್ತಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಅದನ್ನು ಇಂತಹ ಕೆಲಸಗಳಿಗೆ ಉಪಯೋಗಿಸಬೇಡಿ, ಬೇರೆ ಕೆಲಸಗಳಿವೆ ಅವುಗಳನ್ನು ಮಾಡಿ, ನಾವು ಯಾರನ್ನು ಮದುವೆ ಆಗಬೇಕು ಎಂಬುದು ನಮಗೆ ಗೊತ್ತಿದೆ ಎಂದು ತಕ್ಕ ಉತ್ತರ ನೀಡಿದ್ದಾರೆ.

  • ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ನಿನ್ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ

    ಬಿಗ್ ಬಾಸ್ ಮನೆಯಲ್ಲಿ ಬರೀ ಜೋಡಿಯದ್ದೇ ಮಾತು. ಅರವಿಂದ್ ಹಾಗೂ ದಿವ್ಯಾ ಉರುಡುಗ ಒಂದು ಕಡೆಯಾದರೆ, ಮಂಜು ಹಾಗೂ ದಿವ್ಯಾ ಸುರೇಶ್ ಅವರದ್ದೇ ಮತ್ತೊಂದು ಜೋಡಿ. ಇದನ್ನು ಕಂಡು ಶಮಂತ್‍ಗೆ ಮಾತ್ರ ಸಖತ್ ಹೊಟ್ಟೆ ಉರಿ. ನನಗೂ ಯಾರೂ ಜೋಡಿ ಆಗುತ್ತಿಲ್ಲವಲ್ಲ ಎಂಬ ಕೊರಗು. ಇದನ್ನು ಹಲವು ಬಾರಿ ದಿವ್ಯಾ ಉರುಡುಗ ಬಳಿ ಹೇಳಿಕೊಂಡಿದ್ದಾರೆ ಸಹ. ಆದರೆ ಇದೀಗ ಜೋಡಿಯಾಗುವ ಸೂಚನೆಯನ್ನು ನೀಡಿದ್ದಾರೆ, ಇದಕ್ಕೆ ಸ್ವತಃ ಚಕ್ರವರ್ತಿ ಅವರು ಆರಂಭ ಹಾಡಿದ್ದಾರೆ.

    ಹೌದು ಶಮಂತ್ ಹಾಗೂ ಪ್ರಿಯಾಂಕಾ ವಿಚಾರದಲ್ಲಿ ಚಕ್ರವರ್ತಿ ಮಾತನಾಡಿದ್ದು, ಇಬ್ಬರ ನಡುವಿನ ಕುರಿತು ವಿರಸದ ಬಗ್ಗೆ ಮಾತನಾಡುವಾಗ ಲವ್ ವಿಷಯವನ್ನೂ ತಿಳಿಸಿದ್ದಾರೆ. ಆಟವಾಡಿಕೊಂಡು, ತಿನ್ಕೊಂಡು ಇದ್ರೆ ಬಿಗ್ ಬಾಸ್ ಬೇಗ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದೆ ಅದ್ಕೆ ಪ್ರಿಯಾಂಕಾ ಬೇಜಾರಾಗಿದ್ದಾರೆ ಎಂದು ಶಮಂತ್ ಹೇಳುತ್ತಾರೆ. ಇದಕ್ಕೆ ಉತ್ತರಿಸಿದ ಚಕ್ರವರ್ತಿ ಅವರು, ನೀನು ಆಟವಾಡಿಕೊಂಡು, ತಿನ್ಕೊಂದು ಇರೋದು ನೀನು, ಆ ಹಡುಗಿಗೆ ಯಾಕೆ ಹೇಳ್ತಿಯಾ ಎಂದು ಕೇಳಿದ್ದಾರೆ.

    ಇಷ್ಟೆಲ್ಲಾ ಆದ್ರೂ ನಗ್ತಿದಾರೆ ಅಂದ್ರೆ ಪ್ರಿಯಾಂಕಾಗೆ ನಿನ್ನ ಮೇಲೆ ಲವ್ ಇದೆ ಎಂದು ಚಕ್ರವರ್ತಿ ಹೇಳಿದ್ದು, ಇದಕ್ಕೆ ಪ್ರಶಾಂತ್ ಸಂಬರಗಿ ಸಹ ಸಾಥ್ ನೀಡಿ, ಪ್ರೀತಿ ಇದೆ ಇಬ್ಬರೂ ಹಂಚಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ಪ್ರಿಯಾಂಕಾಗೆ ಶಮಂತ್ ಬಗ್ಗೆ ಅಫೆಕ್ಷನ್ ಇದೆ, ಅವರ ಬಾಡಿ ಲಾಂಗ್ವೇಜ್, ನಗೆ, ಮಾತನಾಡುವುದು, ಕಾಮಿಡಿ ಮಾಡುವುದು ಎಲ್ಲವನ್ನೂ ನೋಡಿದರೆ ಇವರಿಬ್ಬರ ಮಧ್ಯೆ ಲವ್ ಇದೆ ಅನ್ನಿಸುತ್ತಿದೆ ಎಂದು ಮಾತನಾಡಿಕೊಂಡಿದ್ದಾರೆ.

    ಅಲ್ಲದೆ ನಿನಗೆ ಅವನ ಬಗ್ಗೆ ಅಫೆಕ್ಷನ್ ಇಲ್ವೇನಮ್ಮ ನಿಜ ಹೇಳು ಎಂದು ಚಕ್ರವರ್ತಿ ನೇರವಾಗಿ ಪ್ರಿಯಾಂಕಾಗೆ ಕೇಳುತ್ತಾರೆ. ನಾನು ಮನೋಶಾಸ್ತ್ರಜ್ಞ, ಬಾಡಿ ಲಾಂಗ್ವೇಜ್, ಕಣ್ಣುಗಳನ್ನು ನೋಡಿದರೆ ಗೊತ್ತಾಗಿ ಬಿಡುತ್ತೆ. ಒಂದೇ ಟೀಮ್‍ನಲ್ಲಿದ್ದು ನಮ್ಮನ್ನು ಯಾಕೆ ಹೀಗೆ ಸಾಯಿಸುತ್ತೀರಿ, ನಿರ್ಧಾರ ಮಾಡಿ ಎಂದಿದ್ದಾರೆ. ಅಲ್ಲದೆ ಪ್ರಿಯಾಂಕಾ ಹಾರ್ಟ್ ಸಿಂಬಾಲ್ ಮಾಡಿದ್ದಕ್ಕೆ ಅದು ನಿನಗೇ ಮಾಡಿದ್ದು ಎಂದು ಚಕ್ರವರ್ತಿ ಶಮಂತ್‍ಗೆ ಹೇಳುತ್ತಾರೆ.

    ಅದೇನು ಸಮಾಧಾನ ಮಾಡಿಕೊಂಡು ಮನವೊಲಿಸಿಕೊಳ್ಳಿ ಎನ್ನುತ್ತಾರೆ, ಆಗ ಶಮಂತ್ ಬೈಯಿಸಿಕೊಂಡು ನಾನೇ ಸಮಾಧಾನ ಮಾಡಲೇ ಎಂದು ಪ್ರಶ್ನಿಸುತ್ತಾರೆ. ಒಂದು ಹುಡುಗಿ ನಿನಗಾಗಿ ಲವ್ ಸಿಂಬಲ್ ಮಾಡಿದೆ ಎಂದರೆ ಇದಕ್ಕಿಂತ ಹಿಂಟ್ ಕೊಡಲು ಸಾಧ್ಯವಿಲ್ಲ. ನಾನು, ಪ್ರಶಾಂತ್ ಸೇರಿ ಮದುವೆ ಮಾಡಿಸುತ್ತೇವೆ ತಲೆ ಕೆಡಿಸಿಕೊಳ್ಳಬೇಡಿ. ನಿನ್ನ ಮೇಲೆ ಆ ಹುಡುಗಿಗೆ ಲವ್ ಇದೆ ಕಣೋ ಎಂದು ಶಮಂತ್‍ಗೆ ಚಕ್ರವರ್ತಿ ಹೇಳುತ್ತಾರೆ.

    ಇಷ್ಟಕ್ಕೆ ಸುಮ್ಮನಾಗದ ಚಕ್ರವರ್ತಿ ಅವರು, ಪ್ರಿಯಾಂಕಾಗೆ ಕಂಗ್ರಾಟ್ಸ್ ಹೇಳುತ್ತಾರೆ, ಆಗ ಪ್ರಿಯಾಂಕಾ ಯಾವ ಖುಷಿಗೆ ಎನ್ನುತ್ತಾರೆ. ತೀರ್ಮಾನ ಮಾಡಿದೆಯಲ್ಲ ಅದ್ಕೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ನಾಚಿದ ಪ್ರಿಯಾಂಕ ತಗ್ದು ಬಿಟ್ಟಾ ಅಂದ್ರೆ, ಹುಚ್ಚಾ ನಿಮಗೆ, ಕಾಮನ್ ಸೆನ್ಸ್ ಇಲ್ವಾ ಎಂದು ಕಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶಮಂತ್ ಒಳ್ಳೆ ಹುಡುಗ ಕಣಮ್ಮ ಎಂದು ಪ್ರಿಯಾಂಕಾಗೆ ಹೇಳುತ್ತಾರೆ ಚಕ್ರವರ್ತಿ, ನಾನು ಅವನಿಗೆ ಕನ್ವೆನ್ಸ್ ಮಾಡುತ್ತೇನೆ ನೀನು ಮುಂದುವರಿ ಎಂದು ಮತ್ತೆ ಪ್ರಿಯಾಂಕಾಗೆ ಹೇಳುತ್ತಾರೆ.

    ಯಾಕೆ ನಾವು ಹೊರಗಡೆ ಹೋಗೋಕೆ ಆಸೆನಾ ನಿಮಗೆ, ನಾವಿಬ್ರೂ ಹೊಡೆದಾಡಿಕೊಂಡು ರಕ್ತ ಬರಿಸಿಕೊಂಡ್ರೆ ಹೊರಗಡೆ ಕಳುಹಿಸುತ್ತಾರೆ ಎಂದು ಪ್ರಿಯಾಂಕಾ ಸಿಟ್ಟಾಗುತ್ತಾರೆ. ಸೆನ್ಸ್ ಇಲ್ವಾ ನಿಮಗೆ, ಏನ್ ತಮಾಷೆ ನಿಮಗೆ ಮಾಡೋಕೆ ಬೇರೆ ಕೆಲಸ ಇಲ್ವಾ? ಚೆನ್ನಾಗಿ ಆಟ ಆಡ್ತಿಲ್ಲ, 500 ರೂ. ಕಳೆದುಕೊಂಡಿದ್ದೀರಿ ಎಂದು ಚಕ್ರವರ್ತಿ ವಿರುದ್ಧ ಪ್ರಿಯಾಂಕಾ ರೇಗಾಡುತ್ತಾರೆ. ಆದರೂ ನಿನ್ ಜೀವನ ಅಲ್ವೇನಮ್ಮ ಎಂದು ಚಕ್ರವರ್ತಿ ಹೇಳುತ್ತಾರೆ, ನನ್ನ ಜೀವನ ಹಾಳಾಗಿ ಹೋಗಲಿ, ನೀವ್ಯಾರು ನನಗೆ ಕೇರ್ ಮಾಡೋಕೆ, ನನಗೆ ನಮ್ಮ ಮನೆಯಲ್ಲಿ ಇದ್ದಾರೆ. ಈ ತರ ಕೇರ್ ಮಾಡೋಕೆ ನೀವ್ಯಾರು, ಎಷ್ಟು ತಾಕತ್ ನಿಮಗೆ? ಎಂದು ರೇಗಾಡುತ್ತಾರೆ. ಇಲ್ವಾ, ತಮಾಷೆ ಮಾಡಿದ್ದಾ? ನಾನು ಸೀರಿಯಸ್ಸಾಗಿ ತಿಳಿದುಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಇದನ್ನೇ ಶುಭ ಪೂಂಜಾ ಅಣಗಿಸಿ, ರಂಜಿಸಿದ್ದಾರೆ.

    ಬಳಿಕ ಶಮಂತ್ ಬಳಿ ಬಂದು, ನಾನ್ ಮಾತಾಡಿದಿನಿ ಬಾ ಮಗ ಫುಲ್ ಸೆಟ್ಲ್ ಮೆಂಟ್ ಮಾಡಿದಿನಿ. ಎಲ್ಲಾ ಸರಿ ಮಾಡಿದೆ, ಒಕೆ ಅಂತೆ ಬಾ, 735 ಮದುವೆ ಮಾಡಿಸಿದ್ದೇನೆ ಇದು 736ನೇಯದ್ದು. ಲವ್ ಮ್ಯಾರೇಜ್, ಓಡೋಗಿರೋ ಮ್ಯಾರೇಜ್ 735 ಮಾಡ್ಸಿದಿನಿ, ಇವನದ್ದು 736ನೇಯದ್ದು. ವಧುವಿನ ಕಡೆಯಿಂದ ಒಕೆ ಆಗಿದೆ, ವರನದ್ದೇ ಸಮಸ್ಯೆ ಎಂದು ಹೇಳುತ್ತಾರೆ. ಬೆಳಗ್ಗೆ ನಾನು ರಿಸಲ್ಟ್ ಹೇಳಬೇಕು ಬಾರಪ್ಪ ಸಪರೇಟ್ ಆಗಿ ಮಾತನಾಡೋಣ, ನೀನು ನನ್ನ ಪುಟ್ಟ ತಮ್ಮ ಬಾರೋ ಎಂದು ಶಮಂತ್‍ಗೆ ಚಕ್ರವರ್ತಿ ಕರೆದಿದ್ದಾರೆ. ನಾನು ಈ ರೂಟಲ್ಲಿ ಹೋಗಬೇಕಾ ಬೇಡವೇ ಎಂಬ ಕನ್ಫ್ಯೂಶನ್‍ನಲ್ಲೇ ಇದ್ದೇ, ಈಗ ರೂಟ್ ಕ್ಲಿಯರ್ ಆಯ್ತು ಎಂದು ಕೊನೆಯದಾಗಿ ಮನೆ ಮಂದಿಗೆ ಚಕ್ರವರ್ತಿ ಹೇಳಿದ್ದಾರೆ.

     

  • ಚಕ್ರವರ್ತಿಗೆ ವಿಲನ್ ಎಂದ ಸಂಬರಗಿ

    ಚಕ್ರವರ್ತಿಗೆ ವಿಲನ್ ಎಂದ ಸಂಬರಗಿ

    ಬಿಗ್ ಮನೆಯಲ್ಲಿ ಸ್ಪರ್ಧಿಗಳು ಫುಲ್ ಮಜಾ ಮಾಡುತ್ತಿದ್ದು, ಟಾಸ್ಕ್ ಜೊತೆಗೆ ಉತ್ತಮ ಮನರಂಜನೆಯನ್ನೂ ನೀಡುತ್ತಿದ್ದಾರೆ. ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿಯವರ ಸ್ನೇಹ ಸಹ ಗಮನಸೆಳೆಯುತ್ತಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಸಂಬರಗಿ ಅವರು ಚಕ್ರವರ್ತಿ ಅವರಿಗೆ ವಿಲನ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

    ಟಾಸ್ಕ್‍ಗಳ ಮಧ್ಯೆ ಸ್ಪರ್ಧಿಗಳು ಅವರ ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಇದೀಗ ಲಿವಿಂಗ್ ಏರಿಯಾದಲ್ಲಿ ಸೇರುವ ಮೂಲಕ ಹರಟೆ ಹೊಡೆದಿದ್ದಾರೆ. ಈ ವೇಳೆ ಪ್ರಶಾಂತ್ ಸಂಬರಗಿ ಅವರು ಸಿನಿಮಾದ ಪರಿಕಲ್ಪನೆ ಕುರಿತು ಮಾತನಾಡಿದ್ದು, ಯಾರಿಗೆ ಯಾವ ಪಾತ್ರ ಹೊಂದುತ್ತದೆ ಎಂಬುದನ್ನು ತಿಳಿಸಿದ್ದಾರೆ. ಈ ವೇಳೆ ಚಕ್ರವರ್ತಿ ಅವರಿಗೆ ವಿಲನ್ ಎಂದು ಹೇಳಿದ್ದು, ಅರವಿಂದ್ ಹೀರೋ, ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಇಬ್ಬರನ್ನೂ ಹೀರೋಯಿನ್ ಎಂದಿದ್ದಾರೆ. ವೈಷ್ಣವಿಗೆ ಮಾತ್ರ ಹೀರೋಯಿನ್ ಅಮ್ಮ ಎಂದು ಹೇಳಿ ನಗಿಸಿದ್ದಾರೆ.

    ಲಿವಿಂಗ್ ಏರಿಯಾದಲ್ಲಿದ್ದಾಗ ಈಗ ಫಿಲಂ ಮಾಡೋಣ ಎಂದು ಹೇಳಿ, ಹೀರೋ ಅರವಿಂದ್, ಹೀರೋಯಿನ್ ಇಬ್ಬರು ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್. ವಿಲನ್ ಚಕ್ರವರ್ತಿ, ಮಂಜು ಪೊಲೀಸ್ ಇನ್‍ಸ್ಪೆಕ್ಟರ್. ನಿಧಿ ಸುಬ್ಬಯ್ಯ ಡ್ಯಾನ್ಸರ್, ನಾನು ಸುಪಾರಿ ಕೊಡಲು ಹುಡುಗಿ ಅಣ್ಣ ವಿಲನ್. ಪ್ರಿಯಾಂಕ ಹಿರೋಯಿನ್ ಅಣ್ಣನ ಪತ್ನಿ ಎಂದು ಹೇಳಿದ್ದಾರೆ. ಅಲ್ಲದೆ ಶಮಂತ್ ಇಬ್ಬರೂ ಹುಡುಗಿಯರಿಗೆ ಸ್ಕೆಚ್ ಹಾಕುವವನು ಎಂದಿದ್ದಾರೆ. ಶುಭ ಪೂಂಜಾ ಹಳೆ ಲವ್ ಸ್ಟೋರಿ ಫ್ಲ್ಯಾಶ್ ಬ್ಯಾಕ್ ಎಂದು ಹೇಳಿದ್ದಾರೆ, ತಕ್ಷಣವೇ ಶಮಂತ್ ವೈಷ್ಣವಿ ಹೀರೋಯಿನ್ ಅಮ್ಮ ಎಂದು ಹೇಳಿದ್ದಾರೆ.

    ಹೀಗೆ ಒಂದು ಸಿನಿಮಾ ಮಾಡಿದರೆ ಮನೆ ಮಂದಿ ಯಾವ್ಯಾವ ಪಾತ್ರ ನಿಭಾಯಿಸಬಹುದು ಎಂದು ಊಹಿಸಿದ್ದಾರೆ. ಒಟ್ಟಿನಲ್ಲಿ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದ್ದಾರೆ.

  • ಬೈದ್ರೋ, ಮೆಟ್ಟಲ್ಲಿ ಹೊಡೆದ್ರೋ ಕನ್ಫ್ಯೂಸ್ ಆಯ್ತು

    ಬೈದ್ರೋ, ಮೆಟ್ಟಲ್ಲಿ ಹೊಡೆದ್ರೋ ಕನ್ಫ್ಯೂಸ್ ಆಯ್ತು

    ಬಿಗ್ ಬಾಸ್‍ನ ವೀಕೆಂಡ್ ಎಪಿಸೋಡ್‍ಗಳಲ್ಲಿ ಸುದೀಪ್ ಭಾಗವಹಿಸುತ್ತಿಲ್ಲ. ಅನಾರೋಗ್ಯದ ಕಾರಣ ಅವರು ವೀಕೆಂಡ್ ಪಂಚಾಯಿತಿಗೆ ಹಾಜರಾಗಿಲ್ಲ. ಇದರಿಂದ ವೀಕ್ಷಕರಿಗಿಂತ ಹೆಚ್ಚು ಮನೆ ಮಂದಿಗೆ ಬೇಸರವಾಗಿದೆ. ಹೀಗಿರುವಾಗಲೇ ವಾಯ್ಸ್ ನೋಟ್ ಮೂಲಕ ಕಿಚ್ಚ ಸ್ಪರ್ಧಿಗಳಿಗೆ ಸರ್ಪೈಸ್ ಹಾಗೂ ಶಾಕ್ ನೀಡಿದ್ದಾರೆ. ಸ್ಪರ್ಧಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಲೇ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ.

    ಎಲ್ಲ ಸ್ಪರ್ಧಿಗಳ ಬಗ್ಗೆ ಕಿಚ್ಚ ಮಾತನಾಡಿದ್ದು, ಮನೆಯ ಬುದ್ಧಿವಂತರೆಂದೇ ಕರೆಸಿಕೊಳ್ಳುವ ಚಕ್ರವರ್ತಿ ಅವರ ಬಗ್ಗೆ ಸಹ ಹೇಳಿದ್ದಾರೆ. ಚಕ್ರವರ್ತಿಯವರು ನಂತರದಲ್ಲಿ ಈ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ. ತುಂಬಾ ತಿಳುವಳಿಕೆ ಇರುವವರು ನೀವು, ಆದರೂ ಒಂದು ಕಿವಿ ಮಾತು, ನಿಮ್ಮ ಮಾತು ಹಾಗೂ ತಿಳುವಳಿಕೆ ನಿಜವಾಗಿಯೂ ಚೆನ್ನಾಗಿದೆ. ಕೆಲವು ಸಲ ಬುದ್ಧಿ ಹೆಚ್ಚಾದಾಗಲೂ ಲೈಫ್ ದಾರಿ ತಪ್ಪಬಹುದು ಎನ್ನುವುದು ಗೊತ್ತಿರಲಿ ಎಂದು ಸುದೀಪ್ ಎಚ್ಚರಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿ ಚಕ್ರವರ್ತಿ, ಥ್ಯಾಂಕ್ಯೂ ಸರ್ ಅಳವಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಇಷ್ಟಾದ ಬಳಿಕ ಮನೆಯಲ್ಲಿನ ತಮ್ಮ ಸ್ನೇಹಿತ ಪ್ರಶಾಂತ್ ಸಂಬರಿಗಿಯವರೊಂದಿಗೆ ಮಾತನಾಡುವ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಥ್ಯಾಂಕ್ಯೂ ಸರ್ ತಿದ್ದಿಕೊಳ್ಳುವೆ ಎನ್ನುವುದರ ಜೊತೆಗೆ ಬೈದ್ರೋ ಮೆಟ್ಟಲ್ಲಿ ಹೊಡೆದರೋ ಕನ್ಫ್ಯೂಶನ್ ಆಯ್ತು, ಒಂದು ಕಡೆಯಿಂದ ಕ್ಲಿಯರ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಎಲ್ಲರಿಗೂ ಎರಡು ಲೈನ್ ಹೊಗಳಿಕೆ, ಎರಡು ಲೈನ್ ಒದೆ. ನನಗೆ ಮಾತ್ರ ಪರ್ಫೆಕ್ಟ್ ಆಗಿ ಹೇಳಿದರು ಎಂದು ಸಂಬರಗಿ ಜೊತೆ ಮಾತನಾಡಿಕೊಂಡಿದ್ದಾರೆ.

    ಹೀಗೆ ಸುದೀಪ್ ಅವರು ಮನೆಯವರೆಲ್ಲರನ್ನೂ ಸುದೀಪ್ ಹೊಗಳುವುದರ ಜೊತೆಗೆ ಅವರ ವೀಕ್ನೆಸ್ ಬಗ್ಗೆ ಸಹ ತಿಳಿಸಿದ್ದಾರೆ. ಪ್ರಶಾಂತ್ ಸಂಬರಗಿ ಬಗ್ಗೆ ಸಹ ಮಾತನಾಡಿರುವ ಕಿಚ್ಚ, ಅಳೋ ಮಗುಗೆ ಹಾಲು ಜಾಸ್ತಿ ಸಿಗುತ್ತೆ, ಹಾಗಂತ ಅಳೋದು ಜಾಸ್ತಿ ಆದರೆ, ನೋಡುವವರಿಗೆ ಎರಡು ತಟ್ಟೋಣ ಅನ್ಸುತ್ತೆ ಎಂದು ಹೇಳುವ ಮೂಲಕ ಪ್ರಶಾಂತ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಂಬರಗಿ ಜಾಸ್ತಿ ಮಾಡಿಲ್ಲ ಸರ್, ಜಾಸ್ತಿ ಆಗಿದ್ರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

  • ‘ತಲೆ’ ತಿಂದ ಸಂಬರಗಿಯ ಬಾಯಿ ಮುಚ್ಚಿಸಿದ ಅರವಿಂದ್

    ‘ತಲೆ’ ತಿಂದ ಸಂಬರಗಿಯ ಬಾಯಿ ಮುಚ್ಚಿಸಿದ ಅರವಿಂದ್

    ಬಿಗ್ ಬಾಸ್ ಮನೆಯಲ್ಲಿ ಮತ್ತು ವೀಕ್ಷಕರ ನಡುವೆ ‘ನುಸುಳಿದ ಚೆಂಡು’ ಟಾಸ್ಕ್ ಬಗ್ಗೆ ಈಗಾಗಲೇ ಭಾರೀ ಚರ್ಚೆಗಳು ನಡೆದಿದೆ. ಈ ಟಾಸ್ಕ್‍ನಲ್ಲಿ ಅರವಿಂದ್ ಗೆದ್ದಿಲ್ಲ, ಪ್ರಶಾಂತ್ ಗೆದ್ದಿದ್ದಾರೆ, ಪ್ರಿಯಾಂಕ ಅವರ ವಾದ ಸರಿ ಇತ್ತು ಈ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿತ್ತು.

    ಮನೆಯಲ್ಲೂ, ಮನೆಯ ಹೊರಗಡೆ ಈ ಟಾಸ್ಕ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾದ ಹಿನ್ನೆಲೆಯಲ್ಲಿ ಈ ವಾರ ‘ಕಣ್ಮಣಿ’ ಈ ವಿಚಾರದ ಬಗ್ಗೆ ಜಾಸ್ತಿ ಮಾತನಾಡಿದ್ದಾಳೆ. ಕೊನೆಗೆ ಮಂಜು, ವೈಷ್ಣವಿ, ಚಕ್ರವರ್ತಿ ಚಂದ್ರಚೂಡ್ ಅವರು ಮೊದಲೇ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ರೀತಿಯ ಗೊಂದಲ ಇರುತ್ತಿರಲಿಲ್ಲ. ಗೊಂದಲವಾದರೂ ಆಟಗಾರರ ಬಳಿ ಹೋಗಿ ಮತ್ತೊಮ್ಮೆ ಆಡುವಂತೆ ಮನವಿ ಮಾಡಿ ಒಪ್ಪಿಸುವ ಪ್ರಯತ್ನ ಮಾಡಬಹುದಿತ್ತು. ಆದರೆ ಅಂಪೈರ್‍ಗಳಾದವರೂ ಯಾವುದೇ ಪ್ರಯತ್ನ ಮಾಡದೇ ಗೊಂದಲ ಮೂಡಿಸಿದರು ಎಂದು ಹೇಳಿ ತನ್ನ ಅಂತಿಮ ತೀರ್ಪು ಹೇಳಿದಳು.

    ಕಣ್ಮಣಿ ಹೇಳಿದ ಬಳಿಕ ಮನೆಯ ಗಾರ್ಡನ್ ಏರಿಯಾದಲ್ಲಿ ಅರವಿಂದ್, ಚಕ್ರವರ್ತಿ ಚಂದ್ರಚೂಡ್, ಪ್ರಶಾಂತ್ ಸಂಬರಗಿ ಕುಳಿತು ಆ ಆಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ಪ್ರಶಾಂತ್,”ನಾನು ತಲೆಯ ಬಗ್ಗೆ ಹೇಳಿದ ಮಾತನ್ನು ಬಿಗ್ ಬಾಸ್ ಒಪ್ಪಿದ್ದಾರೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ವೇಳೆ ಅರವಿಂದ್,”ನೀವು ಆಟ ಆಡುವ ಮೊದಲು ಇದನ್ನು ಕೇಳಬೇಕಿತ್ತು. ಆಟ ಆಡಿದ ನಂತ್ರ ಕೇಳುವುದಲ್ಲ. ತಲೆ ಎಂಬುದಕ್ಕೆ ಬಿಗ್ ಬಾಸ್ ಸ್ಪಷ್ಟವಾಗಿ ತಿಳಿಸಿಲ್ಲ. ಅದನ್ನು ನಮ್ಮ ವಿವೇಚನೆಗೆ ಬಿಟ್ಟಿದ್ದಾರೆ. ತಲೆ ಅಂದ್ರೆ ‘ಇದು ಮಾತ್ರ’ ಎಲ್ಲಿ ಹೇಳಿದ್ದಾರೆ” ಅಂತ ಪ್ರಶ್ನಿಸಿದರು. ಇದಕ್ಕೆ ಸಂಬರಗಿ ಸಮರ್ಥನೆ ನೀಡುವ ಪ್ರಯತ್ನ ಮಾಡಿದರೂ ಕೊನೆಗೆ ನಾನು ಹೇಳಿದ್ದಕ್ಕೆ ಬಿಗ್ ಬಾಸ್ ಹಿಂಟ್ ನೀಡಿದ್ದಾರೆ ಅಂತ ಉತ್ತರಿಸಿದರು.

    ಹಿಂಟ್ ಎಂಬ ಉತ್ತರ ಕೇಳಿದ ಕೂಡಲೇ ಅರವಿಂದ್,”ತಲೆ ಅಂದ್ರೆ ಕೂದಲು ಇರುವ ಜಾಗ ಮಾತ್ರ ಅಂತ ಹೇಳಿದ್ರಾ?” ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಧ್ವನಿಗೂಡಿಸಿದ ಚಕ್ರವರ್ತಿ,”ಈ ಹಿಂಟ್ ತಗೊಂಡೆ ಇಷ್ಟು ದಿನ ನೀನು ತಪ್ಪಾಗಿದ್ದು. ಅವರು ತಲೆ ಎಂಬುದಕ್ಕೆ ಏನೂ ಹೇಳಿಲ್ಲ” ಎಂದು ಸಂಬರಗಿಗೆ ತಿಳಿಸುವ ಪ್ರಯತ್ನ ಮಾಡಿದರು. ಅರವಿಂದ್ ಮತ್ತು ಚಕ್ರವರ್ತಿ ತನ್ನ ವಾದವನ್ನು ಒಪ್ಪುವುದಿಲ್ಲ ಎಂಬುದು ಯಾವಾಗ ಸಂಬರರಗಿಗೆ ಗೊತ್ತಾಯಿತೋ ಕೂಡಲೇ ಸಂಬರಗಿ, “ಸಾಕು ಈ ವಿಚಾರ ಇವತ್ತು. ಊಟಕ್ಕೆ ಏನು” ಎಂದು ಪ್ರಶ್ನಿಸಿ ಮಾತುಕತೆಯನ್ನು ಬೇರೆ ಕಡೆ ತಿರುಗಿಸುವ ಪ್ರಯತ್ನ ಮಾಡಿದರು.

    ಸಂಬರಗಿಯಿಂದ ಈ ಉತ್ತರ ಕೇಳಿದ ಕೂಡಲೇ ಅರವಿಂದ್ ಮತ್ತು ಚಕ್ರವರ್ತಿ ನಕ್ಕರು. ಕೊನೆಗೆ ಅರವಿಂದ್,”ನೀವು ಹಿಂಗೆ ಮಾತನಾಡಿದ್ರೆ ನಿಮಗೆ ತಲೆ ಇಲ್ಲ ಅಂತ ಅರ್ಥ. ನಿಮಗೆ ತಲೆ ಇದೆ. ಈ ವಿಷಯ ಮುಗಿದು ಹೋಯ್ತು ಅಷ್ಟೇ ಫಿನೀಶ್” ಎಂದು ಹೇಳಿ ಈ ಮಾತುಕತೆಯನ್ನು ಕೊನೆಗೊಳಿಸಿದರು.

    ಸಂಬರಗಿ ಮತ್ತು ಅರವಿಂದ್ ಬಿಗ್ ಬಾಸ್ ಮನೆಯಲ್ಲೇ ಎಷ್ಟೇ ಕಿತ್ತಾಡಿದರೂ ಕೊನೆಗೆ ಒಂದಾಗುತ್ತಾರೆ. ಈ ಹಿಂದೆಯೂ ನಾವಿನೇಷನ್ ಸಮಯದಲ್ಲಿ ಅರವಿಂದ್ ಪ್ರಶಾಂತ್ ಅವರು ಇರಬೇಕು ಎಂದು ಹೇಳಿದ್ದರು.

    ತಲೆ ಬಗ್ಗೆ ಚರ್ಚೆಯಾದ ನಂತರ ಕಿಚನ್ ರೂಮಿನಲ್ಲಿ ಅರವಿಂದ್ ಪ್ರಶಾಂತ್ ಅವರಲ್ಲಿ,”ನೀವು ಹೇಳುವುದು ಸರಿ ಇದೆ. ಆದರೆ ಹೇಳುವ ಶೈಲಿ ಮಾತ್ರ ಸರಿಯಿಲ್ಲ. ಅದರಿಂದಾಗಿ ಕಿರಿಕ್ ಆಗುತ್ತದೆ. ಜೊತೆಗೆ ನೀವು ಹೇಳಿದ್ದೆ ಸರಿ ಎಂಬುದನ್ನು ಬಿಟ್ಟು ಉಳಿದವರು ಏನು ಹೇಳುತ್ತಾರೆ ಎಂಬದುನ್ನು ಕೇಳಬೇಕು” ಎಂದು ಸಲಹೆ ನೀಡಿದರು.

    ಒಟ್ಟಿನಲ್ಲಿ ‘ನುಸುಳುವ ಚೆಂಡು’ ಟಾಸ್ಕ್‍ನಿಂದ ಎದ್ದ ತಲೆ ಎಂದರೇನು ಪ್ರಶ್ನೆ ಬಿಗ್ ಬಾಸ್ ಮನೆಯವರ ಜೊತೆ ವೀಕ್ಷಕರ ತಲೆಯನ್ನು ತಿಂದಿದೆ. ತಲೆ ತಿಂದ ಟಾಸ್ಕ್ ಬಗ್ಗೆ ಈಗ ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ ಕಮೆಂಟ್ ಮಾಡಿ ತಿಳಿಸಿ.

  • ನೀನು ಯಾರ್ ಗುರು, ನೀನಂತೂ ಘನಘೋರ: ಚಕ್ರವರ್ತಿ ಚಂದ್ರಚೂಡ್

    ನೀನು ಯಾರ್ ಗುರು, ನೀನಂತೂ ಘನಘೋರ: ಚಕ್ರವರ್ತಿ ಚಂದ್ರಚೂಡ್

    ಮನೆಯಲ್ಲೀಗ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋದಿಲ್ಲ. ಪ್ರಶಾಂತ್ ಸಂಬರಗಿ ಕಂಡರೆ ಕೆಲವರಂತೂ ಉರಿದು ಬೀಳ್ತಾರೆ. ಪ್ರಶಾಂತ್ ಸಂಬರಗಿ ಸುಳ್ಳು, ಮುಂದಾಲೋಚನೆ,  ಮಾತಿನ ದಾಟಿ, ಅವರು ಬಳಸುವ ಶಬ್ದಗಳು ಕೂಡ ಸ್ಪರ್ಧಿಗಳಿಗೆ ಸಿಟ್ಟು ತರಿಸುತ್ತವೆ. ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಮಧ್ಯೆ ಅನೇಕ ಬಾರಿ ಮಾತಿನ ಚಕಮಕಿ ನಡೆದಿದೆ. ಈ ಕುರಿತಾಗಿ ಚಕ್ರವರ್ತಿ ಮತ್ತು ಸಂಬರಗಿ ಮಾತನಾಡಿದ್ದಾರೆ.

    ಅಡುಗೆ ಮನೆಯಲ್ಲಿ ಅಕ್ಕಿ ರೊಟ್ಟಿ ರೆಡಿಯಾಗುತ್ತಿತ್ತು. ದಿವ್ಯಾ ಉರುಡುಗ ರೊಟ್ಟಿ ತಟ್ಟುವ ಪ್ರಯತ್ನದಲ್ಲಿದ್ದರು. ಪ್ರಶಾಂತ್ ಸಂಬರಗಿ ಅವರು ದಿವ್ಯಾಗೆ ಎಣ್ಣೆ ಹಚ್ಚಿಕೊಂಡು ರೊಟ್ಟಿ ತಟ್ಟಿ ಅಂತ ಹೇಳಿದ್ದಾರೆ. ಅದನ್ನು ಕೇಳಿದ ದಿವ್ಯಾ ಉರುಡುಗ ಸುಮ್ಮನೆ ಹೇಳೋಕೆ ಬರಬೇಡಿ, ಅಕ್ಕಿ ರೊಟ್ಟಿ ಎಣ್ಣೆ ಹಾಕಿಕೊಂಡು ತಟ್ಟಿ ಅಂತ ಹೇಳಿದ್ದಕ್ಕೆ ಬುರುಡೆ ಬಿಡಬೇಡಿ ಅಂತ ದಿವ್ಯಾ ಉರುಡುಗ ಹೇಳಿದ್ದಾರೆ. 10 ನಿಮಿಷದ ಹಿಂದೆ ನಾನು ಅವಳ ಹತ್ರ ಒಳ್ಳೆಯದಾಗಲಿ ಅಂತ ಹೇಳಿದ್ದೆ. ಹೆಂಗಿರತ್ತೆ ಕೋಪ? ಮುಖವಾಡ ಹಾಕಿಕೊಂಡು ಬದುಕ್ತಾರೆ. ಅರವಿಂದ್ ಆಯ್ಕೆಯಾಗಿದ್ದು ಒಳ್ಳೆಯ ದೃಷ್ಟಿಯಿಂದ ಎನ್ನುವ ಮೆಸೇಜ್ ಎಲ್ಲ ಕಡೆ ಹೋಗ್ತಿದೆ ಎಂದು ಚಕ್ರವರ್ತಿ ಚಂದ್ರಚೂಡ್ ಹಾಗೂ ಪ್ರಶಾಂತ್ ಸಂಬರಗಿ ಚರ್ಚೆ ಮಾಡಿದ್ದಾರೆ.

     ನೀನು ಯಾರ್ ಗುರು, ನೀನಂತೂ ಘನಘೋರ. ಎಷ್ಟುಸಲ ಅಂತ ಆ ಹುಡುಗಿ ಹತ್ರ ಹೇಳ್ತ್ಯ. ಅರವಿಂದ್, ಮಂಜು ಬಗ್ಗೆ ಮಾತನಾಡಿದ್ರೆ ದಿವ್ಯಾ ಕೆಟ್ಟದಾಗಿ ಮಾತನಾಡ್ತಾಳೆ. ಇದು ಗೊತ್ತಿರುವ ವಿಷಯ, ನೀನು ಯಾಕೆ ತಲೆ ಸವರೋಕೆ ಹೋಗ್ತೀಯಾ? ನೀನು ಹೋದ ಸಲ ದೇವರ ತರ ತಂಗಿ ಅಂದಿದೀನಿ, ಪಾದಪೂಜೆ ಮಾಡೋದೊಂದು ಬಾಕಿ ಅಂತ ಅಂದಿದ್ದೀಯ. ಆದರೂ ಇಂಟರ್ಯಾಕ್ಷನ್ ಇಲ್ಲ. ಅಷ್ಟೆಲ್ಲ ಮುದ್ದು ಮಾಡಬೇಡ ಅಂತ ಹೋದ ವಾರ ಹೇಳಿದ್ದೆ. ಹೆಣ್ಣುಮಕ್ಕಳ ವಿರುದ್ಧ ಮಾತನಾ ಮತ್ತೆ ಮಾತನಾಡೋಕೆ ಬಂದ ಅಂತ ಹೇಳ್ತಾರೆ. ನಾನು ಶುಭ, ನಿಧಿ ಹತ್ರ ಜಾಸ್ತಿ ಮಾತನಾಡಲ್ಲ. ಎಲ್ಲರ ಹತ್ರ ಗುಡ್‍ನೈಟ್, ಗುಡ್ ಮಾನಿರ್ಂಗ್ ಅಂತಷ್ಟೇ ಹೇಳ್ತೀನಿ. ಕೆಟ್ಟ ಮಹಿಳೆಯರನ್ನು ನಾನು ಗೌರವಿಸಲ್ಲ. ಗಂಡಿಗಿಂತ ಹೆಣ್ಣು ಕೆಟ್ಟರೆ ಭಾರೀ ಕಷ್ಟ. ಪ್ರಿಯಾಂಕಾ ಕೂತಿದ್ದ ಕಡೆ ನಾವು ಹೋಗಬೇಕು, ನಾವು ಕೂತಿದ್ದ ಕಡೆ ಬರಲ್ಲ. ಆಟಿಡ್ಯೂಡ್ ಇದೆ ಅವಳಿಗೆ ಎಂದು ಮನೆಮಂದಿ ಬಗ್ಗೆ ಕೆಲವು ವಿಚಾರಗಳನ್ನು ಚಕ್ರವರ್ತಿ ಮತ್ತು ಪ್ರಶಾಂತ್ ಮಾತನಾಡುತ್ತಾ ಬೇಸರವ್ಯಕ್ತ ಪಡಿಸುತ್ತಿದ್ದಾರೆ.

    ಮನೆಯಲ್ಲಿ ಕೆಲವು ಗುಂಪುಗಳಾಗಿವೆ. ಅವರು ಅವರದ್ದೇ ಗುಂಪಿನಲ್ಲಿ ಮನೆ ಮಂದಿಯ ಕುರಿತಾಗಿ ಮಾತನಾಡಿಕೊಳ್ಳುತ್ತಾರೆ. ಬಿಗ್‍ಬಾಸ್ ಮನೆಯಲ್ಲಿ ಮುಂದೆ ಏನೇಲ್ಲಾ ಹೊಸ ವಿಚಾರಗಳು ನಡೆಯಲಿದೆ. ಪ್ರಶಾಂತ್ ಸಂಬರಗಿ ಹೇಗೆ ಆಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

  • ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ದೊಡ್ಮನೆ ಸ್ಪರ್ಧಿಗಳ ಬಗ್ಗೆ ಕಮೆಂಟ್ ಪಾಸ್ ಮಾಡಿದ ಪ್ರಶಾಂತ್!

    ಬಿಗ್‍ಬಾಸ್ ಮನೆಯಲ್ಲಿ 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ನಡೆಸುತ್ತಿರುವ ಪ್ರಶಾಂತ್ ಸಂಬರ್ಗಿ ಮನೆಯ ಸದಸ್ಯರ ಬಗ್ಗೆ ಕಮೆಂಟ್ ಮಾಡಿದ್ದಾರೆ. ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಜೊತೆ ಲಿವಿಂಗ್ ಏರಿಯಾದಲ್ಲಿ ಕುಳಿತು ಪ್ರಶಾಂತ್ ಮಾತನಾಡುತ್ತಿರುತ್ತಾರೆ. ಈ ವೇಳೆ ಚಕ್ರವರ್ತಿ ಚಂದ್ರಚೂಡ್ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ.

    ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು ಕಾನ್ಫಿಡೆಂಟ್ ಅಂತ ತೋರಿಸುವ ಭರದಲ್ಲಿ ನೀಚ ಸ್ವಭಾವ ಎಕ್ಸ್‍ಪೋಸ್ ಆಗುತ್ತಿದೆ. ಗೆಲ್ಲವುದೊಂದೇ ಗುರಿ, ಮಾರ್ಗ ಯಾವುದು ಬೇಕಾದರೂ ಆಗಬಹುದು ಎಂದು ಆಟ ಆಡುತ್ತಿದ್ದಾಳೆ ಅಂತ ಪ್ರಶಾಂತ್ ಹೇಳುತ್ತಾರೆ.

    ನಂತರ ಡಿಯು ಎಂದಾಗ, ಪ್ರಶಾಂತ್ ಅರವಿಂದನ ಮಡಿಲಿನಲ್ಲಿ ಅವನ ಜೊತೆಗೆ ನಾನು ಸಾಗುವೆ ಎನ್ನುತ್ತಾರೆ. ಮಂಜು ಪಾವಗಡ ಹೆಸರು ಬಂದಾಗ, ದುಷ್ಟ, ಅಹಂಕಾರಿ, ಹಾಸ್ಯ ಬಿಟ್ಟು ಎಲ್ಲ ಮಾಡುತ್ತಿದ್ದಾನೆ. ಇನ್ನೂ ರಘು ಉಸರವಳ್ಳಿ. ಪ್ರಿಯಾಂಕ, ಸುಂದರವಾಗಿದ್ದಿನಿ ಎಂಬ ಜಂಬ, ನಾನು ಡಿಫರೆಂಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಲೋ ಬುದ್ಧಿ, ಲೋ ಹೈಕ್ಯೂ ಇರುವುದರಿಂದ ನಿರ್ಧಾರಗಳು ಕರೆಕ್ಟ್ ಅಂದುಕೊಂಡು ಫೆಲ್ ಆಗುತ್ತಿರುವ ಹುಡುಗಿ ಎನ್ನುತ್ತಾರೆ.

    ಟ್ಯಾಲೆಂಟೆಂಡ್, ಕಂಪೆಷನೆಟ್, ಎಕ್ಸ್ ಪ್ರೆಸ್ ಮಾಡದೇ ಇರುವಂತಹ ಹುಡುಗ ಎಂದು ಶಮಂತ್‍ಗೆ ಹೇಳುತ್ತಾರೆ. ಚಕ್ರವರ್ತಿಯವರು ಅವರ ಹೆಸರನ್ನೇ ಸೂಚಿಸಿದಾಗ ಅತೀ ಬುದ್ಧಿವಂತಿಕೆ ಮಾತಿನ ಚಾತುರ್ಯದಿಂದ ಗೆಲ್ಲಬಹುದು ಎಂದು ತಿಳಿದು ಎಲ್ಲರನ್ನು ದುಷ್ಮನ್ ಮಾಡಿಕೊಳ್ಳುತ್ತಿರುವ ವ್ಯಕ್ತಿ ಎಂದು ಪ್ರಶಾಂತ್ ಅಭಿಪ್ರಾಯ ತಿಳಿಸುತ್ತಾರೆ.

    ಹಾಗಾದರೆ ಪ್ರಶಾಂತ್ ಸಂಬರ್ಗಿ ಎಂದು ಚಕ್ರವರ್ತಿ ಕೇಳಿದಾಗ, ಶಕ್ತಿ, ಯುಕ್ತಿಗಿಂತ ಮನುಷ್ಯತ್ವ ಮೇಲೂ ಅಂತ ಆಡುತ್ತಿರುವ ಎಮೋಷನಲ್ ಫೂಲ್ ಎಂದು ತಮಗೆ ತಾವೇ ಪ್ರಶಾಂತ್ ಹೇಳಿದ್ದಾರೆ.

  • 36 ಗಂಟೆ ಊಟ ಮಾಡಲ್ಲ: ಪ್ರಶಾಂತ್ ಸಂಬರಗಿ

    36 ಗಂಟೆ ಊಟ ಮಾಡಲ್ಲ: ಪ್ರಶಾಂತ್ ಸಂಬರಗಿ

    ಬಿಗ್ ಬಾಸ್ ಮನೆಯಲ್ಲಿ ಜಗಳ ಮಾಡಿರುವುದು, ಉಪವಾಸ ಮಾಡುವುದು ಎಂದರೆ ಪ್ರಶಾಂತ್ ಸಂಬರಗಿ. ಇದೀಗ ಮನೆಯಲ್ಲಿ ಮತ್ತೊಂದು ಕಿರಿಕ್ ಆಗಿದೆ. ಈ ಬಾರಿಯೂ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. 36 ಗಂಟೆಗಳ ಕಾಲ ಉಪವಾಸ ಮಾಡುವುದಾಗಿ ಬಿಗ್‍ಬಾಸ್ ಬಳಿ ಪ್ರಶಾಂತ್ ಸಂಬರಗಿ ಹೇಳಿಕೊಂಡಿದ್ದಾರೆ.

    ಕ್ಯಾಪ್ಟನ್ಸಿ ಟಾಸ್ಕ್‌ಗೆ ಸ್ಟರ್ಧಿಗಳನ್ನು ಆಯ್ಕೆ ಮಾಡಲು, ಬಿಗ್ ಬಾಸ್ ಈ ವಾರ ಚಟುವಟಿಕೆಯೊಂದನ್ನು ನೀಡಿದ್ದರು. ಮನೆಯ ಅಂಗಳದಲ್ಲಿ ನಿಂತಿರುವ ರೈಲು ಗಾಡಿಯಲ್ಲಿರುವ ಮೂರು ಬೋಗಿಗಳಲ್ಲಿ, ಮೊದಲ ಬೋಗಿಯಲ್ಲಿ ಮೂವರಿಗೆ ಕೂರಲು ಅವಕಾಶ ಇದೆ. ಎರಡನೇ ಬೋಗಿಯಲ್ಲಿ 7 ಜನ ಮತ್ತು ಕೊನೆಯ ಬೋಗಿಯಲ್ಲಿ ಇಬ್ಬರು ಇರಲಿದ್ದಾರೆ. ಬಿಗ್ ಬಾಸ್ ನೀಡುವ ಟಾಸ್ಕ್‌ಗಳನ್ನು ಆಡುವ ಮೂಲಕ ಬೋಗಿಯಲ್ಲಿರುವ ಸದಸ್ಯರ ಸ್ಥಾನಗಳು ಅದಲು ಬದಲು ಆಗುತ್ತವೆ. ಮೂರು ದಿನ ನಡೆದ ಟಾಸ್ಕ್ ನಡೆಸಲಾಗಿದೆ. ಮೊದಲ ಬೋಗಿಯಲ್ಲಿ ಮಂಜು ಪಾವಗಡ, ಚಕ್ರವರ್ತಿ ಚಂದ್ರಚೂಡ್ ಮತ್ತು ಅರವಿಂದ್ ಉಳಿದುಕೊಂಡರು. ಆ ಮೂಲಕ ಅವರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾದರು. ಆದರೆ, ಇದರಿಂದ ಪ್ರಶಾಂತ್ ಸಂಬರಗಿ ಬೇಸರ ಮಾಡಿಕೊಂಡಿದ್ದಾರೆ. ಕೊನೇ ಕ್ಷಣದಲ್ಲಿ ನಾನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವುದನ್ನು ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಜೊತೆಯಲ್ಲಿ ಉಗ್ರ  ಹೋರಾಟ ಮಾಡುವುದಕ್ಕೆ ಸಿದ್ಧರಾಗಿದ್ದಾರೆ.

    ಕ್ಯಾಪ್ಟನ್ಸಿ ಆಯ್ಕೆಯ ಟಾಸ್ಕ್‌ನಲ್ಲಿ ನನ್ನನ್ನು ವಿಜೇತನೆಂದು ನಿರ್ಧಾರ ಮಾಡಿ, ಅನೇಕ ಬಾರಿ ಚರ್ಚೆ ಮಾಡಿ, ಮತ್ತೆ ನಾನು ಸೋತಿದಿನಿ ಅಂತ ಹೇಳಿದ್ರು. ಒಂದು ಷಡ್ಯಂತ್ರದ ರೂಪದಲ್ಲಿ ನನ್ನನ್ನು ಎರಡನೇ ಸ್ಥಾನಕ್ಕೆ ನಿಲ್ಲಿಸಿ, ನನ್ನ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಇದರ ವಿರುದ್ಧವಾಗಿ ಹಾಗೂ ನನ್ನ ಮಾತಿಗೆ ಬೆಲೆ ಇಲ್ಲದೇ ಇರುವುದು ಕಂಡುಬರುತ್ತಿದೆ. ಇದನ್ನು ನಾನು ಪ್ರತಿಭಟಿಸುವ ಸಲುವಾಗಿ 36 ಗಂಟೆಗಳ ಕಾಲ ಯಾವುದೇ ಆಹಾರ ಸೇವಿಸುವುದಿಲ್ಲ. ಉಪವಾಸ ಇರುತ್ತೇನೆ. ಈ ಗುಂಪುಗಾರಿಕೆ, ನನ್ನನ್ನು ಕ್ಯಾಪ್ಟನ್ಸಿಗೆ ಆಡಬಾರದು ಎಂದು ಹುನ್ನಾರ ಮಾಡಿದ್ದಾರಲ್ಲ, ಅದರ ವಿರುದ್ಧ ಪ್ರತಿಭಟನೆ ಮಾಡುತ್ತೇನೆ. ಈಗಿನಿಂದ ನನ್ನ ಉಪವಾಸ ಸತ್ಯಾಗ್ರಹ ಆರಂಭವಾಗಿದೆ ಎಂದು ಪ್ರಶಾಂತ್ ಕ್ಯಾಮೆರಾ ಮುಂದೆ ಹೇಳಿದ್ದಾರೆ.


    ಆತ ಸ್ಪೋರ್ಟ್ಸ್ ಮ್ಯಾನ್ ಅಂತ ಬೇರೆ ಹೇಳಿಕೊಳ್ಳೋತ್ತಾನೆ. ಕ್ರೀಡಾ ಸ್ಪೂರ್ತಿನೇ ಇರಲಿಲ್ಲ. ಮತ್ತೆ ಮೂರು ಜನ ಆಡೋಣ ಬಾ ಅಂತ ಕರೆದೆ ಬರಲಿಲ್ಲ. ಚಕ್ರವರ್ತಿ ನಾನು 36 ಗಂಟೆಗಳ ಕಾಲ ಉಪವಾಸ ಈಗ ಪ್ರಾರಂಭ ಮಾಡಿದ್ದೇನೆ. 36 ಅಲ್ಲ, 48 ಗಂಟೆಗಳವರೆಗೂ ಹೋಗ್ತಿನಿ. ಬಿಗ್ ಬಾಸ್ ಊಟ ಮಾಡಿ ಅನ್ನೋವರೆಗೂ ಹೋಗ್ತಿನಿ. ಇಷ್ಟೊಂದು ಅನ್ಯಾಯವೇ? ಇಷ್ಟೊಂದು ಷಡ್ಯಂತ್ರವೇ? ಒಬ್ಬ ವ್ಯಕ್ತಿ ಮೇಲೆ ಇಷ್ಟೊಂದು ದ್ವೇಷವೇ? ಎಂದು ಪ್ರಶಾಂತ್ ತನ್ನ ಬೇಸರವನ್ನು ಚಕ್ರವರ್ತಿ ಮುಂದೆ ಹೇಳಿಕೊಂಡಿದ್ದಾರೆ. ಪ್ರಶಾಂತ್ ಮಾತು ಕೇಳಿ ಚಕ್ರವರ್ತಿ ಏನು ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ.

  • ವೇಶ್ಯೆಯರ ಮನೆಯಲ್ಲಿ ಕೆಲಸಕ್ಕೆ ಬಿಟ್ಟ ಭಯಾನಕ ಘಟನೆ ಬಿಚ್ಚಿಟ್ಟ ಚಕ್ರವರ್ತಿ..!

    ವೇಶ್ಯೆಯರ ಮನೆಯಲ್ಲಿ ಕೆಲಸಕ್ಕೆ ಬಿಟ್ಟ ಭಯಾನಕ ಘಟನೆ ಬಿಚ್ಚಿಟ್ಟ ಚಕ್ರವರ್ತಿ..!

    ಬಿಗ್‍ಬಾಸ್ ಮನೆಯಲ್ಲಿ ರಿಯಲ್ ಆಟ ಶುರುವಾಗಿ ದಿನಗಳೇ ಕಳೆದು ಹೋಗಿವೆ. ಈ ಮಧ್ಯೆ ಕೆಲವೊಂದು ಟಾಸ್ಕ್ ಗಳ ಮೂಲಕ ಸ್ಪರ್ಧಿಗಳು ತಾವು ಅನುಭವಿಸಿದ ನೈಜ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಅಂತೆಯೇ ಇದೀಗ ಚಕ್ರವರ್ತಿ ಚಂದ್ರಚೂಡ್ ಅವರು ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದಾರೆ.

    ಹೌದು. ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಅನಿಭವಿಸಿದ ಕಹಿ ಘಟನೆಯನ್ನು ತೆರೆದಿಡಬೇಕಿತ್ತು. ಈ ಟಾಸ್ಕ್ ನಲ್ಲಿ ಮಾತನಾಡಲು ಆರಂಭಿಸಿದ ಚಕ್ರವರ್ತಿ, ಸ್ಪರ್ಧಿಗಳೇ ಅಚ್ಚರಿಯಿಂದ ನೋಡುವಂತಹ ಘಟನೆಯೊಂದನ್ನು ಬಿಚ್ಚಿಟ್ಟರು.

    ಚೆನ್ನೈ ರೈಲ್ವೆ ನಿಲ್ದಾಣದಲ್ಲಿದ್ದೆ. ಊಟ ಇಲ್ಲದೆ ಮೂರು ದಿನಗಳ ಕಾಲ ಹಸಿದುಕೊಂಡಿದ್ದೆ. ನಿಲ್ದಾಣದ ಕೆಳಗಡೆ ಇದ್ದ ಟೀ ಅಗಡಿ ಪಕ್ಕ ನಿರ್ಗತಿಕನಾಗಿ ಬೀಳಬೇಕಾದ ಪರಿಸ್ಥಿತಿ ಬಂದಿತ್ತು. ಮನೆಯ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ನನಗೆ ಓರ್ವನ ಪರಿಚಯವಾಯಿತು. ಆತ ನನ್ನನ್ನು ವೇಶ್ಯೆಯರ ಮನೆಗೆ ಕೆಲಸಕ್ಕೆ ಬಿಡುತ್ತಾನೆ. ಅದು ನನ್ನ ಜೀವನದ ಅತ್ಯಂತ ಕ್ರೂರ ಸಂದರ್ಭ. ಆ ಮನೆಯಲ್ಲಿ 127 ಜನ ಇದ್ರು. ಅಲ್ಲಿ ಹದಿನಾಲ್ಕೂವರೆ ವರ್ಷದ ಹುಡುಗಿಯನ್ನು ಆಕೆಯ ಚಿಕ್ಕಪ್ಪ ಮಾರಿ ಹೋಗಿದ್ದ. ಕ್ರಮೇಣ ನನಗೂ ಅವಳಿಗೂ ಪರಿಚಯ ಆಯಿತು ಎಂದು ಚಕ್ರವರ್ತಿ ವಿವರಿಸಿದರು.

    ಪರಿಚಯ ಪ್ರೀತಿಗೆ ತಿರುಗಿದ್ದು, ನೀನು ಅಷ್ಟೊಂದು ಪ್ರೀತಿ ಮಾಡುವುದಾದರೆ ನನ್ನನ್ನು ಇಲ್ಲಿಂದ ತಪ್ಪಿಸಿಕೊಂಡು ಹೋಗು ಎಂದಳು. ಹೀಗಾಗಿ ನಾವಿಬ್ಬರು ಗಾರ್ಬೆಜ್ ವಾಹನದಲ್ಲಿ ಹೊರಟೆವು. ರೈಲ್ವೆ ನಿಲ್ದಾಣಕ್ಕೆ ಹೋದೆವು. ಆಗ ಹಣ ಕೂಡ ಇರಲಿಲ್ಲ. ಹೇಗೋ ಮಾಡಿ ಬೆಂಗಳೂರು ರೈಲು ಏರಿದೆವು. ಬಂಗಾರ ಪೇಟೆ ಬಳಿ ನಮ್ಮನ್ನು ಅಡ್ಡಹಾಕಿ, ಇಬ್ಬರಿಗೂ ಚೆನ್ನಾಗಿ ಥಳಿಸಿದರು. ಪರಿಣಾಮ ಆಕೆ ಸತ್ತು ಹೋದಳು, ನಾನು ಬದುಕಿದೆ ಎಂದು ಚಕ್ರವರ್ತಿ ಗದ್ಗದಿತರಾದರು.

    ಪೊಲೀಸ್ ಒಬ್ಬರು ನನ್ನನ್ನು ಬದುಕಿಸಿದರು. ನಂತರ ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. ಎರಡು ವರ್ಷ ಇದ್ದು, ಬೆಂಗಳೂರಿಗೆ ವಾಪಸ್ಸಾದೆ. ಬಳಿಕ ಪತ್ರಕರ್ತ, ಹೋರಾಟಗಾರನಾದೆ. ಇದೇ ವೇಳೆ ವೇಶ್ಯೆಯರಿಗೆ ಏನಾದರೂ ಮಾಡಬೇಕು ಅಂದುಕೊಂಡು ಸುಮಾರು 25 ಮಂದಿ ವೇಶ್ಯೆಯರನ್ನು ಸೇರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕವಾಡಿಸಿದೆ ಎಂದು ತನ್ನ ಜೀವನದ ಕಹಿ ಘಟನೆಯನ್ನು ಚಕ್ರವರ್ತಿ ಹೇಳಿಕೊಂಡರು. ಚಕ್ರವರ್ತಿಯ ಮಾತನ್ನು ಕೇಳಿಸಿಕೊಂಡ ಇತರ ಸ್ಪರ್ಧಿಗಳು ಮೂಕವಿಸ್ಮಿತರಾದರು.

  • ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಮಗಳ ಪತ್ರ ಓದಿ ಕಣ್ಣೀರಿಟ್ಟು ಕಿರುಚಾಡಿದ್ರು ಚಕ್ರವರ್ತಿ

    ಬಿಗ್ ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಎಷ್ಟು ನೇರವಾಗಿ ಮಾತನಾಡುತ್ತಾರೋ ಅಷ್ಟೇ ನಿಷ್ಠೂರವಾದಿ, ಹಾಗೇ ಅಷ್ಟೇ ಬೇಗ ಭಾವುಕರಾಗುತ್ತಾರೆ. ಟಾಸ್ಕ್‍ನಲ್ಲಿ ಗೆದ್ದ ಸ್ಪರ್ಧಿಗಳಿಗೆ ಮನೆಯಿಂದ ಪತ್ರಗಳು ಬರುತ್ತವೆ. ಆದರೆ ಮಗಳಿಂದ ಬಂದಿರುವ ಪತ್ರವನ್ನು ಓದಿದ ಚಕ್ರವರ್ತಿ ಕಣ್ಣೀರು ಹಾಕಿ ಕಿರುಚಾಡಿದ್ದಾರೆ.

    ಬಿಗ್ ಬಾಸ್‍ನಲ್ಲಿ ನೀಡಿದ್ದ ಟಾಸ್ಕ್ ಗೆದ್ದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಗಳು ಚುಕ್ಕಿ ಬರೆದಿರುವ ಪತ್ರ ಓದುವ ಅವಕಾಶ ಸಿಕ್ಕಿದೆ. ಮಗಳ ಪತ್ರವನ್ನು ಓದಿ ಚಕ್ರವರ್ತಿ ಅವರು ಭಾವುಕರಾಗಿ ಕಿರುಚಾಡಿದ್ದಾರೆ. ಮನೆಯವರೆಲ್ಲರೂ ಚಕ್ರವರ್ತಿಗೆ ಸಮಾಧಾನ ಹೇಳಿದ್ದಾರೆ. ಕೆಲವರು ಅವರ ಮನೆಯಮಂದಿಯನ್ನು ನೆನೆದು ಕಣ್ಣಿರು ಹಾಕಿದ್ದಾರೆ.

    ಹಾಯ್ ಅಪ್ಪಾ, ನಾನು ನಿನ್ನ ಪ್ರತಿನಿತ್ಯ ಟಿವಿಯಲ್ಲಿ ನೋಡುತ್ತಿದ್ದೇನೆ. ನಿನ್ನ ಮಾತಿನ ಕಿಚ್ಚು ಆ ಮನೆಯಲ್ಲಿ ಮೌನದ ಪತಾಕೆಯನ್ನು ಹಾರಿಸಿದೆ. ಪ್ರತಿ ಪಾತ್ರದ ನಾಟಕ ಬೇರೆ. ಆ ಪಾತ್ರದ ಕಥೆಯನ್ನು ಬದಲಾಯಿಸುವ ಶಕ್ತಿ ನಿನಗೆ ಇದೆ. ನಾನು ನೀನು ಕಳೆದಿರುವ ಸಮಯ ತುಂಬ ಕಡಿಮೆ. ನಾನು ನಿನ್ನ ತುಂಬ ಮಿಸ್ ಮಾಡಿಕೊಳ್ತಿದ್ದೀನಿ. ಹೀಗೆ ಅಪ್ಪನ ಜೊತೆಗೆ ಕಳೆದಿರುವ ಕೆಲವು ಕ್ಷಣಗಳನ್ನು ನೆನೆಪಿಸಿಕೊಂಡು ಬರೆದು ನಿನ್ನ ಮುದ್ದಿನ ಮಗಳು ಚುಕ್ಕಿ ಎಂದು ಚಕ್ರವರ್ತಿ ಚಂದ್ರಚೂಡ್ ಮಗಳು ಬರೆದಿದ್ದಾರೆ. ಚಕ್ರವರ್ತಿಗೆ ಮಗಳಿಂದ ಪತ್ರಬಂದಿರುವುದ ಅತ್ಯಂತ ಸಂತೋಷವನ್ನು ತಂದಿದೆ.

    ಚಕ್ರವರ್ತಿ ಅವರು ಆಗಾಗ ನಾನು ಜೀವನದಲ್ಲಿ ಸೋತಿದ್ದೇನೆ ಎಂದು ತಮ್ಮ ವೈಯಕ್ತಿಕ ವಿಚಾರಗಳ ಕುರಿತಾಗಿ ಹೇಳುತ್ತಿರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿ ಸುಖ, ದುಖಃ ನೋವುಗಳಿರುತ್ತವೆ. ಬಿಗ್‍ಬಾಸ್ ಸಮಯಕ್ಕೆ ತಕ್ಕಂತೆ ಒಂದೊಂದಾಗಿ ಹೊರಗೆ ತೆಗೆದು ಮನಸ್ಸಿನ ಭಾರವನ್ನು ಹಗುರ ಮಾಡುತ್ತಿರುವುದಂತೂ ಖಂಡಿತಾ ಹೌದು.