Tag: ಚಕ್ರವರ್ತಿ ಚಂದ್ರಚೂಡ್

  • ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್

    ಸಾಧುಕೋಕಿಲರಿಂದ ಸುದೀಪ್, ಯಶ್, ಧ್ರುವ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ: ಚಂದ್ರಚೂಡ್

    ಫಿಲ್ಮ್ ಫೆಸ್ಟಿವಲ್‌ಗೆ ಸುದೀಪ್ ಅನುಪಸ್ಥಿತಿ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗಗೆ ಕಿಚ್ಚನ ಆಪ್ತ ಚಂದ್ರಚೂಡ್ ತಿರುಗೇಟು ಕೊಟ್ಟ ಬೆನ್ನಲ್ಲೇ ಹೊಸ ಆರೋಪ ಮಾಡಿದ್ದಾರೆ. ಫಿಲ್ಮ್ ಫೆಸ್ಟಿವಲ್ ಕಿಚ್ಚನಿಗೆ ಆಹ್ವಾನ ಇರಲಿಲ್ಲ, ಸಾಧುಕೋಕಿಲ ಅವರಿಂದ ಯಶ್ (Yash), ಸುದೀಪ್ (Sudeep), ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಚಂದ್ರಚೂಡ್ (Chandrachud) ಪಬ್ಲಿಕ್‌ ಟಿವಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

    ಸಾಧುಕೋಕಿಲ ಅವರು ಸಿನಿಮಾ, ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈಗ ಅವರು ಅರ್ಧ ರಾಜಕಾರಣಿ ಬೇರೇ ಆಗಿದ್ದಾರೆ. ಯಾಕೆ ಸಾಧುಕೋಕಿಲ ಅವರು ತಪ್ಪು ಮಾಹಿತಿ ನೀಡ್ತಿದ್ದಾರೆ. ಅವರಿಗೆ ಸಂಘಟನೆಯ ಚತುರತೆ ಬರದೇ ಇರೋದ್ರಿಂದ, ಇಡೀ ಚಿತ್ರರಂಗಕ್ಕೆ ತಪ್ಪು ಮಾಹಿತಿ ಆಗೋ ಹಾಗೆ ಆಗಿದೆ. ಸುದೀಪ್ ಬಗ್ಗೆ ಮಾತ್ರವಲ್ಲ. ಸಾಧುಕೋಕಿಲರಿಂದ ಯಶ್, ಉಪೇಂದ್ರ, ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಫಿಲ್ಮ್‌ ಫೆಸ್ಟಿವಲ್‌ಗೆ ಆಹ್ವಾನ ಇಲ್ಲದೇ ಇರೋ ಬಗ್ಗೆ ಸ್ಪಷ್ಟಪಡಿಸಿದರು.

    ನಾನು ಕೂಡ ಒಬ್ಬ ಡೈರೆಕ್ಟರ್ ಕೂಡ ಚಲನಚಿತ್ರೋತ್ಸವಕ್ಕೆ ನನಗೆ ಕರೆದಿದ್ದೀರಾ? ನಾನು ನಿರ್ದೇಶಕರ ಸಂಘದಲ್ಲಿದ್ದೇನೆ ಪಾಸ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ವರ್ಷ ಅಂತ ಅಲ್ಲ ಪ್ರತಿ ವರ್ಷ ಫಿಲ್ಮ್ ಫೆಸ್ಟಿವಲ್ ನಡೆಯುವಾಗ ಹೀಗೆ ಅದ್ವಾನ ನಡೆಯುತ್ತಲೇ ಇರುತ್ತದೆ ಎಂದರು. ಇದನ್ನೂ ಓದಿ:ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಇನ್ನೂ ನನಗೆ ಶಾಸಕ ರವಿ ಗಾಣಿಗ ಅವರು ಕಾಲ್ ಮಾಡಿದ್ರು. ನನಗೆ ಸುದೀಪ್ ಸರ್ 2004ರಿಂದ ಅವಾರ್ಡ್‌ಗಳನ್ನೇ ತೆಗೆದುಕೊಳ್ತಿರಲಿಲ್ಲ ಅನ್ನೋ ಮಾಹಿತಿ ಗೊತ್ತಿರಲಿಲ್ಲ. ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಡ್ತಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂಬ ವಿಷ್ಯ ನನಗೆ ಸರ್ಕಾರದಿಂದ ಎಂದು ತಿಳಿದಿರಲಿಲ್ಲ. ಇಷ್ಟು ವರ್ಷ ಆದ್ರೂ ಸುದೀಪ್ ಅವರು ತಮಗೆ ಆಗಿರೋ ಅವಮಾನ ಎಲ್ಲೂ ಹೇಳಿಕೊಂಡಿಲ್ಲವಲ್ಲ ಎಂದು ರವಿ ಗಣಿಗ ಅವರು ತಮಗೆ ಹೇಳಿದರು ಎಂದು ಚಂದ್ರಚೂಡ್‌ ಈ ಬಗ್ಗೆ ಮಾತನಾಡಿದರು.

    ಇಷ್ಟೇಲ್ಲ ವಿಚಾರ ಆಗಿದೆ ಎಂಬುದು ರವಿ ಗಾಣಿಗ ಅವರಿಗೆ ತಿಳಿದಿರಲಿಲ್ಲ. ಅದರಂತೆ ಡಿಸಿಎಂ ಅವರಿಗೂ ಇದರ ಬಗ್ಗೆ ತಿಳಿದಿಲ್ಲ. ಚಲನಚಿತ್ರೋತ್ಸವಕ್ಕೆ ಸುದೀಪ್ ಆಹ್ವಾನ ನೀಡಿಲ್ಲ. ಗೊತ್ತಿದ್ರೆ ಅವರು ಸ್ಯಾಂಡಲ್‌ವುಡ್ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತ ಹೇಳ್ತಿರಲಿಲ್ಲ. ನಟ್ಟು ಬೋಲ್ಟು ಸರಿ ಮಾಡೋದಾದ್ರೆ 2024ರ ಸಬ್ಸಿಡಿ ಕೊಟ್ಟು ಸರಿ ಮಾಡಿ ಎಂದಿದ್ದಾರೆ.

    ಇನ್ನೂ ಚಿತ್ರರಂಗದ ನಟರ ಬಗ್ಗೆ ಡಿಸಿಎಂ ಡಿಕೆಶಿ ಅವರು ಜನರಲ್ ಆಗಿ ಹೇಳಿದ್ದಾರೆ. ಸುದೀಪ್ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಕರ್ನಾಟಕ ರಾಜ್ಯದಲ್ಲೇ ಸುದೀಪ್ ಆಗಿರೋ ಅವಮಾನದಿಂದ ಅವರು ಯಾವುದೇ ಅವಾರ್ಡ್‌ ತೆಗೆದುಕೊಳ್ತಿಲ್ಲ ಕ್ಲ್ಯಾರಿಟಿ ನೀಡಿದ್ದಾರೆ.

    ಸುದೀಪ್ ಸರ್ ಅವರು ಡಿಕೆಶಿ ಅವರ ಹತ್ತಿರ ತುಂಬಾ ಚೆನ್ನಾಗಿದ್ದಾರೆ. ಒಂದು ಸಿಸಿಎಲ್‌ಗೆ ಆಹ್ವಾನ ಕೊಡೋದಕ್ಕೆ ಹೋದಾಗ ಒಟ್ಟಿಗೆ ಟಿಫನ್ ಮಾಡಿದ್ವಿ ಎಂದಿದ್ದಾರೆ. ಈ ವೇಳೆ, ‘ಬಿಲ್ಲ ರಂಗಾ ಭಾಷಾ’ ಚಿತ್ರಕ್ಕೆ ಪರ್ಮೀಷನ್ ಕೇಳೋಕೆ ಹೋಗಿರಲಿಲ್ಲ. ಚಿತ್ರಕ್ಕೆ ಒಂದು ಸೆಟ್ ಹಾಕಬೇಕಿತ್ತು. ನಮಗೆ 12ರಿಂದ 15 ಏಕರೆ ಜಾಗ ಬೇಕಿತ್ತು. ಅದಕ್ಕೆ ಉಪಕರಣಗಳು ಬೇಕಿತ್ತು ಹಾಗಾಗಿ ಡಿಕೆಶಿ ಅವರ ಬಳಿ ಚರ್ಚಿಸಿದ್ವಿ ಎಂದರು.

  • ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ

    ಸಿಸಿಎಲ್ ಆಡೋದಕ್ಕೆ ಸಮಯವಿದೆ, ಫಿಲ್ಮ್ ಫೆಸ್ಟಿವಲ್ ಭಾಗವಹಿಸೋದಕ್ಕೆ ಸಮಯವಿಲ್ವಾ ಎಂದು ಸುದೀಪ್ (Sudeep) ವಿರುದ್ಧ ಕಿಡಿಕಾರಿದ್ದ ಶಾಸಕ ರವಿ ಗಣಿಗ ಮಾತಿಗೆ ನಟನ ಆಪ್ತ ಚಂದ್ರಚೂಡ್ ಚಕ್ರವರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಚಲನಚಿತ್ರೋತ್ಸವಕ್ಕೆ ಆಹ್ವಾನ ಕೊಡದೇ ಸುದೀಪ್ ಅವರು ಬರೋಕೆ ಹೇಗೆ ಸಾಧ್ಯ ಎಂದು ಸುದೀಪ್ ಆಪ್ತ ಚಂದ್ರಚೂಡ್ ಖಡಕ್ ಆಗಿ ಮಾತನಾಡಿದ್ದಾರೆ.

    ಚಲನಚಿತ್ರೋತ್ಸವಕ್ಕೆ ಬರದೇ ಇದಿದ್ದಕ್ಕೆ, ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗ (Ravi Ganiga) ಅವರಿಗೆ ಸುದೀಪ್ ಆಪ್ತ ಮಾತನಾಡಿ, ಚಲನಚಿತ್ರೋತ್ಸವಕ್ಕೆ ಆಮಂತ್ರಣ ಕೊಡದೆ ಸುದೀಪ್ ಅವರು ಹೇಗೆ ಬರೋಕೆ ಸಾಧ್ಯ? ಸಾಧು ಕೋಕಿಲ ಅವರು ಮಾಡಿರುವ ಚಿತ್ರೋತ್ಸವದ ಅಪಭೃಂಶ ಇದು. ಇನ್ನೂ ಶಾಸಕ ರವಿ ಗಣಿಗ ಅವರಿಗೆ ಸುದೀಪ್ ಹೆಸರನ್ನ ಸರಿಯಾಗಿ ಹೇಳುವ ಧೈರ್ಯವೂ ಇಲ್ಲ. ಸುಮ್ಮನೆ ಆರೋಪ ಮಾಡೋದಲ್ಲ ಎಂದು ಚಂದ್ರಚೂಡ್ ಚಕ್ರವರ್ತಿ (Chakravarthy Chandrachud) ತಕ್ಕ ಉತ್ತರ ನೀಡಿದ್ದಾರೆ.

    2004ರಿಂದ ಇವತ್ತಿನವರೆಗೂ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗಿ ಅವಾರ್ಡ್‌ಗಳನ್ನು ತೆಗೆದುಕೊಂಡಿಲ್ಲ ಅಂದ್ರೆ, 2019ರ ಸಾಲಿನ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಯವಾಗಿ ನಿರಾಕರಿಸಿದ್ರು. ಆದರೆ ಅದನ್ನು ತಿರಸ್ಕರಿಸಿಲ್ಲ. ಈ ಹಿಂದೆ ಡಾಕ್ಟರೇಟ್ ಬಂದಾಗ ಸಮಾಜಮುಖಿ ಕೆಲಸ ಮಾಡಿದವರಿಗೆ ಕೊಡಿ ಅಂದ್ರೋ ಈಗಲೂ ಹಾಗೆ. ಈ ಯೋಚನೆ ಹಿಂದೆ ಕಾರಣವಿತ್ತು ಒಂದಿಷ್ಟು ಅವಮಾನವಿತ್ತು ಎಂದಿದ್ದಾರೆ.

    ಈ ಹಿಂದೆ ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಟ್ಟಿರುತ್ತಾರೆ. `ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂದು ರವಿ ಗಣಿಗ ಆರೋಪಕ್ಕೆ ಸುದೀಪ್ ಮ್ಯಾನೇಜರ್ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಕಾರ್ಯಕ್ರಮವೊಂದರಲ್ಲಿ 2019ರಲ್ಲಿ ರಾಜ್ಯ ಪ್ರಶಸ್ತಿ ನಿರಾಕರಿಸಿದ್ದಕ್ಕೆ ಸುದೀಪ್‌ರನ್ನು ಶಾಸಕ ರವಿ ಗಣಿಗ ಟೀಕಿಸಿದ್ದರು. ರಾಜ್ಯ ಪ್ರಶಸ್ತಿ ನಿರಾಕರಿಸಿದ್ದರ ಬಗ್ಗೆ ಸುದೀಪ್ ಹೆಸರು ಹೇಳದೇ ರವಿ ಗಣಿಗ ಮಾತನಾಡಿದ್ದರು. ಜೊತೆಗೆ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗವಹಿಸದ ಸುದೀಪ್ ಸಿಸಿಎಲ್ ಆಡುತ್ತಿರುವುದಕ್ಕೆ ಪ್ರಶ್ನಿಸಿದ್ದರು. ಕಲಾವಿದರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಎಂದು ಹೇಳಿದ್ದರು.

  • ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಕಿಡಿಕಾರಿರುವ ಚಕ್ರವರ್ತಿ ಚಂದ್ರಚೂಡ್ ಸವಾಲೆಸೆದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂಬರ್ಗಿಗೆ ಪ್ರಶ್ನೆಗಳ ಸುರಿಮಳೆಗೈದ ಚಂದ್ರಚೂಡ್, ಅವರು ಬಂದರೆ ನಿಮ್ಮ ವಾಹಿನಿಗೆ ನಾನು ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ನೇರವಾಗಿ ಚಾಲೆಂಜ್ ಮಾಡಿದರು.

    ಮುಖವಾಡ ಕಳಚಲೆಂದೇ ನಾನು ಬಂದಿದ್ದೀನಿ. ಕಳೆದ 19 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಸುಮಾರು ಜನರ ಮುಖವಾಡಗಳನ್ನು ಕಳಚಿದ್ದೀನಿ. ಸುಮಾರು 60ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ನೋಡಿದ್ದೀನಿ. ಅಲ್ಲದೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಸಂಬರ್ಗಿಗೆ ಪ್ರಚಾರ ಕೊಡುತ್ತಿರುವ ಮಾಧ್ಯಮಗಳು ದುರ್ಬಳಕೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅವರಿಗೆ ನೆಟ್ಟಗೆ 4 ಕನ್ನಡ ವಾಕ್ಯ ಮಾತಾಡೋಕೆ ಬರುತ್ತಾ ಕೇಳಿ. ಎರಡು ಚಲಚಿತ್ರ ಮಂಡಳಿಗಳಿವೆ. ಈ ಎರಡರಲ್ಲೂ ಇವರ ಬ್ಯಾನರ್ ಇಲ್ಲ. ಒಂದು ಗೀತೆ ರಚನೆಕಾರ, ಹಾಡು ಬರೆದಿದ್ದಾರೋ ಅಥವಾ ನಟಿಸಿದ್ದಾರೋ ಏನೂ ಗೊತ್ತಿಲ್ಲ. ಎಲ್ಲೋ ಸಣ್ಣಪುಟ್ಟ ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 24 ಥಿಯೇಟರ್ ಗಳನ್ನು ಕೊಡಬೇಕು, ಪರಭಾಷಾ ಚಿತ್ರಗಳಿಂದ ಕನ್ನಡವನ್ನು ಕಾಪಾಡಿಕೊಳ್ಳಬೇಕು ಅನ್ನೋದು ಅಣ್ಣಾವ್ರ ಕಾಲದಿಂದಲೂ ಹೋರಾಟ ನಡೆದಿದೆ ಎಂದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಯಾರೋ ಏನೋ ಮಾಡಿರುವುದನ್ನು ಫೇಸ್ ಬುಕ್ ಜ್ಯೋತಿಷಿ, ಭಯೋತ್ಪಾದಕನ ರೀತಿ ಕುಳಿತುಕೊಂಡು ಮಾತಾಡೋದು ಸರಿಯಲ್ಲ. ರಾಗಿಣಿ ಮತ್ತು ಸಂಜನಾಗೆ ಶಿಕ್ಷೆಯಾಗಿದ್ದಕ್ಕೆ ನಾನು ಕಾರಣ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅನುಶ್ರೀಯವರನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಹೇಳಿಕೆ ನೀಡುವುದೆಲ್ಲ ಸಮಂಜಸವಲ್ಲ. ಕನ್ನಡದ ಹೆಣ್ಣು ಮಗಳು, ಆಕೆ ತಪ್ಪು ಮಾಡಿದ್ದರೆ ಕಾನೂನು, ಸಂವಿಧಾವಿದೆ. ಸಂಬಂಧ ಪಟ್ಟ ಇಲಾಖೆಗಳಿವೆ. ಈ ರೀತಿಯ ಕುತಂತ್ರಗಳನ್ನು ನೀವು ಬೆಳೆಸಬೇಡಿ. ದಾಖಲೆ ಒದಗಿಸಲು 2 ತಿಂಗಳು ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

  • ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

    – ಸಂಬರ್ಗಿಯವರು ತಾಯಿ ಮೇಲೆ ಆಣೆ ಮಾಡಲಿ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಂಡು ತಿರುಗುವ ಪ್ರಶಾಂತ್ ಸಂಬರ್ಗಿ ಓರ್ವ ನೆಲಹಿಡುಕ. ಬಿಗ್‍ಬಾಸ್ ಶೋ ನಲ್ಲಿ ಎಲ್ಲರಿಗೂ ಪಾರ್ಟಿಕೊಟ್ಟು ಅರವಿಂದ್‍ನ ವೀಡಿಯೋ ಮಾಡಿ ಟ್ರೋಲಿಗನಿಗೆ ಕೊಟ್ಟಿದ್ದಾರೆ ಎಂದು ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಸಂಬರ್ಗಿಗೆ ಜೀವದ ಗೆಳೆಯರಿರುವುದು ನನಗೆ ಅರಿವಿಲ್ಲ. ಎಲ್ಲರ ಮಾತು, ಎಲ್ಲರ ವೀಡಿಯೋ ರೆಕಾರ್ಡ್ ಮಾಡುವ ನೀಚ. ಬಿಗ್‍ಬಾಸ್ ನ ಎರಡನೇ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಖಾಸಗಿ ವಾಹಿನಿ ಮಾಡಿದ್ದ ಕ್ವಾರೈಂಟೈನ್ ಸಂದರ್ಭದಲ್ಲಿ ಬಿಗ್‍ಬಾಸ್ ಸ್ಪರ್ಧಿ ಅರವಿಂದ್ ಸೇರಿದಂತೆ ಹಲವರಿಗೆ ಮದ್ಯಪಾನದ ಪಾರ್ಟಿಕೊಟ್ಟು(ಚಾನಲ್ ನಿಯಮಾವಳಿ ವಿರೋಧಿಸಿ) ವೀಡಿಯೋ ಮಾಡಿದ್ದರು. ಈ ಸಂದರ್ಭ ನಾನು ಇದನ್ನು ಗಮನಿಸಿ, ಕ್ಷಣಮಾತ್ರದಲ್ಲಿ ಕುತಂತ್ರ ಕಂಡುಹಿಡಿದು ಅಲ್ಲಿದ್ದ ಹೆಣ್ಣುಮಕ್ಕಳನ್ನು ರೂಮ್‍ನಿಂದ ಹೋಗುವಂತೆ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಆದರೂ ಅರವಿಂದ್ ಅವರ ವೀಡಿಯೋ ಮಾಡಿ ಅದನ್ನು ಯಾವಾಗ ಬಿಡುಗಡೆ ಮಾಡಬೇಕೆಂದು ಚಂದನ್ ಎಂಬ ಟ್ರೋಲಿಗನಿಗೆ ಕೊಟ್ಟುಬಂದಿದ್ದರು. ಈ ಸುದ್ದಿಯನ್ನು ನಾನು ಖಾಸಗಿ ಚಾನಲ್ ಗೆ ತಿಳಿಸಿದ ಬಳಿಕ ಆ ವೀಡಿಯೋವನ್ನು ತಡೆಹಿಡಿಯಲಾಗಿದೆ. ತಾಯಿ ಪುಷ್ಪ ಸಂಬರ್ಗಿ ಅವರ ತಲೆಮೇಲೆ ಕೈಇಟ್ಟು ಈ ಬಗ್ಗೆ ನಾ ಇಂತಹ ಕೆಟ್ಟ ಕೆಲಸ ಮಾಡಲಿಲ್ಲವೆಂದು ಸಂಬರ್ಗಿ ಹೇಳಲಿ. ಇಲ್ಲದಿದ್ದಲ್ಲಿ ತನ್ನ ಮೊಬೈಲ್‍ನ್ನು ಪೊಲೀಸರಿಗೆ ತನಿಖೆಗೆ ಕೊಡಲಿ. ಟ್ರೋಲ್ ಮಾಡಬೇಕು. ನೆಗೆಟಿವ್ ಮಾಡಬೇಕು. ಕುತಂತ್ರ ಮಾಡಿ ಅವರ ಶಕ್ತಿ ಕುಂದಿಸಬೇಕು. ಅವರನ್ನು ಜನರ ಮುಂದೆ ಕೆಟ್ಟವರಾಗಿ ತೋರಿಸಬೇಕು. ಈ ಮೂಲಕ ತಾನು ಒಳ್ಳೆಯವನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಸಂಬರ್ಗಿಗಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ನಿಜಕ್ಕೂ ಖಾಸಗಿ ಚಾನಲ್ ಆಯೋಜಕರು ಯಾವ ಪರಿ ಬುದ್ಧಿವಾದ ಹೇಳಿ ಎಂಜಲು ಖರ್ಚು ಮಾಡಿದರೆಂದು ತನಿಖೆಯ ಸಣ್ಣ ಅಭ್ಯಾಸವಿದ್ದವರು ತಿಳಿದುಕೊಳ್ಳಬಹುದು. ಇವರು ಸಾಮಾಜಿಕ ಕಾರ್ಯಕರ್ತ ಎನ್ನುವುದಕ್ಕೆ ಯೋಗ್ಯನಲ್ಲ ಎಂದು ವಾಗ್ದಾಳಿ ನಡೆಸಿದರು.

  • ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಗೆಳೆಯ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ರೊಚ್ಚಿಗೆದ್ದಿದ್ದಾರೆ. ಸಂಬರ್ಗಿಯವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅಂತ ಹೇಳಿಕೊಳ್ಳಲು ಪ್ರೂಫ್ ಏನಿದೆ ಎಂದು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಐತಿಹಾಸಿಕ ಪುರುಷರು, ಸಾಧಕರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ದೊಡ್ಡ ಹೆಸರು ತಂದುಕೊಟ್ಟವರು ಹಾಗೂ ಮಾಡೆಲ್ ಗಳ ಹೆಸರುಗಳನ್ನು ಹೇಳಿಕೊಂಡು, ಅವರ ಮೊಮ್ಮಗ ಅಂತ ಹೇಳಿಕೊಂಡು ಇವರು ಮಾಡುತ್ತಿರುವ ಕುತಂತ್ರ ಏನು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ಗುಡುಗಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿರುವ ಸಂದರ್ಭದಲ್ಲಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಮದು ಹೇಳಿದಾಗ ಮೊದಲು ನಾನು ವಿರೋಧಿಸಿದೆ. ನಂತರ ಅದೊಂದು ಶೋ ಎಂದು ಸುಮ್ಮನಾದೆ. ಆದರೆ ಹೊರಗಡೆ ಬಂದ ಬಳಿಕ ಐತಿಹಾಸಿಕ ಪುರುಷರ, ಸಾಧಕರ ಹೆಸರನ್ನು ಹೇಳಬಾರದು. ಐತಿಹಾಸಿಕವಾಗಿ ರಾಣಿ ಚೆನ್ನಮ್ಮಗೆ ಮೊಮ್ಮಗ ಇರಲು ಸಾಧ್ಯವಿಲ್ಲ. ಇದನ್ನು ಕೇಳಿದ್ರೆ ಜನ ನಕ್ಕು ಬಿಡ್ತಾರೆ. ಈ ವಿಚಾರ ದುರುಪಯೋಗವಾಗುತ್ತೆ. ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡ ಎಂದು ಅವರಿಗೆ ನಾನು ಬುದ್ಧಿವಾದ ಹೇಳಿದ್ದೆ ಎಂದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಈ ಹಿಂದೆ ನಾನು ಭೂತಾಯಿಯನ್ನು ಮಾರುವುದಾಗಿ ಸಂಬರ್ಗಿ ಹೇಳಿಕೆ ನೀಡಿದ್ದರು. ಇವರು ಒಬ್ಬ ನೆಲೆಹಿಡುಕ, ದಲ್ಲಾಳಿ. ಕಳೆದ ಮೂರು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಂಗಳೂರಲ್ಲಿ 12 ಕೋಟಿ ಹಾಗೂ ಬೆಂಗಳೂರಿನಲ್ಲಿ 4 ಕೋಟಿ ರೂ. ನ ಮನೆ ಕಟ್ಟಿದ್ದಾರೆ, ಐಷಾರಾಮಿ ಕಾರಿದೆ. ಇದು ಡ್ರಗ್ಸ್ ನಿಂದ ಬಂತು ಎಂದು ಹೇಳಿಕೆ ನೀಡಿದ್ದರು. ಆದರೆ ಇವುಗಳಿಗೆ ದಾಖಲೆಗಳನ್ನು ನೀಡಬೇಕಲ್ವ ಎಂದು ಮರು ಪ್ರಶ್ನೆಗೈದ್ರು.

    ಶುಗರ್ ಡ್ಯಾಡಿ ಎಂಬುದು ದೇವರಾಜ ಅರಸು, ಗುಂಡೂರಾವ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮಗೆ ಗೊತ್ತಿರುವ ಪದ. ಇದಕ್ಕೆ ಸಂಬಂಧಪಟ್ಟ ಏನಾದರೂ ದಾಖಲೆಗಳು ಸಂಬರ್ಗಿ ಬಳಿ ಇದೆಯಾ ಎಂದು ಕೇಳಿದರು. ಒಬ್ಬರು ಮಾಜಿ ಮುಖ್ಯಮಂತ್ರಿಯವರು ಇನ್ನೊಬ್ಬ ನಟಿಗೆ ಶುಗರ್ ಡ್ಯಾಡಿ ಆಗಿದ್ದಾರೆ. ಲಕ್ಷಾಂತರ ರೂ. ಹಣ ಕೊಡ್ತಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡ್ತಾರೆ. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಸೆಂಬರ್ ನಲ್ಲಿ ಕೊಡುತ್ತೇನೆ ಅಂತ ನಾನು ಹೇಳಿಕೆ ನೀಡಿದರೆ ನೀವು ಪ್ರಚಾರ ಮಾಡ್ತೀರಾ..?, ಅದೇ ರೀತಿ ದಾಖಲೆಗಳೇ ಇಲ್ಲದೆ ಅನುಶ್ರೀ ಬಗ್ಗೆ ಸಂಬರ್ಗಿ ಹೇಗೆ ಆರೋಪ ಮಾಡಿದ್ರು ಎಂದು ಚಂದ್ರಚೂಡ್ ಪ್ರಶ್ನೆಗಳ ಸುರಿಮಳೆಗೈದ್ರು.

    ಸುಖಾಸುಮ್ಮನೆ ಮಾತನಾಡುತ್ತಿರುವ ಸಂಬರ್ಗಿಯವರು ಒಂದು ಶೀಟ್ ಆದರೂ ದಾಖಲೆ ಕೊಡಲಿ. ಸುಮ್ಮನೆ ಪ್ರಚಾರ ತೆಗೆದುಕೊಂಡು ಬಿಜೆಪಿ ಪಕ್ಷ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ. ಕುತಂತ್ರಗಾರಿಕೆ ಮಾಡುತ್ತಿದ್ದಾರೆ. ದಾಖಲೆಗಳನ್ನು ಬಿಡುಗಡೆ ಮಾಡಲು ಯಾಕೆ ಇಷ್ಟೊಂದು ಸಮಯ ಬೇಕು..?, ಶೃತಿ ಹರಿಹರನ್ ಅವರ ಮೀಟೂ ವಿಚಾರಕ್ಕೆ ಮೂರು ವರ್ಷವೇ ಆಗೋಯ್ತು. ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ವಿಚಾರ ಬಂದು ಸುಮಾರು ಎರಡೂವರೆ ವರ್ಷ ಆಗೋಯ್ತು. ಎಲ್ಲಿದೆ ದಾಖಲೆಗಳು..?. ಈ ಪ್ರಕರಣಗಳು ನಾಳೆ ಯಾವ ರೀತಿಯ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತೆ ಗೊತ್ತಿಲ್ಲ. ಆದರೆ ಸಮಾಜಕ್ಕೆ, ಯುವಕರಿಗೆ ಒಳ್ಳೆಯದಾಗಬೇಕು. ಆದರೆ ಈ ರೀತಿ ಆರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡಿ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಂಬರ್ಗಿ ವಿರುದ್ಧ ಕಿಡಿಕಾರುವ ಮೂಲಕ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಚೂಡ್ ಆಗ್ರಹಿಸಿದರು.

  • ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

    – ಸಂಬರ್ಗಿ ಅಲ್ಲ ಸಾಂಬಾರ್ ಕಾಗೆ

    ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ, ಕನ್ನಡ ವಿರೋಧಿ. ರಾಜಕೀಯ ಕಾರಣಕ್ಕೆ ತಾಯಿಭಾಷೆ ಬಲಿಕೊಡುವ ನೆಲಹಿಡುಕ. ಬಿಜೆಪಿ ಪಕ್ಷ ಸೇರಲು ಪಡಬಾರದ ಪ್ರಚಾರದ ಗಿಮಿಕ್ ನಡೆಸುತ್ತಿರುವ ಓರ್ವ ನೆಲಹಿಡುಕ ಎಂದು ಬಿಗ್‍ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ.

    ಪ್ರಶಾಂತ್ ಸಂಬರ್ಗಿ ವಿರುದ್ಧ ಫೇಸ್‍ಬುಕ್ ನಲ್ಲಿ ಬರೆದುಕೊಂಡು ಆರೋಪಗಳ ಸುರಿಮಳೆ ಗೈದಿರುವ ಚಂದ್ರಚೂಡ್, ಸಂಬರ್ಗಿಯ ಹೋರಾಟವೆಲ್ಲಾ ಸುಳ್ಳು. ಸಂಬರ್ಗಿ ಒಬ್ಬ ಮೋಸಗಾರ. ಯಾವುದೇ ಕೇಸ್ ಅಲ್ಲಿ ಕೂಡ ಸಂಬರ್ಗಿ ಸಾಕ್ಷ್ಯ ಕೊಟ್ಟಿಲ್ಲ. ಮೀಟೂ ಕೇಸ್ ಅಲ್ಲಿ ಕೋಟ್ಯಂತರ ಹಣ ಪಡೆದ, ಅರ್ಜುನ್ ಸರ್ಜಾ ಪರವಾಗಿ ಮಾತನಾಡಿದ. ಇದೂವರೆಗೂ ಒಂದೇ ಒಂದು ಸಾಕ್ಷ್ಯವನ್ನು ಕೊಟ್ಟಿಲ್ಲ. ರಾಗಿಣಿ, ಸಂಜನಾ, ಜಮೀರ್ ಅಹಮದ್ ವಿರುದ್ಧ ಮಾತನಾಡಿದ ಬಳಿಕ ಸಿಸಿಬಿಯ ಕಚೇರಿಯಲ್ಲಿ ಖಾಲಿ ಫೈಲ್ ಹಿಡ್ಕೊಂಡು ಓಡಾಡಿದ. ಇನ್ಸ್‍ಪೆಕ್ಟರ್, ಡಿಸಿಪಿ ಚೇಂಬರ್ ಗೆ ಹೋಗಿ ಕಾಲಹರಣ ಮಾಡಿ ಬಂದ ಅಷ್ಟೇ. ಸ್ನೇಹಿತನೊಬ್ಬನಿಗೆ ಕಾರು ಕೊಡ್ತಿಸ್ತೀನಿ ಅಂತ ತಾನೇ ಕಾರನ್ನು ಇಟ್ಟುಕೊಂಡು. ಬಳಿಕ ಕಾರು ತೆಗೆದುಕೊಳ್ಳಲು ಬಂದ ಸ್ನೇಹಿತನಿಗೆ ಮೋಸ ಮಾಡಿದ ಎಂದು ಸಂಬರ್ಗಿಯ ಇಡೀ ಚರಿತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚಕ್ರವರ್ತಿ ಚಂದ್ರಚೂಡ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಸಂಬರ್ಗಿ ವಿರುದ್ಧ ಸಾಕಷ್ಟು ಬರೆದಿರೊ ಚಂದ್ರಚೂಡ್, ಸಾಂಬಾರ್ ಕಾಗೆ ಎಂಬ ದಲ್ಲಾಳಿಯ ಪುರಾಣ. ರಿಲಾಯನ್ಸ್ ಕಂಪನಿಯ ಮಾರ್ಕೆಟಿಂಗ್ ಬಾಯ್ ಅಂತಾ ಪೋಸ್ಟ್ ಹಾಕಿದ್ದ ವಕೀಲ ಸೂರ್ಯ ಮುಕುಂದ್ ರಾಜ್ ಪೋಸ್ಟ್ ಗೆ ಪುಟಗಟ್ಟಲೆ ಕಮೆಂಟ್ ಮಾಡಿರುವ ಚಂದ್ರಚೂಡ್, ಈ ಸಂಧರ್ಭಕ್ಕೆ ಇಂತಹದ್ದೊಂದು ವಿವರಣೆ ಬರೆಯದೆ ಹೋದರೆ ಕಲಿತ ಪತ್ರಿಕೋದ್ಯಮಕ್ಕೆ ಅಗೌರವ. ಸಿನಿಮಾ ಇಂಡಸ್ಟ್ರಿಗೂ ಅವನಿಗೂ ಏನು ಸಂಬಂಧ ಕಳಿಸ್ರೊ ಅವನನ್ನು ಹೊರಗೆ ಅಂತಾ ಅಂಬರೀಶ್ ಉಗಿದು ಕಳಿಸಿದ್ರು, ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಲು ಕ್ರೈಸ್ತ ಮಿಶನರಿ ಇಂದ ಹಣ ಬರ್ತಿತ್ತು. ಹಾಗಾಗಿ ಅವನು ಆರೋಪ ಮಾಡಿದ್ದ. ರೇಂಜ್ ರೋವರ್ ಕಾರ್ ಪಡೆದು ಸ್ನೇಹಿತನಿಗೆ ರಾತ್ರೋ ರಾತ್ರಿ ವಿಶ್ವಾಸ ದ್ರೋಹವೆಸಗಿದ ಆಸಾಮಿ ಅವನು ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಫುಲ್ ಒಳ್ಳೆ ಹುಡುಗನ ರೀತಿ ಡವ್ ಎಂದ ಬ್ರೊ ಗೌಡ

    ಕಂಡವರ ಬಗ್ಗೆ ಸುಳ್ಳು ಆಸ್ತಿಗಳನ್ನ ಕೇಳ್ತಾನೆ ರಾಗಿಣಿ, ಸಂಜನಾ, ಅನುಶ್ರೀ, ಜಮೀರ್ ಬಗ್ಗೆ ಈವರೆಗೆ ಈತ ಒಂದೇ ಒಂದು ಚೂರು ಮಾಹಿತಿ ಕೊಟ್ಟಿಲ್ಲ. ನಾಲ್ಕು ಬಾರಿ ಸಿಸಿಬಿಯ ಬಾತ್ ರೂಮ್ ಬಳಸಿ ಬಂದನೇ ಹೊರತು ಯಾವ ಸಣ್ಣ ಮಾಹಿತಿಯೂ ನೀಡಿಲ್ಲ. ಇವನ ಮೂಲ ಊರು ಮರಾಠರ ಪ್ರಾಂತ್ಯದ್ದು, ಖ್ಯಾತ ಗಾಯಕ ರಘು ದೀಕ್ಷಿತ್ ಬಗ್ಗೆ ಡ್ರಗ್ಸ್ ಆರೋಪ ಮಾಡಿದ ಗಿಂಡಿಮಾಣಿ ಪ್ರಶಾಂತ್ ಸಂಬರ್ಗಿ ಎಂದು ಹಿಗ್ಗಾಮುಗ್ಗ ಜರಿದಿದ್ದಾರೆ.

     

     

  • ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಊರ ನಾಯಿ ಕಾಡು ನಾಯಿ ಜೊತೆ ಹೋಗಿದೆ: ಚಕ್ರವರ್ತಿ

    ಬಿಗ್ ಬಾಸ್ ಕೊನೇಯ ವಾರಕ್ಕೆ ತಲುಪಿದೆ. ಕೆಲವೇ ದಿನಗಳಲ್ಲಿ ಗ್ರ್ಯಾಂಡ್ ಫಿನಾಲೆ ಸಹ ನಡೆಯಲಿದೆ. ಇದೇ ಸಂದರ್ಭದಲ್ಲಿ ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್‍ಗೆ ಚಕ್ರವರ್ತಿ ಚಂದ್ರಚೂಡ್ ಆಗಮಿಸಿದ್ದು, ಈ ವೇಳೆ ಮನೆಯಲ್ಲಿನ ಸ್ಪರ್ಧಿಗಳನ್ನು ಪ್ರಾಣಿಗಳಿಗೆ ಹೋಲಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ದಿವ್ಯಾ ಉರುಡುಗ ಅವರನ್ನು ಕಾಂಗರೂ ಮರಿಗೆ ಹೋಲಿಸಿದ್ದಾರೆ. ನೀರಿದ್ದಾಗ ಹೇಗೆ ಮಾಡಬೇಕು, ನೀರಿಲ್ಲದಾಗ ಹೇಗೆ ಮಾಡಬೇಕು, ಹೇಗೆ ತನ್ನವರನ್ನು ಕಾಪಾಡಿಕೊಳ್ಳಬೇಕು ಎಂಬ ಗುಣವಿದೆ. ಆದರೆ ಅದಕ್ಕೆ ಬೆನ್ನ ಹಿಂದೆ ಯಾರಾದರೂ ಇರಲೇಬೇಕು. ಇನ್ನು ಊರ ನಾಯಿ, ಕಾಡು ನಾಯಿ ಜೊತೆ ಹೋಗಿ ಬಿಟ್ಟಿದೆ. ನಾಯಿಗಳು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಹೇಗಾದರೂ ಮಾಡಿ ಬದುಕುತ್ತವೆ. ಇದನ್ನು ತುಂಬಾ ಜನ ಪೆಟ್ ಎಂದು ಮುದ್ದು ಮಾಡಿ, ಪ್ಯಾಂಟ್, ಶರ್ಟ್ ಹೊಲಿಸುತ್ತಾರೆ. ಆದರೆ ಇಂತಹ ನಾಯಿ ಯಾವಾಗಲೂ ಒಬ್ಬರ ಮೇಲೆ ಅವಲಂಬಿತವಾಗಿರಬೇಕು, ಇಲ್ಲವಾದಲ್ಲಿ ಅದಕ್ಕೆ ಬದುಕಲು ಆಗುವುದಿಲ್ಲ ಎಂದು ಶಮಂತ್‍ಗೆ ಹೇಳಿದ್ದಾರೆ.

    ಅಲ್ಲಿ ಒಂದು ನರಿ ಇದೆ, ಇನ್ನೊಬ್ಬರ ತಪ್ಪುಗಳ ಮೇಲೆ ಸವಾರಿ ಮಾಡುತ್ತದೆ, ತನ್ನ ಸರಿಗಳ ಮೇಲೆ ಸವಾರಿ ಮಾಡಲ್ಲ. ಆದರೆ ಅದು ತುಂಬಾ ಬ್ರಿಲಿಯಂಟ್, ಜನರ ನಾಡಿ ಮಿಡಿತ ನೋಡಿಕೊಂಡು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ಆಟವಾಡುತ್ತಿದೆ ಎಂದು ಪ್ರಶಾಂತ್ ಸಂಬರಗಿ ಹೆಸರನ್ನು ಹೇಳಿದ್ದಾರೆ. ತುಂಬಾ ಅದ್ಭುತವಾದ ಹುಲಿಯೊಂದಿದೆ. ಆ ಹುಲಿ ಯಾವಾಗಲೂ ಫ್ರಿಡ್ಜ್ ಇಟ್ಟುಕೊಳ್ಳುವುದಿಲ್ಲ, ಹೊಟ್ಟೆ ಹಸಿವಾದಾಗ ಮಾತ್ರ ಬೇಟೆಯಾಡುತ್ತದೆ. ಬಾಕಿ ವಿಚಾರಗಳಲ್ಲಿ ತುಂಬಾ ಆರಾಮವಾಗಿರುತ್ತದೆ. ಅದಕ್ಕೆ ಬೇರೆನೂ ಗೊತ್ತಾಗಲ್ಲ ಅದೇ ಕೆಪಿ ಅರವಿಂದ್ ಎಂದು ಹೇಳಿದ್ದಾರೆ. ಆದರೆ ಆ ಹುಲಿ ಈ ಕೊನೇಯ ವಾರದಲ್ಲಿ ಸರ್ವೈವ್ ಆಗಬೇಕೆಂದರೆ ನನ್ನ ಬೇಟೆಯಲ್ಲಿ ತಪ್ಪಿದೆ, ಒನ್ ಸೈಡೆಡ್ ಆಗುತ್ತಿದೆ ಎನ್ನುವುದು ಅದಕ್ಕೆ ಅರಿವಾಗಬೇಕು ಎಂದು ಅರ್ಥವಾಗಬೇಕಿದೆ ಎಂದಿದ್ದಾರೆ.

    ಒಂದು ಜಿಂಕೆ ಇದೆ ಅದಕ್ಕೆ ಅಲಂಕಾರವೇ ಒಳ್ಳೆಯ ಗುಣ, ವಿನಯ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ತುಂಬಾ ಅಮಾಯಕ ಎಂದು ಅನ್ನಿಸಿದ್ದು ದಿವ್ಯಾ ಸುರೇಶ್. ಎಷ್ಟೇ ಬೇಟೆಗಾರರು ಬಂದರೂ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯವಿದೆ. ಆದರೆ ಆ ಜಿಂಕೆಗೆ ಸೋಲು ಗೆಲವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳುವ ಶಕ್ತಿ ಬೇಕು ಎಂದಿದ್ದಾರೆ. ಒಂದು ಮೊಲ ಇದೆ ಅದಕ್ಕೆ ವಯಸ್ಸು, ಆಯಸ್ಸು ಯಾವುದೂ ಗೊತ್ತಾಗಲ್ಲ, ಯಾವಾಗಲೂ ಏನಾದರೂ ಕೇಳುತ್ತಲೇ ಇರುತ್ತದೆ. ಅದನ್ನು ತಬ್ಬಿಕೊಂಡು ಮುದ್ದಾಡಬೇಕೆನ್ನಿಸುತ್ತದೆ. ಆದರೆ ಅದು ಯಾರಿಗೆ ವಾಸನೆ ಹಿಡಿದಿರುತ್ತದೆಯೋ ಅವರ ಜೊತೆ ಮಾತ್ರ ಇರುತ್ತದೆ ಎಂದು ಶುಭಾ ಪೂಂಜಾ ಬಗ್ಗೆ ಹೇಳಿದ್ದಾರೆ.

    ಸಾರಂಗ ಇದೆ, ಅದು ನೋಡಕ್ಕೂ ಚೆಂದ, ವಾದ್ಯವಾಗುತ್ತದೆ. ಮಾತು ಕಡಿಮೆ ಆಡುತ್ತದೆ. ತನ್ನಪಾಡಿಗೆ ತಾನು ಹೋಗುತ್ತಿರುತ್ತದೆ. ಯಾವುದೇ ಪ್ರಭೇದ ಅಲ್ಲ. ಆದರೆ ಅದು ಸೌಂಡ್ ಮಾಡಲ್ಲ, ಅದು ಸದ್ದು ಮಾಡಿದರೆ ಸಾರಂಗಗಳು ಹಿಂಡಾಗಿ ಬರುತ್ತವೆ ಅವರೇ ವೈಷ್ಣವಿ ಎಂದಿದ್ದಾರೆ. ತುಂಬಾ ಚೆಂದದ ಸಾರಂಗ, ಮಾಡುವ ಕಡೆ ಶಬ್ದ ಮಾಡಬೇಕು. ಆಗ ಅದ್ಭುತವಾಗಿ ಕಾಣುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

    ಇನ್ನೊಂದು ಮುದ್ದು ಕೋಣ ಇದೆ ಕೆಸರಲ್ಲಿ, ನದಿಯಲ್ಲಿ ಎಲ್ಲಾದರೂ ಹಾಕಿ, ಏನೂ ಹಾಕಿದರೂ ನಗಿಸುವುದೊಂದೇ ಅದರ ಗುಣ. ಏನು ಮಾಡಿದರೂ ನಿನ್ನ ಜೊತೆ ಚೆನ್ನಾಗಿರುತ್ತೇನೆ ಎನ್ನುತ್ತಿರುತ್ತದೆ, ಹಳ್ಳಿ ಹಕ್ಕಿ, ಪ್ರತಿಭಾವಂತ ಅದು ಮಂಜು ಪಾವಗಡ, ಅದಕ್ಕೊಂದು ಚೆಪ್ಪಾಳೆ ಎಂದಿದ್ದಾರೆ.

  • ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

    ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

    ಬೆಂಗಳೂರು: ಬಿಗ್‍ಬಾಸ್ ಕನ್ನಡ ಸೀಸನ್ 8ನಲ್ಲಿ ಫಿನಾಲೆ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಈ ವಾರ ಮನೆಯಿಂದ ಚಕ್ರವರ್ತಿ ಆಚೆ ಹೋಗಿದ್ದಾರೆ.

    ಬಿಗ್‍ಬಾಸ್ ಮನೆಯ ಈ ವಾರಾದ ಎಲಿಮಿನೇಷನ್ ತುಂಬಾ ವಿಭಿನ್ನವಾಗಿರಲಿದೆ. ನಿಮ್ಮಲ್ಲಿಯೇ ಒಬ್ಬರು ಯಾರಿಗೂ ತಿಳಿಯದಂತೆ ಮನೆಯಿಂದ ಆಚೆ ಹೋಗುತ್ತಾರೆ. ಸಖತ್ ಟ್ವಿಸ್ಟ್ ಇರಲಿದೆ ಎಂದು ಸುದೀಪ್ ಹೇಳಿದ್ದರು. ಅದರಂತೆ ಚಕ್ರವರ್ತಿ ಆಚೆ ಬಂದಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿತ್ತು. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದರು. ಬಿಗ್‍ಬಾಸ್ ಪಯಣದ ಕುರಿತಾಗಿ ಹೇಳಲು ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಟ್ಟರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಯಾರಿಗೆ ಬಿಗ್‍ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಳ್ಳುತ್ತದೆಯೋ ಅವರು ಹೊರಗೆ ಬರಬೇಕು ಎಂದು ಹೇಳಿದ್ದರು. ಈ ವೇಳೆ ಶಮಂತ್ ಮತ್ತು ಚಕ್ರವರ್ತಿ ಕೊನೆಯಲ್ಲಿ ಉಳಿದುಕೊಂಡಿದ್ದರು. ಆಗ ಬಿಗ್‍ಬಾಸ್ ಚಕ್ರವರ್ತಿ ನೀವು ಮುಖ್ಯದ್ವಾರ ಮೂಲಕವಾಗಿ ಹೊರಗೆ ಬನ್ನಿ ಎಂದು ಸೂಚನೆ ನೀಡದರು. ಈ ವೇಳೆ ಚಕ್ರವರ್ತಿ ಮನೆಯಿಂದ ಆಚೆ ಬಂದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್‍ಗೆ ದಿನಾಂಕ ನಿಗದಿ

    ಪ್ರಿಯಾಂಕಾ ಎಲಿಮಿನೇಟ್ ಆದಾಗ ಚಕ್ರವರ್ತಿ ಚಂದ್ರಚೂಡ್ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಕೆಲವು ಸ್ಪರ್ಧಿಗಳ ಜೊತೆಗೆ ಜಗಳ ಮಾಡಿಕೊಂಡಿದ್ದರು. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿಯನ್ನು ಮನೆಯಿಂದ ಆಚೆ ಕಳುಹಿಸಿ ಎನ್ನುವ ಕೂಗು ಕೇಳಿ ಬರುತ್ತಿತ್ತು. ಈ ವಿಚಾರದ ಬಗ್ಗೆ ಚಕ್ರವರ್ತಿ ಕ್ಷಮೆಯನ್ನು ಕೇಳಿದ್ದರು. ಆದರೆ ಈ ವರ್ತನೆ ಜನರಿಗೆ ಇಷ್ಟವಾಗದ ಕಾರಣ ಇವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ.

    ಸಾಮಾನ್ಯವಾಗಿ ವೀಕೆಂಡ್‍ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್‍ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ವಾರದ ಮಧ್ಯೆ ಎಲಿಮಿನೇಷನ್ ನಡೆದ ಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್ ಆಗಿದ್ದಾರೆ. ಅರವಿಂದ್ ಕೆ.ಪಿ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.

  • ಬಿಗ್ ಬಾಸ್ ಎಲಿಮಿನೇಷನ್ – ಬಿಕ್ಕಿ ಬಿಕ್ಕಿ ಅತ್ತ ಸಂಬರಗಿ

    ಬಿಗ್ ಬಾಸ್ ಎಲಿಮಿನೇಷನ್ – ಬಿಕ್ಕಿ ಬಿಕ್ಕಿ ಅತ್ತ ಸಂಬರಗಿ

    ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿದೆ. ಫೋನ್ ಮನೆಗೆ ಬಂದಿರುವುದರಿಂದ ಖುಷಿಪಟ್ಟಿದ್ದ ಮನೆಂದಿಗೆ ಇದೇ ಫೋನು ತಲೆ ನೋವು ತರಿಸಿದೆ. ಫೋನ್ ಕರೆ ಸ್ವೀಕರಿಸಿದ ಸಂಬರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದ್ದಾರೆ. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಗಿದೆ.

    ವೀಕೆಂಡ್‍ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್‍ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ಇದು ಮಿಡ್‍ವೀಕ್ ಎಲಿಮಿನೇಷನ್ ಆದಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಸ್ಪರ್ಧಿಗಳು ಔಟ್ ಆಗಬೇಕಾಗುತ್ತದೆ. ಹಾಗಾಗಿ ಇರಿಸಲಾಗಿರುವ ಟೆಲಿಫೋನ್ ಬೂತ್ ಮೂಲಕವೇ ಸ್ಪರ್ಧಿಗಳ ತಮ್ಮ ಅನುಭವ ಹಂಚಿಕೊಳ್ಳಲು ಬಿಗ್‍ಬಾಸ್ ಅವಕಾಶ ನೀಡಿದ್ದಾರೆ.

    ಇನ್ನು ಎರಡು ನಿಮಿಷಗಳಲ್ಲಿ ಮುಖ್ಯದ್ವಾರ ತೆರೆದರೆ ನಿಮ್ಮ ಪ್ರಯಾಣ ಮುಕ್ತಾಯವಾಗಿದೆ ಎಂದು ಅರ್ಥ ಎಂದು ಬಿಗ್‍ಬಾಸ್ ಧ್ವನಿ ಕೇಳಿಸಿದೆ. ಫೋನ್ ಬೂತ್‍ನಲ್ಲಿ ಮಾತನಾಡಿ ಬಂದ ಪ್ರಶಾಂತ್ ಸಂಬರಗಿ ಅವರು ಸಿಕ್ಕಾಪಟ್ಟೆ ಎಮೋಷನಲ್ ಆಗಿದ್ದಾರೆ. ಚಿಕ್ಕ ಮಕ್ಕಳಂತೆ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

     

    ಬಿಗ್‍ಬಾಸ್ ಕನ್ನಡ ಸೀಸನ್ 8ರ ಫಿನಾಲೆ ಸಮೀಪಿಸುತ್ತಿದೆ. ಕೊನೇ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಿದೆ. ಬಿಗ್‍ಬಾಸ್ ವೀಕ್ಷಕರು ಯಾವ ಸ್ಪರ್ಧಿ ಮನೆಯಿಂದ ಆಚೆ ಹೋಗುತ್ತಾರೆ ಎಂದು ನೋಡಲು ಕಾಯುತ್ತಿದ್ದಾರೆ.

  • ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಈಗ ನಾನು ಟ್ರೋಲ್ ಆಗುತ್ತಿರಬಹುದು – ಅರವಿಂದ್, ಚಕ್ರವರ್ತಿ ಚರ್ಚೆ

    ಬಿಗ್‍ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದೆ. ಒಂಟಿಮನೆಯ ಸ್ಪರ್ಧಿಗಳು ಗೆಲ್ಲಬೇಕು ಎಂದು ಏನೆಲ್ಲಾ ಕಸರತ್ತುಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಆದರೆ ಈ ಮಧ್ಯೆ ಸ್ಪರ್ಧಿಗಳಿಗೆ ನಾವು ಹೊರಗಡೆ ತುಂಬಾ ಟ್ರೋಲ್ ಆಗುತ್ತಿದ್ದೇವೆ ಎನ್ನುವ ಭಯ ಶುರುವಾಗಿದೆ.

    ಬಿಗ್‍ಬಾಸ್ ಮನೆಯಲ್ಲಿ ಪ್ರತಿ ಬಾರಿ ನಾನು ಟಾರ್ಗೆಟ್ ಆಗ್ತಿದ್ದೀನಿ, ನನ್ನನ್ನು ಸುದೀಪ್ ಸರ್ ಸ್ತ್ರೀ ಪೀಡಕ, ಸ್ತ್ರೀ ಕಂಟಕ ಅಂತ ಬಿಂಬಿಸುತ್ತಿದ್ದಾರೆ ಎಂದೆಲ್ಲ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಈಗ ಹೊಸದೊಂದು ಆತಂಕ ಶುರುವಾಗಿದೆ. ಈ ಕುರಿತಾಗಿ ಅರವಿಂದ್ ಬಳಿ ಹೇಳಿಕೊಂಡಿದ್ದಾರೆ. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಮನೆಯಿಂದ ಹೊರಗೆ ಹೋಗುವಾಗ, ಚಕ್ರವರ್ತಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಇದರಿಂದ ಕೋಪಗೊಂಡ ಚಕ್ರವರ್ತಿ, ಅಶ್ಲೀಲವಾಗಿ ಸನ್ನೆ ಮಾಡಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಆಗಿತ್ತು. ಸುದೀಪ್ ಕೂಡ ಚಕ್ರವರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಈ ಕುರಿತಾಗಿ ಚಕ್ರವರ್ತಿಗೆ ತಲೆನೋವು ಶುರುವಾಗಿದೆ.  

    ಫುಲ್ ಟ್ರೋಲ್ ಆಗಿರತ್ತೆ ಅಲ್ವಾ ಅದು ಎಂದು ಚಕ್ರವರ್ತಿ, ಅರವಿಂದ್ ಬಳಿ ಕೇಳಿದ್ದಾರೆ. ಮುಂಚೆ ಆಗಿದ್ದರೆ ನನಗೆ ಗೊತ್ತಾಗುತ್ತಿರಲಿಲ್ಲ. ಆದರೆ, 43 ದಿನಗಳಲ್ಲಿ ನೋಡಿದ್ದರ ಪ್ರಕಾರ, ಖಂಡಿತಾ ಅದು ಟ್ರೋಲ್ ಆಗಿರುತ್ತದೆ. ಖಂಡಿತಾ ನಿಮ್ಮನ್ನು ಮಾತ್ರ ಅಲ್ಲ, ನನ್ನನ್ನು ಚಚ್ಚಿರುತ್ತಾರೆ ಎಂದು ಅರವಿಂದ್ ಹೇಳಿದ್ದಾರೆ. ಚಚ್ಚಿರುತ್ತಾರೆ ಹಾಕ್ಕೊಂಡು ನನ್ನ, ಆದರೆ ನಿನ್ನ ಯಾಕೆ ಟ್ರೋಲ್ ಮಾಡುತ್ತಾರೆ ಎಂದು ಚಕ್ರವರ್ತಿ ಅರವಿಂದ್‍ಗೆ ಪ್ರಶ್ನೆ ಮಾಡಿದ್ದಾರೆ. ಇಲ್ಲ ನಾನು ಆಟವನ್ನು ಸರಿಯಾಗಿ ಆಡುತ್ತಿಲ್ಲ ಎಂದು ಜನ ನನ್ನ ಟ್ರೋಲ್ ಮಾಡಿರುತ್ತಾರೆ ಎಂದು ಊಹಿಸಿದ್ದಾರೆ. ಇದನ್ನೂ ಓದಿ: ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

    ಅದೇ ನಾನು ಹೇಳಬೇಕು ಅಂದುಕೊಂಡೆ, ಪ್ರತಿವಾರವೂ ನನಗೊಂದು ಸೂಚನೆ ಬರ್ತಾ ಇದೆಯಲ್ಲಾ, ಏನಿದು? ಈ ವಾರ ನಾನು ಏನಾದ್ರೂ ಉಳಿದಕೊಂಡರೆ, ಹೆವಿ ಟಾಸ್ಕ್ ಆಡಿಬಿಡ್ತೀನಿ. ನನ್ನ ವ್ಯಕ್ತಿತ್ವ ಇರೋ ಥರ ಇದ್ದುಬಿಡ್ತೀನಿ. ಒಂದೇ ಪದ ಒಂದು ಹೆಚ್ಚಿಗೆ ಹೇಳೋದಿಲ್ಲ ಈ ಸಲ ಎಂದು ಚಕ್ರವರ್ತಿ ದೃಢ ನಿರ್ಧಾರ ಮಾಡಿದ್ದಾರೆ. ಪ್ರತಿ ವಾರ ತಪ್ಪು ಆಗ್ತಾ ಇದೆ ಸರ್ ಅದಕ್ಕೆ ಕ್ಲಾಸ್ ತಗೋತಾ ಇದ್ದಾರೆ ಎಂದು ಅರವಿಂದ್ ಹೇಳಿದ್ದಾರೆ. ಇದನ್ನೂ ಓದಿ:  ನಾನು ಮನುಷ್ಯಳೇ ಅಲ್ಲವಾ ಸರ್? – ಸುದೀಪ್‍ಗೆ ರೇಷ್ಮೆ ಅಕ್ಕ ಪ್ರಶ್ನೆ

    ಹೌದು ಬಿಗ್‍ಬಾಸ್ ಮನೆಯಲ್ಲಿ ನಡೆಯುವ ಎಷ್ಟೋ ವಿಚಾರಗಳು ಹೊರಗಿನ ಪ್ರಪಂಚದಲ್ಲಿ ಟ್ರೋಲ್ ಆಗುತ್ತಿವೆ. ಜನರು ಒಳ್ಳೆಯ ವಿಚಾರಗಳ ಕುರಿತಾಗಿ ಮಾತನಾಡುವುದ್ದಕ್ಕಿಂತ ಸ್ಪರ್ಧಿಗಿಳಿಂದ ಸಣ್ಣ ತಪ್ಪಾದರೂ ಆ ಕುರಿತಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಸ್ಪರ್ಧಿಗಳು ತಾವು ಮಾಡಿರುವ ತಪ್ಪುಗಳನ್ನು ನೆನಪು ಮಾಡಿಕೊಂಡು ಟ್ರೋಲ್ ಆಗುತ್ತಿರಬಹುದು ಎಂದಿದ್ದಾರೆ.