Tag: ಚಂದನ್ ಶೆಟ್ಟಿ

  • ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬಿಗ್‍ಬಾಸ್ ವಿಜಯ ಪತಾಕೆ ಹಾರಿಸಿದ ಚಂದನ್ ಶೆಟ್ಟಿಗೆ ಅಮ್ಮನಿಂದ ಮುದ್ದಾದ ಉಡುಗೊರೆ

    ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆ ಹಾಗೂ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

    ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್‍ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದಿದ್ದ ಚಂದನ್ ಶೆಟ್ಟಿಗೆ, ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ. ಇದೀಗ ಬಿಗ್ ಬಾಸ್ ಗೆದ್ದ ಚಂದನ್ ಗೆ ಅವರ ತಾಯಿ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ಹೊರಬಂದ ಶೃತಿ ಪ್ರಕಾಶ್‍ಗೆ ಕಾದಿತ್ತು ಸರ್ ಪ್ರೈಸ್

    ಚಂದನ್ ಶೆಟ್ಟಿ ಅವರಿಗೆ ಪ್ರಾಣಿ ಹಾಗೂ ಪಕ್ಷಿಗಳೆಂದರೆ ಬಹಳ ಪ್ರೀತಿ. ನಾಯಿ, ಬೆಕ್ಕು, ಪಕ್ಷಿಗಳನ್ನು ಸಾಕಿಕೊಳ್ಳೋಕೆ ಬಹಳ ಇಷ್ಟ ಪಡುತ್ತಾರೆ. ಆದರೆ ಬೆಂಗಳೂರಿಗೆ ಬಂದ ಮೇಲೆ ಅವರು ಪ್ರಾಣಿಗಳನ್ನು ಸಾಕಲು ಸಾಧ್ಯವಾಗಲಿಲ್ಲ. ಇದೀಗ ಅವರ ತಾಯಿ ನಾಯಿಮರಿಯನ್ನು ಉಡುಗೊರೆ ನೀಡುವ ಮೂಲಕ ಚಂದನ್ ಅವರಿಗೆ ಗೆಲುವಿನ ಖುಷಿಯ ಮೇಲೆ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆಯಲ್ಲಿ ಕಣ್ಣೀರಿಟ್ಟ ಕಿಚ್ಚ ಸುದೀಪ್!

    ರ್ಶಿಜ್ಲಾ ಬ್ರೀಡ್ ಎಂಬ ಚೈನಾ ನಾಯಿಮರಿಯನ್ನು ಚಂದನ್ ಅವರ ತಾಯಿ ಉಡುಗೊರೆ ನೀಡಿದ್ದಾರೆ. ಈ ನಾಯಿಮರಿಗೆ `ಆಪಲ್’ ಎಂದು ಹೆಸರಿಡಬೇಕು ಎಂದು ಚಂದನ್ ಅವರ ಆಸೆಯಾಗಿತ್ತು. ಚಂದನ್ ಅವರ ಆಸೆಯ ಪ್ರಕಾರವೇ ಆ ನಾಯಿಮರಿಗೆ `ಆಪಲ್’ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಮೂಲತಃ ಹಾಸನದ ಶಾಂತಿಗ್ರಾಮದ ಚಂದನ್ ಶೆಟ್ಟಿ ಅವರ ತಂದೆ ಪರಮೇಶ್ ಹಾಗೂ ತಾಯಿ ಪ್ರೇಮಾ. ಚಂದನ್ ಶೆಟ್ಟಿಗೆ ಓರ್ವ ತಮ್ಮನಿದ್ದಾನೆ. ಚಂದನ್ ಸಾಹಿತ್ಯ ಬರಹಗಾರನಾಗಿದ್ದು, ಅಲೆಮಾರಿ ಚಿತ್ರದಲ್ಲಿ ಸಹ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ವರದನಾಯಕ, ಚಕ್ರವ್ಯೂಹ ಹಾಗೂ ಭಜರಂಗಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಚಿತ್ರಕ್ಕೆ ಸಾಹಿತ್ಯ ಬರೆದು, ಹಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಟಕಿಲಾ ಹಾಡು ಯೂಟ್ಯೂಬ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು.

  • ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲೂ ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಗಲಾಟೆ ಸದ್ದು

    ಬೆಂಗಳೂರು: ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳಿಂದ ಶುರವಾದ ಬಿಗ್‍ಬಾಸ್ 5ನೇ ಆವೃತ್ತಿ ಹೆಚ್ಚು ಕಡಿಮೆ ಜಗಳದಿಂದಲೇ ಸುದ್ದಿ ಆಗಿತ್ತು. ಲಿವಿಂಗ್ ಏರಿಯಾ-ಗಾರ್ಡನ್ ಏರಿಯಾ ಅಂಥ ಸೆಲೆಬ್ರಿಟಿ ಹಾಗೂ ಕಾಮನ್‍ಮ್ಯಾನ್ ಸ್ಪರ್ಧಿಗಳು ಗುಂಪು ಮಾಡಿಕೊಂಡು ಗೇಮ್ ಆಡಿದ್ರು ಅಂತ ಮಾತು ಕೇಳಿ ಬರುತ್ತಿತ್ತು.

    ಬಿಗ್ ಬಾಸ್ ಮನೆಯ ಈ ಎರಡು ಗುಂಪುಗಳ ಬಗ್ಗೆ ಯಾರು ಉತ್ತರಿಸಿರಲಿಲ್ಲ. ಈ ಸಣ್ಣ ಇರಿಸು ಮುರುಸು ಫಿನಾಲೆ ವೇದಿಕೆಯಲ್ಲಿಯೂ ಕಂಡು ಬಂತು. ಅಂತಿಮ ಸ್ಪರ್ಧಿಗಳಾಗಿ ಚಂದನ್ ಶೆಟ್ಟಿ ಮತ್ತು ದಿವಾಕರ್ ಇಬ್ಬರು ವೇದಿಕೆಯ ಮೇಲೆ ಬರುತ್ತಿದ್ದಂತೆ ಜನರೆಲ್ಲಾ ಚಪ್ಪಾಳೆಗಳ ಮೂಲಕ ಸ್ವಾಗತಿಸಿಕೊಂಡರು. ಈ ವೇಳೆ ಪಕ್ಕದ ಗ್ಯಾಲರಿಯಲ್ಲಿ ಕುಳಿತಿದ್ದ ಜಗನ್ ಕಾಮನ್‍ಮ್ಯಾನ್ ಮತ್ತು ಸೆಲಿಬ್ರಿಟಿಗೂ ಯಾವುದೇ ವ್ಯತ್ಯಾಸವಿಲ್ಲ. ಚಂದನ್ ಬಂದಾಗ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಬಂತೋ, ದಿವಾಕರ್ ಬಂದಾಗಲೂ ಅದೇ ರೀತಿಯ ಪ್ರತಿಕ್ರಿಯೆ ಕಂಡು ಬಂತು ಅಂತಾ ಅಂದ್ರು.

    ನಾವು ಕೆಲವರು ಯಾವಗಲೂ ಗಾರ್ಡನ್ ಏರಿಯಾದಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡುತ್ತಿದ್ದೇವೆ. ಹೀಗಾಗಿ ನೋಡುಗರಿಗೆ ನಮ್ಮನ್ನು ಗುರುತಿಸಲು ಸಹಾಯ ಆಗಲಿ ಎಂಬ ದೃಷ್ಠಿಯಿಂದ ಗಾರ್ಡನ್ ಏರಿಯಾ ಎಂಬ ಕೋಡ್ ವರ್ಡ್ ಬಳಸಲಾಗುತ್ತಿತ್ತು. ಗಾರ್ಡನ್ ಏರಿಯಾ ಎಂಬ ಪದವನ್ನು ನಮ್ಮ ಸ್ನೇಹಿತರ ಟೀಂ ಅಂತಾ ನಾನು ಹೇಳುತ್ತಿದ್ದೆ ಎಂದು ಜಗನ್ ಪ್ರಶ್ನೆಗೆ ರಿಯಾಜ್ ಭಾಷಾ ಉತ್ತರಿಸಿದರು.

    ನಾವು ಎಲ್ಲ ಹೋದ್ರೂ ಸೆಲಿಬ್ರಿಟಿಗಳು ಕಾಮನ್ ಮ್ಯಾನ್ ಗಳ ಮೇಲೆ ದಬ್ಬಾಳಿಕೆ ಮಾಡ್ತಾಯಿದ್ದಾರೆ ಎಂಬ ಮಾತುಗಳು ಎಲ್ಲಡೆ ಕೇಳಿ ಬರುತ್ತಿವೆ. ಇಂದು ರಿಯಾಜ್ ಗಾರ್ಡನ್ ಏರಿಯಾ ಎಂಬ ಪದವನ್ನು ಬಳುಸುತ್ತಿರುವುದರಿಂದ ನೋಡುಗರಿಗೆ ಉತ್ತರ ಸಿಕ್ಕದೆ ಅಂತಾ ತಿಳಿದುಕೊಳ್ಳುತ್ತೇನೆ ಎಂದು ಸಿಹಿ ಕಹಿ ಚಂದ್ರು ಹೇಳಿದರು.

    ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಮಧ್ಯೆ ಉಂಟಾಗಿದ್ದ ಎಲ್ಲ ಅಸಮಧಾನಗಳಿಗೂ ಎಲ್ಲರೂ ಸ್ಪಷ್ಟಣೆ ನೀಡುವ ಎಲ್ಲದಕ್ಕೂ ತೆರೆ ಎಳೆದರು. ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‍ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದರು.

    ಬಿಗ್‍ಬಾಸ್ ಮನೆಯೊಳಗೆ ಪ್ರವೇಶ ಪಡೆದವರು: ಜಯ ಶ್ರೀನಿವಾಸನ್ (ಸಂಖ್ಯಾ ಜ್ಯೋತಿಷಿ), ಮೇಘಾ, ದಯಾಳ್ ಪದ್ಮನಾಭ (ನಿರ್ದೇಶಕ) ಸಿಹಿ ಕಹಿ ಚಂದ್ರು (ಹಿರಿಯ ನಟ), ಶ್ರುತಿ, ಅನುಪಮಾ ಗೌಡ (ನಟಿ), ರಿಯಾಜ್ ಭಾಷಾ, ನಿವೇದಿತಾ ಗೌಡ, ಸಮೀರ್ ಆಚಾರ್ಯ (ಜ್ಯೋತಿಷಿ), ಕಾರ್ತಿಕ್ ಜಯರಾಮ್ (ನಟ), ಆಶಿತಾ ಚಂದ್ರಪ್ಪ, ದೀವಾಕರ್ (ಸೆಲ್ಸ್‍ಮನ್ ), ತೇಜಸ್ವಿನಿ ಪ್ರಕಾಶ್ (ನಟಿ), ಚಂದನ್ ಶೆಟ್ಟಿ (ಹಾಡುಗಾರ), ಸುಮಾ , ಕೃಷಿ, ಜಗನ್ (ನಟ).

    ಫೈನಲ್ ವೇಳೆಗೆ ಚಂದನ್‍ಗೆ ಕಾಂಪಿಟೇಟರ್ ಆಗಿದ್ದ ಆಪ್ತ ಸ್ನೇಹಿತ ದಿವಾಕರ್ ಅವರಿಗೆ ರನ್ನರ್ ಅಪ್ ಪಟ್ಟ ದಕ್ಕಿತು. ನೂರೈದು ದಿನಗಳ ಕಾಲ ಭರ್ಜರಿ ಮನರಂಜನೆ ನೀಡಿದ್ದ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಗೆಲುವಿನ ಮಾಲೆಯನ್ನು ಧರಿಸಿದ್ದಾರೆ.

  • ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ – ಕಾಮನ್‍ಮ್ಯಾನ್ ದಿವಾಕರ್ ರನ್ನರ್ ಅಪ್

    ಚಂದನ್ ಶೆಟ್ಟಿಗೆ ಬಿಗ್‍ಬಾಸ್ ಸೀಸನ್ 5 ಕಿರೀಟ – ಕಾಮನ್‍ಮ್ಯಾನ್ ದಿವಾಕರ್ ರನ್ನರ್ ಅಪ್

    ಬೆಂಗಳೂರು: ಬಹು ನಿರೀಕ್ಷಿತ ಬಿಗ್‍ಬಾಸ್ ಸೀಸನ್ ಐದರ ಆಟ ಮುಗಿದಿದೆ. ಎಲ್ಲರ ನಿರೀಕ್ಷೆಯಂತೆ ಹಾರೈಕೆಯಂತೆ ಭರ್ಜರಿ ಮನರಂಜನೆ ನೀಡ್ತಾ ಬಂದಿದ್ದ ಚಂದನ್ ಶೆಟ್ಟಿ ಗೆಲುವಿನ ಪತಾಕೆ ಹಾರಿಸಿದ್ದಾರೆ.

    ಕನ್ನಡ ನಾಡಿನಲ್ಲಿ ‘ಮೂರೇ ಮೂರು ಪೆಗ್ಗು’ ಹಾಡಿನ ಮೂಲಕ ಫೀನಿಕ್ಸ್ ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ವಿನ್ ಆದ್ರೆ ಬಂದ ಹಣದಲ್ಲಿ ಅಪ್ಪ ಅಮ್ಮನಿಗೊಂದು ಮನೆ ಕೊಡಿಸ್ತೀನಿ ಎಂದು ನುಡಿದ್ದ ಚಂದನ್ ಶೆಟ್ಟಿಗೆ ಹೆತ್ತವರ ಆಶೀರ್ವಾದದಂತೆ 50 ಲಕ್ಷ ರೂಪಾಯಿ ದಕ್ಕಿದೆ.

    ಫೈನಲ್ ವೇಳೆಗೆ ಚಂದನ್‍ಗೆ ಕಾಂಪಿಟೇಟರ್ ಆಗಿದ್ದ ಆಪ್ತ ಸ್ನೇಹಿತ ದಿವಾಕರ್ ಅವರಿಗೆ ರನ್ನರ್ ಅಪ್ ಪಟ್ಟ ದಕ್ಕಿತು. ನೂರೈದು ದಿನಗಳ ಕಾಲ ಭರ್ಜರಿ ಮನರಂಜನೆ ನೀಡಿದ್ದ ಕನ್ನಡ ರ್ಯಾಪರ್ ಚಂದನ್‍ಶೆಟ್ಟಿ ಗೆಲುವಿನ ಮಾಲೆಯನ್ನು ಧರಿಸಿದ್ದಾರೆ. ಒಟ್ಟಾಗಿ ಕೊನೆಯ ವಾರದಲ್ಲಿ ಚಂದನ್, ದಿವಾಕರ್, ಜೆಕೆ, ಶೃತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಮನೆಯಲ್ಲಿ ಉಳಿದುಕೊಂಡಿದ್ದರು. ಶನಿವಾರ ದೊಡ್ಡ ಮನೆಯಿಂದ ಶೃತಿ ಪ್ರಕಾಶ್ ಮತ್ತು ನಿವೇದಿತಾ ಗೌಡ ಹೊರ ಬಂದಿದ್ದರು. ಅಂತಿಮ ಘಟ್ಟದಲ್ಲಿ ಕಾಮನ್ ಮ್ಯಾನ್‍ಗೂ ಸೆಲಬ್ರಿಟಿಗೂ ನೇರಾ ನೇರ ಸ್ಪರ್ಧೆ ಏರ್ಪಟ್ಟಿತ್ತು.