Tag: ಚಂದನವನ

  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ದರ್ಶನ್-ರಕ್ಷಿತ್ ಸಿನಿಮಾ ಮಧ್ಯೆ ಪೈಪೋಟಿ

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ದರ್ಶನ್-ರಕ್ಷಿತ್ ಸಿನಿಮಾ ಮಧ್ಯೆ ಪೈಪೋಟಿ

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ (Chandanavan, Film, Critics, Award)  5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು ದರ್ಶನ್ ನಟನೆಯ ಕಾಟೇರ ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ಕಾಟೇರ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ಸಪ್ತಸಾಗರದಾಚೆ ಎಲ್ಲೋ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

    ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ. ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನೂ ಒಬ್ಬ ಪತ್ರಕರ್ತನಾಗಿ ಅಕಾಡಮಿ ಮತ್ತು ವಿಮರ್ಶಕರ ಪ್ರಶಸ್ತಿಗಳು ನಿಷ್ಪಕ್ಷಪಾತವಾಗಿ ಮತ್ತು ವಿಶ್ವಾಸ ಮೂಡಿಸುವಂತಹ ಆಯ್ಕೆಗಳು ಆಗಿವೆ. ಈ ಕುರಿತು ನನಗೆ ಹೆಮ್ಮೆ ಅನಿಸುತ್ತದೆ. ಕನ್ನಡದ ಅತ್ಯುತ್ತಮ ಮನರಂಜನೆಯನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲ್ಯಾಘಿಸಿದರು.

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ, ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದರು ನಟಿ ಅಮೂಲ್ಯ.  ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜೊತೆ ಪ್ರಶಸ್ತಿ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದ್ದು ಗೊತ್ತೇ ಇದೆ. ಈ ಬಾರಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಜೊತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ನಮ್ಮ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಮಾತನಾಡಿದ್ದಾರೆ.

    ಅಂಗಾಂಗ ದಾನ ಅಭಿಯಾನಕ್ಕೆ ಅಕಾಡಮಿ ಜೊತೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್, ‘ಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆ ಎಂದರು.

    ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆ ಎಂದರು. ಪ್ರತಿ ವರ್ಷದಂತೆ ಈ ಬಾರಿಯೂ ಅಚ್ಚರಿ ಹೆಸರುಗಳು ನಾಮ ನಿರ್ದೇಶನ ಪಟ್ಟಿಯಲ್ಲಿದ್ದು, ಜನವರಿ 28 ರವಿವಾರದಂದು ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

    ಅತ್ಯುತ್ತಮ ಚೊಚ್ಚಲ ನಿರ್ಮಾಣ ~ Dr ಪುನೀತ್ ರಾಜಕುಮಾರ್ ಪ್ರಶಸ್ತಿ

    ೧. ಸ್ವಾತಿ ಮುತ್ತಿನ ಮಳೆ ಹನಿಯೇ (ರಮ್ಯ – ಆಪಲ್ ಬಾಕ್ಸ್ ಸ್ಟುಡಿಯೋಸ್)

    ೨. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ (ವರುಣ್ ಸ್ಟುಡಿಯೋಸ್)

    ೩. ಡೇರ್‌ಡೆವಿಲ್ ಮುಸ್ತಫಾ (ಸಿನೆಮಾ  ಮರ)

    ೪. ಸೌತ್ ಇಂಡಿಯನ್ ಹೀರೋ (ಶಿಲ್ಪಾ ಎಲ್.ಎಸ್)

    ೫. ಮಂಡಲ (ಅಜಯ್ ಸರ್ಪೆಷ್ಕರ್)

    ಅತ್ಯುತ್ತಮ ಚೊಚ್ಚಲ ನಟಿ ~ ತ್ರಿಪುರಾಂಬ ಅವಾರ್ಡ್

    ೧. ಆರಾಧನಾ ರಾಮ್ (ಕಾಟೇರ)

    ೨. ನಿರೀಕ್ಷಾ ರಾವ್ (ರಾಜಯೋಗ)

    ೩. ಅಮೃತಾ ಪ್ರೇಮ್ (ಟಗರು ಪಲ್ಯ)

    ೪. ಚೈತ್ರ ಹೆಚ್.ಜಿ (ಮಾವು ಬೇವು)

    ೫. ಪ್ರೀತಿಕ ದೇಶಪಾಂಡೆ (ಪೆಂಟಗನ್)

    ಅತ್ಯುತ್ತಮ ಚೊಚ್ಚಲ ನಟ ~ ಸಂಚಾರಿ ವಿಜಯ್ ಪ್ರಶಸ್ತಿ

    ೧. ಶಿಶಿರ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)

    ೨. ರಾಜೇಶ್ ಧ್ರುವ ( ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ)

    ೩. ಶಿವಣ್ಣ ಬೀರುಹುಂಡಿ (ದೊಡ್ಡಹಟ್ಟಿ ಬೋರೇಗೌಡ)

    ೪. ಕಿರಣ್ ನಾರಾಯಣ್ (ಸ್ನೇಹಶ್ರೀ)

    ೫. ಸಾರ್ಥಕ್ (ಸೌತ್ ಇಂಡಿಯನ್ ಹೀರೋ)

    ಅತ್ಯುತ್ತಮ ಚೊಚ್ಚಲ ಬರಹಗಾರ ~ ಚಿ ಉದಯಶಂಕರ್ ಪ್ರಶಸ್ತಿ

    ೧. ರಾಮೇನಹಳ್ಳೀ ಜಗನ್ನಾಥ್ (ಹೊಂದಿಸಿ ಬರೆಯಿರಿ)

    ೨.  ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

    ೩. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

    ೪. ಉಮೇಶ್ ಕೃಪಾ (ಟಗರು ಪಲ್ಯ)

    ೫. ಅಜಯ್ ಸರ್ಪೆಶ್ಕರ್ (ಮಂಡಲ)

    ಅತ್ಯುತ್ತಮ ಚೊಚ್ಚಲ ನಿರ್ದೇಶನ ಶಂಕರ್ ನಾಗ್ ಅವಾರ್ಡ್

    ೧. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

    ೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

    ೩. ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫಾ)

    ೪. ದೇವೇಂದ್ರ ಬಡಿಗೇರ್ (ರುದ್ರಿ)

    ೫. ಉಮೇಶ್ ಕೃಪಾ (ಟಗರು ಪಲ್ಯ)

    ಅತ್ಯುತ್ತಮ ವಿಎಫ್‍್ಎಕ್ಸ್

    1. ಸಪ್ತಸಾಗರದಾಚೆ ಎಲ್ಲೋ (ಎಮತ್ತುಬಿ) ಪಿಂಕ್ ಸ್ಟುಡಿಯೋಸ್ – ರಾಹುಲ್ ವಿ. ಗೋಪಾಲಕೃಷ್ಣ
    1. ಕಬ್ಜ – ಯೂನಿಫೈ ಮೀಡಿಯಾ
    1. ಗುರುದೇವ್ ಹೊಯ್ಸಳ – ಡಿಜಿಟಲ್ ಟರ್ಬೋ ಮೀಡಿಯಾ, ಖುಷ್
    1. ಕಾಟೇರ – ಗಗನ್ ಅಜೈ
    1. ಘೋಸ್ಟ್ – ಆಸೋ ಸ್ಟುಡಿಯೋಸ್ (ಟೆಹರನ್), ಮೊಹಮ್ಮದ್ ಅಬ್ಡಿ

    ಅತ್ಯುತ್ತಮ ಕಲಾ ನಿರ್ದೇಶನ

    1. ಕಬ್ಜ, ಶಿವಕುಮಾರ್ ಜೆ
    1. ಸಪ್ತ ಸಾಗರದಾಚೆ ಎಲ್ಲೋ (ಎ ಮತ್ತು ಬಿ) ಉಲ್ಲಾಸ್ ಹೈದರ್)
    1. ಕಾಟೇರ – ಗುಣ
    1. ಘೋಸ್ಟ್ – ಮೋಹನ್ ಬಿ ಕೆರೆ
    1. ಕೈವ – ಧರಣಿ ಗಂಗೆಪುತ್ರ

    ಅತ್ಯುತ್ತಮ ಸಾಹಸ ನಿರ್ದೇಶನ

    1. ಸಪ್ತ ಸಾಗರದಾಚೆ ಎಲ್ಲೋ (ಬಿಸೈಡ್) ಚೇತನ್ ಡಿಸೋಜಾ, ವಿಕ್ರಮ್ ಮೋರ್
    1. ಗುರುದೇವ್ ಹೊಯ್ಸಳ – ದಿಲೀಪ್ ಸುಬ್ರಮಣ್ಯ, ಅರ್ಜುನ್ ರಾಜ್
    1. ಕಬ್ಜ – ರವಿ ವರ್ಮಾ, ವಿಕ್ರಮ್ ಮೋರ್
    1. ಕೈವ – ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ
    1. ಕಾಟೇರ –ರಾಮ್ ಲಕ್ಷ್ಮಣ

    ಅತ್ಯುತ್ತಮ ಛಾಯಾಗ್ರಹಣ

    1. ಸಪ್ತ ಸಾಗರದಾಚೆ ಎಲ್ಲೋ ( ಸೈಡ್ ಬಿ) ಅದ್ವೈತ ಗುರುಮೂರ್ತಿ
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಅರವಿಂದ್ ಕಶ್ಯಪ್
    1. ಸ್ವಾತಿ ಮುತ್ತಿನ ಮಳೆ ಹನಿಯೇ – ಪ್ರವೀಣ್ ಶ್ರೀಯಾನ್
    1. ಘೋಸ್ಟ್ _ ಮಹೇಂದ್ರ ಸಿಂಹ
    1. ಕಾಟೇರ – ಸುಧಾಕರ್ ಎಸ್. ರಾಜ್

     ಅತ್ಯುತ್ತಮ ಸಂಕಲನ

    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಸುರೇಶ್ ಎಮ್.
    1. ಘೋಸ್ಟ್ – ದೀಪು ಎಸ್ ಕುಮಾರ್
    1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ್
    1. ಕಾಟೇರ – ಕೆ.ಎಂ. ಪ್ರಕಾಶ್
    1. ಕೈವ – ಕೆ.ಎಂ. ಪ್ರಕಾಶ್

    ಅತ್ಯುತ್ತಮ ನೃತ್ಯ ನಿರ್ದೇಶನ

    1. ಪುಷ್ಪವತಿ – ಕ್ರಾಂತಿ – ಗಣೇಶ್
    1. ಪಸಂದಾಗವ್ಳೆ – ಕಾಟೇರ – ಭೂಷಣ್
    1. ಬ್ಯಾಡ್ ಮ್ಯಾನರ್ಸ್ – ಬ್ಯಾಡ್ ಮ್ಯಾನರ್ಸ್ – ಬಿ. ಧನಂಜಯ್
    1. ನೈಂಟಿ ಹಾಕು ಕಿಟ್ಟಪ್ಪ – ಕೌಸಲ್ಯ ಸುಪ್ರಜಾ ರಾಮ – ಕಲೈ
    1. ಚುಮು ಚುಮು – ಕಬ್ಜ- ಜಾನಿ ಮಾಸ್ಟರ್

    ಅತ್ಯುತ್ತಮ ಚಿತ್ರ ಸಾಹಿತ್ಯ

    1. ಟಗರು ಪಲ್ಯ – ಸಂಬಂಜ ಅಂದ್ರೆ – ಡಾಲಿ ಧನಂಜಯ್
    1. ಸಪ್ತ ಸಾಗರದಾಚೆ ಎಲ್ಲೋ – ನದಿಯೇ – ಧನಂಜಯ್ ರಂಜನ್
    1. ಕೌಸಲ್ಯ ಸುಪ್ರಜಾ ರಾಮ – ಪ್ರೀತಿಸುವೆ – ಜಯಂತ್ ಕಾಯ್ಕಿಣಿ
    1. ರಾಘವೇಂದ್ರ ಸ್ಟೋರ್ಸ್ – ಗಾಳಿಗೆ ಗಂಧ – ಗೌಸ್ ಪೀರ್
    1. ಸ್ವಾತಿ ಮುತ್ತಿನ ಮಳೆ ಹನಿಯೇ – ಮೆಲ್ಲಗೆ – ಪೃಥ್ವಿ

    ಅತ್ಯುತ್ತಮ ಹಿನ್ನೆಲೆ ಸಂಗೀತ

    1. ಘೋಸ್ಟ್ – ಅರ್ಜುನ್ ಜನ್ಯ
    1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
    1. ಕಾಟೇರ – ವಿ. ಹರಿಕೃಷ್ಣ
    1. ವಿರಾಟಪುರದ ವಿರಾಟ – ಕದ್ರಿ ಮಣಿಕಾಂತ್
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಬಿ ಅಜನೀಶ್ ಲೋಕನಾಥ್

    ಅತ್ಯುತ್ತಮ ಹಿನ್ನೆಲೆ ಗಾಯಕಿ

    1. ಕಾಯೋಶಿವ ಕಾಪಾಡೋ ಶಿವ – ಪೆಂಟಾಗನ್ – ಸಂಗೀತಾ ಕಟ್ಟಿ
    1. ಕೌಸಲ್ಯ ಸುಪ್ರಜಾ ರಾಮ – 90 ಹಾಕು ಕಿಟ್ಟಪ್ಪ – ಐಶ್ವರ್ಯ ರಂಗರಾಜನ್
    1. ಪಸಂದಾಗವ್ನೆ – ಕಾಟೇರ – ಮಂಗ್ಲಿ
    2. ಚುಮು ಚುಮು ಚಳಿ – ಕಬ್ಜ- ಐರಾ ಉಡುಪಿ
    1. ಮೆಲ್ಲಗೆ – ಸ್ವಾತಿ ಮುತ್ತಿನ ಮಳೆ ಹನಿಯೇ – ಮಾಧುರಿ ಶೇಷಾದ್ರಿ

    ಅತ್ಯುತ್ತಮ ಹಿನ್ನೆಲೆ ಗಾಯಕ

    1. ನೋಡಲಾಗದೆ – ವೀರಾಟಪುರ ವಿರಾಗಿ – ರವೀಂದ್ರ ಸೊರಗಾಂವಿ
    1. ಬೊಂಬೆ ಬೊಂಬೆ – ಕ್ರಾಂತಿ – ಸೋನು ನಿಗಂ
    1. ಸಿಂಗಲ್ ಸುಂದರಿ – ರಾಘವೇಂದ್ರ ಸ್ಟೋರ್ಸ್ – ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು
    1. ನೊಂದುಕೋಬೇಡ – ಟಗರು ಪಲ್ಯ- ವಾಸುಕಿ ವೈಭವ್
    1. ಸಪ್ತ ಸಾಗರದಾಚೆ ಎಲ್ಲೋ – ಟೈಟಲ್ ಟ್ರ್ಯಾಕ್ – ಸಪ್ತ ಸಾಗರದಾಚೆ ಎಲ್ಲೋ- ಕಪೀಲ್‍ ಕಪೀಲನ್

    ಅತ್ಯುತ್ತಮ ಸಂಗೀತ ನಿರ್ದೇಶನ

    1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
    1. ಕೌಸಲ್ಯ ಸುಪ್ರಜಾ ರಾಮ – ಅರ್ಜುನ್ ಜನ್ಯ
    1. ಟಗರು ಪಲ್ಯ – ವಾಸುಕಿ ವೈಭವ್
    1. ಕ್ರಾಂತಿ – ವಿ. ಹರಿಕೃಷ್ಣ
    1. ಕೈವ – ಅಜನೀಶ್ ಲೋಕನಾಥ್

    ಅತ್ಯುತ್ತಮ ಬಾಲ ಕಲಾವಿದ/ಕಲಾವಿದೆ

    1. ಅಂಬುಜಾ – ಆಕಾಂಕ್ಷ
    1. ಶಿವಾಜಿ ಸುರತ್ಕಲ್ 2 – ಆರಾಧ್ಯ
    1. ಗೌಳಿ – ನಮನ
    1. ಟೋಬಿ – ಸ್ನಿಗ್ಧ ಆರ್. ಶೆಟ್ಟಿ
    1. ಓ ನನ್ನ ಚೇತನ – ಪ್ರತೀಕ ಮಂಜುನಾಥ್

    ಅತ್ಯುತ್ತಮ ಪೋಷಕ ನಟಿ

    1. ಹೇಮಾ ದತ್ತ – ತೋತಾಪುರಿ
    1. ಶ್ರುತಿ – ಕಾಟೇರ
    1. ತಾರಾ ಅನುರಾಧ – ಟಗರು ಪಲ್ಯ
    1. ಸುಧಾ ಬೆಳವಾಡಿ – ಕೌಸಲ್ಯ ಸುಪ್ರಜಾ ರಾಮ
    1. ಎಂ.ಡಿ. ಪಲ್ಲವಿ – 19.20.21

    ಅತ್ಯುತ್ತಮ ಪೋಷಕ ನಟ

    1. ಪೂರ್ಣಚಂದ್ರ ಮೈಸೂರು – ಡೇರ್ ಡೆವಿಲ್ ಮುಸ್ತಾಫಾ
    1. ರಂಗಾಯಣ ರಘು – ಟಗರು ಪಲ್ಯ
    1. ರಾಘು ಶಿವಮೊಗ್ಗ – ಕೈವ
    1. ಮಹದೇವ ಹಡಪದ – 19.20.21
    1. ರಮೇಶ್ ಇಂದಿರಾ – ಸಪ್ತ ಸಾಗರದಾಚೆ ಎಲ್ಲೋ

    ಅತ್ಯುತ್ತಮ ನಟಿ

    1. ರುಕ್ಮುಣಿ ವಸಂತ – ಸಪ್ತ ಸಾಗರದಾಚೆ ಎಲ್ಲೋ
    1. ಅಕ್ಷತಾ ಪಾಂಡವಪುರ – ಪಿಂಕಿ ಎಲ್ಲಿ?
    1. ಮಿಲನಾ ನಾಗರಾಜ್ – ಕೌಸಲ್ಯ ಸುಪ್ರಜಾ ರಾಮ
    1. ಸಿರಿ ರವಿಕುಮಾರ್ – ಸ್ವಾತಿ ಮುತ್ತಿನ ಮಳೆ ಹನಿಯೇ
    1. ಮೇಘಾ ಶೆಟ್ಟಿ – ಕೈವ

    ಅತ್ಯುತ್ತಮ ನಟ

    1. ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ
    1. ರಾಜ್ ಬಿ ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ
    1. ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2
    1. ಶೃಂಗ ಬಿ.ವಿ – 19.20.21
    1. ದರ್ಶನ್ – ಕಾಟೇರ

    ಅತ್ಯುತ್ತಮ ಸಂಭಾಷಣೆ

    1. ಕೈವ – ರಘು ನಿಡುವಳ್ಳಿ
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ನಿತಿನ್ ಕೃಷ್ಣಮೂ‍ರ್ತಿ
    1. ಕೌಸಲ್ಯ ಸುಪ್ರಜಾ ರಾಮ – ಯದುನಂದನ್
    1. ಕಾಟೇರ – ಮಾಸ್ತಿ
    1. ಟಗರು ಪಲ್ಯ – ಉಮೇಶ್ ಕೆ ಕೃಪಾ

    ಅತ್ಯುತ್ತಮ ಚಿತ್ರಕಥೆ

    1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ- ಅಭಿಜಿತ್‍ ವೈ.ಆರ್
    1. ಕೈವ – ಜಯತೀರ್ಥ
    1. ಸ್ವಾತಿ ಮುತ್ತಿನ ಮಳೆಹನಿಯೇ – ರಾಜ್ ಬಿ ಶೆಟ್ಟಿ
    1. ದೂರದರ್ಶನ – ಸುಕೇಶ್ ಶೆಟ್ಟಿ
    1. ಕಾಟೇರ – ತರುಣ್ ಕಿಶೋರ್ ಸುಧೀರ್ – ಜಡೇಶ್ ಕೆ. ಹಂಪಿ

    ಅತ್ಯುತ್ತಮ ನಿರ್ದೇಶಕ

    1. ಜಯತೀರ್ಥ – ಕೈವ
    1. ತರುಣ್ ಕಿಶೋರ್ ಸುಧೀರ್ – ಕಾಟೇರ
    1. ನಿತೀನ್ ಕೃಷ್ಣಮೂರ್ತಿ _ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ
    1. ಮಂಸೋರೆ – 19.20.21
    1. ರಾಜ್ ಬಿ ಶೆಟ್ಟಿ – ಸ್ವಾತಿ ಮುತ್ತಿನ ಮಳೆಹನಿಯೇ

    ಅತ್ಯುತ್ತಮ ಚಿತ್ರ

    1. ಸಪ್ತ ಸಾಗರದಾಚೆ ಎಲ್ಲೋ
    1. ಡೇರ್ ಡೆವಿ‍ಲ್ ಮುಸ್ತಾಫಾ
    1. 19.20.21
    1. ಕಾಟೇರ
    1. ಕೌಸಲ್ಯ ಸುಪ್ರಜಾ ರಾಮ
  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್  ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಟ್ಟಿ ಹಾಗೂ 2023ನೇ ವರ್ಷದ ಟ್ರೋಫಿ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

    ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತಾ ಬಂದಿರುವ ಚಂದವನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ, ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ತನ್ನ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಐದೂ ಪ್ರಶಸ್ತಿಗಳಿಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಮಹನಿಯರ ಹೆಸರುಗಳನ್ನು ನಾಮಕರಣ ಮಾಡಿದೆ.

    ಅತ್ಯುತ್ತಮ ನಟ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಟಿ (ಡೆಬ್ಯು) ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಭ ಹೆಸರಿನಲ್ಲಿ, ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹೆಸರಾಂತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ, ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ಚಿ.ಉದಯಶಂಕರ್ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.

    ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತಾ ಭಟ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೋಫಿ ಅನಾವರಣ ಮಾಡಿದರು. ಸಿನಿಮಾ ವಿಮರ್ಶಕರು ನೀಡುವ ದಕ್ಷಿಣ ಭಾರತದ ಮೊದಲ ಪ್ರಶಸ್ತಿ ಇದಾಗಿದ್ದರ ಬಗ್ಗೆ ಕೊಂಡಾಡಿದರು.

    ನಾಮಿನೀಸ್ ಲಿಸ್ಟ್ : 

     

    1. ಅತ್ಯುತ್ತಮ ಚಿತ್ರ

    1. ಕಾಂತಾರ
    2. ಕೆಜಿಎಫ್ 2
    3. ಧರಣಿ ಮಂಡಲ ಮಧ್ಯದೊಳಗೆ
    4. 777 ಚಾರ್ಲಿ
    5. ವ್ಹೀಲ್ ಚೇರ್ ರೋಮಿಯೋ
    1. ಅತ್ಯುತ್ತಮ ನಿರ್ದೇಶಕ
    1. ಪ್ರಶಾಂತ್ ನೀಲ್ (ಕೆಜಿಎಫ್2)
    2. ರಿಷಬ್ ಶೆಟ್ಟಿ (ಕಾಂತಾರ)
    3. ಕಿರಣ್ ರಾಜ್ ( 777 ಚಾರ್ಲಿ)
    4. ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
    5. ಜಡೇಶ್ ಹಂಪಿ (ಗುರು ಶಿಷ್ಯರು)

    3. ಅತ್ಯುತ್ತಮ ಚಿತ್ರಕಥೆ

    1. ಕಾಂತಾರ ( ರಿಷಭ್ ಶೆಟ್ಟಿ)
    2. 777 ಚಾರ್ಲಿ (ಕಿರಣ್ ಕೆ)
    3. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ )
    4. ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್ 2)
    5. ಕೆಜಿಎಫ್ 2 (ಪ್ರಶಾಂತ್ ನೀಲ್)

    4.ಅತ್ಯುತ್ತಮ ಸಂಭಾಷಣೆ

    1. ಗುರು ಶಿಷ್ಯರು (ಮಾಸ್ತಿ)
    2. ವೇದ ( ರಘು ನಿಡುವಳ್ಳಿ)
    3. ವ್ಹೀಲ್ ಚೇರ್ ರೋಮಿಯೋ (ನಟರಾಜ್ ಜಿ)
    4. 777 ಚಾರ್ಲಿ (ಕಿರಣ್ ಕೆ, ರಾಜ್ ಬಿ.ಶೆಟ್ಟಿ, ಅಭುಜಿತ್ ಮಹೇಶ್
    5. ಕಾಂತಾರ (ರಿಷಭ್ ಶೆಟ್ಟಿ)

    5.ಅತ್ಯುತ್ತಮ ನಾಯಕ

    1. ರಿಷಭ್ ಶೆಟ್ಟಿ (ಕಾಂತಾರ)
    2. ಯಶ್ (ಕೆಜಿಎಫ್ 2)
    3. ಪೃಥ್ವಿ ಅಂಬರ್ ( ಶುಗರ್ ಲೆಸ್)
    4. ರಕ್ಷಿತ್ ಶೆಟ್ಟಿ (777 ಚಾರ್ಲಿ)
    5. ವ್ಹೀಲ್ ಚೇರ್ ರೋಮಿಯೋ (ರಾಮ್ ಚೇತನ್)

    6.ಅತ್ಯುತ್ತಮ ನಾಯಕಿ

    1. ಸಪ್ತಮಿ ಗೌಡ (ಕಾಂತಾರ)
    2. ಸೋನಾಲ್ ಮಾಂತೇರೊ (ಬನಾರಸ್)
    3. ಆಶಿಕಾ ರಂಗನಾಥ್ (ರೇಮೊ)
    4. ಶರ್ಮಿಳಾ ಮಾಂಡ್ರೆ (ಗಾಳಿಪಟ 2)
    5. ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ)

    7.ಅತ್ಯುತ್ತಮ ಪೋಷಕ ನಟ

    1. ಕಿಶೋರ್ (ಕಾಂತಾರ)
    2. ದಿಗಂತ್ (ಗಾಳಿಪಟ 2)
    3. ದತ್ತಣ್ಣ (ಗುರು ಶಿಷ್ಯರು)
    4. ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
    5. ಗೋಪಾಲ ಕೃಷ್ಣ ದೇಶಪಾಂಡೆ (10)

    8.ಅತ್ಯುತ್ತಮ ಪೋಷಕ ನಟಿ

    1. ಉಮಾಶ್ರೀ (ವೇದ)
    2. ಹೇಮದತ್ತ (ತೋತಾಪುರಿ)
    3. ಸುಹಾಸಿನಿ (ಮಾನ್ಸೂನ್ ರಾಗ)
    4. ರಚಿತಾ ರಾಮ್ (ಮಾನ್ಸೂನ್ ರಾಗ)
    5. ಸುಧಾರಾಣಿ (ತುರ್ತು ನಿರ್ಗಮನ)

    9.ಅತ್ಯುತ್ತಮ ಬಾಲ ನಟ/ನಟಿ

    1. ಹೃದಯ್ ಶರಣ್ (ಗುರು ಶಿಷ್ಯರು)
    2. ಮಹೇಂದ್ರ ಪ್ರಸಾದ್ (ಜೋರ್ಡನ್)
    3. ಪ್ರಾಣ್ಯ ಎಂ.ರಾವ್ (ಜಮಾಲಿ ಗುಡ್ಡ)
    4. ಶಾರ್ವರಿ (777 ಚಾರ್ಲಿ)
    5. ಏಕಾಂತ್ ಪ್ರೇಮ್ (ಗುರು ಶಿಷ್ಯರು)

    10.ಅತ್ಯುತ್ತಮ ಸಂಗೀತ

    1. ಅಜನೀಶ್ (ಕಾಂತಾರ)
    2. ಅರ್ಜುನ್ ಜನ್ಯ (ಗಾಳಿಪಟ 2)
    3. ನೊಬಿನ್ ಪಾಲ್ (777 ಚಾರ್ಲಿ)
    4. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    5. ಅಜನೀಶ್ (ಬನಾರಸ್)

    11.ಅತ್ಯುತ್ತಮ ಹಿನ್ನೆಲೆ ಸಂಗೀತ

    1. ರವಿ ಬಸ್ರೂರು (ಕೆಜಿಎಫ್ 2)
    2. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    3. ಅಜನೀಶ್ ಲೋಕನಾಥ್ (ವಿಕ್ರಾಂತ್ ರೋಣ)
    4. ಅಜನೀಶ್ (ಕಾಂತಾರ)
    5. ಅರ್ಜುನ್ ಜನ್ಯ (ಪದವಿ ಪೂರ್ವ)

     

    12.ಅತ್ಯುತ್ತಮ ಚಿತ್ರ ಸಾಹಿತ್ಯ

    1. ತ್ರಿಲೋಕ್ ತ್ರಿವಿಕ್ರಮ (ಕರ್ಮದ-ಕಾಂತಾರ)
    2. ಯೋಗರಾಜ ಭಟ್ (ಪ್ರಾಯಶಃ-ಗಾಳಿಪಟ 2)
    3. ಶಶಾಂಕ್ (ಜಗವೇ ನೀನು- ಲವ್ 360)
    4. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
    5. ರಾಘವೇಂದ್ರ ಕಾಮತ್ (ಲವ್ ಮಾಕ್ಟೇಲ್ 2)

    13.ಅತ್ಯುತ್ತಮ ಗಾಯಕ

    1. ವಿಜಯ್ ಪ್ರಕಾಶ್ (ಸಿಂಗಾರ-ಕಾಂತಾರ)
    2. ಸಿದ್ಧ್ ಶ್ರೀರಾಮ್ (ಜಗವೇ-ಲವ್ 360)
    3. ಮೋಹನ್ (ಜುಂಜಪ್ಪ-ವೇದ)
    4. ಸಂಜಿತ್ ಹೆಗಡೆ (ಬೆಳಕಿನ ಕವಿತೆ-ಬನಾರಸ್)
    5. ಸಾಯಿ ವಿಘ್ನೇಷ್ ( ವರಾಹ ರೂಪಂ -ಕಾಂತಾರ)

    14.ಅತ್ಯುತ್ತಮ  ಗಾಯಕಿ

    1. ಅಂಕಿತ ಕುಂದು (ನಾ ನಿನಗೆ ಕಾವಲುಗಾರ-ಜೇಮ್ಸ್)
    2. ಐಶ್ವರ್ಯ ರಂಗರಾಜನ್ (ಮೀಟ್ ಮಾಡೋಣ- ಏಕ್ ಲವ್ ಯಾ)
    3. ಮಂಗ್ಲಿ (ಯಾವನೋ ಇವ್ನು- ವೇದ)
    4. ಅನನ್ಯಾ ಭಟ್ (ಕಾಂತಾರ)
    5. ಸುನಿಧಿ ಚೌಹಾಣ್ (ಯಕ್ಕಾ ಸಕ್ಕಾ-ವಿಕ್ರಾಂತ್ ರೋಣ)

    15.ತಾಂತ್ರಿಕತೆ ವಿಭಾಗ :  ಅತ್ಯುತ್ತಮ  ಛಾಯಾಗ್ರಹಣ

    1. ವಿಲಿಯಮ್ ಡೇವಿಡ್ (ವಿಕ್ರಾಂತ್ ರೋಣ)
    2. ಅರವಿಂದ್ ಕಶ್ಯಪ್ ( ಚಾರ್ಲಿ-ಕಾಂತಾರ)
    3.  ವಿಶ್ವಜಿತ್ ರಾವ್ (ಖಾಸಗಿ ಪುಟಗಳು)
    4. ಕರಮ್ ಚಾವ್ಲ (10)
    5. ಭುವನ್ ಗೌಡ( ಕೆಜಿಎಫ್ 2)

    16.ಅತ್ಯುತ್ತಮ  ಸಂಕಲನ

    1. ಉಜ್ವಲ್ ಕುಲಕರ್ಣಿ (ಕೆಜಿಎಫ್2)
    2. ಪ್ರತೀಕ್ ಶೆಟ್ಟಿ (ಕಾಂತಾರ)
    3. ಶ್ರೀ ಕ್ರೇಜಿಮೈಂಡ್ಸ್ (ಲವ್ ಮಾಕ್ಟೈಲ್2)
    4. ಕೆ ಎಂ ಪ್ರಕಾಶ್ (ಗುರು ಶಿಷ್ಯರು)
    5. ಪ್ರತೀಕ್ ಶೆಟ್ಟಿ ( 777 ಚಾರ್ಲಿ)

    17.ಅತ್ಯುತ್ತಮ  ಕಲಾ ನಿರ್ದೇಶನ

    1. ಶಿವ ಕುಮಾರ್ (ವಿಕ್ರಾಂತ್ ರೋಣ)
    2. ಶಿವಕುಮಾರ್ (ಕೆಜಿಎಫ್ 2)
    3. ರವಿ ಸಂತೆಹಕ್ಲು (ವೇದ )
    4. ಧರಣಿ (ಕಾಂತಾರ)
    5. ಗುಣ (ಮಾನ್ಸೂನ್ ರಾಗ)

    18.ಅತ್ಯುತ್ತಮ  ನೃತ್ಯ ನಿರ್ದೇಶನ

    1. ಜಾನಿ ಮಾಸ್ಟರ್ (ರಾ ರಾ ರಕ್ಕಮ್ಮ)
    2. ಮುರಳಿ – ರಾಮ ರಾಮ (ದಿಲ್ ಪಸಂದ್)
    3. ಇಮ್ರಾನ್ ಸರ್ದಾರಿಯಾ- ರೇಮೋ ಫೇಮೋ (ರೇಮೊ)
    4. ಹರ್ಷ  – ವೇದ (ಜುಂಜಪ್ಪ)
    5. ಮೋಹನ್ – ಮೀಟ್ ಮಾಡೋಣ (ಏಕ್ ಲವ್ ಯಾ)
    1. ಅತ್ಯುತ್ತಮ ಸಾಹಸ

    1. ವಿಕ್ರಮ್ ಮೋರ್ (ಕಾಂತಾರ)

    1. ಅಂಬ್ರ್ಯು (ಕೆಜಿಎಫ್2)
    2. ವಿಜಯ್ (ವಿಕ್ರಾಂತ್ ರೋಣ)
    3. ರವಿ ವರ್ಮ, ಚೇತನ್ ಡಿಸೋಜಾ, ಅರ್ಜುನ್ ರಾಜ್, ವಿಕ್ರಂ ಮೋರೆ (ವೇದ)
    4. ವಿನೋದ್, ಚೇತನ್ ಡಿಸೋಜಾ (ಹೆಡ್ ಬುಷ್)
    1. ಅತ್ಯುತ್ತಮ ವಿಎಫ್ ಎಕ್ಸ್
    1. ವಿಕ್ರಾಂತ್ ರೋಣ –  ನಿರ್ಮಲ್ ಕುಮಾರ್ – ರಡಿಯನ್ಸ್
    2. ಕೆಜಿಎಫ್ 2  – ಉದಯರವಿ ಹೆಗ್ಡೆ – ಯೂನಿಫೈ ಮೀಡಿಯಾ
    3. ತುರ್ತು ನಿರ್ಗಮನ – ನಿತಿನ್ ಆನಂದ್, ಇಂದ್ರಜಿತ್ – ಸೂತ್ರ – ಐ ವಿಎಫ್ ಎಕ್ಸ್
    4. 777 ಚಾರ್ಲಿ – ರಾಹುಲ್ ವಿ – ಪಿನಕಾ ಸ್ಟುಡಿಯೋ
    5. ವೇದ – ಎಲಾಂಗೋ, ಸುಬೀಶ್ – ಜುಪಿಟರ್
    1. ಅತ್ಯುತ್ತಮ ನಟ (ಡೆಬ್ಯು) ಸಂಚಾರಿ ವಿಜಯ್ ಅವಾರ್ಡ್

    1. ಜಯೀದ ಖಾನ್ (ಬನಾರಸ್)

    1. ರಾಣಾ (ಏಕ್ ಲವ್ ಯಾ)
    2. ಕಾರ್ತಿಕ್ ಮಹೇಶ್ (ಡೊಳ್ಳು)
    3. ಪೃಥ್ವಿ ಶಾಮನೂರು (ಪದವಿ ಪೂರ್ವ)

    5. ರೋಹಿತ್ ಶ್ರೀಧರ್ (ವಾಸಂತಿ ನಲಿದಾಗ)

    1. ಅತ್ಯುತ್ತಮ ನಟಿ (ಡೆಬ್ಯು) ತ್ರಿಪುರಾಂಭ ಪ್ರಶಸ್ತಿ

    1.ರೇಷ್ಮಾ ನಾಣಯ್ಯ (ಏಕ್ ಲವ್ ಯಾ)

    1. ರಚೇಲ್ ಡೇವಿಡ್ (ಲವ್ ಮಾಕ್ಟೇಲ್ 2)
    2. ಶ್ವೇತಾ ಲೆನೋಲಿಯಾ (ಖಾಸಗಿ ಪುಟಗಳು)
    3. ಯಶಾ ಶಿವಕುಮಾರ್(ಪದವಿ ಪೂರ್ವ/ಮಾನ್ಸೂನ್ ರಾಗ)
    4. ಅಂಜಲಿ ಅನೀಶ್ (ಪದವಿ ಪೂರ್ವ)
    1. ಅತ್ಯುತ್ತಮ ನಿರ್ದೇಶಕ (ಡೆಬ್ಯು) ಶಂಕರ್ ನಾಗ್ ಅವಾರ್ಡ್

    1.ಕರಮ್ ಚಾವ್ಲ (10)

    1. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

    3. ಸಾಗರ್  ಪುರಾಣಿಕ್ (ಡೊಳ್ಳು)

    1. ನಟರಾಜ್ (ವ್ಹೀಲ್ ಚೇರ್ ರೋಮಿಯೋ)
    2. ಶಶಿಧರ್ ಕೆ. (ಶುಗರ್ ಲೆಸ್)
    1. ಅತ್ಯುತ್ತಮ ನಿರ್ಮಾಪಕ (ಡೆಬ್ಯು) -ಪುನೀತ್ ರಾಜಕುಮಾರ್ ಅವಾರ್ಡ್
    1. ಪವನ್ ಒಡೆಯರ್ (ಡೊಳ್ಳು)
    2. ಓಂಕಾರ್ ಆರ್ಯ (ಧರಣಿ ಮಂಡಲ ಮಧ್ಯದೊಳಗೆ)
    3. ಮಂಜು ವಿ.ರಾಜ್ (ಖಾಸಗಿ ಪುಟಗಳು)
    4. ಅಭಿಲಾಶ್ ಶೆಟ್ಟಿ (ಕೋಳಿ ಥಾಲ್)
    5. ಗೀತಾ ಪಿಕ್ಚರ್ಸ್ (ವೇದ)
    1. ಅತ್ಯುತ್ತಮ ಸಂಭಾಷಣೆ (ಡೆಬ್ಯು) ಚಿ.ಉದಯ ಶಂಕರ್ ಅವಾರ್ಡ್
    1. ಡೊಳ್ಳು – ಸಾಗರ್ ಪುರಾಣಿಕ್, ಶ್ರೀನಿಧಿ ಡಿ ಎಸ್
    2. ಧರಣಿ ಮಂಡಲ ಮಧ್ಯದೊಳಗೆ – ಶ್ರೀಧರ್ ಶಿಕಾರಿಪುರ
    3. ಕಂಬ್ಲಿ ಹುಳ – ನವೀನ್ ಶ್ರೀನಿವಾಸ್
    4. ಖಾಸಗಿ ಪುಟಗಳು – ಸಂತೋಷ್ ಶ್ರಿಕಂತಪ್ಪ
    5. ವಿಂಡೊಸೀಟ್  – ಶೀತಲ್ ಶೆಟ್ಟಿ
    1. ಅತ್ಯುತ್ತಮ ಯುಟ್ಯೂಬರ್
    1. ಗಗನ್ ಶ್ರೀನಿವಾಸ್ (ಡಾ ಬ್ರೋ)
    2. ಆಶಾ ಮತ್ತು ಕಿರಣ್ (ಫ್ಲೈಯಿಂಗ್ ಪಾಸ್ಪೋರ್ಟ್)
    3. ಕೆ ಎಸ್ ಪರಮೇಶ್ವರ (ಕಲಾ ಮಾಧ್ಯಮ)
    4. ರಾಮ್ ಮಹಾಬಲ (Global ಕನ್ನಡಿಗ)
    5. ಸಂದೀಪ್ ಗೌಡ (ಟೆಕ್ in Kannada)
    1. ಅತ್ಯುತ್ತಮ ಮನರಂಜನೆ ಸಾಮಾಜಿಕ ಜಾಲತಾಣ
    1. ರಘು ಗೌಡ (ಬಳ್ಳಿ ಅಂಗಡಿ ರಘು)
    2. ಪವನ್ ವೇನಗೋಪಾಲ್
    3. ಸೋನು ವೇಣುಗೋಪಾಲ್
    4. ಪವನ್ ಕುಲಕರ್ಣಿ (ಉಡಾಲ್ ಪಾವ್ವ್ಯ)
    5. ವಿಕಾಸ್ (ವಿಕ್ಕಿ ಪೀಡಿಯಾ)
  • 14 ವರ್ಷದ ಥ್ರೋಬ್ಯಾಕ್‌ ಫೋಟೋ ಶೇರ್ ಮಾಡಿ – ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ಸಿಂಡ್ರೆಲಾ

    14 ವರ್ಷದ ಥ್ರೋಬ್ಯಾಕ್‌ ಫೋಟೋ ಶೇರ್ ಮಾಡಿ – ಈ ಸಿನಿಮಾ ನನಗೆ ಎಲ್ಲ ಕೊಟ್ಟಿದೆ ಎಂದ ಸಿಂಡ್ರೆಲಾ

    ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಮಿಸೆಸ್ ಯಶ್ ಆಗಿ ಸಂಸಾರಿಕ ಜೀವನವನ್ನು ಫುಲ್ ಖುಷಿಯಿಂದ ಕಳೆಯುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ, ತಮ್ಮ ಮುದ್ದು ಮಕ್ಕಳ ವೀಡಿಯೋ ಹಾಕಿ ಅಭಿಮಾನಿಗಳಿಗೆ ಫ್ಯಾಮಿಲಿ ಅಪ್ಡೇಟ್ ಕೊಡುತ್ತಿದ್ದ ರಾಧಿಕಾ, ಇಂದು ತಮ್ಮ 14 ವರ್ಷದ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

    ರಾಧಿಕಾ ತಮ್ಮ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳಲ್ಲಿ ನೀವು ನೋಡುತ್ತಿರುವ ಈ ಇಬ್ಬರು 14 ವರ್ಷಗಳ ಹಿಂದೆ ಈ ಚಿತ್ರದ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. ವೈಯಕ್ತಿಕವಾಗಿ, ಈ ಚಿತ್ರ ನನಗೆ ತುಂಬಾ ನೀಡಿದೆ. ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಜೀವನ ಸಂಗಾತಿ ಎಲ್ಲವನ್ನು ನೀಡಿದೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್

    ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ವಿಶೇಷವಾಗಿ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಸುಂದರ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ‘ಮೊಗ್ಗಿನ ಮನಸು’ ಸದಾ ವಿಶೇಷವಾಗಿರುತ್ತದೆ ಎಂದು ಬರೆದು ಯಶ್ ಮತ್ತು ಅವರ ಹಳೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ರಾಧಿಕಾ ಶೇರ್ ಮಾಡಿರುವ ಫೋಟೋ ಅವರ ಮತ್ತು ಯಶ್ ಮೊದಲ ಸಿನಿಮಾ ‘ಮೊಗ್ಗಿನ ಮನಸು’ ದೃಶ್ಯದ್ದಾಗಿದೆ. ಈ ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಸಿನಿಮಾರಂಗಕ್ಕೆ ಕಾಲಿಟ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ

    ಈ ಸಿನಿಮಾ ಮೂಲಕ ಬಂದ ರಾಧಿಕಾ ಸಿನಿ ಜರ್ನಿ ಯಶಸ್ಸು ಕಂಡಿದ್ದು, ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇಬ್ಬರ ಜೋಡಿ ಚಂದನವನದಲ್ಲಿ ಸೂಪರ್ ಮತ್ತು ಪವರ್ ಫುಲ್ ಜೋಡಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!

    ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!

    ರಿಷಬ್ ಶೆಟ್ಟಿ, ನಾಯಕರಾಗಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಈಗಾಗಲೇ ಹಲವಾರು ದಿಕ್ಕುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸಂದೇಶ ಅವರು ನಿರ್ಮಾಣ ಮಾಡಿರುವ ಈ ಸಿನಿಮಾ ಜನರನ್ನು ಸೆಳೆದಿರುವುದೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಭಿನ್ನವಾದ ಕಥೆಯ ಸುಳಿವಿನಿಂದ. ಟ್ರೈಲರ್‌ನಲ್ಲಿ ಒಂದಷ್ಟು ವಿಶೇಷತೆಗಳು ಕಾಣಿಸಬಹುದೆಂಬ ಕಾರಣದಿಂದ ಅದರತ್ತ ಜನ ಆಸೆಯಿಟ್ಟು ಕಾದು ಕೂತಿದ್ದರು. ಕಡೆಗೂ ಇದೀಗ ಹರಿತವಾದ, ವಿಶೇಷವಾದ ಕಥೆಯ ಸುಳಿವಿನೊಂದಿಗೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ಬಿಡುಗಡೆಗೊಂಡಿದೆ.

    ಇದು ಮೂರು ‘ಗಿರಿ’ಗಳ ಸುತ್ತ ನಡೆಯೋ ಕಥಾನಕ ಎಂಬಂಥಾ ಸಣ್ಣ ಸುಳಿವನ್ನಷ್ಟೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಹಾಗಾದರೆ ಈ ಗಿರಿ ಅಂದರೇನೆಂಬ ಹುಳವನ್ನು ಪ್ರತಿಯೊಬ್ಬರೂ ತಲೆಗೆ ಬಿಟ್ಟುಕೊಂಡಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟ್ರೈಲರ್ ಎಲ್ಲ ವಿಧದಲ್ಲಿಯೂ ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಕಳ್ಳತನ ಮಾಡಿದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದ 

    ಇಲ್ಲಿ ರಿಷಬ್‌ ಶೆಟ್ಟಿ ನಿರ್ದೇಶಕನಾಗೋ ಕನಸು ಹೊತ್ತು ತಿರುಗಾಡುವ ಡೈರೆಕ್ಟರ್ ಗಿರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ಸುಳಿವು ಸಿಕ್ಕಿದೆ. ಅದರ ಜೊತೆ ಜೊತೆಗೇ ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ ಮುಂತಾದವರ ಪಾತ್ರಗಳು ಕೂಡಾ ಸಣ್ಣಮಟ್ಟದಲ್ಲಿ ಸುಳಿವು ಬಿಟ್ಟುಕೊಟ್ಟಿವೆ. ಇದುವರೆಗೆ ಜಾಹೀರಾಗಿರುವ ವಿಚಾರಗಳಾಚೆಗೆ ಇಲ್ಲಿನ ಕಥೆ ಹಬ್ಬಿಕೊಂಡಿದೆ ಎಂಬ ಸ್ಪಷ್ಟ ನಂಬಿಕೆ ಮೂಡಿಸುವಲ್ಲಿಯೂ ಈ ಟ್ರೈಲರ್ ಯಶಸ್ಸು ಕಂಡಿದೆ.

    ಇದುವರೆಗೂ ಸಿನಿಮಾ ಕನಸು ಹೊತ್ತು ಗಾಂಧಿನಗರದಲ್ಲಿ ಸುಳಿದಾಡುವವರ ಕಥೆಗಳು ಸಾಕಷ್ಟು ಕಾಣಿಸಿಕೊಂಡಿವೆ. ಆದರೆ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿರೋದು ಡಿಫರೆಂಟಾದ ಕಥೆ ಎಂಬುದನ್ನು ನಿರ್ದೇಶಕದ್ವಯರು ನಿಖರವಾಗಿಯೇ ನಿರೂಪಿಸಿದ್ದಾರೆ. ಅದು ಈ ಟ್ರೈಲರ್‌ನ ನಿಜವಾದ ಪ್ಲಸ್ ಪಾಯಿಂಟ್.

    ಈ ಮೂಲಕ ದೊಡ್ಡ ಚಾಲೆಂಜೊಂದರಲ್ಲಿ ಚಿತ್ರತಂಡ ಗೆದ್ದಂತಾಗಿದೆ. ಈ ಟ್ರೈಲರ್‍ಗೆ ಸಿಗುತ್ತಿರುವ ವ್ಯಾಪಕ ಮೆಚ್ಚುಗೆ ಮತ್ತು ಬೆಂಬಲಗಳೇ ಸಿನಿಮಾದ ಗೆಲುವನ್ನು ನಿಕ್ಕಿಯಾಗಿಸಿದೆ. ಇದು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಿಖರವಾಗಿ ಹೇಳಬೇಕೆಂದರೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ನಿಜಕ್ಕೂ ಪರಿಣಾಮಕಾರಿಯಾಗಿದೆ.

    ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ ‘ಹರಿಕಥೆ ಅಲ್ಲ ಗಿರಿಕಥೆ’. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದು ಓರ್ವ ನಟನಾಗಿ ರಿಷಬ್ ಶೆಟ್ಟಿ ವೃತ್ತಿ ಬದುಕಿನ ಮಹತ್ವದ ಚಿತ್ರವಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ಇದನ್ನೂ ಓದಿ:  ಕುವೆಂಪು, ಬಸವಣ್ಣಗೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು: ಹಂಸಲೇಖ 

    ಈ ಚಿತ್ರ ಕೇವಲ ಕಥೆಯ ದಿಕ್ಕಿನಿಂದ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ಅದರ ಲಕ್ಷಣಗಳು ಈ ಟ್ರೈಲರ್‌ನಲ್ಲೂ ಕಾಣಿಸಿವೆ. ಇನ್ನುಳಿದಂತೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಹೊನ್ನವಳ್ಳಿ ಕೃಷ್ಣ ಮುಂತಾದವರ ತಾರಾಗಣದಿಂದ ‘ಹರಿಕಥೆ ಅಲ್ಲ ಗಿರಿಕಥೆ’ ಮೈಕೈ ತುಂಬಿಕೊಂಡಿದೆ. ಈ ಸಿನಿಮಾ ಜೂನ್‌ 23ಕ್ಕೆ ರಿಲೀಸ್‌ ಆಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ಚಿರು ಜಾಗ ತುಂಬುವುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ: ಮೇಘನಾ ರಾಜ್

    ಚಿರು ಜಾಗ ತುಂಬುವುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ: ಮೇಘನಾ ರಾಜ್

    – ನಮ್ಮ ಕುಟುಂಬ ಮಾತ್ರವಲ್ಲ ಚಿರುನಾ ಯಾರು ಮರೆಯಲ್ಲ

    ಚಂದನವನದ ಹೆಸರಾಂತ ನಟ ಚಿರಂಜೀವಿ ಸರ್ಜಾ ನಿಧನರಾಗಿ ಇಂದಿಗೆ ಎರಡು ವರ್ಷ. ಚಿರು ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳು ಇಂದು ಧ್ರುವ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿಗೆ ಪೂಜೆ ಸಲ್ಲಿಸಿ, ಎರಡನೇ ವರ್ಷದ ಕಾರ್ಯ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚಂದನವನದ ನಟಿ, ಚಿರು ಪತ್ನಿ ಮೇಘನಾ ರಾಜ್ ಭಾವನ್ಮಾಕವಾಗಿ ಮಾತನಾಡಿದ್ದು, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು.

    ಮೇಘನಾ ಹೇಳಿದ್ದೇನು?
    ನಾನು ಚಿರುನ ಹೇಗೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತಿನಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆ ಜಾಗವನ್ನು ಯಾರು ತುಂಬುವುದಕ್ಕೆ ಸಾಧ್ಯವಿಲ್ಲ. ಚಿರು ಜಾಗ ತುಂಬುದಕ್ಕೆ ರಾಯನ್‍ಗೂ ಸಾಧ್ಯವಿಲ್ಲ. ಅದು ಅವರಿಂದ ಮಾತ್ರ ಸಾಧ್ಯ. ಇದನ್ನೂ ಓದಿ: ಚಿರು ಮಗನನ್ನು ನಾನೇ ಲಾಂಚ್ ಮಾಡುತ್ತೇನೆ : ಅರ್ಜುನ್ ಸರ್ಜಾ

    ಇಂದು ನಾನು ಒಂದು ವಿಷಯ ಹೇಳುವುದಕ್ಕೆ ಇಷ್ಟಪಡುತ್ತೇನೆ. 2 ವರ್ಷ ಅಲ್ಲ, ಇನ್ನೂ ನೂರಾರು ವರ್ಷ ಹೋದ್ರೂ ಚಿರುನಾ ನಮ್ಮ ಕುಟುಂಬ ಮಾತ್ರವಲ್ಲ, ಯಾರಿಂದಲೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಾವು ಮಾತ್ರವಲ್ಲ ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಚಿರುನನ್ನು ಮರೆಯಲು ಸಾಧ್ಯವಿಲ್ಲ.

    ಇಂದು ಅವರಿಗೋಸ್ಕರ ಬಂದು, ಅವರನ್ನು ದೇವರ ಸ್ಥಾನದಲ್ಲಿಟ್ಟು ನೋಡುತ್ತಿದ್ದಾರೆ. ನಮ್ಮೆಲ್ಲರಿಗೂ ಅವರು ದೇವರೇ, ಈಗ ನೀವೆಲ್ಲ ಅವರನ್ನು ದೇವರ ಸ್ಥಾನದಲ್ಲಿಟ್ಟು ನೋಡುತ್ತಿದ್ದೀರ. ಈ ದಿನವನ್ನು ಅವರಿಗಾಗಿ ಮೀಸಲಿಡಬೇಕು ಎಂದು ಹಲವು ಜನರು ಬರುತ್ತಿರುವುದಕ್ಕೆ ನನ್ನ ಮನಸ್ಸಿನಲ್ಲಿ ಸಣ್ಣದೊಂದು ಖುಷಿಯಿದೆ. ಇದನ್ನೂ ಓದಿ: ಹೇಗಿದ್ದೀರಾ, ಚೆನ್ನಾಗಿದ್ದೀರಾ? ಎಂದು ಕೇಳುವುದನ್ನೇ ನಿಲ್ಲಿಸಿ ಬಿಟ್ಟಿದ್ದೆ : ಧ್ರುವ ಸರ್ಜಾ

    meghana raj

    ಅಭಿಮಾನಿಗಳಿಗೆ ಕೇಳಿದ್ದೇನು?
    ಚಿರು ಬಗ್ಗೆ ನಿಮಗೆ ಇರುವಂತಹ ಪ್ರೀತಿ, ರಾಯನ್‍ಗೆ ನೀವು ಕೊಡುವ ಆರ್ಶೀವಾದವನ್ನು ಇದೇ ರೀತಿ ಮುಂದುವರೆಸಬೇಕು. ನಮ್ಮ ಕುಟುಂಬ ಇನ್ನೂ ಮುಂದೆ ಹೋಗುವುದಕ್ಕೆ ನೀವು ನಮಗೆ ಪ್ರೋತ್ಸಾಹ ಕೊಡಬೇಕು. ನಾನು ನಿಮ್ಮನ್ನು ನೋಡಿ ಸ್ಫೂರ್ತಿ ಪಡೆದುಕೊಳ್ಳುತ್ತೇನೆ. ನಾನು ಮುಂದೆ ನುಗ್ಗುವುದಕ್ಕೆ ಶಕ್ತಿಕೊಡಿ ಎಂದು ಕೇಳಿಕೊಳ್ಳುತ್ತೇನೆ. ಚಿರುಗಾಗಿ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ತಿಳಿಸಿದರು.

  • ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ

    ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ

    ಬೆಳ್ಳಿತೆರೆ ಬಾನಂಗಳದಲ್ಲಿ ವೀಲ್‍ಚೇರ್ ರೋಮಿಯೋನ ಪಯಣ ಶುರುವಾಗಿದೆ. ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನು ರೋಮಿಯೋ ರಂಜಿಸಿದ್ದಾನೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಅದೇ ಕುತೂಹಲ ಕಾಯ್ದುಕೊಂಡು, ಭರ್ಜರಿ ಡೈಲಾಗ್, ವಿಭಿನ್ನ ಪಾತ್ರಗಳು, ವಿಶೇಷ ಕಥಾನಕದ ಮೂಲಕ ವೀಲ್‍ಚೇರ್ ರೋಮಿಯೋ ಚಿತ್ರ ಪ್ರೇಮಿಗಳ ಹೃದಯ ಕಲಕಿದ್ದಾನೆ.

    Wheel Chair Romeo

    ವೀಲ್‍ಚೇರ್ ರೋಮಿಯೋ ಮಾಮೂಲಿ ಸಿನಿಮಾಗಳ ಕಥೆಯಂತು ಅಲ್ಲವೇ ಅಲ್ಲ. ಇದೊಂದು ಅಪರೂಪದ ಕಥೆ. ಇದು ನಿಮ್ಮನ್ನ ಭಾವನೆಗಳ ಲೋಕಕ್ಕೆ ಕರೆದೊಯ್ಯುವ ಇಂಟ್ರೆಸ್ಟಿಂಗ್ ಸ್ಟೋರಿ. ಬಾಲ್ಯದಿಂದ ಮೂಳೆ ಖಾಯಿಲೆಗೆ ಒಳಗಾದ ಹೀರೋ, ಈತ ದೊಡ್ಡವನಾದ ಮೇಲೆ ಮದುವೆ ಮಾಡಲು ಅಪ್ಪ ಸಿದ್ಧನಾಗುತ್ತಾನೆ. ಇಂದಿನ ಕಾಲದಲ್ಲಿ ಎಲ್ಲವೂ ಸರಿ ಇದ್ದು ಹೆಣ್ಣು ಕೊಡುವುದು ಕಷ್ಟ. ಇನ್ನೂ ಕಾಲಿಲ್ಲದ ನಾಯಕನಿಗೆ ಜೊತೆಯಾಗುವವರು ಯಾರು? ಮಗನ ಆಸೆ ಈಡೇರಿಸಲು ಅಪ್ಪ ಎಷ್ಟೆಲ್ಲಾ ಪರದಾಟ ನಡೆಸುತ್ತಾನೆ? ಹೀಗೆ ಸಾಗುವ ಕಥೆಯಲ್ಲಿ ನಾನಾ ರೋಚಕ ತಿರುವುಗಳು. ಕೊನೆಗೆ ನಾಯಕನಿಗೆ ಜೋಡಿ ಸಿಗುತ್ತಾಳಾ? ಆಕೆ ಈತನ್ನು ಒಪ್ಪಿಕೊಂಡಿದ್ದಾದ್ರೂ ಏಕೆ? ಅನ್ನೋದನ್ನು ನೀವು ಥಿಯೇಟರ್‍ನಲ್ಲಿಯೇ ನೋಡ್ಬೇಕು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು 

    ನಿರ್ದೇಶಕ ನಾಗರಾಜ್ ಮೊದಲ ಬಾರಿಗೆ ನಿರ್ದೇಶನದ ಅಖಾಡಕ್ಕೆ ಇಳಿದಿದ್ರೂ, ಪಳಗಿದ ನಿರ್ದೇಶಕನ ರೀತಿ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹದಿನೈದು ವರ್ಷದ ತಮ್ಮ ಜರ್ನಿಯ ಅನುಭವಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ನಟರಾಜ್, ಮೂಲತಃ ಡೈಲಾಗ್ ರೈಟರ್ ಆಗಿದ್ದವರು. ಆದ್ರೂ ವೀಲ್‍ಚೇರ್ ರೋಮಿಯೋ ಸಿನಿಮಾಗೆ ಗುರು ಕಶ್ಯಪ್ ಅವರಿಂದ ಪಂಚಿಂಗ್ ಸಂಭಾಷಣೆ ಬರೆಸಿ ಸೈ ಎನಿಸಿಕೊಂಡಿದ್ದಾರೆ.

    ಸೂಕ್ಷ್ಮ ಕಥೆಗೆ ಅಷ್ಟೇ ಪವರ್ ಫುಲ್ ಡೈಲಾಗ್ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸುವಂತೆ ಮಾಡುತ್ತವೆ. ಭರತ್ ಬಿಜೆ ಸಂಗೀತದ ಸ್ಪರ್ಶ ಹಾಗೂ ಸಂತೋಷ್ ಪಾಂಡಿ ಛಾಯಾಗ್ರಾಹಣದ ಸೊಗಸು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾಬಳಗದ ಅಭಿನಯಕ್ಕೆ ಬರುವುದಾದರೆ, ರಂಗಾಯಣ ರಘು ಜಾಕ್ ಮಾಮಾ ಪಾತ್ರದಲ್ಲಿ ಅಕ್ಷಶರಃ ಮಿಂಚಿದ್ದಾರೆ. ಸುಚೇಂದ್ರ ಪ್ರಸಾದ್ ಪ್ರತಿಮ ಅಭಿನಯ, ತಬಲನಾಣಿ, ಗಿರಿಶಿವಣ್ಣ ಚಿತ್ರದ ಪ್ಲಸ್ ಪಾಯಿಂಟ್. ಅಂಧ ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ ಅಭಿನಯ ಅಮೋಘ ಅಂದ್ರು ತಪ್ಪಾಗಲಿಕ್ಕಿಲ್ಲ.

    ರಾಮ್ ಚೇತನ್ ಮೊದಲ ಬಾರಿಗೆ ಹೀರೋ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾವನ್ನು ವೀಲ್ ಚೇರ್ ಮೇಲೆ ಕುಳಿತು ಚಾಲೆಂಜಿಂಗ್ ರೋಲ್ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಟ್ನಲ್ಲಿ ವೀಲ್ ಚೇರ್ ರೋಮಿಯೋ ನಿಜಕ್ಕೂ ಹೊಸ ಪ್ರಯತ್ನ. ತೆರೆಹಿಂದಿ ದುಡಿದವರು, ತೆರೆಮುಂದೆ ಬಣ್ಣ ಹಚ್ಚಿದವರು ಎಲ್ಲರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದನ್ನೂ ಓದಿ:  ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ 

  • ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು: ತೆಲಗು ನಿರ್ದೇಶಕನಿಗೆ ಶಿವಣ್ಣ ತಿರುಗೇಟು

    ಕಾರವಾರ: ಯಾರೋ ಏನೋ ಹೇಳಿದರೂ ಎಂದು ಕೇಳವುದು ಬೇಡ. ಕನ್ನಡ ಇಂಡಸ್ಟ್ರಿ ಏನು ಅಂತಾ ಜಗತ್ತಲ್ಲಿ ಸಾಬೀತಾಗಿದೆ ಎಂದು ತೆಲಗು ನಿರ್ದೇಶಕ ಗೀತಕೃಷ್ಣ ಅವರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ತಿರುಗೇಟು ಕೊಟ್ಟರು.

    Century Star Shivarajkumar shows no signs of slowing down- The New Indian Express

    ಸ್ಯಾಂಡಲ್‍ವುಡ್ ಇಂಡಸ್ಟ್ರಿ ಡರ್ಟಿ ಎಂದು ಗೀತಕೃಷ್ಣ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿದ ಶಿವರಾಜ್ ಕುಮಾರ್ ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಕನ್ನಡ ಇಂಡಸ್ಟ್ರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಾಗಿದೆ. ಕೆಜಿಎಫ್-2 ಸಿನಿಮಾದಿಂದ ಅದು ಪ್ರೂ ಆಗಿದೆ. ಯಾರು ಏನೇ ಹೇಳಿದ್ರು ಈ ಕಿವಿಯಲ್ಲಿ ಕೇಳಬೇಕು ಈ ಕಿವಿಯಲ್ಲಿ ಬಿಡಬೇಕು. ಅವರ ಮಾತು ಅವರ ಯೋಗ್ಯತೆಯನ್ನ ತೋರಿಸುತ್ತೆ. ಇಂತವರ ಬಗ್ಗೆ ಪ್ರತಿಕ್ರಿಯೆ ಕೊಟ್ಟಷ್ಟು ಅವರಿಗೆ ಲಾಭ ಆಗುತ್ತೆ ಎಂದು ತಿಳಿಸಿದರು.

    ನಮ್ಮ ಇಂಡಸ್ಟ್ರಿ ಏನು, ನಮ್ಮ ಗೌರವ ಏನು ಎಲ್ಲರಿಗೂ ಗೊತ್ತು. ಅಪ್ಪಾಜಿ ಕಾಲದಿಂದ ಹಿಡಿದು ಇಲ್ಲಿಯವರಗೆ ಎಲ್ಲ ಕಲಾವಿದರು ಇಂಡಸ್ಟ್ರಿಯನ್ನ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಇಂತವರ ಕೀಳು ಮಾತಿಗೆ ಕಿವಿ ಕೊಡದೆ, ಅವರು ಯಾರು ಅಂತಾ ನೆಗ್ಲೆಟ್ ಮಾಡಬೇಕು ಎಂದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ 

    Shocking: Death threat to Shivarajkumar | Kannada Movie News - Times of India

    ‘ಬೈರಾಗಿ’ ಸಿನಿಮಾ ಕುರಿತು ಮಾತನಾಡಿದ ಅವರು, ನನ್ನ ಮುಂದಿನ ಸಿನಿಮಾ ‘ಬೈರಾಗಿ’ ಯಾವುದೇ ಪ್ಯಾನ್ ಇಂಡಿಯಾವಲ್ಲ. ಭಾವನೆಗಳ ಕಥೆ ಇದು. ಪ್ರತಿಯೊಂದು ಪಾತ್ರಕ್ಕೂ ಒಂದೊಂದು ಅರ್ಥವಿದೆ. ನನ್ನ ಪಾಲಿಗೆ ಬಂದ ಸಿನಿಮಾಗಳನ್ನ ಮಾಡುತ್ತಿದ್ದೇನೆ ಎಂದರು.

  • ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ನ್ನಡ ಕಿರುತೆರೆ ನಟಿ ಚೇತನಾ ರಾಜ್ ಅವರು ಮೇ 16 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚೇತನಾ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದು, ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿದೆ. ಈ ಹಿನ್ನೆಲೆ ಚೇತನಾ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಿಣಾಮ ಸೆಲೆಬ್ರಿಟಿಗಳು ಚೇತನಾ ಸಾವಿಗೆ ಸಂತಾಪ ಸೂಚಿಸಿದರು. ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ಚೇತನಾ ಅವರ ಹಠಾತ್ ಸಾವಿನಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

    ಇನ್‍ಸ್ಟಾದಲ್ಲಿ ರಾಖಿ, ಗೆಳೆಯರೇ, ಫ್ಯಾಟ್ ಸರ್ಜರಿಯಿಂದ ಸಾವನ್ನಪ್ಪಿದ ಕನ್ನಡ ನಟಿ ಚೇತನಾ ರಾಜ್ ಅವರ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಈ ರೀತಿ ಮಾಡುವ ಯಾವ ಆಸ್ಪತ್ರೆ ಮತ್ತು ವೈದ್ಯರಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ. ಆಕೆಗೆ ಯಾರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳವುದಕ್ಕೆ ಹೇಳಿದ್ದು. ಆ ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

    ನಿಮಗೆ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಹೋಗಿದ್ರೆ, ಒಳ್ಳೆಯ ಬಾಲಿವುಡ್ ಜನರನ್ನು ಕೇಳಬೇಕು. ನೀವು ನನ್ನನ್ನು ಕೇಳಬೇಕು, ನೀವು ಯಾವ ವೈದ್ಯರ ಬಳಿಗೆ ಹೋಗಬೇಕು ಎಂದು ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಯಾರ ಬಳಿಯೂ ಹೋಗಿ ಈ ರೀತಿ ಸಾಯಬೇಡಿ. 21 ವರ್ಷದ ಹುಡುಗಿ ಯಾವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

    ಚೇತನಾ ಸಾವಿಗೆ ಪ್ರಿಯಾಂಕಾ ಉಪೇಂದ್ರ, ಮೋಹಕ ತಾರೆ ರಮ್ಯಾ, ಚಂದನವನದ ಆಶ್ವಿತಿ ಶೆಟ್ಟಿ ಮರುಕ ವ್ಯಕ್ತಪಡಿಸಿದ್ದಾರೆ.

  •  ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ ವಿಧಿವಶ

     ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ ವಿಧಿವಶ

    ರಾಯಚೂರು: ಅನಾರೋಗ್ಯ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಹುಭಾಷಾ ಚಿತ್ರನಟ ಕ್ಯಾಪ್ಟನ್ ಚಲಪತಿ ಚೌದ್ರಿ(67) ನಿಧನರಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರು ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಚೌದ್ರಿ ಅಗಲಿಕೆಗೆ ಸಿನಿಮಾರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

    ಕನ್ನಡ, ತೆಲುಗು, ಹಿಂದಿ ಸೇರಿದಂತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಚೌದ್ರಿ ಅವರು ಪ್ರಸ್ತುತ ಧಾರವಾಹಿಗಳಲ್ಲಿ ನಟಿಸುತ್ತಿದ್ದರು. ಶಿವರಾಜ್ ಕುಮಾರ್, ಬಾಲಕೃಷ್ಣ, ಚಿರಂಜೀವಿ, ನಾಗಾರ್ಜುನ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ಚೌದ್ರಿ ನಟಿಸಿದ್ದಾರೆ. ಇದನ್ನೂ ಓದಿ: ಪೋಸ್ಟರ್‌ಗಳಲ್ಲಿ ಹುಲಿ ಚಿತ್ರಗಳನ್ನ ಹಾಕಿಬಿಟ್ರೆ ಮೈಸೂರು ಹುಲಿ ಆಗಿಬಿಡ್ತಾನಾ?: ಪ್ರತಾಪ್ ಸಿಂಹ 

    ಚೌದ್ರಿ ಅವರು ಪತ್ನಿ, ಇಬ್ಬರು ಮಕ್ಕಳು, ಮೊಮ್ಮಕ್ಕಳು ಸೇರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ನಗರದ ಕೆ.ಎಂ.ಕಾಲೊನಿಯ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದ ಬಿ.ಆರ್.ಬಿ ಕಾಲೇಜಿನ ಹತ್ತಿರ ಇರುವ ಮುಕ್ತಿಧಾಮದಲ್ಲಿ ಸಂಜೆ 4:30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

  • ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ

    ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ

    ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ರಾಕಿಂಗ್ ಆಗಿ ತಮ್ಮ ಸಾಂಸಾರಿಕ ಜೀವನ ನಡೆಸುತ್ತಿದ್ದಾರೆ. ಪತಿ ಯಶ್ ಮತ್ತು ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ರಾಧಿಕಾ ತಮ್ಮ ಮಕ್ಕಳೊಂದಿಗೆ ಕಳೆದ ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇವರ ಅಪ್ಡೇಟ್‍ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.

    ಯಶ್-ರಾಧಿಕಾ ಮದುವೆಯಾದ ದಿನದಿಂದ ಇಲ್ಲಿವರೆಗೂ ಯಾವುದೇ ವಿಷಯಗಳನ್ನು ವಿಶೇಷ ರೀತಿಯಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಾರೆ. ಇಂದು ಅಮ್ಮಂದಿರ ದಿನವಾದ ಹಿನ್ನೆಲೆ ರಾಧಿಕಾ ವಿಶೇಷ ಫೋಟೋ ಶೇರ್ ಮಾಡಿದ್ದು, ಅಮ್ಮ, ಮದರ್ಸ್ ಡೇ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.

    ಒಂದು ಫೋಟೋದಲ್ಲಿ ರಾಧಿಕಾ ತನ್ನ ತಾಯಿ ಜೊತೆ ತೆಗೆಸಿಕೊಂಡಿದ್ದ ಥ್ರೋಬ್ಯಾಕ್ ಫೋಟೋ ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ತನ್ನ ತಾಯ್ತನ ಬಗ್ಗೆ ಹೇಳುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ರಾಧಿಕಾ ತನ್ನ ಇಬ್ಬರು ಮುದ್ದು ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ 

     

    View this post on Instagram

     

    A post shared by Radhika Pandit (@iamradhikapandit)

    ಈ ಫೋಟೋದಲ್ಲಿ ರಾಧಿಕಾ ಬೀಚ್‍ನಲ್ಲಿ ತನ್ನ ಇಬ್ಬರು ಮಕ್ಕಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಮೂವರು ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಕೆಜಿಎಫ್-2 ಯಶಸ್ಸಿನ ನಂತರ ರಾಧಿಕಾ ಮತ್ತು ಯಶ್ ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.