Tag: ಚಂಢೀಗಡ್

  • ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    ಮೊದಲ ರಾತ್ರಿ ವಧುವಿನ ಪಾಲಿಗೆ ಆಯ್ತು ಕರಾಳ ರಾತ್ರಿ

    – ಪತಿಯ ವಿಷಯ ತಿಳಿದು ಪ್ರಜ್ಞೆ ತಪ್ಪಿದ ಪತ್ನಿ
    – ಪ್ರಜ್ಞೆ ಬರುತ್ತಿದ್ದಂತೆ ಆಸ್ಪತ್ರೆಗೆ ಓಡಿದ ವಧು

    ಚಂಢೀಗಡ್: ಮದುವೆ ದಿನದಂದು ವರ ಸಂಬಂಧಿಕರೊಂದಿಗೆ ಮೋಜು-ಮಸ್ತಿ ಮಾಡಲು ಹೋಗಿ ಮೊದಲ ರಾತ್ರಿಗೂ ಮುನ್ನವೇ ಮೃತಪಟ್ಟ ಘಟನೆ ಪಂಜಾಬ್‍ನ ಲುದಿಯಾನಾದಲ್ಲಿ ನಡೆದಿದೆ.

    ರಾಹುಲ್ ಮೃತಪಟ್ಟ ವರ. ಬುಧವಾರ ಬೆಳಗ್ಗೆ ರಾಹುಲ್ ಮದುವೆಯಾಗಿದ್ದು, ಸಂಜೆ ತನ್ನ ಸಂಬಂಧಿಕರ ಜೊತೆ ಮೋಜುಮಸ್ತಿ ಮಾಡಲು ಕಾರಿನಲ್ಲಿ ಲುದಿಯಾನಾಗೆ ತೆರಳಿದ್ದರು. ಅಲ್ಲಿಂದ ಭಾಟೀಯಾ ಗ್ರಾಮಕ್ಕೆ ತೆರಳುವಾಗ ಕಾರು ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಾಹುಲ್ ಹಾಗೂ ಆತನ ಬಾವ ರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನು ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಚಾಲಕ ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದನು. 5 ಸೀಟ್ ಇರುವ ಕಾರಿನಲ್ಲಿ 7 ಮಂದಿ ಕುಳಿತು ಪ್ರಯಾಣಿಸುತ್ತಿದ್ದರು. ಎಲ್ಲರೂ ಮೋಜುಮಸ್ತಿ ಮಾಡಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾರು ಹಿಂಬದಿಯಿಂದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವರ ಹಾಗೂ ಆತನ ಬಾವ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು ಕಾರಿನಲ್ಲಿದ್ದ ಐವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯಲ್ಲಿ, ಕಾರಿನಲ್ಲಿದ್ದ ಏಳು ಮಂದಿ ಮದ್ಯ ಸೇವಿಸಿದ್ದರು. ಅಪಘಾತದ ಮಾಹಿತಿ ಬರುತ್ತಿದ್ದಂತೆ ಎಸಿಪಿ ನರ್ಕೋಟಿಕ್ಸ್ ಸೆಲ್ ರಾಜಕುಮಾರ್ ಚೌಧರಿ ಹಾಗೂ ಉಳಿದ ಪೊಲೀಸರು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಕ್ರೇನ್ ಸಹಾಯದಿಂದ ಕಾರನ್ನು ಟ್ಯಾಂಕರ್ ನಿಂದ ಬೇರ್ಪಡಿಸಲಾಯಿತು.

    ಈ ಘಟನೆ ಬಗ್ಗೆ ಟ್ಯಾಂಕರ್ ಚಾಲಕ ಶಮ್‍ಶೇರ್ ಕೊಹ್ಲಿ ಮಾತನಾಡಿ, ಸರಾಬಾದಿಂದ ಮೊಟ್ಟೆ ಲೋಡ್ ಮಾಡಿಕೊಂಡು ಜಮ್ಮುಗೆ ಹೋಗುತ್ತಿದೆ. ಈ ವೇಳೆ ಟ್ಯಾಂಕರ್ ಹಿಂಬದಿ ಡಿಕ್ಕಿ ಹೊಡಯಲಾಯಿತು. ತಕ್ಷಣ ನಾನು ಟ್ಯಾಂಕರ್ ನ ಬ್ರೇಕ್ ಹಾಕಿ ಕೆಳಗೆ ಇಳಿದು ನೋಡಿದೆ. ಆಗ ಟ್ಯಾಂಕರಿಗೆ ಕಾರು ಡಿಕ್ಕಿ ಹೊಡೆದಿತ್ತು. ಕೂಡಲೇ ನಾನು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.

    ವಧು ಮೊದಲ ರಾತ್ರಿಯಂದು ತನ್ನ ಪತಿ ರಾಹುಲ್‍ಗಾಗಿ ಕಾಯುತ್ತಿದ್ದಳು. ಈ ವೇಳೆ ಕುಟುಂಬಸ್ಥರು ರಾಹುಲ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಹೇಳಿದ ತಕ್ಷಣ ವಧು ಪ್ರಜ್ಞೆ ತಪ್ಪಿದ್ದಾಳೆ. ಎಚ್ಚರಗೊಂಡಾಗ ವಧು ಅಳುತ್ತಾ ಆಸ್ಪತ್ರೆಗೆ ಓಡಿ ಹೋಗಿದ್ದಾಳೆ. ಈ ವೇಳೆ ಕೊನೆಯ ಬಾರಿಗೆ ನನ್ನ ಪತಿಯ ಮುಖವನ್ನು ನೋಡಲು ಬಿಡಿ ಎಂದು ಕಣ್ಣೀರು ಹಾಕಿದ್ದಾಳೆ.

  • ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    – ಮಗಳ ಕಾರ್ಯಕ್ಕೆ ಶಾಲೆಯ ವತಿಯಿಂದ ಸನ್ಮಾನ
    – ಲಿವರ್ ಟ್ಯೂಮರ್‍ನಿಂದ ಬಳಲುತ್ತಿದ್ದ ತಂದೆ

    ಚಂಢೀಗಡ್: ಹರಿಯಾಣದ ಸಿರಸಾ ಜಿಲ್ಲೆಯಲ್ಲಿ ಮಗಳೊಬ್ಬಳು ಲಿವರ್(ಯಕೃತ್ತು) ದಾನ ಮಾಡುವ ಮೂಲಕ ತನ್ನ ತಂದೆಗೆ ಹೊಸ ಜೀವನ ನೀಡಿದ್ದಾಳೆ.

    ನೇಹಾ ರಾಣಿ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಯಾಗಿದ್ದು, ಸಿರಸಾದಲ್ಲಿ ಶಾ ಸತ್ನಾಮ್ ಗರ್ಲ್ಸ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನೇಹಾ ತನ್ನ ಲಿವರ್ ದಾನ ಮಾಡಿ ತನ್ನ ತಂದೆಯ ಜೀವ ಉಳಿಸಿದ್ದಕ್ಕೆ ಹೆಮ್ಮೆ ಪಡುತ್ತಿದ್ದಾಳೆ. ನೇಹಾಳ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ ಆಕೆಗೆ ಸನ್ಮಾನ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನೇಹಾ, “ನನ್ನ ತಂದೆ ಲಿವರ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಅಲ್ಲದೆ ವೈದ್ಯರು ಶೀಘ್ರದಲ್ಲೇ ಲಿವರ್ ಬದಲಾಯಿಸಬೇಕು ಎಂದು ಹೇಳಿದ್ದರು. ನಮ್ಮ ಮನೆಯಲ್ಲಿ ಅಮ್ಮ, ಅಣ್ಣ ಹಾಗೂ ಅತ್ತಿಗೆ ಇದ್ದಾರೆ. ಎಲ್ಲರ ಮೊದಲು ನಾನು ನನ್ನ ಲಿವರ್ ದಾನ ಮಾಡುತ್ತೇನೆ ಎಂದು ಹೇಳಿದ್ದೆ. ವೈದ್ಯರು ಪರಿಶೀಲನೆ ನಡೆಸಿದ ನಂತರ ನಾನು ನನ್ನ ಲಿವರ್ ದಾನ ಮಾಡಿದೆ” ಎಂದು ಹೇಳಿದ್ದಾಳೆ.

    ಮಕ್ಕಳಿಗಾಗಿ ತಂದೆ-ತಾಯಿ ತಮ್ಮ ಜೀವನವನ್ನು ತ್ಯಾಗ ಮಾಡುತ್ತಾರೆ. ಹಾಗೆಯೇ ಮಕ್ಕಳು ಕೂಡ ತಂದೆ-ತಾಯಿಯ ಸೇವೆಯಲ್ಲಿ ತಮ್ಮ ಜೀವನವನ್ನು ತ್ಯಾಗ ಮಾಡಬೇಕು. ನನ್ನ ಈ ಕಾರ್ಯಕ್ಕೆ ಶಾಲೆಯ ಪ್ರಿನ್ಸಿಪಲ್ ಡಾ. ಶೀಲಾ ಪುಣಿಯಾ ಅವರು ಪ್ರಶಂಸೆ ನೀಡಿದರು. ಅಲ್ಲದೆ ನನಗೆ ಸನ್ಮಾನ ಕೂಡ ಮಾಡಿದರು. ನನ್ನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಮಾನವೀಯತೆಯ ಪಾಠ ಕೂಡ ಹೇಳಿ ಕೊಡುತ್ತಾರೆ ಎಂದು ನೇಹಾ ತಿಳಿಸಿದ್ದಾಳೆ.

  • ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಲುಧಿಯಾನಾ ಪೊಲೀಸರಿಂದ ಮಹಿಳೆಯರಿಗೆ ರಾತ್ರಿಯಿಡೀ ಉಚಿತ ಪ್ರಯಾಣ

    ಚಂಢೀಗಡ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಈ ನಡುವೆ ಪಂಜಾಬ್‍ನ ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಶುರು ಮಾಡಿದ್ದಾರೆ.

    ಲುಧಿಯಾನಾ ಪೊಲೀಸರು ಮಹಿಳೆಯರಿಗಾಗಿ ಉಚಿತ ಪ್ರಯಾಣ ಯೋಜನೆಯನ್ನು ಶುರು ಮಾಡಿದ್ದಾರೆ. ಇದರಿಂದ ತಡರಾತ್ರಿ ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಮನೆಗೆ ಹೋಗಲು ಯಾವುದೇ ವಾಹನ ಸಿಗದಿದ್ದರೆ, ಅವರು ನೇರವಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಅಲ್ಲದೆ ಕ್ಯಾಬ್‍ಗಾಗಿ ಅವರು ಪೊಲೀಸರನ್ನು ಕೇಳಬಹುದು.

    ಭಾನುವಾರ ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಅವರು ಮಾತನಾಡಿ, ಮಹಿಳೆಯರು ಎಲ್ಲಿಂದ ಕರೆ ಮಾಡುತ್ತಾರೋ, ಅಲ್ಲಿ ಹತ್ತಿರದ ಪೊಲೀಸರ ನಿಯಂತ್ರಣ ಕೊಠಡಿ ಅಥವಾ ಮಹಿಳೆಯರು ಹೋಗಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ಕಳುಹಿಸಿಕೊಡುವುದು ಪೊಲೀಸರ ಜವಾಬ್ದಾರಿ. ಪ್ರತಿದಿನ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಈ ಸೌಲಭ್ಯ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

    ಮಹಿಳೆಯರಿಗಾಗಿ 1091 ಹಾಗೂ 78370 18555 ಸಹಾಯವಾಣಿ ಸಂಖ್ಯೆ ಲಭ್ಯವಿರುತ್ತದೆ. ಈ ನಂಬರ್ 24 ಗಂಟೆ ಚಾಲ್ತಿಯಲ್ಲಿರುತ್ತದೆ. ಮಹಿಳೆಯರು ಯಾವುದೇ ತೊಂದರೆ ಅನುಭವಿಸಬಾರದು ಎಂದು ಪೊಲೀಸ್ ಕಮಿಶನರ್ ರಾಜೇಶ್ ಅಗರ್‌ವಾಲ್ ಈ ಯೋಜನೆಯನ್ನು ಶುರು ಮಾಡಿದ್ದಾರೆ.

  • ಮಧ್ಯರಾತ್ರಿ ಪತಿ, ಪತ್ನಿ ನಡುವೆ ಜಗಳ – ಪತ್ನಿಯನ್ನು ಸಮಾಧಾನಿಸಲು ಹೋಗಿ ಇಬ್ರೂ ಆತ್ಮಹತ್ಯೆ

    ಮಧ್ಯರಾತ್ರಿ ಪತಿ, ಪತ್ನಿ ನಡುವೆ ಜಗಳ – ಪತ್ನಿಯನ್ನು ಸಮಾಧಾನಿಸಲು ಹೋಗಿ ಇಬ್ರೂ ಆತ್ಮಹತ್ಯೆ

    – 14 ವರ್ಷಗಳ ಹಿಂದೆ ಪ್ರೀತಿಸಿ ಮದ್ವೆಯಾಗಿದ್ದ ಜೋಡಿ

    ಚಂಢೀಗಡ್: ಕೌಟುಂಬಿಕ ಕಲಹದಿಂದ ಪತಿ-ಪತ್ನಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ರಾತ್ರಿ ಹರಿಯಾಣದ ಯಮುನಾನಗರದಲ್ಲಿ ನಡೆದಿದೆ.

    ನೀರಜ್(37) ಹಾಗೂ ನಿಶಾ (35) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಬುಧವಾರ ರಾತ್ರಿ ಸುಮಾರು 12 ಗಂಟೆಗೆ ನೀರಜ್ ಹಾಗೂ ನಿಶಾ ನಡುವೆ ಜಗಳ ನಡೆದಿತ್ತು. ಬಳಿಕ ಇಬ್ಬರು ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    14 ವರ್ಷಗಳ ಹಿಂದೆ ನೀರಜ್ ಹಾಗೂ ನಿಶಾ ಪ್ರೀತಿಸಿ ಮದುವೆಯಾಗಿದ್ದರು. ನೀರಜ್ ಫೋಟೋಗ್ರಾಫರ್ ಕೆಲಸ ಮಾಡುತ್ತಿದ್ದನು. ಮದುವೆಯಾದ ಬಳಿಕ ಇಬ್ಬರು ಯಮುನಾನಗರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗೆ 8 ಹಾಗೂ 14 ವರ್ಷದ ಪುತ್ರರು ಇದ್ದಾರೆ. ಪೋಷಕರ ಪ್ರಕಾರ ಇಬ್ಬರು ಯಾವಾಗಲೂ ಜಗಳವಾಡುತ್ತಿದ್ದರು.

    ಬುಧವಾರ ರಾತ್ರಿ ಕೂಡ ನೀರಜ್ ಹಾಗೂ ನಿಶಾ ನಡುವೆ ಜಗಳವಾಗಿದೆ. ಜಗಳದಿಂದ ಕೋಪಗೊಂಡು ನಿಶಾ ಯಮುನಾನಗರ ರೈಲ್ವೆ ನಿಲ್ದಾಣದ ಹಳಿಗೆ ತಲುಪಿದ್ದಳು. ಆಕೆಯನ್ನು ಸಮಾಧಾನ ಮಾಡಲು ನೀರಜ್ ಹಿಂದೆಯೇ ಹೋದನು. ಬಳಿಕ ಅಲ್ಲಿಯೂ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಅಲ್ಲಿಗೆ ಬಂದ ಫಿರೋಜ್‍ಪುರ-ಧನ್‍ಬಾದ್ ಎಕ್ಸ್ ಪ್ರೆಸ್ ರೈಲಿನ ಎದುರು ಜಿಗಿದು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಶಾ ತಂದೆ ಧನಿರಾಮ್, ಇಬ್ಬರ ನಡುವೆ ಯಾವಾಗಲೂ ಜಗಳವಾಗುತ್ತಿತ್ತು. ಹಾಗಾಗಿ ಅವರಿಬ್ಬರು ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರಬಹುದು. ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಜಿಆರ್‌ಪಿ ಪೊಲೀಸ್ ಅಧಿಕಾರಿ ಧರ್ಮಪಾಲ್, ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ಪೋಷಕರಿಗೆ ಮೃತದೇಹಗಳನ್ನು ರವಾನಿಸಲಾಗಿದೆ.