Tag: ಗ್ಲೌಸ್

  • ಕೋವಿಡ್ ರೋಗಿಯನ್ನು ಗುಣಪಡಿಸಲು ನರ್ಸ್ ಐಡಿಯಾಗೆ ಭಾರೀ ಮೆಚ್ಚುಗೆ

    ಕೋವಿಡ್ ರೋಗಿಯನ್ನು ಗುಣಪಡಿಸಲು ನರ್ಸ್ ಐಡಿಯಾಗೆ ಭಾರೀ ಮೆಚ್ಚುಗೆ

    ರಿಯೋ ಡಿ ಜನೈರೋ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಜನರು ಸಾಮಾಜಿಕ ಅಂತರ ಮತ್ತು ಪ್ರತ್ಯೇಕವಾಗಿರುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮನುಷ್ಯ ಏನನ್ನು ಸ್ಪರ್ಶಿಸದೇ ಇರುವುದು ಅಸಾಧ್ಯ. ಆದರೆ ಐಸೋಲೆಷನ್‍ನಲ್ಲಿದ್ದ ಕೋವಿಡ್-19 ರೋಗಿಗೆ ಸಾಂತ್ವನಗೊಳಿಸುವ ಸಲುವಾಗಿ ಬ್ರೆಜಿಲ್ ನರ್ಸ್ ಮಾನವರ ಸ್ಪರ್ಶದ ಅನುಭವಗೊಳಿಸಲು ಒಂದು ನೂತನ ಆಲೋಚನೆ ನಡೆಸಿದ್ದಾರೆ.

    ಹೌದು, ನರ್ಸ್ ಒಬ್ಬರು ಎರಡು ಗ್ಲೌಸ್ ಒಳಗೆ ಬಿಸಿ ನೀರನ್ನು ತುಂಬಿದ್ದಾರೆ. ಬಳಿಕ ನೀರು ತುಂಬಿರುವ ಗ್ಲೌಸ್ ಅನ್ನು ರೋಗಿಯ ಕೈ ಮೇಲೆ ಇರಿಸುವ ಮೂಲಕ ಕಟ್ಟಿದ್ದು, ಮಾನವ ಸ್ಪರ್ಶದ ಭಾವನೆಯನ್ನು ತರಿಸಿದ್ದಾರೆ.

    ಈ ಫೋಟೋವನ್ನು ಸಾದಿಕ್ ಸಮೀರ್ ಭಟ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ದೇವರ ಕೈ’- ಬ್ರೆಜಿಲಿಯನ್ ಕೋವಿಡ್ ಐಸೋಲೇಷನ್ ವಾರ್ಡ್‍ನಲ್ಲಿ ಪ್ರತ್ಯೇಕವಾಗಿರುವ ರೋಗಿಗಳಿಗೆ ಸಾಂತ್ವನ ನೀಡಲು ನರ್ಸ್‍ಯೊಬ್ಬರು ಪ್ರಯತ್ನಿಸಿದ್ದಾರೆ. ಎರಡು ಬಿಸಾಡುವ ಗ್ಲೌಸ್‍ಗಳನ್ನು ತೆಗೆದುಕೊಂಡು ಅದಕ್ಕೆ ಬಿಸಿ ನೀರನ್ನು ತುಂಬಿ ರೋಗಿಯ ಕೈಗೆ ಕಟ್ಟಿದ್ದಾರೆ. ಕೊರೊನಾ ವಾರಿಯರ್ಸ್‍ಗಳಿಗೆ ನನ್ನ ನಮಸ್ಕಾರ ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಹಲವರು ರೀ ಟ್ವೀಟ್ ಮಾಡಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಒಬ್ಬ ರೋಗಿಯನ್ನು ಗುಣಪಡಿಸಲು ಸ್ಪರ್ಶವು ನಿಜವಾಗಿಯೂ ಅತೀ ಅಗತ್ಯವಾದವೆಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

  • ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ವೋಟ್ ಮಾಡಿ ಎಲ್ಲೆಂದರಲ್ಲಿ ಗ್ಲೌಸ್ ಬಿಸಾಕಿದ ಮತದಾರರು!

    ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಉಪಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪೀಣ್ಯ ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ಕಂಡು ಬಂದಿದೆ.

    ಹೌದು. ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಿಸಾಡಲಾಗಿದೆ. ಮತದಾನ ಮಾಡಿದ ಬಳಿಕ ಜನ ಎಲ್ಲೆಂದರಲ್ಲಿ ಹಾಕಿಹೋಗಿದ್ದಾರೆ. ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಒಂದು ಗ್ಲೌಸ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಜನ ಮತದಾನ ಮಾಡಿ ಬಳಿಕ ಗ್ಲೌಸ್ ಗಳನ್ನು ಸಿಕ್ಕ ಸಿಕ್ಕ ಕಡೆ ಬಿಸಾಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಸ್ಟ್‍ಬಿನ್ ವ್ಯವಸ್ಥೆ ಮಾಡಬೇಕಿದೆ.

    ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಆಗ್ಗಾಗ್ಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮತದಾನ ಕೇಂದ್ರದ ಹೊರಗೆ, ಕಾರಿಡಾರ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡ್ತಿದ್ದಾರೆ.

  • ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ 1 ಸಾವಿರ ಗ್ಲೌಸ್ ನೀಡಿದ ಶಾಸಕ ಪುಟ್ಟರಂಗ ಶೆಟ್ಟಿ

    ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ 1 ಸಾವಿರ ಗ್ಲೌಸ್ ನೀಡಿದ ಶಾಸಕ ಪುಟ್ಟರಂಗ ಶೆಟ್ಟಿ

    – ನಾಳೆ ವಿದ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿರತಣೆ

    ಚಾಮರಾಜನಗರ: ಇಂದಿನಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಚಾಮರಾಜನಗರ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.

    ಇದೇ ವೇಳೆ ಚಾಮರಾಜನಗರದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಚೆನ್ನಾಗಿ ಬರೆಯುವಂತೆ ಶಾಸಕರು ಸಲಹೆ ನೀಡಿದ್ದಾರೆ. ಭಯವಿಲ್ಲದೆ ಪರೀಕ್ಷೆ ಬರೆಯುವಂತೆ ಧೈರ್ಯ ತುಂಬಿದ್ದಾರೆ. ಅಲ್ಲದೆ ಕೊಠಡಿ ಶಿಕ್ಷಕರಿಗೆ ಒಂದು ಸಾವಿರ ಗ್ಲೌಸ್ ನೀಡಿದ್ದಾರೆ.

    ಚಾಮರಾಜನಗರ ಕ್ಷೇತ್ರದ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಗ್ಲೌಸ್ ನೀಡಿದ್ದಾರೆ. ನಾಳೆಯಿಂದ ವಿಧ್ಯಾರ್ಥಿಗಳಿಗೆ 5 ಸಾವಿರ ಮಾಸ್ಕ್ ವಿತರಿಸುತ್ತೇನೆಂದು ಭರಸವೆ ಕೂಡ ನೀಡಿದ್ದಾರೆ.

    ಕೊರೊನಾ ಮಹಾಮಾರಿಯ ನರ್ತನದ ನಡುವೆಯೇ ರಾಜ್ಯದಲ್ಲಿ ಇಂದಿನಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ಕೊರೊನಾದಿಂದ ಮೂರು ತಿಂಗಳಿನಿಂದ ಮುಂದೂಡಿಕೆಯಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂದಿನಿಂದ ಜುಲೈ 4ರವರೆಗೆ ನಡೆಯಲಿದೆ.

  • ಮಾಸ್ಕ್ ಅಲ್ಲ ಗ್ಲೌಸ್ ಧರಿಸಿ – ನಟಿ ರಾಗಿಣಿಯಿಂದ ಉಚಿತ ಗ್ಲೌಸ್ ವಿತರಣೆ

    ಮಾಸ್ಕ್ ಅಲ್ಲ ಗ್ಲೌಸ್ ಧರಿಸಿ – ನಟಿ ರಾಗಿಣಿಯಿಂದ ಉಚಿತ ಗ್ಲೌಸ್ ವಿತರಣೆ

    ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜನರ ಸಹಾಯಕ್ಕೆ ಧಾವಿಸಿದ್ದು, ಜನರಿಗೆ ಉಚಿತ ಗ್ಲೌಸ್‍ಗಳನ್ನು ವಿತರಿಸುತ್ತಿದ್ದಾರೆ.

    ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ರಾಗಿಣಿ ರಸ್ತೆಗೆ ಇಳಿದಿದ್ದಾರೆ. ಅಲ್ಲದೆ ಕೊರೊನಾಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್‍ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್‍ಗಳನ್ನು ವಿತರಿಸುತ್ತಿದ್ದಾರೆ. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.

    ರಾಗಿಣಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಮಾಸ್ಕ್ ಬದಲು ಗ್ಲೌಸ್‍ಗಳನ್ನು ಧರಿಸಿ. ಕಾಯಿಲೆ ಬಂದವರು ಮಾಸ್ಕ್ ಗಳನ್ನು ಧರಿಸುತ್ತಾರೆ. ಆದರೆ ನಾವು ನಮ್ಮ ಕೈಗಳಿಂದ ಎಲ್ಲವನ್ನು ಮುಟ್ಟುತ್ತೇವೆ. ಹಾಗಾಗಿ ನಾವು ನಮ್ಮ ಕೈಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಕೊರೊನಾ ವೈರಸ್‍ನಿಂದ ದೂರವಿರಲು ಎಲ್ಲರೂ ಮಾಸ್ಕ್ ಬದಲು ಗ್ಲೌಸ್‍ಗಳನ್ನು ಧರಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಆರೋಗ್ಯ ಇಲಾಖೆ ಜನರಿಗೆ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿತ್ತು. ಜನರು ತಮ್ಮ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ. ತಮ್ಮ ಕೈಯಿಂದ ಕಣ್ಣು, ಬಾಯಿ ಹಾಗೂ ಮೂಗನ್ನು ಪದೇ ಪದೇ ಮುಟ್ಟುವುದನ್ನು ಕಡಿಮೆ ಮಾಡಿಕೊಳ್ಳಿ. ಈ ರೀತಿ ಮಾಡುವ ಮೊದಲು ನಿಮ್ಮ ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್ ಯಿಂದ ತೊಳೆಯಬೇಕು. ಜೊತೆಗೆ ಮಾಸ್ಕ್ ಧರಿಸಲೇಬೇಕು ಎಂದು ಆರೋಗ್ಯ ಇಲಾಖೆ ಹೇಳಿತ್ತು.

  • ಸೇನಾ ಲಾಂಛನ ವಿವಾದ – ಧೋನಿಗೆ ಸೆಹ್ವಾಗ್ ವಿಶೇಷ ಸಲಹೆ

    ಸೇನಾ ಲಾಂಛನ ವಿವಾದ – ಧೋನಿಗೆ ಸೆಹ್ವಾಗ್ ವಿಶೇಷ ಸಲಹೆ

    ನವದೆಹಲಿ: ಸೇನಾ ಲಾಂಛನ ಇರುವ ಕೀಪಿಂಗ್ ಗ್ಲೌಸನ್ನು ಧೋನಿ ಬಳಕೆ ಮಾಡಿದ ವಿವಾದ್ದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಧೋನಿಗೆ ಸಲಹೆ ನೀಡಿದ್ದಾರೆ.

    ಸದ್ಯ ಗ್ಲೌಸ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿ ನಿಯಮಗಳನ್ನು ಮುಂದಿಟ್ಟು ಅವಕಾಶವನ್ನು ನಿರಾಕರಿಸಿದೆ. ಆದರೆ ಈ ಸೇನಾ ಲಾಂಛನವನ್ನು ಗ್ಲೌಸ್ ಬದಲಾಗಿ ಬ್ಯಾಟ್ ಮೇಲೆ ಬಳಸಿದರೆ ಯಾವುದೇ ನಿಯಮ ಉಲ್ಲಂಘನೆ ಆಗಲ್ಲ ಎಂದಿದ್ದಾರೆ.

    ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮನವಿ ತಿರಸ್ಕರಿಸಿದ್ದ ಐಸಿಸಿ, ಯಾವುದೇ ತಂಡದ ಆಟಗಾರರ ಗ್ಲೌಸ್ ಮೇಲೆ 2 ಚಿಹ್ನೆ ಬಳಸಲು ಅವಕಾಶ ಇಲ್ಲ. ಈಗಾಗಲೇ ಧೋನಿ ವಾಣಿಜ್ಯ ಚಿಹ್ನೆಯೊಂದನ್ನು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ 2ನೇ ಚಿಹ್ನೆ ಬಳಸಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.

    ಐಸಿಸಿ ತನ್ನ ನಿಯಮಗಳ ಪರ ಸರಿಯಾಗಿದ್ದು, ಧೋನಿ ಅವರು ಕೂಡ ತಮ್ಮ ಕಡೆಯಿಂದ ಸರಿ ಇದ್ದಾರೆ. ಆದರೆ ಈ ಸಮಸ್ಯೆಗೆ ಪರಿಹಾರ ಎಂದರೆ ಮೊದಲು ಲಿಖಿತವಾಗಿ ಬ್ಯಾಟ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿಯಿಂದ ಅವಕಾಶ ಪಡೆದುಕೊಂಡು ಬಳಕೆ ಮಾಡಬಹುದು ಎಂದಿದ್ದಾರೆ. ಈ ಮೂಲಕ ತಮ್ಮದೇ ಶೈಲಿಯಲ್ಲಿ ಸೆಹ್ವಾಗ್ ಸಮಸ್ಯೆಗೆ ಸಲಹೆ ನೀಡಿದ್ದಾರೆ.

    ಬ್ಯಾಟ್ ಮೇಲೆ 2 ಚಿಹ್ನೆ ಬಳಸಲು ಅವಕಾಶ ಇದ್ದು, ಒಂದು ಬ್ಯಾಟ್ ತಯಾರಕರು ಹಾಗೂ 2ನೇ ಚಿಹ್ನೆ ಬೇರೆ ಸಂಸ್ಥೆಯದ್ದು ಬಳಸಲು ಅವಕಾಶ ಇದೆ. ನಾನು ಕೂಡ ಐಸಿಸಿಯಿಂದ ಅನುಮತಿ ಪಡೆದು 2 ಲೋಗೋ ಬಳಸಿ ಹಲವು ಪಂದ್ಯಗಳನ್ನು ಆಡಿದ್ದೆ ಎಂದಿದ್ದಾರೆ. 40 ವರ್ಷದ ಸೆಹ್ವಾಗ್, ಧೋನಿಗೆ ಸಲಹೆ ನೀಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ದಕ್ಷಿಣ ಆಫಿಕಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ಕೀಪಿಂಗ್ ಗ್ಲೌಸ್ ಮೇಲೆ ಸೇನಾ ಲಾಂಛನವನ್ನು ಬಳಕೆ ಮಾಡಿದ್ದರು. ಧೋನಿ ಅವರು ಸೈನಿಕರ ಮೇಲೆ ಹೊಂದಿರುವ ಪ್ರೀತಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿತ್ತು. ಪರಿಣಾಮ ಐಸಿಸಿ, ಬಿಸಿಸಿಐಗೆ ಧೋನಿ ಗ್ಲೌಸ್ ಮೇಲಿನ ಚಿಹ್ನೆ ತೆಗೆಯುವಂತೆ ಸೂಚನೆ ನೀಡಿತ್ತು. ಆ ಬಳಿಕ ಬಿಸಿಸಿಐ ಪತ್ರದ ಮೂಲಕ ವಿಶೇಷ ಮನವಿ ಮಾಡಿದ ಬಳಿಕವೂ ನಿಯಮಗಳ ಕಾರಣ ನೀಡಿ ಧೋನಿ ಆ ಗ್ಲೌಸ್ ಧರಿಸಲು ಅವಕಾಶ ಇಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿತ್ತು.