Tag: ಗ್ರೇಗ್ ಚಾಪೆಲ್

  • ಇರ್ಫಾನ್ ಪಠಾಣ್‍ನನ್ನು ಉಗ್ರವಾದಿಗೆ ಹೋಲಿಸಿ ಟ್ವೀಟ್- ಬಾಲಿವುಡ್ ನಟಿ ಪ್ರತಿಕ್ರಿಯೆ

    ಇರ್ಫಾನ್ ಪಠಾಣ್‍ನನ್ನು ಉಗ್ರವಾದಿಗೆ ಹೋಲಿಸಿ ಟ್ವೀಟ್- ಬಾಲಿವುಡ್ ನಟಿ ಪ್ರತಿಕ್ರಿಯೆ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಉಗ್ರವಾದಿಗೆ ಹೋಲಿಸಿದ್ದ ಕಾಮೆಂಟ್ ಕುರಿತು ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್ ಪಠಾಣ್ ಬೇಸರ ವ್ಯಕ್ತಪಡಿಸಿದ್ದು, ಇಂತಹ ಕಾಮೆಂಟ್ ನೋಡುತ್ತಿದ್ದರೆ ನಾವು ಎಲ್ಲಿಗೆ ತಲುಪಿದ್ದೇವೆ ಎಂಬ ಅನುಮಾನ ಮೂಡುತ್ತದೆ. ಇದು ಬಹಳ ನಾಚಿಕೆಗೇಡು, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಇರ್ಫಾನ್ ಪ್ರತಿಕ್ರಿಯೆ ಟಾಂಗ್ ನೀಡಿದ್ದಾರೆ.

    ಪಠಾಣ್ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ರಿಚಾ ಚಾಧಾ, ಪಠಾಣ್ ಇದು ಫೇಕ್ ಅಕೌಂಟ್. ನಿಜವಾದ ವ್ಯಕ್ತಿ ಅಲ್ಲ ಎಂದು ಹೇಳಿದ್ದರು. ಈ ವಿಚಾರ ಟ್ವೀಟ್‍ಗೆ ಮರು ಪ್ರತಿಕ್ರಿಯೆ ನೀಡಿದ ಪಠಾಣ್, ಫೇಕ್ ಅಕೌಂಟ್ ಆದರೂ, ಯಾರೋ ಒಬ್ಬರು ಮೆಸೇಜ್ ಮಾಡಬೇಕು ಅಲ್ವಾ ಎಂದು ಹೇಳಿದ್ದರು. ಸದ್ಯ ಇಬ್ಬರ ಸಂಭಾಷಣೆ ಚರ್ಚೆಗೆ ಕಾರಣವಾಗಿದೆ. ಹಲವು ಅಭಿಮಾನಿಗಳು ಪಠಾಣ್‍ರನ್ನು ಉಗ್ರನಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

    ನಡೆದಿದ್ದೇನು?
    ಟೀಂ ಇಂಡಿಯಾ ಮಾಜಿ ಕೋಚ್ ಗ್ರೇಗ್ ಚಾಪೆಲ್ ಕಾರಣದಿಂದ ತನ್ನ ಕೆರಿಯರ್ ನಾಶವಾಯಿತು ಎಂಬ ಆರೋಪಗಳು ವಾಸ್ತವವಲ್ಲ ಎಂದು ಇತ್ತೀಚೆಗೆ ಪಠಾಣ್ ಸಂದರ್ಶನವೊಂದರಲ್ಲಿ ಹೇಳಿದ್ದರು. ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಆಗಲು ಸಚಿನ್ ಕಾರಣ. ರಾಹುಲ್ ದ್ರಾವಿಡ್ ಅವರಿಗೆ ಸಚಿನ್ ಈ ಸಲಹೆ ನೀಡಿದ್ದರು. ಚಾಪೆಲ್ ಭಾರತೀಯರಲ್ಲದ ಕಾರಣ ಅವರ ಮೇಲೆ ಆರೋಪ ಮಾಡಲಾಗುತ್ತಿದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ನೆಟ್ಟಿಗರೊಬ್ಬರು, ಪಠಾಣ್ ಜಮಾತ್ ಉದ್ ದಾವಾ ಸಂಘಟನೆಯ ನಾಯಕ ಹಫೀಜ್ ಸಯಿದ್‍ರಂತೆ ಆಗಬೇಕೆಂದು ಬಯಸಿದಂತಿದೆ ಎಂದು ಟ್ವೀಟ್ ಮಾಡಿದ್ದರು.

    ನಾನು ಉತ್ತಮವಾಗಿ ಸಿಕ್ಸರ್ ಸಿಡಿಸುವ ಸಾಮಥ್ರ್ಯ ಹೊಂದಿದ್ದೇನೆ ಎಂದು ಸಚಿನ್ ಹಾಗೂ ಅಂದು ನಾಯಕರಾಗಿದ್ದ ರಾಹುಲ್ ದ್ರಾವಿಡ್ ಅವರು ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿದ್ದರು. 2005ರ ಶ್ರೀಲಂಕಾ ವಿರುದ್ಧದ ಟೂರ್ನಿಯಲ್ಲಿ ಮೊದಲ ಬಾರಿಗೆ ಟಾಪ್ ಅರ್ಡರ್ ನಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ನೀಡಿದ್ದರು ಎಂದು ಸಂದರ್ಶನದಲ್ಲಿ ಇರ್ಫಾನ್ ಪಠಾಣ್ ಹಳೆಯ ನೆನಪನ್ನು ಮೆಲುಕು ಹಾಕಿದ್ದರು.

  • ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಸಿಡ್ನಿ: ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಎಲ್‍ಬಿಡಬ್ಲೂ ಕುರಿತು ಪ್ರಸ್ತುತ ಇರುವ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿರುವ ಗ್ರೇಗ್ ಚಾಪೆಲ್, ಟೆಸ್ಟ್ ಕ್ರಿಕೆಟ್ ಪ್ರಾಮುಖ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಹೊರತು ಪಡಿಸಿದರೆ ಬೇರೆ ಯಾವ ದೇಶಗಳು ಟೆಸ್ಟ್ ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಚಾಪೆಲ್ ಹೇಳಿದ್ದಾರೆ.

    ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಚಾಪೆಲ್, ಸದ್ಯ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳು ಟಿ20 ಮಾದರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಮಾತ್ರ ಟೆಸ್ಟ್ ಮಾದರಿಗೆ ಪ್ರಾಮುಖ್ಯತೆ ನೀಡುತ್ತಿವೆ. ಈ ಸಮಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಎಂದು ಹೇಳಿದ್ದಾರೆ. ಟೆಸ್ಟ್ ಮಾದರಿ ಜೀವಂತವಾಗಿರುತ್ತದೆ ಎಂಬ ಆಸೆ ಕೊಹ್ಲಿ ಮಾತುಗಳಿಂದ ಅರ್ಥವಾಗುತ್ತಿದೆ. ಒಂದೊಮ್ಮೆ ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಎಲ್ಲಾ ಕ್ರಿಕೆಟ್ ಬೋರ್ಡ್‍ಗಳು ನಷ್ಟ ಅನುಭವಿಸಿವೆ. ಕೆಲ ಬೋರ್ಡ್‍ಗಳು ಆಟಗಾರರಿಗೆ ಅರ್ಧ ವೇತನ ನೀಡುತ್ತಿವೆ. ಕೊರೊನಾದಿಂದ ಪರಿಸ್ಥಿತಿ ತೇರ್ಗಡೆ ಹೊಂದಿದ್ದ ಬಳಿಕ ಹೆಚ್ಚು ಟಿ20 ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ನಿರ್ವಹಿಸಲು ಹಲವು ದೇಶಗಳು ಚಿಂತನೆ ನಡೆಸಿವೆ. ಬಿಸಿಸಿಐ ಕೂಡ ಇದೇ ಚಿಂತನೆಯಲ್ಲಿದೆ. ಟೆಸ್ಟ್ ಮಾದರಿಯ ಕ್ರಿಕೆಟ್ ಪಂದ್ಯಗಳಿಗಿಂತ ಏಕದಿನ, ಟಿ20 ಮಾದರಿಯ ಪಂದ್ಯಗಳಿಂದ ಹೆಚ್ಚು ಆದಾಯ ಲಭ್ಯವಾಗ ಕಾರಣ ಇಂತಹ ಚಿಂತನೆ ನಡೆದಿದೆ ಎಂದು ಚಾಪೆಲ್ ವಿವರಿಸಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾ, ಟೀಂ ಇಂಡಿಯಾ ಟೆಸ್ಟ್ ಟೂರ್ನಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಾಪೆಲ್, ಈ ಬಾರಿ ಟೀಂ ಇಂಡಿಯಾಗೆ ಸಿರೀಸ್ ಗೆಲುವು ಕಷ್ಟವಾಗಲಿದೆ. ಈ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸೀರಿಸ್ ಗೆಲುವು ಪಡೆದಿದ್ದರು ಕೂಡ ಮುಂದಿನ ಟೂರ್ನಿಯಲ್ಲಿ ಇದು ಅಷ್ಟು ಸುಲಭವಲ್ಲ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅವರನ್ನು ಬಹುಬೇಗ ಪೆವಿಲಿಯನ್‍ಗೆ ಕಳುಹಿಸಿದರೆ ಟೀಂ ಇಂಡಿಯಾ ಗೆಲ್ಲುವ ಅವಕಾಶ ಇದೆ ಎಂದಿದ್ದರು.