Tag: ಗ್ರೀನ್ ಕಾರಿಡರ್

  • ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ

    ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ

    – 170 ಕಿಮೀ ರಸ್ತೆ ಮಾರ್ಗದಲ್ಲಿ 3 ಗಂಟೆ ಪ್ರಯಾಣ

    ಬೆಂಗಳೂರು: ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ರಾಮಯ್ಯ ನಾರಾಯಣ ಹೃದಯ ಕೇಂದ್ರಕ್ಕೆ ಜೀವಂತ ಹೃದಯ ಯಶಸ್ವಿಯಾಗಿ ರವಾನೆ ಆಗಿದೆ.

    ಹೃದಯ ಸಾಗಿಸಲು ಗ್ರೀನ್ ಕಾರಿಡರ್ ವ್ಯವಸ್ಥೆ ನಿರ್ಮಿಸಲಾಗಿತ್ತು. ಇದರಿಂದ ಸುಮಾರು 170 ಕಿ. ಮೀ ರಸ್ತೆ ಮಾರ್ಗವನ್ನು 3 ಗಂಟೆಯಲ್ಲಿ ಆಸ್ಪತ್ರೆ ಸೇರಲು ಸಾಧ್ಯವಾಯಿತು.

    ಮುಂಜಾನೆ 7.30ಕ್ಕೆ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯಿಂದ ಹೊರಟ ಅಂಬುಲೆನ್ಸ್ ಮಂಡ್ಯ, ಬಿಡದಿ, ಕೆಂಗೇರಿ ಮಾರ್ಗದ ಮೂಲಕ ಬೆಳ್ಳಗ್ಗೆ 10.30ಕ್ಕೆ ಸರಿಯಾಗಿ ರಾಮಯ್ಯ ನಾರಾಯಣ ಹೃದಯ ಕೇಂದ್ರ ತಲುಪಿತು ಎಂದು ರಾಮಯ್ಯ ನಾರಾಯಣ ಹೃದಯ ಕೇಂದ್ರದ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ಚಾಮರಾಜನಗರ ಮೂಲದ ಶಿವಕುಮಾರ್ ಎಂಬವರಿಗೆ ಹೃದಯಾಘಾತ ಆಗಿತ್ತು. ಹೃದಯ ಕಸಿ ಮಾಡಲು ರಾಮಯ್ಯ ನಾರಾಯಣ ಹೃದಯ ಕೇಂದ್ರದ ವೈದ್ಯರು ನಿರ್ಧರಿಸಿದ್ದರು. ಹೀಗಾಗಿ ಶಿವಕುಮಾರ್ ಕುಟುಂಬಸ್ಥರ ಒಪ್ಪಿಗೆ ಮೆರೆಗೆ ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತಿದೆ. ರಾಮಯ್ಯ ನಾರಾಯಣ ಹೃದಯ ಕೇಂದ್ರದ ವೈದ್ಯರಾದ ಡಾ. ನಾಗಮಲ್ಲೇಶ್, ರವಿಶಂಕರ್ ಶೆಟ್ಡಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ.

  • ಒಂದೇ ತಿಂಗಳಲ್ಲಿ 3 ಜೀವಂತ ಹೃದಯಗಳ ರವಾನೆಗೆ ಸಾಕ್ಷಿಯಾದ ಬೆಂಗಳೂರು!

    ಒಂದೇ ತಿಂಗಳಲ್ಲಿ 3 ಜೀವಂತ ಹೃದಯಗಳ ರವಾನೆಗೆ ಸಾಕ್ಷಿಯಾದ ಬೆಂಗಳೂರು!

    ಬೆಂಗಳೂರು: ಒಂದೇ ತಿಂಗಳಿಗೆ 3 ಜೀವಂತ ಹೃದಯಗಳ ರವಾನೆಗೆ ಬೆಂಗಳೂರು ಸಾಕ್ಷಿಯಾಗಿದೆ.

    ಇಂದು ನಗರದಲ್ಲಿ 2 ಜೀವಂತ ಹೃದಯಗಳು ರವಾನೆಯಗಿದ್ದು, ಜೀವಂತ ಹೃದಯದ ರವಾನೆ ವೇಳೆ ಗ್ರೀನ್ ಕಾರಿಡರ್ ವ್ಯವಸ್ಥೆಯನ್ನು ಮಾಡಿಕೊಡಲಾಗಿತ್ತು. ಒಂದು ನಾರಾಯಣ ಇನ್ಸಿಟ್ಯೂಟ್ ಗೆ ತಲುಪಿದರೆ, ಒಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಹಾಗೂ ಮತ್ತೊಂದು ಯಶವಂತಪುರದಲ್ಲಿರೋ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ನಾರಾಯಣ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ 6 ವರ್ಷದ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದಳು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೆದುಳು ನಿಷ್ಕ್ರಿಯವಾಗಿ ಸಾವನ್ನಪ್ಪಿದ್ದಳು. ಆ ಹೃದಯವನ್ನು ಮಾರ್ಚ್ 8ರಂದು ಎಂಎಸ್ ಆಸ್ಪತ್ರೆಯಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ಗೆ ರವಾನೆ ಮಾಡಲಾಗಿತ್ತು.

    ಒಂದೇ ತಿಂಗಳಲ್ಲಿ ಮೂರು ಜೀವಂತ ಹೃದಯ ರವಾನೆಗೆ ಬೆಂಗಳೂರು ಸಾಕ್ಷಿಯಾಗಿದೆ.