Tag: ಗ್ರಾಮ ವಾಸ್ತವ್ಯ

  • ಸಿಎಂ ತೆರಳ್ತಿದ್ದ ಬಸ್ ಹಿಂದೆ ಓಡೋಡಿ ಬಂದ ಅಜ್ಜಿಯಿಂದ ಮನವಿ

    ಸಿಎಂ ತೆರಳ್ತಿದ್ದ ಬಸ್ ಹಿಂದೆ ಓಡೋಡಿ ಬಂದ ಅಜ್ಜಿಯಿಂದ ಮನವಿ

    ಯಾದಗಿರಿ: ಮುಖ್ಯಮಂತ್ರಿಗಳು ಇಂದಿನಿಂದ ಯಾದಗಿರಿ ಜಿಲ್ಲೆಯ ಚಂಡರಕಿಯಲ್ಲಿ ಗ್ರಾಮವಾಸ್ತವ್ಯವನ್ನು ಕೈಗೊಂಡಿದ್ದು, ಹೀಗಾಗಿ ಸಿಎಂ ಅವರು ಇಂದು ಬಸ್ ನಲ್ಲಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು.

    ಮುಖ್ಯಮಂತ್ರಿಗಳು ಬಸ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅಜ್ಜಿಯೊಬ್ಬರು ಹಿಂದಿನಿಂದ ಓಡಿಕೊಂಡು ಬಂದಿದ್ದಾರೆ. ಇದನ್ನು ಗಮನಿಸಿದ ಸಿಎಂ ಅವರು ಬಸ್ ನಿಧಾನಗೊಳಿಸುವಂತೆ ಚಾಲಕರಲ್ಲಿ ಹೇಳಿ ಅಜ್ಜಿಯ ಮನವಿಯನ್ನು ಆಲಿಸಿದ್ದಾರೆ.

    ಅಜ್ಜಿಯ ಮನವಿಯೇನು?
    ಬಸ್ ಬಳಿ ಓಡಿ ಬಂದ ಅಜ್ಜಿ, ನಮಸ್ಕಾರ ಸಿಎಂ ಸಾಹೇಬರೇ.. ನೋಡಿ ನಮಗೆ ಎರಡೂವರೆ ಸಾವಿರ ಪಗಾರ(ಸಂಬಳ) ಹೆಚ್ಚಿಗೆ ಆಗಿಲ್ಲ. ಹೀಗಾಗಿ ಜಾಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಿಎಂ ಅವರು ಆಯ್ತು ಜಾಸ್ತಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೆ ಅಜ್ಜಿ 600 ಮಕ್ಕಳಿಗೆ ಅಡುಗೆ ಮಾಡಬೇಕು. ದಯಮಾಡಿ ಜಾಸ್ತಿ ಮಾಡಿಸಿಕೊಡಿ ಎಂದು ಹೇಳಿದ್ದಕ್ಕೆ, ಇಲ್ಲಿ ಅಡುಗೆ ಕೆಲಸ ಮಾಡುತೀರಾ. ಸರಿ ಮಾಡಿಸಿಕೊಡುತ್ತೇನೆ ಎಂದು ಸಿಎಂ ಅವರು ಅಜ್ಜಿಗೆ ಭರವಸೆ ಮಾತುಗಳನ್ನಾಡಿದ ಪ್ರಸಂಗ ನಡೆಯಿತು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗ್ರಾಮ ವಾಸ್ತವ್ಯಕ್ಕಾಗಿ ಸಿಎಂ ರೈಲು, ಕೆಎಸ್‌ಆರ್‌ಟಿಸಿ ಯಾನ – ಸಿಎಂ ಸ್ವಾಗತಕ್ಕೆ ಸಜ್ಜಾಗಿದೆ ಚಂಡರಕಿ ಗ್ರಾಮ

    ಗ್ರಾಮ ವಾಸ್ತವ್ಯಕ್ಕಾಗಿ ಸಿಎಂ ರೈಲು, ಕೆಎಸ್‌ಆರ್‌ಟಿಸಿ ಯಾನ – ಸಿಎಂ ಸ್ವಾಗತಕ್ಕೆ ಸಜ್ಜಾಗಿದೆ ಚಂಡರಕಿ ಗ್ರಾಮ

    ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ, ಆಪರೇಷನ್ ಕಮಲ ರಗಳೆ ಹಾಗೂ ಮೈತ್ರಿ ಪಕ್ಷದ ಜೊತೆಗಿನ ರಾಜಕೀಯದಿಂದ ಹೊರ ಬಂದಂತೆ ಇರುವ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಯಾದಗಿರಿಗೆ ರೈಲು ಹತ್ತಿ ಪ್ರಯಾಣ ಆರಂಭಿಸಿದ್ದಾರೆ.

    ಕಳೆದ ಗ್ರಾಮ ವಾಸ್ತವ್ಯಕ್ಕಿಂತಲೂ ಭಿನ್ನವಾಗಿ ಈ ಬಾರಿಯ ಕಾರ್ಯಕ್ರಮ ಇರುತ್ತೆ ಎಂದಿರುವ ಮುಖ್ಯಮಂತ್ರಿಗಳು, ಸಮಸ್ಯೆಗೆ ಕಿವಿಗೊಟ್ಟು, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡುವ ಯತ್ನಕ್ಕೆ ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿವೊಂದಿಗೆ ತಮ್ಮ ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಅವರು, ಕಳೆದ ಬಾರಿಗಿಂತ ಈ ಬಾರಿಯ ಗ್ರಾಮ ವಾಸ್ತವ್ಯ ಭಿನ್ನವಾಗಿರುತ್ತದೆ. ಏಕೆಂದರೆ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ನನಗೆ ಹೆಚ್ಚಿನ ಸಮಯ ಲಭಿಸಲಿಲ್ಲ. ಅಲ್ಲದೇ ಈ ಬಾರಿ ನನಗೆ ಸುಮಾರು ವರ್ಷದ ಅನುಭವವಿದ್ದು, ಯಶಸ್ವಿಯಾಗಿ ಈ ಬಾರಿ ಕಾರ್ಯಕ್ರಮ ನಡೆಯಲಿದೆ ಎಂದರು.

    ಇದೇ ವೇಳೆ ಪಬ್ಲಿಕ್ ಟಿವಿ ಗ್ರಾಮವಾಸ್ತವ್ಯದ ಬಗ್ಗೆ ಮಾಡಿರುವ ಸರಣಿ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ರಾಮ ವಾಸ್ತವ್ಯದ ಬಗ್ಗೆ ನಿಮ್ಮ  ವರದಿಗಳ ಅಂಶಗಳನ್ನು ನಾನು ಪರಿಗಣಿಸಿದ್ದೇನೆ. ಆ ಮೂಲಕ ಮುಂದಿನ ಯೋಜನೆಯಲ್ಲಿ ಅವುಗಳನ್ನು ಅಳವಡಿಕೊಂಡಿದ್ದೇನೆ ಎಂದರು.

    ತಡವಾಗಿ ಕಾರ್ಯಕ್ರಮ ಆರಂಭವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ 2ನೇ ಬಾರಿಗೆ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ವಿಶ್ರಾಂತಿ ಪಡೆಯುವ ಅವಕಾಶ ಲಭಿಸಲಿಲ್ಲ. ಚುನಾವಣೆ, ಮೈತ್ರಿ ಸರ್ಕಾರ ಕಾರ್ಯಕ್ರಮದಲ್ಲಿ ವಿಶ್ರಾಂತಿ ಪಡೆಯುವ ಸಮಯ ಸಿಗಲಿಲ್ಲ. ಆದ್ದರಿಂದ ತಜ್ಞ ವೈದ್ಯರು ನನಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಈಗ ಈ ಯೋಜನೆಗೆ ಜಾರಿಯಾಗಿದೆ ಮುಂದಿನ 4 ವರ್ಷಗಳ ಕಾಲ ಮುಂದುವರಿಯಲಿದೆ ಎಂದರು.

    ಮುಂದಿನ ದಿನಗಳಲ್ಲಿ ತಿಂಗಳಿಗೆ 4 ದಿನಗಳ ಕಾಲ ಅಂದರೆ ವಾರಕ್ಕೆ 1 ದಿನ ಗ್ರಾಮ ವಾಸ್ತವ್ಯ ನಡೆಸುವ ಉದ್ದೇಶವಿದೆ. ಈ ಬಗ್ಗೆ ನನ್ನ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ವಾರದಲ್ಲಿ 1 ದಿನ ಮಾತ್ರ ವಿಶ್ರಾಂತಿ ಪಡೆದು, ಉಳಿದ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶವಿದೆ ಎಂದರು. ಅಲ್ಲದೇ ನನಗೆ ಈ ಕಾರ್ಯಕ್ರಮ ಜನ ಸಾಮಾನ್ಯರ ಜೀವನ ತಿಳಿಯಲು ಸಹಕಾರಿ ಆಗಿತ್ತು. ಕಳೆದ ಗ್ರಾಮ ವಾಸ್ತವ್ಯದಲ್ಲೂ ನಾನು ಗ್ರಾಮಸ್ಥರ ನಿರೀಕ್ಷೆಯನ್ನು ಈಡೇಸಿದ್ದು, 20 ತಿಂಗಳು ಮಾತ್ರ ಅಧಿಕಾರದಲ್ಲಿ ಇದ್ದ ಕಾರಣ ಕೆಲ ಯೋಜನೆಗಳನ್ನು ಅನುಷ್ಟಾನ ತರಲು ಸಾಧ್ಯವಾಗಿಲ್ಲ. ಈ ಬಾರಿ ನನಗೆ ಆಡಳಿತ ಅನುಭವ ಜೊತೆಯಾಗಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವ ಕಾರ್ಯ ನಡೆಯಲಿದೆ ಎಂದರು.

    ಇತ್ತ ಬೆಂಗಳೂರು ರೈಲು ನಿಲ್ದಾಣದಿಂದ ಕರ್ನಾಟಕ ಎಕ್ಸ್ ಪ್ರೆಸ್‍ನಲ್ಲಿ ಯಾದಗಿರಿಗೆ ಪಯಣಿಸಿರುವ ಸಿಎಂ ಅವರು, ಶುಕ್ರವಾರ ನಸುಕಿನ ಜಾವ 4 ಗಂಟೆಗೆ ತಲುಪಲಿದ್ದಾರೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಹೊರಟ ರೈಲು ಹಿಂದೂಪುರ, ಪೆನಕೊಂಡ ಜಂಕ್ಷನ್, ಪುಟ್ಟಪರ್ತಿ, ಅನಂತಪುರ, ಗುಂತ್ಕಲ್ ಜಂಕ್ಷನ್, ಮಂತ್ರಾಲಯ. ರಾಯಚೂರು ಜಂಕ್ಷನ್ ಮಾರ್ಗವಾಗಿ ಯಾದಗಿರಿ ತಲುಪಲಿದೆ. ಯಾದಗಿರಿಯಿಂದ ಸಿಎಂ ಅವರು ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಅಲ್ಲಿಂದ ಗುರುಮಿಠಕಲ್‍ನ ಚಂಡರಕಿ ಗ್ರಾಮಕ್ಕೆ ಮುಖ್ಯಮಂತ್ರಿಗಳು ತೆರಳಲಿದ್ದಾರೆ.

    ಚಂಡರಕಿ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನತಾದರ್ಶನ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜನತಾದರ್ಶನ ಮುಗಿದ ಬಳಿಕ ಸಂಜೆಯೇ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶಾಲಾ ಶಿಕ್ಷಕರು, ಮಕ್ಕಳ ಜೊತೆ ಊಟ ಮಾಡಿ, ಶಾಲೆಯ ಕಾರ್ಯಾಲಯ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕಲಬುರಗಿಯ ಹೇರೂರಿನಲ್ಲಿ ರಸ್ತೆ, ಡಾಂಬರ್ ಭಾಗ್ಯ- ಸಿಎಂ ಗ್ರಾಮ ವಾಸ್ತವ್ಯಕ್ಕೆ ಅದ್ಧೂರಿ ತಯಾರಿ

    ಕಲಬುರಗಿಯ ಹೇರೂರಿನಲ್ಲಿ ರಸ್ತೆ, ಡಾಂಬರ್ ಭಾಗ್ಯ- ಸಿಎಂ ಗ್ರಾಮ ವಾಸ್ತವ್ಯಕ್ಕೆ ಅದ್ಧೂರಿ ತಯಾರಿ

    ಕಲಬುರಗಿ: ಜೂನ್ 22ರಂದು ಕಲಬುರಗಿಯ ಹೇರೂರ ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದೀಗ ಇಡೀ ಜಿಲ್ಲಾಡಳಿತವೇ ಆ ಗ್ರಾಮದಲ್ಲಿ ಠಿಕಾಣಿ ಹೂಡಿದೆ. ಇನ್ನೂ ಡಾಂಬರಿಕರಣವೇ ಕಾಣದ ರಸ್ತೆಗಗಳಿಗೆ ಇದೀಗ ಡಾಂಬರ್ ಭಾಗ್ಯ ಕೂಡಿ ಬಂದಂತಾಗಿದೆ.

    ಹೌದು. ದಶಕಗಳಿಂದ ಡಾಂಬರೀಕರಣ ಕಾಣದ ಕಲಬುರಗಿ ಜಿಲ್ಲೆ ಅಫಜಲ್ಪುರ ಮತಕ್ಷೇತ್ರದ ಹೇರೂರ(ಬಿ) ಗ್ರಾಮದಲ್ಲಿ ಸಿಎಂ ಬರುತ್ತಾರೆ ಎಂದು ಹೊಸ ರಸ್ತೆಯನ್ನೇ ನಿರ್ಮಿಸುತ್ತಿದ್ದಾರೆ. ಈ ಮೂಲಕ ಜೂನ್ 22ರಂದು ಗ್ರಾಮ ವಾಸ್ತವ್ಯಕ್ಕೆ ಬರುವ ಸಿಎಂಗೆ ಅದ್ಧೂರಿ ಸ್ವಾಗತ ನೀಡಲು ತಯಾರಿ ನಡೆದಿದೆ.

    ಇದನ್ನೇ ಅಸ್ತ್ರ ಮಾಡಿಕೊಂಡ ಇಲ್ಲಿನ ಗ್ರಾಮಸ್ಥರು, ರಸ್ತೆ ನಿರ್ಮಿಸಿದಂತೆ ಒಂದು ಬಸ್ ಸೌಕರ್ಯ ನೀಡಿದ್ದರೆ, ಈ ಕುಗ್ರಾಮದ ವಿದ್ಯಾರ್ಥಿಗಳು ಮತ್ತು ರೈತರು ಕಲಬುರಗಿ ನಗರಕ್ಕೆ ಸಲೀಸಾಗಿ ಹೋಗಬಹುದು. ಹೀಗಾಗಿ ಸಿಎಂ ಇತ್ತ ಗಮನಹರಿಸಲಿ ಎಂದು ವಿದ್ಯಾರ್ಥಿಗಳಾದ ರಾಜೇಶ್, ವಿವೇಕ್ ಹೇಳಿದ್ದಾರೆ.

    ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಫರ್ತಾಬಾದ್ ಹೋಬಳಿಯಿಂದ ಹೇರೂರ ಗ್ರಾಮ 25 ಕಿಮೀ ದೂರವಿದ್ದು, ಈ ಗ್ರಾಮಕ್ಕೆ ಫರ್ತಾಬಾದ್‍ನಿಂದ ಹೋಗಲು ಸರಿಯಾದ ರಸ್ತೆ ಇರಲಿಲ್ಲ. ಆದರೆ ಇದೀಗ ಸಿಎಂ ಆಗಮನದ ಹಿನ್ನೆಲೆಯಲ್ಲಿ ಫರ್ತಾಬಾದ ಹೋಬಳಿಯಿಂದ ಹೇರೂರ(ಬಿ)ಗ್ರಾಮದವರೆಗೆ ರಸ್ತೆ ನಿರ್ಮಿಸಲಾಗುತ್ತಿದೆ. ಇದೆಲ್ಲ ಓಕೆ ಆದರೆ ಈ ಹಿಂದೆ ನೀವು ಇದೇ ಅಫಜಲ್ಪುರ ಕ್ಷೇತ್ರದ ಮಣ್ಣೂರಿನಲ್ಲಿ ಸಹ 2006ರಲ್ಲಿ ಸಿಎಂ ಆಗಿದ್ದಾಗ ವಾಸ್ತವ್ಯ ಮಾಡಿದ್ದೀರಿ. ಅಲ್ಲಿ ನೀವು ನೀಡಿದ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿವೆ. ಹೀಗಾಗಿ ಹೇರೂರ(ಬಿ)ಗ್ರಾಮದ ಜೊತೆ ಮಣ್ಣುರ ಗ್ರಾಮಕ್ಕೆ ನೀಡಿದ ಭರವಸೆ ಪೂರೈಸಿ ಎಂದು ಅಫಜಲ್ಪುರ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಆಗ್ರಹಿಸಿದ್ದಾರೆ.

    ಸದ್ಯ ಮುಖ್ಯಮಂತ್ರಿಯವರ ಆಗಮನಕ್ಕಾಗಿ ಹೇರೂರ(ಬಿ) ಗ್ರಾಮದ ಜನ ಅಪಾರ ನೀರಿಕ್ಷೆಯಿಟ್ಟು ಕಾದು ಕುಳಿತಿದ್ದಾರೆ. ಆದರೆ ಈ ಹಿಂದೆ ವಾಸ್ತವ್ಯ ಮಾಡಿದಂತೆ ಆಶ್ವಾಸನೆ ನೀಡಿ ಸಿಎಂ ಮಲಗಿ ಹೋಗಬಾರದು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.

  • ಅಧಿಕಾರಿಗಳ ಮಾತು ಕೇಳಿ ಸಿಎಂ ಗ್ರಾಮವಾಸ್ತವ್ಯ ಹೂಡಿದ್ದ ಮನೆ ಮಾಲೀಕ ಸಾಲಗಾರನಾದ

    ಅಧಿಕಾರಿಗಳ ಮಾತು ಕೇಳಿ ಸಿಎಂ ಗ್ರಾಮವಾಸ್ತವ್ಯ ಹೂಡಿದ್ದ ಮನೆ ಮಾಲೀಕ ಸಾಲಗಾರನಾದ

    ಮಂಡ್ಯ: ಸಿಎಂ ಗ್ರಾಮ ವಾಸ್ತವ್ಯದಿಂದ ಊರು ಅಭಿವೃದ್ಧಿಯಾಯ್ತು ಆದರೆ ಬಡ ಮನೆ ಮಾಲೀಕ ಮಾತ್ರ ಸಾಲಗಾರನಾಗಿದ್ದಾನೆ.

    2006ರ ನವೆಂಬರ್ ನಲ್ಲಿ ಕೆ.ಆರ್.ಪೇಟೆ ತಾಲೂಕಿನ ನವಿಲುಮಾರನಹಳ್ಳಿಯ ಮಾಯಿಗೌಡ ಮನೆಯಲ್ಲಿ ಸಿಎಂ ಅವರು ವಾಸ್ತವ್ಯ ಹೂಡಿದ್ದರು. ಸಿಎಂ ವಾಸ್ತವ್ಯದ ಹಿನ್ನೆಲೆಯಲ್ಲಿ ಮನೆ ದುರಸ್ತಿ, ಮನೆ ಮುಂದಿನ ಗುಂಡಿ ಮುಚ್ಚಿಸುವಂತೆ ಅಧಿಕಾರಿಗಳು ಸೂಚಿಸಿದ್ದರು.

    ಈಗ ನೀವೇ ಹಣ ಹಾಕಿ ಮನೆ ದುರಸ್ತಿ ಮಾಡಿಸಿ, ಮನೆ ಮುಂದಿನ ಗುಂಡಿ ಮುಚ್ಚಿಸಿ ಹಾಗೂ ಗ್ರಾಮದಲ್ಲಿ ಅಶ್ವಥ ಕಟ್ಟೆ ನಿರ್ಮಿಸಬೇಕು. ಗ್ರಾಮ ವಾಸ್ತವ್ಯದ ಬಳಿಕ ಹಣ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆಯಂತೆ ಮಾಯಿಗೌಡ ಅವರು 1.20 ಲಕ್ಷ ರೂ. ಸಾಲ ಮಾಡಿ ಕಾಮಗಾರಿ ಮುಗಿಸಿದ್ದರು. ಸಿಎಂ ವಾಸ್ತವ್ಯ ಮಾಡಿ ಹೋದ ಬಳಿಕ ಅಧಿಕಾರಿಗಳು ಬಿಲ್ ಪಾವತಿಸಿಲ್ಲ.

    ಈ ಬಗ್ಗೆ ಸಚಿವ ಸಿ.ಎಸ್.ಪುಟ್ಟರಾಜು ಬಳಿಯೂ ಹಲವು ಬಾರಿ ನಾನು ಮನವಿ ಮಾಡಿದ್ದೆ. ಅಲ್ಲದೆ ಸಿಎಂ ಅವರಿಗೆ ಪತ್ರ ಬರೆದರೂ ಪ್ರಯೋಜನವಾಗಲಿಲ್ಲ ಎಂದು ಮನೆ ಮಾಲೀಕ ಮಾಯಿಗೌಡ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಮಾಡಿದ ಸಾಲ ತೀರಿಸಲು ಹಲವಾರು ವರ್ಷಗಳಿಂದ ಹೆಣಗಾಡಿದ ಮಾಯಿಗೌಡ, ಸಾಲದ ಒತ್ತಡ ಜಾಸ್ತಿಯಾಗಿದ್ದರಿಂದ ತನ್ನ ಜಮೀನಿನಲ್ಲಿದ್ದ ಮರಗಳನ್ನು ಮಾರಿ ಸಾಲ ತೀರಿಸಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯದಿಂದ ಊರು ಅಭಿವೃದ್ಧಿ ಕಂಡಿದೆ. ಆದರೆ ನಮ್ಮ ಮನೆಯಲ್ಲಿ ಸಿಎಂ ಉಳಿದುಕೊಂಡಿದ್ದಕ್ಕೆ ನಾನು ಸಾಲ ಮಾಡಿಕೊಳ್ಳಬೇಕಾಯ್ತು. ಇದರಲ್ಲಿ ಸಿಎಂ ಅವರ ತಪ್ಪಿಲ್ಲ. ಅಧಿಕಾರಿಗಳು ಹಣ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸಿಎಂ ಎಚ್ಚರ ವಹಿಸಲಿ ಎಂದು ಮಾಯಿಗೌಡ ಸಲಹೆ ನೀಡಿದ್ದಾರೆ.

  • ಬಿಎಸ್‍ವೈಗೆ ಈಗ ಜ್ಞಾನೋದಯವಾಗಿದೆ, ಅದಕ್ಕೆ ಬರ ಪ್ರವಾಸ – ಸಚಿವ ನಾಡಗೌಡ

    ಬಿಎಸ್‍ವೈಗೆ ಈಗ ಜ್ಞಾನೋದಯವಾಗಿದೆ, ಅದಕ್ಕೆ ಬರ ಪ್ರವಾಸ – ಸಚಿವ ನಾಡಗೌಡ

    ರಾಯಚೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಈಗ ಜ್ಞಾನೋದಯವಾಗಿದೆ. ಅದಕ್ಕೆ ರಾಜ್ಯದಲ್ಲಿ ಬರ ಪ್ರವಾಸ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಒಂದು ವರ್ಷ ಸಿಎಂ ಆಗುವುದರಲ್ಲೆ ಯಡಿಯೂರಪ್ಪ ಕಾಲ ಕಳೆದರು. ಈಗ ಅವರಿಗೆ ಜ್ಞಾನೋದಯವಾಗಿದೆ. ಅದಕ್ಕೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುವ ಕಡೆ ಪ್ರವಾಸ ಮಾಡುತ್ತಿದ್ದಾರೆ. ಯಡಿಯೂರಪ್ಪರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. 15 ಸಾವಿರ ಕೋಟಿ ಕೇಂದ್ರದಿಂದ ಬಂದಿಲ್ಲ ಅನ್ನೋದು ಅವರಿಗೆ ಗೊತ್ತಿಲ್ವಾ? ಹಣ ಬಿಡುಗಡೆ ಮಾಡಲು ಆಗದ ಕೇಂದ್ರ ಸರ್ಕಾರ ದಿವಾಳಿಯಾಗಿದೆಯಾ ಎಂದು ಪ್ರಶ್ನೆ ಮಾಡಿದರು.

    ಇದೇ ವೇಳೆ ರಾಯಚೂರು ವಿವಿ ಹಾಗೂ ಐಐಐಟಿ ಈ ವರ್ಷ ಆರಂಭವಾಗಲಿದೆ. ಐಐಐಟಿಗೆ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ಬೇರೆಡೆ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಐಐಐಟಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯದ ಬಗ್ಗೆ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಮಾಡುವ ಗ್ರಾಮವನ್ನು ನಾಳೆ ಅಂತಿಮ ಮಾಡುತ್ತೇವೆ. ಮಾನ್ವಿ ತಾಲೂಕಿನ ಗ್ರಾಮವೊಂದರಲ್ಲಿ ಜೂನ್ 28 ರಂದು ಸಿಎಂ ವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದರು.

  • ಯೋಜನೆ ರೂಪಿಸಿ ಆಮೇಲೆ ಗ್ರಾಮ ವಾಸ್ತವ್ಯ ಮಾಡಿ- ಸಿಎಂ ವಿರುದ್ಧ ಪೂಜಾರಿ ಕಿಡಿ

    ಯೋಜನೆ ರೂಪಿಸಿ ಆಮೇಲೆ ಗ್ರಾಮ ವಾಸ್ತವ್ಯ ಮಾಡಿ- ಸಿಎಂ ವಿರುದ್ಧ ಪೂಜಾರಿ ಕಿಡಿ

    – ಸರ್ಕಾರದ ವಿರುದ್ಧ 3 ದಿನ ನಿರಂತರ ಪ್ರತಿಭಟನೆ

    ಉಡುಪಿ: ಸಿಎಂ ಕುಮಾರಸ್ವಾಮಿ ಮಾಡಲು ಹೊರಟಿರುವ ಗ್ರಾಮ ವಾಸ್ತವ್ಯ ಅರ್ಥರಹಿತವಾದದ್ದು. ಮೊದಲು ಯೋಜನೆ ರೂಪಿಸಿ, ಆಮೇಲೆ ಗ್ರಾಮ ವಾಸ್ತವ್ಯ ಮಾಡಿ ಎಂದು ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದ್ದಾರೆ.

    ಉಡುಪಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನ ಜಾನುವಾರುಗಳು ಗುಳೆ ಎದ್ದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ರಾಜ್ಯದಲ್ಲಿ ಅಭಿವೃದ್ಧಿ ಯೋಜನೆ ರೂಪಿಸದೆ ಗ್ರಾಮ ವಾಸ್ತವ್ಯದಿಂದ ಉಪಯೋಗವಿಲ್ಲ. ಕುಮಾರಸ್ವಾಮಿ ಅವರ ಹಳೆಯ ಗ್ರಾಮ ವಾಸ್ತವ್ಯದ ಫಲಿತಾಂಶವೇನು? ರಾಜ್ಯದ ಜನತೆಯ ಪ್ರಶ್ನೆಗೆ ಉತ್ತರಿಸಿ ಗ್ರಾಮ ವಾಸ್ತವ್ಯ ಮಾಡಿ ಎಂದರು.

    ಈ ನಡುವೆ ವಿಧಾನ ಸೌಧಕ್ಕೆ ಯಾವ ಮಂತ್ರಿಗಳು ಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಯ ಸಮಸ್ಯೆಯ ಬಗ್ಗೆ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕೊಟ್ಟ ಹಣವನ್ನು ರಾಜ್ಯ ಪೂರ್ಣ ಖರ್ಚು ಮಾಡಿಲ್ಲ ಎಂದು ಆರೋಪಿಸಿದರು.

    ಮೂರು ದಿನ ಪ್ರತಿಭಟನೆ:
    ಜಿಂದಾಲ್ ಕಂಪನಿಗೆ ಸರ್ಕಾರ ಅಕ್ರಮವಾಗಿ ಜಮೀನು ಕೊಡಲು ಮುಂದಾಗಿರುವ ಸರ್ಕಾರದ ನಡೆಯನ್ನು ಬಿಜೆಪಿ ಖಂಡಿಸುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. 13 ರಿಂದ 15 ರವರೆಗೆ ಬೆಂಗಳೂರಲ್ಲಿ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

    3667 ಎಕ್ರೆ ಭೂಮಿಯನ್ನು ಶುದ್ಧ ಕ್ರಯಪತ್ರ ಮಾಡಲು ಸಮ್ಮಿಶ್ರ ಸರ್ಕಾರ ಹೊರಟಿದೆ. ಸರ್ಕಾರ ಎಕರೆಗೆ 1.20 ಲಕ್ಷ ರೂ. ಕೊಡಲು ಮುಂದಾಗಿದೆ. ಆದರೆ ಆ ಜಮೀನು ಎಕರೆಗೆ ಎರಡು ಕೋಟಿ ರೂ. ಬೆಲೆ ಬಾಳುತ್ತದೆ. ಇದಕ್ಕೆ ಹೊರತಾಗಿ ಜಿಂದಾಲ್ ಸಂಸ್ಥೆಯಿಂದ ಸರ್ಕಾರಕ್ಕೆ 1,500 ಕೋಟಿ ರೂ. ಬಾಕಿಯಿದೆ ಎಂದು ಆರೋಪಿಸಿದರು.

    ಯೋಜನೆ ವಿರೋಧಿಸಿ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇಷ್ಟಾದರೂ ಸರ್ಕಾರ ನಿಲುವು ಬದಲಿಸಿಲ್ಲ. ರಾಜ್ಯ ಸರ್ಕಾರದ ಹಲವು ಲೋಪದೋಷದ ವಿರುದ್ಧ ಬೆಂಗಳೂರಲ್ಲಿ ಈ ಪ್ರತಿಭಟನೆ ನಡೆಯುತ್ತದೆ ಎಂದು ಹೇಳಿದರು.

  • ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ- ಯಡಿಯೂರಪ್ಪ

    ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ- ಯಡಿಯೂರಪ್ಪ

    ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರ ಮಗ ನಿಖಿಲ್ ಯಾವ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ. ನಾನು ಹೇಳುತ್ತೇನೆ ಯಾವುದೇ ಕಾರಣಕ್ಕೂ ಚುನಾವಣೆ ನಡೆಯುವುದಿಲ್ಲ. ಅಧಿಕಾರ ನಡೆಸಲು ಆದರೆ ನಡೆಸಲಿ, ಆಗದಿದ್ದರೆ ಬಿಟ್ಟು ಹೋಗಲಿ. ಈ ಸರ್ಕಾರ ಬಹಳ ದಿನ ಇರುತ್ತದೆ ಎಂದು ಯಾರಿಗೂ ವಿಶ್ವಾಸವಿಲ್ಲ. ಜನರ ಬಳಿ ಹೋಗಲು ಇನ್ನೂ ಐದು ವರ್ಷ ಬಾಕಿಯಿದೆ ಎಂದು ಹೇಳಿದರು.

    ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ಕೊಡುವುದು ಪ್ರಧಾನಿಗಳಿಗೆ ಬಿಟ್ಟ ವಿಚಾರ ಎಂದ ಅವರು, ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದರು. ನಾವು ಸುಮಲತಾ ಅವರನ್ನು ಅಪ್ರೋಚ್ ಮಾಡಿಲ್ಲ. ಅದು ಅವರಿಗೆ ಬಿಟ್ಟ ವಿಷಯ ಎಂದರು.

    ಇಂದಿನಿಂದ ಮೂರು ದಿನ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದೇನೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ಅರ್ಥವಿಲ್ಲ. ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನ ಕೊಟ್ಟಿಲ್ಲ. ಅದನ್ನು ಬಿಟ್ಟು ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ. ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ದೊಂಬರಾಟವಿದು. ರಾಜ್ಯದ ಜನ ಇದಕ್ಕೆಲ್ಲ ಬೆಲೆ ಕೊಡಲ್ಲ. ಜನರನ್ನು ವಂಚಿಸಿ ಪರಸ್ಪರ ಕಚ್ಚಾಟ, ಬಡಿದಾಟದಲ್ಲಿ ತೊಡಗಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಚ್.ಕೆ.ಪಾಟೀಲ್ Vs ಕೆ.ಜೆ.ಜಾರ್ಜ್: ಕೈ ನಾಯಕರ ನಡುವೆ ಜಿಂದಾಲ್ ಜಟಾಪಟಿ

    ಇದೇ ವೇಳೆ ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಮೀನಿನ ಬಗ್ಗೆ ಮಾತನಾಡಿದ ಅವರು, ಜಿಂದಾಲ್‍ಗೆ ಕೊಡುತ್ತಿರುವ ಜಮೀನಲ್ಲಿ ಉತ್ತಮ ಖನಿಜಗಳಿವೆ. ಈಗಾಗಲೇ ಜಿಂದಾಲ್‍ಗೆ ಬಹಳ ಭೂಮಿ ಕೊಟ್ಟಾಗಿದೆ ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಬೇರೆ ಇಂಡಸ್ಟ್ರೀಸ್‍ಗೆ ಪ್ರೋತ್ಸಾಹ ಮಾಡಬಹುದು. ಯಾವುದೋ ಒಂದು ಕಂಪನಿಗೆ ಅನುಕೂಲ ಮಾಡಿ ವ್ಯವಹಾರ ಕುದುರಿಸಿಕೊಳ್ಳಲು ಕುಮಾರಸ್ವಾಮಿ ಹೊರಟಿದ್ದಾರೆ. ಕುಮಾರಸ್ಚಾಮಿ ನಿರ್ಧಾರ ಖಂಡಿಸಿ ಮೂರು ದಿನ ಧರಣಿ ಮಾಡುತ್ತೇವೆ ಅಂದರು. ಇದನ್ನೂ ಓದಿ: ಜಿಂದಾಲ್ ಕಾರ್ಖಾನೆಯಿಂದ ಮಹಾ ಮೋಸ- ಸರ್ಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 5 ಕೋಟಿ ವಂಚನೆ

  • ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಗಂಭೀರವಾಗಿ ಪರಿಶೀಲಿಸುವೆ – ಪಬ್ಲಿಕ್ ಟಿವಿ ಗ್ರಾಮ ‘ವಾಸ್ತವ’ ವರದಿಗೆ ಸಿಎಂ ಸ್ಪಂದನೆ

    ಬೆಂಗಳೂರು: ಎಚ್‍ಡಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ವೇಳೆ ಕೈಗೊಂಡಿದ್ದ ಗ್ರಾಮ ವಾಸ್ತವ್ಯದ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಗ್ರಾಮ ವಾಸ್ತವ್ಯದ ಲೋಪ ದೋಷಗಳು ಏನು? ಯಾವೆಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿ ಆಗಿದೆ. ಇಂದಿಗೂ ಗ್ರಾಮದಲ್ಲಿ ಯಾವೆಲ್ಲಾ ಸಮಸ್ಯೆಗಳು ಇದೆ ಎಂಬುವುದರ ವಾಸ್ತವತೆಯನ್ನು ತೆರೆದಿಟ್ಟಿತ್ತು.

    ಪಬ್ಲಿಕ್ ಟಿವಿಯ ವರದಿಯ ನೋಡಿರುವ ಸಿಎಂ ಕುಮಾರಸ್ವಾಮಿ ಅವರು ವರದಿಯ ಸಕರಾತ್ಮಕ ಅಂಶಗಳನ್ನು ಸ್ವೀಕರಿಸಿ, ಗ್ರಾಮಗಳ ಕುಂದು ಕೊರತೆಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತೇನೆ. ಅಲ್ಲದೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿ ವರದಿಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಾಸ್ತವ್ಯ ಮಾಡಿದ್ದ ಗ್ರಾಮದಗಳಲ್ಲಿ ಇಂದಿಗೂ ಯಾವ ಸಮಸ್ಯೆಗಳಿವೆ ಎಂಬುವುದನ್ನು ವಿಸ್ತಾವರವಾಗಿ ವಿವರಿಸಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ. ಅಧಿಕಾರಿಗಳು, ಸ್ಥಳೀಯ ನಾಯಕರ ಗಮನಕ್ಕೆ ತಂದು ಕಾರ್ಯಗಳನ್ನು ಮಾಡುತ್ತೇನೆ. ಮುಂದಿನ ಕಾರ್ಯಕ್ರಮಗಳಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ. ಇದನ್ನು ಓದಿ: ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಸಿಎಂ ಹೇಳಿಕೆಯಲ್ಲಿ ಏನಿದೆ?
    ನಾನು ಗ್ರಾಮ ವಾಸ್ತವ್ಯ ಮಾಡುವೆನೆಂದು ಘೋಷಿಸಿದ ದಿನದಿಂದ ಮಾಧ್ಯಮಗಳಲ್ಲಿ ನಾನು 2006-07 ರ ಅವಧಿಯಲ್ಲಿ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ-ಗತಿ, ಕುಟುಂಬಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿರುವುದನ್ನು ಗಮನಿಸುತ್ತಿರುವೆ. ಈ ಹಿನ್ನೆಲೆಯಲ್ಲಿ ಎರಡು ಮಾತು:

    ಗ್ರಾಮ ವಾಸ್ತವ್ಯ ಎನ್ನುವುದು ಯಾವುದೇ ಜನಪ್ರಿಯತೆ ಗಿಟ್ಟಿಸುವ ಗಿಮಿಕ್ ಅಲ್ಲ. ಈ ಪರಿಕಲ್ಪನೆಯ ಮೂಲ ಪುರುಷನೂ ನಾನಲ್ಲ. ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ, ಪ್ರವಾಹ ಪೀಡಿತ ಕೃಷ್ಣಾ ನದಿ ದಂಡೆಯ ಪಿ.ಕೆ. ನಾಗನೂರಿನಿಂದ ಎನ್ನುವುದು ನಿಮಗೆಲ್ಲಾ ತಿಳಿದ ವಿಚಾರ. ಗ್ರಾಮ ವಾಸ್ತವ್ಯ ಎಂಬ ಪದವನ್ನು ಚಾಲ್ತಿಗೆ ತಂದವರೂ ನಮ್ಮ ಮಾಧ್ಯಮ ಮಿತ್ರರೇ. ಆದರೆ ಈ ಸಂದರ್ಭದಲ್ಲಿ ಜನರು ತೋರಿದ ಪ್ರೀತಿ, ವಿಶ್ವಾಸ ನನ್ನನ್ನು ಮೂಕವಿಸ್ಮಿತನನ್ನಾಗಿಸಿದೆ. ಜನರ ಸಮಸ್ಯೆಗಳು, ಬದುಕಿನ ಕಟು ವಾಸ್ತವಗಳನ್ನು ಅರಿಯಲು ನೆರವಾಗಿದೆ. ಸರ್ಕಾರದಿಂದ ಆಗಬೇಕಾದ್ದು ಏನು ಎಂಬ ಬಗ್ಗೆ ನೇರ, ಸರಳವಾದ ಅತ್ಯುತ್ತಮ ಸಲಹೆಗಳೂ ಬಂದಿವೆ.

    ಸಾರಾಯಿ ನಿಷೇಧ, ಲಾಟರಿ ನಿಷೇಧ, ಸಾಲ ಮನ್ನಾ, ಸಾವಿರಕ್ಕೂ ಹೆಚ್ಚು ಪ್ರೌಢಶಾಲೆಗಳು, 500ಕ್ಕೂ ಹೆಚ್ಚು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆ, ಗ್ರಾಮಗಳ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಸುವರ್ಣ ಗ್ರಾಮ ಯೋಜನೆ – ಇವೆಲ್ಲಾ ಗ್ರಾಮವಾಸ್ತವ್ಯದ ಫಲಶ್ರುತಿಗಳು. ನನ್ನ ಅಧಿಕಾರಾವಧಿಯ ನಂತರ ಸುವರ್ಣ ಗ್ರಾಮ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ಬಾರದೇ ಇರುವುದು ವಿಷಾದನೀಯ.

    ಗ್ರಾಮ ವಾಸ್ತವ್ಯದ ಮುಖ್ಯ ಗುರಿ, ಆಡಳಿತ ಯಂತ್ರದ ಕಾರ್ಯವೈಖರಿ ಅರಿಯುವುದು. ಸರ್ಕಾರ ರೂಪಿಸಿದ ಯೋಜನೆ ಫಲಕಾರಿಯೇ? ಜನರ ಅಭಿಪ್ರಾಯವೇನು ಎಂಬುದನ್ನು ಅರಿಯುವುದು, ಸುತ್ತಲಿನ ಗ್ರಾಮಗಳ ಜನರೂ ಸೇರುತ್ತಾರೆ. ಅವರಿಂದ ಅಹವಾಲು ಸ್ವೀಕರಿಸಿ ಪರಿಹರಿಸುವುದು. ಕಾನೂನು ವ್ಯಾಪ್ತಿಯಲ್ಲಿ ಇವುಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ. ಕೆಲವು ಮನವಿಗಳನ್ನು ಪರಿಗಣಿಸಲು ಸಾಧ್ಯವಾಗದೆ ಇರಬಹುದು. ಇಂಥವುಗಳನ್ನು ನೀವು ಮತ್ತೆ ಗಮನಕ್ಕೆ ತರುತ್ತಿದ್ದೀರಿ. ಖಂಡಿತವಾಗಿಯೂ ಅವುಗಳನ್ನು ಗಂಭೀರವಾಗಿ ಪರಿಶೀಲಿಸುವೆ. ಆ ಗ್ರಾಮದ ಅಭಿವೃದ್ಧಿ ಗ್ರಾಮ ವಾಸ್ತವ್ಯದ ಫಲಶ್ರುತಿಯ ಒಂದು ಭಾಗವಷ್ಟೆ. ಅದೇ ಕೇಂದ್ರ ಗುರಿಯಲ್ಲ.

    ಜನರಿಗೆ ಅಗತ್ಯವಿರುವ ಯೋಜನೆಗಳನ್ನು ಜಾರಿಗೊಳಿಸಿದಾಗ ಅವು ಸಹಜವಾಗಿಯೇ ಯಶಸ್ವಿಯಾಗುತ್ತವೆ. ಅದೇ ರೀತಿ ಯೋಜನೆಗಳನ್ನು ರೂಪಿಸಿ, ಸರ್ಕಾರ ಜನರ ಮೇಲೆ ಹೇರಿದರೆ ಯಶಸ್ವಿಯಾಗದು. ಈ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ನನ್ನ ಅನುಭವ.

    ಅಂತೆಯೇ ಎಚ್‍ಐವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ನಾನು ವಾಸ್ತವ್ಯ ಹೂಡಿದ್ದರಿಂದ ಆ ಕುಟುಂಬ ಊರನ್ನೇ ತೊರೆದಿದೆ ಎಂದು ವರದಿಯಾಗಿದೆ. ಇದು ನಿಜಕ್ಕೂ ದುರದೃಷ್ಣಕರ. ಎಚ್‍ಐವಿ/ ಏಯ್ಡ್ಸ್ ಬಗ್ಗೆ ಜನರಿಗಿರುವ ಅಂಧ ವಿಶ್ವಾಸವನ್ನು ದೂರ ಮಾಡುವ ಉದ್ದೇಶದಿಂದ ಏಯ್ಡ್ಸ್ ನಿಯಂತ್ರಣ ಮಂಡಳಿ ಅಧಿಕಾರಿಗಳ ಮನವಿಯ ಮೇರೆಗೆ ಅಲ್ಲಿ ವಾಸ್ತವ್ಯ ಮಾಡಿದ್ದೆ. ಆದರೆ ಸಮಾಜ ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಆದರೆ ವೈಯಕ್ತಿಕವಾಗಿಯೂ ನಾನು ಆ ಕುಟುಂಬಕ್ಕೆ ನೆರವಾಗಿದ್ದು, ಅದನ್ನು ಇಲ್ಲಿ ಚರ್ಚಿಸಲು ಹೋಗುವುದಿಲ್ಲ. ಮತ್ತೊಮ್ಮೆ ಆ ಕುಟುಂಬ ವನ್ನು ಸಂಪರ್ಕಿಸಿ ಹೇಗೆ ನೆರವಾಗಬಹುದು ಎಂದು ಪರಿಶೀಲಿಸುವೆ.

    https://www.youtube.com/watch?v=YgZ7K9ZSD2E

    ಮಾಧ್ಯಮಗಳು ಪ್ರಕಟಿಸುತ್ತಿರುವ ವರದಿಗಳಲ್ಲಿರುವ ಸಕಾರಾತ್ಮಕ ಸಲಹೆಗಳನ್ನು ಮುಕ್ತ, ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವೆ. ಮುಂದಿನ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಸಾಧ್ಯವಾಗುವುದನ್ನು ಅನುಸರಿಸಲು ಖಂಡಿತ ಪ್ರಯತ್ನಿಸುವೆ ಎಂದಿದ್ದಾರೆ.

  • ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಸಿಎಂ ವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಈಗ ಹೇಗಿದೆ? ಎಷ್ಟು ಭರವಸೆ ಪೂರ್ಣವಾಗಿದೆ? – ಕಂಪ್ಲೀಟ್ ವರದಿ ಓದಿ

    ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಮತ್ತೆ ಗ್ರಾಮವಾಸ್ತವ್ಯ ಮಾಡಲು ಹೊರಟಿದ್ದಾರೆ. ಆದರೆ ಅದಕ್ಕೂ ಮುನ್ನ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಸಿಎಂ ಅವರು ಈ ಹಿಂದೆ ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮಗಳ ಸ್ಥಿತಿ ಗತಿಯ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

    ಜೆಟ್ಟಿದೊಡ್ಡಿ(ರಾಮನಗರ)
    2008ರಲ್ಲಿ ರಾಮನಗರದ ಜೆಟ್ಟಿದೊಡ್ಡಿ, ಕನಕಪುರ ಗ್ರಾಮಕ್ಕೆ ಭೇಟಿ ಕೊಟ್ಟ ಸಿಎಂ, ಚಿಕ್ಕ ತಾಯಮ್ಮ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಅಂದು ಗ್ರಾಮವಾಸ್ತವ್ಯ ಮಾಡಿದ್ದ ಸಿಎಂ ಅವರು ಕೊಟ್ಟ ಮಾತಿನಲ್ಲಿ ಬೋರ್ ವೆಲ್ ಹಾಗೂ ಅಂಗನವಾಡಿ ಕೇಂದ್ರದ ಬೇಡಿಕೆ ಈಡೇರಿದ್ದು, ಸಮುದಾಯ ಭವನ ಹಾಗೂ ಸೇತುವೆ ಇದೂವರೆಗೂ ನಿರ್ಮಾಣವಾಗಿಲ್ಲ.

    ಬೇವುಕಲ್ಲು ಕೊಪ್ಪಲು(ಮಂಡ್ಯ)
    2016ರಲ್ಲಿ ಮಂಡ್ಯ ತಾಲೂಕಿನ ಬೇವುಕಲ್ಲು ಕೊಪ್ಪಲು ಗ್ರಾಮದ ಬಸವೇಗೌಡರ ಮನೆಯಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ಗ್ರಾಮದ ಜನತೆ ತಮ್ಮೂರಿಗೆ ರಸ್ತೆ, ಆಸ್ಪತ್ರೆ, ಸಮುದಾಯ ಭವನ, ಅಂಗನವಾಡಿಗೆ ಸ್ವಂತ ಕಟ್ಟಡ, ಸ್ಮಶಾನ ಬೇಕೆಂದು ಬೇಡಿಕೆ ಇಟ್ಟಿದ್ದರು. ಭರವಸೆಗಳನ್ನು ಈಡೇರಿಸುವುದಾಗಿ ಹೇಳಿ ಹೋಗಿದ್ದ ಸಿಎಂ, ಗ್ರಾಮದ 1ರಿಂದ 1.5 ಕಿ.ಮೀಟರ್ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ, ಜೊತೆಗೆ 5 ಕಿರುನೀರು ಸರಬರಾಜು ಟ್ಯಾಂಕ್‍ಗಳು, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಅದನ್ನು ಹೊರತುಪಡಿಸಿ ಬೇರಾವ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಗಳೇ ನಡೆಯಲಿಲ್ಲ. ಆರಂಭದಲ್ಲಿ ಈ ಸೌಲಭ್ಯ ಕಲ್ಪಿಸಲು ಜಾಗ ನೋಡಲಾಯಿತು. ಆದರೆ, ಗ್ರಾಮದಲ್ಲಿ ಸರ್ಕಾರಿ ಜಾಗ ಇಲ್ಲವೆಂದು ಹೇಳಿ ಸುಮ್ಮನಾಗಿಬಿಟ್ಟರು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಬಳಕವಾಡಿ(ಮಂಡ್ಯ)
    ಮಳವಳ್ಳಿ ತಾಲೂಕಿನ ಬೆಳಕವಾಡಿ ಹೋಬಳಿಯ ಹೊನಗನಹಳ್ಳಿ ಗ್ರಾಮಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ವಾಸ್ತವ್ಯ ಹೂಡಿದಾಗ ಜನರಲ್ಲಿ ಮಹದಾಸೆ ಚಿಗುರೊಡೆದಿತ್ತು. ಜೊತೆಗೆ ಅದೇ ದಿನ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದಾಗ ಸ್ವರ್ಗಕ್ಕೆ ಮೂರೇ ಗೇಣು ಎನಿಸಿತ್ತು. ಆದರೆ, ಅಂದು ಚಿಗುರೊಡೆದ ಆಸೆ ಮರ ಆಗುವುದಿರಲಿ, ಪುಟ್ಟ ಗಿಡವಾಗುವ ಮೊದಲೇ ಬಾಡಿಹೋಗಿತ್ತು.

    ಗ್ರಾಮದಲ್ಲಿ ಪರಿಶಿಷ್ಠರು ಹೆಚ್ಚಾಗಿದ್ದಾರೆ. ಲಿಂಗಾಯತರು, ಒಕ್ಕಲಿಗರು, ವಿಶ್ವಕರ್ಮರು ಸೇರಿ ಸುಮಾರು 1400-1500 ಜನರಿದ್ದಾರೆ. ವಸತಿಹೀನರೆ ಹೆಚ್ಚಾಗಿರುವ ಈ ಗ್ರಾಮದ 150 ಕುಟುಂಬಗಳಿಗೆ ಸರ್ಕಾರ ಹಿಂದೆಯೇ ನಿವೇಶನ ನೀಡಿದೆ. ಆದರೆ, ಕೂಲಿ ಮಾಡಿಕೊಂಡು ಬದುಕುತ್ತಿರುವ ಜನತೆಗೆ ಸ್ವಂತ ಸೂರು ಕಟ್ಟಿಕೊಳ್ಳಲಾಗದ ಪರಿಣಾಮ ನಿವೇಶನಗಳಲ್ಲಿ ಗಿಡಗಂಟೆ ಬೆಳೆದು ಕಾಡಿನಂತಾಗಿದೆ.

    ಗ್ರಾಮವಾಸ್ತವ್ಯ ವೇಳೆ ಜನರ ಬೇಡಿಕೆಯಂತೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಡಿಗಲ್ಲು ಹಾಕಿದ್ದರು. ಅವರ ಬರುವಿಕೆ, ಹೋಗುವಿಕೆಗಾಗಿ ಕೆಲವೆಡೆ ಬೀದಿ ದೀಪ, ರಸ್ತೆಗೆ ಡಾಂಬರು ಬಂತು. ಆ ವೇಗ ಕಂಡ ಜನತೆ ತಮ್ಮೂರಿಗೆ ಸ್ವರ್ಗವೇ ಇಳಿಯಲಿದೆ ಎಂಬ ಆಸೆಯಿಂದ ನಿವೇಶನ ಇರುವವರಿಗೆ ಗುಂಪು ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡಿ ಎಂದರು.

    ನಾಯಕ ಜನಾಂಗದವರು ರಾಮಮಂದಿರ ಕೇಳಿಕೊಂಡರು. ಪ್ರಮುಖವಾಗಿ ದತ್ತು ಗ್ರಾಮವಾದ ತಮ್ಮೂರನ್ನು ಕಂದಾಯ ಗ್ರಾಮವನ್ನಾಗಿ ಮಾಡಿಕೊಡುವಂತೆ ಬೇಡಿಕೆ ಇಟ್ಟರು. ಆದರೆ, ಅಂಬೇಡ್ಕರ್ ಭವನ ಶಿಲಾನ್ಯಾಸ ಮಾಡಿ ಅಮೃತ ಶಿಲೆಯಲ್ಲಿ ಹೆಸರು ಕೆತ್ತಿಸಿಕೊಂಡಿದ್ದು ಬಿಟ್ಟರೆ ಉಳಿದ ಯಾವ ಕೆಲಸಗಳು ಆಗಲಿಲ್ಲ. ಗ್ರಾಮವಿರಲಿ ಮಸಣಯ್ಯನ ಮನೆ ಚಿತ್ರಣವೂ ಒಂದಿನಿತು ಹೊಸತಾಗಲಿಲ್ಲ.

    ಈ ಹಿನ್ನೆಲೆಯಲ್ಲಿ ಗ್ರಾಮಸ್ಥರನ್ನು ವಾಸ್ತವ್ಯ ಅಗತ್ಯವೇ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ವಾಸ್ತವ್ಯ ಮಾಡಬೇಕೆಂದು ಕಿಡಿಕಾರುತ್ತಾರೆ. ನನ್ನ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿ, ಕೊಡಿಸಲಿಲ್ಲ. ಒಂದು ದಿನ ಉಳಿದುಕೊಳ್ಳಲು ನಮ್ಮ ಮನೆಯನ್ನು ದೊಡ್ಡ ಮಹಲಿನಂತೆ ಮಾಡಿ ಹೋಗಿದ್ದೇ ದೊಡ್ಡ ಸಾಧನೆ ಎಂದು ಗ್ರಾಮಸ್ಥ ಮಸಣಯ್ಯ ಗರಂ ಆಗಿದ್ದಾರೆ.

    ಸಿಎಂ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಶ್ರೀನಿವಾಸಶೆಟ್ಟಿ ಅವರ ಹಳೆ ಹಂಚಿನ ಹರಕು, ಮುರುಕಿನ ಮನೆಯನ್ನು ಚಕಾಚಕ್ ಬದಲಿಸಿದ್ದರು. ಚಿಕ್ಕದಾಗಿದ್ದ ಮನೆ ಗೋಡೆಯನ್ನು 3 ಅಡಿ ಎತ್ತರಿಸಲಾಗಿತ್ತು. ಮನೆ ಛಾವಣಿಗೆ ಹಸಿ ಮರದ ರೀಪರ್‍ಗಳನ್ನು ಹಾಕಿ, ಒಂದಷ್ಟು ಹಂಚುಗಳನ್ನು ತಂದು ಹಾಕಿದ್ದರು. ಮನೆಯ ಹಿಂಭಾಗ ಶೌಚಗೃಹ, ಸ್ನಾನ ಗೃಹ ನಿರ್ಮಿಸಿದ್ದರು. ಪಂಚಾಯ್ತಿ ವತಿಯಿಂದ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದರು. ವಾಸ್ತವ್ಯದ ಕಾರಣ ಮನೆ ದುರಸ್ತಿಗಾಗಿ 5 ದಿನ ಕುಟುಂಬದವರು ಬೇರೆಯವರ ಮನೆಯಲ್ಲಿ ಮಲಗಬೇಕಾಯಿತು.

    ಸದ್ಯ ಹಸಿ ಮರದ ರೀಪರ್‍ಗಳು ಕುಟ್ಟೆ ಹಿಡಿದು ಹಾಳಾಗಿ ಹೋಗಿವೆ. ಯಾವುದೇ ವಸತಿ ಯೋಜನೆ ಅಡಿ ಮನೆ ಕಟ್ಟಲು ಸಹಾಯ ಧನ ಸಿಕ್ಕಿಲ್ಲ. ತಾವೇ ದುಡಿದು ಹಳೆ ಮನೆಯನ್ನು ಕೊಂಚ ವಿಸ್ತರಿಸಿಕೊಂಡಿದ್ದಾರೆ. ಹಿರಿಯ ಮಗ 10ನೇ ತರಗತಿ ಮುಗಿಸಿ, ಕೂಲಿ ಮಾಡಿಕೊಂಡಿದ್ದಾನೆ. ಕಿರಿಯ ಮಗ ಬೆಂಗಳೂರಿನಲ್ಲಿ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಶ್ರೀನಿವಾಸಶೆಟ್ಟಿ ಹೇಮಗಿರಿ ಸೊಸೈಟಿ ಅಲ್ಲಿ ಅಟೆಂಡರ್ ಕೆಲಸ ಮುಂದುವರಿಸಿದ್ದಾರೆ.

    ಶ್ರೀನಿವಾಸಶೆಟ್ಟಿ ಮಗಳು ಲೀಲಾವತಿ ಮದುವೆಯಾಗಿ, ಮಗು ಇತ್ತು. ತಮಗೊಂದು ಚಿಲ್ಲರೆ ಅಂಗಡಿ ಹಾಕಿ ಕೊಡುವಂತೆ ಕೋರಿದಾಗ ಕುಮಾರಸ್ವಾಮಿ ಒಪ್ಪಿದ್ದರಲ್ಲದೆ, ಮಗುವಿನ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಶೆಟ್ಟಿಯವರ ಮಕ್ಕಳಾದ ವೆಂಕಟೇಶ್, ರವಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಹೇಳಿದ್ದರು. ಜೊತೆಗೆ ಜಮೀನಿನ ಬಳಿ ಒಂದು ಮನೆ ನಿರ್ಮಾಣ, ಕೊಳವೆ ಬಾವಿ ಕೊರೆಸಿಕೊಡುವ ಹಾಗೂ 2.5 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ ಯಾವುದೂ ಈಡೇರಿಲ್ಲ. ಬೆಂಗಳೂರಿಗೆ ಬರುವಂತೆ ನಮ್ಮನ್ನು ಕರೆದರು. ಆದರೆ ಹೋಗಿ ಹೇಗೆ ಭೇಟಿ ಮಾಡಬೇಕೆಂದು ತಿಳಿಯದೆ ಹೋಗಲಿಲ್ಲ ಎಂದು ಶ್ರೀನಿವಾಸ್ ಶೆಟ್ಟಿ ಪತ್ನಿ ನಾಗಮ್ಮ ಕುಮಾರಸ್ವಾಮಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ವಾಸ್ತವ್ಯದ ವೇಳೆ 3 ಮಂಚ, ಹಾಸಿಗೆ, ಕುರ್ಚಿ, ಫ್ಯಾನ್, ಕೂಲರ್ ಮೊದಲಾದ ವಸ್ತುಗಳನ್ನು ತಂದಿದ್ದರು. ಒಂದು ಮಂಚವನ್ನು ಮಾತ್ರ ಮನೆಯೊಳಗೆ ಹಾಕಲಾಗಿತ್ತು. ಎಲ್ಲವೂ ತಮಗೆ ಉಳಿದುಕೊಳ್ಳುತ್ತವೆ ಎಂದು ಕುಟುಂಬದವರು ಖುಷಿ ಪಟ್ಟಿದ್ದರು. ಆದರೆ, ಎರಡೇ ದಿನಕ್ಕೆ ಅಧಿಕಾರಿ, ಗುತ್ತಿಗೆದಾರರು ಬಾಡಿಗೆ ತಂದಿದ್ದೇವೆಂದು ಹೇಳಿ ಎಲ್ಲವನ್ನು ವಾಪಸ್ ತೆಗೆದುಕೊಂಡು ಹೋದರು. ಗ್ರಾಮಸ್ಥರ ಸಲಹೆ ಪರಿಣಾಮ ಮಂಚ, ಹಾಸಿಗೆ, ದಿಂಬು ಹೊದಿಕೆ, ಸೊಳ್ಳೆ ಪರದೆ ಉಳಿದುಕೊಂಡವು ಎಂದು ಶ್ರೀನಿವಾಸ್ ಶೆಟ್ಟಿ ಪುತ್ರ ವೆಂಕಟೇಶ್ ಹೇಳಿದ್ದಾರೆ.

    ದೊಡ್ಡಕಾನ್ಯ(ಮೈಸೂರು)
    2007 ಡಿಸೆಂಬರ್ ಸಿಎಂ ಅವರು ಮೈಸೂರಿನ ದೊಡ್ಡಕಾನ್ಯ, ದಡದಹಳ್ಳಿ, ಮೇದರ್ ಬ್ಲಾಕ್ ಗ್ರಾಮಕ್ಕೆ ಭೇಟಿ ನಿಡಿದ್ದರು. ದಲಿತರು, ಸ್ಲಂವಾಸಿಗಳ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಸದ್ಯ ದಡದಹಳ್ಳಿಯಲ್ಲಿ ಸಾರಿಗೆ ವ್ಯವಸ್ಥೆ, ಜನರಿಗೆ ಬೇಕಾದ ಮೂಲಸೌಕರ್ಯ ದೊರಕಿದೆ. ಆದರೆ ಮೇದರ್ ಬ್ಲಾಕ್‍ನಲ್ಲಿ ವಸತಿ ಸೌಲಭ್ಯ ಇನ್ನೂ ಈಡೇರಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

    ಹೊನ್ನಗೊಂಡನಹಳ್ಳಿ(ತುಮಕೂರು)
    2006 ಡಿಸೆಂಬರ್ 21ರಂದು ಸಿಎಂ ಅವರು ತುಮಕೂರು ಜಿಲ್ಲೆಯ ಹೊನ್ನಗೊಂಡನಹಳ್ಳಿ, ಶಿರಾ ಗ್ರಾಮಕ್ಕೆ ಭೇಟಿ ನೀಡಿ ಚಿಕ್ಕಣ್ಣ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಸಿಎಂ ಅವರು ಕೊಟ್ಟ ಮಾತಿನಲ್ಲಿ ಗೊಲ್ಲರ ಹಟ್ಟಿಗೆ ಮನೆಗಳ ಭಾಗ್ಯ, ರಸ್ತೆ, ಶಾಲೆ ಅಭಿವೃದ್ಧಿಯಷ್ಟೇ ಈಡೇರಿದ್ದು, ಮದಲೂರು ಕೆರೆಗೆ ನೀರು, ಆರೋಗ್ಯ ಕೇಂದ್ರ ಮಂಜೂರು ಹಾಗೂ ಪಶು ಆಸ್ಪತ್ರೆ ಸ್ಥಾಪನೆಯಾಗಿಲ್ಲ.

    ಇದೇ ಜಿಲ್ಲೆಯ ಪುರಾ ಮತ್ತು ತುರುವೇಕೆರೆ ಗ್ರಾಮಕ್ಕೆ ಮತ್ತೆ ಭೇಟಿ ನೀಡಿರುವ ಸಿಎಂ ಅವರು ಇಲ್ಲಿನ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ನೀಡಿದ ಭರವಸೆಯಲ್ಲಿ ಶಾಲೆ ಅಭಿವೃದ್ಧಿ ಹಾಗೂ ವೃದ್ಧಾಪ್ಯವೇತನ ದೊರಕಿದೆ. ಆದರೆ ಹೇಮಾವತಿ ನಾಲೆ ಆಧುನೀಕರಣ ಇನ್ನೂ ಆಗಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ರಾಜವಂತಿಯ ಚಿಕ್ಕನಾಯಕನಹಳ್ಳಿ, ಪಾವಗಡದ ನಿವೃತ್ತ ಶಿಕ್ಷಕ ಬೋರಣ್ಣ ಮನೆಯಲ್ಲಿ ನೆಲೆಸಿದ್ದ ಕುಮಾರಸ್ವಾಮಿ ಕೊಟ್ಟ ಮಾತಿನಲ್ಲಿ ರಸ್ತೆ ನಿರ್ಮಾಣ ಕಾರ್ಯವಷ್ಟೇ ಈಡೇರಿದ್ದು, ಇನ್ನೂ ಶಾಲೆ ಅಭಿವೃದ್ಧಿಯಾಗಿಲ್ಲ. ಅಲ್ಲದೆ ಬಸ್ ಸಂಚಾರ ವ್ಯವಸ್ಥೆ ಕೂಡ ನೆರವೇರಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸೋದೇನಹಳ್ಳಿ(ತುಮಕೂರು)
    2007ರ ತುಮಕೂರು ಜಿಲ್ಲೆಯ ಸೋದೇನಹಳ್ಳಿ ಹಾಗೂ ಮಧುಗಿರಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಅಲ್ಲಿನ ಅಂಜನಮ್ಮ ನಿವಾಸದಲ್ಲಿ ತಂಗಿದ್ದರು. ಸದ್ಯ ಇಲ್ಲಿಯ ಜನರ ಯಾವ ಬೇಡಿಕೆಯೂ ಈಡೇರಿಲ್ಲ. ಸಿಎಂ ಅವರು ಪದವಿಪೂರ್ವ ಕಾಲೇಜು, ಪಶು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಂಜನಮ್ಮಗೆ ಸೈಟ್ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಇದೂವರೆಗೂ ಯಾವುದೇ ಕೆಲಸವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಎಚ್‍ಡಿ ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಗ್ರಾಮ ವಾಸ್ತವ್ಯ ತುಮಕೂರು ಜಿಲ್ಲೆಯಲ್ಲಂತೂ ಟೋಟಲಿ ಪ್ಲಾಪ್ ಶೋ ಎನ್ನುವಂತಾಗಿದೆ.

    ಬಡಗಲಮೋಳೆ(ಚಾಮರಾಜನಗರ)
    2007ರಲ್ಲಿ ಚಾಮರಾಜನಗರದ ಬಡಗಲಮೋಳೆಯ ರಂಗಶೆಟ್ಟಿ ನಿವಾಸದಲ್ಲಿ ಸಿಎಂ ಅವರು ವಾಸ್ತವ್ಯ ಹೂಡಿದ್ದರು. ಆ ಬಳಿಕ ಇಲ್ಲಿ ಕೊಟ್ಟ ಮಾತಿನಂತೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣವಾಗಿದೆ. ಆದರೆ ಇದೀಗ ಅದು ಬಿರುಕು ಬಿಟ್ಟಿದೆ. ಅಂಗನವಾಡಿ ಕೇಂದ್ರ ಹಾಗೂ ಮೂಲಸೌಕರ್ಯ ವ್ಯವಸ್ಥೆ ಈಡೇರಿದೆ. ಆದರೆ ಇನ್ನೂ ಸಮುದಾಯ ಭವನ ನಿರ್ಮಾಣವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕೊಂಬುಡಿಕ್ಕಿ(ಚಾಮರಾಜನಗರ)
    2007ರ ಸೆಪ್ಟೆಂಬರ್ 11ರಂದು ಚಾಮರಾಜನಗರದ ಕೊಂಬುಡಿಕ್ಕಿ, ಮಲೆಮಹದೇಶ್ವರಕ್ಕೆ ಭೇಟಿ ಕೊಟ್ಟ ಸಿಎಂ, ಸೋಲಿಗ ಚಿನ್ನಪ್ಪಿ ನಿವಾಸದಲ್ಲಿ ನೆಲೆಸಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ಸೇತುವೆ ನಿರ್ಮಾಣ, ಡಾಂಬರು ರಸ್ತೆ, ಬಸ್ ಸೌಲಭ್ಯ ಹಾಗೂ ಹಳ್ಳಕ್ಕೆ ಸೇತುವೆ ಸೌಲಭ್ಯ ಈಡೇರಿದೆ. ಆದರೆ ಸೋಲಿಗರ ಮನೆ ರಿಪೇರಿ ಕಾರ್ಯ ಇನ್ನೂ ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಬೆಳವಾಡಿ(ಚಿಕ್ಕಮಗಳೂರು)
    2006ರ ಅಕ್ಟೋಬರ್ 17ರಂದು ಸಿಎಂ ಅವರು ಚಿಕ್ಕಮಗಳೂರು ಜಿಲ್ಲೆಯ ಬೆಳವಾಡಿ ಗ್ರಾಮಕ್ಕೆ ತೆರಳಿ ರಂಗಪ್ಪ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಸಿಎಂ ಕೊಟ್ಟಿರುವ ಭರವಸೆಯಲ್ಲಿ ಇದುವರೆಗೂ ಯಾವುದು ಈಡೇರಿಲ್ಲ. ಕರಗಡ ನೀರಾವರಿ ಯೋಜನೆಯನ್ನು ಇನ್ನೂ ಮುಗಿಸಿಲ್ಲ. ಗ್ರಾಮದ ಅಭಿವೃದ್ಧಿಗೆ ಒಂದು ಕೋಟಿ ಹಣವನ್ನು ನೀಡಿಲ್ಲ. ಅಲ್ಲದೆ ರಂಗಪ್ಪನಿಗೆ ಕೆಲಸ ಕೊಡುತ್ತೇನೆ ಎಂದು ಹೇಳಿದ್ದ ಸಿಎಂ ಇದೂವರೆಗೆ ಅವರಿಗೆ ಕೆಲಸ ನೀಡಿಲ್ಲ.

    ತಣ್ಣೀರ್‍ಕುಳಿ(ಉತ್ತರ ಕನ್ನಡ)
    2007ರ ಏಪ್ರಿಲ್‍ನಲ್ಲಿ ಉತ್ತರ ಕನ್ನಡ ಜಿಲ್ಲೆಯ ತಣ್ಣೀರ್‍ಕುಳಿ, ಕುಮಟಾಕ್ಕೆ ತೆರಳಿದ್ದ ಎಚ್‍ಡಿಕೆ ಹಾಲಕ್ಕಿ ಒಕ್ಕಲಿಗ ತಿಮ್ಮಣ್ಣಗೌಡರ ನಿವಾಸದಲ್ಲಿ ತಂಗಿದ್ದರು. ಇದೇ ಸಂದರ್ಭದಲ್ಲಿ ಅವರು ನೀಡಿದ್ದ ಭರವಸೆಗಳಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದ್ದು, ರೈಲ್ವೇ ಓವರ್ ಬ್ರಿಡ್ಜ್, ಹೈಟೆನ್ಶನ್ ವಿದ್ಯುತ್ ತಂತಿ ಬದಲಾವಣೆ ಹಾಗೂ ಹಾಲಕ್ಕಿ ಗೌಡ, ಸಿದ್ದಿ ಜನಾಂಗವನ್ನು ಎಸ್‍ಸಿ ವರ್ಗಕ್ಕೆ ಸೇರಿಸುವ ಪ್ರಯತ್ನವಷ್ಟೇ ನಡೆದಿದ್ದು, ಇನ್ನೂ ಭರವಸೆ ಈಡೇರಿಲ್ಲ.

    ಸುಗನಹಳ್ಳಿ(ಗದಗ)
    2007ರ ಫೆಬ್ರವರಿ 28ರಂದು ಗದಗ ಜಿಲ್ಲೆಯ ಸುಗನಹಳ್ಳಿ, ಶಿರಹಟ್ಟಿಗೆ ಭೇಟಿ ಕೊಟ್ಟು ಕುಮಾರಸ್ವಾಮಿಯವರು ಬಸವರಾಜ ಹೊಂಬಾಳಿಮಠದಲ್ಲಿ ವಾಸ್ತವ್ಯ ಹೂಡಿದ್ದರು. ಇಲ್ಲಿ ಕೊಟ್ಟ ಮಾತಿನಲ್ಲಿ ಮೂಲಸೌಕರ್ಯ ಸೌಲಭ್ಯವೊಂದೇ ಈಡೇರಿದ್ದು, ಸುವರ್ಣ ಗ್ರಾಮ, ತುಂಗಭದ್ರಾ ನದಿಯಿಂದ ಕುಡಿಯುವ ನೀರು, ನೀರಾವರಿ ಯೋಜನೆ ಹಾಗೂ ಪಶು ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ನಿರ್ಮಾಣ ಮಾಡಿಕೊಡುವುದಾಗಿ ಹೇಳಿದ್ದೇ ಹೊರತು ಇನ್ನೂ ಈಡೇರಿಲ್ಲ.

    ಪೊತಲಕಟ್ಟೆ(ಬಳ್ಳಾರಿ)
    2007ರ ಸೆಪ್ಟೆಂಬರ್ ನಲ್ಲಿ ಬಳ್ಳಾರಿ ಜಿಲ್ಲೆಯ ಪೊತಲಕಟ್ಟೆ, ಹೊಸಪೇಟೆಗೆ ತೆರಳಿದ್ದ ಎಚ್ ಡಿಕೆ ಗ್ರಾ.ಪಂ ಅಧ್ಯಕ್ಷ ದೇವೇಂದ್ರಪ್ಪ ಮನೆಯಲ್ಲಿ ತಂಗಿದ್ದರು. ಅಂದು ಕೊಟ್ಟ ಭರವಸೆಯಲ್ಲಿ ಸುವರ್ಣ ಗ್ರಾಮ ಯೋಜನೆ, ಮೂಲಸೌಕರ್ಯ ಹಾಗೂ ಸಮುದಾಯ ಭವನ ನಿರ್ಮಾಣವಾಗಿದ್ದು, ಪ್ರೌಢ ಶಾಲೆ ನಿರ್ಮಾಣ ಹಾಗೂ ಪಶು ಆಸ್ಪತ್ರೆಯ ಕನಸು ನನಸಾಗಿಲ್ಲ.

    ಮುಷ್ಠಗಟ್ಟಿ(ಬಳ್ಳಾರಿ)
    2017ರ ಆಗಸ್ಟ್ 25ರಂದು ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಮುಷ್ಠಗಟ್ಟಿ, ಕುರಗೋಡು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ರೈತ ಮಾರೆಪ್ಪ ನಿವಾಸದಲ್ಲಿ ತಂಗಿದ್ದರು. ತಮ್ಮ ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಕೊಟ್ಟ ಮಾತುಗಳನ್ನೆಲ್ಲ ಎಚ್‍ಡಿಕೆ ಈಡೇರಿಸಿದ್ದಾರೆ. ಕೆರೆ ನಿರ್ಮಾಣ, ಸರ್ಕಾರಿ ಆಸ್ಪತ್ರೆ, ಮೊರಾರ್ಜಿ ಶಾಲೆ ಹಾಗೂ ಸುವರ್ಣ ಗ್ರಾಮ ಯೋಜನೆಯ ಭರವಸೆ ಈಡೇರಿಸಿದ್ದಾರೆ.

    ಚಿಕ್ಕಮ್ಯಾಗೇರಿ(ಬಾಗಲಕೋಟೆ)
    2006ರ ಅಕ್ಟೋಬರ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಚಿಕ್ಕಮ್ಯಾಗೇರಿ, ಹುನಗುಂದದಲ್ಲಿ ಅನುದಾನಿತ ಪ್ರೌಢ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಎಚ್ ಡಿಕೆ ಯಾವ ಭರವಸೆಯನ್ನು ಈಡೇರಿಸಿಲ್ಲ. ಸುವರ್ಣ ಗ್ರಾಮ ಹಾಗೂ ಮೂಲ ಸೌಕರ್ಯ ಒದಗಿಸಲಿಲ್ಲ.

    ಉತ್ತೂರು (ಬಾಗಲಕೋಟೆ)
    2006ರ ಆಗಸ್ಟ್ ನಲ್ಲಿ ಬಾಗಲಕೋಟೆ ಜಿಲ್ಲೆಯ ಉತ್ತೂರು ಹಾಗೂ ಆರ್‍ಬಿ ತಿಮ್ಮಾಪುರ ಸ್ವಗ್ರಾಮ ಮುಧೋಳಕ್ಕೆ ಭೇಟಿ ಕೊಟ್ಟಿರುವ ಎಚ್ ಡಿ ಕುಮಾರಸ್ವಾಮಿ ಸರ್ಕಾರಿ ಪ್ರೌಢಶಾಲೆ ವಾಸ್ತವ್ಯ ಹೂಡಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ಶಾಲಾ ಮೈದಾನ, ಹೆಚ್ಚುವರಿ ಕಟ್ಟಡ ಹಾಗೂ ಹರಿಜನ-ಗಿರಿಜನ ಯೋಜನೆಯ ಕೆಲಸವಾಗಿದ್ದು, ಸಮುದಾಯ ಭವನ ಇನ್ನೂ ನಿರ್ಮಾಣವಾಗಿಲ್ಲ.

    ಹಣಿಕುಣಿ(ಬೀದರ್)
    2007ರ ಮೇ ತಿಂಗಳಲ್ಲಿ ಬೀದರ್ ಜಿಲ್ಲೆಯ ಹಣಿಕುಣಿ, ಹುಮ್ನಾಬಾದ್ ಗ್ರಾಮಕ್ಕೆ ತೆರಳಿದ್ದ ಎಚ್ ಡಿ ಕುಮಾರಸ್ವಾಮಿ, ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಉಸ್ಮಾನ್ ಸಾಬ್ ನಿವಾಸದಲ್ಲಿ ತಂಗಿದ್ದರು. ಈ ವೇಳೆ ಕೊಟ್ಟ ಮಾತಿನಲ್ಲಿ ರೈತನ ಸಂಪೂರ್ಣ ಸಾಲ ಮನ್ನಾವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಇಬ್ಬರು ಮಕ್ಕಳಿಗೆ ಶಿಕ್ಷಣ, ಮಾದರಿ ಶಾಲೆ, ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಇನ್ನೂ ಈಡೇರಿಲ್ಲ. ಆದರೆ ನೀರಿನ ಸಮಸ್ಯೆ ಈಡೇರಿಕೆಗೆ ಪ್ರಯತ್ನ ಮಾಡಿದ್ದಾರೆ.

    ನಾವಳ್ಳಿ(ಧಾರವಾಡ)
    2006ರ ಅಕ್ಟೋಬರ್ ತಿಂಗಳಲ್ಲಿ ಧಾರವಾಡದ ನಾವಳ್ಳಿ ಗ್ರಾಮಕ್ಕೆ ತೆರಳಿದ್ದ ಎಚ್‍ಡಿಕೆ, ಅಲ್ಲಾಬಿ ನದಾಫ್ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಸುವರ್ಣ ಗ್ರಾಮ ಯೋಜನೆ ಜಾರಿಯಾದ್ರೆ, ಸಂಪೂರ್ಣವಾಗಿ ಈಡೇರಿಲ್ಲ. ಬಸ್ ಸೌಕರ್ಯ, ಈದ್ಗಾ ಮೈದಾನ, ಪ್ರತ್ಯೇಕ ಗ್ರಾಪಂ, ಹೈಸ್ಕೂಲ್ ನಿರ್ಮಾಣವಾಗಿದೆ. ಆದರೆ ತಾನು ಕೊಟ್ಟ ಮಾತಿನಲ್ಲಿ ಆಸ್ಪತ್ರೆ, ಹಂದಿಗ್ಯಾನ್ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾರ್ಯವಾಗಿಲ್ಲ.

    ನೀಲೋಗಿಪುರ(ಕೊಪ್ಪಳ)
    2007ರ ಜುಲೈ ತಿಂಗಳಲ್ಲಿ ಕೊಪ್ಪಳ ತಾಲೂಕಿನ ನೀಲೋಗಿಪುರಕ್ಕೆ ಭೇಟಿ ಕೊಟ್ಟಿರುವ ಎಚ್ ಡಿಕೆ ರಾಮನಗೌಡ ಡಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದು, ನೀರಾವರಿ ಅಭಿವೃದ್ಧಿ ಹಾಗೂ ಶೌಚಾಲಯ ವ್ಯವಸ್ಥೆಯ ಕನಸು ಕನಸಾಗಿಯೇ ಉಳಿದಿದೆ.

    ಚಿತ್ರಾಲಿ(ರಾಯಚೂರು)
    2007ರ ಜುಲೈನಲ್ಲಿ ರಾಯಚೂರು ಜಿಲ್ಲೆಯ ಚಿತ್ರಾಲಿ ಗ್ರಾಮಕ್ಕೆ ತೆರಳಿ ರೈತ ಯಲ್ಲಪ್ಪ ಮನೆಯಲ್ಲಿ ಎಚ್‍ಡಿಕೆ ತಂಗಿದ್ದರು. ಇಲ್ಲಿ ಸದ್ಯ ಯಾವ ಭರವಸೆಗಳೂ ಈಡೇರಿಲ್ಲ. ಕುಡಿಯುವ ನೀರು, ಮುಖ್ಯ ರಸ್ತೆ, ಬಸ್ ಸೌಲಭ್ಯ, ಪ್ರಾಥಮಿಕ ಶಾಲೆ ಅಭಿವೃದ್ಧಿ ಹಾಗೂ ಮೂಲಸೌಕರ್ಯವನ್ನು ಒದಗಿಸುವುದಾಗಿ ಹೇಳಿದ್ದು, ಇದುವರೆಗೂ ಯಾವುದೇ ಕಾರ್ಯ ಆರಂಭವಾಗಿಲ್ಲ.

    ಸಿಎಂ ವಾಸ್ತವ್ಯ ಮಾಡಿದ್ದ ಯಲ್ಲಪ್ಪ ಮನೆ ಸ್ಥಿತಿಯೂ ಬದಲಾಗಿಲ್ಲ. ಆಶ್ರಯ ಮನೆಯ ವಾಸ ಮುಂದುವರಿದಿದೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಶೌಚಾಲಯವೂ ಕಾಣೆಯಾಗಿದೆ. ಸಿಎಂ ಬರುವ ವೇಳೆ ತಂದಿದ್ದ ಮಂಚವನ್ನ ಮರುದಿನವೇ ವಾಪಸ್ ತೆಗೆದುಕೊಂಡು ಹೋಗಿದ್ದಾರೆ.

    ಮಧುರನಾಯಕನಹಳ್ಳಿ(ದಾವಣಗೆರೆ)
    2007ರ ಮೇ ತಿಂಗಳಿನಲ್ಲಿ ದಾವಣಗೆರೆಯ ಮಧುರನಾಯಕನಹಳ್ಳಿ ತೆರಳಿದ್ದ ವೇಳೆ ಸಾಕೀಬಾಯಿ ಎಂಬವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಆ ಬಳಿಕ ಇಲ್ಲಿ ಕುಡಿಯುವ ನೀರು, ರಸ್ತೆ ನಿರ್ಮಾಣವಾಗಿದ್ದು, ಶಾಶ್ವತ ಸಾರಿಗೆ ಸೌಲಭ್ಯ ಹಾಗೂ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿಯ ಭರವಸೆ ಈಡೇರಿಲ್ಲ.

    ಯಡ್ಡಿಹಳ್ಳಿ(ಬಳ್ಳಾರಿ)
    2007ರ ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿಯ ಯಡ್ಡಿಹಳ್ಳಿ, ಹರಪ್ಪನಹಳ್ಳಿಗೆ ತೆರಳಿದ್ದು, ತಳವಾರ್ ರಾಮಪ್ಪ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಇಲ್ಲಿ ಸದ್ಯ ಮೂಲಸೌಕರ್ಯ ಹಾಗೂ ಬಡವರಿಗೆ ಮನೆ ನಿರ್ಮಾಣವಾಗಿದೆ. ಆದರೆ ಹೈಸ್ಕೂಲ್ ಹಾಗೂ ಸರ್ಕಾರಿ ಆಸ್ಪತ್ರೆ ನಿರ್ಮಾಣವಾಗಿಲ್ಲ.

    ಕನ್ನಳ್ಳಿ(ಯಾದಗಿರಿ)
    2008ರ ಆಗಸ್ಟ್ ನಲ್ಲಿ ಯಾದಗಿರಿ ಜಿಲ್ಲೆಯ ಕನ್ನಳ್ಳಿ, ಹುಣಸಗಿಗೆ ಭೇಟಿ ಕೊಟ್ಟು ಕುಮಾರಸ್ವಾಮಿ ಅವರು ಮಲ್ಲಯ್ಯಸ್ವಾಮಿ ಹಿರೇಮಠ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸದ್ಯ ಇಲ್ಲಿ ಮೂಲಸೌಕರ್ಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದು, ಆರೋಗ್ಯ ಕೇಂದ್ರ ಹಾಗೂ ಗ್ರಂಥಾಲಯದ ಭರವಸೆ ಈಡೇರಿಲ್ಲ.

    ರಟ್ಟೀಹಳ್ಳಿ(ಹಾವೇರಿ)
    2006ರ ಅಕ್ಟೋಬರ್ ನಲ್ಲಿ ಹಾವೇರಿ ಜಿಲ್ಲೆಯ ಕಡೂರು, ರಟ್ಟೀಹಳ್ಳಿಗೆ ತೆರಳಿದ್ದು, ಜಗದೀಶ್ ಗೌಡ ಲಕ್ಕನಗೌಡರ ಮನೆಯಲ್ಲಿ ಕುಮಾರಸ್ವಾಮಿ ತಂಗಿದ್ದರು. ಸದ್ಯ ಇಲ್ಲಿ ಸುವರ್ಣ ಗ್ರಾಮ ಯೋಜನೆ, ರಸ್ತೆ ನಿರ್ಮಾಣ, ಆರೋಗ್ಯ ಕೇಂದ್ರ, ಕುಡಿಯುವ ನೀರಿನ ಸೌಲಭ್ಯ ದೊರೆತಿದೆ. ಆದರೆ ಎಸ್‍ಸಿ ಕಾಲನಿ ಸ್ಥಳಾಂತರ, ಕಾಲೇಜು ಸ್ಥಾಪನೆಯಾಗಿಲ್ಲ.

    https://www.youtube.com/watch?v=YgZ7K9ZSD2E

    https://www.youtube.com/watch?v=sMZnAXfe2hY

  • ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಗ್ರಾಮ ವಾಸ್ತವ್ಯಕ್ಕೆ ಸಿಎಂ ಕುಮಾರಸ್ವಾಮಿ ಷರತ್ತು

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಇದೇ ತಿಂಗಳು ಉತ್ತರ ಕರ್ನಾಟಕ ಭಾಗದಿಂದ ಚಾಲನೆ ಸಿಗಲಿದೆ. ಆದರೆ ಈ ಬಾರಿಯ ಗ್ರಾಮ ವಾಸ್ತವ್ಯ ಹಿಂದಿನ ಗ್ರಾಮ ವಾಸ್ತವ್ಯಕ್ಕಿಂತ ಸಾಕಷ್ಟು ವಿಶೇಷವಾಗಿರಲಿದೆ. ಜೊತೆಗೆ ಗ್ರಾಮ ವಾಸ್ತವ್ಯಕ್ಕೆ ಷರತ್ತುಗಳನ್ನು ಹಾಕಿದ್ದಾರೆ.

    ಪಂಚಾಯ್ತಿ ಅಥವಾ ಹೋಬಳಿ ಮಟ್ಟದ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಆ ಹೋಬಳಿ ಅಥವಾ ಪಂಚಾಯ್ತಿ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನ ಬಿಟ್ಟು ಬೇರೆ ಹೋಬಳಿಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲ್ಲಿಗೆ ಬರುವಂತಿಲ್ಲ. ಅದೇ ಹೋಬಳಿ ಅಥವಾ ಗ್ರಾಮ ಪಂಚಾಯ್ತಿ ಮಟ್ಟದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ತಮ್ಮ ಬೇಡಿಕೆಯನ್ನು ಮುಂದಿಡುವಂತಿಲ್ಲ. ಸಂಪೂರ್ಣವಾಗಿ ಗ್ರಾಮದ ಹಿತಕ್ಕಾಗಿ ಬೇಡಿಕೆ ಮಾತ್ರ ಇರಬೇಕು ಎಂದು ತಿಳಿದು ಬಂದಿದೆ.

    ಒಂದು ವೇಳೆ ಕಾರ್ಯಕರ್ತರ ಬೇಡಿಕೆ ಇದ್ದರೆ ಪ್ರತ್ಯೇಕವಾಗಿ ಮಾತನಾಡಿ ಮನವಿ ಸಲ್ಲಿಸಬಹುದು. ಸಿಎಂ ಉಳಿದುಕೊಳ್ಳುವ ಶಾಲೆ ಹೊಸದಾಗಿ ಸುಣ್ಣ ಬಣ್ಣ ಬಳಿದು ಸಿದ್ಧಪಡಿಸಿ ಆಡಂಬರ ಮಾಡುವಂತಿಲ್ಲ. ಶೌಚಾಲಯ ಮುಂತಾದ ವ್ಯವಸ್ಥೆಗಳು ಮೊದಲು ಹೇಗಿತ್ತೋ ಹಾಗೆ ಇರಬೇಕು. ಮುಖ್ಯಮಂತ್ರಿ ಬರುತ್ತಾರೆ ಅನ್ನೋ ಕಾರಣಕ್ಕೆ ಶಾಲೆಗೆ ಏಕಾಏಕಿ ಸೌಲಭ್ಯ ಕಲ್ಪಿಸುವಂತಿಲ್ಲ. ಸಿಎಂ ಕುಮಾರಸ್ವಾಮಿಗಾಗಿ ಹೊಸದಾಗಿ ವ್ಯವಸ್ಥೆ ಕಲ್ಪಿಸಿ ಸಿಎಂ ಹೋದ ನಂತರ ಅದನ್ನ ಅಲ್ಲಿಂದ ಕೊಂಡೊಯ್ಯುವ ಬೂಟಾಟಿಕೆ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದ್ದಾರೆ.

    2006ರಲ್ಲಿ ಗ್ರಾಮ ವಾಸ್ತವ್ಯ ವೇಳೆ ಅಧಿಕಾರಿಗಳ ಇಂತಹ ವರ್ತನೆಯಿಂದ ಸಿಎಂ ಕುಮಾರಸ್ವಾಮಿಗೆ ಮುಜುಗರ ಆಗಿತ್ತು. ಅದಕ್ಕೆ ಈ ಬಾರಿ ಅಂತದ್ದಕ್ಕೆ ಅವಕಾಶ ಆಗದ ರೀತಿ ಪೂರ್ಣ ಪ್ರಮಾಣದ ಗ್ರಾಮ ವಾಸ್ತವ್ಯ ಆಗುವಂತೆ ನೋಡಿಕೊಳ್ಳಿ ಎಂದು ಸಿಎಂ ಸೂಚಿಸಿದ್ದಾರೆ. ಸಿಎಂ ಕಚೇರಿಯಿಂದ ಇದೇ ಮಾಹಿತಿ ಜಿಲ್ಲಾಡಳಿತಕ್ಕೆ ರವಾನೆಯಾಗಲಿದೆ. ಹೀಗೆ ಈ ಬಾರಿಯ ಗ್ರಾಮ ವಾಸ್ತವ್ಯವನ್ನ ಯಶಸ್ವಿಗೊಳಿಸಲು ಸಿಎಂ ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.