Tag: ಗ್ರಾಮ ವಾಸ್ತವ್ಯ

  • ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    ಸಿಎಂ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟಿಸಿದ 50 ಕಾರ್ಮಿಕರ ವಿರುದ್ಧ ಕೇಸ್

    – ಇಬ್ಬರು ಪೊಲೀಸರು ಅಮಾನತು

    ರಾಯಚೂರು: ಸಿಎಂ ಗ್ರಾಮ ವಾಸ್ತವ್ಯ ಆಗಮಿಸುತ್ತಿದ್ದಾಗ ಪ್ರತಿಭಟಿಸಿದ 50 ಮಂದಿ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರ ವಿರುದ್ಧ ಕೇಸ್ ದಾಖಲಾಗಿದೆ.

    ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಒಂದು ದಿನದ ಶಾಲಾ ವಾಸ್ತವ್ಯಕ್ಕೆ ಹೋಗುತ್ತಿದ್ದ ಸಿಎಂ ಬಸ್ಸನ್ನು ತಡೆದು ರಾಯಚೂರಿನ ಸಕ್ರ್ಯೂಟ್ ಹೌಸ್ ಮುಂದೆ ವೈಟಿಪಿಎಸ್ ಕಾರ್ಮಿಕರು ಪ್ರತಿಭಟನೆ ಮಾಡಿದ್ದರು. ಈ ಸಂದರ್ಭದಲ್ಲಿ ಸಿಎಂ ಪ್ರತಿಭಟನಾಕಾರರ ಮೇಲೆ ಗರಂ ಆಗಿದ್ದರು.

    ಈಗ ಸಿಎಂ ವಿರುದ್ಧ ಪ್ರತಿಭಟನೆ ಮಾಡಿದ 50 ಜನ ಕಾರ್ಮಿಕರ ವಿರುದ್ಧ ರಾಯಚೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‍ಪಿ ಡಾ ಸಿ.ಬಿ ವೇದಮೂರ್ತಿ ನಿಯಮ ಉಲ್ಲಂಘಿಸಿ ಪ್ರತಿಭಟಿಸಿದ ಹಿನ್ನೆಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಎಂ ಭದ್ರತೆ ವೈಫಲ್ಯದ ಹಿನ್ನೆಲೆಯಲ್ಲಿ ರಾಯಚೂರು ಗ್ರಾಮೀಣ ಪಿಎಸ್‍ಐ ಹಾಗೂ ಯರಗೇರಾ ಸಿಪಿಐ ಅವರನ್ನು ಅಮಾನತು ಮಾಡಲಾಗಿದ್ದು, ಪೊಲೀಸ್ ಅಧಿಕಾರಿಗಳ ಅಮಾನತು ಖಂಡಿಸಿ ಮಾದಿಗ ಜಾಗೃತಿ ಸೇನೆ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.

    ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರಾಮಾಣಿಕ ಹಾಗೂ ಉತ್ತಮ ಅಧಿಕಾರಿಗಳು ಆಗಿದ್ದಾರೆ. ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಆಕ್ರೋಶ ಕೂಗುತ್ತಿದ್ದಾರೆ.

  • ಜನರ ಸಮಸ್ಯೆ ಅರ್ಥವಾಗೋಕೆ ಇನ್ನೆಷ್ಟು ತಲೆಮಾರಿನ ಅಧಿಕಾರ ಬೇಕು: ಸಿಎಂಗೆ ಸಿಟಿ ರವಿ ಪ್ರಶ್ನೆ

    ಜನರ ಸಮಸ್ಯೆ ಅರ್ಥವಾಗೋಕೆ ಇನ್ನೆಷ್ಟು ತಲೆಮಾರಿನ ಅಧಿಕಾರ ಬೇಕು: ಸಿಎಂಗೆ ಸಿಟಿ ರವಿ ಪ್ರಶ್ನೆ

    ಮಡಿಕೇರಿ: 2 ತಲೆಮಾರುಗಳು ಅಧಿಕಾರ ನಡೆಸಿದ್ದರೂ ಸಿಎಂ ಅವರಿಗೆ ರಾಜ್ಯದ ಸಮಸ್ಯೆಗಳು ಇನ್ನೂ ಅರ್ಥವಾಗದಿರುವುದು ರಾಜ್ಯದ ಜನತೆಯ ದುರಾದೃಷ್ಟ ಎಂದು ಗ್ರಾಮ ವಾಸ್ತವ್ಯವನ್ನು ಶಾಸಕ ಸಿ.ಟಿ ರವಿ ಟೀಕಿಸಿದ್ದಾರೆ.

    ಮಡಿಕೇರಿ ನಗರದ ಬಾಲ ಭವನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನ ಕಾರ್ಯಕ್ರಮಕ್ಕೆ ಸಿ.ಟಿ ರವಿ ಆಗಮಿಸಿದ್ದರು. ಅಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿದ ಅವರು, ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಅಧಿಕಾರ ಸಿಎಂ ಅವರಿಗೆ ಅನಿರೀಕ್ಷಿತವಾಗಿ ಸಿಕ್ಕಿದೆ. ಮಹತ್ಮಾ ಗಾಂಧಿಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ದೇಶಸುತ್ತಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾಯಕತ್ವ ವಹಿಸಿಕೊಳ್ಳಲಿಲ್ಲವೇ? ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಇವರಿಗೆ ಇನ್ನೂ ಎಷ್ಟು ತಲೆಮಾರುಗಳು ಬೇಕು ಎಂದು ಪ್ರಶ್ನಿಸಿದರು.

    ಬಳಿಕ ನಿಖಿಲ್ ಕುಮಾರಸ್ವಾಮಿ ಅವರು ಸಿನಿಮಾ ಕ್ಷೇತ್ರದಲ್ಲಿದ್ದವರು. ಅವರು ಒಂದು ವೇಳೆ ಗ್ರಾಮ ವಾಸ್ತವ್ಯ ಮಾಡುವುದರಲ್ಲಿ ಅರ್ಥವಿದೆ. ಆದರೆ ದೇವೇಗೌಡರು ಒಮ್ಮೆ ಪ್ರಧಾನಿ ಹಾಗೂ ಸಿಎಂ ಆಗಿದ್ದಾರೆ. ಸಿಎಂ ಅವರು ಈಗ ಎರಡನೇ ಬಾರಿ ಆ ಸ್ಥಾನವನ್ನು ಅಲಂಕರಿಸಿದ್ದಾರೆ. ಎರಡು ತಲೆಮಾರು ಆಡಳಿತ ನಡೆಸಿದರು ಇನ್ನೂ ಜನರ ಸಮಸ್ಯೆ ಬಗ್ಗೆ ಅವರಿಗೆ ಅರ್ಥವಾಗಿಲ್ಲ. ಇದು ರಾಜ್ಯದ ಜನತೆಯ ದುರಾದೃಷ್ಟ ಎಂದು ಟಾಂಗ್ ಕೊಟ್ಟರು.

    ಬಿಜೆಪಿ ವಿರುದ್ಧ ಸಿಎಂ ಹಾಗೂ ಮಾಜಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಇವರಂತೆ ಮೋದಿ ಅವರೇನು ನಾಟಕ ಆಡಿದ್ದಾರೆಯೇ? ಅವರೇನೂ ಜನತೆಯ ವಿಶ್ವಾಸ ಗಳಿಸಿಲ್ಲವೇ? ಜನ ಯಾವುದನ್ನು ಪ್ರಧಾನಿ ಅವರನ್ನು ಕೇಳಬೇಕು ಎಂಬುದು ಗೊತ್ತಿದೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಇಬ್ಬರಿಗೂ ಜವಾಬ್ದಾರಿ ಇದೆ. ಸಂವಿಧಾನದ ಅಡಿಯಲ್ಲಿ ಸಿಎಂ ಆದವರಿಗೆ ಪಕ್ಷದ ತಾರತಮ್ಯ ಮಾಡುವ ಅಧಿಕಾರವನ್ನು ಕೊಟ್ಟಿಲ್ಲ. ದೇಶದ ಜನತೆ ಪ್ರಾಮಾಣಿಕ, ದೇಶಭಕ್ತಿ ನೋಡಿ ಬಿಜೆಪಿ ಬೆಂಬಲಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಂತೆ ಜಾತಿ ರಾಜಕಾರಣ ಮಾಡಿದ್ದರೆ ಮೋದಿ ಅವರನ್ನೂ ಸೋಲಿಸುತ್ತಿದ್ದರು. ಜಾತಿ ರಾಜಕಾರಣ ಮಾಡಿದ್ದರಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತಿದ್ದು ಎಂದು ತಿರುಗೇಟು ನೀಡಿದರು.

    ರಾಜ್ಯಾಧ್ಯಕ್ಷ ಎಂಬುದು ಅಧಿಕಾರದ ಹುದ್ದೆಯಲ್ಲ. ಅದೊಂದು ಪಕ್ಷ ಸಂಘಟಿಸುವ ಜಬಾಬ್ದಾರಿ. ಅಧಿಕಾರದ ಹುದ್ದೆಯಾಗಿದ್ದರೆ ಅದಕ್ಕೆ ಸ್ಪರ್ಧೆ ಇರುತ್ತದೆ. ಸಂಘಟನೆಗೆ ಸ್ಪರ್ಧೆಯ ಅಗತ್ಯವಿಲ್ಲ. ರಾಜ್ಯಾಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಲು ಹಲವರಿಗೆ ಯೋಗ್ಯತೆ ಇದ್ದು, ಸಮಯ ಬಂದಾಗ ಪಕ್ಷದ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

    ಜುಲೈ 6 ರಿಂದ ದೇಶಾದ್ಯಂತ ಸದಸ್ಯತ್ವ ಅಭಿಯಾನ ಪ್ರಾರಂಭವಾಗಲಿದೆ. ಈ ಬಾರಿ ರಾಜ್ಯದಲ್ಲಿ 50 ಲಕ್ಷ ಹೊಸ ಮತಗಳ ನೊಂದಣಿ ಗುರಿ ಹೊಂದಿದ್ದೇವೆ. ದುರ್ಬಲ ಮತಗಟ್ಟೆಗಳನ್ನು ಕೇಂದ್ರೀಕರಿಸಿ ಶಕ್ತಿ ತುಂಬುವ ಹಾಗೂ ಮಡಿಕೇರಿಯಲ್ಲಿ ಶೇ. 20 ಮತಗಳನ್ನು ಹೆಚ್ಚಿಸುವ ಉದ್ದೇಶ ಹೊಂದಿದ್ದೇವೆ. ನಮ್ಮ ಟಾರ್ಗೆಟ್ 18% ಇರುವ ನವ ಮತದಾರರು. ಎಲ್ಲಾ ವರ್ಗದ ಮತದಾರರ ವಿಶ್ವಾಸ ಗಳಿಸಲು ಸದಸ್ಯತ್ವ ಆಂದೋಲನ ನಡೆಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಈಗಿನಿಂದಲೇ ಫೀಲ್ಡಿಗೆ ಇಳಿಯಲಾಗಿದೆ ಎಂದು ತಿಳಿಸಿದರು.

  • ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಇಂದು ರಾತ್ರಿ ಅಮೆರಿಕಾಗೆ ಸಿಎಂ- ನನ್ನ ದುಡ್ಡಲ್ಲಿ ಫಾರಿನ್ ಟ್ರಿಪ್ ಎಂದ ಮುಖ್ಯಮಂತ್ರಿ

    ಬೀದರ್: ಮುಖ್ಯಮಂತ್ರಿ ಇಂದು ರಾತ್ರಿ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಆದಿಚುಂಚನಗಿರಿ ಮಠದ ಶಂಕುಸ್ಥಾಪನೆಗಾಗಿ ಸಿಎಂ 9 ದಿನ ಪ್ರವಾಸ ಕೈಗೊಳ್ಳುತ್ತಿದ್ದು, ಹೀಗಾಗಿ ಸಿಎಂ ಅವರು ಸ್ವಲ್ಪ ದಿನ ರಾಜ್ಯದಲ್ಲಿ ಇರಲ್ಲ.

    ಈ ಕುರಿತು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ ಸಿಎಂ, ಆದಿಚುಂಚನಗಿರಿಯ ಶ್ರೀಗಳು ನ್ಯೂಜೆರ್ಸಿಯಲ್ಲಿ ಮಠವೊಂದನ್ನ ಕಟ್ಟಿಸುತ್ತಿದ್ದಾರೆ. ಅದರ ಶಂಕು ಸ್ಥಾಪನೆಗಾಗಿ ನಾನು ಬರಲೇಬೇಕೆಂದು ಶ್ರೀಗಳು ಒತ್ತಾಯ ಮಾಡುತ್ತಿದ್ದಾರೆ. ನಾನೇನೂ ಸರ್ಕಾರದ ವೆಚ್ಚದಲ್ಲಿ ಹೋಗುತ್ತಿಲ್ಲ. ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಬೀದರ್‍ನ ಬಸವಕಲ್ಯಾಣದ ಉಜಳಂಬದಲ್ಲಿ ಮುಖ್ಯಮಂತ್ರಿಗಳು ತಮ್ಮ ಗ್ರಾಮ ವಾಸ್ತವ್ಯ ಮುಗಿಸಿದ್ದಾರೆ. ಗುರುವಾರ ರಾತ್ರಿ 9 ಗಂಟೆವರೆಗೂ ಜನತಾ ದರ್ಶನ ನಡೆಸಿದ ಸಿಎಂ, 4 ಸಾವಿರಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಿದರು. ಇಂದು ಬೀದರ್ ವಾಯುನೆಲೆಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನತ್ತ ಪ್ರಯಾಣಿಸಲಿದ್ದು, ಮಧ್ಯಾಹ್ನ 12.30ಕ್ಕೆ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.

    ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತು ಸಾಧಕ-ಬಾಧಕ ಕುರಿತು ವರದಿ ನೀಡಲು ಸಮಿತಿ ರಚಿಸುವ ಸಾಧ್ಯತೆ ಇದೆ. ಮಳೆಗಾಲದ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡುವ ಸಾಧ್ಯತೆ ಇದೆ. ಈ ನಡ್ವೆ ಇಂದು ರಾತ್ರಿ ಸಿಎಂ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ.

  • ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಗ್ರಾಮ ವಾಸ್ತವ್ಯದ ವೇಳೆ ಮೂರ್ಛೆ ತಪ್ಪಿ ಬಿದ್ದ ಎಎಸ್‍ಐ

    ಬೀದರ್: ಬಿಸಿಲು ತಾಳಲಾರದೇ ಎಎಸ್‍ಐ ಒಬ್ಬರು ಮೂರ್ಛೆ ತಪ್ಪಿ ಬಿದ್ದ ಘಟನೆ ಗುರುವಾರ ಸಿಎಂ ಗ್ರಾಮ ವಾಸ್ತವ್ಯ ಹೂಡಿರುವ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.

    ಗುರುಮಠಕಲ್ ಠಾಣೆಯ ಎಎಸ್‍ಐ ರಾಜೇಂದ್ರ ಅವರನ್ನು ಉಜಳಂಬ ಗ್ರಾಮದಲ್ಲಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ರಾಜೇಂದ್ರ ಅವರು ಉಜಳಂಬ ಗ್ರಾಮದ ಹೊರವಲಯದಲ್ಲಿ ವಾಹನ ಪಾರ್ಕಿಂಗ್ ಹಾಗೂ ತಪಾಸಣೆ ನಡೆಸುತ್ತಿದ್ದರು. ಹೀಗಾಗಿ ಭಾರೀ ಬಿಸಿಲು ಇದ್ದರಿಂದ ಅಸ್ವಸ್ಥಗೊಂಡ ಅವರು ಮೂರ್ಛೆ ತಪ್ಪಿ ಬಿದ್ದಿದ್ದರು. ತಕ್ಷಣವೇ ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಅಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ಕೊಡಿಸಿದ್ದಾರೆ.

    ರಾಜೇಂದ್ರ ಅವರಿಗೆ ಮಧುಮೇಹ ಹಾಗೂ ಬಿಪಿ (ರಕ್ತದೊತ್ತಡ) ಸಮಸ್ಯೆ ಇತ್ತು. ಬೆಳಗ್ಗೆಯಿಂದ ಅವರು ಬಿಸಿಲಿನಲ್ಲಿಯೇ ಕೆಲಸ ಮಾಡಿದ್ದರಿಂದ ಆಯಾಸಗೊಂಡು ಬಿದ್ದಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ. ರಾಜೇಂದ್ರ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.

    ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಗ್ರಾಮಕ್ಕೆ ಕರೆತಂದಿತ್ತು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.

    https://www.youtube.com/watch?v=Vz3pwT5YEWE

    ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.

  • ಆನೆ ಎರಡು ಬಾರಿ ಹಾಕಿದರೂ ನಾಡದೊರೆಯ ಕೊರಳಿಗೆ ಬೀಳಲಿಲ್ಲ ಹಾರ

    ಆನೆ ಎರಡು ಬಾರಿ ಹಾಕಿದರೂ ನಾಡದೊರೆಯ ಕೊರಳಿಗೆ ಬೀಳಲಿಲ್ಲ ಹಾರ

    ಬೀದರ್: ಇಂದು ಸಿಎಂ ಜಿಲ್ಲೆಯನ ಬಸವಕಲ್ಯಾಣ ತಾಲೂಕಿನ ಉಜಳಂಬ ಗ್ರಾಮ ವಾಸ್ತವ್ಯ ಹೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಅವರಿಗೆ ಅದ್ಧೂರಿಗಾಗಿ ಸ್ವಾಗತ ಕೋರಲು ಆನೆಯನ್ನು ಕರೆತರಲಾಗಿತ್ತು. ಆದರೆ ಆನೆ ಹಾಕಿದ ಹೂವಿನ ಹಾರ ಎರಡು ಬಾರಿಯೂ ಸಿಎಂ ಕೊರಳಿಗೆ ಬೀಳಲಿಲ್ಲ.

    ಸಿಎಂ ಅವರಿಗೆ ಹಾರ ಹಾಕಿಸಲೆಂದೇ ಜಿಲ್ಲಾಡಳಿತ ಕಲಬುರಗಿಯ ಕಡಗಂಚಿ ಮಠದ ಆನೆಯನ್ನು ಉಜಳಂಬ ಗ್ರಾಮಕ್ಕೆ ಕರೆತಂದಿದ್ದರು. ಇಂದು ಸಿಎಂ ಗ್ರಾಮಕ್ಕೆ ಹೋದಾಗ ಎತ್ತಿನಗಾಡಿ ಮೂಲಕ ಮೆರವಣಿಗೆ ಮಾಡಲಾಯಿತು. ಈ ವೇಳೆ ಸಿಎಂ ಸ್ವಾಗತ ಕೋರಲು ಆನೆಯಿಂದ ಹೂವಿನ ಹಾರ ಹಾಕಿಸಲು ಗ್ರಾಮಸ್ಥರು ಮುಂದಾದರು. ಈ ಸಂದರ್ಭದಲ್ಲಿ ಆನೆ ಹಾರ ಹಾಕಿದ್ದು, ಈ ಹಾರ ಸಿಎಂ ಕೊರಳಿಗೆ ಬೀಳದೇ ನೆಲಕ್ಕೆ ಬಿದ್ದಿದೆ.


    ಮೊದಲ ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಆನೆಯಿಂದ ಹಾರ ಹಾಕಿಸುವಂತೆ ಅಲ್ಲಿದ್ದ ಜನ ಆಗ್ರಹಿಸಿದ್ದಾರೆ. ಆಗ ಒಲ್ಲದ ಮನಸ್ಸಿನಿಂದ ಸಿಎಂ ಹಾರ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಆಗಲೂ ಆನೆ ಹಾಕಿದ ಹಾರ ಸಿಎಂ ಕೊರಳಿಗೆ ಬೀಳದೇ ಎತ್ತಿನ ಬಂಡಿಯ ಮೇಲೆ ಬಿದ್ದಿದೆ.

    https://www.youtube.com/watch?v=Vz3pwT5YEWE

  • ಗ್ರಾಮದಲ್ಲಿ ಪಿಎಸ್‍ಐ ವಾಸ್ತವ್ಯ – ಜನರಿಂದ ಪ್ರಶಂಸೆ

    ಗ್ರಾಮದಲ್ಲಿ ಪಿಎಸ್‍ಐ ವಾಸ್ತವ್ಯ – ಜನರಿಂದ ಪ್ರಶಂಸೆ

    ಹಾಸನ: ಮುಖ್ಯಮಂತ್ರಿ ಅವರಂತೆ ಹಾಸನ ಜಿಲ್ಲಾಧಿಕಾರಿ ಅರಸೀಕೆರೆ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು. ಇದೀಗ ಚನ್ನರಾಯಪಟ್ಟಣ ನಗರ ಪಿಎಸ್‍ಐಯೊಬ್ಬರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪ್ರಶಂಸೆ ಗಳಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮ ಪಟ್ಟಣದ ಹೊರವಲಯದಲ್ಲಿದ್ದು ನಗರ ಠಾಣೆ ಪಿಎಸ್‍ಐ ಮಂಜುನಾಥ್ ತಮ್ಮ ಸಿಬ್ಬಂದಿಯೊಂದಿಗೆ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ವಿಚಾರಿಸಿದ್ದಾರೆ.

    ಗ್ರಾಮದ ದೇವಸ್ಥಾನದ ಬಳಿ ಗ್ರಾಮ ಸಭೆ ನಡೆಸಿದ ನಂತರ ಮಂಜುನಾಥ್ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಥವಾ ಸಹಾಯಕ್ಕಾಗಿ ಬರಲು ಸಾರ್ವಜನಿಕರು ಹಿಂಜರಿಯಬಾರದು ಎಂದು ಮನವಿ ಮಾಡಿದ ಸಬ್ ಇನ್ಸ್ ಪೆಕ್ಟರ್ ತಿಂಗಳಲ್ಲಿ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವುದು ನಿಯಮವಾಗಿದೆ ಎಂದು ತಿಳಿಸಿದರು.

    ಈ ಬಗ್ಗೆ ಮಾತನಾಡಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು, ಕೆಲವು ಜನರು ಪೊಲೀಸ್ ಠಾಣೆಗೆ ಹೋಗಲು ಸ್ವಲ್ಪ ಮುಜುಗರ ಮಾಡಿಕೊಳ್ಳುತ್ತಾರೆ. ಇದೇ ವಿಚಾರವಾಗಿ ಯಡಿಯೂರಿನಲ್ಲಿ ಡಬಲ್ ಮರ್ಡರ್ ಆಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಈಗ ಆತ ಬಂಧನದಲ್ಲಿ ಇದ್ದಾನೆ. ಈಗಲು ಕೆಲವರಿಗೆ ಪೊಲೀಸ್ ಠಾಣೆ ಎಂದರೆ ಸಂಕೋಚ ಹಾಗೂ ಭಯದ ವಾತಾವರಣ ಇದೆ. ಹಾಗಾಗಿ ನಾವು ಪ್ರತಿ ಹಳ್ಳಿ-ಹಳ್ಳಿಗೆ ಬೀಟ್ ಸೇವೆ ಮಾಡುತ್ತಿದ್ದೇವೆ ಎಂದರು.

    ನಮ್ಮ ಪೊಲೀಸ್ ಇಲಾಖೆಯಲ್ಲಿ ಫ್ರೆಂಡ್ಲಿ ಪೊಲೀಸಿಂಗ್ ಇದೆ. ನಾವು ಏಕೆ ಮುಕ್ತವಾಗಿ ಫೋನ್ ನಂಬರ್ ಕೊಡುತ್ತೇವೆ ಎಂದರೆ ನಿಮಗೆ ಸಂಕೋಚ ಇದ್ದು, ಠಾಣೆಗೆ ಬರುವುದಕ್ಕೆ ಆಗಲಿಲ್ಲ ಎಂದರೂ ಕರೆ ಮೂಲಕ ನಿಮ್ಮ ಸಮಸ್ಯೆ ಹೇಳಿಕೊಂಡರೆ, ನಾವು ಬೀಟ್ ಸರ್ವಿಸ್‍ನಲ್ಲಿರುವ ಅಧಿಕಾರಿಯನ್ನು ಕಳುಹಿಸುತ್ತೇವೆ. ಪೊಲೀಸ್ ಠಾಣೆಗೆ ಹೋದರೆ ಕೆಟ್ಟವರಾಗುತ್ತೇವೆ ಎಂದುಕೊಳ್ಳುತ್ತಾರೆ. ಪೊಲೀಸ್ ಠಾಣೆಯಲ್ಲಿ ಇರುವವರೆಲ್ಲ ಕೆಟ್ಟವರಲ್ಲ. ನಾವು ನಿಮ್ಮವರೆ. ನಮಗೂ ಅಕ್ಕ-ತಂಗಿ ಇದ್ದಾರೆ. ಪೊಲೀಸ್ ಠಾಣೆಗೆ ಬರಲು ಸಂಕೋಚ ಪಡೆದುಕೊಳ್ಳಬೇಡಿ ಎಂದು ಮಂಜುನಾಥ್ ಮನವಿ ಮಾಡಿದರು.

  • ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    ಸರ್ಕಾರಿ ದುಡ್ಡು ಜೆಡಿಎಸ್ ಜಾತ್ರೆ – ಗ್ರಾಮ ವಾಸ್ತವ್ಯಕ್ಕೆ ರವಿಕುಮಾರ್ ವ್ಯಂಗ್ಯ

    – ಸಿಎಂ ಕನಸಿನಲ್ಲೂ ಮೋದಿ ಕಾಡ್ತಿದ್ದಾರೆ

    ಯಾದಗಿರಿ: ಸರ್ಕಾರದ ದುಡ್ಡಿನಲ್ಲಿ ಜೆಡಿಎಸ್ ಗ್ರಾಮ ವಾಸ್ತವ್ಯ ಎಂಬ ಜಾತ್ರೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕನಸಿನಲ್ಲೂ ಮೋದಿ ಕಾಡುತ್ತಿದ್ದಾರೆ. ವೈಟಿಪಿಎಸ್ ಸಿಬ್ಬಂದಿಗೆ ಲಾಠಿ ಬೀಸಲು ಹೇಳುತ್ತಿರಾ. ಕರ್ನಾಟಕದಲ್ಲಿ ಪೊಲೀಸ್ ರಾಜ್ಯ ನಿರ್ಮಿಸಲು ನೀವು ಹೊರಟಿದ್ದೀರಾ ಎಂದು ಪ್ರಶ್ನಿಸಿ ಮುಖ್ಯಮಂತ್ರಿಗಳ ವಿರುದ್ಧ ಗುಡುಗಿದರು.

    ಸರ್ಕಾರದ ದುಡ್ಡಿನಲ್ಲಿ ಸಿಎಂ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಈ ಬಗ್ಗೆ ಸ್ಪಷ್ಟನೆಯನ್ನು ಕೊಡಬೇಕು. ಮಾಜಿ ಪ್ರಧಾನಿ ದೇವೇಗೌಡರು ಪುತ್ರನ ವ್ಯಾಮೋಹದಲ್ಲಿದ್ದಾರೆ. ಸಿಎಂ ಏನೇ ತಪ್ಪು ಮಾಡಿದರೂ ದೊಡ್ಡಗೌಡರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಶಾಲೆಗಳಿಗೆ ಮೂಲ ಸೌಕರ್ಯವನ್ನು ನೀಡದೆ. ಸಿಎಂ ‘ಗ್ರಾಮ ಡ್ರಾಮ’ ಮಾಡುತ್ತಿದ್ದಾರೆ. ನಾಟಕ ಮಾಡೋದನ್ನು ಬಿಟ್ಟು ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಹೇಳಿದರು.

    ಹೊಳೆನರಸೀಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದಾರೆ. ಆದರೆ ಯಾದಗಿರಿಗೆ ಸಿಎಂ ಮೆಡಿಕಲ್ ಕಾಲೇಜು ಬೇಡ ಎನ್ನುತ್ತಾರೆ. ಸಿಎಂ ಗ್ರಾಮ ವಾಸ್ತವ್ಯಕ್ಕೆ ನಿಂಬೆಹಣ್ಣಿನ ಶಕ್ತಿ ಅಡ್ಡಿ ಮಾಡುತ್ತಿದೆ ಎಂದು ದೇವೇಗೌಡರ ಕಾಲೆಳೆದ ರವಿಕುಮಾರ್, ಒಂದು ವರ್ಷ ರೆಸಾರ್ಟ್ ವಾಸವಾಯ್ತು, ಈಗ ಗ್ರಾಮ ಡ್ರಾಮ ನಂತರ ಅಮೆರಿಕಾಗೆ ಸಿಎಂ ತೆರಳಲಿದ್ದಾರೆ ಎಂದು ವ್ಯಂಗ್ಯವಾಡಿದರು.

  • ನೀವು ಸಿಎಂ ಆಗದಿದ್ದದ್ರೆ ದಾರಿಯಲ್ಲಿ ಹೋಗೋ ನಾಯಿ ಕೂಡಾ ಮೂಸುತ್ತಿರಲಿಲ್ಲ: ಈಶ್ವರಪ್ಪ

    ನೀವು ಸಿಎಂ ಆಗದಿದ್ದದ್ರೆ ದಾರಿಯಲ್ಲಿ ಹೋಗೋ ನಾಯಿ ಕೂಡಾ ಮೂಸುತ್ತಿರಲಿಲ್ಲ: ಈಶ್ವರಪ್ಪ

    ಬೆಂಗಳೂರು: ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸಯ್ಯನೂ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮ ಬಳಿ ಬಂದು ಮೂಸಲ್ಲ ಎಂದು ಸಿಎಂ ಹೇಳಿಕೆಗೆ ಮಾಜಿ ಡಿಸಿಎಂ ಈಶ್ವರಪ್ಪ ಅವಹೇನಕಾರಿ ಹೇಳಿಕೆ ಕೊಟ್ಟಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಮತದಾರರಿಗೆ, ತಮಗೆ ಯಾರು ಬೇಕೋ ಆ ಅಭ್ಯರ್ಥಿಗೆ ವೋಟು ಹಾಕುವ ಪೂರ್ಣ ಸ್ವಾತಂತ್ರ್ಯ ಇದೆ. ಜನರು ವೋಟು ಹಾಕಿದ್ದಕ್ಕೆ ನೀವು ಮುಖ್ಯಮಂತ್ರಿ ಆಗಿದ್ದೀರಿ. ಆದರೆ ಈಗ ನಿಮ್ಮ ಮೈತ್ರಿ ಸರ್ಕಾರ ಸರಿಯಿಲ್ಲ. ಹೀಗಾಗಿ ದೇಶದಲ್ಲಿ ಮೋದಿ ಸರ್ಕಾರ ಬೇಕು ಎಂದು ಮೋದಿ ಅವರಿಗೆ ಜನರು ಮತ ಹಾಕಿದ್ದಾರೆ. ನಾವು ಎಂಎಲ್‍ಎ ಆದರೆ ನಮ್ಮ ಬಳಿ ಜನರು ಬರುತ್ತಾರೆ. ಅದೇ ರೀತಿ ನೀವು ಮುಖ್ಯಮಂತ್ರಿ ಎಂಬ ಕಾರಣಕ್ಕೆ ಜನರು ಕಷ್ಟ ಹೇಳಿಕೊಳ್ಳಲು ಜನರು ನಿಮ್ಮ ಬಳಿ ಬರುತ್ತಾರೆ ಎಂದು ಸಿಎಂ ಹೇಳಿಕೆ ಗರಂ ಆಗಿ ಉತ್ತರಿಸಿದ್ದಾರೆ.

    ನೀವು ಜನರು ಕಷ್ಟವನ್ನು ಕೇಳಲು ಗ್ರಾಮ ವಾಸ್ತವ್ಯ ಮಾಡುತ್ತಿರುವುದು. ಈಗ ರೀತಿ ನಡೆದುಕೊಳ್ಳುವುದು ಸರಿಯಿಲ್ಲ. ಹೀಗಾಗಿ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ರಸ್ತೆಯಲ್ಲಿ ಹೋಗುವ ದಾಸಯ್ಯನೂ ಬರಲ್ಲ. ಒಂದು ನಾಯಿನೂ ಕೂಡ ನಿಮ್ಮ ಬಳಿ ಬಂದು ಮೂಸಲ್ಲ. ನೀವು ಮುಖ್ಯಮಂತ್ರಿ ಅನ್ನೋ ಕಾರಣಕ್ಕೆ ಜನ ನಿಮ್ಮ ಬಳಿ ಬರುತ್ತಾರೆ ಎಂದು ಸಿಎಂ ಬಗ್ಗೆ ಅವಹೇಳಕಾರಿ ಹೇಳಿಕೆ ಕೊಟ್ಟಿದ್ದಾರೆ.

    ಸಹಾಯ ಹೇಳಿ ಬಂದ ಜನರಿಗೆ ಸ್ಪಂದಿಸಿ. ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನಿಖಿಲ್ ಸೋತು, ಪ್ರಜ್ವಲ್ ಗೆದ್ದಿರುವುದು ಸಿಎಂಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಆ ಸಿಟ್ಟನ್ನು ಜನರ ಮೇಲೆ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇಂತ ಪೌರುಷ ನಡೆಯಲ್ಲ. ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಜನ ಇಂದಿರಾ ಗಾಂಧಿ ಮತ್ತು ಆ ಪಕ್ಷವನ್ನು ತಿರಸ್ಕಾರ ಮಾಡಿದ್ದರು. ಈಗ ನಿಮ್ಮನ್ನು ಇದೇ ರೀತಿ ಮಾಡುತ್ತಿದ್ದಾರೆ. ನೀವು ಗ್ರಾಮವಾಸ್ತವ್ಯಕ್ಕೆ ಹೋಗುವ ಮೊದಲು ಮೋದಿಗೆ ವೋಟು ಹಾಕಿದವರು ನನ್ನ ಬಳಿ ಬರಬೇಡಿ ಎಂದು ಬೋರ್ಡ್ ಹಾಕಿಕೊಳ್ಳಿ ಎಂದು ಸಿಎಂಗೆ ನೇರವಾಗಿ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ.

  • ಸಿಎಂ ವಾಸ್ತವ್ಯಕ್ಕೆ ಉಜಳಂಬದಲ್ಲಿ ಸಿದ್ಧತೆ- ಹೊಸ ಕರೆಂಟ್ ಕಂಬ, ಶಾಲೆಗೆ ಸುಣ್ಣಬಣ್ಣ

    ಸಿಎಂ ವಾಸ್ತವ್ಯಕ್ಕೆ ಉಜಳಂಬದಲ್ಲಿ ಸಿದ್ಧತೆ- ಹೊಸ ಕರೆಂಟ್ ಕಂಬ, ಶಾಲೆಗೆ ಸುಣ್ಣಬಣ್ಣ

    – ಕಳಪೆ ಕಾಮಗಾರಿಯಾಗಿದ್ರೂ ರೋಡ್ ಲಕ ಲಕ

    ಬೀದರ್: ಇಂದು ಜಿಲ್ಲೆಯ ಬಸವಕಲ್ಯಾಣದ ಉಜಳಂಬ ಗ್ರಾಮಕ್ಕೆ ಆಗಮಿಸಿ ಜನತಾ ದರ್ಶನ ನಡೆಸಲಿದ್ದಾರೆ. ಈ ಬಾರಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುತ್ತಿರುವ 3ನೇ ಗ್ರಾಮ ಇದಾಗಿದೆ. ಕರೇಗುಡ್ಡ ಗ್ರಾಮದಂತೆ ಇಲ್ಲಿಯೂ ತರಾತುರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ರಸ್ತೆ, ಚರಂಡಿಗಳನ್ನು ಮಾಡಿ ಝಗಮಗಿಸುವಂತೆ ಮಾಡಲಾಗಿದೆ. ಆದರೆ ಇವುಗಳ ಗುಣಮಟ್ಟ ಮಾತ್ರ ಕಳಪೆಯಾಗಿದ್ದು, ಒಂದೇ ಒಂದು ಮಳೆ ಬಂದರೆ ಎಲ್ಲಾ ಕೊಚ್ಚಿಕೊಂಡು ಹೋಗುವಂತಿದೆ.

    ಉಜಳಂಬ ಗ್ರಾಮದಲ್ಲಿ ವಿದ್ಯುತ್ ಕೈ ಕೊಡುತ್ತಿತ್ತು. ಸಿಎಂ ಆಗಮನ ಎಚ್ಚೆತ್ತ ಅಧಿಕಾರಿಗಳು ಕಂಬ, ವೈರ್ ಎಲ್ಲಾ ಚೇಂಜ್ ಮಾಡಿ ವಿದ್ಯುತ್ ಸಮಸ್ಯೆ ಆಗದಂತೆ ಮಾಡಿದ್ದಾರೆ. ಗ್ರಾಮದ ಶಾಲೆಗೆ ಅವಸರದಲ್ಲಿ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಗಿದೆ. ಜೊತೆಗೆ ಸಿಎಂ ವಾಸ್ತವ್ಯಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಮುಂಭಾಗ ಜನತಾ ದರ್ಶನಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಜೊತೆಗೆ ಅಹವಾಲು ಸ್ವೀಕರಿಸಲು ತಡವಾಗಬಾರದು ಅನ್ನೋ ಕಾರಣಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಕೊಕ್ ನೀಡಲಾಗಿದೆ.

    ಒಟ್ಟಿನಲ್ಲಿ ಸಿಎಂ ಆಗಮನದ ಹಿನ್ನೆಲೆಯಲ್ಲಿ ಉಜಳಂಬ ಗ್ರಾಮ ಅಲಂಕಾರಗಳಿಂದ ಸಿದ್ಧಗೊಂಡಿದೆ. ಈಗಾಗಲೇ ಮುಖ್ಯಮಂತ್ರಿಗಳು ರಾಯಚೂರಿನ ಕರೇಗುಡ್ಡದ ಗ್ರಾಮದಿಂದ ಉಜಳಂಬದತ್ತ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 10.30ಕ್ಕೆ ತಲುಪಲಿದ್ದಾರೆ.

  • ಕರೇಗುಡ್ಡ ಗ್ರಾಮ ವಾಸ್ತವ್ಯ ಅಂತ್ಯ-ಉಜಳಂಬದತ್ತ ಸಿಎಂ

    ಕರೇಗುಡ್ಡ ಗ್ರಾಮ ವಾಸ್ತವ್ಯ ಅಂತ್ಯ-ಉಜಳಂಬದತ್ತ ಸಿಎಂ

    ರಾಯಚೂರು: ಜಿಲ್ಲೆಯಲ್ಲಿ ನಾಡದೊರೆ ಮುಖ್ಯಮಂತ್ರಿಗಳು ಬುಧವಾರ ಗ್ರಾಮ ವಾಸ್ತವ್ಯ ಮಾಡಿದರು. ಸಿಎಂ ಜನತಾ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನ ಆಗಮಿಸಿ ದೂರು, ಮನವಿಗಳನ್ನು ಸಲ್ಲಿಸಿ ಹಲವರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು. ಆದರೆ ಗ್ರಾಮ ವಾಸ್ತವ್ಯಕ್ಕೆ ಪ್ರತಿಭಟನೆಯ ಬಿಸಿ ಕೂಡ ತಟ್ಟಿತ್ತು.

    ಸಾರಿಗೆ ಬಸ್ ಮೂಲಕ ಕರೇಗುಡ್ಡಕ್ಕೆ ಹೊರಟ ಸಿಎಂ ನಂತರ ಮಾರ್ಗದುದ್ದಕ್ಕೂ ಬರುವ ಗ್ರಾಮಗಳಲ್ಲಿ ಬಸ್ ನಿಲ್ಲಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸೋದಾಗಿ ಭರವಸೆ ನೀಡಿದರು. ಸುಮಾರು 3 ಗಂಟೆ ಸುಮಾರಿಗೆ ಕರೇಗುಡ್ಡ ತಲುಪಿದ ಸಿಎಂ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಉತ್ತರ ಕರ್ನಾಟಕ ಶೈಲಿಯ ಭೋಜನ ಸವಿದು ಜನತಾ ದರ್ಶನದಲ್ಲಿ ಬ್ಯುಸಿಯಾದರು.

    ರಾತ್ರಿ 10 ಗಂಟೆವರೆಗೆ ನಡೆದ ಜನತಾ ದರ್ಶನದಲ್ಲಿ ಒಟ್ಟು 1,462 ಮನವಿಗಳು ಬಂದಿದೆ. ಇದೇ ವೇಳೆ ಮಾತನಾಡಿದ ಸಿಎಂ, ಬಿಜೆಪಿ ಸರ್ಟಿಫಿಕೇಟ್ ಗೋಸ್ಕರ ಕಾರ್ಯಕ್ರಮ ಮಾಡುತ್ತಿಲ್ಲ. ಹೆಲಿಕಾಪ್ಟರ್‍ನಲ್ಲಿ ಹೋದರೆ 12 ಲಕ್ಷ ಖರ್ಚಾಗುತ್ತೆ. ಹೀಗಾಗಿ ಗುರುವಾರ ರಸ್ತೆ ಮಾರ್ಗವಾಗಿಯೇ ಬಸವಕಲ್ಯಾಣಕ್ಕೆ ಹೋಗುತ್ತೇನೆ ಎಂದರು.

    10.30ರಿಂದ ಜನತಾ ದರ್ಶನ ವೇದಿಕೆಯಿಂದ ಹೊರಟ ಸಿಎಂ ಕುಮಾರಸ್ವಾಮಿ 5 ನಿಮಿಷ ರೆಸ್ಟ್ ಮಾಡಿದರು. ನಂತರ ಅಧಿಕಾರಿಗಳ ಜೊತೆ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿದ್ರು. ತಡವಾಗಿದರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಸಮಯವನ್ನು ಮೊಟಕುಗೊಳಿಸಲಾಯ್ತು. ಕೇವಲ ಎರಡೇ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಯ್ತು. ಒಟ್ಟು 40 ನಿಮಿಷ ಕಾರ್ಯಕ್ರಮ ವೀಕ್ಷಿಸಿ ಬಳಿಕ ಶಾಲೆಯತ್ತ ಹೊರಟರು. ಅತ್ತ ಮಕ್ಕಳು ಸಿಎಂಗಾಗಿ ಮಧ್ಯರಾತ್ರಿವರೆಗೂ ಊಟಕ್ಕಾಗಿ ಕಾದು ಕುಳಿತಿದ್ದರು. ಬಳಿಕ ತಡವಾಗಿ ಶಾಲೆಗೆ ಬಂದ ಸಿಎಂ ಐವರು ಮಕ್ಕಳು ಮತ್ತು ಅಧಿಕಾರಿಗಳೊಂದಿಗೆ ಊಟ ಮಾಡಿದರು. ಶಾಲೆಯಲ್ಲಿ ಸಾಮಾನ್ಯ ಛಾಪೆಯಲ್ಲಿಯೇ ಮಲಗಿದ ಮುಖ್ಯಮಂತ್ರಿ ನಿದ್ದೆಗೆ ಜಾರಿದರು.

    https://www.youtube.com/watch?v=H8s1zyKFRVk